Homeಮುಖಪುಟಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಎರಡು ವಾರಗಳ ಹಿಂದೆ ಸಿನೆಮಾ ಮತ್ತು ಸ್ಟ್ರಕ್ಚರ್ ಬಗ್ಗೆ ಬರೆದಿದ್ದೆ. ಇಂದು ಸಂಘರ್ಷದ ಬಗ್ಗೆ ಬರೆಯಲು ಪ್ರಯತ್ನಿಸುವೆ.
ಇತರ ಕಲಾ ಮಾಧ್ಯಮಗಳನ್ನು ಹೋಲಿಸಿದರೆ ಸಿನೆಮಾಗೆ ತನ್ನದೇ ಆದ ಸಾಧ್ಯತೆಗಳೊಂದಿಗೆ ಇತಿಮಿತಿಗಳೂ ಇವೆ. ಸಿನೆಮಾದಲ್ಲಿ ಒಂದು ನೇರ ಕಥೆ ಇರಲೇಬೇಕು. ಒಬ್ಬ ಮುಖ್ಯ ಪಾತ್ರವನ್ನು ಗುರುತಿಸಲೇಬೇಕು,(ಇದಕ್ಕೆ ಕೆಲವು ಶ್ರೇಷ್ಠ ಅಪವಾದಗಳು ಖಂಡಿತ ಇವೆ.) ಆ ಮುಖ್ಯ ಪಾತ್ರಕ್ಕೆ ಕೆಲವು ಗುರಿಗಳಿರಬೇಕು, ಆ ಗುರಿಗಳಿಗೆ ತದ್ವಿರುದ್ಧವಾಗಿ ಕೆಲವು ಶಕ್ತಿಗಳಿರಬೇಕು. ಆಗ ಉಂಟಾಗುವುದು ಸಂಘರ್ಷ.

ಸಂಘರ್ಷವೇ ಒಂದು ಸಿನೆಮಾದ ಜೀವಾಳ. ಸಂಘರ್ಷ ತಪ್ಪಿದ ತಕ್ಷಣ ಆ ಸಿನೆಮಾ ಬಿದ್ದುಹೋಗುತ್ತದೆ. ನಮ್ಮಲ್ಲಿ ಅನೇಕ ಬರಹಗಾರರು ‘ಒಳ್ಳೆಯ’ ಕಥೆಗಳನ್ನು, ‘ಒಳ್ಳೆಯ’ ಸೀನ್‍ಗಳನ್ನು ಬರೆದು ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಒಳ್ಳೆಯ ಹಾಸ್ಯ, ಭಾವನೆ, ಒಳ್ಳೆಯ ವಿಚಾರಗಳನ್ನೂ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಆ ಎಲ್ಲ ‘ಒಳ್ಳೆಯ’ಗಳು ಸಂಘರ್ಷದ ವ್ಯಾಪ್ತಿಯಲ್ಲಿ ಬಂದಾಗ ಮಾತ್ರ ಕೆಲಸ ಮಾಡುತ್ತವೆ ಇಲ್ಲವಾದರೆ ಅವುಗಳು ಒಳ್ಳೆಯ ಸೀನ್‍ಗಳಾಗೇ ಉಳಿದು ಚಿತ್ರಕ್ಕೆ ಯಾವ ಸಹಾಯವನ್ನೂ ಮಾಡುವುದಿಲ್ಲ.

