Homeಚಳವಳಿಪುರುಷಾಧಿಪತ್ಯ ಮುರಿಯುವ ಹೋರಾಟ: ಭನ್ವಾರಿ ದೇವಿಯಿಂದ, ನಿರ್ಭಯಳಿಂದ ಪ್ರಿಯಾ ರಮಣಿವರೆಗೆ..

ಪುರುಷಾಧಿಪತ್ಯ ಮುರಿಯುವ ಹೋರಾಟ: ಭನ್ವಾರಿ ದೇವಿಯಿಂದ, ನಿರ್ಭಯಳಿಂದ ಪ್ರಿಯಾ ರಮಣಿವರೆಗೆ..

ಮುರಿಯದ, ಹರಿಯದ ಎಳೆಯೊಂದಿದೆ ಭನ್ವಾರಿ ದೇವಿಯಿಂದ ನಿರ್ಭಯಳಿಂದ ಪ್ರಿಯಾ ರಮಣಿವರೆಗೆ ನಿಂದನೆಯ ರೀತಿಯಲ್ಲಿ ಅಲ್ಲ ಆದರೆ ನಾವು ಮಹಿಳೆಯರಾಗಿರುವ ರೀತಿ...

- Advertisement -
- Advertisement -

ಭನ್ವಾರಿ ದೇವಿಯಿಂದ ನಿರ್ಭಯಾವರೆಗೆ, ಅಲ್ಲಿಂದ ಪ್ರಿಯಾ ರಮಣಿವರೆಗೆ ಒಂದು ಮುರಿಯದ/ಹರಿಯದ ಎಳೆಯಿದೆ….
ಹೇಗೆ?
—-
ಹೊಸ ವರ್ಷದ ಸಂಭ್ರಮವನ್ನು ಆಚರಿಸಿದ ಬೆಂಗಳೂರಿನ ಬೀದಿಗಳಲ್ಲಿ,
ಸಾಮೂಹಿಕ ಲೈಂಗಿಕ ಕಿರುಕುಳದ ವರದಿಯೊಂದಿಗೆ 2017ರ ಬೆಳಗು ಆಯಿತು.
ಇದು ಮೊದಲ ಸಲವಾಗಿರಲಿಲ್ಲ
ಹಾಗೆಯೇ ಅದೊಂದೇ ನಗರವಾಗಿರಲಿಲ್ಲ
ಪ್ರತಿಯೊಬ್ಬ ಮಹಿಳೆಗೆ ತಿಳಿದಿದೆ
ಆಕ್ರೋಶಗೊಂಡರು ಮಹಿಳೆಯರು ಮತ್ತು ಅನೇಕ ಪುರುಷರು
ನಾವು ಪ್ರತಿಭಟಿಸಲು ಬಯಸಿದ್ದೆವು
ಪೊಲೀಸರು, ಸರ್ಕಾರಕ್ಕೆ #SexualHarassment
ಅನ್ನು ಆದ್ಯತೆ ವಿಷಯವಾಗಿ ಪರಿಗಣಿಸಲು ಒತ್ತಾಯಿಸಿದೆವು
ಬಹಳಷ್ಟು ಜನ, ಆಗಾಗ್ಗೆ, ತುಂಬಾ ಹೃದಯಸ್ಪರ್ಶಿ
ನಿಲುವು ವ್ಯಕ್ತ ಪಡಿಸಿದರು…

