Homeಮುಖಪುಟಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

ಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

- Advertisement -
- Advertisement -

ದೇಶದ್ರೋಹ (sedition-ರಾಜದ್ರೋಹ, ರಾಷ್ಟ್ರದ್ರೋಹ) ಕಾಯಿದೆ ಎಂಬುದು ಒಂದು ನಿರಂಕುಶ ಕಾಯಿದೆಯಾಗಿದ್ದು, ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂಬ ಅಭಿಪ್ರಾಯ, ಆತಂಕಗಳೆಲ್ಲವನ್ನೂ ಕಡೆಗಣಿಸಿ, ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗವು ವಿಧಿ “124ಎ”ಯನ್ನು ಉಳಿಸಿಕೊಳ್ಳಲು ಸ್ಪಷ್ಟವಾಗಿ ಶಿಫಾರಸು ಮಾಡಿದೆ.

ದೇಶದ್ರೋಹದ ಆರೋಪ ಹೊರಿಸಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಒಬ್ಬ ಇನ್‌ಸ್ಪೆಕ್ಟರ್ ಹುದ್ದೆಗಿಂತ ಕೆಳಗಿರದ ಅಧಿಕಾರಿಯು ಪ್ರಾಥಮಿಕ ತನಿಖೆ ನಡೆಸಿ ಅನುಮತಿ ನೀಡಿದರೆ ಮಾತ್ರವೇ ಆ ಸಂಬಂಧ ಎಫ್‌ಐಆರ್ ದಾಖಲಿಸಬಹುದು ಎಂಬುದು ಸೇರಿದಂತೆ, ಕೆಲವು ನೆಪಮಾತ್ರದ, ತಥಾಕಥಿತ ಸುರಕ್ಷಾ ಕ್ರಮಗಳನ್ನು ಮಾತ್ರವೇ ಸಲಹೆ ಮಾಡಲಾಗಿದೆ. ಇದಕ್ಕೂ ಹೆಚ್ಚಾಗಿ, ಈ ಕಾನೂನಿನ ಅನ್ವಯ ಸೆರೆವಾಸದ ಅವಧಿಯನ್ನು ಈಗಿರುವ ಮೂರು ವರ್ಷಗಳಿಂದ ಏಳು ವರ್ಷಗಳಿಗೆ ಏರಿಸುವ ತಿದ್ದುಪಡಿಯನ್ನೂ ಶಿಫಾರಸು ಮಾಡಲಾಗಿದೆ.

ರಿತುಲಾಲ್ ಅವಸ್ಥಿ

ಈ ಕರಾಳ ಕಾಯಿದೆಯನ್ನು ಯಾವ ರೀತಿಯಲ್ಲಿ ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರನ್ನು ಕೂಡಾ ಗುರಿ ಮಾಡಲು ಬಳಸಲಾಗುತ್ತಿದೆ ಎಂಬ ಬಗ್ಗೆ ವರದಿಯಲ್ಲಿ ಒಂದು ಪಿಸುಮಾತು ಕೂಡಾ ಇಲ್ಲ. ಅದಕ್ಕೆ ಬದಲಾಗಿ- ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಲ್ಲಿ ಮತ್ತು ಭಾರತದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ದೇಶದ್ರೋಹದ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ಕಾನೂನು ಆಯೋಗವು ವಾದಿಸುವಾಗ- ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಗೃಹ ಸಚಿವಾಲಯದ ವಾದವನ್ನೇ ಕುರುಡಾಗಿ ಹೊಸರೂಪದಲ್ಲಿ ನೀಡಿದೆ.

ಯುದ್ಧದ ’ಹೊಸ ಗಡಿ’ಗಳೇ (ಇದನ್ನು ಅವರು ನಾಲ್ಕನೇ ತಲೆಮಾರಿನ ಯುದ್ಧತಂತ್ರ ಎಂದು ಕರೆದಿದ್ದಾರೆ) ನಾಗರಿಕ ಸಮಾಜ ಎಂದು ಅಜಿತ್ ದೋವಲ್ ಬಹಿರಂಗವಾಗಿ ಘೋಷಿಸಿದ್ದಾರೆ. ಅದಾಗಿಯೂ, ಸುಪ್ರೀಂಕೋರ್ಟಿನ ತೀರ್ಪುಗಳ ಪ್ರಕಾರ “ರಾಷ್ಟ್ರೀಯ ಭದ್ರತೆ”ಯನ್ನು ಮೂಲಭೂತ ಹಕ್ಕುಗಳ ನಿರ್ಬಂಧಕ್ಕೆ ಒಂದು ಬೋಳು ಅಥವಾ ಟೊಳ್ಳು ಸಮರ್ಥನೆಯಾಗಿ ಹೇರಲು ಸಾಧ್ಯವಿಲ್ಲ.