ಒಂದು ಕಾದಂಬರಿಯಲ್ಲಿ ಪಾತ್ರದ, ಆ ಪಾತ್ರಗಳು ಜೀವಿಸುತ್ತಿರುವ ಸಮಾಜದ ಬಗ್ಗೆ ನೂರಾರು ಪುಟಗಳನ್ನು ಬರೆಯಬಹುದು; ಆ ಪಾತ್ರದ ತಲೆಯೊಳಗೆ ಹೊಕ್ಕಿ ಅಲ್ಲಿ ಆಗುತ್ತಿರುವ ತಲ್ಲಣಗಳ ಬಗ್ಗೆ, ಕನಸು, ನಿರಾಶೆಗಳ ಬಗ್ಗೆಯೂ ಬರೆಯಬಹುದು. ಆದರೆ ಸಿನೆಮಾಗೆ ಆ ಸ್ವಾತಂತ್ರವಿಲ್ಲ. ಇದು ಸಿನೆಮಾದ ಒಂದು ಮಿತಿ. ಈ ಮಿತಿಗಳನ್ನು ಮೀರುತ್ತ, ಆ ತಲ್ಲಣಗಳನ್ನು ದೃಶ್ಯರೂಪಕ್ಕೆ ತರುವಲ್ಲಿ ಅನೇಕ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಆದರೂ ಅಲ್ಲೊಂದು ಸಂಘರ್ಷ ಅತಿಗಿರುತ್ತದೆ.

ಇನ್ನು ಸಂಘರ್ಷಗಳ ಸ್ವರೂಪಗಳನ್ನು ನೋಡುವ. ಮೊದಲನೇಯದು, ನಮಗೆ ಹೆಚ್ಚಾಗಿ ಕಾಣಿಸುವ ಸಂಘರ್ಷವಾದ ಬಾಹ್ಯ ಕಾರಣಗಳಿಂದ ಉಂಟಾಗುವ ಸಂಘರ್ಷ. ಅಂದರೆ, ನಮ್ಮ ನಾಯಕ/ಕಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿರುವಾಗ ಆ ಗುರಿಗೆ ಅಡ್ಡಬರುವ ಅಡೆತಡೆಗಳು ಮೂಲತಃವಾಗಿ ಆ ನಾಯಕಿಯ ಪಾತ್ರದ ಹೊರಗಿರುತ್ತವೆ. ಉದಾಹರಣೆಗೆ, ಆ ಹುಡುಗ ತನಗಿಷ್ಟವಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುವ ಗುರಿಯನ್ನಿಟ್ಟುಕೊಂಡಿರುವಾಗ ಅದಕ್ಕೆ ಹುಡುಗಿಯ ಅಪ್ಪ ವಿರೋಧ ಒಡ್ಡುತ್ತಾನೆ; ಒಂದು ಹಳ್ಳಿಯಲ್ಲಿ ನಾಯಕಿ ಬಡ ಮಕ್ಕಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸುವ ಗುರಿಯನ್ನಿಟ್ಟುಕೊಂಡಿದ್ದಾಳೆ ಆದರೆ ಅಲ್ಲಿ ಖಾಸಗಿ ಶಾಲೆಯನ್ನು ನಡೆಸುವ ಪಟ್ಟಭದ್ರ ಹಿತಾಸಕ್ತಿಗಳು ಇವಳು ಶಾಲೆ ಪ್ರಾರಂಭಿಸಲು ಬಿಡುವುದಿಲ್ಲ.

ಈಗ ಈ ಪ್ರಮುಖ ಪಾತ್ರಧಾರಿಗಳು ತಮ್ಮ ಎದುರಿನ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಸಂಘರ್ಷ. ಇಲ್ಲಿ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಮುಖ್ಯ ಅಥವಾ ಬಡಮಕ್ಕಳಿಗಾಗಿ ಶಾಲೆಗಳನ್ನು ಪ್ರಾರಂಭಿಸುವುದು ಎಷ್ಟು ಒಳ್ಳೆಯ ಕೆಲಸ ಎನ್ನುವುದರ ಬಗ್ಗೆ ಲೆಕ್ಷರ್ ಕೊಡಲು ಅವಕಾಶವಿರುವುದಿಲ್ಲ. ಆಯಾ ಸಂಘರ್ಷಗಳ ವ್ಯಾಪ್ತಿಯಲ್ಲೇ ಈ ಸಂಗತಿಗಳು ಹೊರಬರಬೇಕು.