ನಮ್ಮ ಆಘಾತಕ್ಕೆ, ಕೆಲವರು ಹೇಳಿದರು
ನಾವು ಇದನ್ನೆಲ್ಲ ದೊಡ್ಡದು ಮಾಡಬಾರದು
ಬೆಂಗಳೂರಿನ ಖ್ಯಾತಿಗೆ ಧಕ್ಕೆ ಉಂಟಾಗುತ್ತದೆ!
ಬೆಂಗಳೂರಿನ ಖ್ಯಾತಿಗೆ ಧಕ್ಕೆ ಉಂಟಾಗುತ್ತದೆ!
ಮಾನವ ಘನತೆ, ಮಾನವ ಹಕ್ಕುಗಳು, ಮಾನವ ಯೋಗಕ್ಷೇಮ ಅವರನ್ನು ತಟ್ಟಲೇ ಇಲ್ಲ
ಬೆಂಗಳೂರಿನ ಖ್ಯಾತಿಗೆ ಧಕ್ಕೆ ಉಂಟಾಗುತ್ತದೆ!
ಮತ್ತು ನಾವು ಹೇಳಿದೆವು?
ಸರಿ .. ಒಂದು ವಾಕ್ ಮಾಡೋಣ
ನಾವು ಹೊರಗೆ ಬಂದೆವು
ದೂರದಿಂದ ಮತ್ತು ವಿಶಾಲದಿಂದ.
ನಾವು ಪ್ರತಿಭಟಿಸಿದ್ದೇವೆ.
ನಾವು ನಮ್ಮ ತುಣುಕು ಅಭಿಪ್ರಾಯ ಹೇಳಿದೆವು
ಇಂದು ದೆಹಲಿ ಹೈಕೋರ್ಟ್ ತನ್ನ ತುಣುಕು ಹೇಳಿದೆ
ಔಪಚಾರಿಕವಾಗಿ, ಕಾನೂನುಬದ್ಧವಾಗಿ
ಖ್ಯಾತಿಯ (ಸ್ಥಾನಮಾನದ) ಹಕ್ಕನ್ನು ಘನತೆಯ ವೆಚ್ಚದಲ್ಲಿ ರಕ್ಷಿಸಲಾಗುವುದಿಲ್ಲ!
ಇದು ನಗರದ ಖ್ಯಾತಿಗೆ ಪ್ರತಿಕ್ರಿಯೆಯಾಗಿದ್ದರೆ
ಬಹುಪಾಲು ನಿಂದಕರ
ಪ್ರತಿಕ್ರಿಯೆಯನ್ನು ಕಲ್ಪಿಸಿಕೊಳ್ಳಿ

ಸಾಮಾನ್ಯವಾಗಿ ಕುಟುಂಬಗಳು, ಸಂಬಂಧಿಕರು, ಸ್ನೇಹಿತರು, ಪ್ರೇಮಿಗಳು, ಗಂಡಂದಿರು.
ಮಾತನಾಡಲು ಸಾಧ್ಯವಿಲ್ಲ
ಮಾತನಾಡಲು ಸಾಧ್ಯವಿಲ್ಲ
ಇಷ್ಟಾಗಿಯೂ ಬೆಂಬಲ, ಸಂಬಂಧಗಳು, ನೆಟ್‌ವರ್ಕ್ ಅನ್ನು ಉಳಿಸಿಕೊಂಡಿದ್ದಾರೆ
ಮತ್ತು ಇನ್ನೂ ಘನತೆಯನ್ನು ಉಳಿಸಿಕೊಂಡಿದ್ದಾರೆ!
ಭಾರತದಲ್ಲಿ, ಅಗೌರವವು, ಅಘನತೆಯು ನಿಂದನೀಯ ಪುರುಷನಲ್ಲ
ಅದು ನಿಂದನೆಗೊಳಗಾದ ಹೆಣ್ಣು
ಈಗ ಕಲ್ಪಿಸಿಕೊಳ್ಳಿ ಭನ್ವಾರಿ ದೇವಿಯನ್ನು
ಜಾತಿ ಶ್ರೇಣಿಯಲ್ಲಿ ಕಡಿಮೆ ಎಂದು ಪರಿಗಣಿಸಲ್ಪಟ್ಟವಳು
ಸರ್ಕಾರಿ ಸ್ವಯಂಸೇವಕರಾಗಿ ಕೆಲಸ ಮಾಡುವವಳು
ಕೊಳಕು ಪಿತೃಪ್ರಭುತ್ವದ ವಿರುದ್ಧ
ಬಾಲ್ಯ ವಿವಾಹ ತಡೆಯುವುದಕ್ಕಾಗಿ….
ಇದಕ್ಕಾಗಿ ಕಾಯಿರಿ …
9 ತಿಂಗಳ ಹಸುಗೂಸು
ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತದೆ!
ಕಂಬದಿಂದ ಕಂಬಕ್ಕೆ, ಅಲ್ಲಿಂದಿಲ್ಲಿಗೆ
ವೈದ್ಯಕೀಯ ಪರೀಕ್ಷೆ ಪಡೆಯಲು ಸಹ ಅಲೆದಾಟ
ಎಫ್‌ಐಆರ್ ಸಹ ನೋಂದಾಯಿಸಲಾಗಿದೆ
ಸ್ವಾಬ್‌ನಲ್ಲಿ ಐವರು ಪುರುಷರ ವೀರ್ಯವಿದ್ದರೂ ಸಹ….
ನಂತರ….

