Homeಸಾಮಾಜಿಕಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

ಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

- Advertisement -
- Advertisement -

ಸಾಮಾಜಿಕ ಜಾಲತಾಣವೆಂಬುದು ಸ್ಯಾಡಿಸ್ಟ್‍ಗಳ ಆಡಂಬೋಲದಂತೆ ಆಗಿಹೋಗಿದೆ! ಇದು ಮಾಹಿತಿ ತಂತ್ರಜ್ಞಾನದ ಘೋರ ದುರಂತವೇ ಸರಿ. ಪರರ ಪಡಿಪಾಟಲು, ಆಸಹಾಯಕತೆ, ನೋವು, ನಷ್ಟ ಅಪಹಾಸ್ಯ ಮಾಡಿ ಟ್ರೋಲಿಸುವ ವಿಕೃತ ಸಂತಾನವೇ ಭಾರತದಲ್ಲಿ ಬೆಳೆದುನಿಂತಿದೆ. ಮಹಾ ಮಾನವತಾವಾದಿ ಧೀಮಂತ ಪತ್ರಕರ್ತೆಯೂ ಆಗಿದ್ದ ಗೌರಿಲಂಕೇಶ್‍ರ ಹತ್ಯೆ ಸಂಭ್ರಮಿಸಿದ್ದ ಕುಹಾಕಿಗಳನ್ನು ಈ ದೇಶದ ಪ್ರಧಾನಿ ಮೋದಿ ಮಹಾತ್ಮನೇ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ! ಸಿದ್ದು ಸಿಎಂ ಆಗಿದ್ದಾಗ ಮಗನನ್ನು ಕಳಕೊಂಡ ನೋವಿನಲ್ಲಿದ್ದ ಸಂದರ್ಭವನ್ನು ಸಾಮಾಜಿಕ ಜಾಲತಾಣದಲ್ಲಿ ಕುಳಿತು ಖುಷಿಯಿಂದ ಅನುಭವಿಸಿದವರೂ ಇದ್ದಾರೆ. ಇಂಥ ಗಲೀಜು ಸಂಸ್ಕøತಿಯ ಟ್ರೋಲಿಗರ ಕುಚೋದ್ಯದಿಂದ ಈಚೆಗೆ ಕೇರಳದಲ್ಲಿ ತಲ್ಲಣವೇ ಆಗಿಹೋಗಿದೆ. ವಿನಾಕಾರಣ ಬಡ-ಮುಗ್ಧ ಹುಡುಗಿಯೊಬ್ಬಳು ಘಾಸಿಗೊಂಡಿದ್ದಾಳೆ!
ಆಕೆಯ ಹೆಸರು ಹನಾನ್ ಹಮೀದ್. ಕೇರಳದ ತ್ರಿಶೂರ್‍ನ ಇಪ್ಪತ್ತೊಂದರ ಬಾಲಕಿ. ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಲೇ ಕಾಲೇಜಿಗೂ ಹೋಗುತ್ತಿದ್ದಾಳೆ; ಕಾಲೇಜು ಮುಗಿಸಿ ಮೀನು ಮಾರುಕಟ್ಟೆಯಲ್ಲಿ ಕುಳಿತು ಮೀನೂ ಮಾರುತ್ತಾಳೆ. ಆಕೆ ಅವಸರದಲ್ಲೊಮ್ಮೆ ಕಾಲೇಜಿನ ಯೂನಿಫಾರ್ಮ್ ತೊಟ್ಟುಕೊಂಡೇ ಮೀನು ಮಾರಾಟಕ್ಕೆ ಕುಳಿತಿದ್ದಳು. ಇದು ಅದ್ಯಾವುದೋ ಕೀಳು ಅಭಿರುಚಿಯ ಟ್ರೋಲಿಗನ ಕಣ್ಣಿಗೆ ಬಿದ್ದಿದೆ. ಆ ಎವಡಾಸ ಅದ್ಭುತ ಸಂಶೋಧನೆ ಮಾಡಿದವನಂತೆ ಯೂನಿಫಾರ್ಮ್‍ನಲ್ಲಿ ಮೀನು ಮಾರುತ್ತಿದ್ದ ಪಾಪದ ಹುಡುಗಿಯ ಫೋಟೋ, ವೀಡಿಯೋ ಜಾಲತಾಣಕ್ಕೆ ಏರಿಸಿ ಬೀಗಿದ್ದಾನೆ.
