Homeಸಾಮಾಜಿಕವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

ವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

- Advertisement -
- Advertisement -

ಪ್ಪತ್ತನೆಯ ಶತಮಾನದ ಅದಿಭಾಗದಿಂದ ಹಿಡಿದು ಇತ್ತೀಚಿನವರೆಗೆ ವಿಶ್ವದಲ್ಲಿ ಸಾವಿರಾರು ಆವಿಷ್ಕಾರಗಳಾಗಿವೆ. ಇಂದು ಮಧ್ಯವಯಸ್ಸಿನಲ್ಲಿರುವವರು ಅದೃಷ್ಟಶಾಲಿಗಳೆಂದು ಹೇಳಬಹುದು!
ಚಿಮಣಿ ದೀಪಗಳಿದ್ದ ಮನೆಗಳಿಗೆ ವಿದ್ಯುತ್ ದೀಪಗಳು ಬಂದಿವೆ. ಟೆಂಟು ಬಂದರೆ ಮಾತ್ರ ನೋಡಲು ಸಾಧ್ಯವಾಗುತ್ತಿದ್ಧ ಸಿನಿಮಾ ಮನೆಯಲ್ಲೇ ಕುಳಿತು ನೋಡಬಹುದು. ಸಿನಿಮಾ, ಧಾರಾವಾಹಿಗಳೇ ಜೀವನ ಎಂದು ತಿಳಿದುಕೊಂಡವರೂ ನಮ್ಮ ನಡುವೆ ಇದ್ದಾರೆ.
ಸಂಪರ್ಕದ ಕೊಂಡಿಯಾಗಿದ್ದ ಅಂಚೆ ಇಂದು ಇತಿಹಾಸವಾಗುತ್ತಿದೆ. ಯಾರಾದರೂ ಸತ್ತರೆ ದೂರದ ಊರುಗಳಲ್ಲಿ ಇರುವ ಬಂಧುಗಳಿಗೆ “ಮದರ್ ಸೀರಿಯಸ್. ಸ್ಟಾರ್ಟ್ ಇಮ್ಮಿಡಿಯೆಟ್ಲಿ” ಎಂದು ‘ವಯರ್’ ಕಳಿಸುತ್ತಿದ್ದ- ಅಂದರೆ ಟೆಲಿಗ್ರಾಂ ಕಳಿಸುತ್ತಿದ್ದ ಕಾಲದಿಂದ ವಯರ್ ಇಲ್ಲದೇ ಹೆಣದ ಫೋಟೊ ತೆಗೆದು ಲೈವಾಗಿ ಸಂಬಂಧಿಕರಿಗೆ ತಿಳಿಸುವ ಯುಗವನ್ನು ಮುಟ್ಟಿದ್ದೇವೆ! ಕಂಪ್ಯೂಟರ್ ಬಂದಿದೆ! ಕ್ಯಾಷ್‍ಲೆಸ್ ಆಗಿದ್ದೇವೆ! ವಿಜ್ಞಾನದ ಆವಿಷ್ಕಾರಗಳ ಫಲವನ್ನು ಉಣ್ಣುತ್ತಾ ಬಂದಿದ್ದೇವೆ. ಮೂಷಿಕ, ಗರುಡ, ಸಿಂಹ, ನಂದಿ ವಾಹನರಾಗಿದ್ದ ನಾವು- ಬೈಕ್, ಸ್ಕೂಟರ್, ಕಾರು, ಬಸ್ಸು, ರೈಲು ವಿಮಾನ ವಾಹನರಾಗಿದ್ದೇವೆ! ಚಪ್ಪಡೆ ಭೂಮಿಯನ್ನು ದುಂಡಗೆ ಮಾಡಿದ್ದೇವೆ! ಸಾಮೂಹಿಕ ವಿನಾಶದ ಅಸ್ತ್ರಗಳನ್ನು ದಾಸ್ತಾನು ಇಟ್ಟಿದ್ದೇವೆ! … ವಿಷಗಳನ್ನು, ವಿಷಯಗಳನ್ನು ಉತ್ಪಾದಿಸುತ್ತಿದ್ದೇವೆ!
ಬರೆಯುತ್ತಾ ಹೋದರೆ ಸಾವಿರಾರಿವೆ! ನಮ್ಮ ಸುತ್ತಲೂ ಬೇಕೆಂದೋ ಬೇಡವೆಂದೋ ರಾಶಿಬಿದ್ದಿರುವ ಸಲಕರಣೆಗಳು ತಂತ್ರಜ್ಞಾನಗಳನ್ನು ಒಮ್ಮೆ ನೋಡಿದರೆ, ಇದನ್ನು ಕಂಡುಹಿಡಿದವರ ನೆನಪಾದರೂ ನಮಗಿದೆಯೆ?
ಅದರೆ, ನಮಗೆ ಕೋಟ್ಯಾಂತರ ದೇವರು, ದೈವಗಳ, ಅಂತರ, ಬೆಂತರ, ಕುಲೆ, ಪಿಶಾಚಿಗಳ ನೆನಪಿದೆ! ಯಾಕೆಂದರೆ ನಮಗೆ ಭಯವಿದೆ! ಅದನ್ನೇ ನಾವು ನಂಬಿಕೆ ಎಂದು ಕರೆಯುತ್ತೇವೆ!
