Homeಕರ್ನಾಟಕಸೇವ್ ಉತ್ತರ ಕನ್ನಡ: ನೋ ಎನ್ನುತ್ತಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಸರ್ಕಾರ

ಸೇವ್ ಉತ್ತರ ಕನ್ನಡ: ನೋ ಎನ್ನುತ್ತಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಸರ್ಕಾರ

- Advertisement -
- Advertisement -

ಮಳೆಗೆ ಉತ್ತರಕನ್ನಡ ಒದ್ದೆಮುದ್ದೆಯಾಗಿ ಒದ್ದಾಡುತ್ತಿದೆ! ಬದುಕು ಅಕ್ಷರಶಃ ಮುಳುಗಿದೆ. ಜಿಲ್ಲೆಯ ಒಟ್ಟು ಹನ್ನೆರಡೂ ತಾಲ್ಲೂಕಿನಲ್ಲಿ ಎಲ್ಲಿ ನಿಂತು ನೋಡಿದರೂ ನೀರೇ ನೀರು!! ಆಗಸ್ಟ್ 1ರಿಂದ 7ರ ತನಕ ಬರೋಬ್ಬರಿ 571 ಮಿಮೀ ಮಳೆ ದೋ ಎಂದು ಒಂದೇಸಮನೆ ಜಡಿದು ಸಾವಿರಾರು ಕುಟುಂಬಗಳನ್ನು ಬೀದಿ ಪಾಲಾಗಿಸಿದೆ. ಗದ್ದೆ-ತೋಟ, ಮನೆ, ರಸ್ತೆ, ಶಾಲೆ, ವಿದ್ಯುತ್ ಸಂಪರ್ಕ…… ಎಲ್ಲವೂ ನೆರೆಯಲ್ಲಿ ಕದಡಿಹೋಗಿದೆ. ಜಿಲ್ಲೆಯ ಜೀವವಾಹಿನಿಗಳು ಎನಿಸಿದ್ದ ಕಾಳಿ, ಗಂಗಾವಳಿ, ಬೇಡ್ತಿ, ಶರಾವತಿ, ಅಘನಾಶಿನಿ, ವರಧಾಮ ಶಾಲ್ಮಲಾ, ಪಾಂಡ್ರಿ, ಚೌಥನಿ, ವೆಂಕಟಾಪುರ ನದಿಗಳು ಉಕ್ಕುಕ್ಕಿ ಹರಿದು ಅಮಾಯಕರ ಜೀವ-ಜೀವನ ಆಪೋಷನ ಪಡೆದಿದೆ!!!

ಸದಾ ಮಳೆಯಿಲ್ಲದೆ ಬರದಲ್ಲಿ ಬಸವಳಿಯುತ್ತಿದ್ದ ಮುಂಡಗೋಡ ಮತ್ತು ಹಳಿಯಾಳ ತಾಲ್ಲೂಕುಗಳೂ ಈ ಯಮ ಮಳೆಗೆ ಕೊಚ್ಚಿಹೋಗಿವೆ. ಸರ್ಕಾರಿ ಲೆಕ್ಕಾಚಾರ ಏನೇ ಇರಲಿ, ನೆರೆಹಾವಳಿಯಿಂದ ಹತ್ತಿರತ್ತಿರ ಎರಡು ನೂರು ಗ್ರಾಮಗಳು ಮುಳುಗಡೆ ಆಗಿವೆ. 24 ಸೇತುವೆಗಳು ಪ್ರವಾಹದಲ್ಲಿ ಕಣ್ಮರೆಯಾಗಿದ್ದವು. ಅಷ್ಟೇ ಪ್ರಮಾಣದ ರಸ್ತೆಗಳು ಚಿಂದಿ ಎದ್ದುಹೋಗಿವೆ. 2,000ದಷ್ಟು ಮನೆಗಳು ಜಲಯಜ್ಞಕ್ಕೆ ಹವಿಸ್ಸಾಗಿವೆ. ಕಣ್ಮರೆಯಾದ ಜನ-ಜಾನುವಾರುಗಳ ಲೆಕ್ಕ ಇನ್ನೂ ಸರಿಯಾಗಿ ಸಿಗುತ್ತಿಲ್ಲ. ಸಾವಿರಾರು ಕುಟುಂಬಗಳ ಕಮ್ಮಿಯೆಂದರೂ 10,000 ಮಂದಿ ತಾತ್ಕಾಲಿಕ ಕ್ಷೇಮ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹತ್ತಿರತ್ತಿರ ನೂರು ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ.

