Homeಮುಖಪುಟಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

ಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

- Advertisement -
- Advertisement -

ದೇಶದ್ರೋಹ (sedition-ರಾಜದ್ರೋಹ, ರಾಷ್ಟ್ರದ್ರೋಹ) ಕಾಯಿದೆ ಎಂಬುದು ಒಂದು ನಿರಂಕುಶ ಕಾಯಿದೆಯಾಗಿದ್ದು, ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂಬ ಅಭಿಪ್ರಾಯ, ಆತಂಕಗಳೆಲ್ಲವನ್ನೂ ಕಡೆಗಣಿಸಿ, ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗವು ವಿಧಿ “124ಎ”ಯನ್ನು ಉಳಿಸಿಕೊಳ್ಳಲು ಸ್ಪಷ್ಟವಾಗಿ ಶಿಫಾರಸು ಮಾಡಿದೆ.

ದೇಶದ್ರೋಹದ ಆರೋಪ ಹೊರಿಸಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಒಬ್ಬ ಇನ್‌ಸ್ಪೆಕ್ಟರ್ ಹುದ್ದೆಗಿಂತ ಕೆಳಗಿರದ ಅಧಿಕಾರಿಯು ಪ್ರಾಥಮಿಕ ತನಿಖೆ ನಡೆಸಿ ಅನುಮತಿ ನೀಡಿದರೆ ಮಾತ್ರವೇ ಆ ಸಂಬಂಧ ಎಫ್‌ಐಆರ್ ದಾಖಲಿಸಬಹುದು ಎಂಬುದು ಸೇರಿದಂತೆ, ಕೆಲವು ನೆಪಮಾತ್ರದ, ತಥಾಕಥಿತ ಸುರಕ್ಷಾ ಕ್ರಮಗಳನ್ನು ಮಾತ್ರವೇ ಸಲಹೆ ಮಾಡಲಾಗಿದೆ. ಇದಕ್ಕೂ ಹೆಚ್ಚಾಗಿ, ಈ ಕಾನೂನಿನ ಅನ್ವಯ ಸೆರೆವಾಸದ ಅವಧಿಯನ್ನು ಈಗಿರುವ ಮೂರು ವರ್ಷಗಳಿಂದ ಏಳು ವರ್ಷಗಳಿಗೆ ಏರಿಸುವ ತಿದ್ದುಪಡಿಯನ್ನೂ ಶಿಫಾರಸು ಮಾಡಲಾಗಿದೆ.

ರಿತುಲಾಲ್ ಅವಸ್ಥಿ

ಈ ಕರಾಳ ಕಾಯಿದೆಯನ್ನು ಯಾವ ರೀತಿಯಲ್ಲಿ ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರನ್ನು ಕೂಡಾ ಗುರಿ ಮಾಡಲು ಬಳಸಲಾಗುತ್ತಿದೆ ಎಂಬ ಬಗ್ಗೆ ವರದಿಯಲ್ಲಿ ಒಂದು ಪಿಸುಮಾತು ಕೂಡಾ ಇಲ್ಲ. ಅದಕ್ಕೆ ಬದಲಾಗಿ- ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಲ್ಲಿ ಮತ್ತು ಭಾರತದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ದೇಶದ್ರೋಹದ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ಕಾನೂನು ಆಯೋಗವು ವಾದಿಸುವಾಗ- ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಗೃಹ ಸಚಿವಾಲಯದ ವಾದವನ್ನೇ ಕುರುಡಾಗಿ ಹೊಸರೂಪದಲ್ಲಿ ನೀಡಿದೆ.

ಯುದ್ಧದ ’ಹೊಸ ಗಡಿ’ಗಳೇ (ಇದನ್ನು ಅವರು ನಾಲ್ಕನೇ ತಲೆಮಾರಿನ ಯುದ್ಧತಂತ್ರ ಎಂದು ಕರೆದಿದ್ದಾರೆ) ನಾಗರಿಕ ಸಮಾಜ ಎಂದು ಅಜಿತ್ ದೋವಲ್ ಬಹಿರಂಗವಾಗಿ ಘೋಷಿಸಿದ್ದಾರೆ. ಅದಾಗಿಯೂ, ಸುಪ್ರೀಂಕೋರ್ಟಿನ ತೀರ್ಪುಗಳ ಪ್ರಕಾರ “ರಾಷ್ಟ್ರೀಯ ಭದ್ರತೆ”ಯನ್ನು ಮೂಲಭೂತ ಹಕ್ಕುಗಳ ನಿರ್ಬಂಧಕ್ಕೆ ಒಂದು ಬೋಳು ಅಥವಾ ಟೊಳ್ಳು ಸಮರ್ಥನೆಯಾಗಿ ಹೇರಲು ಸಾಧ್ಯವಿಲ್ಲ.

