Homeಕರ್ನಾಟಕಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು 'ಕೈ' ಜಾರಲಿದೆ

ಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು ‘ಕೈ’ ಜಾರಲಿದೆ

- Advertisement -
- Advertisement -

ಶಿವಾಜಿನಗರದ ಉಪಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ರೋಷನ್ ಬೇಗ್ ಪಕ್ಷೇತರ ಅಭ್ಯರ್ಥಿಯಾಗುವ ನಿರ್ಧಾರದಿಂದ ಹಿಂದೆ ಸರಿದಿರೋದ್ರಿಂದ ಕಾಂಗ್ರೆಸ್‍ನ ರಿಜ್ವಾನ್ ಅರ್ಷದ್ ಗೆಲುವು ಸುಲಭವಾಗಿದೆ ಎನ್ನಲಾಗುತ್ತಿದೆ. ಆದರೆ ಕಟ್ಟಾ ಮತ್ತು ನಿರ್ಮಲ್ ಸುರಾನಾರಂತಹ ಟಾಪ್ ಲೆವೆಲ್ ನಾಯಕರನ್ನು ಪಕ್ಕಕ್ಕೆ ಸರಿಸಿ ಮಾಜಿ ಕಾರ್ಪೊರೇಟರ್‍ಗೆ ಬಿಜೆಪಿ ಟಿಕೆಟ್ ನೀಡಿರೋದ್ಯಾಕೆ? ಸ್ವತಃ ರೇವಣ್ಣ ಜೆಡಿಎಸ್ ಸೇರುವಂತೆ ಬಹಿರಂಗ ಆಫರ್ ಕೊಟ್ಟರೂ ರೋಷನ್ ಬೇಗ್ ಮೌನ ವಹಿಸಿದ್ದೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕುತೂಹಲ ಕೆರಳಿಸುತ್ತವೆ.

ಶಿವಾಜಿನಗರದ ಒಟ್ಟು ಏಳು ಬಿಬಿಎಂಪಿ ವಾರ್ಡುಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಕಾರ್ಪೊರೇಟರುಗಳು ಗೆದ್ದಿದ್ದರೆ, ಒಂದು ಬಿಜೆಪಿ ಮತ್ತೊಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಹಲಸೂರು ವಾರ್ಡ್‍ನ ಆ ಪಕ್ಷೇತರ ಅಭ್ಯರ್ಥಿ ಮಮತಾರವರ ಪತಿ ಶರವಣನೇ ಈಗ ಬಿಜೆಪಿಯ ಅಭ್ಯರ್ಥಿ. ಅಂದರೆ ಎರಡು ವಾರ್ಡುಗಳಲ್ಲಷ್ಟೇ ಬಿಜೆಪಿ ಪ್ರಾಬಲ್ಯವಿದೆ ಅಂದಹಾಗಾಯ್ತು. ಮುಸ್ಲಿಂ ಪ್ರಾಬಲ್ಯವಿರುವ, ಕ್ರಿಶ್ಚಿಯನ್ನರ ಒಲವು ನಿರ್ಣಾಯಕವೆನಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಗೆಲುವಿನ ಹಾದಿ ಸಲೀಸು ಎಂಬಂತೆ ಗೋಚರಿಸುತ್ತೆ. ಸಾಲದ್ದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾಕ್ಷೇತ್ರವನ್ನೂ ಒಳಗೊಳ್ಳುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹುರಿಯಾಳಾಗಿದ್ದ ಇದೇ ರಿಜ್ವಾನ್ ಅರ್ಷದ್‍ಗೆ, ಬಿಜೆಪಿಯ ವಿಜೇತ ಅಭ್ಯರ್ಥಿ ಪಿ.ಸಿ.ಮೋಹನ್‍ಗಿಂತ ಸುಮಾರು ಹದಿನೈದು ಸಾವಿರ ಮತಗಳ ಲೀಡ್ ಶಿವಾಜಿನಗರದಿಂದ ಸಿಕ್ಕಿತ್ತು. ಪಿ.ಸಿ.ಮೋಹನ್ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಸಂಸದರಾದರೂ ಬಿಜೆಪಿಗೆ ಇಲ್ಲಿ ಸಿಕ್ಕಿದ್ದು ಕೇವಲ 44,424 ಮತಗಳು ಮಾತ್ರ. ರಿಜ್ವಾನ್‍ಗೆ ಶಿವಾಜಿನಗರದಲ್ಲಿ 59,273 ಮತಗಳು ಲಭಿಸಿದ್ದವು. ಅದೂ, ಅಷ್ಟರಲ್ಲಾಗಲೆ ತನಗೆ ಎಂಪಿ ಟಿಕೆಟ್ ಸಿಗಲಿಲ್ಲವೆಂದು ಸಿಟ್ಟುಗೊಂಡಿದ್ದ ರೋಷನ್ ಬೇಗ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾಗ್ಯೂ ಕಾಂಗ್ರೆಸ್‍ಗೆ ಇಲ್ಲಿ ಮುನ್ನಡೆ ಸಿಕ್ಕಿತ್ತು. ಈ ಅಂಕಿಅಂಶವೂ ಕಾಂಗ್ರೆಸ್‍ನ ಪರವಾಗಿಯೇ ಇದೆ.

