Homeಕರ್ನಾಟಕಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

ಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

- Advertisement -
- Advertisement -

ಚಳಿಗಾಲದಲ್ಲಿ ವಲಸೆ ಬರುವ ದೂರದ ಹಿಮಾಲಯ ಮತ್ತು ಹಲವು ಕಡೆಯ ಹಕ್ಕಿಗಳ ಹಾಡು ಕಾರವಾರದ ಕಾಳಿ ನದಿಯ ಇಕ್ಕೆಲ ಮತ್ತು ಅರಬ್ಭೀ ಸಮುದ್ರದ ದಂಡೆಯಲ್ಲಿ ಕೇಳಿ ಬರಲಾರಂಭಿಸಿದ್ದು ಪಕ್ಷಿ ಪ್ರಿಯರನ್ನು ಖುಷಿ ಪಡಿಸುತ್ತಿದೆ. ನದಿಯ ಎರಡೂ ಕಡೆಯ ಜವುಗು, ಹುಲ್ಲುಗಾವಲು, ಅಳಿವೆ ಹಾಗೂ ಕಡಲಂಚಿಗೆ ಉತ್ತರ ಗೋಲಾರ್ಧದ ತುತ್ತತುದಿಯ ಹಿಮಚ್ಛಾದಿತ ಪ್ರದೇಶದಿಂದ ವಲಸೆ ಬಂದಿರುವ ವಿವಿಧ ಬಗೆಯ ಹಕ್ಕಿಗಳು ಮತ್ತವುಗಳ ಚಲನವಲನಗಳನ್ನು ಕೈಗಾ ಬರ್ಡರ್ಸ್ ತಂಡ ಸೆರೆಹಿಡಿದಿದೆ.

ಕೋವಿಡ್ ಹಾವಳಿಯಿಂದಾಗಿ ಕಳೆದೆರಡು ವರ್ಷದಿಂದ ಕ್ಷೇತ್ರ ಕಾರ್ಯ ಮಾಡಲಾಗದ ಬೇಸರದಲ್ಲಿದ್ದ ಕೈಗಾ ಬರ್ಡರ್ಸ್ ತಂಡವೀಗ ವಲಸೆ ಹಕ್ಕಿಗಳ ಕಲರವ, ಹಾರಾಟ, ಸಂತಾನೋತ್ಪತ್ತಿಯೇ ಮುಂತಾದ ಚಟುವಟಿಕೆಗಳ ದಾಖಲೆಯಲ್ಲಿ ತೊಡಗಿದೆ. ಶಕ್ತಿ ಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಅವೈಜ್ಞಾನಿಕ ಬಳಕೆಯಿಂದ ಭೂಮಂಡಲದ ತಾಪಮಾನ ಏರುಗತಿಯಲ್ಲಿರುವ ಈ ವಿಷಮ ಕಾಲಘಟ್ಟದಲ್ಲಿ ಋತು ಮಾನಗಳ ಬದಲಾವಣೆಯ ಬಹುಮೂಲ್ಯವಾದ ಸೂಚಕಗಳಾದ ಪಕ್ಷಿಗಳ ಸಂರಕ್ಷಣೆಯ ಅರಿವು ಜನರಲ್ಲಿ ಮೂಡಬೇಕಾದ ಅನಿವಾರ್ಯತೆ ಎದುರಾಗಿದೆಯೆಂದು ತಂಡದ ಹಿರಿಯ ಪಕ್ಷಿ ತಜ್ಞ ಜಲೀಲ್ ಬಾರ್ಗಿರ್ ಹೇಳುತ್ತಾರೆ.