ಆತನಂಥದೇ ಗುಣ-ಧರ್ಮದ ಜಾಲತಾಣಿಗರು ಆ ವೀಡಿಯೋ ಅಪಹಾಸ್ಯದಿಂದ ವೈರಲ್ ಮಾಡಿ ತೀಟೆ ತೀರಿಸಿಕೊಂಡಿದ್ದಾರೆ. ಆಕೆ ಮರ್ಯಾದೆಯಿಂದ ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ಕೇಕೆ ಹಾಕಿದ್ದಾರೆ. “…… ಕಾಲೇಜು ಓದೋದು ಬಿಟ್ಟು ಇದೆಂಥ ಕೆಲ್ಸಾ…….?!” ಎಂದು ಗೇಲಿ ಮಾಡಿದ್ದಾರೆ. ಅಸಹಾಯಕ ಹುಡುಗಿಯೊಬ್ಬಳ ಕಾರ್ಪಣ್ಯದ ಜೀವನಕ್ರಮವನ್ನು ಅಣಕಿಸುತ್ತ ಟ್ರೋಲ್‍ಮಾಡಿ ಮಜಾ ತೆಗೆದುಕೊಳ್ಳುವ ಸಂಗತಿಯಾ? ಮನುಷ್ಯರೂಪದ ಮೃಗಗಳಿಗಿದು ನಾಲ್ಕಾರು ದಿನ ಟೈಮ್‍ಪಾಸ್ ಹಾಸ್ಯವಾಗಿರಬಹುದು. ಆದರೆ ಈ ಅಪಮಾನ-ಅಪನಿಂದನೆಯಿಂದ ಸುದ್ದಿಯಾದ ಪಾಪದ ಹುಡುಗಿಯ ಹಿಂದೊಂದು ಕರುಣಾಜನಕ ಕತೆಯೇ ಇದೆ! ವಯಸ್ಸಿಗೆ ಮೀರಿದ ಸಾಂಸಾರಿಕ ಹೊಣೆ ನಿಭಾಯಿಸುತ್ತ ಊಟ-ನಿದ್ದೆ ಬಿಟ್ಟು ರಾತ್ರಿಹಗಲೆನ್ನದೆ ಬದುಕಲು ಆಕೆ ಸೆಣಸಾಡುತ್ತಿದ್ದಾಳೆ.
ಹನಾನ್ ತ್ರಿಶೂರ್‍ನ ಶ್ರೀಮಂತ ಕುಟುಂಬದ ಕೂಸು. ತಂದೆ ಹಮೀದ್, ತಾಯಿ ಜುಹ್ರಾಬಿ. ಒಬ್ಬ ತಮ್ಮನಿದ್ದಾನೆ. ಚಿಕ್ಕವಳಿದ್ದಾಗ ಆಕೆ ಖುಷಿಖುಷಿಯಾಗೇ ಇದ್ದಳು. ಆಕೆ ಪ್ರೈಮರಿಗೆ ಹೋಗುವಾಗ ಅಪ್ಪ ಇದ್ದಕ್ಕಿದ್ದಂತೆ ವಿಪರೀತ ಹೆಂಡ ಕುಡಿಯಲು ಶುರು ಹಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲ, ದಿನವೂ ಕುಡಿದುಬಂದು ಅಮ್ಮನಿಗೆ ಬಡಿಯುತ್ತಿದ್ದ. ಮನೆಯೆಂಬುದು ರೌರವ ನರಕದಂತಾಗಿಹೋಯಿತು. ಹನಾನ್ ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಆಕೆಯ ತಂದೆ-ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ತಂದೆಯೊಂದಿಗಿದ್ದರೆ, ಹನಾನ್ ತಾಯಿ ಜತೆ ಉಳಿದಳು. ತನ್ನ ಮತ್ತು ತಾಯಿಯ ತುತ್ತಿನ ಚೀಲ ತುಂಬಿಸುವ ಜವಾಬ್ದಾರಿ ಹನಾನ್ ಮೇಲೆ ಬಿತ್ತು.