ಹಾಗಿರುವಾಗ, ಸರ್ಕಾರದ ಅಳಿವುಉಳಿವು ನಿರ್ಧರಿಸುವ ಈ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿ, ಪ್ರಭಾವಿ ಕಟ್ಟಾ ಮತ್ತು ಸುರಾನಾಗೆ ಟಿಕೇಟ್ ನೀಡದೆ ಹೊಸಮುಖ ಶರವಣಗೆ ಮಣೆ ಹಾಕಿದ್ದೇಕೆ? 1999 ಮತ್ತು 2004ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸತತವಾಗಿ ಇಲ್ಲಿಂದ ಗೆದ್ದು ಶಾಸಕರಾಗಿದ್ದಂತವರು. ಅವರು ಹೆಬ್ಬಾಳದತ್ತ ವಲಸೆ ಹೋದ ಮೇಲೆ ಸುರಾನಾ 2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರೂ ರಾಜ್ಯ ಬಿಜೆಪಿಯೊಳಗೆ ಪ್ರಭಾವಿ ವ್ಯಕ್ತಿ. ಸುರಾನಾ ಯಡ್ಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿರಬಹುದು. ಆದರೆ ಕಟ್ಟಾ ನಾಯ್ಡುಗೆ ಆ ಪ್ರತಿಕೂಲ ವಾತಾವರಣ ಇರಲಿಲ್ಲ. ಹಾಗೆ ನೋಡಿದರೆ ಕಳೆದ 2018ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್ ವಿರುದ್ಧ ಅಖಾಡಕ್ಕಿಳಿದಿದ್ದ ಕಟ್ಟಾ ಭರ್ಜರಿ ಪೈಪೋಟಿಯನ್ನೇ ಕೊಟ್ಟಿದ್ದರು. 2013ರಲ್ಲಿ ಸುರಾನಾ ಸ್ಪರ್ಧಿಸಿದ್ದಾಗ ಕೇವಲ 31.68%ಗೆ ಸೀಮಿತವಾಗಿದ್ದ ಬಿಜೆಪಿ ಮತಗಳಿಕೆಯನ್ನು ಕಟ್ಟಾ ವರ್ಚಸ್ಸು 2018ರಲ್ಲಿ 41.20%ಗೆ ಏರಿಸಿತ್ತು. ಆದಾಗ್ಯೂ ಕಟ್ಟಾಗೆ ಟಿಕೆಟ್ ಕೈತಪ್ಪಿದೆ.

ಇದರ ಹಿಂದೆ ಬಿಜೆಪಿಯ ಒಂದಷ್ಟು ಲೆಕ್ಕಾಚಾರಗಳಿವೆ. ಯಡ್ಯೂರಪ್ಪನವರ ಹಠಕ್ಕೆ ಕಟ್ಟುಬಿದ್ದು ಅನರ್ಹ ಶಾಸಕರಿಗೆಲ್ಲ ಟಿಕೆಟ್ ಖಾತ್ರಿ ಮಾಡಿದಂತೆ, ರೋಷನ್ ಬೇಗ್‍ಗೂ ಅಭಯ ನೀಡಲು ಬಿಜೆಪಿಗೆ ಎರಡು ತೊಡಕುಗಳಿದ್ದವು. ಮೊದಲನೆಯದು ಆತ ಮುಸ್ಲಿಂ ವ್ಯಕ್ತಿ. ಎರಡನೆಯದು, ರೋಷನ್ ಬೇಗ್ ಹೆಸರು ಐಎಂಎ ಬಹುಕೋಟಿ ಹಗರಣದಲ್ಲಿ ತಳುಕು ಹಾಕಿಕೊಂಡದ್ದು. ಧರ್ಮದ ಹೆಸರಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಮನ್ಸೂರ್ ಖಾನ್ ಮುಂಡಾಯಿಸಿದ ಈ ಹಗರಣದಿಂದ ಬಚಾವಾಗುವ ಸಲುವಾಗಿಯೇ ರೋಷನ್ ಬೇಗ್ ರಾಜೀನಾಮೆ ನೀಡಿ ಬಿಜೆಪಿಯತ್ತ ಸರಿದದ್ದು ಎಂಬ ಆಪಾದನೆ ಇದೆ. ಇದೇ ಕಾರಣಕ್ಕೆ ಸಂತ್ರಸ್ತ ಮುಸ್ಲಿಮರ ಸಿಟ್ಟಿಗೂ ಬೇಗ್ ಗುರಿಯಾಗಬೇಕಾಗಿ ಬಂದಿದೆ. ಅವರನ್ನು ಕಣಕ್ಕಿಳಿಸಿದರೂ ಗೆಲ್ಲುವ ಛಾನ್ಸು ತೀರಾ ಕಮ್ಮಿ ಅನ್ನೋದು ಬಿಜೆಪಿಗೆ ಮನದಟ್ಟಾಗಿತ್ತು.

