Homeಕರ್ನಾಟಕಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

- Advertisement -
- Advertisement -

“ನೀನು ಯಾವನಯ್ಯಾ ನಾನ್‌ವೆಜ್‌ ತಿನ್ನಲ್ವೇನಯ್ಯ? ನಾನು ಏನು ತಿಂದೆ ಅಂತ ಕೇಳಲು ನೀನ್ಯಾವನು?” ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತನೊಬ್ಬನಿಗೆ ತರಾಟೆ ತೆಗೆದುಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ‘ಬಾಡಿನ ಘಮಲು’ ಜೋರಾಗಿದೆ.

‘ಬಾಡು ತಿಂದ ಬಳಿಕ ದೇವಾಸ್ಥಾನಕ್ಕೆ ಸಿದ್ದರಾಮಯ್ಯ ಹೋಗಿದ್ದಾರೆ’ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯನವರ ಆಹಾರ ಹಕ್ಕನ್ನು ಕೆಣಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಂಸಾಹಾರ ಕೇಂದ್ರಿತ ಶೂದ್ರ, ದಲಿತ ಸಂಸ್ಕೃತಿಯ ಕುರಿತು ಜನರೇ ಈಗ ಬಿಜೆಪಿಗೆ ಪಾಠ ಹೇಳುತ್ತಿದ್ದಾರೆ.

‘ನಮ್ಮ ಆಹಾರ ನಮ್ಮ ಹಕ್ಕು. ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಕೇಳಲು ನೀವ್ಯಾರು?’ ಎಂಬ ಪ್ರಶ್ನೆ ಬಿರುಸು ಪಡೆದಿದೆ. ‘ಬಾಡೇ ನಮ್‌ ಗಾಡು’ ಅಭಿಯಾನದ ಎರಡನೇ ಆವೃತ್ತಿಯೂ ಚಾಲನೆ ಪಡೆದಿದೆ.

ಹಂಸಲೇಖ ಅವರು ಮಾಂಸಾಹಾರದ ಕುರಿತು ಮಾತನಾಡಿದ್ದ ಸಂದರ್ಭದಲ್ಲಿ ಮಾಂಸಾಹಾರಿಗಳ ಕುರಿತು ಕೆಲವರು ಕುಹಕವಾಡಿದ್ದರು. ಇದರಿಂದ ಸಿಟ್ಟಿಗೆದ್ದ ಬಹುಸಂಖ್ಯಾತ ಮಾಂಸಪ್ರಿಯರು, ‘ಬಾಡೇ ನಮ್‌ ಗಾಡು’ ಅಭಿಯಾನವನ್ನು ಆರಂಭಿಸಿ, ಯಶಸ್ವಿಯಾಗಿದ್ದರು. ಸಿದ್ದರಾಮಯ್ಯನವರು ತಮ್ಮ ಆಹಾರ ಸಂಸ್ಕೃತಿ ಹಾಗೂ ಹಕ್ಕನ್ನು ಪ್ರತಿಪಾದಿಸಿದ ಬಳಿಕ ಮತ್ತೊಮ್ಮೆ ‘ಬಾಡೇ ನಮ್‌ ಗಾಡು’ ಎಂದು ಜನರು ಹೇಳತೊಡಗಿದ್ದಾರೆ.

“ನಾಳೆಯಿಂದ ಬರುವ ಅಮಾವಾಸ್ಯೆವರೆಗೂ #ಬಾಡೇ_ನಮ್_ಗಾಡು ಬೃಹತ್ ಅಭಿಯಾನ. ಈ Hashtag ಬಳಸಿ ಬಾಡೂಟದ ಫೋಟೋ ಪೋಸ್ಟ್ ಮಾಡಬೇಕು. ಬಾಡು ತಿನ್ನದದವರಿಗೂ ನೋಡೋಕೆ ಮುಕ್ತ ಅವಕಾಶವಿದೆ. ಶ್ರಾವಣ, ಸೋಮವಾರ, ಶುಕ್ರವಾರ ಅಂತ ಕಥೆ ಹೊಡೆಯೋ ದಲಿತ ಮತ್ತು ಶೂದ್ರ $#%% ಕ್ಕೆ ಪ್ರವೇಶ ನಿಷಿದ್ಧ. ಇನ್ನುಳಿದಂತೆ ಸರ್ವರಿಗೂ ಮುಕ್ತ ಪ್ರವೇಶ. ಪ್ರಕಟಣೆ : ಅಖಿಲ ಕರ್ನಾಟಕ ಬಾಡು ಪ್ರಿಯ ಸಂಘ” ಎಂಬ ಸಂದೇಶ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಕೆಲವು ಪ್ರತಿಕ್ರಿಯೆಗಳ ಝಲಕ್‌ ಹೀಗಿದೆ:

ರಾಜ್ಯ ಸರ್ಕಾರ ತಕ್ಷಣ ಒಂದು ಆದೇಶ ಹೊರಡಿಸಿ ಎಲ್ಲ ದೇವಸ್ಥಾನಗಳ ಮುಂದೆ ಅಲ್ಲಿಗೆ ಭೇಟಿ ನೀಡುವ ಭಕ್ತರ ಹೊಟ್ಟೆಯಲ್ಲಿ ಏನಿದೆ ಎಂದು ಪರೀಕ್ಷೆ ಮಾಡಲು ಸ್ಕಾನಿಂಗ್ ಮೆಷಿನ್ ಅಳವಡಿಸುವುದನ್ನು ಕಡ್ಡಾಯಗೊಳಿಸ ಬೇಕು.

– ದಿನೇಶ್ ಅಮೀನ್‌ ಮಟ್ಟು

***

ಮಾಂಸಾಹಾರದ ಕುರಿತಾದ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ- ಇದೊಂದು ‘ಪುಷ್ಕಳ’ ಕಂ ಸಮೃದ್ಧ ದ್ರಾವಿಡ ಸಂಸ್ಕೃತಿ. ಮಾಂಸದೂಟದ ಜತೆಗಿನ ಸುಂದರ ನೆನಪುಗಳನ್ನು ಚಿತ್ರ ಬರೆಹಗಳ ಮೂಲಕ ಆದಷ್ಟೂ ದಾಖಲಿಸಿ. ಇಲ್ಲಿ ಯಾವ ಸಂಪಾದಕನೂ ಇಲ್ಲ. ನಿಮ್ಮ ಗೋಡೆ ನಿಮ್ಮಿಷ್ಟ. ನಡೀರಿ. ಇದೊಂದು ಆಂದೋಲನವಾಗಲಿ.

– ದಿನೇಶ್ ಕುಕ್ಕುಜಡ್ಕ

*****

****

ದೇವಸ್ಥಾನಕ್ಕೆ ಹೋಗುವ ಮುನ್ನ ಮಾತ್ರೆ ತೆಗೆದುಕೊಂಡೋ, ಇನ್ಯಾವುದೋ ರೀತಿಯಲ್ಲಿಯೋ ಜಠರ, ಕರುಳು ಸಂಪೂರ್ಣ ಖಾಲಿ ಮಾಡಿ, ಸೋಪು ಸರ್ಫು ಹಾಕಿ ತೊಳೆದು ಹೊಟ್ಟೆಯೊಳಗೆ ಏನೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಹೋಗಬೇಕಾಗಿ ವಿನಂತಿ. ಹಾಗೆಯೇ ಹೋದುದು ಕನ್ನಡ ಸುದ್ದಿವಾಹಿನಿಗಳಿಗೆ ಗೊತ್ತಾದರೆ ಕಷ್ಟ.

– ಶ್ರೀನಿವಾಸ ಕಾರ್ಕಳ

****

2016- ದನದ ಮಾಂಸ ತಿಂದ ಎಂದು ಬಡಿದು ಕೊಂದರು ಸೈಯದ್ ಅಕ್ಲಾಕ್‌‌ನನ್ನು. 2022- ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದರೆಂದು ದಾಳಿ ನಡೆಸಿದರು ಸಿದ್ದರಾಮಯ್ಯ ಮೇಲೆ. ಬಿಜೆಪಿಯ ಈ ಕ್ರೊನಾಲಜಿ ಗಮನಿಸಿ. ನಿನ್ನೆ ಅಕ್ಲಾಕ್, ಇವತ್ತು ಸಿದ್ದರಾಮಯ್ಯ, ನಾಳೆ ನೀವು, ನೀವು. #ನಮ್ಮ_ಆಹಾರ_ನಮ್ಮ_ಹಕ್ಕು #ಕ್ರೊನಾಲಜಿ_ಸಂಝೇ #bjp_is_sick #my_food_my_right

-ಶಶಿ ಸಂಪಳ್ಳಿ

***

ಏಯ್, ನೀ ಯಾವನಯ್ಯಾ ಕೇಳಾಕೆ? ಆಹಾರ ಅವರವರ ಹಕ್ಕು. ಬಾಡು ನಮ್ಮ ಗಾಡು. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂದು ಕೇಳೋಕೆ ನೀನು ಯಾವನಯ್ಯ.

