Homeಅಂಕಣಗಳುಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ

ಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ

- Advertisement -
- Advertisement -

ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಗಂಡಾಳಿಕೆಯ ಧೋರಣೆಗಳಿಂದ ನ್ಯಾಯಾಲಯಗಳೂ ಮುಕ್ತವಲ್ಲ.

ನ್ಯಾಯಾಧೀಶರ ಪೂರ್ವಗ್ರಹವನ್ನು ಬಿಂಬಿಸುವ ಇಲ್ಲವೇ ಹೆಣ್ಣುಮಕ್ಕಳ ಘನತೆಯನ್ನು ಕುಂದಿಸುವ ಅಥವಾ ನ್ಯಾಯಯುತ ವಿಚಾರಣೆಯ ಮೇಲೆ ಅಡ್ಡ ಪರಿಣಾಮ ಬೀರುವ ಟೀಕೆ ಟಿಪ್ಪಣಿಗಳು ಸರ್ವೇಸಾಮಾನ್ಯ ಆಗಿ ಹೋಗಿವೆ. ಅತ್ಯಾಚಾರಕ್ಕೆ ಈಡಾದ ಹೆಣ್ಣುಮಗಳು ’ಸಡಿಲ ನಡತೆಯವಳು’ ಅಥವಾ ’ಲೈಂಗಿಕ ಕ್ರಿಯೆಗಳ ಅಭ್ಯಾಸವಿರುವವಳು’ ಎಂಬ ವಾದವನ್ನು ಪುರಸ್ಕರಿಸಿ ಆರೋಪಿ ಗಂಡಸಿಗೆ ಜಾಮೀನು ನೀಡಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಆರೋಪಿ ಮತ್ತು ಹಲ್ಲೆಗೀಡಾದ ಹೆಣ್ಣುಮಗಳ ನಡುವೆ ಮಧ್ಯಸ್ಥಿಕೆ, ಒಡಂಬಡಿಕೆ- ವಿವಾಹ ಏರ್ಪಡಿಸಿ ಅತ್ಯಾಚಾರದಂತಹ ಹೀನ ಅಪರಾಧದ ತೀವ್ರತೆಯನ್ನು ತಗ್ಗಿಸಿ ಕ್ಷುಲ್ಲಕಗೊಳಿಸಲಾಗುತ್ತಿದೆ.

ತನ್ನ ಇಚ್ಛೆಗೆ ವಿರುದ್ಧವಾಗಿ ಮೇಲೆರಗಿ ಉಲ್ಲಂಘಿಸಿದವನನ್ನೇ ಗಂಡನನ್ನಾಗಿ ಕಟ್ಟಿಕೊಳ್ಳುವ ಮತ್ತೊಂದು ಬಲಾತ್ಕಾರವನ್ನು ವ್ಯವಸ್ಥೆಯು ಹೆಣ್ಣಿನ ಮೇಲೆ ಎಸಗತೊಡಗಿದೆ.

ಮನುಧರ್ಮಶಾಸ್ತ್ರವು ನರನಾಡಿಗಳಲ್ಲಿ ನೆಲೆಗೊಂಡಿರುವ ಭಾರತ ಭೂಮಿಯಲ್ಲಿ ಗಂಡಾಳಿಕೆಯ ವಿಕೃತಿಗಳು ಹೆಣ್ಣು ಮೈ-ಮನಗಳನ್ನು ಬಗೆಬಗೆಯ ಕ್ರೌರ್ಯಗಳಿಗೆ ಗುರಿ ಮಾಡಿವೆ. ಹಲ್ಲೆಗೆ ಅನ್ಯಾಯಕ್ಕೆ ಬಲಿಯಾದ ಆಕೆಯನ್ನೇ ಆರೋಪಿಯಂತೆ ಕಾಣಲಾಗುತ್ತಿದೆ. ನ್ಯಾಯ ಪಡೆಯುವ ಪ್ರಕ್ರಿಯೆಯೇ ಆಕೆಯ ಪಾಲಿಗೆ ಚಿತ್ರಹಿಂಸೆಯಾಗಿ ಪರಿಣಮಿಸಿದೆ.

ಅಪರ್ಣಾ ಭಟ್ ಮತ್ತಿತರರು ಈ ಪ್ರವೃತ್ತಿಯನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟು ಇತ್ತೀಚೆಗೆ ನೀಡಿರುವ ತೀರ್ಪು ಕಣ್ಣು ತೆರೆಸುವಂತಹುದು.

