Homeಮುಖಪುಟಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಎರಡು ವಾರಗಳ ಹಿಂದೆ ಸಿನೆಮಾ ಮತ್ತು ಸ್ಟ್ರಕ್ಚರ್ ಬಗ್ಗೆ ಬರೆದಿದ್ದೆ. ಇಂದು ಸಂಘರ್ಷದ ಬಗ್ಗೆ ಬರೆಯಲು ಪ್ರಯತ್ನಿಸುವೆ.
ಇತರ ಕಲಾ ಮಾಧ್ಯಮಗಳನ್ನು ಹೋಲಿಸಿದರೆ ಸಿನೆಮಾಗೆ ತನ್ನದೇ ಆದ ಸಾಧ್ಯತೆಗಳೊಂದಿಗೆ ಇತಿಮಿತಿಗಳೂ ಇವೆ. ಸಿನೆಮಾದಲ್ಲಿ ಒಂದು ನೇರ ಕಥೆ ಇರಲೇಬೇಕು. ಒಬ್ಬ ಮುಖ್ಯ ಪಾತ್ರವನ್ನು ಗುರುತಿಸಲೇಬೇಕು,(ಇದಕ್ಕೆ ಕೆಲವು ಶ್ರೇಷ್ಠ ಅಪವಾದಗಳು ಖಂಡಿತ ಇವೆ.) ಆ ಮುಖ್ಯ ಪಾತ್ರಕ್ಕೆ ಕೆಲವು ಗುರಿಗಳಿರಬೇಕು, ಆ ಗುರಿಗಳಿಗೆ ತದ್ವಿರುದ್ಧವಾಗಿ ಕೆಲವು ಶಕ್ತಿಗಳಿರಬೇಕು. ಆಗ ಉಂಟಾಗುವುದು ಸಂಘರ್ಷ.

ಸಂಘರ್ಷವೇ ಒಂದು ಸಿನೆಮಾದ ಜೀವಾಳ. ಸಂಘರ್ಷ ತಪ್ಪಿದ ತಕ್ಷಣ ಆ ಸಿನೆಮಾ ಬಿದ್ದುಹೋಗುತ್ತದೆ. ನಮ್ಮಲ್ಲಿ ಅನೇಕ ಬರಹಗಾರರು ‘ಒಳ್ಳೆಯ’ ಕಥೆಗಳನ್ನು, ‘ಒಳ್ಳೆಯ’ ಸೀನ್‍ಗಳನ್ನು ಬರೆದು ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಒಳ್ಳೆಯ ಹಾಸ್ಯ, ಭಾವನೆ, ಒಳ್ಳೆಯ ವಿಚಾರಗಳನ್ನೂ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಆ ಎಲ್ಲ ‘ಒಳ್ಳೆಯ’ಗಳು ಸಂಘರ್ಷದ ವ್ಯಾಪ್ತಿಯಲ್ಲಿ ಬಂದಾಗ ಮಾತ್ರ ಕೆಲಸ ಮಾಡುತ್ತವೆ ಇಲ್ಲವಾದರೆ ಅವುಗಳು ಒಳ್ಳೆಯ ಸೀನ್‍ಗಳಾಗೇ ಉಳಿದು ಚಿತ್ರಕ್ಕೆ ಯಾವ ಸಹಾಯವನ್ನೂ ಮಾಡುವುದಿಲ್ಲ.

