Homeಸಾಮಾಜಿಕಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

ಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

- Advertisement -
- Advertisement -

ಸಾಮಾಜಿಕ ಜಾಲತಾಣವೆಂಬುದು ಸ್ಯಾಡಿಸ್ಟ್‍ಗಳ ಆಡಂಬೋಲದಂತೆ ಆಗಿಹೋಗಿದೆ! ಇದು ಮಾಹಿತಿ ತಂತ್ರಜ್ಞಾನದ ಘೋರ ದುರಂತವೇ ಸರಿ. ಪರರ ಪಡಿಪಾಟಲು, ಆಸಹಾಯಕತೆ, ನೋವು, ನಷ್ಟ ಅಪಹಾಸ್ಯ ಮಾಡಿ ಟ್ರೋಲಿಸುವ ವಿಕೃತ ಸಂತಾನವೇ ಭಾರತದಲ್ಲಿ ಬೆಳೆದುನಿಂತಿದೆ. ಮಹಾ ಮಾನವತಾವಾದಿ ಧೀಮಂತ ಪತ್ರಕರ್ತೆಯೂ ಆಗಿದ್ದ ಗೌರಿಲಂಕೇಶ್‍ರ ಹತ್ಯೆ ಸಂಭ್ರಮಿಸಿದ್ದ ಕುಹಾಕಿಗಳನ್ನು ಈ ದೇಶದ ಪ್ರಧಾನಿ ಮೋದಿ ಮಹಾತ್ಮನೇ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ! ಸಿದ್ದು ಸಿಎಂ ಆಗಿದ್ದಾಗ ಮಗನನ್ನು ಕಳಕೊಂಡ ನೋವಿನಲ್ಲಿದ್ದ ಸಂದರ್ಭವನ್ನು ಸಾಮಾಜಿಕ ಜಾಲತಾಣದಲ್ಲಿ ಕುಳಿತು ಖುಷಿಯಿಂದ ಅನುಭವಿಸಿದವರೂ ಇದ್ದಾರೆ. ಇಂಥ ಗಲೀಜು ಸಂಸ್ಕøತಿಯ ಟ್ರೋಲಿಗರ ಕುಚೋದ್ಯದಿಂದ ಈಚೆಗೆ ಕೇರಳದಲ್ಲಿ ತಲ್ಲಣವೇ ಆಗಿಹೋಗಿದೆ. ವಿನಾಕಾರಣ ಬಡ-ಮುಗ್ಧ ಹುಡುಗಿಯೊಬ್ಬಳು ಘಾಸಿಗೊಂಡಿದ್ದಾಳೆ!
ಆಕೆಯ ಹೆಸರು ಹನಾನ್ ಹಮೀದ್. ಕೇರಳದ ತ್ರಿಶೂರ್‍ನ ಇಪ್ಪತ್ತೊಂದರ ಬಾಲಕಿ. ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಲೇ ಕಾಲೇಜಿಗೂ ಹೋಗುತ್ತಿದ್ದಾಳೆ; ಕಾಲೇಜು ಮುಗಿಸಿ ಮೀನು ಮಾರುಕಟ್ಟೆಯಲ್ಲಿ ಕುಳಿತು ಮೀನೂ ಮಾರುತ್ತಾಳೆ. ಆಕೆ ಅವಸರದಲ್ಲೊಮ್ಮೆ ಕಾಲೇಜಿನ ಯೂನಿಫಾರ್ಮ್ ತೊಟ್ಟುಕೊಂಡೇ ಮೀನು ಮಾರಾಟಕ್ಕೆ ಕುಳಿತಿದ್ದಳು. ಇದು ಅದ್ಯಾವುದೋ ಕೀಳು ಅಭಿರುಚಿಯ ಟ್ರೋಲಿಗನ ಕಣ್ಣಿಗೆ ಬಿದ್ದಿದೆ. ಆ ಎವಡಾಸ ಅದ್ಭುತ ಸಂಶೋಧನೆ ಮಾಡಿದವನಂತೆ ಯೂನಿಫಾರ್ಮ್‍ನಲ್ಲಿ ಮೀನು ಮಾರುತ್ತಿದ್ದ ಪಾಪದ ಹುಡುಗಿಯ ಫೋಟೋ, ವೀಡಿಯೋ ಜಾಲತಾಣಕ್ಕೆ ಏರಿಸಿ ಬೀಗಿದ್ದಾನೆ.