ವಿಧಿ 19(2) ಅನ್ವಯ ಇರುವ ಮೂಲಭೂತ ಹಕ್ಕುಗಳ ನಿರ್ಬಂಧವು ಪ್ರಮಾಣಾನುಗುಣತೆಯ (proportionality) ಸಿದ್ಧಾಂತಗಳಿಗೆ ಅನುಗುಣವಾಗಿ ಇರಬೇಕು ಎಂಬ- ಅನುರಾಧಾ ಬಾಸಿನ್ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ- ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಕಾನೂನು ಆಯೋಗವು ಕಡೆಗಣಿಸಿದೆ. ರಾಷ್ಟ್ರೀಯ ಭದ್ರತೆಯ ಆತಂಕಕ್ಕೆ ದೇಶದ್ರೋಹದ ಕಾನೂನು ಪ್ರಮಾಣಾತ್ಮಕ ಪ್ರತಿಕ್ರಿಯೆಯಾಗಿದೆಯೇ? ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯೇ- ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಬಲ್ಲ ಇತರ ಕಾನೂನು ಪ್ರತಿಕ್ರಿಯೆಗಳು ಇರಬಹುದೆ? ರಾಷ್ಟ್ರೀಯ ಭದ್ರತೆಯ ಆತಂಕ ಮತ್ತು ಮಾನವ ಹಕ್ಕುಗಳ ಸಮತೋಲನವನ್ನು ನೀವು ಹೇಗೆ ಕಾಯ್ದುಕೊಳ್ಳುತ್ತೀರಿ? ರಾಷ್ಟ್ರೀಯ ಭದ್ರತೆಗಾಗಿ ಸರಕಾರಕ್ಕೆ ದೇಶದ್ರೋಹದ ಕಾನೂನು ಅಗತ್ಯವಿದೆ ಎಂದು ಕುರುಡಾಗಿ ಘೋಷಿಸುವ ಮೊದಲು, ಕಾನೂನು ಆಯೋಗವು ಕೇಳಿಕೊಳ್ಳಬೇಕಾಗಿದ್ದ ಪ್ರಶ್ನೆಗಳಿವು.

ಸುಪ್ರೀಂಕೋರ್ಟ್ ಈ ನಿಲುವನ್ನು ’ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ವರ್ಸಸ್, ಭಾರತ ಸರಕಾರ ಮತ್ತಿತರರು ಪ್ರಕರಣದಲ್ಲಿ ಪುನರುಚ್ಚರಿಸಿದೆ. ಈ ಪ್ರಕರಣದಲ್ಲಿ ಅದು- “ಮೀಡಿಯಾ ಒನ್” ಎಂಬ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ಟಿವಿ ಚಾನೆಲ್ ನಡೆಸುವುದಕ್ಕಾಗಿ ’ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ಸಂಸ್ಥೆಗೆ ತಾನು ನೀಡಿದ್ದ ಪರವಾನಗಿಯನ್ನು ಹಿಂತೆಗೆದುಕೊಂಡ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ರಮವನ್ನು ಅಸಿಂಧುಗೊಳಿಸಿತ್ತು. “ಕಾನೂನಿನ ಆಡಳಿತದ ಅಡಿಯಲ್ಲಿ ನಾಗರಿಕರಿಗೆ ಇರುವ ಅವಕಾಶ ಆಥವಾ ಪರಿಹಾರಗಳನ್ನು ನಿರಾಕರಿಸಲು ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಒಂದು ಸಾಧನವಾಗಿ ಬಳಸುತ್ತಿದೆ” ಎಂದು ಸುಪ್ರೀಂಕೋರ್ಟ್ ತರ್ಕಿಸಿತ್ತು ಮತ್ತು “ಇದು ಕಾನೂನಿನ ಆಡಳಿತದೊಂದಿಗೆ ಸರಿಹೊಂದುವಂತದಲ್ಲ (ಅದಕ್ಕೆ ಅನುಗುಣವಾಗಿಲ್ಲ)” ಎಂದು ಹೇಳಿತ್ತು.

