ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಮತ್ತು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವರ್ಣ ವ್ಯವಸ್ಥೆ ಮತ್ತು ಜಾತಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಸಾಮಾಜಿಕ ಕಾರ್ಯಕರ್ತೆ ಡಾ. ಮೀನಾ ಕಂದಸಾಮಿ ಪೆರಿಯಾರ್ ಹೇಳಿಕೆಯನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
“100 ವರ್ಷಗಳ ಹಿಂದೆ ಇ.ವಿ.ರಾಮಸಾಮಿ ಪೆರಿಯಾರ್ ಅವರು ಮನುಸ್ಮೃತಿ ಮತ್ತು ಜಾತಿ ಪದ್ಧತಿಯಡಿಯಲ್ಲಿ ಶೂದ್ರ ಪದದ ವಿವರಣೆಯನ್ನು ಉಲ್ಲೇಖಿಸಿ ಶೂದ್ರ ಎಂದು ಸಂಬೋಧಿಸುವುದನ್ನು ಆಕ್ಷೇಪಿಸಿದ್ದರು” ಎಂದು ವಿದ್ವಾಂಸರು ಮತ್ತು ಯುವ ಕವಿಯಾದ ಮೀನಾ ಕಂದಸಾಮಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಶೂದ್ರರಿಗೆ ಜ್ಞಾನವಿಲ್ಲ, ಹಾಗಾಗಿಯೇ ತಾವು ಶೂದ್ರರು ಎಂದು ಒಪ್ಪಿಕೊಳ್ಳುವುದಿಲ್ಲ: ಪ್ರಗ್ಯಾ ಠಾಕೂರ್
Pragya versus Periyar.
Speaking a 100 years ago he took objection to being called Shudra, explaining what it meant under the Manusmriti and caste system. Of course, Brahmins don't take offence because everything about that word denotes power, knowledge, holiness and entitlement. pic.twitter.com/3dghtDcAEm
— dr. meena kandasamy || இளவேனில் (@meenakandasamy) December 14, 2020
“ಬ್ರಾಹ್ಮಣರನ್ನು ಬ್ರಾಹ್ಮಣರು ಎಂದು ಕರೆದರೆ, ಅವರು ತಪ್ಪಾಗಿ ಗ್ರಹಿಸುವುದಿಲ್ಲ. ಏಕೆಂದರೆ ಈ ಪದ ಅಧಿಕಾರ, ಜ್ಞಾನ, ಪಾವಿತ್ರ್ಯತೆ ಮತ್ತು ಅರ್ಹತೆಯನ್ನು ಸೂಚಿಸುತ್ತದೆ” ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರೇ, ಭೂಸುಧಾರಣಾ ಕಾಯ್ದೆಗೆ ಸಹಿ ಹಾಕಬೇಡಿ: ಟ್ವಿಟ್ಟರ್ ದಾಳಿಗೆ ಸಿದ್ದತೆ!
ಪೆರಿಯಾರ್ ಹೇಳಿಕೆಯಿರುವ ಚಿತ್ರವನ್ನು ಹಂಚಿಕೊಂಡಿರುವ ಮೀನಾ, “ನಮ್ಮನ್ನು ಸಂಬೋಧಿಸುವ ಹೆಸರು ಶೂದ್ರ, ನಮ್ಮನ್ನು ಹುಟ್ಟಿನಿಂದಲೇ ಅವಮಾನಕ್ಕೆ ಗುರಿ ಮಾಡುತ್ತದೆ. ಹುಟ್ಟುತ್ತಲೇ ಗುಲಾಮ ಎಂದು ಗುರುತಿಸಲಾಗುತ್ತದೆ. ಶೂದ್ರ ಎಂದರೆ ವೇಶ್ಯೆಯ ಮಗ.. ಇತ್ಯಾದಿ…” ಎಂದು ಬರೆಯಲಾಗಿದೆ.
