Homeಕರ್ನಾಟಕಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

- Advertisement -
- Advertisement -

“ನೀನು ಯಾವನಯ್ಯಾ ನಾನ್‌ವೆಜ್‌ ತಿನ್ನಲ್ವೇನಯ್ಯ? ನಾನು ಏನು ತಿಂದೆ ಅಂತ ಕೇಳಲು ನೀನ್ಯಾವನು?” ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತನೊಬ್ಬನಿಗೆ ತರಾಟೆ ತೆಗೆದುಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ‘ಬಾಡಿನ ಘಮಲು’ ಜೋರಾಗಿದೆ.

‘ಬಾಡು ತಿಂದ ಬಳಿಕ ದೇವಾಸ್ಥಾನಕ್ಕೆ ಸಿದ್ದರಾಮಯ್ಯ ಹೋಗಿದ್ದಾರೆ’ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯನವರ ಆಹಾರ ಹಕ್ಕನ್ನು ಕೆಣಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಂಸಾಹಾರ ಕೇಂದ್ರಿತ ಶೂದ್ರ, ದಲಿತ ಸಂಸ್ಕೃತಿಯ ಕುರಿತು ಜನರೇ ಈಗ ಬಿಜೆಪಿಗೆ ಪಾಠ ಹೇಳುತ್ತಿದ್ದಾರೆ.

‘ನಮ್ಮ ಆಹಾರ ನಮ್ಮ ಹಕ್ಕು. ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಕೇಳಲು ನೀವ್ಯಾರು?’ ಎಂಬ ಪ್ರಶ್ನೆ ಬಿರುಸು ಪಡೆದಿದೆ. ‘ಬಾಡೇ ನಮ್‌ ಗಾಡು’ ಅಭಿಯಾನದ ಎರಡನೇ ಆವೃತ್ತಿಯೂ ಚಾಲನೆ ಪಡೆದಿದೆ.

ಹಂಸಲೇಖ ಅವರು ಮಾಂಸಾಹಾರದ ಕುರಿತು ಮಾತನಾಡಿದ್ದ ಸಂದರ್ಭದಲ್ಲಿ ಮಾಂಸಾಹಾರಿಗಳ ಕುರಿತು ಕೆಲವರು ಕುಹಕವಾಡಿದ್ದರು. ಇದರಿಂದ ಸಿಟ್ಟಿಗೆದ್ದ ಬಹುಸಂಖ್ಯಾತ ಮಾಂಸಪ್ರಿಯರು, ‘ಬಾಡೇ ನಮ್‌ ಗಾಡು’ ಅಭಿಯಾನವನ್ನು ಆರಂಭಿಸಿ, ಯಶಸ್ವಿಯಾಗಿದ್ದರು. ಸಿದ್ದರಾಮಯ್ಯನವರು ತಮ್ಮ ಆಹಾರ ಸಂಸ್ಕೃತಿ ಹಾಗೂ ಹಕ್ಕನ್ನು ಪ್ರತಿಪಾದಿಸಿದ ಬಳಿಕ ಮತ್ತೊಮ್ಮೆ ‘ಬಾಡೇ ನಮ್‌ ಗಾಡು’ ಎಂದು ಜನರು ಹೇಳತೊಡಗಿದ್ದಾರೆ.

“ನಾಳೆಯಿಂದ ಬರುವ ಅಮಾವಾಸ್ಯೆವರೆಗೂ #ಬಾಡೇ_ನಮ್_ಗಾಡು ಬೃಹತ್ ಅಭಿಯಾನ. ಈ Hashtag ಬಳಸಿ ಬಾಡೂಟದ ಫೋಟೋ ಪೋಸ್ಟ್ ಮಾಡಬೇಕು. ಬಾಡು ತಿನ್ನದದವರಿಗೂ ನೋಡೋಕೆ ಮುಕ್ತ ಅವಕಾಶವಿದೆ. ಶ್ರಾವಣ, ಸೋಮವಾರ, ಶುಕ್ರವಾರ ಅಂತ ಕಥೆ ಹೊಡೆಯೋ ದಲಿತ ಮತ್ತು ಶೂದ್ರ $#%% ಕ್ಕೆ ಪ್ರವೇಶ ನಿಷಿದ್ಧ. ಇನ್ನುಳಿದಂತೆ ಸರ್ವರಿಗೂ ಮುಕ್ತ ಪ್ರವೇಶ. ಪ್ರಕಟಣೆ : ಅಖಿಲ ಕರ್ನಾಟಕ ಬಾಡು ಪ್ರಿಯ ಸಂಘ” ಎಂಬ ಸಂದೇಶ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಕೆಲವು ಪ್ರತಿಕ್ರಿಯೆಗಳ ಝಲಕ್‌ ಹೀಗಿದೆ:

ರಾಜ್ಯ ಸರ್ಕಾರ ತಕ್ಷಣ ಒಂದು ಆದೇಶ ಹೊರಡಿಸಿ ಎಲ್ಲ ದೇವಸ್ಥಾನಗಳ ಮುಂದೆ ಅಲ್ಲಿಗೆ ಭೇಟಿ ನೀಡುವ ಭಕ್ತರ ಹೊಟ್ಟೆಯಲ್ಲಿ ಏನಿದೆ ಎಂದು ಪರೀಕ್ಷೆ ಮಾಡಲು ಸ್ಕಾನಿಂಗ್ ಮೆಷಿನ್ ಅಳವಡಿಸುವುದನ್ನು ಕಡ್ಡಾಯಗೊಳಿಸ ಬೇಕು.

– ದಿನೇಶ್ ಅಮೀನ್‌ ಮಟ್ಟು

***

ಮಾಂಸಾಹಾರದ ಕುರಿತಾದ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ- ಇದೊಂದು ‘ಪುಷ್ಕಳ’ ಕಂ ಸಮೃದ್ಧ ದ್ರಾವಿಡ ಸಂಸ್ಕೃತಿ. ಮಾಂಸದೂಟದ ಜತೆಗಿನ ಸುಂದರ ನೆನಪುಗಳನ್ನು ಚಿತ್ರ ಬರೆಹಗಳ ಮೂಲಕ ಆದಷ್ಟೂ ದಾಖಲಿಸಿ. ಇಲ್ಲಿ ಯಾವ ಸಂಪಾದಕನೂ ಇಲ್ಲ. ನಿಮ್ಮ ಗೋಡೆ ನಿಮ್ಮಿಷ್ಟ. ನಡೀರಿ. ಇದೊಂದು ಆಂದೋಲನವಾಗಲಿ.

– ದಿನೇಶ್ ಕುಕ್ಕುಜಡ್ಕ

*****

****

ದೇವಸ್ಥಾನಕ್ಕೆ ಹೋಗುವ ಮುನ್ನ ಮಾತ್ರೆ ತೆಗೆದುಕೊಂಡೋ, ಇನ್ಯಾವುದೋ ರೀತಿಯಲ್ಲಿಯೋ ಜಠರ, ಕರುಳು ಸಂಪೂರ್ಣ ಖಾಲಿ ಮಾಡಿ, ಸೋಪು ಸರ್ಫು ಹಾಕಿ ತೊಳೆದು ಹೊಟ್ಟೆಯೊಳಗೆ ಏನೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಹೋಗಬೇಕಾಗಿ ವಿನಂತಿ. ಹಾಗೆಯೇ ಹೋದುದು ಕನ್ನಡ ಸುದ್ದಿವಾಹಿನಿಗಳಿಗೆ ಗೊತ್ತಾದರೆ ಕಷ್ಟ.

– ಶ್ರೀನಿವಾಸ ಕಾರ್ಕಳ

****

2016- ದನದ ಮಾಂಸ ತಿಂದ ಎಂದು ಬಡಿದು ಕೊಂದರು ಸೈಯದ್ ಅಕ್ಲಾಕ್‌‌ನನ್ನು. 2022- ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದರೆಂದು ದಾಳಿ ನಡೆಸಿದರು ಸಿದ್ದರಾಮಯ್ಯ ಮೇಲೆ. ಬಿಜೆಪಿಯ ಈ ಕ್ರೊನಾಲಜಿ ಗಮನಿಸಿ. ನಿನ್ನೆ ಅಕ್ಲಾಕ್, ಇವತ್ತು ಸಿದ್ದರಾಮಯ್ಯ, ನಾಳೆ ನೀವು, ನೀವು. #ನಮ್ಮ_ಆಹಾರ_ನಮ್ಮ_ಹಕ್ಕು #ಕ್ರೊನಾಲಜಿ_ಸಂಝೇ #bjp_is_sick #my_food_my_right

-ಶಶಿ ಸಂಪಳ್ಳಿ

***

ಏಯ್, ನೀ ಯಾವನಯ್ಯಾ ಕೇಳಾಕೆ? ಆಹಾರ ಅವರವರ ಹಕ್ಕು. ಬಾಡು ನಮ್ಮ ಗಾಡು. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂದು ಕೇಳೋಕೆ ನೀನು ಯಾವನಯ್ಯ.

