Homeಕರ್ನಾಟಕಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

- Advertisement -
- Advertisement -

“ನೀನು ಯಾವನಯ್ಯಾ ನಾನ್‌ವೆಜ್‌ ತಿನ್ನಲ್ವೇನಯ್ಯ? ನಾನು ಏನು ತಿಂದೆ ಅಂತ ಕೇಳಲು ನೀನ್ಯಾವನು?” ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತನೊಬ್ಬನಿಗೆ ತರಾಟೆ ತೆಗೆದುಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ‘ಬಾಡಿನ ಘಮಲು’ ಜೋರಾಗಿದೆ.

‘ಬಾಡು ತಿಂದ ಬಳಿಕ ದೇವಾಸ್ಥಾನಕ್ಕೆ ಸಿದ್ದರಾಮಯ್ಯ ಹೋಗಿದ್ದಾರೆ’ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯನವರ ಆಹಾರ ಹಕ್ಕನ್ನು ಕೆಣಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಂಸಾಹಾರ ಕೇಂದ್ರಿತ ಶೂದ್ರ, ದಲಿತ ಸಂಸ್ಕೃತಿಯ ಕುರಿತು ಜನರೇ ಈಗ ಬಿಜೆಪಿಗೆ ಪಾಠ ಹೇಳುತ್ತಿದ್ದಾರೆ.

‘ನಮ್ಮ ಆಹಾರ ನಮ್ಮ ಹಕ್ಕು. ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಕೇಳಲು ನೀವ್ಯಾರು?’ ಎಂಬ ಪ್ರಶ್ನೆ ಬಿರುಸು ಪಡೆದಿದೆ. ‘ಬಾಡೇ ನಮ್‌ ಗಾಡು’ ಅಭಿಯಾನದ ಎರಡನೇ ಆವೃತ್ತಿಯೂ ಚಾಲನೆ ಪಡೆದಿದೆ.

ಹಂಸಲೇಖ ಅವರು ಮಾಂಸಾಹಾರದ ಕುರಿತು ಮಾತನಾಡಿದ್ದ ಸಂದರ್ಭದಲ್ಲಿ ಮಾಂಸಾಹಾರಿಗಳ ಕುರಿತು ಕೆಲವರು ಕುಹಕವಾಡಿದ್ದರು. ಇದರಿಂದ ಸಿಟ್ಟಿಗೆದ್ದ ಬಹುಸಂಖ್ಯಾತ ಮಾಂಸಪ್ರಿಯರು, ‘ಬಾಡೇ ನಮ್‌ ಗಾಡು’ ಅಭಿಯಾನವನ್ನು ಆರಂಭಿಸಿ, ಯಶಸ್ವಿಯಾಗಿದ್ದರು. ಸಿದ್ದರಾಮಯ್ಯನವರು ತಮ್ಮ ಆಹಾರ ಸಂಸ್ಕೃತಿ ಹಾಗೂ ಹಕ್ಕನ್ನು ಪ್ರತಿಪಾದಿಸಿದ ಬಳಿಕ ಮತ್ತೊಮ್ಮೆ ‘ಬಾಡೇ ನಮ್‌ ಗಾಡು’ ಎಂದು ಜನರು ಹೇಳತೊಡಗಿದ್ದಾರೆ.

“ನಾಳೆಯಿಂದ ಬರುವ ಅಮಾವಾಸ್ಯೆವರೆಗೂ #ಬಾಡೇ_ನಮ್_ಗಾಡು ಬೃಹತ್ ಅಭಿಯಾನ. ಈ Hashtag ಬಳಸಿ ಬಾಡೂಟದ ಫೋಟೋ ಪೋಸ್ಟ್ ಮಾಡಬೇಕು. ಬಾಡು ತಿನ್ನದದವರಿಗೂ ನೋಡೋಕೆ ಮುಕ್ತ ಅವಕಾಶವಿದೆ. ಶ್ರಾವಣ, ಸೋಮವಾರ, ಶುಕ್ರವಾರ ಅಂತ ಕಥೆ ಹೊಡೆಯೋ ದಲಿತ ಮತ್ತು ಶೂದ್ರ $#%% ಕ್ಕೆ ಪ್ರವೇಶ ನಿಷಿದ್ಧ. ಇನ್ನುಳಿದಂತೆ ಸರ್ವರಿಗೂ ಮುಕ್ತ ಪ್ರವೇಶ. ಪ್ರಕಟಣೆ : ಅಖಿಲ ಕರ್ನಾಟಕ ಬಾಡು ಪ್ರಿಯ ಸಂಘ” ಎಂಬ ಸಂದೇಶ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಕೆಲವು ಪ್ರತಿಕ್ರಿಯೆಗಳ ಝಲಕ್‌ ಹೀಗಿದೆ:

ರಾಜ್ಯ ಸರ್ಕಾರ ತಕ್ಷಣ ಒಂದು ಆದೇಶ ಹೊರಡಿಸಿ ಎಲ್ಲ ದೇವಸ್ಥಾನಗಳ ಮುಂದೆ ಅಲ್ಲಿಗೆ ಭೇಟಿ ನೀಡುವ ಭಕ್ತರ ಹೊಟ್ಟೆಯಲ್ಲಿ ಏನಿದೆ ಎಂದು ಪರೀಕ್ಷೆ ಮಾಡಲು ಸ್ಕಾನಿಂಗ್ ಮೆಷಿನ್ ಅಳವಡಿಸುವುದನ್ನು ಕಡ್ಡಾಯಗೊಳಿಸ ಬೇಕು.

– ದಿನೇಶ್ ಅಮೀನ್‌ ಮಟ್ಟು

***

ಮಾಂಸಾಹಾರದ ಕುರಿತಾದ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ- ಇದೊಂದು ‘ಪುಷ್ಕಳ’ ಕಂ ಸಮೃದ್ಧ ದ್ರಾವಿಡ ಸಂಸ್ಕೃತಿ. ಮಾಂಸದೂಟದ ಜತೆಗಿನ ಸುಂದರ ನೆನಪುಗಳನ್ನು ಚಿತ್ರ ಬರೆಹಗಳ ಮೂಲಕ ಆದಷ್ಟೂ ದಾಖಲಿಸಿ. ಇಲ್ಲಿ ಯಾವ ಸಂಪಾದಕನೂ ಇಲ್ಲ. ನಿಮ್ಮ ಗೋಡೆ ನಿಮ್ಮಿಷ್ಟ. ನಡೀರಿ. ಇದೊಂದು ಆಂದೋಲನವಾಗಲಿ.

– ದಿನೇಶ್ ಕುಕ್ಕುಜಡ್ಕ

*****

****

ದೇವಸ್ಥಾನಕ್ಕೆ ಹೋಗುವ ಮುನ್ನ ಮಾತ್ರೆ ತೆಗೆದುಕೊಂಡೋ, ಇನ್ಯಾವುದೋ ರೀತಿಯಲ್ಲಿಯೋ ಜಠರ, ಕರುಳು ಸಂಪೂರ್ಣ ಖಾಲಿ ಮಾಡಿ, ಸೋಪು ಸರ್ಫು ಹಾಕಿ ತೊಳೆದು ಹೊಟ್ಟೆಯೊಳಗೆ ಏನೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಹೋಗಬೇಕಾಗಿ ವಿನಂತಿ. ಹಾಗೆಯೇ ಹೋದುದು ಕನ್ನಡ ಸುದ್ದಿವಾಹಿನಿಗಳಿಗೆ ಗೊತ್ತಾದರೆ ಕಷ್ಟ.

– ಶ್ರೀನಿವಾಸ ಕಾರ್ಕಳ

****

2016- ದನದ ಮಾಂಸ ತಿಂದ ಎಂದು ಬಡಿದು ಕೊಂದರು ಸೈಯದ್ ಅಕ್ಲಾಕ್‌‌ನನ್ನು. 2022- ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದರೆಂದು ದಾಳಿ ನಡೆಸಿದರು ಸಿದ್ದರಾಮಯ್ಯ ಮೇಲೆ. ಬಿಜೆಪಿಯ ಈ ಕ್ರೊನಾಲಜಿ ಗಮನಿಸಿ. ನಿನ್ನೆ ಅಕ್ಲಾಕ್, ಇವತ್ತು ಸಿದ್ದರಾಮಯ್ಯ, ನಾಳೆ ನೀವು, ನೀವು. #ನಮ್ಮ_ಆಹಾರ_ನಮ್ಮ_ಹಕ್ಕು #ಕ್ರೊನಾಲಜಿ_ಸಂಝೇ #bjp_is_sick #my_food_my_right

-ಶಶಿ ಸಂಪಳ್ಳಿ

***

ಏಯ್, ನೀ ಯಾವನಯ್ಯಾ ಕೇಳಾಕೆ? ಆಹಾರ ಅವರವರ ಹಕ್ಕು. ಬಾಡು ನಮ್ಮ ಗಾಡು. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂದು ಕೇಳೋಕೆ ನೀನು ಯಾವನಯ್ಯ.