ಅಜಿತ್ ದೋವಲ್

ಶ್ರೇಯಾ ಸಿಂಘಾಲ್ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಗದಿಪಡಿಸಿದ- ಭಿನ್ನಮತ ಮತ್ತು ಪ್ರಜಾಪ್ರಭುತ್ವದ ಸುತ್ತಲಿನ ನ್ಯಾಯಶಾಸ್ತ್ರ ಅಥವಾ ನ್ಯಾಯವಿವೇಚನೆ (jurisprudence)ಯನ್ನು ಕೂಡಾ ಕಾನೂನು ಆಯೋಗವು ಸಂಪೂರ್ಣವಾಗಿ ಅವಗಣಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ಕಾಯಿದೆಯ “ವಿಧಿ 66ಎ”ಯನ್ನು ಕಿತ್ತುಹಾಕಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ, “ಚರ್ಚೆ, “ಪ್ರತಿಪಾದನೆ ಅಥವಾ ವಕಾಲತ್ತು” ಮತ್ತು “ಪ್ರಚೋದನೆ” ಎಂಬ ಮೂರು ಪರಿಕಲ್ಪನೆಗಳಿವೆ ಎಂದು ನ್ಯಾಯಾಲಯವು ತರ್ಕಿಸಿತ್ತು. “ಕೇವಲ ಚರ್ಚೆ ನಡೆಸುವುದು ಅಥವಾ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಪ್ರತಿಪಾದನೆಯು- ಅದೆಷ್ಟೇ ಜನಪ್ರಿಯವಲ್ಲದಿರಲಿ- ಅವುಗಳು ’ವಿಧಿ 19(1)ಎ’ಯ ಹೃದಯದಲ್ಲಿವೆ” ಎಂದು ಅದು ವಿವರಿಸಿತ್ತು. “ಇಂಥ ಚರ್ಚೆ ಇಲ್ಲವೇ ವಕಾಲತ್ತು- ಪ್ರಚೋದನೆಯ ಮಟ್ಟವನ್ನು ತಲುಪಿದಾಗ ಮಾತ್ರವೇ- ಅಂದರೆ, ನಿಷ್ಟುರವಾಗಿ ಸಾರ್ವಜನಿಕ ಅಶಾಂತಿ ಉಂಟುಮಾಡಬಹುದಾದ ಅಥವಾ ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಷ್ಟ್ರೀಯ ಭದ್ರತೆ ಇತ್ಯಾದಿಗಳಿಗೆ ಧಕ್ಕೆ ತರುವ ಸಾಧ್ಯತೆಯಿರುವ ಅಥವಾ ಧಕ್ಕೆ ತರುವ ಮಾತುಗಳು ಅಥವಾ ಅಭಿವ್ಯಕ್ತಿಯನ್ನು ಮೊಟಕುಗೊಳಿಸುವ ಕಾನೂನೊಂದನ್ನು ಮಾಡಬಹುದು” ಎಂದಿತ್ತು.