ವಿಧಿ 19(2) ಅನ್ವಯ ಇರುವ ಮೂಲಭೂತ ಹಕ್ಕುಗಳ ನಿರ್ಬಂಧವು ಪ್ರಮಾಣಾನುಗುಣತೆಯ (proportionality) ಸಿದ್ಧಾಂತಗಳಿಗೆ ಅನುಗುಣವಾಗಿ ಇರಬೇಕು ಎಂಬ- ಅನುರಾಧಾ ಬಾಸಿನ್ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ- ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಕಾನೂನು ಆಯೋಗವು ಕಡೆಗಣಿಸಿದೆ. ರಾಷ್ಟ್ರೀಯ ಭದ್ರತೆಯ ಆತಂಕಕ್ಕೆ ದೇಶದ್ರೋಹದ ಕಾನೂನು ಪ್ರಮಾಣಾತ್ಮಕ ಪ್ರತಿಕ್ರಿಯೆಯಾಗಿದೆಯೇ? ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯೇ- ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಬಲ್ಲ ಇತರ ಕಾನೂನು ಪ್ರತಿಕ್ರಿಯೆಗಳು ಇರಬಹುದೆ? ರಾಷ್ಟ್ರೀಯ ಭದ್ರತೆಯ ಆತಂಕ ಮತ್ತು ಮಾನವ ಹಕ್ಕುಗಳ ಸಮತೋಲನವನ್ನು ನೀವು ಹೇಗೆ ಕಾಯ್ದುಕೊಳ್ಳುತ್ತೀರಿ? ರಾಷ್ಟ್ರೀಯ ಭದ್ರತೆಗಾಗಿ ಸರಕಾರಕ್ಕೆ ದೇಶದ್ರೋಹದ ಕಾನೂನು ಅಗತ್ಯವಿದೆ ಎಂದು ಕುರುಡಾಗಿ ಘೋಷಿಸುವ ಮೊದಲು, ಕಾನೂನು ಆಯೋಗವು ಕೇಳಿಕೊಳ್ಳಬೇಕಾಗಿದ್ದ ಪ್ರಶ್ನೆಗಳಿವು.

ಸುಪ್ರೀಂಕೋರ್ಟ್ ಈ ನಿಲುವನ್ನು ’ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ವರ್ಸಸ್, ಭಾರತ ಸರಕಾರ ಮತ್ತಿತರರು ಪ್ರಕರಣದಲ್ಲಿ ಪುನರುಚ್ಚರಿಸಿದೆ. ಈ ಪ್ರಕರಣದಲ್ಲಿ ಅದು- “ಮೀಡಿಯಾ ಒನ್” ಎಂಬ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ಟಿವಿ ಚಾನೆಲ್ ನಡೆಸುವುದಕ್ಕಾಗಿ ’ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ಸಂಸ್ಥೆಗೆ ತಾನು ನೀಡಿದ್ದ ಪರವಾನಗಿಯನ್ನು ಹಿಂತೆಗೆದುಕೊಂಡ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ರಮವನ್ನು ಅಸಿಂಧುಗೊಳಿಸಿತ್ತು. “ಕಾನೂನಿನ ಆಡಳಿತದ ಅಡಿಯಲ್ಲಿ ನಾಗರಿಕರಿಗೆ ಇರುವ ಅವಕಾಶ ಆಥವಾ ಪರಿಹಾರಗಳನ್ನು ನಿರಾಕರಿಸಲು ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಒಂದು ಸಾಧನವಾಗಿ ಬಳಸುತ್ತಿದೆ” ಎಂದು ಸುಪ್ರೀಂಕೋರ್ಟ್ ತರ್ಕಿಸಿತ್ತು ಮತ್ತು “ಇದು ಕಾನೂನಿನ ಆಡಳಿತದೊಂದಿಗೆ ಸರಿಹೊಂದುವಂತದಲ್ಲ (ಅದಕ್ಕೆ ಅನುಗುಣವಾಗಿಲ್ಲ)” ಎಂದು ಹೇಳಿತ್ತು.

