Homeಅಂತರಾಷ್ಟ್ರೀಯನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ 'ಸುಮುದ್ ಫ್ಲೋಟಿಲ್ಲಾ' ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ

ನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’ ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ

- Advertisement -
- Advertisement -

ಯುದ್ಧ ಪೀಡಿತ ಗಾಝಾದ ಜನತೆಗೆ ಮಾನವೀಯ ನೆರವು ಹೊತ್ತು, ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲು ಹೊರಟಿರುವ ಜಾಗತಿಕ ‘ಸುಮುದ್ ಫ್ಲೊಟಿಲ್ಲಾ’ ನೆರವು ಹಡಗುಗಳ ಗುಂಪು ತನ್ನ ಪ್ರಯಾಣದ ಅಂತಿಮ ಹಂತಕ್ಕೆ ತಲುಪಿದೆ ಎಂದು ಸೋಮವಾರ (ಸೆ.29) ವರದಿಯಾಗಿದೆ.

ಜಾಗತಿಕ ಸುಮುದ್ ಫ್ಲೊಟಿಲ್ಲಾ ಎನ್ನುವುದು ಇಸ್ರೇಲ್‌ ಗಾಝಾ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಭೇದಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಿಷನ್ ಆಗಿದೆ. ಈ ಫ್ಲೊಟಿಲ್ಲಾದಲ್ಲಿ 44 ಹಡಗುಗಳು ಇದ್ದು, ಇವು ಮಾನವೀಯ ನೆರವುಗಳಾದ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಿವೆ. ಜೊತೆಗೆ, ವಿಶ್ವದ ವಿವಿಧ ಭಾಗಗಳ ನೂರಾರು ಪ್ರತಿನಿಧಿಗಳು ಈ ಮಿಷನ್‌ನ ಭಾಗವಾಗಿದ್ದಾರೆ.

ಸುಮುದ್ ಫ್ಲೊಟಿಲ್ಲಾದ ಹಡಗುಗಳು ಪ್ರಸ್ತುತ ಗಾಝಾದಿಂದ ಸುಮಾರು 366 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿವೆ. ಆಯೋಜಕರು ಹೇಳುವಂತೆ, ಈ 44 ಹಡಗುಗಳ ಗುಂಪು ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ಸಮುದ್ರ ತೀರ ತಲುಪಲಿದೆ. ಅದಕ್ಕೂ ಮುನ್ನ ಜಲ ಪ್ರದೇಶದ ‘ಕಿತ್ತಳೆ ವಲಯ’ (ಆರೆಂಜ್ ಝೋನ್‌) ಪ್ರವೇಶಿಸಲಿದೆ. ಅಲ್ಲಿ ಇಸ್ರೇಲ್‌ನ ನೌಕಾಪಡೆ ಈ ಹಡಗುಗಳನ್ನು ತಡೆಯುವ ಸಾಧ್ಯತೆ ಇದೆ.

44 ಹಡಗುಗಳ ಗುಂಪಿನ ಭಾಗವಾದ ಜಾನಿ ಎಂ. ಎಂಬ ಹಡಗಿನ ಇಂಜಿನ್ ಕೋಣೆಯಲ್ಲಿ ಸೋಮವಾರ (ಸೆ.29) ಸೋರಿಕೆ ಕಂಡು ಬಂದಿದ್ದು, ಆ ಬಳಿಕ ಅದರ ಪ್ರಯಾಣ ಸ್ಥಗಿತಗೊಳಿಸಲಾಗಿದೆ.

ಆ ಹಡಗಿನಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ಈ ಪೈಕಿ ಕೆಲವರನ್ನು ಬೇರೆ ಹಡಗುಗಳಿಗೆ ಹತ್ತಿಸಲಾಗಿದೆ. ಇನ್ನೂ ಕೆಲವರಿಗೆ ಬೇರೆ ಹಡಗಿನ ವ್ಯವಸ್ಥೆ ಮಾಡಲಾಗಿದೆ. ಉಳಿದವರನ್ನು ತೀರಕ್ಕೆ ಕರೆತರಲಾಗಿದೆ.

ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ತಲುಪುವ ಗುರಿಗೆ ಇದರಿಂದ ಅಡ್ಡಿಯೇನು ಇಲ್ಲ ಎಂದು ಸಮುದ್ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದೆ.

46 ದೇಶಗಳ ಪ್ರತಿನಿಧಿಗಳು ಈ ಸುಮುದ್ ಫ್ಲೊಟಿಲ್ಲಾ ತಂಡದಲ್ಲಿ ಇದ್ದಾರೆ. ಇದು ಕಳೆದ 18 ವರ್ಷಗಳಿಂದ ಗಾಝಾದ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಬೇಧಿಸುವ ಇದುವರೆಗಿನ ಅತಿದೊಡ್ಡ ಸಮುದ್ರ ಆಧಾರಿತ ಪ್ರಯತ್ನವಾಗಿದೆ. ಈ 44 ಹಡಗುಗಳ ಗುಂಪು 500ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯತ್ತಿದೆ. ಇವರಲ್ಲಿ ವೈದ್ಯರು, ವಿವಿಧ ದೇಶಗಳ ಸಂಸದರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ರಂತಹ ಪ್ರಸಿದ್ಧ ಚಳವಳಿಗಾರರು ಇದ್ದಾರೆ.

ಈ ವರ್ಷದ ಆರಂಭದಲ್ಲಿ ಇಸ್ರೇಲಿ ಪಡೆಗಳು ಮದ್ಲೀನ್ ಹಡಗನ್ನು ತಡೆದ ಅದೇ ಜಲ ಪ್ರದೇಶವನ್ನು ಫ್ಲೋಟಿಲ್ಲಾ ಸಮೀಪಿಸುತ್ತಿದೆ ಎಂದು ಜರ್ಮನ್ ಹೋರಾಟಗಾರ್ತಿ ಯಾಸ್ಮಿನ್ ಅಕಾರ್ ದೃಢಪಡಿಸಿದ್ದಾರೆ.

“ನಾವು ಕೇವಲ ಮಾನವೀಯ ನೆರವು ನೀಡುತ್ತಿಲ್ಲ, ಗಾಝಾ ಜನತೆಯಲ್ಲಿ ಭರವಸೆ ಮೂಡಿಸುತ್ತಿದ್ದೇವೆ. ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದೇವೆ. ಜಗತ್ತು ಪ್ಯಾಲೆಸ್ತೀನ್‌ನೊಂದಿಗೆ ಇದೆ ಎಂಬ ಬಲವಾದ ಸಂದೇಶವನ್ನು ಕಳುಹಿಸುತ್ತಿದ್ದೇವೆ” ಎಂದು ಗ್ರೀಸ್‌ನ ದ್ವೀಪ ಕ್ರೀಟ್ ಬಳಿ ಗ್ರೇಟಾ ಥನ್‌ಬರ್ಗ್ ಹೇಳಿದ್ದಾರೆ.

ಸುಮುದ್ ಫ್ಲೊಟಿಲ್ಲಾದ ಹಡಗುಗಳು ಗಾಝಾಕ್ಕೆ ಹತ್ತಿರವಾಗುತ್ತಿವೆ. ಪ್ರತಿ ನಿಮಿಷವೂ ಅವು ಗಾಝಾದ ಜನರಿಗೆ ನ್ಯಾಯ ತಲುಪಿಸಲು ಮುಂದುವರಿಯುತ್ತಿವೆ ಎಂದು ಆಯೋಜಕರು ಹೇಳಿದ್ದಾರೆ. ಅವರ ವೆಬ್‌ಸೈಟ್‌ನಲ್ಲಿ ಒಂದು ಟ್ರ್ಯಾಕರ್ ಇದೆ, ಅದು ಈ ಹಡಗುಗಳು ಮೆಡಿಟರೇನಿಯನ್ ಸಮುದ್ರದಲ್ಲಿ ಮುಂದುವರಿಯುವುದನ್ನು ತೋರಿಸುತ್ತಿದೆ. ಇಡೀ ಜಗತ್ತಿನ ಗಮನ ಈಗ ಸುಮುದ್ ತಂಡ ಮೇಲಿದೆ.