ಆತನಂಥದೇ ಗುಣ-ಧರ್ಮದ ಜಾಲತಾಣಿಗರು ಆ ವೀಡಿಯೋ ಅಪಹಾಸ್ಯದಿಂದ ವೈರಲ್ ಮಾಡಿ ತೀಟೆ ತೀರಿಸಿಕೊಂಡಿದ್ದಾರೆ. ಆಕೆ ಮರ್ಯಾದೆಯಿಂದ ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ಕೇಕೆ ಹಾಕಿದ್ದಾರೆ. “…… ಕಾಲೇಜು ಓದೋದು ಬಿಟ್ಟು ಇದೆಂಥ ಕೆಲ್ಸಾ…….?!” ಎಂದು ಗೇಲಿ ಮಾಡಿದ್ದಾರೆ. ಅಸಹಾಯಕ ಹುಡುಗಿಯೊಬ್ಬಳ ಕಾರ್ಪಣ್ಯದ ಜೀವನಕ್ರಮವನ್ನು ಅಣಕಿಸುತ್ತ ಟ್ರೋಲ್‍ಮಾಡಿ ಮಜಾ ತೆಗೆದುಕೊಳ್ಳುವ ಸಂಗತಿಯಾ? ಮನುಷ್ಯರೂಪದ ಮೃಗಗಳಿಗಿದು ನಾಲ್ಕಾರು ದಿನ ಟೈಮ್‍ಪಾಸ್ ಹಾಸ್ಯವಾಗಿರಬಹುದು. ಆದರೆ ಈ ಅಪಮಾನ-ಅಪನಿಂದನೆಯಿಂದ ಸುದ್ದಿಯಾದ ಪಾಪದ ಹುಡುಗಿಯ ಹಿಂದೊಂದು ಕರುಣಾಜನಕ ಕತೆಯೇ ಇದೆ! ವಯಸ್ಸಿಗೆ ಮೀರಿದ ಸಾಂಸಾರಿಕ ಹೊಣೆ ನಿಭಾಯಿಸುತ್ತ ಊಟ-ನಿದ್ದೆ ಬಿಟ್ಟು ರಾತ್ರಿಹಗಲೆನ್ನದೆ ಬದುಕಲು ಆಕೆ ಸೆಣಸಾಡುತ್ತಿದ್ದಾಳೆ.
ಹನಾನ್ ತ್ರಿಶೂರ್‍ನ ಶ್ರೀಮಂತ ಕುಟುಂಬದ ಕೂಸು. ತಂದೆ ಹಮೀದ್, ತಾಯಿ ಜುಹ್ರಾಬಿ. ಒಬ್ಬ ತಮ್ಮನಿದ್ದಾನೆ. ಚಿಕ್ಕವಳಿದ್ದಾಗ ಆಕೆ ಖುಷಿಖುಷಿಯಾಗೇ ಇದ್ದಳು. ಆಕೆ ಪ್ರೈಮರಿಗೆ ಹೋಗುವಾಗ ಅಪ್ಪ ಇದ್ದಕ್ಕಿದ್ದಂತೆ ವಿಪರೀತ ಹೆಂಡ ಕುಡಿಯಲು ಶುರು ಹಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲ, ದಿನವೂ ಕುಡಿದುಬಂದು ಅಮ್ಮನಿಗೆ ಬಡಿಯುತ್ತಿದ್ದ. ಮನೆಯೆಂಬುದು ರೌರವ ನರಕದಂತಾಗಿಹೋಯಿತು. ಹನಾನ್ ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಆಕೆಯ ತಂದೆ-ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ತಂದೆಯೊಂದಿಗಿದ್ದರೆ, ಹನಾನ್ ತಾಯಿ ಜತೆ ಉಳಿದಳು. ತನ್ನ ಮತ್ತು ತಾಯಿಯ ತುತ್ತಿನ ಚೀಲ ತುಂಬಿಸುವ ಜವಾಬ್ದಾರಿ ಹನಾನ್ ಮೇಲೆ ಬಿತ್ತು.
