Homeಮುಖಪುಟಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಎರಡು ವಾರಗಳ ಹಿಂದೆ ಸಿನೆಮಾ ಮತ್ತು ಸ್ಟ್ರಕ್ಚರ್ ಬಗ್ಗೆ ಬರೆದಿದ್ದೆ. ಇಂದು ಸಂಘರ್ಷದ ಬಗ್ಗೆ ಬರೆಯಲು ಪ್ರಯತ್ನಿಸುವೆ.
ಇತರ ಕಲಾ ಮಾಧ್ಯಮಗಳನ್ನು ಹೋಲಿಸಿದರೆ ಸಿನೆಮಾಗೆ ತನ್ನದೇ ಆದ ಸಾಧ್ಯತೆಗಳೊಂದಿಗೆ ಇತಿಮಿತಿಗಳೂ ಇವೆ. ಸಿನೆಮಾದಲ್ಲಿ ಒಂದು ನೇರ ಕಥೆ ಇರಲೇಬೇಕು. ಒಬ್ಬ ಮುಖ್ಯ ಪಾತ್ರವನ್ನು ಗುರುತಿಸಲೇಬೇಕು,(ಇದಕ್ಕೆ ಕೆಲವು ಶ್ರೇಷ್ಠ ಅಪವಾದಗಳು ಖಂಡಿತ ಇವೆ.) ಆ ಮುಖ್ಯ ಪಾತ್ರಕ್ಕೆ ಕೆಲವು ಗುರಿಗಳಿರಬೇಕು, ಆ ಗುರಿಗಳಿಗೆ ತದ್ವಿರುದ್ಧವಾಗಿ ಕೆಲವು ಶಕ್ತಿಗಳಿರಬೇಕು. ಆಗ ಉಂಟಾಗುವುದು ಸಂಘರ್ಷ.

ಸಂಘರ್ಷವೇ ಒಂದು ಸಿನೆಮಾದ ಜೀವಾಳ. ಸಂಘರ್ಷ ತಪ್ಪಿದ ತಕ್ಷಣ ಆ ಸಿನೆಮಾ ಬಿದ್ದುಹೋಗುತ್ತದೆ. ನಮ್ಮಲ್ಲಿ ಅನೇಕ ಬರಹಗಾರರು ‘ಒಳ್ಳೆಯ’ ಕಥೆಗಳನ್ನು, ‘ಒಳ್ಳೆಯ’ ಸೀನ್‍ಗಳನ್ನು ಬರೆದು ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಒಳ್ಳೆಯ ಹಾಸ್ಯ, ಭಾವನೆ, ಒಳ್ಳೆಯ ವಿಚಾರಗಳನ್ನೂ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಆ ಎಲ್ಲ ‘ಒಳ್ಳೆಯ’ಗಳು ಸಂಘರ್ಷದ ವ್ಯಾಪ್ತಿಯಲ್ಲಿ ಬಂದಾಗ ಮಾತ್ರ ಕೆಲಸ ಮಾಡುತ್ತವೆ ಇಲ್ಲವಾದರೆ ಅವುಗಳು ಒಳ್ಳೆಯ ಸೀನ್‍ಗಳಾಗೇ ಉಳಿದು ಚಿತ್ರಕ್ಕೆ ಯಾವ ಸಹಾಯವನ್ನೂ ಮಾಡುವುದಿಲ್ಲ.