ರಾಜ್ಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿದು ಅಥವಾ ರಸ್ತೆಗಳೇ ಬಿರುಕುಬಿಟ್ಟು, ಸೇತುವೆಗಳು ಜಖಮ್ ಆಗಿ ನೂರಾರು ಹಳ್ಳಿಗಳು ನಡುಗಡ್ಡೆಗಳಂತಾಗಿವೆ. ದೇವಿಮನೆ, ಅರಬೈಲ್, ಕೋಗಾರ, ಬಡಳ, ವಡ್ಡಿ, ಶೇವಕಾರ ಘಟ್ಟ ಪ್ರದೇಶದಲ್ಲಿ ಸಂಚಾರ ಅಪಾಯಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ಮುರಿದು ಬಿದ್ದಿವೆ; ಮೊಬೈಲ್ ಟವರ್‍ಗಳು ಸ್ಥಗಿತಗೊಂಡಿವೆ. ಹಳ್ಳಿ-ಹಳ್ಳಿಗಳು ವಿದ್ಯುತ್ ದೀಪ ಬೆಳಗದೆ ಗಾಡಾಂಧಕಾರದಲ್ಲಿ ಮುಳುಗಿವೆ. ಇದೆಲ್ಲ ಸರಿ ಮಾಡಲು ಜಿಲ್ಲಾಡಳಿತಕ್ಕೆ ತಿಂಗಳುಗಳೇ ಬೇಕು! ಜನರ ಪರದಾಟ ಹೇಳತೀರದು.

ಈ ವರದಿ ಸಿದ್ಧವಾಗುತ್ತಿರುವ ಹೊತ್ತಿಗೆ ಮಳೆಯ ಆರ್ಭಟ ನಿಂತಿದೆ. ಎಲ್ಲಾ ನದಿ-ಹೊಳೆಗಳ ನೆರೆ ಇಳಿದಿದೆ. ಜಿಲ್ಲೆಯ ಅಷ್ಟೂ ನದಿ ದಡದ ಹಳ್ಳಗಳಲ್ಲೀಗ ಕಾಣುತ್ತಿರುವುದು ನರಕಸದೃಶ ಪರಿಸ್ಥಿತಿ! ಅಡಿಗಟ್ಟಲೆ ಕೆಸರು, ಉರುಳಿದ ಮನೆ, ಅಂಗಡಿ ಮುಂಗಟ್ಟುಗಳು; ಕೊಚ್ಚಿಹೋದ ಅಡಿಕೆ ತೋಟ, ಭತ್ತದ ಗದ್ದೆ, ಮೂಲಭೂತ ಸೌಕರ್ಯದ ಅವಶೇಷಗಳು. ನಿಧಾನವಾಗಿ ಕ್ಷೇಮ ಕೇಂದ್ರಗಳಿಂದ ಸಂತ್ರಸ್ತರು ಮನೆಗಳತ್ತ ಹೋಗುತ್ತಿದ್ದಾರೆ. ಸಂಗ್ರಹಿಸಿಟ್ಟುಕೊಂಡಿದ್ದ ಅಕ್ಕಿ, ಬೇಳೆ, ಬಟ್ಟೆ, ಮಕ್ಕಳ ಪಾಟಿ ಪುಸ್ತಕ, ನೋಟ್‍ಬುಕ್, ರೇಷನ್ ಕಾರ್ಡು, ಆಧಾರ್ ಕಾರ್ಡು, ಗ್ಯಾಸ್ ಒಲೆ……. ಹೀಗೆ ಎಲ್ಲವೂ ನೀರುಪಾಲಾಗಿವೆ. ಮನೆ ಬಾಗಿಲು ತೆರೆದರೆ ನೆರೆಯಲ್ಲಿ ತೇಲಿಬಂದ ವಿಷಕಾರಿ ಹಾವು-ಸರೀಸೃಪಗಳು ಬುಸುಗುಡುತ್ತಿವೆ. ಸತ್ತ ಪ್ರಾಣಿಗಳ ದುರ್ನಾತ! ಬದುಕು ಮುಂದ್ಹೇಗೆಂಬ ಆತಂಕದಲ್ಲಿ ಜನರು ದಿಕ್ಕೆಟ್ಟು ನಿಂತಿದ್ದಾರೆ.

