Homeಅಂತರಾಷ್ಟ್ರೀಯನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ 'ಸುಮುದ್ ಫ್ಲೋಟಿಲ್ಲಾ' ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ

ನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’ ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ

- Advertisement -
- Advertisement -

ಯುದ್ಧ ಪೀಡಿತ ಗಾಝಾದ ಜನತೆಗೆ ಮಾನವೀಯ ನೆರವು ಹೊತ್ತು, ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲು ಹೊರಟಿರುವ ಜಾಗತಿಕ ‘ಸುಮುದ್ ಫ್ಲೊಟಿಲ್ಲಾ’ ನೆರವು ಹಡಗುಗಳ ಗುಂಪು ತನ್ನ ಪ್ರಯಾಣದ ಅಂತಿಮ ಹಂತಕ್ಕೆ ತಲುಪಿದೆ ಎಂದು ಸೋಮವಾರ (ಸೆ.29) ವರದಿಯಾಗಿದೆ.

ಜಾಗತಿಕ ಸುಮುದ್ ಫ್ಲೊಟಿಲ್ಲಾ ಎನ್ನುವುದು ಇಸ್ರೇಲ್‌ ಗಾಝಾ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಭೇದಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಿಷನ್ ಆಗಿದೆ. ಈ ಫ್ಲೊಟಿಲ್ಲಾದಲ್ಲಿ 44 ಹಡಗುಗಳು ಇದ್ದು, ಇವು ಮಾನವೀಯ ನೆರವುಗಳಾದ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಿವೆ. ಜೊತೆಗೆ, ವಿಶ್ವದ ವಿವಿಧ ಭಾಗಗಳ ನೂರಾರು ಪ್ರತಿನಿಧಿಗಳು ಈ ಮಿಷನ್‌ನ ಭಾಗವಾಗಿದ್ದಾರೆ.

ಸುಮುದ್ ಫ್ಲೊಟಿಲ್ಲಾದ ಹಡಗುಗಳು ಪ್ರಸ್ತುತ ಗಾಝಾದಿಂದ ಸುಮಾರು 366 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿವೆ. ಆಯೋಜಕರು ಹೇಳುವಂತೆ, ಈ 44 ಹಡಗುಗಳ ಗುಂಪು ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ಸಮುದ್ರ ತೀರ ತಲುಪಲಿದೆ. ಅದಕ್ಕೂ ಮುನ್ನ ಜಲ ಪ್ರದೇಶದ ‘ಕಿತ್ತಳೆ ವಲಯ’ (ಆರೆಂಜ್ ಝೋನ್‌) ಪ್ರವೇಶಿಸಲಿದೆ. ಅಲ್ಲಿ ಇಸ್ರೇಲ್‌ನ ನೌಕಾಪಡೆ ಈ ಹಡಗುಗಳನ್ನು ತಡೆಯುವ ಸಾಧ್ಯತೆ ಇದೆ.

44 ಹಡಗುಗಳ ಗುಂಪಿನ ಭಾಗವಾದ ಜಾನಿ ಎಂ. ಎಂಬ ಹಡಗಿನ ಇಂಜಿನ್ ಕೋಣೆಯಲ್ಲಿ ಸೋಮವಾರ (ಸೆ.29) ಸೋರಿಕೆ ಕಂಡು ಬಂದಿದ್ದು, ಆ ಬಳಿಕ ಅದರ ಪ್ರಯಾಣ ಸ್ಥಗಿತಗೊಳಿಸಲಾಗಿದೆ.

ಆ ಹಡಗಿನಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ಈ ಪೈಕಿ ಕೆಲವರನ್ನು ಬೇರೆ ಹಡಗುಗಳಿಗೆ ಹತ್ತಿಸಲಾಗಿದೆ. ಇನ್ನೂ ಕೆಲವರಿಗೆ ಬೇರೆ ಹಡಗಿನ ವ್ಯವಸ್ಥೆ ಮಾಡಲಾಗಿದೆ. ಉಳಿದವರನ್ನು ತೀರಕ್ಕೆ ಕರೆತರಲಾಗಿದೆ.

ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ತಲುಪುವ ಗುರಿಗೆ ಇದರಿಂದ ಅಡ್ಡಿಯೇನು ಇಲ್ಲ ಎಂದು ಸಮುದ್ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದೆ.

46 ದೇಶಗಳ ಪ್ರತಿನಿಧಿಗಳು ಈ ಸುಮುದ್ ಫ್ಲೊಟಿಲ್ಲಾ ತಂಡದಲ್ಲಿ ಇದ್ದಾರೆ. ಇದು ಕಳೆದ 18 ವರ್ಷಗಳಿಂದ ಗಾಝಾದ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಬೇಧಿಸುವ ಇದುವರೆಗಿನ ಅತಿದೊಡ್ಡ ಸಮುದ್ರ ಆಧಾರಿತ ಪ್ರಯತ್ನವಾಗಿದೆ. ಈ 44 ಹಡಗುಗಳ ಗುಂಪು 500ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯತ್ತಿದೆ. ಇವರಲ್ಲಿ ವೈದ್ಯರು, ವಿವಿಧ ದೇಶಗಳ ಸಂಸದರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ರಂತಹ ಪ್ರಸಿದ್ಧ ಚಳವಳಿಗಾರರು ಇದ್ದಾರೆ.

ಈ ವರ್ಷದ ಆರಂಭದಲ್ಲಿ ಇಸ್ರೇಲಿ ಪಡೆಗಳು ಮದ್ಲೀನ್ ಹಡಗನ್ನು ತಡೆದ ಅದೇ ಜಲ ಪ್ರದೇಶವನ್ನು ಫ್ಲೋಟಿಲ್ಲಾ ಸಮೀಪಿಸುತ್ತಿದೆ ಎಂದು ಜರ್ಮನ್ ಹೋರಾಟಗಾರ್ತಿ ಯಾಸ್ಮಿನ್ ಅಕಾರ್ ದೃಢಪಡಿಸಿದ್ದಾರೆ.

“ನಾವು ಕೇವಲ ಮಾನವೀಯ ನೆರವು ನೀಡುತ್ತಿಲ್ಲ, ಗಾಝಾ ಜನತೆಯಲ್ಲಿ ಭರವಸೆ ಮೂಡಿಸುತ್ತಿದ್ದೇವೆ. ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದೇವೆ. ಜಗತ್ತು ಪ್ಯಾಲೆಸ್ತೀನ್‌ನೊಂದಿಗೆ ಇದೆ ಎಂಬ ಬಲವಾದ ಸಂದೇಶವನ್ನು ಕಳುಹಿಸುತ್ತಿದ್ದೇವೆ” ಎಂದು ಗ್ರೀಸ್‌ನ ದ್ವೀಪ ಕ್ರೀಟ್ ಬಳಿ ಗ್ರೇಟಾ ಥನ್‌ಬರ್ಗ್ ಹೇಳಿದ್ದಾರೆ.

ಸುಮುದ್ ಫ್ಲೊಟಿಲ್ಲಾದ ಹಡಗುಗಳು ಗಾಝಾಕ್ಕೆ ಹತ್ತಿರವಾಗುತ್ತಿವೆ. ಪ್ರತಿ ನಿಮಿಷವೂ ಅವು ಗಾಝಾದ ಜನರಿಗೆ ನ್ಯಾಯ ತಲುಪಿಸಲು ಮುಂದುವರಿಯುತ್ತಿವೆ ಎಂದು ಆಯೋಜಕರು ಹೇಳಿದ್ದಾರೆ. ಅವರ ವೆಬ್‌ಸೈಟ್‌ನಲ್ಲಿ ಒಂದು ಟ್ರ್ಯಾಕರ್ ಇದೆ, ಅದು ಈ ಹಡಗುಗಳು ಮೆಡಿಟರೇನಿಯನ್ ಸಮುದ್ರದಲ್ಲಿ ಮುಂದುವರಿಯುವುದನ್ನು ತೋರಿಸುತ್ತಿದೆ. ಇಡೀ ಜಗತ್ತಿನ ಗಮನ ಈಗ ಸುಮುದ್ ತಂಡ ಮೇಲಿದೆ.

