ಸಮಾಜವಾದಿ ಪಕ್ಷದ (ಎಸ್ಪಿ) ಸಂಸದ ಅಖಿಲೇಶ್ ಯಾದವ್ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ವಕ್ಫ್ ಭೂಮಿಯನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಪಕ್ಷ ಈ ಮಸೂದೆಯನ್ನು ವಿರೋಧಿಸುತ್ತದೆ ಎಂದಿರುವ ಅಖಿಲೇಶ್, “ಈ ಮಸೂದೆ ಯಾರಿಗಾಗಿ ತರಲಾಗುತ್ತಿದೆಯೋ, ಅವರ ಮಾತುಗಳಿಗೆ ಪ್ರಾಮುಖ್ಯತೆ ನೀಡಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ ಇನ್ನೇನಿದೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಈ ಮಸೂದೆಯನ್ನು ದೊಡ್ಡ ರಾಜಕೀಯ ತಂತ್ರದ ಭಾಗವಾಗಿ ಬಳಸುತ್ತಿದೆ. ಇದು ವಕ್ಫ್ ಭೂಮಿ ಮಾರಾಟಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಭೂಮಿಯನ್ನು ತುಂಬಾ ಪ್ರೀತಿಸುವ ಪಕ್ಷ. ಅವರಿಗೆ ರೈಲ್ವೆ, ರಕ್ಷಣಾ ಭೂಮಿಗಳನ್ನು ಮಾರಿ ಆಯ್ತು. ಈಗ ವಕ್ಫ್ ಭೂಮಿಯನ್ನು ಮಾರಲು ಮುಂದಾಗಿದ್ದಾರೆ. ಇದೆಲ್ಲವೂ ಅವರ ವೈಫಲ್ಯಗಳನ್ನು ಮರೆಮಾಚುವ ಯೋಜನೆಯಾಗಿದೆ ಎಂದಿದ್ದಾರೆ.
ಬಿಜೆಪಿ ನಾಯಕತ್ವದ ಕುರಿತು ಟೀಕಿಸಿದ ಅಖಿಲೇಶ್, ” ನಮ್ಮ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ರಾಜಕೀಯ ನನಗೆ ‘ಪಾರ್ಟ್ ಟೈಮ್ ಜಾಬ್’ ಎಂದು ಹೇಳಿದ್ದಾರೆ. ಹಾಗಾದರೆ, ಬಿಜೆಪಿ ಹೈಕಮಾಂಡ್ ಏಕೆ ಈ ಪಾರ್ಟ್ ಟೈಮ್ ಜಾಬ್ ಮಾಡುವವರನ್ನು ತೆಗೆದು ಹಾಕುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
‘ವಕ್ಫ್ ಮಸೂದೆ’ ಸಂವಿಧಾನವನ್ನು ದುರ್ಬಲಗೊಳಿಸುವ ಯತ್ನ: ಕೇಂದ್ರದ ವಿರುದ್ಧ ಗೌರವ್ ಗೊಗೊಯ್ ವಾಗ್ದಾಳಿ