1998 ರಲ್ಲಿ ತೆರೆಕಂಡ ಸತ್ಯಾ ಚಿತ್ರದಲ್ಲಿ ಒಂದು ಪಾತ್ರ ಜೋಕ್ ಹೇಳುವ ಸನ್ನಿವೇಶವಿದೆ. ಒಂದು ಕನ್‍ಸ್ಟ್ರಕ್ಷನ್ ಆಗುತ್ತಿರುವ ಕಟ್ಟಡದಲ್ಲಿ ಕುಳಿತಾಗ ಸ್ನೇಹಲ್ ದಾಬಿಯ ಪಾತ್ರ ಒಂದು ತರಲೆ ಜೋಕ್ ಹೇಳಲಾರಂಭಿಸುತ್ತಾನೆ. ಆ ಜೋಕ್‍ಗೆ ಪ್ರೇಕ್ಷಕರು ನಗಬೇಕು ಎನ್ನುವಷ್ಟರಲ್ಲಿ ಗುಂಡಿನ ಸುರಿಮಳೆಯಾಗಿ ಅಲ್ಲಿಯ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಆ ಸೀನ್ ಜೋಕ್ ಹೇಳಲಂತೂ ಇದ್ದೇ ಇಲ್ಲ, ಜೋಕ್ ಮುಂದುವರೆಯುತ್ತಿದ್ದಾಗಲೂ ಏನೋ ಆಗುವುದು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಲಿರುತ್ತದೆ. ಗಟ್ಟಿಯಾದ ಸ್ಟ್ರಕ್ಷರ್ ಮತ್ತು ಸಂಘರ್ಷವನ್ನಿಟ್ಟುಕೊಂಡೇ ಲಘು ಸನ್ನಿವೇಶಗಳನ್ನೂ ತೋರಿಸುವುದಕ್ಕೆ ಸತ್ಯಾ ಸಿನೆಮಾ ಒಳ್ಳೆಯ ಉದಾಹರಣೆ.

ಎರಡನೇಯದ್ದು ಆಂತರಿಕ ಸಂಘರ್ಷ. ಒಬ್ಬ ವ್ಯಕ್ತಿಗೆ ಬಾಕ್ಸಿಂಗ್ ಚಾಂಪಿಯನ್‍ಷಿಪ್ ಗೆಲ್ಲಬೇಕಿದೆ, ಒಬ್ಬನಿಗೆ ತಾನು ದುರ್ಬಲ ಎನ್ನುವ ಕೀಳರಿಮೆಯಿದೆ, ಇನ್ನೊಬ್ಬನಿಗೆ ತನ್ನನ್ನು ಯಾರೂ ಇಷ್ಟಪಡಲಾರರು ಎನ್ನುವ ಭಾವನೆಯಿದೆ, ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಒಬ್ಬ ಬಾಲಕಿಯು ಯಾವುದೇ ಸಂಬಂಧವನ್ನು ನಿಭಾಯಿಸಲು ಅಸಮರ್ಥಳಾಗಿದ್ದಾಳೆ. ಈಗ ಇವುಗಳನ್ನು ಎದುರಿಸಬೇಕಿದೆ. ಇಲ್ಲಿಯ ಆಯಾ ನಾಯಕ/ಕಿಗೆ ಇರುವ ಅಡೆತಡೆಗಳು ತನ್ನೊಳಗೇ ಹುದುಗಿವೆ. ತನ್ನೊಳಗೇ ಹುದುಗಿರುವ ಶತ್ರುವನ್ನು ಎದುರಿಸುವುದನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದು ಕಷ್ಟ ಎನಿಸಬಹುದು. ಆದರೆ ಅನಿಸಿದಷ್ಟು ಕಷ್ಟವಲ್ಲ. ಅಲ್ಲಿಯೂ ಬಾಹ್ಯ ಸಂಗತಿಗಳಿವೆ.