ಒಂದು ಕಾದಂಬರಿಯಲ್ಲಿ ಪಾತ್ರದ, ಆ ಪಾತ್ರಗಳು ಜೀವಿಸುತ್ತಿರುವ ಸಮಾಜದ ಬಗ್ಗೆ ನೂರಾರು ಪುಟಗಳನ್ನು ಬರೆಯಬಹುದು; ಆ ಪಾತ್ರದ ತಲೆಯೊಳಗೆ ಹೊಕ್ಕಿ ಅಲ್ಲಿ ಆಗುತ್ತಿರುವ ತಲ್ಲಣಗಳ ಬಗ್ಗೆ, ಕನಸು, ನಿರಾಶೆಗಳ ಬಗ್ಗೆಯೂ ಬರೆಯಬಹುದು. ಆದರೆ ಸಿನೆಮಾಗೆ ಆ ಸ್ವಾತಂತ್ರವಿಲ್ಲ. ಇದು ಸಿನೆಮಾದ ಒಂದು ಮಿತಿ. ಈ ಮಿತಿಗಳನ್ನು ಮೀರುತ್ತ, ಆ ತಲ್ಲಣಗಳನ್ನು ದೃಶ್ಯರೂಪಕ್ಕೆ ತರುವಲ್ಲಿ ಅನೇಕ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಆದರೂ ಅಲ್ಲೊಂದು ಸಂಘರ್ಷ ಅತಿಗಿರುತ್ತದೆ.

ಇನ್ನು ಸಂಘರ್ಷಗಳ ಸ್ವರೂಪಗಳನ್ನು ನೋಡುವ. ಮೊದಲನೇಯದು, ನಮಗೆ ಹೆಚ್ಚಾಗಿ ಕಾಣಿಸುವ ಸಂಘರ್ಷವಾದ ಬಾಹ್ಯ ಕಾರಣಗಳಿಂದ ಉಂಟಾಗುವ ಸಂಘರ್ಷ. ಅಂದರೆ, ನಮ್ಮ ನಾಯಕ/ಕಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿರುವಾಗ ಆ ಗುರಿಗೆ ಅಡ್ಡಬರುವ ಅಡೆತಡೆಗಳು ಮೂಲತಃವಾಗಿ ಆ ನಾಯಕಿಯ ಪಾತ್ರದ ಹೊರಗಿರುತ್ತವೆ. ಉದಾಹರಣೆಗೆ, ಆ ಹುಡುಗ ತನಗಿಷ್ಟವಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುವ ಗುರಿಯನ್ನಿಟ್ಟುಕೊಂಡಿರುವಾಗ ಅದಕ್ಕೆ ಹುಡುಗಿಯ ಅಪ್ಪ ವಿರೋಧ ಒಡ್ಡುತ್ತಾನೆ; ಒಂದು ಹಳ್ಳಿಯಲ್ಲಿ ನಾಯಕಿ ಬಡ ಮಕ್ಕಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸುವ ಗುರಿಯನ್ನಿಟ್ಟುಕೊಂಡಿದ್ದಾಳೆ ಆದರೆ ಅಲ್ಲಿ ಖಾಸಗಿ ಶಾಲೆಯನ್ನು ನಡೆಸುವ ಪಟ್ಟಭದ್ರ ಹಿತಾಸಕ್ತಿಗಳು ಇವಳು ಶಾಲೆ ಪ್ರಾರಂಭಿಸಲು ಬಿಡುವುದಿಲ್ಲ.

ಈಗ ಈ ಪ್ರಮುಖ ಪಾತ್ರಧಾರಿಗಳು ತಮ್ಮ ಎದುರಿನ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಸಂಘರ್ಷ. ಇಲ್ಲಿ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಮುಖ್ಯ ಅಥವಾ ಬಡಮಕ್ಕಳಿಗಾಗಿ ಶಾಲೆಗಳನ್ನು ಪ್ರಾರಂಭಿಸುವುದು ಎಷ್ಟು ಒಳ್ಳೆಯ ಕೆಲಸ ಎನ್ನುವುದರ ಬಗ್ಗೆ ಲೆಕ್ಷರ್ ಕೊಡಲು ಅವಕಾಶವಿರುವುದಿಲ್ಲ. ಆಯಾ ಸಂಘರ್ಷಗಳ ವ್ಯಾಪ್ತಿಯಲ್ಲೇ ಈ ಸಂಗತಿಗಳು ಹೊರಬರಬೇಕು.