– ಹನುಮೇಶ್‌ ಗುಂಡೂರು

***

ಮಾಂಸ ತಿನ್ನುವವರು
ಇವಿಎಂನಲ್ಲಿ
ಕಮಲದ ಮೇಲೆ
ಬೆರಳಿಡಬೇಡಿ,
ಮಡಿ ಕೆಟ್ಟು ಮೈಲಿಗೆಯಾದೀತು.

– ಡಾ.ಶ್ರೀನಿವಾಸ ಕಕ್ಕಿಲ್ಲಾಯ

***

ಮಾಂಸಾಹಾರ ತಿಂದವರು ದೇವಸ್ಥಾನಕ್ಕೆ ಬರಬಾರದೆಂದು ಯಾವ ದೇವರು ಬಂದು ಹೇಳಿದ್ದು ಅಂತ ಯಾರಾದರೂ ದಾಖಲೆ ಸಮೇತ ಹೇಳಿದರೆ ಒಳ್ಳೆಯದು. ಯಾಕಂದ್ರೆ ನಮ್ಮ ಮಾರಮ್ಮನಿಗೆ ನಾವು ಕುರಿ‌ ಕಡಿದೇ ಹಬ್ಬ ಮಾಡೋದು.‌ ಹಾಗಾದ್ರೆ ಮಾರಮ್ಮ ದೇವರಲ್ಲವೇ?

– ದೇಶಾದ್ರಿ ಹೊಸಮನೆ

***

ನಾನು ಮಾಂಸಹಾರಿ. ಮಾಂಸ ತಿನ್ನುತ್ತೇನೆ. ಇದು ನನ್ನ ಆಹಾರದ ಆಯ್ಕೆ ಮತ್ತು ಹಕ್ಕು.
ನೀನ್ಯಾವನಯ್ಯ ಕೇಳುವುದಕ್ಕೆ. #isupportsiddaramaiah

– ಶ್ರೀಪಾದ ಭಟ್‌

***

#ಬಾಡೇ_ನಮ್_ಗಾಡು

ಸುಮ್ನೆ ಮಾತಾಡೋದೇನು ಅಂತ ಬರುವಾಗ ಕೆ.ಎಂ.ದೊಡ್ಡೀಲಿ ಎರಡೂವರೆ ಕೆ.ಜಿ. ಹಂದಿ ಬಾಡು ತಂದು ಮೆಣಸುಪ್ಪಿನ ಕರಿ ಮಾಡಿ ಹೊಟ್ಟೆ ತುಂಬಾ ತಿಂದೊ. ನಾಳೆಗೂ ಇದೆ. ತಿಂಡಿಗೇ ಬನ್ನಿ.

– ಕೃಷ್ಣೇಗೌಡ ಟಿ.ಲಿಂಗಯ್ಯ

***

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಬಾಡು ಹಾಕು
ಐದು ಆರು
ಕೋಳಿ ಸಾರು
ಏಳು ಎಂಟು
ಮೀನು ಉಂಟು
ಒಂಬತ್ತು ಹತ್ತು
ಬಲು ರುಚಿ ಇತ್ತು
ಒಂದರಿಂದ ಹತ್ತು ಹೀಗಿತ್ತು
ಬಾಡಿನ ಗತ್ತು ಮುಗಿದಿತ್ತು.
( ಮೂಲ ಕವಿಗಳ ಕ್ಷಮೆ ಕೋರಿ)

– ಪುರುಷೋತ್ತಮ ಬಿಳಿಮಲೆ

****

***

***

ಹೀಗೆ ಸೋಷಿಯಲ್ ಮೀಡಿಯಾಗಳ ತುಂಬಾ ಬಾಡಿನ ಘಮಲು ಹೆಚ್ಚಾಗಿದೆ. ಮಾಂಸ ತಿನ್ನುವವರನ್ನು ಹಂಗಿಸುವ ಬಿಜೆಪಿಯವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...