ನಾಯಕ/ಕಿಯ ದೈನಂದಿನ ದೈಹಿಕ ಕ್ರಿಯೆಗಳಿಂದಲೇ ಆ ಸಂಘರ್ಷ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ. ತನ್ನ ಸಮಸ್ಯೆ ಮತ್ತು ಅದಕ್ಕಿರುವ ಉತ್ತರಗಳೂ ದೈನಂದಿನ ಕ್ರಿಯೆಗಳಿಂದ ಸ್ಪಷ್ಟವಾಗುವ ಹಾಗೆ ಚಿತ್ರಕಥೆಯನ್ನು ಹೆಣೆಯಬೇಕಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಎರಡೂ ಬಗೆಯ ಸಂಘರ್ಷಗಳು ಎಲ್ಲಾ ಹಂತಗಳಲ್ಲಿ ಪ್ರತ್ಯೇಕವಾಗಿರಬೇಕಿಲ್ಲ. ಬಾಹ್ಯ ಸಂಘರ್ಷದಲ್ಲಿ ಆಂತರಿಕ ಸಂಘರ್ಷವಿದ್ದರೆ, ಆಂತರಿಕ ಸಂಘರ್ಷದ ಕಥೆಗಳಲ್ಲಿ ಬಾಹ್ಯ ಸಂಗತಿಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಚಿತ್ರಕಥೆ ಬರೆಯುವ ರೂಢಿಸಮ್ಮತ ಕಲಿಕೆಯಲ್ಲಿ ನಾಯಕಿ/ಕ ತನ್ನ ಗುರಿಯನ್ನು ತಲುಪಲು ಹರಸಾಹಸ ಪಡುತ್ತಾಳೆ/ನೆ; ಅವಳಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ; ಚಿತ್ರದಲ್ಲಿ ಆಗುವ ಹೆಚ್ಚಿನ ಘಟನೆಗಳನ್ನು ನಾಯಕಿಯೇ ಮೊದಲು ಮಾಡುತ್ತಾಳೆ ಅದರಿಂದ ಪ್ರೇಕ್ಷಕ ತನ್ನನ್ನು ಆ ನಾಯಕಿಯಲ್ಲಿ ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆ. ಆದರೆ ಇವ್ಯಾವೂ ಅನಿವಾರ್ಯವಲ್ಲ. ಅನೇಕ ಕಥೆಗಳಲ್ಲಿ ನಾಯಕಿಗೆ ತನ್ನ ಗುರಿಯ ಅರಿವು ಇರುವುದಿಲ್ಲ. ಪರಿಸ್ಥಿತಿಯ ಕೂಸು ಆ ನಾಯಕಿ. ಅದರರ್ಥ ಅಲ್ಲಿ ಸಂಘರ್ಷ ತಪ್ಪಿಲ್ಲ.

ತನಗರಿವಿಲ್ಲದೇ ಆ ನಾಯಕಿ ಹೋರಾಟದ ಪಯಣವನ್ನು ಕ್ರಮಿಸುತ್ತಾಳೆ. ಕೆಲವು ಚಿತ್ರಗಳಲ್ಲಿ ನಾಯಕಿಯ ಹೋರಾಟ, ಸಂಘರ್ಷ ಸ್ಪಷ್ಟವಾಗಿ ಕಂಡುಬರುವುದಿಲ್ಲ. ಮತ್ತು ಆ ಸಂಘರ್ಷ ಅವಳದ್ದೇ ಆಗಿರಬೇಕೆನ್ನುವ ನಿಯಮವೂ ಇಲ್ಲ. ಅಲೆಕ್ಸಾಂಡರ್ ಪೇನ್‍ನ ಮೊದಲ ಚಿತ್ರ ಸಿಟಿಝನ್ ರೂತ್‍ನಲ್ಲಿ ನಾಯಕಿ ರೂತ್ ಗರ್ಭಿಣಿ. ರಸ್ತೆಯಲ್ಲಿ ಬದುಕುತ್ತಿರುವ ಅವಳಿಗೆ ಮಗುವನ್ನು ಉಳಿಸಿಕೊಳ್ಳಬೇಕೇ, ಗರ್ಭಪಾತ ಮಾಡಿಸಿಕೊಳ್ಳಬೇಕೇ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ತನ್ನ ಹೊರಗಿನ ಪರಿಸ್ಥಿತಿ ಬದಲಾದಂತೆ ತನಗೆ ಸೂಕ್ತವೆನಿಸಿದ ಹಾಗೆ ಅವಳು ಪ್ರತಿಕ್ರಿಯಿಸುತ್ತಾಳೆ. ಅಬೌಟ್ ಶ್ಮಿತ್ ಚಿತ್ರದಲ್ಲಿ ನಾಯಕ ಶ್ಮಿತ್ ಈಗ ತಾನೆ ನಿವೃತ್ತಿ ಹೊಂದಿದ್ದಾನೆ. ಮುಂದೇನು ಮಾಡಬೇಕೆನ್ನುವುದು ತಿಳಿಯದು. ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಲೇ ಅವನು ತನ್ನ ಬಗ್ಗೆ ಕಂಡುಕೊಳ್ಳುತ್ತಾನೆ. ಆದರೆ ಅದರಲ್ಲೂ ಸಂಘರ್ಷವಿದೆ.