ಇದನ್ನೂ ಓದಿ: ‘ತಿದ್ದುಪಡಿಯೊಂದಿಗೆ ದೇಶದ್ರೋಹ ಕಾನೂನು ಉಳಿಸಿಕೊಳ್ಳಿ’: ಕಾನೂನು ಆಯೋಗ ಪ್ರಸ್ತಾಪ

ದೇಶದ್ರೋಹ ಕಾನೂನು ಸರಕಾರದಿಂದ ಹೇಗೆ ಸಶಸ್ತ್ರೀಕರಣಗೊಂಡಿದೆ ಎಂಬ ತಳಮಟ್ಟದ ವಾಸ್ತವವನ್ನು ಕೂಡಾ ಕಾನೂನು ಆಯೋಗವು ಅವಗಣಿಸಿದೆ. “ಆರ್ಟಿಕಲ್ 14” (ಇದು ಸಂವಿಧಾನ, ಕಾನೂನು ಮತ್ತು ತೀರ್ಪುಗಳ ಬಗ್ಗೆ ಆಳವಾದ ಸಂಶೋಧನೆ, ಪ್ರಕರಣ ಅಧ್ಯಯನ ನಡೆಸುವ ವಕೀಲರು, ಪತ್ರಕರ್ತರು, ವಿದ್ವಾಂಸರನ್ನು ಒಳಗೊಂಡ ಜಂಟಿ ಸಂಘಟನೆ ಮತ್ತು ಅಂತರ್ಜಾಲ ಪತ್ರಿಕೆ-ಅನು.) ನಡೆಸಿದ ಅಸಾಮಾನ್ಯ ಸಂಶೋಧನೆಯು- ಅದು “ಕತ್ತಲೆಯ ದಶಕ” ಎಂದು ಕರೆಯಲ್ಪಡುವ- 2010ರಿಂದ 2021ರ ತನಕದ ಅವಧಿಯಲ್ಲಿ ಸರಕಾರಗಳು ನಡೆಸಿದ ದೇಶದ್ರೋಹ ಕಾಯಿದೆಯ ದುರುಪಯೋಗಗಳ ಕುರಿತು ಅಪೂರ್ವವಾದ ಒಳನೋಟ ಮತ್ತು ನಿಖರವಾದ ಅಂಕಿಅಂಶಗಳು ಮತ್ತು ಮಾಹಿತಿಗಳನ್ನು ಒದಗಿಸುತ್ತದೆ. ಈ ಅವಧಿಯಲ್ಲಿ 13,000 ಜನರ ಮೇಲೆ 800 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಳೆದ 151 ವರ್ಷಗಳಿಂದ ಅಸ್ತಿತ್ವದಲ್ಲಿ ಇರುವುದರ ಹೊರತಾಗಿಯೂ, “ಆರ್ಟಿಕಲ್ 14” ಕಂಡುಕೊಂಡ ಪ್ರಕಾರ, “ಅದರ ಬಳಕೆಯು ಕಳೆದ ದಶಕದಲ್ಲಿ ನಿರ್ದಯವಾಗಿ ಹೆಚ್ಚಿದ್ದು, ತೀರಾ ಇತ್ತೀಚೆಗೆ- ಸಾರ್ವಜನಿಕ ಪ್ರತಿಭಟನೆಗಳು, ಭಿನ್ನಮತ, ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು, ಸರಕಾರದ ವಿರುದ್ಧ ಟೀಕೆ ಇತ್ಯಾದಿಗಳ ವಿರುದ್ಧ, ಅಷ್ಟೇ ಅಲ್ಲದೇ ಕ್ರಿಕೆಟ್ ಫಲಿತಾಂಶದ ವಿಷಯದಲ್ಲಿ ತೋರಿಸಿದ ವಿರೋಧದಲ್ಲಿ ಕೂಡಾ ದೇಶದ್ರೋಹದ ಕಾನೂನನ್ನು ಬಳಕೆ ಮಾಡಲಾಗಿದೆ” ಎಂದಿದೆ. ಮುಂದುವರಿದು ಅದು- 500ಕ್ಕೂ ಹೆಚ್ಚು ಪ್ರಕರಣಗಳು- 2014 ಮತ್ತು 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ದಾಖಲಾಗಿವೆ ಎಂಬುದನ್ನೂ ಕಂಡುಕೊಂಡಿದೆ.

