Homeಮುಖಪುಟಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

ಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

- Advertisement -
- Advertisement -

ತರಾವರಿ ಪುಸ್ತಕಗಳ ಗ್ರಂಥಾಲಯವಿರುವ ಕಟಿಂಗ್ ಶಾಪಿನ ಫೋಟೋವೊಂದು ವೈರಲ್ ಆಗಿ ಓಡಾಡುತ್ತಿತ್ತು. ಮೇಲುನೋಟಕ್ಕೆ ಇದೊಂದು ಪೋಟೋಶಾಪ್ ಮಾಡಿದ ಫೇಕ್ ಫೋಟೋ ಇರಬೇಕು ಅಂದುಕೊಂಡೆ. ನಂತರ ಇದನ್ನು ಪರಿಶೀಲಿಸಲು ಗೂಗಲ್ ಮಾಡಿದಾಗ,  ಈ ಫೋಟೋದ ನಿಜದ ಕಥೆ ಹೇಳುವ ಹಿಂದೂ ಪತ್ರಿಕೆಯ ವರದಿಯೊಂದು ಕಾಣಿಸಿತು. ಈ ಫೋಟೋದ ಬಗೆಗಿನ ಕುತೂಹಲಕಾರಿ ಸಂಗತಿ ತಿಳಿಯಲೆಂದು ವರದಿಯನ್ನು ಅನುವಾದಿಸಿದ್ದೇನೆ.

ಪೊನ್ನ ಮರಿಯಪ್ಪ ಹದಿನೆಂಟು ವರ್ಷ ದಿನಗೂಲಿ ಮಾಡಿ ಅದರಲ್ಲಿ ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾನೆ. ಈ ಹಣದಲ್ಲಿ ತನ್ನ ಬಹುದಿನದ ಕನಸಾದ ತನ್ನದೇ `ಸುರೇಶ್ ಬ್ಯೂಟಿ ಸೆಂಟರ್’ ಹೆಸರಿನ ಕಟಿಂಗ್ ಶಾಪೊಂದನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಿಲ್ಲೆರ್ ಪುರಂ ನಲ್ಲಿ 2014 ರಲ್ಲಿ ತೆರೆಯುತ್ತಾನೆ.

ಸಹಜವಾಗಿ ಕಟಿಂಗ್ ಮಾಡಿಸಲು ಬಂದವರು ತಮ್ಮ ಸರತಿ ಬರುವ ತನಕ ಕಾಯಬೇಕಾಗಿತ್ತು. ಈ ಅವಧಿಯಲ್ಲಿ ಎಲ್ಲರೂ ತಮ್ಮ ಮೊಬೈಲಿನಲ್ಲಿ ಮುಳುಗಿರುತ್ತಿದ್ದರು. ಕೆಲವರು ಶಾಪಲ್ಲಿನ ಟಿವಿ ನೋಡುತ್ತಿದ್ದರು. ಹೀಗಿರುವಾಗ ಮರಿಯಪ್ಪನಿಗೆ ಸರತಿ ಬರುವ ತನಕ ಕಾಯುವವರ ಕೈಗೆ ಪುಸ್ತಕಗಳನ್ನು ಯಾಕೆ ಕೊಡಬಾರದು ಎನ್ನುವ ಯೋಚನೆ ಹೊಳೆಯುತ್ತದೆ. ಮರುದಿನವೇ ತನ್ನ ಶಾಪಿನಿಂದ ಟಿ.ವಿಯನ್ನು ತೆಗೆಯುತ್ತಾನೆ. ಆಗ ಟಿವಿ ಇಟ್ಟಿದ್ದ ಜಾಗದಲ್ಲಿ  ದಿನ ಪತ್ರಿಕೆಗಳ ಜತೆ 5 ಪುಸ್ತಕಗಳನ್ನು ಇಡುತ್ತಾರೆ. ಈ ಐದೂ ಪುಸ್ತಕಗಳು ಕಾರ್ಲ್ ಮಾರ್ಕ್ಸ್, ಅಬ್ರಾಹಂ ಲಿಂಕನ್, ಪೆರಿಯಾರ್, ಅಣ್ಣಾದೊರೈ, ಅಬ್ದುಲ್ ಕಲಾಮ್ ಕುರಿತಾದ ಆತ್ಮಕಥನ/ಜೀವನ ಚರಿತ್ರೆಗಳು.  ಕೆಲವೇ ದಿನಗಳಲ್ಲಿ ಮೊಬೈಲ್ ನೋಡುವವರು ಈ ಪುಸ್ತಕಗಳನ್ನು ಹಿಡಿದು ತಿರುವಿಹಾಕಿ ಹಾಗೆ ಪುಸ್ತಕದ ಜಾಗಕ್ಕೆ ಇಡತೊಡಗಿದರು, ಕೆಲವರು ಚೂರು ಚೂರು ಓದತೊಡಗಿದರು. ಇದು ಮರಿಯಪ್ಪನ ಖುಷಿಯನ್ನು ಇಮ್ಮಡಿಗೊಳಿಸಿತು.