ಶಿವಾಜಿನಗರ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಅನ್ನೋದು ಎಷ್ಟು ಸತ್ಯವೋ, ಇಲ್ಲಿ ತಮಿಳಿಗರ ಮತಗಳೂ ಗಣನೀಯ ಸಂಖ್ಯೆಯಲ್ಲಿವೆ ಅನ್ನೋದೂ ಅಷ್ಟೇ ಸತ್ಯ. ಶಿವಾಜಿನಗರ, ಭಾರತಿನಗರ, ರಾಮಸ್ವಾಮಿ ಪಾಳ್ಯ, ಹಲಸೂರು, ಸಂಪಂಗಿರಾಮನಗರದಲ್ಲಿ ತಮಿಳರ ಮತಗಳೂ ಸಾಕಷ್ಟಿವೆ. ರೋಷನ್ ಬೇಗ್ ಗೆದ್ದು ಬರುತ್ತಿದ್ದುದು ಮುಸ್ಲಿಂ ಮತಗಳ ಜೊತೆಗೆ ತಮಿಳು ಮತಗಳೂ ಸೇರಿಕೊಳ್ಳುತ್ತಿದ್ದುದರಿಂದ. ಕಟ್ಟಾ ಕ್ಷೇತ್ರ ತೊರೆದ ನಂತರ ಅವೂ ಒಂದು ರೀತಿಯಲ್ಲಿ ಕಾಂಗ್ರೆಸ್‍ನ ಪಾರಂಪರಿಕ ಮತಗಳಂತಾಗಿವೆ. ಅವುಗಳನ್ನು ಕಾಂಗ್ರೆಸ್‍ನಿಂದ ವಿಮುಖಗೊಳಿಸದ ಹೊರತು ಇಲ್ಲಿ ಗೆಲ್ಲೋದು ಕಷ್ಟ ಅನ್ನೋದನ್ನು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಫಲಿತಾಂಶಗಳು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದವು. ಆರೆಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡ ಕೋಮು ಧ್ರುವೀಕರಣ ಸೃಷ್ಟಿಸಿದರೂ 2018ರಲ್ಲಿ ಬಿಜೆಪಿ ಗೆಲ್ಲಲಾಗದಿದ್ದಕ್ಕೆ ತಮಿಳು ಮತಗಳು ಕಾಂಗ್ರೆಸ್‍ಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇ ಕಾರಣ. ಆ ತಮಿಳು ಓಟುಗಳ ಮೇಲೆ ಕಣ್ಣಿಟ್ಟೇ ತಮಿಳಿಗ ಎಂ.ಶರವಣನನ್ನು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದೆ.