ಸುಪ್ರೀಂಕೋರ್ಟ್ದೇಶದ್ರೋಹ ಕಾಯಿದೆಗೆ ಒಡ್ಡಲಾಗಿದ್ದ ಸಾಂವಿಧಾನಿಕ ಸವಾಲನ್ನು ವಿಚಾರಣೆ ನಡೆಸುತ್ತಿದ್ದಾಗ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ರಮಣ ಈ ಕಾಯಿದೆಯನ್ನು ಗಾಂಧಿ ಮತ್ತು ತಿಲಕರಂಥವರ ವಿರುದ್ಧವೂ ಬಳಸಲಾಗಿತ್ತು ಎಂಬುದನ್ನು ಉಲ್ಲೇಖಿಸಿ, ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ನಂತರವೂ ನಮಗೆ ಇಂತಹದ್ದೊಂದು ಕಾನೂನು ಬೇಕೇ ಎಂದು ಪ್ರಶ್ನಿಸಿದ್ದರು. ಹೀಗಿದ್ದರೂ, ಕಾನೂನು ಆಯೋಗವು ರಾಷ್ಟ್ರಪಿತನ ದೇಶದ್ರೋಹದ ವಿಚಾರಣೆಯ ಉಲ್ಲೇಖವನ್ನೂ ಮಾಡಿಲ್ಲ. ಗಾಂಧಿಯವರು ದೇಶದ್ರೋಹ ಕಾನೂನನ್ನು ವಸಾಹತುಶಾಹಿಗಳ ಒಂದು ಅಸ್ತ್ರ ಎಂದು ಪರಿಗಣಿಸಿದ್ದರು ಎಂಬ ವಾಸ್ತವವನ್ನೂ ಅದು ನಿರ್ಲಕ್ಷಿಸಿದೆ. ದೇಶದ್ರೋಹದ ಕುರಿತ ಒಂದು ಅತ್ಯಂತ ಪ್ರಖ್ಯಾತ ಹೇಳಿಕೆಯಲ್ಲಿ ಅವರು, “ದೇಶದ್ರೋಹ ಕಾನೂನು ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ನಾಗರಿಕರ ಸ್ವಾತಂತ್ರ್ಯವನ್ನು ದಮನಿಸಲು ರೂಪಿಸಲಾದ ರಾಜಕೀಯ ವಿಧಿಗಳ ರಾಜಕುಮಾರ” ಎಂದು ಬಣ್ಣಿಸಿದ್ದರು. ಕಾನೂನು ಆಯೋಗದ ಈ ಲೋಪವು ನಮ್ಮ ಇತಿಹಾಸದ ಬಹುಮುಖ್ಯ ಭಾಗವಾಗಿದ್ದು, ಈ ವರದಿಯ ಸ್ವಾತಂತ್ರ್ಯ ವಿರೋಧಿ ಧೋರಣೆಯ ಕುರಿತು ಬಹಳಷ್ಟನ್ನು ಸಾರುತ್ತದೆ.

ಹಳೆಯದನ್ನು ನೆನಪಿಸಿಕೊಳ್ಳಬೇಕು ಎಂದರೆ, ಈ ವರದಿಯ ಕರ್ತೃ ನ್ಯಾ. ಅವಸ್ಥಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದವರು. ಇವರೇ, ತರಗತಿಯಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದ ಕುಖ್ಯಾತ ತೀರ್ಪಿನ ರೂವಾರಿ. ಇಂದು ಅವರು – ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ 124-ಎ ವಿಧಿಯು ಯಾವ ರೀತಿಯಲ್ಲಿ ಅಡ್ಡಿಪಡಿಸುತ್ತದೆ ಎಂಬುದನ್ನು ಅರ್ಥಹೀನವಾಗಿ ಮತ್ತು ಅಸಡ್ಡೆಯಿಂದ ನಿರ್ಲಕ್ಷಿಸುವಂತಹ ಅದೇ ರೀತಿಯ ಸ್ವಾತಂತ್ರ್ಯ ವಿರೋಧಿ ವರದಿಯನ್ನು ಬರೆದಿದ್ದಾರೆ.

ಈ ವರದಿಯು ಇತಿಹಾಸದ ಕಸದಬುಟ್ಟಿಗೆ ಎಸೆಯಲು ಅರ್ಹವಾಗಿದೆ. ಹಿಂದೂ ರಾಷ್ಟ್ರದ ಸಂವಿಧಾನ ವಿರೋಧಿ ಕಲ್ಪನೆಯನ್ನು ವಿರೋಧಿಸುವ ಯಾವುದೇ ಭಿನ್ನಮತದ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿಯು ಅಷ್ಟೊಂದು ಸುಲಭವಾಗಿ ಬಳಸುತ್ತಿರುವ ದೇಶದ್ರೋಹ ಮತ್ತು ಇತರ ಎಲ್ಲಾ ಕರಾಳ ಕಾಯಿದೆಗಳ ವಿರುದ್ಧ ದೇಶದ ಜನರು ಎದ್ದು ನಿಲ್ಲಬೇಕಾಗಿದೆ.

ಕ್ಲಿಫ್ಟನ್ ಎಸ್. ರೊಸಾರಿಯೋ ಮತ್ತು ಅರವಿಂದ್ ನಾರಾಯಣ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...