ಆ ನಂತರ ಮರಿಯಪ್ಪ ಹಳೆ ಪುಸ್ತಕ ಮಾರುವವರಲ್ಲಿ, ಹೆಚ್ಚು ರಿಯಾಯಿತಿ ದರದಲ್ಲಿ ಮಾರುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳನ್ನು ಕೊಂಡು ತನ್ನ ಶಾಪಿಗೆ ತರತೊಡಗುತ್ತಾನೆ. 2015 ರ ಕೊನೆಗೆ ಶಾಪಿನ ಒಂದು ಗೋಡೆಯನ್ನು ಪುಸ್ತಕಗಳ ಕಪಾಟಿಗಾಗಿ ಸಿದ್ದಗೊಳಿಸುತ್ತಾನೆ. ತತ್ವಶಾಸ್ತ್ರ, ವಿಜ್ಞಾನ, ಜನಪದ ಕತೆ, ಧರ್ಮ, ನೀತಿಕತೆಗಳು, ಮಕ್ಕಳಿಗೆ ಬೇಕಾಗುವ ರಮ್ಯ ಕಥೆಗಳು ಹೀಗೆ ಹಲವು ವೈವಿಧ್ಯಮಯ 250 ಪುಸ್ತಗಳು ಸೇರ್ಪಡೆಗೊಳ್ಳುತ್ತವೆ.

“ಶಾಪಿಗೆ ಬಂದು ಅವರ ಸರತಿ ಬರುವವರೆಗೆ ಕಾಯುವ ಗಿರಾಕಿಗಳನ್ನು ದಯವಿಟ್ಟು ಮೊಬೈಲ್ ಬಳಸಬೇಡಿ, ಇಲ್ಲಿ ಒಳ್ಳೊಳ್ಳೆ ಪುಸ್ತಕಗಳಿವೆ ಕಟಿಂಗ್ ಮಾಡಿಸಿಕೊಳ್ಳುವ ತನಕ ಪುಸ್ತಕ ಓದಿ” ಎಂದು ಆತ್ಮೀಯವಾಗಿ ಕೇಳಿಕೊಳ್ಳುವೆ. ಈ ತನಕ ಯಾರೂ ನನ್ನ ಮಾತನ್ನು ಮೀರಿಲ್ಲ. ಅದು ನನಗೆ ಖುಷಿಕೊಡುತ್ತದೆ ಎನ್ನುತ್ತಾನೆ ಮರಿಯಪ್ಪ.

ಶಾಲಾ ಮಕ್ಕಳು ಬಂದಾಗ, ನೀವು ಪುಸ್ತಕ ಓದುವುದು ಮಾತ್ರವಲ್ಲ, ನೀವು ಓದಿದ ಭಾಗದ ಮುಖ್ಯಾಂಶಗಳನ್ನು ಬರೆದು ಹೋಗಿ ಎಂದು ಹೇಳುತ್ತಾರೆ. ಹೀಗೆ ವಿವರ ಟಿಪ್ಪಣಿ ಪರಿಚಯ ಬರೆಯುವುದಕ್ಕಾಗಿ 2018 ರಿಂದ ಒಂದು ದಾಖಲಾತಿ ಪುಸ್ತಕವನ್ನೂ ಇಟ್ಟಿದ್ದಾರೆ. ಅದರಲ್ಲಿ ಪುಸ್ತಕ ಓದಿದವರು ಅಭಿಪ್ರಾಯ ಬರೆದು ಹೋಗುತ್ತಾರೆ. ಈತನಕ 300 ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ, ತಮ್ಮ ಹೆಸರು ಮತ್ತು ಶಾಲೆಯ ವಿಳಾಸವನ್ನು ಬರೆದು ಹೋಗಿದ್ದಾರೆ.