ಸೆಪ್ಟೆಂಬರ್ 26 ಶುಕ್ರವಾರ ಸುಮುದ್ ತಂಡದಿಂದ ಮಾತನಾಡಿದ್ದ ಗ್ರೇಟಾ ಥನ್‌ಬರ್ಗ್, “ನಾನು ಇಸ್ರೇಲ್‌ಗೆ ಹೆದರುವುದಿಲ್ಲ, ಮಾನವೀಯತೆಯ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಂಡಿರುವ ಜಗತ್ತಿಗೆ ಹೆದರುತ್ತೇನೆ” ಎಂದು ಹೇಳಿದ್ದರು.

ಫ್ಲೋಟಿಲ್ಲಾದ ಸಂಚಾರವು ಅಂತಾರಾಷ್ಟ್ರೀಯ ಗಮನ ಸೆಳೆದಿದೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಓಪನ್ ಸೋರ್ಸ್ ಟ್ರ್ಯಾಕಿಂಗ್ ಪ್ರಕಾರ, ಟರ್ಕಿಯು ಹಡಗುಗಳ ಮೇಲ್ವಿಚಾರಣೆ ಮಾಡಲು ಮತ್ತು ರಕ್ಷಿಸಲು ಡ್ರೋನ್‌ಗಳು ಮತ್ತು ಫ್ರಿಗೇಟ್ ಅನ್ನು ನಿಯೋಜಿಸಿದೆ.

ಇಟಲಿ ಮತ್ತು ಸ್ಪೇನ್ ಸಂಭಾವ್ಯ ರಕ್ಷಣೆ ಮತ್ತು ಮಾನವೀಯ ನೆರವಿಗಾಗಿ ನೌಕಾ ಹಡಗುಗಳನ್ನು ಸನ್ನದ್ಧವಾಗಿ ಇರಿಸಿವೆ.

ಈ ತಿಂಗಳ ಆರಂಭದಲ್ಲಿ, ಫ್ಲೋಟಿಲ್ಲಾದ ಎರಡು ಹಡಗುಗಳನ್ನು ಡ್ರೋನ್‌ಗಳು ಗುರಿಯಾಗಿಸಿಕೊಂಡಿದ್ದವು ಎಂದು ವರದಿಯಾಗಿದೆ. ಈ ದಾಳಿಗಳಿಂದ ಉಂಟಾದ ವಿಳಂಬ ಮತ್ತು ಹವಾಮಾನ ವೈಪರೀತ್ಯಗಳ ಹೊರತಾಗಿಯೂ, ನಾವು ಗಾಝಾ ತಲುಪಿಯೇ ತೀರುತ್ತೇವೆ ಎಂದು ಸುಮುದ್ ತಂಡ ಶಪಥ ಮಾಡಿದೆ.

ಇಸ್ರೇಲಿ ಮಾಧ್ಯಮಗಳ ಪ್ರಕಾರ, ಇಸ್ರೇಲ್‌ನ ನೌಕಾಪಡೆಯ ಗುಂಪಾದ ಶಯೆತೆತ್ 13 ತಂಡವು ಈ ಹಡಗುಗಳನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ ಮತ್ತು ಈಗಾಗಲೇ ತರಬೇತಿ ಅಭ್ಯಾಸಗಳನ್ನು ಮಾಡುತ್ತಿದೆ. ಅಧಿಕಾರಿಗಳು ಹೇಳುವಂತೆ, ಈ ಹಡಗುಗಳು ಗಾಝಾ ತೀರಕ್ಕೆ ತಲುಪದಂತೆ ತಡೆಯುವುದು ಇಸ್ರೇಲ್ ಗುರಿಯಾಗಿದೆ. ಆದರೆ, ಈ ಸಂದರ್ಭದಲ್ಲಿ ಫ್ಲೊಟಿಲ್ಲಾದ ಭಾಗವಾದವರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಇಸ್ರೇಲ್ ಯೋಜಿಸಿದೆ.

‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...