ಆ ನತದೃಷ್ಟ ಹುಡುಗಿ ಧೃತಿಗೆಡಲಿಲ್ಲ ದುಡಿಮೆಯ ದಾರಿ ಹುಡುಕಿದಳು ತಾನು ಶಾಲೆಗೆ ಹೋಗುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಶನ್ ಕೊಡಲಾರಂಭಿಸಿದಳು; ಕರಕುಶಲ ವಸ್ತು, ಕಿವಿಯೋಲೆ ತಯಾರಿಸಿ ಬಂದ ಹಣದಲ್ಲಿ ಜೀವನ ಸಾಗಿಸಹತ್ತಿದಳು. ಕೆಲದಿನದ ಬಳಿಕ ಖಾಸಗಿ ಕಂಪನಿಯೊಂದಕ್ಕೆ ಕಾರ್ಮಿಕಳಾಗಿ ಸೇರಿಕೊಂಡಳು. ಹನಾನ್ ಕಷ್ಟಕ್ಕೆ ಹೆದರಲಿಲ್ಲ. ನೈಟ್‍ಶಿಫ್ಟ್, ಮಾರ್ನಿಂಗ್‍ಶಿಫ್ಟ್ ಅಂತಾ ಹಠದಿಂದ ದುಡಿದಳು. ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಯಂತ್ರಗಳ ವಿಪರೀತ ಶಬ್ದ ಇರುತ್ತಿತ್ತು. ಹೀಗಾಗಿ ಹನಾನ್‍ಗೆ ಶ್ರವಣದೋಷ ಬಾಧಿಸಹತ್ತಿತು. ಹಾಗಾಗಿ ಆ ಕೆಲಸ ಆಕೆ ಅನಿವಾರ್ಯವಾಗಿ ಬಿಡಬೇಕಾಗಿಬಂತು. ಬಿಎಸ್ಸಿ ಓದುತ್ತಿದ್ದ ಹನಾನ್‍ಗೆ ಹೇಗಾದರೂ ಮಾಡಿ ಡಾಕ್ಟರ್ ಆಗಬೇಕೆಂಬ ಹಠ. ಕಂಪನಿ ಕೆಲಸ ಅರಸುತ್ತಲೇ ಇದ್ದಳು.
ಕೆಲವು ದಿನಗಳ ನಂತರ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು. ಇದು ತಾಯಿ-ಮಗಳ ಬದುಕು ಸಾಗಿಸಲು ಸಾಕಾಗುತ್ತಿರಲಿಲ್ಲ. ಮೀನು ಮಾರಾಟ ಮಾಡಿದರೆ ಒಂದಿಷ್ಟು ಹೆಚ್ಚುವರಿ ಕಾಸು ಸಂಪಾದಿಸಬಹುದೆಂದು ಆಕೆಗೆ ಹೊಳೆಯಿತು. ಕಾಲೇಜು ಕ್ಲಾಸ್ ಮುಗಿಯುತ್ತಿದ್ದಂತೆಯೇ ಮೀನು ಮಾರ್ಕೆಟ್ಟಿಗೆ ಹೋಗಿ ಮೀನು ಮಾರಾಟ ಮಾಡಲು ಆರಂಭಿಸಿದಳು. ಒಮ್ಮೊಮ್ಮೆ ಬೆಳಗಿನ ಜಾವ 3.30ಕ್ಕೆ ಮೀನು ಮಾರುಕಟ್ಟೆಗೆ ಹೋಗಿ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದಳು. ನಂತರ ಕಾಲೇಜಿನ ಸಮಯಕ್ಕೆ ಸರಿಯಾಗಿ ಅಲ್ಲಿರುತ್ತಿದ್ದಳು. ಇಂಥದೇ ಒಂದು ದಿನ ಆಕೆ ಮೀನು ಮಾರಲು ಹೋಗಿದ್ದಳು. ಗಡಿಬಿಡಿಯಲ್ಲಿ ಯೂನಿಫಾರ್ಮ್ ತೆಗೆಯಲು ಆಕೆಗೆ ಸಾಧ್ಯವಾಗಿರಲಿಲ್ಲ.