– ಹನುಮೇಶ್‌ ಗುಂಡೂರು

***

ಮಾಂಸ ತಿನ್ನುವವರು
ಇವಿಎಂನಲ್ಲಿ
ಕಮಲದ ಮೇಲೆ
ಬೆರಳಿಡಬೇಡಿ,
ಮಡಿ ಕೆಟ್ಟು ಮೈಲಿಗೆಯಾದೀತು.

– ಡಾ.ಶ್ರೀನಿವಾಸ ಕಕ್ಕಿಲ್ಲಾಯ

***

ಮಾಂಸಾಹಾರ ತಿಂದವರು ದೇವಸ್ಥಾನಕ್ಕೆ ಬರಬಾರದೆಂದು ಯಾವ ದೇವರು ಬಂದು ಹೇಳಿದ್ದು ಅಂತ ಯಾರಾದರೂ ದಾಖಲೆ ಸಮೇತ ಹೇಳಿದರೆ ಒಳ್ಳೆಯದು. ಯಾಕಂದ್ರೆ ನಮ್ಮ ಮಾರಮ್ಮನಿಗೆ ನಾವು ಕುರಿ‌ ಕಡಿದೇ ಹಬ್ಬ ಮಾಡೋದು.‌ ಹಾಗಾದ್ರೆ ಮಾರಮ್ಮ ದೇವರಲ್ಲವೇ?

– ದೇಶಾದ್ರಿ ಹೊಸಮನೆ

***

ನಾನು ಮಾಂಸಹಾರಿ. ಮಾಂಸ ತಿನ್ನುತ್ತೇನೆ. ಇದು ನನ್ನ ಆಹಾರದ ಆಯ್ಕೆ ಮತ್ತು ಹಕ್ಕು.
ನೀನ್ಯಾವನಯ್ಯ ಕೇಳುವುದಕ್ಕೆ. #isupportsiddaramaiah

– ಶ್ರೀಪಾದ ಭಟ್‌

***

#ಬಾಡೇ_ನಮ್_ಗಾಡು

ಸುಮ್ನೆ ಮಾತಾಡೋದೇನು ಅಂತ ಬರುವಾಗ ಕೆ.ಎಂ.ದೊಡ್ಡೀಲಿ ಎರಡೂವರೆ ಕೆ.ಜಿ. ಹಂದಿ ಬಾಡು ತಂದು ಮೆಣಸುಪ್ಪಿನ ಕರಿ ಮಾಡಿ ಹೊಟ್ಟೆ ತುಂಬಾ ತಿಂದೊ. ನಾಳೆಗೂ ಇದೆ. ತಿಂಡಿಗೇ ಬನ್ನಿ.

– ಕೃಷ್ಣೇಗೌಡ ಟಿ.ಲಿಂಗಯ್ಯ

***

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಬಾಡು ಹಾಕು
ಐದು ಆರು
ಕೋಳಿ ಸಾರು
ಏಳು ಎಂಟು
ಮೀನು ಉಂಟು
ಒಂಬತ್ತು ಹತ್ತು
ಬಲು ರುಚಿ ಇತ್ತು
ಒಂದರಿಂದ ಹತ್ತು ಹೀಗಿತ್ತು
ಬಾಡಿನ ಗತ್ತು ಮುಗಿದಿತ್ತು.
( ಮೂಲ ಕವಿಗಳ ಕ್ಷಮೆ ಕೋರಿ)

– ಪುರುಷೋತ್ತಮ ಬಿಳಿಮಲೆ

****

***

***

ಹೀಗೆ ಸೋಷಿಯಲ್ ಮೀಡಿಯಾಗಳ ತುಂಬಾ ಬಾಡಿನ ಘಮಲು ಹೆಚ್ಚಾಗಿದೆ. ಮಾಂಸ ತಿನ್ನುವವರನ್ನು ಹಂಗಿಸುವ ಬಿಜೆಪಿಯವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...