1998 ರಲ್ಲಿ ತೆರೆಕಂಡ ಸತ್ಯಾ ಚಿತ್ರದಲ್ಲಿ ಒಂದು ಪಾತ್ರ ಜೋಕ್ ಹೇಳುವ ಸನ್ನಿವೇಶವಿದೆ. ಒಂದು ಕನ್‍ಸ್ಟ್ರಕ್ಷನ್ ಆಗುತ್ತಿರುವ ಕಟ್ಟಡದಲ್ಲಿ ಕುಳಿತಾಗ ಸ್ನೇಹಲ್ ದಾಬಿಯ ಪಾತ್ರ ಒಂದು ತರಲೆ ಜೋಕ್ ಹೇಳಲಾರಂಭಿಸುತ್ತಾನೆ. ಆ ಜೋಕ್‍ಗೆ ಪ್ರೇಕ್ಷಕರು ನಗಬೇಕು ಎನ್ನುವಷ್ಟರಲ್ಲಿ ಗುಂಡಿನ ಸುರಿಮಳೆಯಾಗಿ ಅಲ್ಲಿಯ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಆ ಸೀನ್ ಜೋಕ್ ಹೇಳಲಂತೂ ಇದ್ದೇ ಇಲ್ಲ, ಜೋಕ್ ಮುಂದುವರೆಯುತ್ತಿದ್ದಾಗಲೂ ಏನೋ ಆಗುವುದು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಲಿರುತ್ತದೆ. ಗಟ್ಟಿಯಾದ ಸ್ಟ್ರಕ್ಷರ್ ಮತ್ತು ಸಂಘರ್ಷವನ್ನಿಟ್ಟುಕೊಂಡೇ ಲಘು ಸನ್ನಿವೇಶಗಳನ್ನೂ ತೋರಿಸುವುದಕ್ಕೆ ಸತ್ಯಾ ಸಿನೆಮಾ ಒಳ್ಳೆಯ ಉದಾಹರಣೆ.

ಎರಡನೇಯದ್ದು ಆಂತರಿಕ ಸಂಘರ್ಷ. ಒಬ್ಬ ವ್ಯಕ್ತಿಗೆ ಬಾಕ್ಸಿಂಗ್ ಚಾಂಪಿಯನ್‍ಷಿಪ್ ಗೆಲ್ಲಬೇಕಿದೆ, ಒಬ್ಬನಿಗೆ ತಾನು ದುರ್ಬಲ ಎನ್ನುವ ಕೀಳರಿಮೆಯಿದೆ, ಇನ್ನೊಬ್ಬನಿಗೆ ತನ್ನನ್ನು ಯಾರೂ ಇಷ್ಟಪಡಲಾರರು ಎನ್ನುವ ಭಾವನೆಯಿದೆ, ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಒಬ್ಬ ಬಾಲಕಿಯು ಯಾವುದೇ ಸಂಬಂಧವನ್ನು ನಿಭಾಯಿಸಲು ಅಸಮರ್ಥಳಾಗಿದ್ದಾಳೆ. ಈಗ ಇವುಗಳನ್ನು ಎದುರಿಸಬೇಕಿದೆ. ಇಲ್ಲಿಯ ಆಯಾ ನಾಯಕ/ಕಿಗೆ ಇರುವ ಅಡೆತಡೆಗಳು ತನ್ನೊಳಗೇ ಹುದುಗಿವೆ. ತನ್ನೊಳಗೇ ಹುದುಗಿರುವ ಶತ್ರುವನ್ನು ಎದುರಿಸುವುದನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದು ಕಷ್ಟ ಎನಿಸಬಹುದು. ಆದರೆ ಅನಿಸಿದಷ್ಟು ಕಷ್ಟವಲ್ಲ. ಅಲ್ಲಿಯೂ ಬಾಹ್ಯ ಸಂಗತಿಗಳಿವೆ.