ಜೆಡಿಎಸ್ ಕೂಡಾ ಮುಸ್ಲಿಂ ಅಭ್ಯರ್ಥಿ ತನ್ವೀರ್ ಅಹ್ಮದ್‍ರನ್ನು ಕಣಕ್ಕಿಳಿಸಿರೋದ್ರಿಂದ ಮುಸ್ಲಿಂ ಮತಗಳು ಸಹಜವಾಗಿಯೇ ಛಿದ್ರವಾಗುತ್ತವೆ. ಐಎಂಎ ವಂಚನೆಯ ಕಾರಣಕ್ಕೆ ಒಂದಷ್ಟು ಮುಸ್ಲಿಮರು ಬೇಗ್ ಜೊತೆಗೆ ಇಡಿಯಾಗಿ ಕಾಂಗ್ರೆಸಿನ ವಿರುದ್ಧವೂ ಸಿಟ್ಟಾಗಿದ್ದಾರೆ. ಅವರು ಜೆಡಿಎಸ್‍ಗೆ ಮತ ಹಾಕಬಹುದು. ಆಗ ಸಹಜವಾಗಿಯೇ ಕಾಂಗ್ರೆಸಿನ ಮತಗಳಿಕೆ ಕುಸಿಯುತ್ತೆ. ಇಪ್ಪತ್ತೈದರಿಂದ ಮೂವತ್ತು ಸಾವಿರಗಳಷ್ಟಿರುವ ತಮ್ಮ ಸಾಂಪ್ರದಾಯಿಕ ಬಿಜೆಪಿ ಮತಗಳ ಜೊತೆಗೆ ತಮಿಳು ಮತಗಳು ಒಲಿದರೆ ಗೆಲುವು ಗ್ಯಾರಂಟಿ ಅನ್ನೋದು ಬಿಜೆಪಿಯ ಲೆಕ್ಕಾಚಾರ.
ಒಂದು ಮೂಲದ ಪ್ರಕಾರ, ಯಡ್ಯೂರಪ್ಪನ ಮೂಲಕ ಟಿಕೆಟು ಪಡೆಯಲು ಕೊನೇವರೆಗೂ ಯತ್ನಿಸಿದ ರೋಷನ್ ಬೇಗ್, ತನಗೆ ಸಿಗದಿದ್ದರು ತನ್ನ ಪ್ರತಿಸ್ಪರ್ಧಿಗಳಾದ ಕಟ್ಟಾ ಅಥವಾ ಸುರಾನಾ ಪಾಲಾಗಲಿದ್ದ ಟಿಕೆಟ್ ತಪ್ಪಿಸಲು, ತನ್ನ ಆಪ್ತ ಶರವಣ್‍ಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ ಹಲಸೂರು ವಾರ್ಡ್‍ನಿಂದ ತನ್ನ ಹೆಂಡತಿಗೆ ಶರವಣ ಬಿಜೆಪಿ ಟಿಕೇಟ್ ಕೇಳಿದ್ದರು. ಆದರೆ ಬಿಜೆಪಿ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಇದರಿಂದ ಸಿಟ್ಟಿಗೆದ್ದ ಶರವಣ ಮಡದಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ಈ ಅವಧಿಯಲ್ಲಿ ಬಿಜೆಪಿ ಜೊತೆ ಕೊಂಚ ಮುನಿಸಿಕೊಂಡಿದ್ದ ಶರವಣ, ಬೇಗ್ ಜೊತೆ ಒಡನಾಟ ಸಾಧಿಸಿಕೊಂಡದ್ದು ದಿಟ.

ಟಿಕೇಟ್, ಶಾಸಕ ಸ್ಥಾನ, ಮಂತ್ರಿಗಿರಿಗಿಂತ ಹೆಚ್ಚಾಗಿ ಐಎಂಎ ಕುಣಿಕೆಯಿಂದ ತನ್ನ ತಲೆ ಉಳಿದರೆ ಸಾಕು ಎಂಬಂತಿರುವ ರೋಷನ್‍ಗೆ ಮೊದಲಿಂದಲೂ ರಿಜ್ವಾನ್ ಕಂಡರೆ ಅಷ್ಟಕ್ಕಷ್ಟೇ. ಮುಂದೊಂದು ದಿನ ತನ್ನ ಮುಸ್ಲಿಂ ಲೀಡರಿಕೆಗೆ ಈ ಹುಡುಗ ಕಂಟಕವಾಗುತ್ತಾನೆಂಬ ಅಳುಕು ಬೇಗ್‍ರದ್ದು. ಹಾಗಾಗಿ ಅಭ್ಯರ್ಥಿಯಾಗದೆ ಹೋದರು ಬೇಗ್, ಬಿಜೆಪಿಯ ಶರವಣಗೆ ನೆರವಾಗುವ ಸಾಧ್ಯತೆ ದಟ್ಟವಾಗಿದೆ. ನಾಮಪತ್ರ ಸಲ್ಲಿಕೆಯ ನಂತರ ಬೇಗ್ ಹೋಗಿ ಯಡ್ಯೂರಪ್ಪರನ್ನು ಭೇಟಿಯಾಗಿ ಬಂದಿರೋದೆ ಇದಕ್ಕೆ ಸಾಕ್ಷಿ. ಗುಪ್ತವಾಗಿ ಬಿಜೆಪಿ ಪರ ಕೆಲಸ ಮಾಡುವುದಕ್ಕೆಂದೇ ಜೆಡಿಎಸ್ ಸ್ಪರ್ಧಿಸುವ ಆಫರ್ ಕೊಟ್ಟರೂ ರೋಷನ್ ಬೇಗ್ ಗಪ್‍ಚುಪ್ ಆದರಾ……?

ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟಿನಂತೆ ಕಾಣುವ ಬಿಜೆಪಿಯ ಶರವಣ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸಿ ಕಾಂಗ್ರೆಸ್ ಮೈಮರೆಯದಿದ್ದರೆ ರಿಜ್ವಾನ್ ಇಲ್ಲಿ ಗೆಲುವಿನ ನಗೆ ಬೀರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...