Homeಮುಖಪುಟಶಹೀನ್ ಬಾಗ್ ಆಂದೋಲನ: ಆಳಗೊಳ್ಳುತ್ತಿರುವ ಪ್ರಜಾಪ್ರಭುತ್ವ-ಒಗ್ಗೂಡುತ್ತಿರುವ ಭಾರತ

ಶಹೀನ್ ಬಾಗ್ ಆಂದೋಲನ: ಆಳಗೊಳ್ಳುತ್ತಿರುವ ಪ್ರಜಾಪ್ರಭುತ್ವ-ಒಗ್ಗೂಡುತ್ತಿರುವ ಭಾರತ

- Advertisement -
- Advertisement -
  • ರಾಮ್ ಪುನಿಯಾನಿ

ಅನುವಾದ – ರಾಜಶೇಖರ್‌ ಅಕ್ಕಿ

ವಿಶ್ವಾದ್ಯಂತ ಪ್ರಜಾಪ್ರಭುತ್ವವು ನಿಧಾನವಾಗಿ ಬೇರೂರುತ್ತಿರುವ ಸಮಯದಲ್ಲಿ, ದಿ ಎಕಾನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಎನ್ನುವ ಸಂಸ್ಥೆಯು ವಿಶ್ವದ ದೇಶಗಳಲ್ಲಿ ಪ್ರಜಾಪ್ರಭುತ್ವದ ಪ್ರಮಾಣವನ್ನು ಮಾನಿಟರ್ ಮಾಡುವ ಕೆಲಸ ಮಾಡುತ್ತದೆ. ಪ್ರತಿ ದೇಶದಲ್ಲೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಾಗೂ ಅದನ್ನು ದುರ್ಬಲಗೊಳಿಸುವ ಹಲವಾರು ಕೈಗಳು ಕೆಲಸ ಮಾಡುತ್ತಿರುತ್ತವೆ. ಒಟ್ಟಾರೆಯಾಗಿ, ಸೈದ್ಧಾಂತಿಕ ಪ್ರಜಾಪ್ರಭುತ್ವದಿಂದ ಒಂದು ವಾಸ್ತವಿಕ ಪ್ರಜಾಪ್ರಭುತ್ವದೆಡೆಗೆ ನಡೆ ಕಾಣಿಸುತ್ತಿದೆ. ಈ ವಾಸ್ತವಿಕ ಪ್ರಜಾಪ್ರಭುತ್ವವು ಕೇವಲ ಔಪಚಾರಿಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಮುದಾಯ ಪ್ರಜ್ಞೆಯಷ್ಟೆ ಅಲ್ಲದೇ ಈ ಮೌಲ್ಯಗಳ ವಾಸ್ತವಿಕ ಗುಣಮಟ್ಟದ ಮೇಲೆ ಆಧಾರಿತವಾದ ದೇಶ ಸ್ಥಾಪನೆಯಾಗುವೆಡೆಗೆ ಹೋಗುತ್ತಿದೆ. ಭಾರತದಲ್ಲಿ, ಆಧುನಿಕ ಶಿಕ್ಷಣ, ಸಾರಿಗೆ, ಸಂವಹನವು ಈ ಪ್ರಕ್ರಿಯೆಗೆ ಹಿನ್ನೆಲೆ ಒದಗಿಸಿದರೆ, ಈ ಪ್ರಕ್ರಿಯೆಯೂ ಬೇರೂರುವ ಕಡೆಗೆ ತಿರುಗಿದ್ದು ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ 1920ರ ಅಸಹಕಾರ ಚಳವಳಿಯಿಂದ, ಆಗ ಸಾಮಾನ್ಯ ಜನರೂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದರು. ಭಾರತದ ಸ್ವಾತಂತ್ರಕ್ಕಾಗಿ ನಡೆದ ಚಳವಳಿಯು ವಿಶ್ವದಲ್ಲೇ ‘ಅತ್ಯಂತ ಶ್ರೇಷ್ಠ ಜನಾಂದೋಲನ’ ಎಂದು ಸಾಬೀತಾಗಿದೆ.

ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವಕ್ಕೆ ಇರಬೇಕಾದ ಮಾನದಂಡಗಳನ್ನು ಮತ್ತು ಅನುಮೋದನೆಯನ್ನು ಪ್ರತಿಪಾದಿಸಲಾಗಿದೆ. ನಮ್ಮ ಸಂವಿಧಾನ ‘ನಾವು ಭಾರತೀಯರು’ (we the people of India) ಎಂದು ಪ್ರಾರಂಭವಾಗುತ್ತದೆ ಹಾಗೂ ಅದನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ಸಂವಿಧಾನದಿಂದಾಗಿ ಹಾಗೂ ನೆಹರು ಅವರು ಅಳವಡಿಸಿಕೊಂಡು ನೀತಿಗಳಿಂದಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಯು ಇನ್ನಷ್ಟು ಆಳಗೊಳ್ಳತೊಡಗಿತು.

1975ರ ಹೇರಲಾದ ಭಯಾನಕವಾದ ತುರ್ತು ಪರಿಸ್ಥಿತಿಯಿಂದ ಧಕ್ಕೆಯಾದರೂ ನಂತರ ಅದನ್ನು ಹಿಂಪಡೆದುಕೊಂಡು ಪ್ರಜಾಸತ್ತಾತ್ಮಕ ಸ್ವಾತಂತ್ರಗಳನ್ನು ಕೆಲಮಟ್ಟಿಗೆ ಪುನಃಸ್ಥಾಪಿಸಲಾಯಿತು. 1990ರ ದಶಕದಲ್ಲಿ ರಾಮಮಂದಿರ ಆಂದೋಲನದ ಪ್ರಾರಂಭದಿಂದ ಪ್ರಜಾಪ್ರಭುತ್ವದ ಈ ಪ್ರಕ್ರಿಯೆಗೆ ವಿರೋಧ ಎದುರಿಸುತ್ತಿದೆ. ಹಾಗೂ 2014ರಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಈ ಪ್ರಕ್ರಿಯೆಯಲ್ಲಿ ಇನ್ನಷ್ಟು ಸವೆತ ಕಂಡುಬಂದಿದೆ. ಸರಕಾರವು ನಾಗರಿಕ ಹಕ್ಕುಗಳು, ಬಹುತ್ವ ಮತ್ತು ಎಲ್ಲರೂ ಪಾಲ್ಗೊಳ್ಳುವಂತಹ ರಾಜಕೀಯ ಸಂಸ್ಕೃತಿಯ ಮೇಲೆ ಸಕ್ರೀಯವಾಗಿ ದಾಳಿ ಮಾಡುತ್ತಿದೆ ಹಾಗೂ ಪ್ರಜಾಪ್ರಭುತ್ವವು ಗಂಭೀರವಾದ ದೋಷಪೂರಿತವಾಗುತ್ತಿದೆ. ಹಾಗೂ ಇದು ಸ್ಪಷ್ಟವಾಗಿ ವ್ಯಕ್ತವಾಗಿದ್ದು ಭಾರತದ ಸೂಚ್ಯಾಂಕವು 2019ರಲ್ಲಿ ಹತ್ತು ಸ್ಥಾನ ಕಳೆದುಕೊಂಡು 51ನೇ ಸ್ಥಾನಕ್ಕೆ ಇಳಿದಾಗ. ಪ್ರಜಾಪ್ರಭುತ್ವದ ಸೂಚ್ಯಾಂಕದಲ್ಲಿ ಭಾರತದ ಅಂಕವು 7.23 ರಿಂದ 6.90 ಗೆ ಇಳಿದಿದೆ. ಬಿಜೆಪಿಯ ಬಲಪಂಥೀಯ ರಾಜಕೀಯದ ಪ್ರಭಾವವು ರಾಷ್ಟ್ರದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ವಿಪರ್ಯಾಸವೇನೆಂದರೆ, ಶಾಹೀನ್ ಬಾಗ್‌ನ ಪ್ರತಿಭಟನೆಯೊಂದಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯು ಮತ್ತೇ ಚಿಗುರೊಡೆದು ಗಟ್ಟಿಗೊಳ್ಳುತ್ತಿರುವ ಮತ್ತು ಜನರ ಸಾವಿರಾರು ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಸೂಚ್ಯಾಂಕಗಳು ಹೊರಬಿದ್ದಿವೆ. ಜಾಮಿಯ ಮಿಲ್ಲಿಯ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ಅಂಗೀಕಾರಗೊಂಡ ಸಮಯದಲ್ಲಿ ಅಂದರೆ 2019ರ ಡಿಸೆಂಬರ್ 15ರಂದು ಪ್ರಾರಂಭಗೊಂಡ ಈ ಪ್ರತಿಭಟನೆ ಇನ್ನೂ ಗಟ್ಟಿಯಾಗಿಯೇ ನಡೆಯುತ್ತಿದೆ.