ತೀರ್ಪಿನೊಂದಿಗೆ ಎಲ್ಲಾ 5 ಜನರನ್ನು ಖುಲಾಸೆಗೊಳಿಸಲಾಗಿದೆ:
** ಗ್ರಾಮದ ಮುಖ್ಯಸ್ಥ ಅತ್ಯಾಚಾರ ಮಾಡಲು ಸಾಧ್ಯವಿಲ್ಲ
** ವಿವಿಧ ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರದಲ್ಲಿ ಭಾಗವಹಿಸಲು ಸಾಧ್ಯವಿಲ್ಲ
** 60-70 ವರ್ಷ ವಯಸ್ಸಿನ ಹಿರಿಯ ಪುರುಷರು ಅತ್ಯಾಚಾರ ಮಾಡಲು ಸಾಧ್ಯವಿಲ್ಲ
** ಒಬ್ಬ ಮನುಷ್ಯನು ಸಂಬಂಧಿಯ ಮುಂದೆ ಅತ್ಯಾಚಾರ ಮಾಡಲು ಸಾಧ್ಯವಿಲ್ಲ: ಇಬ್ಬರು ಚಿಕ್ಕಪ್ಪ / ಸೋದರಳಿಯರಾಗಿರುವಾಗ…..
** ಉನ್ನತ ಜಾತಿಯ ಪುರುಷರು ಪರಿಶುದ್ಧತೆಯ ಕಾರಣಗಳಿಂದ ಕೆಳಜಾತಿಯ ಮಹಿಳೆಯರನ್ನು ಅತ್ಯಾಚಾರ ಮಾಡಲು ಸಾಧ್ಯವಿಲ್ಲ
** ಭನ್ವಾರಿ ದೇವಿಯ ಪತಿ ನೋಡಿರಲಿಕ್ಕಿಲ್ಲ
ಅವನ ಹೆಂಡತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವುದ..
ಮಹಿಳೆಯರ ಪ್ರತಿಭಟನೆಗಳು 5 ವರ್ಷಗಳ ಕಾಲ ನಡೆದವು
ಹಲವಾರು ಮಹಿಳಾ ಗುಂಪುಗಳು ಮತ್ತು ಎನ್ಜಿಒಗಳು ಬೀದಿಗಳಲ್ಲಿ ಪ್ರತಿಭಟನೆ ನಡೆಸಿದವು
ರಾಜಸ್ಥಾನ ಸರ್ಕಾರ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ
ಕೆಲಸದಲ್ಲಿ ಹಲ್ಲೆಗೊಳಗಾದ/ ಕಿರುಕುಳಕ್ಕೊಳಗಾದ ಮಹಿಳೆಗಾಗಿ ಎಂದು…
1995 ರಲ್ಲಿ ಸುಪ್ರೀಂ ಕೋರ್ಟ್ ಅಂತಿಮವಾಗಿ ಹೊರಡಿಸಿತು
ವಿಶಾಕಾ ಮಾರ್ಗಸೂಚಿಗಳು
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಮಹಿಳೆಯರನ್ನು ರಕ್ಷಿಸುವುದು
ಮತ್ತು ಸಂಸತ್ತು ಅದನ್ನು ಕಾನೂನಾಗಿ ಅಂಗೀಕರಿಸಿತು
ಯಾವಾಗ? 21 ವರ್ಷಗಳ ನಂತರ, 2013 ರಲ್ಲಿ – ಪೋಕ್ಸೋ ಆಕ್ಟ್
ಅಲ್ಲಿಯವರೆಗೆ, ದುಡಿಯುವ ಮಹಿಳೆಯರಿಗೆ ಯಾವುದೇ ಸಹಾಯವಿರಲಿಲ್ಲ
ಅಂತೂ ಕಾನೂನೊಂದು ಬಂತು
ಇದು ಸಂಭವಿಸಿದ ಏಕೈಕ ಕಾರಣ?
ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಟ್ಟಿಗೆ ಸೇರಿಕೊಂಡರು.
# ಭನ್ವಾರಿದೇವಿಯ ಶೌರ್ಯ ಮನೋಭಾವ
ಅಪಾರ ಮಹಿಳಾ ಬೆಂಬಲಿಗರೊಂದಿಗೆ ನೇಯಲ್ಪಟ್ಟಿದೆ
ನಮ್ಮೆಲ್ಲ ಮಹಿಳೆಯರಿಗಾಗಿ ರೂಪಾಂತರಗೊಂಡ ಕಾನೂನು