ಒಂದು ಕಾದಂಬರಿಯಲ್ಲಿ ಪಾತ್ರದ, ಆ ಪಾತ್ರಗಳು ಜೀವಿಸುತ್ತಿರುವ ಸಮಾಜದ ಬಗ್ಗೆ ನೂರಾರು ಪುಟಗಳನ್ನು ಬರೆಯಬಹುದು; ಆ ಪಾತ್ರದ ತಲೆಯೊಳಗೆ ಹೊಕ್ಕಿ ಅಲ್ಲಿ ಆಗುತ್ತಿರುವ ತಲ್ಲಣಗಳ ಬಗ್ಗೆ, ಕನಸು, ನಿರಾಶೆಗಳ ಬಗ್ಗೆಯೂ ಬರೆಯಬಹುದು. ಆದರೆ ಸಿನೆಮಾಗೆ ಆ ಸ್ವಾತಂತ್ರವಿಲ್ಲ. ಇದು ಸಿನೆಮಾದ ಒಂದು ಮಿತಿ. ಈ ಮಿತಿಗಳನ್ನು ಮೀರುತ್ತ, ಆ ತಲ್ಲಣಗಳನ್ನು ದೃಶ್ಯರೂಪಕ್ಕೆ ತರುವಲ್ಲಿ ಅನೇಕ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಆದರೂ ಅಲ್ಲೊಂದು ಸಂಘರ್ಷ ಅತಿಗಿರುತ್ತದೆ.

ಇನ್ನು ಸಂಘರ್ಷಗಳ ಸ್ವರೂಪಗಳನ್ನು ನೋಡುವ. ಮೊದಲನೇಯದು, ನಮಗೆ ಹೆಚ್ಚಾಗಿ ಕಾಣಿಸುವ ಸಂಘರ್ಷವಾದ ಬಾಹ್ಯ ಕಾರಣಗಳಿಂದ ಉಂಟಾಗುವ ಸಂಘರ್ಷ. ಅಂದರೆ, ನಮ್ಮ ನಾಯಕ/ಕಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿರುವಾಗ ಆ ಗುರಿಗೆ ಅಡ್ಡಬರುವ ಅಡೆತಡೆಗಳು ಮೂಲತಃವಾಗಿ ಆ ನಾಯಕಿಯ ಪಾತ್ರದ ಹೊರಗಿರುತ್ತವೆ. ಉದಾಹರಣೆಗೆ, ಆ ಹುಡುಗ ತನಗಿಷ್ಟವಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುವ ಗುರಿಯನ್ನಿಟ್ಟುಕೊಂಡಿರುವಾಗ ಅದಕ್ಕೆ ಹುಡುಗಿಯ ಅಪ್ಪ ವಿರೋಧ ಒಡ್ಡುತ್ತಾನೆ; ಒಂದು ಹಳ್ಳಿಯಲ್ಲಿ ನಾಯಕಿ ಬಡ ಮಕ್ಕಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸುವ ಗುರಿಯನ್ನಿಟ್ಟುಕೊಂಡಿದ್ದಾಳೆ ಆದರೆ ಅಲ್ಲಿ ಖಾಸಗಿ ಶಾಲೆಯನ್ನು ನಡೆಸುವ ಪಟ್ಟಭದ್ರ ಹಿತಾಸಕ್ತಿಗಳು ಇವಳು ಶಾಲೆ ಪ್ರಾರಂಭಿಸಲು ಬಿಡುವುದಿಲ್ಲ.

ಈಗ ಈ ಪ್ರಮುಖ ಪಾತ್ರಧಾರಿಗಳು ತಮ್ಮ ಎದುರಿನ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಸಂಘರ್ಷ. ಇಲ್ಲಿ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಮುಖ್ಯ ಅಥವಾ ಬಡಮಕ್ಕಳಿಗಾಗಿ ಶಾಲೆಗಳನ್ನು ಪ್ರಾರಂಭಿಸುವುದು ಎಷ್ಟು ಒಳ್ಳೆಯ ಕೆಲಸ ಎನ್ನುವುದರ ಬಗ್ಗೆ ಲೆಕ್ಷರ್ ಕೊಡಲು ಅವಕಾಶವಿರುವುದಿಲ್ಲ. ಆಯಾ ಸಂಘರ್ಷಗಳ ವ್ಯಾಪ್ತಿಯಲ್ಲೇ ಈ ಸಂಗತಿಗಳು ಹೊರಬರಬೇಕು.