ಆ ನತದೃಷ್ಟ ಹುಡುಗಿ ಧೃತಿಗೆಡಲಿಲ್ಲ ದುಡಿಮೆಯ ದಾರಿ ಹುಡುಕಿದಳು ತಾನು ಶಾಲೆಗೆ ಹೋಗುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಶನ್ ಕೊಡಲಾರಂಭಿಸಿದಳು; ಕರಕುಶಲ ವಸ್ತು, ಕಿವಿಯೋಲೆ ತಯಾರಿಸಿ ಬಂದ ಹಣದಲ್ಲಿ ಜೀವನ ಸಾಗಿಸಹತ್ತಿದಳು. ಕೆಲದಿನದ ಬಳಿಕ ಖಾಸಗಿ ಕಂಪನಿಯೊಂದಕ್ಕೆ ಕಾರ್ಮಿಕಳಾಗಿ ಸೇರಿಕೊಂಡಳು. ಹನಾನ್ ಕಷ್ಟಕ್ಕೆ ಹೆದರಲಿಲ್ಲ. ನೈಟ್‍ಶಿಫ್ಟ್, ಮಾರ್ನಿಂಗ್‍ಶಿಫ್ಟ್ ಅಂತಾ ಹಠದಿಂದ ದುಡಿದಳು. ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಯಂತ್ರಗಳ ವಿಪರೀತ ಶಬ್ದ ಇರುತ್ತಿತ್ತು. ಹೀಗಾಗಿ ಹನಾನ್‍ಗೆ ಶ್ರವಣದೋಷ ಬಾಧಿಸಹತ್ತಿತು. ಹಾಗಾಗಿ ಆ ಕೆಲಸ ಆಕೆ ಅನಿವಾರ್ಯವಾಗಿ ಬಿಡಬೇಕಾಗಿಬಂತು. ಬಿಎಸ್ಸಿ ಓದುತ್ತಿದ್ದ ಹನಾನ್‍ಗೆ ಹೇಗಾದರೂ ಮಾಡಿ ಡಾಕ್ಟರ್ ಆಗಬೇಕೆಂಬ ಹಠ. ಕಂಪನಿ ಕೆಲಸ ಅರಸುತ್ತಲೇ ಇದ್ದಳು.
ಕೆಲವು ದಿನಗಳ ನಂತರ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು. ಇದು ತಾಯಿ-ಮಗಳ ಬದುಕು ಸಾಗಿಸಲು ಸಾಕಾಗುತ್ತಿರಲಿಲ್ಲ. ಮೀನು ಮಾರಾಟ ಮಾಡಿದರೆ ಒಂದಿಷ್ಟು ಹೆಚ್ಚುವರಿ ಕಾಸು ಸಂಪಾದಿಸಬಹುದೆಂದು ಆಕೆಗೆ ಹೊಳೆಯಿತು. ಕಾಲೇಜು ಕ್ಲಾಸ್ ಮುಗಿಯುತ್ತಿದ್ದಂತೆಯೇ ಮೀನು ಮಾರ್ಕೆಟ್ಟಿಗೆ ಹೋಗಿ ಮೀನು ಮಾರಾಟ ಮಾಡಲು ಆರಂಭಿಸಿದಳು. ಒಮ್ಮೊಮ್ಮೆ ಬೆಳಗಿನ ಜಾವ 3.30ಕ್ಕೆ ಮೀನು ಮಾರುಕಟ್ಟೆಗೆ ಹೋಗಿ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದಳು. ನಂತರ ಕಾಲೇಜಿನ ಸಮಯಕ್ಕೆ ಸರಿಯಾಗಿ ಅಲ್ಲಿರುತ್ತಿದ್ದಳು. ಇಂಥದೇ ಒಂದು ದಿನ ಆಕೆ ಮೀನು ಮಾರಲು ಹೋಗಿದ್ದಳು. ಗಡಿಬಿಡಿಯಲ್ಲಿ ಯೂನಿಫಾರ್ಮ್ ತೆಗೆಯಲು ಆಕೆಗೆ ಸಾಧ್ಯವಾಗಿರಲಿಲ್ಲ.