ಡಿಟ್ಟೋ, ನಿರ್ಭಯಾ
ಅವಳ ವಿರುದ್ಧದ ಭಯಾನಕ, ಅಮಾನವೀಯ ಅಪರಾಧ
ಬೀದಿಗಳಲ್ಲಿ ದಂಗೆಗೆ ಕಾರಣವಾಯಿತು
ಮಹಿಳೆಯರು (ಮತ್ತು ಪುರುಷರು) ಸ್ವಯಂಪ್ರೇರಿತವಾಗಿ ಹೊರಬರುತ್ತಾರೆ
ಮತ್ತೆ, ಮತ್ತೆ, ಮತ್ತೆ
ನ್ಯಾಯಮೂರ್ತಿ ವರ್ಮಾ ಸಮಿತಿ
ಅತ್ಯಾಚಾರ ಕಾನೂನುಗಳನ್ನು ಪರಿಷ್ಕರಿಸುವ ಮೊದಲು
ಮಹಿಳೆಯ ಜನನಾಂಗಗಳಲ್ಲಿ ಯಾವುದನ್ನೂ ತುರುಕಲಾಗುತ್ತಿದೆ, ವಾಯ್ಯುರಿಸಮ್, ಆಸಿಡ್ ಅಟ್ಯಾಕ್, ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸುತ್ತಿದ್ದರು
ಅತ್ಯಾಚಾರ ಕಾನೂನು ತಿದ್ದುಪಡಿಗಳನ್ನು ಸಹ 2013 ರಲ್ಲಿ ಅಂಗೀಕರಿಸಲಾಯಿತು
ಇದು ಸಂಭವಿಸಿದ ಏಕೈಕ ಕಾರಣ?
ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಟ್ಟಿಗೆ ಸೇರಿದ ಕಾರಣ.
# ನಿರ್ಭಯ ಅವರ ಶೌರ್ಯ ಮನೋಭಾವ
ಅಪಾರ ಮಹಿಳಾ ಬೆಂಬಲಿಗರೊಂದಿಗೆ ನೇಯಲ್ಪಟ್ಟಿದೆ
ನಮ್ಮೆಲ್ಲ ಮಹಿಳೆಯರಿಗೆ ರೂಪಾಂತರಗೊಂಡ ಕಾನೂನು