ಈ ಭೀಭತ್ಸ ನೆರೆಯಿಂದ ಸಂತ್ರಸ್ತರಾದವರಿಗೆ ಜಿಲ್ಲಾಧಿಕಾರಿ ಹರೀಶ್‍ಕುಮಾರ್ ಕೆಪ್ಟನಿಕೆಯ ಜಿಲ್ಲಾಡಳಿತ ಬದ್ಧತೆಯಿಂದ, ಕರ್ತವ್ಯನಿಷ್ಠೆಯಿಂದ ನೆರವಾಗಿದೆ ಎಂಬುದಕ್ಕೆ ಎರಡು ಮಾತೇ ಇಲ್ಲ. ಜಿಲ್ಲಾಡಳಿತ ಸುರಿವ ಅನಾಹುತಕಾರಿ ಮಳೆಯಲ್ಲಿ ಹಗಲಿರುಳೂ ನೊಂದವರಿಗೆ ಸ್ಪಂದಿಸಿದೆ. ಸರ್ಕಾರೇತರ ಸಂಘ-ಸಂಸ್ಥೆಗಳೂ ನೆಲೆ ಕಳಕೊಂಡವರಿಗೆ ಕಳಕಳಿಯಿಂದ ಸಹಾಯ ಮಾಡಿದ್ದಾರೆ. ಆದರೆ ಯಡ್ಡಿ ಮಹಾತ್ಮನ ‘ಏಕವ್ಯಕ್ತಿ’ ಸರ್ಕಾರದಿಂದ ಉತ್ತರ ಕನ್ನಡದ ನೆರೆ ಪೀಡಿತರಿಗೆ ತಕ್ಷಣದ ಪರಿಹಾರ-ಸಾಂತ್ವನ ಯಾವುದೂ ಸಿಗಲಿಲ್ಲ. ನೆರೆ ನೋಡಲು ಬಾಗಲಕೋಟೆ, ಬೆಳಗಾವಿಗೆ ಹೋಗಿದ್ದ ಯಡ್ಡಿಯ ಕಾಪ್ಟರ್ ಉತ್ತರ ಕನ್ನಡದತ್ತ ಹೊರಳಲೇ ಇಲ್ಲ.

ಆಳುವ ಸರ್ಕಾರಗಳಿಗೆ ನಮ್ಮತ್ತ ಯಾಕಿಂಥ ತಾತ್ಸಾರ ಎಂದು ಉತ್ತರ ಕನ್ನಡ ಜಿಲ್ಲೆಯ ಜನ ಕೇಳಿಕೊಳ್ಳಲು ಶುರು ಮಾಡಿದ್ದಾರೆ. ಹಾಗೆ ನೋಡಿದರೆ, ಜಿಲ್ಲೆ ತನ್ನ ಸಿರಿಸಂಪತ್ತನ್ನೆಲ್ಲಾ ರಾಜ್ಯ-ರಾಷ್ಟ್ರದ ಕಲ್ಯಾಣಕ್ಕಾಗಿ ಕೊಡುತ್ತಲೇ ಬಂದಿದೆ. ಇಲ್ಲಾಗಿರುವ ಜಲವಿದ್ಯುತ್ ಯೋಜನೆಯಿರಲಿ, ಕೈಗಾ ಅಣು ಸ್ಥಾವರವಿರಲಿ, ಕುದಂಬ ನೌಕಾನೆಲೆಯಾಗಲಿ ಸ್ಥಳೀಯ ಉದ್ಧಾರಕ್ಕೆ ಬಂದಿದ್ದಲ್ಲ. ಜಿಲ್ಲೆ ಮಾಡಿರುವ ಪ್ರತಿ ತ್ಯಾಗದ ಹಿಂದೆ ರಾಜ್ಯ-ರಾಷ್ಟ್ರದ ಹಿತವೇ ಅಡಗಿದೆ. ಇಲ್ಲಿನ ಮರ-ಮಟ್ಟು, ವನಸ್ವತಿ, ನೀರು, ಮೀನು, ವಿದ್ಯುತ್, ಉಪ್ಪು, ಪ್ರವಾಸಿತಾಣಗಳ ಮೂಲಕ ದೊಡ್ಡ ಮಟ್ಟದ ಆದಾಯ ಗಳಿಸುತ್ತಿರುವ ರಾಜ್ಯ ಸರ್ಕಾರ ಇಷ್ಟೇಕೆ ಕಡೆಗಣಿಸುತ್ತಿದೆ ಉತ್ತರ ಕನ್ನಡವನ್ನು? ಪ್ರವಾಹದಿಂದ ಬದುಕು ಕಳೆದುಕೊಂಡ ಜನರ ನಡುವೆ ಇಂತಹದ್ದೊಂದು ಆಕ್ರೋಶದ ಪ್ರಶ್ನೆ ಹುಲುಸಾಗೇ ಬೆಳೆಯುತ್ತಿದೆ.