ಅಜಿತ್ ದೋವಲ್

ಶ್ರೇಯಾ ಸಿಂಘಾಲ್ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಗದಿಪಡಿಸಿದ- ಭಿನ್ನಮತ ಮತ್ತು ಪ್ರಜಾಪ್ರಭುತ್ವದ ಸುತ್ತಲಿನ ನ್ಯಾಯಶಾಸ್ತ್ರ ಅಥವಾ ನ್ಯಾಯವಿವೇಚನೆ (jurisprudence)ಯನ್ನು ಕೂಡಾ ಕಾನೂನು ಆಯೋಗವು ಸಂಪೂರ್ಣವಾಗಿ ಅವಗಣಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ಕಾಯಿದೆಯ “ವಿಧಿ 66ಎ”ಯನ್ನು ಕಿತ್ತುಹಾಕಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ, “ಚರ್ಚೆ, “ಪ್ರತಿಪಾದನೆ ಅಥವಾ ವಕಾಲತ್ತು” ಮತ್ತು “ಪ್ರಚೋದನೆ” ಎಂಬ ಮೂರು ಪರಿಕಲ್ಪನೆಗಳಿವೆ ಎಂದು ನ್ಯಾಯಾಲಯವು ತರ್ಕಿಸಿತ್ತು. “ಕೇವಲ ಚರ್ಚೆ ನಡೆಸುವುದು ಅಥವಾ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಪ್ರತಿಪಾದನೆಯು- ಅದೆಷ್ಟೇ ಜನಪ್ರಿಯವಲ್ಲದಿರಲಿ- ಅವುಗಳು ’ವಿಧಿ 19(1)ಎ’ಯ ಹೃದಯದಲ್ಲಿವೆ” ಎಂದು ಅದು ವಿವರಿಸಿತ್ತು. “ಇಂಥ ಚರ್ಚೆ ಇಲ್ಲವೇ ವಕಾಲತ್ತು- ಪ್ರಚೋದನೆಯ ಮಟ್ಟವನ್ನು ತಲುಪಿದಾಗ ಮಾತ್ರವೇ- ಅಂದರೆ, ನಿಷ್ಟುರವಾಗಿ ಸಾರ್ವಜನಿಕ ಅಶಾಂತಿ ಉಂಟುಮಾಡಬಹುದಾದ ಅಥವಾ ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಷ್ಟ್ರೀಯ ಭದ್ರತೆ ಇತ್ಯಾದಿಗಳಿಗೆ ಧಕ್ಕೆ ತರುವ ಸಾಧ್ಯತೆಯಿರುವ ಅಥವಾ ಧಕ್ಕೆ ತರುವ ಮಾತುಗಳು ಅಥವಾ ಅಭಿವ್ಯಕ್ತಿಯನ್ನು ಮೊಟಕುಗೊಳಿಸುವ ಕಾನೂನೊಂದನ್ನು ಮಾಡಬಹುದು” ಎಂದಿತ್ತು.