1998 ರಲ್ಲಿ ತೆರೆಕಂಡ ಸತ್ಯಾ ಚಿತ್ರದಲ್ಲಿ ಒಂದು ಪಾತ್ರ ಜೋಕ್ ಹೇಳುವ ಸನ್ನಿವೇಶವಿದೆ. ಒಂದು ಕನ್‍ಸ್ಟ್ರಕ್ಷನ್ ಆಗುತ್ತಿರುವ ಕಟ್ಟಡದಲ್ಲಿ ಕುಳಿತಾಗ ಸ್ನೇಹಲ್ ದಾಬಿಯ ಪಾತ್ರ ಒಂದು ತರಲೆ ಜೋಕ್ ಹೇಳಲಾರಂಭಿಸುತ್ತಾನೆ. ಆ ಜೋಕ್‍ಗೆ ಪ್ರೇಕ್ಷಕರು ನಗಬೇಕು ಎನ್ನುವಷ್ಟರಲ್ಲಿ ಗುಂಡಿನ ಸುರಿಮಳೆಯಾಗಿ ಅಲ್ಲಿಯ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಆ ಸೀನ್ ಜೋಕ್ ಹೇಳಲಂತೂ ಇದ್ದೇ ಇಲ್ಲ, ಜೋಕ್ ಮುಂದುವರೆಯುತ್ತಿದ್ದಾಗಲೂ ಏನೋ ಆಗುವುದು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಲಿರುತ್ತದೆ. ಗಟ್ಟಿಯಾದ ಸ್ಟ್ರಕ್ಷರ್ ಮತ್ತು ಸಂಘರ್ಷವನ್ನಿಟ್ಟುಕೊಂಡೇ ಲಘು ಸನ್ನಿವೇಶಗಳನ್ನೂ ತೋರಿಸುವುದಕ್ಕೆ ಸತ್ಯಾ ಸಿನೆಮಾ ಒಳ್ಳೆಯ ಉದಾಹರಣೆ.

ಎರಡನೇಯದ್ದು ಆಂತರಿಕ ಸಂಘರ್ಷ. ಒಬ್ಬ ವ್ಯಕ್ತಿಗೆ ಬಾಕ್ಸಿಂಗ್ ಚಾಂಪಿಯನ್‍ಷಿಪ್ ಗೆಲ್ಲಬೇಕಿದೆ, ಒಬ್ಬನಿಗೆ ತಾನು ದುರ್ಬಲ ಎನ್ನುವ ಕೀಳರಿಮೆಯಿದೆ, ಇನ್ನೊಬ್ಬನಿಗೆ ತನ್ನನ್ನು ಯಾರೂ ಇಷ್ಟಪಡಲಾರರು ಎನ್ನುವ ಭಾವನೆಯಿದೆ, ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಒಬ್ಬ ಬಾಲಕಿಯು ಯಾವುದೇ ಸಂಬಂಧವನ್ನು ನಿಭಾಯಿಸಲು ಅಸಮರ್ಥಳಾಗಿದ್ದಾಳೆ. ಈಗ ಇವುಗಳನ್ನು ಎದುರಿಸಬೇಕಿದೆ. ಇಲ್ಲಿಯ ಆಯಾ ನಾಯಕ/ಕಿಗೆ ಇರುವ ಅಡೆತಡೆಗಳು ತನ್ನೊಳಗೇ ಹುದುಗಿವೆ. ತನ್ನೊಳಗೇ ಹುದುಗಿರುವ ಶತ್ರುವನ್ನು ಎದುರಿಸುವುದನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದು ಕಷ್ಟ ಎನಿಸಬಹುದು. ಆದರೆ ಅನಿಸಿದಷ್ಟು ಕಷ್ಟವಲ್ಲ. ಅಲ್ಲಿಯೂ ಬಾಹ್ಯ ಸಂಗತಿಗಳಿವೆ.