ನಾಯಕ/ಕಿಯ ದೈನಂದಿನ ದೈಹಿಕ ಕ್ರಿಯೆಗಳಿಂದಲೇ ಆ ಸಂಘರ್ಷ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ. ತನ್ನ ಸಮಸ್ಯೆ ಮತ್ತು ಅದಕ್ಕಿರುವ ಉತ್ತರಗಳೂ ದೈನಂದಿನ ಕ್ರಿಯೆಗಳಿಂದ ಸ್ಪಷ್ಟವಾಗುವ ಹಾಗೆ ಚಿತ್ರಕಥೆಯನ್ನು ಹೆಣೆಯಬೇಕಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಎರಡೂ ಬಗೆಯ ಸಂಘರ್ಷಗಳು ಎಲ್ಲಾ ಹಂತಗಳಲ್ಲಿ ಪ್ರತ್ಯೇಕವಾಗಿರಬೇಕಿಲ್ಲ. ಬಾಹ್ಯ ಸಂಘರ್ಷದಲ್ಲಿ ಆಂತರಿಕ ಸಂಘರ್ಷವಿದ್ದರೆ, ಆಂತರಿಕ ಸಂಘರ್ಷದ ಕಥೆಗಳಲ್ಲಿ ಬಾಹ್ಯ ಸಂಗತಿಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಚಿತ್ರಕಥೆ ಬರೆಯುವ ರೂಢಿಸಮ್ಮತ ಕಲಿಕೆಯಲ್ಲಿ ನಾಯಕಿ/ಕ ತನ್ನ ಗುರಿಯನ್ನು ತಲುಪಲು ಹರಸಾಹಸ ಪಡುತ್ತಾಳೆ/ನೆ; ಅವಳಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ; ಚಿತ್ರದಲ್ಲಿ ಆಗುವ ಹೆಚ್ಚಿನ ಘಟನೆಗಳನ್ನು ನಾಯಕಿಯೇ ಮೊದಲು ಮಾಡುತ್ತಾಳೆ ಅದರಿಂದ ಪ್ರೇಕ್ಷಕ ತನ್ನನ್ನು ಆ ನಾಯಕಿಯಲ್ಲಿ ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆ. ಆದರೆ ಇವ್ಯಾವೂ ಅನಿವಾರ್ಯವಲ್ಲ. ಅನೇಕ ಕಥೆಗಳಲ್ಲಿ ನಾಯಕಿಗೆ ತನ್ನ ಗುರಿಯ ಅರಿವು ಇರುವುದಿಲ್ಲ. ಪರಿಸ್ಥಿತಿಯ ಕೂಸು ಆ ನಾಯಕಿ. ಅದರರ್ಥ ಅಲ್ಲಿ ಸಂಘರ್ಷ ತಪ್ಪಿಲ್ಲ.

ತನಗರಿವಿಲ್ಲದೇ ಆ ನಾಯಕಿ ಹೋರಾಟದ ಪಯಣವನ್ನು ಕ್ರಮಿಸುತ್ತಾಳೆ. ಕೆಲವು ಚಿತ್ರಗಳಲ್ಲಿ ನಾಯಕಿಯ ಹೋರಾಟ, ಸಂಘರ್ಷ ಸ್ಪಷ್ಟವಾಗಿ ಕಂಡುಬರುವುದಿಲ್ಲ. ಮತ್ತು ಆ ಸಂಘರ್ಷ ಅವಳದ್ದೇ ಆಗಿರಬೇಕೆನ್ನುವ ನಿಯಮವೂ ಇಲ್ಲ. ಅಲೆಕ್ಸಾಂಡರ್ ಪೇನ್‍ನ ಮೊದಲ ಚಿತ್ರ ಸಿಟಿಝನ್ ರೂತ್‍ನಲ್ಲಿ ನಾಯಕಿ ರೂತ್ ಗರ್ಭಿಣಿ. ರಸ್ತೆಯಲ್ಲಿ ಬದುಕುತ್ತಿರುವ ಅವಳಿಗೆ ಮಗುವನ್ನು ಉಳಿಸಿಕೊಳ್ಳಬೇಕೇ, ಗರ್ಭಪಾತ ಮಾಡಿಸಿಕೊಳ್ಳಬೇಕೇ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ತನ್ನ ಹೊರಗಿನ ಪರಿಸ್ಥಿತಿ ಬದಲಾದಂತೆ ತನಗೆ ಸೂಕ್ತವೆನಿಸಿದ ಹಾಗೆ ಅವಳು ಪ್ರತಿಕ್ರಿಯಿಸುತ್ತಾಳೆ. ಅಬೌಟ್ ಶ್ಮಿತ್ ಚಿತ್ರದಲ್ಲಿ ನಾಯಕ ಶ್ಮಿತ್ ಈಗ ತಾನೆ ನಿವೃತ್ತಿ ಹೊಂದಿದ್ದಾನೆ. ಮುಂದೇನು ಮಾಡಬೇಕೆನ್ನುವುದು ತಿಳಿಯದು. ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಲೇ ಅವನು ತನ್ನ ಬಗ್ಗೆ ಕಂಡುಕೊಳ್ಳುತ್ತಾನೆ. ಆದರೆ ಅದರಲ್ಲೂ ಸಂಘರ್ಷವಿದೆ.