ಇದರ ವಿಶೇಷತೆಯೆಂದರೆ, ಇದರ ಮುಂದಾಳತ್ವ ವಹಿಸಿದವರು ಮುಸ್ಲಿಮ್ ಮಹಿಳೆಯರು. ಬುರ್ಖಾ-ಹಿಜಬ್ ಧರಿಸಿದ ಮಹಿಳೆಯರಿಂದ ಹಿಡಿದು, ‘ಮುಸ್ಲಿಮರಂತೆ ಕಾಣದ’ ಮಹಿಳೆಯರು ಪ್ರಾರಂಭಿಸಿದ ಈ ಪ್ರತಿಭಟನೆಗೆ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಮತ್ತು ಯುವಜನರು ಸೇರಿಕೊಂಡರು. ನಂತರ ಎಲ್ಲಾ ಸಮುದಾಯಗಳ ಇತರ ಜನರೂ ಸೇರಿಕೊಂಡರು. ಈ ಹಿಂದೆ ಮುಸ್ಲಿಮ್ ಸಮುದಾಯದವರು ಪ್ರಾರಂಭಿಸಿದ ಯಾವುದೇ ಚಳವಳಿಗಿಂತಲೂ ಇದು ಭಿನ್ನವಾಗಿದೆ. ಈ ಹಿಂದೆ ಶಾಹ್ ಬಾನೋ ತೀರ್ಪಿನ ವಿರುದ್ಧ ಪ್ರತಿಭಟನೆಗಳು, ಹಾಜಿ ಅಲಿಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು, ಸರಕಾರವು ತ್ರಿವಳಿ ತಲಾಕ್‌ಅನ್ನು ರದ್ದುಗೊಳಿಸಿದ ಕ್ರಮಕ್ಕೆ ವಿರೋಧಿಸಿ ನಡೆದ ಪ್ರತಿಭಟನೆಗಳು ಹಾಗೂ ಇಂಥವುಗಳೆಲ್ಲ ಉನ್ನತ ಸ್ಥಾನದಲ್ಲಿರುವ ಮೌಲಾನಗಳು ಮುನ್ನೆಡೆಸಿದ ಪ್ರತಭಟನೆಗಳಾಗಿದ್ದವು; ಆ ಜಾಥಾಗಳಲ್ಲಿ ಗಡ್ಡ ಮತ್ತು ಟೋಪಿಗಳೇ ಹೆಚ್ಚಾಗಿ ಕಾಣುತ್ತಿದ್ದವು. ಶರಿಯಾ, ಇಸ್ಲಾಮ್ ಅನ್ನು ರಕ್ಷಿಸುವ ಮತ್ತು ಮುಸ್ಲಿಮ್ ಸಮುದಾಯ ಮಾತ್ರ ಭಾಗವಹಿಸುವ ಪ್ರತಿಭಟನೆಗಳಾಗಿದ್ದವು.

ಈ ಸಲ, ಯಾವಾಗ ಪ್ರಧಾನಿ ನರೇಂದ್ರ ಮೋದಿ ‘ಪ್ರತಿಭಟನಾಕಾರರನ್ನು ಅವರು ಧರಿಸಿದ ಬಟ್ಟೆಗಳಿಂದ ಗುರುತಿಸಬಹುದು’ ಎಂದು ಘೋಷಿಸಿದರೋ ಆ ಸಮಯದಲ್ಲಿಯೇ ಬಟ್ಟೆಗಳಿಂದ ಗುರತಿಸಬಹುದಾದವರಿಗಿಂತ ಗುರುತಿಸಲಾಗದಂಥವರೇ ಎಷ್ಟೋ ಹೆಚ್ಚಿನ ಪಟ್ಟು ಜನರು ಭಾಗವಹಿಸುತ್ತಿದ್ದಾರೆ.