ಕನಿಷ್ಠ ಒಂದು ಪುಸ್ತಕದ 10 ಪುಟ ಓದಿ, ಅದರ ಬಗ್ಗೆ ಒಂದು ಟಿಪ್ಪಣಿ ಬರೆದರೆ ಹೇರ್ ಕಟ್ ಗೆ 80 ರೂ ಇದ್ದರೆ.  30 ರೂ ರಿಯಾಯಿತಿ ಕೊಡುವುದಾಗಿ ಹೇಳಿ 2020 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮರಿಯಪ್ಪನವರ ಸಲೂನ್ ಲೈಬ್ರರಿಯ ಫೋಟೋ ವೈರಲ್ ಆಗುವುದಕ್ಕಿಂತ ಮೊದಲು ಆರು ವರ್ಷ ಯಾವುದೇ ಪ್ರಚಾರ ಬಯಸದೆ ಮರಿಯಪ್ಪ ತನ್ನ ಸಲೂನಲ್ಲಿ ಓದು ಅಭಿಯಾನ ಶುರುಮಾಡಿದ್ದರು. ಮರಿಯಪ್ಪನ ಪುಸ್ತಕ ಪ್ರೀತಿ ನೋಡಿ ಪ್ರಸಿದ್ಧ ಪುಸ್ತಕ ಪ್ರಕಾಶನ Hatchette Indiaದವರು ಒಂದಷ್ಟು ಇಂಗ್ಲೀಷ್ ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇದರಿಂದ ಆ ತನಕ ಬರಿ ತಮಿಳು ಪುಸ್ತಕ ಇಟ್ಟಿದ್ದ ಮರಿಯಪ್ಪ ಇದೀಗ ಇಂಗ್ಲೀಷ್ ಪುಸ್ತಕಗಳನ್ನು ಇಟ್ಟಿದ್ದಾರೆ. ತೂತುಕುಡಿ ಎಂ.ಪಿ. ಕನಿಮೋಜಿ ಯವರು 50 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಮರಿಯಪ್ಪನ ಸಲೂನಿನಲ್ಲಿ 900 ರಷ್ಟು ವೈವಿಧ್ಯಮಯ ತಮಿಳು, ಇಂಗ್ಲೀಷ್ ಪುಸ್ತಕಗಳ ಸಂಗ್ರಹವಾಗಿದೆ. ನಿರಂತರವಾಗಿ ಓದುತ್ತಿದ್ದರೆ ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಮರಿಯಪ್ಪ ಹೇಳುತ್ತಾರೆ.

ತನ್ನ ವಿದ್ಯಭ್ಯಾಸ ಕುಂಟಿತವಾದರೂ ಬೇರೆಯವರು ಓದಬೇಕು, ಓದಿ ಜ್ಞಾನ ಸಂಪಾದಿಸಬೇಕೆಂದು ಕನಸುವ ಪೊನ್ನ ಮರಿಯಪ್ಪನವರ ನಡೆಯಿಂದ  ಸೆಲೂನ್ ಶಾಪ್ ನ ಸ್ಥಾಪಿತ ಕಲ್ಪನೆಯನ್ನೆ ಹೊಡೆದು ಹಾಕಿದ್ದಾರೆ.

  • (ಕೃಪೆ): ದ ಹಿಂದು
  • ಮೂಲ: ಸೋಮ ಬಸು
  • ಅನುವಾದ: ಅರುಣ್ ಜೋಳದಕೂಡ್ಲಿಗಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...