ಯಾವುದೇ ಸಂಘರ್ಷದಲ್ಲಿ ನಾಯಕಿ ಸರಿ ಎನಿಸುವ ದಾರಿಯಲ್ಲಿದ್ದು, ಆ ನಾಯಕಿಯ ವಿರುದ್ಧದ ಶಕ್ತಿಗಳು ತಪ್ಪಾದ ದಾರಿಯಲ್ಲೇ ಇರಬೇಕು ಎನ್ನುವ ಅನಿವಾರ್ಯವೂ ಇಲ್ಲ. ನಾಯಕಿಯೊಂದಿಗೆ ಅವಳ ಶತ್ರುಗಳೂ ಪರಿಸ್ಥಿತಿಯ ಕೂಸುಗಳೇ. ಆ ಶಕ್ತಿಗಳಿಗೂ ತಮ್ಮದೇ ಆದ ಕಾರಣಗಳಿರುತ್ತವೆ. ಅದೇ ಕಾರಣಕ್ಕೆ ಅನೇಕ ಸಲ ಖಳನಾಯಕರ ಪಾತ್ರಗಳೂ ನಮಗೆ ಇಷ್ಟವಾಗುತ್ತವೆ.
ನಾಯಕಿಯ ಈ ಸಂಘರ್ಷದಲ್ಲಿ ಯಾರು ಗೆಲ್ಲಬೇಕು ಎನ್ನುವುದು ಅಷ್ಟು ಮುಖ್ಯವಲ್ಲ. ನಾಯಕಿ ತನ್ನ ಗುರಿ ಮುಟ್ಟುವಲ್ಲಿ ವಿಫಲವಾದರೂ ಸಂಘರ್ಷ ನಿರಂತರವಾಗಿರುವುದರಿಂದ ಚಿತ್ರ ಗೆಲ್ಲುತ್ತದೆ. ಆ ಚಿತ್ರದ ಆಶಯ ಮುಟ್ಟುತ್ತದೆ. ಆದರೆ ಆ ಸೋಲು ಗೆಲುವಿನ ದಡಕ್ಕೆ ಮುಟ್ಟಿಸುವುದು ಚಿತ್ರದ ಕರ್ತವ್ಯ. ಸಿನೆಮಾದ ಅಂತ್ಯದಲ್ಲಿ ಆ ಸಂಘರ್ಷ ಮುಕ್ತಾಯವಾಗುತ್ತದೆ ಅಥವಾ ಇನ್ನೊಂದು ಸ್ವರೂಪವನ್ನು ಪಡೆದುಕೊಳ್ಳುತ್ತದೆ. ನ್ಯೂಟನ್‍ನ ನಿಯಮದಂತೆ ಪ್ರತೀ ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದಾಗ ಸಂಘರ್ಷ ಎನ್ನುವುದು ನಿರಂತರವಲ್ಲದೇ?

ಇದನ್ನು ಓದಿ: ಸಿನಿಮಾ ಮತ್ತು ಸಂದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...