ಈ ಪ್ರತಿಭಟನೆಗಳು ಇಸ್ಲಾಮ್ ಅಥವಾ ಇತರ ಯಾವುದೇ ಧರ್ಮವನ್ನು ರಕ್ಷಿಸಲು ನಡೆಯುತ್ತಿರುವ ಪ್ರತಿಭಟನೆಗಳಾಗದೇ ಭಾರತದ ಸಂವಿದಾನವನ್ನು ರಕ್ಷಿಸುವ ಪ್ರತಿಭಟನೆಗಳಾಗಿವೆ. ಇಲ್ಲಿಯ ಘೋಷಣೆಗಳು ‘ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಭಾರತೀಯ ಸಂವಿಧಾನದ’ ಸುತ್ತ ರಚಿಸಲಾಗಿವೆ. ಇಲ್ಲಿಯ ಪ್ರಮುಖ ಘೋಷಣೆಗಳು ‘ಅಲ್ಲಾಹು ಅಕ್ಬರ್’ ಅಥವಾ ನಾರೇ-ತಕ್ಬೀರ್’ ಆಗಿರದೇ ಭಾರತದ ಸಂವಿಧಾನದ ಪೀಠಿಕೆಯ ಸುತ್ತ ರಚಿಸಿದ ಘೋಷಣೆಗಳಾಗಿವೆ. ಇಲ್ಲಿಯ ಪ್ರಮುಖ ಹಾಡು, ಫೈಝ್ ಅಹ್ಮದ್ ಫೈಝ್ ಅವರು ರಚಿಸಿದ ‘ಹಮ್ ದೇಖೇಂಗೆ’ ಆಗಿದೆ. ಅದನ್ನು ಪಾಕಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಝಿಯಾ ಉಲ್ ಹಕ್ ಹತ್ತಿಕ್ಕುವ ಸಂದರ್ಭದಲ್ಲಿ ರಚಿಸಿದ್ದು. ಇನ್ನೊಂದು ಹೋರಾಟದ ಹಾಡು, ವರುಣ್ ಗ್ರೋವರ್ ರಚಿಸಿದ ‘ತಾನಾಶಾಹ್ ಆಯೆಂಗೆ.. ಹಮ್ ಕಾಗಝ್ ನಹಿಂ ದಿಖಾಯೆಂಗೆ’, ಇದು ಸಿಎಎ-ಎನ್‌ಆರ್‌ಸಿ ವಿರುದ್ಧದ ಅಸಹಕಾರ ಚಳವಳಿಯ ಕರೆಯೂ ಆಗಿದೆ ಹಾಗೂ ಪ್ರಸಕ್ತ ಆಡಳಿತದ ಸರ್ವಾಧಿಕಾರಿ ಸ್ವರೂಪವನ್ನು ಎತ್ತಿಹಿಡಿಯುತ್ತದೆ.

ಮುಸ್ಲಿಮ್ ಮಹಿಳೆಯರಿಗೆ ಇರುವ ಪ್ರಾಥಮಿಕ ಸಮಸ್ಯೆ ತ್ರಿವಳಿ ತಲಾಕ್ ಎಂದು ಬಿಜೆಪಿ ಹೇಳುತ್ತಿರುವಾಗಲೇ ಈ ಆಂದೋಲನವನ್ನು ಮುನ್ನೆಡೆಸುತ್ತಿರುವ ಮಹಿಳೆಯರು ಇಡೀ ಮುಸ್ಲಿಮ್ ಸಮುದಾಯಕ್ಕೆ ಬಂದಿರುವ ಅಪಾಯವೇ ಮುಸ್ಲಿಮರ ಪ್ರಾಥಮಿಕ ಸಮಸ್ಯೆ ಎಂದು ಸ್ಪಷ್ಟಪಡಿಸಿದ್ದಾರೆ. ಬಡತನ ರೇಖೆಯ ಕೆಳಗಿರುವವರು, ವಸತಿಹೀನರು, ಭೂಮಿಯನ್ನು ಹೊಂದಿಲ್ಲದವರು, ಎಲ್ಲಾ ಧಾರ್ಮಿಕ ಗೆರೆಗಳನ್ನು ಮೀರಿ, ಇತರ ಎಲ್ಲಾ ಸಮುದಾಯದವರಿಗೂ ಈಗ ಗೊತ್ತಾಗಿರುವುದೇನೆಂದರೆ, ಕೆವಲ ದಾಖಲೆಗಳು ಇಲ್ಲ ಎನ್ನುವ ಕಾರಣಕ್ಕೆ ಮುಸ್ಲಿಮರ ಪೌರತ್ವವನ್ನು ಪ್ರಶ್ನಿಸಬಹುದಾದರೆ, ಈ ಸರಕಾರವು ಹರಿಬಿಟ್ಟಿರುವ ಈ ಪ್ರಕ್ರಿಯೆಗೆ ತಾವೂ ಬಲಿಯಾಗುವ ದಿನಗಳು ದೂರವಿಲ್ಲ ಎಂಬುದು.