ಇದೇ ಭಯವನ್ನು ಬಂಡವಾಳ ಮಾಡಿಕೊಂಡು ಸಾವಿರದ ಒಂದು, ಹನ್ನೊಂದು ಸಾವಿರದ ಒಂದು… ಹೀಗೆ ಜ್ಯೋತಿಷ್ಯ ಮತ್ತು ಪೂಜಾ ಕ್ಷೇತ್ರಗಳಲ್ಲಿ ಅವಿಷ್ಕಾರಗಳಾಗಿವೆ! ಹಿಂದೆ ಮನೆಯ ಒಂದು ಕೋಣೆಯೊಳಗಿನ ಅಥವಾ ಗೋಡೆಗಂಟಿದ ಹಲವಾರು ದೇವರುಗಳಿಗೆ ಊದುಬತ್ತಿ ಹಚ್ಚಿ, ಕೈಮುಗಿದು ಬೇಡಿಕೊಂಡರೆ ಸಾಕಿತ್ತು. ಹೆಚ್ಚು ಭಯವಾದರೆ ಮುಡಿಪು ಇಟ್ಟರೆ ಸಾಕಿತ್ತು! ಅದರೆ, ಈ ಕೋಮುವಾದಿ ವಿಷ ಧರ್ಮದಲ್ಲಿ ಇರಲಿಲ್ಲ! ಈಗ ಹೇಗೆ ಧರ್ಮವನ್ನು ಕೋಮುವಾದಿ ಬಿಸಿನೆಸ್ ಮಾಡುವಲ್ಲಿ ಎಷ್ಟೆಲ್ಲಾ ಅವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ನೀವೇ ನೋಡಬಹುದು.
ಮಗುವಿಗೆ ಹೆಸರು ಇಡುವುದರಿಂದ ಹಿಡಿದು, ಹುಟ್ಟಿದ ಜಾತಕ, ತಗಲಿಕೊಂಡಿರುವ ರೋಗಗಳು, ಪೂರ್ವಜಾತ ದೋಷಗಳು, ನಕ್ಷತ್ರಗಳು, ಅವುಗಳ ಫಲಗಳು, ಯಮಗಂಡ, ರಾಹುಗಂಡ, ಕೇತುಗಂಡ, ನಾಗದೋಷ, ಶನಿಪ್ರಭಾವ ಮತ್ತು ಶಾಪ, ಹಿರಿಯರ ಶಾಪ, ಅಶಾಂತಿ… ಮತ್ತದಕ್ಕೆ ಪರಿಹಾರಗಳು! ಎಲ್ಲವಕ್ಕೂ ಮಹಾ ಸಂಶೋಧನೆಗಳು ಅಗಿವೆ- ವಿಜ್ಞಾನವನ್ನು ನಾಚಿಸುವಷ್ಟು! ನೀವೇ ಯೋಚಿಸಿದರೆ ಲೆಕ್ಕ ಹಾಕಬಹುದು! ಆದರೂ ಮುಂದಕ್ಕೆ ಎಲ್ಲಾ ಸಂಶೋಧನೆಗಳನ್ನೂ ಸಂಶೋಧಕರನ್ನು ವಿವರವಾಗಿ ನೋಡಿ! ಸಂಶೋಧನೆಯ ವಿವರಗಳು ಅನಂತವಾಗಿವೆ!
ಇಂದು ಬೆಳಗಾಗುತ್ತ ಎದ್ದಾಗ ನಾವು ನೋಡುವುದೇನು?! ಟಿವಿ, ಇಂಟರ್ನೆಟ್! ವಿಜ್ಞಾನದ ಉತ್ಪತ್ತಿಗಳಲ್ಲಿ ರಾರಾಜಿಸುವುದೇನು ಬ್ರಹ್ಮಾಂಡ ಜ್ಯೋತಿಷ್ಯದ ಮಹಾನ್ ಆವಿಷ್ಕಾರಗಳು! ಆ ಮಹಾನ್ ಸಂಶೋಧನೆಗಳು!
ಮಗು ಹುಟ್ಟಿದಾಗ ಏನು ಮಾಡಬೇಕು? ಬಾಲ ಕರ್ಮಗಳೇನು? ಜಾತದೋಷಗಳೇನು? ಭವಿಷ್ಯ ಏನು? ಗಂಡಗಳೇನು? ದೋಷಗಳೇನು? ಪರಿಹಾರಗಳೇನು?
ಹಾವು ಸತ್ತರೆ ಏನು ಮಾಡಬೇಕು? ಎಷ್ಟು ಜನ ಬ್ರಾಹ್ಮಣರಿಗೆ ಊಟ ಹಾಕಬೇಕು? ಗೋದಾನ, ಭೂದಾನ, ಸುವರ್ಣ ದಾನ ಇತ್ಯಾದಿಗಳ ಪುಣ್ಯ ಫಲವೇನು? ಗೋವು, ಸುವರ್ಣ ಇಲ್ಲದಿದ್ದಲ್ಲಿ ಪರಿಹಾರವೇನು? ಇಂಟರ್‍ನೆಟ್‍ನಿಂದ ಹೇಗೆ ಪೂಜೆ ಮಾಡಿಸಬಹುದು? ಪ್ರಸಾದ ಪಡೆಯಬಹುದು? ಇವೆಲ್ಲವುಗಳ ಬಗ್ಗೆ ಸಾವಿರಾರು ಸಂಶೋಧನೆಗಳು ಲಭ್ಯವಿವೆ! ಪೇಟೆಂಟ್ ಮಾಡಿಕೊಂಡಿರುವ ವಿಜ್ಞಾನಿಗಳೂ ಲಭ್ಯವಿದ್ದಾರೆ! ಅವರನ್ನೆಲ್ಲಾ ಮುಂದಿನ ವಾರ ಭೇಟಿಯಾಗೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...