ಆಕೆಯ ಚಿತ್ರ ತೆಗೆದ ಅಧಮ ಮಾನÀವನೊಬ್ಬ ಸಾಮಾಜಿಕ ಮಾಧ್ಯಮಕ್ಕೆ ಟ್ರೋಲ್ ಮಾಡುತ್ತಿದ್ದಂತೆಯೇ ಕೇರಳದಲ್ಲಿ ಅಲ್ಲೋಲಕಲ್ಲೋಲವೇ ಆಯ್ತು. ಈ ಚಿತ್ರ ಶೇರ್ ಮಾಡಿ ಕುಣಿದು ಕುಪ್ಪಳಿಸಿದವರಿಗೆ ಜನ ಉಗಿದರು. ಪರ-ವಿರುದ್ಧ ಅಂತರ್ಜಾಲ ಯುದ್ಧ ನಡೆಯಿತು. ಒಪ್ಪತ್ತು ಗಂಜಿಗಾಗಿ ಹೆಣಗಾಡುತ್ತಿದ್ದ ಹನಾನ್ ದೌರ್ಭಾಗ್ಯವನ್ನು ಜೋಕ್ ಮಾಡಿ ನಕ್ಕ ಟ್ರೋಲಿಗರನ್ನು ಕೇರಳದ ಪಿಣರಾಯಿವಿಜಯನ್ ಸರ್ಕಾರ ಛೀಮಾರಿ ಹಾಕಿತು. ಇಷ್ಟಾದರೂ ನೈತಿಕ ಸ್ಥೈರ್ಯದ ಹನಾನ್ ಅಂಜಲಿಲ್ಲ, ಅಳುಕಲಿಲ್ಲ ತನ್ನ ಪಾಡಿಗೆ ತಾನು ಕಾಲೇಜು, ಮೀನು ಮಾರಾಟ, ಕಂಪನಿ ಚಾಕರಿ, ತಾಯಿಯ ದೇಖರೇಖೆಯ ಜೀವನ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದಳು. ಇದು ಧೂರ್ತರಿಗೆ ನೋಡಲಾಗಲಿಲ್ಲ ಇದು ಹನಾನ್‍ನ ಪ್ರಚಾರದ ತಂತ್ರಗಾರಿ ಎಂದು ಆಲಾಪಿಸಿದರು.
ಇದು ಕೇರಳದಲ್ಲಿ ದೊಡ್ಡ ಸುದ್ದಿ ಸದ್ದು ಮಾಡಿತು. ಸೆಲಿಬ್ರಿಟಿಗಳು ಹನಾನ್ ಪರ ನಿಂತರು. ಸಾಮಾಜಿಕ ಕಾರ್ಯಕರ್ತರು ಸಹಾಯಕ್ಕೆ ಬಂದರು. ಆಕೆಗೆ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಅರಸಿ ಬಂದಿದೆ. ಮೊನ್ನೆ ಹನಾನ್ ತಿರುವನಂತಪುರಂನ ಓಣಮ್, ಬಕ್ರೀದ್ ಖಾದಿ ಎಕ್ಸ್‍ಪೋನಲ್ಲಿ ‘ನಡಿಗೆ’ ಹಾಕಿದ್ದಾಳೆ. ತನ್ಮೂಲಕ ಕುಹಕದ ಕೊಳಕು ಟ್ರೋಲಿಗರಿಗೆ ಕೇರ್ ಮಾಡುವ ಪೈಕಿ ತಾನಲ್ಲವೆಂದು ತೋರಿಸಿಕೊಂಡಿದ್ದಾಳೆ. ಈ ಇಡೀ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕುಳಿತು ಅಮಾಯಕರ ಬದುಕಲ್ಲಿ ಆಟ ಆಡೋರಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆಯ ಎಚ್ಚರಿಕೆ ಕೊಟ್ಟಿದೆ!

-ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...