– ಹನುಮೇಶ್‌ ಗುಂಡೂರು

***

ಮಾಂಸ ತಿನ್ನುವವರು
ಇವಿಎಂನಲ್ಲಿ
ಕಮಲದ ಮೇಲೆ
ಬೆರಳಿಡಬೇಡಿ,
ಮಡಿ ಕೆಟ್ಟು ಮೈಲಿಗೆಯಾದೀತು.

– ಡಾ.ಶ್ರೀನಿವಾಸ ಕಕ್ಕಿಲ್ಲಾಯ

***

ಮಾಂಸಾಹಾರ ತಿಂದವರು ದೇವಸ್ಥಾನಕ್ಕೆ ಬರಬಾರದೆಂದು ಯಾವ ದೇವರು ಬಂದು ಹೇಳಿದ್ದು ಅಂತ ಯಾರಾದರೂ ದಾಖಲೆ ಸಮೇತ ಹೇಳಿದರೆ ಒಳ್ಳೆಯದು. ಯಾಕಂದ್ರೆ ನಮ್ಮ ಮಾರಮ್ಮನಿಗೆ ನಾವು ಕುರಿ‌ ಕಡಿದೇ ಹಬ್ಬ ಮಾಡೋದು.‌ ಹಾಗಾದ್ರೆ ಮಾರಮ್ಮ ದೇವರಲ್ಲವೇ?

– ದೇಶಾದ್ರಿ ಹೊಸಮನೆ

***

ನಾನು ಮಾಂಸಹಾರಿ. ಮಾಂಸ ತಿನ್ನುತ್ತೇನೆ. ಇದು ನನ್ನ ಆಹಾರದ ಆಯ್ಕೆ ಮತ್ತು ಹಕ್ಕು.
ನೀನ್ಯಾವನಯ್ಯ ಕೇಳುವುದಕ್ಕೆ. #isupportsiddaramaiah

– ಶ್ರೀಪಾದ ಭಟ್‌

***

#ಬಾಡೇ_ನಮ್_ಗಾಡು

ಸುಮ್ನೆ ಮಾತಾಡೋದೇನು ಅಂತ ಬರುವಾಗ ಕೆ.ಎಂ.ದೊಡ್ಡೀಲಿ ಎರಡೂವರೆ ಕೆ.ಜಿ. ಹಂದಿ ಬಾಡು ತಂದು ಮೆಣಸುಪ್ಪಿನ ಕರಿ ಮಾಡಿ ಹೊಟ್ಟೆ ತುಂಬಾ ತಿಂದೊ. ನಾಳೆಗೂ ಇದೆ. ತಿಂಡಿಗೇ ಬನ್ನಿ.

– ಕೃಷ್ಣೇಗೌಡ ಟಿ.ಲಿಂಗಯ್ಯ

***

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಬಾಡು ಹಾಕು
ಐದು ಆರು
ಕೋಳಿ ಸಾರು
ಏಳು ಎಂಟು
ಮೀನು ಉಂಟು
ಒಂಬತ್ತು ಹತ್ತು
ಬಲು ರುಚಿ ಇತ್ತು
ಒಂದರಿಂದ ಹತ್ತು ಹೀಗಿತ್ತು
ಬಾಡಿನ ಗತ್ತು ಮುಗಿದಿತ್ತು.
( ಮೂಲ ಕವಿಗಳ ಕ್ಷಮೆ ಕೋರಿ)

– ಪುರುಷೋತ್ತಮ ಬಿಳಿಮಲೆ

****

***

***

ಹೀಗೆ ಸೋಷಿಯಲ್ ಮೀಡಿಯಾಗಳ ತುಂಬಾ ಬಾಡಿನ ಘಮಲು ಹೆಚ್ಚಾಗಿದೆ. ಮಾಂಸ ತಿನ್ನುವವರನ್ನು ಹಂಗಿಸುವ ಬಿಜೆಪಿಯವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...