ಸಿಎಎ-ಎನ್‌ಆರ್‌ಸಿ ಗಳೇ ಈ ಆಂದೋಲನಕ್ಕೆ ತಕ್ಷಣಕ್ಕೆ ಕಾರಣವಾದ ಅಂಶಗಳಾದರೂ, ಕಪ್ಪು ಹಣವನ್ನು ವಾಪಸ್ ತರುವ ಆಶ್ವಾಸನೆ, ನೋಟುರದ್ದತಿಯ ಕೆಟ್ಟ ಪರಿಣಾಮ, ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಡಳಿತಾರೂಢ ಪಕ್ಷದ ವಿಭಜನಕಾರಿ ನೀತಿಗಳು ಮತ್ತು ಇನ್ನಿತರ ಭರವಸೆಗಳನ್ನು ಹುಸಿಗೊಳಿಸಿದ ಕಾರಣಕ್ಕೆ ಈ ಆಂದೋಲನವು ಗಟ್ಟಿಯಾಗಿ ನಿಂತಿದೆ. ಶಹೀನ್ ಬಾಗ್ ಕೇವಲ ಒಂದು ಜಾಗವಲ್ಲ ಅದು ವಿಭಜನಕಾರಿ ನೀತಿಗಳ ವಿರುದ್ಧದ ಪ್ರತಿರೋಧದ ಸಂಕೇತ, ಬಡಕಾರ್ಮಿಕರ, ರೈತರ ಮತ್ತು ಸಮಾಜದ ಸಾಮಾನ್ಯ ಜನರ ಬವಣೆಯನ್ನು ಹೆಚ್ಚಿಸುತ್ತಿರುವ ನೀತಿಗಳ ವಿರುದ್ಧ ಎದ್ದುನಿಂತಿರುವ ಸಂಕೇತವಾಗಿದೆ.

ಈಗ ಸ್ಪಷ್ಟವಾಗಿರುವುದೇನೆಂದರೆ, ಗುರುತಿನ ವಿಷಯಗಳು, ರಾಮಮಂದಿರ, ಗೋವು, ಬೀಫ್, ಲವ್ ಜಿಹಾದ್ ಮತ್ತು ಘರ್ ವಾಪಸಿಯಂತಹ ಭಾವನಾತ್ಮಕ ವಿಷಯಗಳು ಸಮಾಜವನ್ನು ಒಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಶಾಹೀನ್ ಬಾಗ್ ಸಮಾಜವನ್ನು ಒಗ್ಗೂಡಿಸಿವ ಕೆಲಸ ಮಾಡುತ್ತಿದೆ. ಜನರೆಲ್ಲರೂ ಭಾರತದ ಸಂವಿಧಾನದ ಪೀಠಿಕೆಯ ಸುತ್ತ ಸೇರಿ, ಜನಗಣಮನವನ್ನು ಹಾಡಿ, ತ್ರಿವರ್ಣ ಧ್ವಜವನ್ನು ಹಾರಿಸಿ ಹಾಗೂ ರಾಷ್ಟ್ರೀಯ ಐಕಾನ್‌ಗಳಾದ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಮೌಲಾನಾ ಅಝಾದ್ ಅವರನ್ನು ಎತ್ತಿಹಿಡಯುವುದರಿಂದ ಸವೆತ ಕಂಡಿದ್ದ ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಬಲತುಂಬಿದಂತಾಗಿದೆ. ಭಾರತವನ್ನು ಕಟ್ಟಿದ ಭಾವನೆಗಳು ಮರಳಿ ಬರುತ್ತಿವೆ; ಭಾರತದ ಸ್ವಾತಂತ್ರ ಸಂಗ್ರಾಮ ಮತ್ತು ಭಾರತೀಯ ಸಂವಿಧಾನವು ನೀಡಿರುವ ಹಕ್ಕುಗಳನ್ನು ರಕ್ಷಿಸಲು ಎದೆಯೊಡ್ಡಿ ನಿಂತಿರುವುದು ಕಂಡುಬರುತ್ತಿದೆ.