ಅದು ನಮ್ಮನ್ನು #PriyaRamani & #MeToo ಗೆ ತರುತ್ತದೆ
ಇಂದಿನ ತೀರ್ಪು ಅವಳನ್ನು ಮಾನಹಾನಿ ಮೊಕದ್ದಮೆಯಿಂದ ಮುಕ್ತಗೊಳಿಸಿದೆ
ಸರಣಿ ಲೈಂಗಿಕ ಕಿರುಕುಳದ ಆರೋಪದಲ್ಲಿ, ಮಾಜಿ ಬಿಜೆಪಿ ಸಚಿವ ಎಂ.ಜೆ.ಅಕ್ಬರ್‌ವರ ದಾವೆಯಲ್ಲಿ
ಆದರೆ ಹೈಕೋರ್ಟ್‌ನ ಗಮನಾರ್ಹ ಕಾಮೆಂಟ್‌ಗಳು
** ಲೈಂಗಿಕ ಕಿರುಕುಳವು ಘನತೆ ಮತ್ತು ಆತ್ಮವಿಶ್ವಾಸವನ್ನು ದೂರ ಮಾಡುತ್ತದೆ
** ದಶಕಗಳ ನಂತರವೂ ತನ್ನ ಆಯ್ಕೆಯ ಯಾವುದೇ ವೇದಿಕೆಯಲ್ಲಿ ಮಹಿಳೆಗೆ ತನ್ನ ಕುಂದುಕೊರತೆಯನ್ನು ಪ್ರಸಾರ ಮಾಡುವ ಹಕ್ಕಿದೆ
** ಮತ್ತು ಯಾರೊಬ್ಬರ ಖ್ಯಾತಿಯ/ಸ್ಥಾನಮಾನದ ಹಕ್ಕು ಅವಳ ಘನತೆಯ ಹಕ್ಕನ್ನು ಮೀರುವುದಿಲ್ಲ
ಇದು ಲೈಂಗಿಕ ಕಿರುಕುಳ ಪ್ರಕರಣಗಳನ್ನು ಸಂಭಾವ್ಯವಾಗಿ ಪರಿವರ್ತಿಸುತ್ತದೆ
ಮತ್ತೆ, ಇದು ಸಂಭವಿಸಿದ ಏಕೈಕ ಕಾರಣ
ಮಹಿಳೆಯರು ತಮ್ಮ ಹಕ್ಕುಗಳಿಗಾಗಿ #MeToo ನಲ್ಲಿ ಒಟ್ಟಿಗೆ ಸೇರಿಕೊಂಡ ಕಾರಣ.
#ಪ್ರಿಯಾ ರಮಣಿಯವರ ಶೌರ್ಯ ಮನೋಭಾವ
ಅಪಾರ ಮಹಿಳಾ ಬೆಂಬಲಿಗರೊAದಿಗೆ ನೇಯಲ್ಪಟ್ಟಿದೆ
ನಮ್ಮೆಲ್ಲ ಮಹಿಳೆಯರಿಗೆ ಕಾನೂನು ಪರಿವರ್ತನೆಗೊಳ್ಳುತಿದೆ
#MeToo ಸಂಖ್ಯೆಗಳ ಸುರಕ್ಷತೆಯನ್ನು ಅನುಮತಿಸುತ್ತದೆ
#MeToo ಆಘಾತದ ಸುರಕ್ಷತೆಯನ್ನು ಒದಗಿಸುತ್ತದೆ
#MeToo ಮಹಿಳೆಯರ ಒಗ್ಗಟ್ಟಿನ ಮತ್ತೊಂದು ರೂಪವಾಗಿದೆ
ಬೀದಿ ಪ್ರತಿಭಟನೆಗಾಗಿ ಮಹಿಳೆಯರು ಒಟ್ಟಿಗೆ ಬ್ಯಾಂಡಿಂಗ್ ಮಾಡಿದಂತೆಯೇ
ಮತ್ತು ನ್ಯಾಯಾಲಯವು ಅದಕ್ಕೆ ಕಾನೂನು ಅನುಮತಿ ನೀಡಿದೆ!