ಸೆಪ್ಟೆಂಬರ್ 26 ಶುಕ್ರವಾರ ಸುಮುದ್ ತಂಡದಿಂದ ಮಾತನಾಡಿದ್ದ ಗ್ರೇಟಾ ಥನ್‌ಬರ್ಗ್, “ನಾನು ಇಸ್ರೇಲ್‌ಗೆ ಹೆದರುವುದಿಲ್ಲ, ಮಾನವೀಯತೆಯ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಂಡಿರುವ ಜಗತ್ತಿಗೆ ಹೆದರುತ್ತೇನೆ” ಎಂದು ಹೇಳಿದ್ದರು.

ಫ್ಲೋಟಿಲ್ಲಾದ ಸಂಚಾರವು ಅಂತಾರಾಷ್ಟ್ರೀಯ ಗಮನ ಸೆಳೆದಿದೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಓಪನ್ ಸೋರ್ಸ್ ಟ್ರ್ಯಾಕಿಂಗ್ ಪ್ರಕಾರ, ಟರ್ಕಿಯು ಹಡಗುಗಳ ಮೇಲ್ವಿಚಾರಣೆ ಮಾಡಲು ಮತ್ತು ರಕ್ಷಿಸಲು ಡ್ರೋನ್‌ಗಳು ಮತ್ತು ಫ್ರಿಗೇಟ್ ಅನ್ನು ನಿಯೋಜಿಸಿದೆ.

ಇಟಲಿ ಮತ್ತು ಸ್ಪೇನ್ ಸಂಭಾವ್ಯ ರಕ್ಷಣೆ ಮತ್ತು ಮಾನವೀಯ ನೆರವಿಗಾಗಿ ನೌಕಾ ಹಡಗುಗಳನ್ನು ಸನ್ನದ್ಧವಾಗಿ ಇರಿಸಿವೆ.

ಈ ತಿಂಗಳ ಆರಂಭದಲ್ಲಿ, ಫ್ಲೋಟಿಲ್ಲಾದ ಎರಡು ಹಡಗುಗಳನ್ನು ಡ್ರೋನ್‌ಗಳು ಗುರಿಯಾಗಿಸಿಕೊಂಡಿದ್ದವು ಎಂದು ವರದಿಯಾಗಿದೆ. ಈ ದಾಳಿಗಳಿಂದ ಉಂಟಾದ ವಿಳಂಬ ಮತ್ತು ಹವಾಮಾನ ವೈಪರೀತ್ಯಗಳ ಹೊರತಾಗಿಯೂ, ನಾವು ಗಾಝಾ ತಲುಪಿಯೇ ತೀರುತ್ತೇವೆ ಎಂದು ಸುಮುದ್ ತಂಡ ಶಪಥ ಮಾಡಿದೆ.

ಇಸ್ರೇಲಿ ಮಾಧ್ಯಮಗಳ ಪ್ರಕಾರ, ಇಸ್ರೇಲ್‌ನ ನೌಕಾಪಡೆಯ ಗುಂಪಾದ ಶಯೆತೆತ್ 13 ತಂಡವು ಈ ಹಡಗುಗಳನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ ಮತ್ತು ಈಗಾಗಲೇ ತರಬೇತಿ ಅಭ್ಯಾಸಗಳನ್ನು ಮಾಡುತ್ತಿದೆ. ಅಧಿಕಾರಿಗಳು ಹೇಳುವಂತೆ, ಈ ಹಡಗುಗಳು ಗಾಝಾ ತೀರಕ್ಕೆ ತಲುಪದಂತೆ ತಡೆಯುವುದು ಇಸ್ರೇಲ್ ಗುರಿಯಾಗಿದೆ. ಆದರೆ, ಈ ಸಂದರ್ಭದಲ್ಲಿ ಫ್ಲೊಟಿಲ್ಲಾದ ಭಾಗವಾದವರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಇಸ್ರೇಲ್ ಯೋಜಿಸಿದೆ.

‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...