ಹೀಗಾಗಿಯೇ ಈಗ ಸಾಮಾಜಿಕ ಜಾಲತಾಣಗಳಲ್ಲಿ “ಸೇವ್ ಉತ್ತರ ಕನ್ನಡ” ಎಂಬ ಕೂಗೆದ್ದಿದೆ. ಜಲಪ್ರಳಯದ ಸಂತ್ರಸ್ತರ ವಾಟ್ಸಪ್ ಗ್ರೂಪ್ ಹುಟ್ಟುಹಾಕಲಾಗಿದೆ. ಜಲಕಂಟಕದ ಚಿತ್ರಣಗಳು ಎಲ್ಲೆಡೆ ಹರಿದಾಡುತ್ತಿವೆ. ಚಲನಚಿತ್ರರಂಗ, ಸಾಹಿತಿಗಳು, ಉದ್ಯೋಗಿಗಳು, ಉದ್ಯಮಿಗಳು ಯಾನದಲ್ಲಿ ಸೇರಿಕೊಂಡಿದ್ದಾರೆ. ನಟ ಉಪೇಂದ್ರ ಐದು ಲಕ್ಷ ಪರಿಹಾರ ಧನ ಕೊಟ್ಟು ತಕ್ಷಣಕ್ಕೆ ಸ್ಪಂದಿಸಿದ್ದಾರೆ. ಯಾಕೆ ಆಳುವವರು ಉತ್ತರ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಾರೆ? ಕೇರಳ-ಕೊಡಗಲ್ಲಿ ಮಳೆ ಪ್ರಳಯ ಆದಾಗ ಧಾವಿಸಿದವರಿಗೇಕೆ ಜಿಲ್ಲೆಯ ಗೋಳು ಕಾಣಿಸುತ್ತಿಲ್ಲ? ಶರಾವತಿ ನೀರು, ಅಘನಾಶಿನಿ ನೀರು ಬೇಕೆನ್ನುವವರು, ಕಾಳಿ, ಶರಾವತಿ ನದಿ ನೀರಿಂದಾದ ವಿದ್ಯುತ್ ಪ್ರಯೋಜನ ಪಡೆಯುತ್ತಿರುವವರಿಗೆಲ್ಲ ಋಣ ತೀರಿಸಬೇಕೆಂಬ ಸಣ್ಣ ಮಾನವೀಯತೆಯೂ ಇಲ್ಲದಾಯಿತಾ? ಈ ಪ್ರಶ್ನೆ ಸೇವ್ ಉತ್ತರ ಕನ್ನಡ ಅಭಿಯಾನವನ್ನು ಕಾಡುತ್ತಿದೆ.