ಇದನ್ನೂ ಓದಿ: ‘ತಿದ್ದುಪಡಿಯೊಂದಿಗೆ ದೇಶದ್ರೋಹ ಕಾನೂನು ಉಳಿಸಿಕೊಳ್ಳಿ’: ಕಾನೂನು ಆಯೋಗ ಪ್ರಸ್ತಾಪ

ದೇಶದ್ರೋಹ ಕಾನೂನು ಸರಕಾರದಿಂದ ಹೇಗೆ ಸಶಸ್ತ್ರೀಕರಣಗೊಂಡಿದೆ ಎಂಬ ತಳಮಟ್ಟದ ವಾಸ್ತವವನ್ನು ಕೂಡಾ ಕಾನೂನು ಆಯೋಗವು ಅವಗಣಿಸಿದೆ. “ಆರ್ಟಿಕಲ್ 14” (ಇದು ಸಂವಿಧಾನ, ಕಾನೂನು ಮತ್ತು ತೀರ್ಪುಗಳ ಬಗ್ಗೆ ಆಳವಾದ ಸಂಶೋಧನೆ, ಪ್ರಕರಣ ಅಧ್ಯಯನ ನಡೆಸುವ ವಕೀಲರು, ಪತ್ರಕರ್ತರು, ವಿದ್ವಾಂಸರನ್ನು ಒಳಗೊಂಡ ಜಂಟಿ ಸಂಘಟನೆ ಮತ್ತು ಅಂತರ್ಜಾಲ ಪತ್ರಿಕೆ-ಅನು.) ನಡೆಸಿದ ಅಸಾಮಾನ್ಯ ಸಂಶೋಧನೆಯು- ಅದು “ಕತ್ತಲೆಯ ದಶಕ” ಎಂದು ಕರೆಯಲ್ಪಡುವ- 2010ರಿಂದ 2021ರ ತನಕದ ಅವಧಿಯಲ್ಲಿ ಸರಕಾರಗಳು ನಡೆಸಿದ ದೇಶದ್ರೋಹ ಕಾಯಿದೆಯ ದುರುಪಯೋಗಗಳ ಕುರಿತು ಅಪೂರ್ವವಾದ ಒಳನೋಟ ಮತ್ತು ನಿಖರವಾದ ಅಂಕಿಅಂಶಗಳು ಮತ್ತು ಮಾಹಿತಿಗಳನ್ನು ಒದಗಿಸುತ್ತದೆ. ಈ ಅವಧಿಯಲ್ಲಿ 13,000 ಜನರ ಮೇಲೆ 800 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಳೆದ 151 ವರ್ಷಗಳಿಂದ ಅಸ್ತಿತ್ವದಲ್ಲಿ ಇರುವುದರ ಹೊರತಾಗಿಯೂ, “ಆರ್ಟಿಕಲ್ 14” ಕಂಡುಕೊಂಡ ಪ್ರಕಾರ, “ಅದರ ಬಳಕೆಯು ಕಳೆದ ದಶಕದಲ್ಲಿ ನಿರ್ದಯವಾಗಿ ಹೆಚ್ಚಿದ್ದು, ತೀರಾ ಇತ್ತೀಚೆಗೆ- ಸಾರ್ವಜನಿಕ ಪ್ರತಿಭಟನೆಗಳು, ಭಿನ್ನಮತ, ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು, ಸರಕಾರದ ವಿರುದ್ಧ ಟೀಕೆ ಇತ್ಯಾದಿಗಳ ವಿರುದ್ಧ, ಅಷ್ಟೇ ಅಲ್ಲದೇ ಕ್ರಿಕೆಟ್ ಫಲಿತಾಂಶದ ವಿಷಯದಲ್ಲಿ ತೋರಿಸಿದ ವಿರೋಧದಲ್ಲಿ ಕೂಡಾ ದೇಶದ್ರೋಹದ ಕಾನೂನನ್ನು ಬಳಕೆ ಮಾಡಲಾಗಿದೆ” ಎಂದಿದೆ. ಮುಂದುವರಿದು ಅದು- 500ಕ್ಕೂ ಹೆಚ್ಚು ಪ್ರಕರಣಗಳು- 2014 ಮತ್ತು 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ದಾಖಲಾಗಿವೆ ಎಂಬುದನ್ನೂ ಕಂಡುಕೊಂಡಿದೆ.