ಯಾವುದೇ ಸಂಘರ್ಷದಲ್ಲಿ ನಾಯಕಿ ಸರಿ ಎನಿಸುವ ದಾರಿಯಲ್ಲಿದ್ದು, ಆ ನಾಯಕಿಯ ವಿರುದ್ಧದ ಶಕ್ತಿಗಳು ತಪ್ಪಾದ ದಾರಿಯಲ್ಲೇ ಇರಬೇಕು ಎನ್ನುವ ಅನಿವಾರ್ಯವೂ ಇಲ್ಲ. ನಾಯಕಿಯೊಂದಿಗೆ ಅವಳ ಶತ್ರುಗಳೂ ಪರಿಸ್ಥಿತಿಯ ಕೂಸುಗಳೇ. ಆ ಶಕ್ತಿಗಳಿಗೂ ತಮ್ಮದೇ ಆದ ಕಾರಣಗಳಿರುತ್ತವೆ. ಅದೇ ಕಾರಣಕ್ಕೆ ಅನೇಕ ಸಲ ಖಳನಾಯಕರ ಪಾತ್ರಗಳೂ ನಮಗೆ ಇಷ್ಟವಾಗುತ್ತವೆ.
ನಾಯಕಿಯ ಈ ಸಂಘರ್ಷದಲ್ಲಿ ಯಾರು ಗೆಲ್ಲಬೇಕು ಎನ್ನುವುದು ಅಷ್ಟು ಮುಖ್ಯವಲ್ಲ. ನಾಯಕಿ ತನ್ನ ಗುರಿ ಮುಟ್ಟುವಲ್ಲಿ ವಿಫಲವಾದರೂ ಸಂಘರ್ಷ ನಿರಂತರವಾಗಿರುವುದರಿಂದ ಚಿತ್ರ ಗೆಲ್ಲುತ್ತದೆ. ಆ ಚಿತ್ರದ ಆಶಯ ಮುಟ್ಟುತ್ತದೆ. ಆದರೆ ಆ ಸೋಲು ಗೆಲುವಿನ ದಡಕ್ಕೆ ಮುಟ್ಟಿಸುವುದು ಚಿತ್ರದ ಕರ್ತವ್ಯ. ಸಿನೆಮಾದ ಅಂತ್ಯದಲ್ಲಿ ಆ ಸಂಘರ್ಷ ಮುಕ್ತಾಯವಾಗುತ್ತದೆ ಅಥವಾ ಇನ್ನೊಂದು ಸ್ವರೂಪವನ್ನು ಪಡೆದುಕೊಳ್ಳುತ್ತದೆ. ನ್ಯೂಟನ್‍ನ ನಿಯಮದಂತೆ ಪ್ರತೀ ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದಾಗ ಸಂಘರ್ಷ ಎನ್ನುವುದು ನಿರಂತರವಲ್ಲದೇ?

ಇದನ್ನು ಓದಿ: ಸಿನಿಮಾ ಮತ್ತು ಸಂದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...