ಖಂಡಿತವಾಗಿಯೂ ಕೋಮುವಾದಿ ಶಕ್ತಿಗಳು ಈ ಪ್ರತಿಭಟನೆಗಳಿಗೆ ಮಸಿಬಳಿಯಲು ಪ್ರಯತ್ನಿಸುತ್ತಿವೆ. ಈ ಪ್ರತಿಭಟನೆಗಳು ನಮ್ಮ ಪ್ರಜಾಪ್ರಭುತ್ವದ ಗಟ್ಟಿಯಾದ ಅಡಿಪಾಯವನ್ನು ಎತ್ತಿಹಿಡಿಯುತ್ತಿವೆ. ಈ ಆಂದೋಲನದ ಸ್ವಯಂಪ್ರೇರಣೆ ಮತ್ತು ಸ್ವಾಭಾವಿಕತೆಯೇ ಇದರ ಶಕ್ತಿಯಾಗಿವೆ. ಈ ಶಕ್ತಿಯನ್ನು ಭಾರತದ ಸಂವಿಧಾನವನ್ನು ಮತ್ತು ನಮ್ಮ ದೇಶದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯುವತ್ತ ಮುನ್ನೆಡಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಪ್ಪು ಮಾಡುವವರ ವಿರುದ್ಧ ಪ್ರತಿಭಟಿಸಲು ಇದ್ದರೆ ಅವರಿಗೆ ನಾವು ಮಾಡಿರುವುದು ತಪ್ಪು ಎಂದು ಜ್ಞಾನೋದಯ ವಾಗುವುದು ಆದರೂ ಹೇಗೆ

    ಪ್ರತಿಭಟಿಸುವುದಕ್ಕೆ ಇವರ ಅಪ್ಪಣೆ ತಾಳುವುದು ಎಂದು 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಂಸತ್ತಿನಲ್ಲಿ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ ಇಲ್ಲವೇ

    ಅಧಿಕಾರದ ಮದದಲ್ಲಿ ಬೀಗುತ್ತಿರುವ ಬಿಜೆಪಿಯವರಿಗೆ ಒಂದು ದಿನ ಜನರೇ ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಕಾಲ ಹತ್ತಿರದಲ್ಲಿ ಸಮೀಪಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು
    ಮಾಜಿ ಪ್ರಧಾನಿ ಮನೋಹರ್ ಸಿಂಗ್ ಅವರ ಅವಧಿಯಲ್ಲಿ ಪ್ರತಿಭಟಿಸುವವರು ವಿರುದ್ಧ ಕಾನೂನು ರೂಪಿಸುವ ಕೆಲಸ ಮಾಡುವುದು ದೊಡ್ಡ ಸಾಧನೆಯೇನಲ್ಲ ಎಂಬುದು

    ಅವರಿಗೆ ಜನಸಾಮಾನ್ಯರ ಓರೆಕೋರೆಗಳ ತಿಳಿದು ಸರ್ವಾಧಿಕಾರವನ್ನು ನಡೆಸುವವನು ಅಧಿಕಾರದ ನಾಯಕತ್ವದ ಗುಣಗಳು ಅವರಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ
    ಸಂವಿಧಾನ ರೂಪಿಸಿ ಕೊಟ್ಟಂತಹ ಮಹಾತ್ಮರು ಅವತ್ತಿನ ದಿನವೇ ಈ ರೀತಿಯ ಜಾತಿಗೊಂದು ನೀತಿ ಸೃಷ್ಟಿಸಿದ್ದಾರೆ ಇವರುಗಳಿಗೆ ಉಳಿಗಾಲವೇ ಇರುತ್ತಿರಲಿಲ್ಲ ಎಂದರೆ ತಪ್ಪಾಗಲಾರದು
    ಜೈ ಭೀಮ್ ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...