ಸುಪ್ರೀಂಕೋರ್ಟ್ದೇಶದ್ರೋಹ ಕಾಯಿದೆಗೆ ಒಡ್ಡಲಾಗಿದ್ದ ಸಾಂವಿಧಾನಿಕ ಸವಾಲನ್ನು ವಿಚಾರಣೆ ನಡೆಸುತ್ತಿದ್ದಾಗ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ರಮಣ ಈ ಕಾಯಿದೆಯನ್ನು ಗಾಂಧಿ ಮತ್ತು ತಿಲಕರಂಥವರ ವಿರುದ್ಧವೂ ಬಳಸಲಾಗಿತ್ತು ಎಂಬುದನ್ನು ಉಲ್ಲೇಖಿಸಿ, ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ನಂತರವೂ ನಮಗೆ ಇಂತಹದ್ದೊಂದು ಕಾನೂನು ಬೇಕೇ ಎಂದು ಪ್ರಶ್ನಿಸಿದ್ದರು. ಹೀಗಿದ್ದರೂ, ಕಾನೂನು ಆಯೋಗವು ರಾಷ್ಟ್ರಪಿತನ ದೇಶದ್ರೋಹದ ವಿಚಾರಣೆಯ ಉಲ್ಲೇಖವನ್ನೂ ಮಾಡಿಲ್ಲ. ಗಾಂಧಿಯವರು ದೇಶದ್ರೋಹ ಕಾನೂನನ್ನು ವಸಾಹತುಶಾಹಿಗಳ ಒಂದು ಅಸ್ತ್ರ ಎಂದು ಪರಿಗಣಿಸಿದ್ದರು ಎಂಬ ವಾಸ್ತವವನ್ನೂ ಅದು ನಿರ್ಲಕ್ಷಿಸಿದೆ. ದೇಶದ್ರೋಹದ ಕುರಿತ ಒಂದು ಅತ್ಯಂತ ಪ್ರಖ್ಯಾತ ಹೇಳಿಕೆಯಲ್ಲಿ ಅವರು, “ದೇಶದ್ರೋಹ ಕಾನೂನು ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ನಾಗರಿಕರ ಸ್ವಾತಂತ್ರ್ಯವನ್ನು ದಮನಿಸಲು ರೂಪಿಸಲಾದ ರಾಜಕೀಯ ವಿಧಿಗಳ ರಾಜಕುಮಾರ” ಎಂದು ಬಣ್ಣಿಸಿದ್ದರು. ಕಾನೂನು ಆಯೋಗದ ಈ ಲೋಪವು ನಮ್ಮ ಇತಿಹಾಸದ ಬಹುಮುಖ್ಯ ಭಾಗವಾಗಿದ್ದು, ಈ ವರದಿಯ ಸ್ವಾತಂತ್ರ್ಯ ವಿರೋಧಿ ಧೋರಣೆಯ ಕುರಿತು ಬಹಳಷ್ಟನ್ನು ಸಾರುತ್ತದೆ.

ಹಳೆಯದನ್ನು ನೆನಪಿಸಿಕೊಳ್ಳಬೇಕು ಎಂದರೆ, ಈ ವರದಿಯ ಕರ್ತೃ ನ್ಯಾ. ಅವಸ್ಥಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದವರು. ಇವರೇ, ತರಗತಿಯಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದ ಕುಖ್ಯಾತ ತೀರ್ಪಿನ ರೂವಾರಿ. ಇಂದು ಅವರು – ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ 124-ಎ ವಿಧಿಯು ಯಾವ ರೀತಿಯಲ್ಲಿ ಅಡ್ಡಿಪಡಿಸುತ್ತದೆ ಎಂಬುದನ್ನು ಅರ್ಥಹೀನವಾಗಿ ಮತ್ತು ಅಸಡ್ಡೆಯಿಂದ ನಿರ್ಲಕ್ಷಿಸುವಂತಹ ಅದೇ ರೀತಿಯ ಸ್ವಾತಂತ್ರ್ಯ ವಿರೋಧಿ ವರದಿಯನ್ನು ಬರೆದಿದ್ದಾರೆ.

ಈ ವರದಿಯು ಇತಿಹಾಸದ ಕಸದಬುಟ್ಟಿಗೆ ಎಸೆಯಲು ಅರ್ಹವಾಗಿದೆ. ಹಿಂದೂ ರಾಷ್ಟ್ರದ ಸಂವಿಧಾನ ವಿರೋಧಿ ಕಲ್ಪನೆಯನ್ನು ವಿರೋಧಿಸುವ ಯಾವುದೇ ಭಿನ್ನಮತದ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿಯು ಅಷ್ಟೊಂದು ಸುಲಭವಾಗಿ ಬಳಸುತ್ತಿರುವ ದೇಶದ್ರೋಹ ಮತ್ತು ಇತರ ಎಲ್ಲಾ ಕರಾಳ ಕಾಯಿದೆಗಳ ವಿರುದ್ಧ ದೇಶದ ಜನರು ಎದ್ದು ನಿಲ್ಲಬೇಕಾಗಿದೆ.

ಕ್ಲಿಫ್ಟನ್ ಎಸ್. ರೊಸಾರಿಯೋ ಮತ್ತು ಅರವಿಂದ್ ನಾರಾಯಣ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...