“ಪ್ರಗ್ಯಾ ಠಾಕೂರ್ ಮತ್ತು ಇತರೆ ಹಿಂದುತ್ವವಾದಿಗಳು ಹಾಗೂ ಸನಾತನವಾದಿಗಳಿಗೆ ಈ ಪದಗಳ ಬಳಕೆ ಏನನ್ನು ಸೂಚಿಸುತ್ತದೆ ಎಂದು ತಿಳಿದಿಲ್ಲ. ಈ ಪದಗಳು ಅಥವಾ ಇಂತಹ ಉಲ್ಲೇಖಗಳು ಎಷ್ಟು ತೀವ್ರವಾಗಿ ನೋಯಿಸುತ್ತದೆ ಎಂಬುದೂ ಅವರಿಗೆ ತಿಳಿದಿಲ್ಲ. ಇದಕ್ಕೆ ತದ್ವಿರುದ್ದವಾಗಿ ಜಾತಿ ಮತ್ತು ವರ್ಣಾಶ್ರಮವನ್ನು ರಕ್ಷಿಸಿ ಅವುಗಳನ್ನು ಸಾರ್ವತ್ರಿಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹೋರಾಟ ತೀವ್ರಗೊಳಿಸಲು ಉಪವಾಸ ಸತ್ಯಾಗ್ರಹ ಆರಂಭಿಸಿದ ರೈತ ಮುಖಂಡರು: 10 ಅಂಶಗಳು
ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಶನಿವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಮಧ್ಯಪ್ರದೇಶದ ಸೆಹೋರ್ನಲ್ಲಿ ನಡೆದ ಸಭೆಯನ್ನುದ್ದೇಶಿಸಿ, “ಶೂದ್ರರನ್ನು ಶೂದ್ರರು ಎಂದು ಕರೆದರೆ ಅವರು ಒಪ್ಪುವುದಿಲ್ಲ, ಯಾಕೆಂದರೆ ಅವರಿಗೆ ಜ್ಞಾನವಿಲ್ಲ” ಎಂದು ಹೇಳಿದ್ದರು.
ಭಾರತದಲ್ಲಿನ ವರ್ಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, “ಸಾಮಾಜಿಕ ರಚನೆಗಾಗಿ ನಮ್ಮ ಸಮಾಜವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಕ್ಷತ್ರಿಯರನ್ನು ಕ್ಷತ್ರಿಯರು ಎಂದು ಕರೆದರೆ, ಅವರು ಅದನ್ನು ತಪ್ಪೆಂದು ಪರಿಗಣಿಸುವುದಿಲ್ಲ. ಒಬ್ಬ ಬ್ರಾಹ್ಮಣನನ್ನು ಬ್ರಾಹ್ಮಣ ಎಂದು ಕರೆದರೆ ತಪ್ಪೆಂದು ಪರಿಗಣಿಸುವುದಿಲ್ಲ. ವೈಶ್ಯನನ್ನು ವೈಶ್ಯ ಎಂದರೆ, ಅವನೂ ಅದನ್ನು ಅನ್ಯತಾ ಭಾವಿಸುವುದಿಲ್ಲ. ಆದರೆ ಶೂದ್ರರನ್ನು ಶೂದ್ರರನ್ನು ಶೂದ್ರರು ಎಂದು ಕರೆದರೆ, ಅವರು ಅದನ್ನು ಒಪ್ಪುವುದಿಲ್ಲ, ಯಾಕೆಂದರೆ ಅವರಿಗೆ ಜ್ಞಾನವಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕದ ಸುಮಾರು 50% ರಷ್ಟು ಯುವತಿಯರಿಗೆ ರಕ್ತಹೀನತೆ- NFHS ವರದಿ
ಪ್ರಗ್ಯಾ ಸಿಂಗ್ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನವೆಂಬರ್ನಲ್ಲಿ ಮಹಾತ್ಮ ಗಾಂಧಿಯ ಹಂತಕ ನಾಥೂರಾಂ ಗೂಡ್ಸೆಯನ್ನು ದೇಶ ಭಕ್ತ ಎಂದು ಕರೆದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ದಿವಂಗತ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕಾರ್ಕರೆ ಅವರನ್ನು ತಾನು ಶಪಿಸಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಪ್ರಗ್ಯಾ ಸಿಂಗ್ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿ ವಿವಾದಕ್ಕೆ ಗುರಿಯಾಗಿದ್ದರು.
ಇದನ್ನೂ ಓದಿ: ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್-620, ಬಿಜೆಪಿ-548 ಸ್ಥಾನಗಳಲ್ಲಿ ಗೆಲುವು