ಆದ್ದರಿಂದ, ನಾನು ಮತ್ತೆ ಹೇಳುತ್ತೇನೆ
ಮುರಿಯದ, ಹರಿಯದ ಎಳೆಯೊಂದಿದೆ
ಭನ್ವಾರಿ ದೇವಿಯಿಂದ ನಿರ್ಭಯಳಿಂದ ಪ್ರಿಯಾ ರಮಣಿವರೆಗೆ
ನಿಂದನೆಯ ರೀತಿಯಲ್ಲಿ ಅಲ್ಲ
ಆದರೆ ನಾವು ಮಹಿಳೆಯರಾಗಿರುವ ರೀತಿ
– ಒಟ್ಟಿಗೆ ಬ್ಯಾಂಡ್ ಮಾಡಿ
– ಒಟ್ಟಿಗೆ ಅಂಟಿಕೊಳ್ಳಿ
– ಪರಸ್ಪರ ನಿಂತುಕೊಳ್ಳಿ
ನಿಂದನೆ ವಿರುದ್ಧ.
ಮತ್ತು ನಾವು ಹೀಗೆ ಮಾಡಿದಾಗ, ರೂಪಾಂತರವನ್ನು ನೋಡಿ!
ರೂಪಾಂತರವನ್ನು ನೋಡಿ!
ನಮಗೆ ಮಾತ್ರ ತಿಳಿದಿದೆ, ಹೇಗೆ
ಸಾರ್ವಜನಿಕ ಸ್ಥಳಗಳು, ಖಾಸಗಿ ಸ್ಥಳಗಳು
ಕಿಕ್ಕಿರಿದ ಸ್ಥಳಗಳು, ಪ್ರತ್ಯೇಕ ಸ್ಥಳಗಳು
ಕುಟುಂಬಗಳು, ಸ್ನೇಹಿತರು, ಪ್ರೇಮಿಗಳು, ಗಂಡಂದಿರು
ಪ್ರತಿಯೊಂದು ಸ್ಥಳವು ಸಂಭಾವ್ಯ ಲೈಂಗಿಕ ದುರುಪಯೋಗ ಮಾಡುವವರನ್ನು ಆಶ್ರಯಿಸುತ್ತದೆ
ಆದ್ದರಿಂದ ನಾವು ಮಹಿಳೆಯರಾಗಿರೋಣ
– ಜಾತಿ, ಅಥವಾ ಸಮುದಾಯ ಅಥವಾ ಧರ್ಮದಿಂದಲ್ಲ
ಕೇವಲ ಮಹಿಳೆಯರಾಗಿರೋಣ
– ಒಟ್ಟಿಗೆ ಬ್ಯಾಂಡ್ ಮಾಡಿ
– ಒಟ್ಟಿಗೆ ಅಂಟಿಕೊಳ್ಳಿ
– ಒಬ್ಬರಿಗೊಬ್ಬರು ನಿಂತುಕೊಳ್ಳಿ
ನಮ್ಮಲ್ಲಿ ಒಬ್ಬರ ಮೇಲಿನ ನಿಂದನೆಯೂ ನಮ್ಮೆಲ್ಲರ ವಿರುದ್ಧದ ನಿಂದನೆಯಾಗಿದೆ!
ಭಾರತ ರೂಪಾಂತರಗೊಳ್ಳುತ್ತದೆ!
ಅದು ಸಮಯ ತೆಗೆದುಕೊಳ್ಳುತ್ತದೆ.
#SmashPatriarchy,
ಪುರುಷಾಧಿಪತ್ಯವನ್ನು ಮುರಿಯಲಿಕ್ಕೆ…

  • ತಾರ ಕೃಷ್ಣಸ್ವಾಮಿ
  • ಕನ್ನಡಕ್ಕೆ: ಮಲ್ಲನಗೌಡರ್

ಇದನ್ನೂ ಓದಿ: ಪ್ರಿಯಾ ರಮಣಿ ವಿರುದ್ಧದ ಮಾನಹಾನಿ ಪ್ರಕರಣ ಖುಲಾಸೆಗೊಳಿಸಿದ ದೆಹಲಿ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...