ನಾಯಕ/ಕಿಯ ದೈನಂದಿನ ದೈಹಿಕ ಕ್ರಿಯೆಗಳಿಂದಲೇ ಆ ಸಂಘರ್ಷ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ. ತನ್ನ ಸಮಸ್ಯೆ ಮತ್ತು ಅದಕ್ಕಿರುವ ಉತ್ತರಗಳೂ ದೈನಂದಿನ ಕ್ರಿಯೆಗಳಿಂದ ಸ್ಪಷ್ಟವಾಗುವ ಹಾಗೆ ಚಿತ್ರಕಥೆಯನ್ನು ಹೆಣೆಯಬೇಕಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಎರಡೂ ಬಗೆಯ ಸಂಘರ್ಷಗಳು ಎಲ್ಲಾ ಹಂತಗಳಲ್ಲಿ ಪ್ರತ್ಯೇಕವಾಗಿರಬೇಕಿಲ್ಲ. ಬಾಹ್ಯ ಸಂಘರ್ಷದಲ್ಲಿ ಆಂತರಿಕ ಸಂಘರ್ಷವಿದ್ದರೆ, ಆಂತರಿಕ ಸಂಘರ್ಷದ ಕಥೆಗಳಲ್ಲಿ ಬಾಹ್ಯ ಸಂಗತಿಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಚಿತ್ರಕಥೆ ಬರೆಯುವ ರೂಢಿಸಮ್ಮತ ಕಲಿಕೆಯಲ್ಲಿ ನಾಯಕಿ/ಕ ತನ್ನ ಗುರಿಯನ್ನು ತಲುಪಲು ಹರಸಾಹಸ ಪಡುತ್ತಾಳೆ/ನೆ; ಅವಳಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ; ಚಿತ್ರದಲ್ಲಿ ಆಗುವ ಹೆಚ್ಚಿನ ಘಟನೆಗಳನ್ನು ನಾಯಕಿಯೇ ಮೊದಲು ಮಾಡುತ್ತಾಳೆ ಅದರಿಂದ ಪ್ರೇಕ್ಷಕ ತನ್ನನ್ನು ಆ ನಾಯಕಿಯಲ್ಲಿ ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆ. ಆದರೆ ಇವ್ಯಾವೂ ಅನಿವಾರ್ಯವಲ್ಲ. ಅನೇಕ ಕಥೆಗಳಲ್ಲಿ ನಾಯಕಿಗೆ ತನ್ನ ಗುರಿಯ ಅರಿವು ಇರುವುದಿಲ್ಲ. ಪರಿಸ್ಥಿತಿಯ ಕೂಸು ಆ ನಾಯಕಿ. ಅದರರ್ಥ ಅಲ್ಲಿ ಸಂಘರ್ಷ ತಪ್ಪಿಲ್ಲ.

ತನಗರಿವಿಲ್ಲದೇ ಆ ನಾಯಕಿ ಹೋರಾಟದ ಪಯಣವನ್ನು ಕ್ರಮಿಸುತ್ತಾಳೆ. ಕೆಲವು ಚಿತ್ರಗಳಲ್ಲಿ ನಾಯಕಿಯ ಹೋರಾಟ, ಸಂಘರ್ಷ ಸ್ಪಷ್ಟವಾಗಿ ಕಂಡುಬರುವುದಿಲ್ಲ. ಮತ್ತು ಆ ಸಂಘರ್ಷ ಅವಳದ್ದೇ ಆಗಿರಬೇಕೆನ್ನುವ ನಿಯಮವೂ ಇಲ್ಲ. ಅಲೆಕ್ಸಾಂಡರ್ ಪೇನ್‍ನ ಮೊದಲ ಚಿತ್ರ ಸಿಟಿಝನ್ ರೂತ್‍ನಲ್ಲಿ ನಾಯಕಿ ರೂತ್ ಗರ್ಭಿಣಿ. ರಸ್ತೆಯಲ್ಲಿ ಬದುಕುತ್ತಿರುವ ಅವಳಿಗೆ ಮಗುವನ್ನು ಉಳಿಸಿಕೊಳ್ಳಬೇಕೇ, ಗರ್ಭಪಾತ ಮಾಡಿಸಿಕೊಳ್ಳಬೇಕೇ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ತನ್ನ ಹೊರಗಿನ ಪರಿಸ್ಥಿತಿ ಬದಲಾದಂತೆ ತನಗೆ ಸೂಕ್ತವೆನಿಸಿದ ಹಾಗೆ ಅವಳು ಪ್ರತಿಕ್ರಿಯಿಸುತ್ತಾಳೆ. ಅಬೌಟ್ ಶ್ಮಿತ್ ಚಿತ್ರದಲ್ಲಿ ನಾಯಕ ಶ್ಮಿತ್ ಈಗ ತಾನೆ ನಿವೃತ್ತಿ ಹೊಂದಿದ್ದಾನೆ. ಮುಂದೇನು ಮಾಡಬೇಕೆನ್ನುವುದು ತಿಳಿಯದು. ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಲೇ ಅವನು ತನ್ನ ಬಗ್ಗೆ ಕಂಡುಕೊಳ್ಳುತ್ತಾನೆ. ಆದರೆ ಅದರಲ್ಲೂ ಸಂಘರ್ಷವಿದೆ.