ಆಕೆಯ ಚಿತ್ರ ತೆಗೆದ ಅಧಮ ಮಾನÀವನೊಬ್ಬ ಸಾಮಾಜಿಕ ಮಾಧ್ಯಮಕ್ಕೆ ಟ್ರೋಲ್ ಮಾಡುತ್ತಿದ್ದಂತೆಯೇ ಕೇರಳದಲ್ಲಿ ಅಲ್ಲೋಲಕಲ್ಲೋಲವೇ ಆಯ್ತು. ಈ ಚಿತ್ರ ಶೇರ್ ಮಾಡಿ ಕುಣಿದು ಕುಪ್ಪಳಿಸಿದವರಿಗೆ ಜನ ಉಗಿದರು. ಪರ-ವಿರುದ್ಧ ಅಂತರ್ಜಾಲ ಯುದ್ಧ ನಡೆಯಿತು. ಒಪ್ಪತ್ತು ಗಂಜಿಗಾಗಿ ಹೆಣಗಾಡುತ್ತಿದ್ದ ಹನಾನ್ ದೌರ್ಭಾಗ್ಯವನ್ನು ಜೋಕ್ ಮಾಡಿ ನಕ್ಕ ಟ್ರೋಲಿಗರನ್ನು ಕೇರಳದ ಪಿಣರಾಯಿವಿಜಯನ್ ಸರ್ಕಾರ ಛೀಮಾರಿ ಹಾಕಿತು. ಇಷ್ಟಾದರೂ ನೈತಿಕ ಸ್ಥೈರ್ಯದ ಹನಾನ್ ಅಂಜಲಿಲ್ಲ, ಅಳುಕಲಿಲ್ಲ ತನ್ನ ಪಾಡಿಗೆ ತಾನು ಕಾಲೇಜು, ಮೀನು ಮಾರಾಟ, ಕಂಪನಿ ಚಾಕರಿ, ತಾಯಿಯ ದೇಖರೇಖೆಯ ಜೀವನ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದಳು. ಇದು ಧೂರ್ತರಿಗೆ ನೋಡಲಾಗಲಿಲ್ಲ ಇದು ಹನಾನ್‍ನ ಪ್ರಚಾರದ ತಂತ್ರಗಾರಿ ಎಂದು ಆಲಾಪಿಸಿದರು.
ಇದು ಕೇರಳದಲ್ಲಿ ದೊಡ್ಡ ಸುದ್ದಿ ಸದ್ದು ಮಾಡಿತು. ಸೆಲಿಬ್ರಿಟಿಗಳು ಹನಾನ್ ಪರ ನಿಂತರು. ಸಾಮಾಜಿಕ ಕಾರ್ಯಕರ್ತರು ಸಹಾಯಕ್ಕೆ ಬಂದರು. ಆಕೆಗೆ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಅರಸಿ ಬಂದಿದೆ. ಮೊನ್ನೆ ಹನಾನ್ ತಿರುವನಂತಪುರಂನ ಓಣಮ್, ಬಕ್ರೀದ್ ಖಾದಿ ಎಕ್ಸ್‍ಪೋನಲ್ಲಿ ‘ನಡಿಗೆ’ ಹಾಕಿದ್ದಾಳೆ. ತನ್ಮೂಲಕ ಕುಹಕದ ಕೊಳಕು ಟ್ರೋಲಿಗರಿಗೆ ಕೇರ್ ಮಾಡುವ ಪೈಕಿ ತಾನಲ್ಲವೆಂದು ತೋರಿಸಿಕೊಂಡಿದ್ದಾಳೆ. ಈ ಇಡೀ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕುಳಿತು ಅಮಾಯಕರ ಬದುಕಲ್ಲಿ ಆಟ ಆಡೋರಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆಯ ಎಚ್ಚರಿಕೆ ಕೊಟ್ಟಿದೆ!

-ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...