ಆಳುವವರು ಉತ್ತರ ಕನ್ನಡದ ನೆರೆಪೀಡಿತರಿಗೆ ನ್ಯಾಯ ಕೊಡಿಸಿ ಅವರು ಸ್ವಾವಲಂಬನೆಯಿಂದ ಬದುಕಲು ಅವಕಾಶ ಮಾಡಿಕೊಡುತ್ತದೆಂಬ ಯಾವ ಭರವಸೆಯೂ ಇಲ್ಲ. ಈ ಸಂಶಯಕ್ಕೆ ಹಿಂದೆಲ್ಲಾ ನೆರೆಯಿಂದ ನೊಂದವರಿಗೆ ಸರ್ಕಾರಿ ಮಂದಿಯಿಂದಾದ ಅನ್ಯಾಯವೇ ಕಾರಣ. ಈಗ ನೊಂದವರಿಗಾಗಿ ಪರಿಹಾರ ಸಾಮಗ್ರಿ ಎಲ್ಲೆಲ್ಲಿಂದಲೋ ಹರಿದುಬರುತ್ತಿದೆ. ಅವೆಲ್ಲ ಸರಿಯಾಗಿ ಹಂಚಿಕೆಯಾಗುತ್ತವೆಂದು ಹೇಳಲಾಗದು. ಇದು ಹಿಂದಿನ ಅನುಭವ. ಆಧಾರ್, ರೇಷನ್ ಕಾರ್ಡ್‍ನಂಥ ದಾಖಲೆಗಳನ್ನೇ ನೆರೆಯಲ್ಲಿ ಕಳಕೊಂಡವರನ್ನು ಕಳ್ಳರಂತೆ ಅಧಿಕಾರಿಗಳು ನೋಡುವ ಸಾಧ್ಯತೆಯೇ ಹೆಚ್ಚು. ಹಿಂದೆಲ್ಲ ಪ್ರವಾಹ ಪೀಡಿತರಿಗೆ ಪರಿಹಾರದ ಚೆಕ್ ಕೊಡುವಾಗ ಪರ್ಸೆಂಟೇಜ್ ಕೇಳಿದ್ದೂ ಇದೆ. ಸಂತ್ರಸ್ತರೊಂದಿಗೆ ಗೌರವಯುತವಾಗಿ, ಮಾನವೀಯವಾಗಿ ನಡೆದುಕೊಳ್ಳುವ ಪಾಠ ಅಧಿಕಾರಿ ವರ್ಗಕ್ಕೆ ಆಡಳಿತಗಾರರು ಕಲಿಸಬೇಕಾಗಿದೆ. ಪ್ರವಾಹಪೀಡಿತರ ಮನೆ ಮುಳುಗಿರಬಹುದು, ಮಾನ ಮುಳುಗಿಲ್ಲ ಎಂಬ ಎಚ್ಚರಿಕೆ ಅಧಿಕಾರಿ ಗಣಕ್ಕೆ ಇರಬೇಕು!!

ಉತ್ತರ ಕನ್ನಡದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಾಗಿರುವ ಪ್ರವಾಹ ಪ್ರಕೋಪದ ಗಂಡಾಂತರ ಆಪರೇಷನ್ ಕಮಲದ ಅಡ್ಡ ಪರಿಣಾಮ ಎಂದರೂ ತಪ್ಪಾಗಲಿಕ್ಕಿಲ್ಲ. ಎರಡು ತಿಂಗಳ ಹಿಂದೆಯೇ ಅಧಿಕಾರಿಗಳ ಸಭೆ ಸಡೆಸಿ ಪ್ರವಾಹ, ಅತಿವೃಷ್ಟಿ ಸಮಸ್ಯೆ ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಈ ಅವಧಿಯಲ್ಲಿ ಬಿಜೆಪಿಗರು ಸರ್ಕಾರ ಉರುಳಿಸುವ ಚಟಕ್ಕೆ ಬಿದ್ದರೆ, ಸಿಎಂ ಆಗಿದ್ದ ಕುಮ್ಮಿ ಅಧಿಕಾರ ಉಳಿಸಿಕೊಳ್ಳುವ ತೆವಲಿಗೆ ಬಿದ್ದರು. ಹೀಗಾಗಿ ಅಧಿಕಾರಿಗಳು ಲಂಗು-ಲಗಾಮಿಲ್ಲದೆ ಹಾಯಾಗಿ ಉಳಿದುಬಿಟ್ಟರು. ಇಂಥ ಗತಿಗೇಡಿ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪ್ರವಾಹ ಪ್ರಕೋಪ, ಮಳೆ ಅನಾಹುತದ ಬಗ್ಗೆ ತಲೆಕೆಡಿಸಿಕೊಳ್ಳಲು ಸಾಧ್ಯವಾ?
ಹೀಗಾಗಿ ರಾಜ್ಯ ಮುಳುಗಿದೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...