ಯಾವುದೇ ಸಂಘರ್ಷದಲ್ಲಿ ನಾಯಕಿ ಸರಿ ಎನಿಸುವ ದಾರಿಯಲ್ಲಿದ್ದು, ಆ ನಾಯಕಿಯ ವಿರುದ್ಧದ ಶಕ್ತಿಗಳು ತಪ್ಪಾದ ದಾರಿಯಲ್ಲೇ ಇರಬೇಕು ಎನ್ನುವ ಅನಿವಾರ್ಯವೂ ಇಲ್ಲ. ನಾಯಕಿಯೊಂದಿಗೆ ಅವಳ ಶತ್ರುಗಳೂ ಪರಿಸ್ಥಿತಿಯ ಕೂಸುಗಳೇ. ಆ ಶಕ್ತಿಗಳಿಗೂ ತಮ್ಮದೇ ಆದ ಕಾರಣಗಳಿರುತ್ತವೆ. ಅದೇ ಕಾರಣಕ್ಕೆ ಅನೇಕ ಸಲ ಖಳನಾಯಕರ ಪಾತ್ರಗಳೂ ನಮಗೆ ಇಷ್ಟವಾಗುತ್ತವೆ.
ನಾಯಕಿಯ ಈ ಸಂಘರ್ಷದಲ್ಲಿ ಯಾರು ಗೆಲ್ಲಬೇಕು ಎನ್ನುವುದು ಅಷ್ಟು ಮುಖ್ಯವಲ್ಲ. ನಾಯಕಿ ತನ್ನ ಗುರಿ ಮುಟ್ಟುವಲ್ಲಿ ವಿಫಲವಾದರೂ ಸಂಘರ್ಷ ನಿರಂತರವಾಗಿರುವುದರಿಂದ ಚಿತ್ರ ಗೆಲ್ಲುತ್ತದೆ. ಆ ಚಿತ್ರದ ಆಶಯ ಮುಟ್ಟುತ್ತದೆ. ಆದರೆ ಆ ಸೋಲು ಗೆಲುವಿನ ದಡಕ್ಕೆ ಮುಟ್ಟಿಸುವುದು ಚಿತ್ರದ ಕರ್ತವ್ಯ. ಸಿನೆಮಾದ ಅಂತ್ಯದಲ್ಲಿ ಆ ಸಂಘರ್ಷ ಮುಕ್ತಾಯವಾಗುತ್ತದೆ ಅಥವಾ ಇನ್ನೊಂದು ಸ್ವರೂಪವನ್ನು ಪಡೆದುಕೊಳ್ಳುತ್ತದೆ. ನ್ಯೂಟನ್‍ನ ನಿಯಮದಂತೆ ಪ್ರತೀ ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದಾಗ ಸಂಘರ್ಷ ಎನ್ನುವುದು ನಿರಂತರವಲ್ಲದೇ?

ಇದನ್ನು ಓದಿ: ಸಿನಿಮಾ ಮತ್ತು ಸಂದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...