ಉತ್ತರ ಯುರೋಪ್, ಸೈಬಿರಿಯಾ, ಫಿನ್ಲ್ಯಾಂಡ್, ಮೆಡಿಟೆರಿಯನ್ ಸಮುದ್ರ, ಲಡಾಕ್, ಟಿಬೆಟ್‌ಗಳಿಂದ ಸಾವಿರಾರು ಕಿಮೀ ದೂರದ ಕಾರವಾರ ನದಿ-ಕಡಲು ದಂಡೆಗೆ ಹಾರಿ ಬಂದಿರುವ ಪಕ್ಷಿಗಳ ಅಪರೂಪದ ಚಿತ್ರ ಕೈಗಾ ಬರ್ಡರ್ಸ್ ಬಳಗ ತೆಗೆದಿದೆ. ಕಿತ್ತಳೆ ಕಾಲಿನ ಕಡಲಹಕ್ಕಿ [RUDDY TURNSTONE], ನೀಲಕತ್ತಿನ ಉಲ್ಲಂಕಿ [Ruff], ಕಡಲ ಉಲ್ಲಂಕಿ [Great Knot], ಬೂದು ಬೆನ್ನಿನ ಕಡಲಕ್ಕಿ [Heuglin’s Gull], ಕೆಂಪು ಕಾಲಿನ ಚಾಣ [Amur Falcon], ಪಟ್ಟೆರೆಕ್ಕೆಯ ಸೆಳೆವ [Montagu’s Harrier], ಪಟ್ಟೆತಲೆ ಹೆಬ್ಬಾತು [Bar Headed Geese] ಮತ್ತು ಬಿಳಿಕತ್ತಿನ ಉಲಿಯಕ್ಕಿ [Lesser Whltethroat] ಕಾರವಾರದ ಸುತ್ತಮುತ್ತ ಕಂಡುಬಂದಿವೆ. ಉತ್ತರ ಗೋಲಾರ್ಧದ ಹಿಮಾವೃತ ಪ್ರದೇಶಗಳ ಅತ್ಯುಗ್ರ ಛಳಿಗಾಲ ತಾಳಲಾಗದೆ ಸ್ವಲ್ಪ ಬೆಚ್ಚಗಿರವ ದಕ್ಷಿಣದತ್ತ ಹಕ್ಕಿಗಳು ವಲಸೆ ಬರುವುದು ಸಾಮಾನ್ಯ.

ಹಿಮ ಪ್ರದೇಶದ ಹಕ್ಕಿಗಳ ಜತೆ ಸ್ಥಳೀಯ ಅಳಿವಿನಂಚಿನ ವಲಸಿಗ ಬಿಳಿ ರಣ ಹದ್ದು [Egyptian Vulture] ಹಾಗೂ ಹಿಮಾಲಯದ ದೊಡ್ಡ ರಣ ಹದ್ದು [Himalayan Griffon Vulture] ಸಹ ಕಂಡುಬಂದಿದೆಯೆಂದು ಕೈಗಾ ಬರ್ಡ್‌ರ್ಸ್ ಬಳಗದವರು ಹೇಳುತ್ತಾರೆ. ಬಿಳಿರಣಹದ್ದು ತರುಣಾವಸ್ಥೆಯಲ್ಲಿ ಕಂಡುಬಂದಿರುವುದು ಅವುಗಳ ಸಂತಾನ ಹತ್ತಿರದಲ್ಲೆ ಆಗಿರುವುದನ್ನು ದೃಢಪಡಿಸುವಂತಿದೆ. ಸತ್ತ ಜಾನುವಾರುಗಳ ಕಳೆಬರದ [ಆಹಾರದ] ಕೊರತೆ, ಪಶುವೈದ್ಯಕೀಯದಲ್ಲಿ ನಿಷೇದಿತ ಔಷಧಿಗಳ ಮಿತಿಮಿಮೀರಿದ ಬಳಕೆ ಮತ್ತು ವಾಸಸ್ಥಳಗಳ ಒತ್ತುವರಿಯಿಂದ ಅಳಿವಿನಂಚಿನಲ್ಲಿರುವ ಬಿಳಿ ರಣಹದ್ದು, ಹಿಮಾಲಯದ ಬೃಹತ್ ಹದ್ದು ಮತ್ತು ಕಡಲ ಉಲ್ಲಂಕಿ ಪ್ರಬೇಧಗಳು ಕಾರವಾರದ ಆಚೀಚೆ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಅಪಾಯದಂಚಿನಲ್ಲಿರುವ ರಣ ಹದ್ದುಗಳ ಸಂರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪಶುಸಂದೋಪನಾ ಇಲಾಖೆಗಳು ಒಂದಾಗಿ ಪ್ರಯತ್ನ ನಡೆಸಬೇಕೆಂದು ಕೈಗಾ ಬರ್ಡರ್ಸ್ ತಂಡದ ಸಂಯೋಜಕ ಮೋಹನದಾಸ್ ಸರ್ಕಾರಕ್ಕೆ ಪತ್ರ ಬರೆದು ಮನವಿಮಾಡಿದ್ದಾರೆ.


ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...