ಲೈಂಗಿಕ ಅಪರಾಧಗಳ ವಿಚಾರಣೆಯಲ್ಲಿ ಕೋರ್ಟುಗಳು ಸೂಕ್ಷ್ಮ ಸಂವೇದನಾಶೀಲತೆಯನ್ನು ತೋರುವಂತೆ ತಾಕೀತು ಮಾಡಿದೆ. ಜಾಮೀನು ನೀಡುವಾಗ ಪಾಲಿಸಲೇಬೇಕಾದ ಏಳು ಪ್ರಮುಖ ನಿರ್ದೇಶನಗಳನ್ನು ದೇಶದ ಎಲ್ಲ ಹೈಕೋರ್ಟುಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ವಿಧಿಸಿದೆ.

1. ಆರೋಪಿಗೆ ಜಾಮೀನು ನೀಡುವಾಗ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಏರ್ಪಡುವಂತಹ ಯಾವ ಷರತ್ತನ್ನೂ ಹಾಕಬಾರದು. ಬದಲಾಗಿ ನ್ಯಾಯಾಲಯ ವಿಧಿಸುವ ಷರತ್ತುಗಳು ಆರೋಪಿಯಿಂದ ಫಿರ್ಯಾದುದಾರಳನ್ನು ಮತ್ತಷ್ಟು ಕಿರುಕುಳದಿಂದ ರಕ್ಷಿಸುವಂತಿರಬೇಕು.

2. ಸಂತ್ರಸ್ತೆಗೆ ಆರೋಪಿಯಿಂದ ಕಿರುಕುಳದ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ಅನಿಸಿದರೆ ಅಥವಾ ಅಂತಹ ಸಂದೇಹ ವ್ಯಕ್ತವಾದರೆ ಆಕೆಯ ರಕ್ಷಣೆಗೆ ಸೂಕ್ತ ಆದೇಶ ನೀಡಬೇಕು. ಆಕೆಯ ಸಂಪರ್ಕ ಬೆಳೆಸದಂತೆ ಆರೋಪಿಗೆ ನಿರ್ದೇಶನ ನೀಡಬೇಕು.

3. ಆರೋಪಿಗೆ ಜಾಮೀನು ಮಂಜೂರಾದಲ್ಲಿ, ತಕ್ಷಣವೇ ಆ ಕುರಿತು ಸಂತ್ರಸ್ತೆಗೆ ತಿಳಿಯಪಡಿಸಬೇಕು.

4. ಜಾಮೀನಿನ ಷರತ್ತುಗಳು ಮತ್ತು ಆದೇಶಗಳು ಮಹಿಳೆಯರ ಕುರಿತು ಸಮಾಜದಲ್ಲಿ ನೆಲೆಸಿರುವ ರೂಢಿಗತ ಮತ್ತು ಗಂಡಾಳಿಕೆಯ ಧೋರಣೆಗಳನ್ನು ಬಿಂಬಿಸಕೂಡದು. ಈ ಷರತ್ತು-ಆದೇಶಗಳು ಭಾರತೀಯ ಅಪರಾಧ ಸಂಹಿತೆಗೆ ಅನುಗುಣವಾಗಿರತಕ್ಕದ್ದು. ಸಂತ್ರಸ್ತೆಯ ಉಡುಗೆ ತೊಡುಗೆ, ವರ್ತನೆ, ಹಳೆಯ ನಡತೆ ಅಥವಾ ಆಕೆಯ ನೈತಿಕ ಮೌಲ್ಯಗಳ ಕುರಿತ ಯಾವುದೇ ಮಾತುಗಳಿಗೆ ಆದೇಶಗಳಲ್ಲಾಗಲಿ, ಷರತ್ತುಗಳಲ್ಲಾಗಲಿ ಅವಕಾಶ ಇಲ್ಲ.

5. ಲಿಂಗ ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ನ್ಯಾಯ ನೀಡುವಾಗ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಸಂಧಾನ ಅಥವಾ ಲಗ್ನವಾಗುವಂತೆ ಮನವೊಲಿಸುವ ಸಲಹೆ ಸೂಚನೆಗಳನ್ನು ನೀಡಕೂಡದು. ಇಂತಹ ನಡೆಗಳು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದಂತಹವು.

6. ವಿಚಾರಣೆ ಮತ್ತು ವಾದಮಂಡನೆಯ ಕಲಾಪಗಳಲ್ಲಿ ಸಂತ್ರಸ್ತೆಗೆ ಮನೋಯಾತನೆ ಉಂಟು ಮಾಡುವಂತಹ ಯಾವುದೇ ಮಾತುಗಳಿಗೆ ಅವಕಾಶ ನೀಡಕೂಡದು. ಅಂತಹ ಸೂಕ್ಷ್ಮ ಸಂವೇದನೆಯನ್ನು ನ್ಯಾಯಾಧೀಶರು ಸದಾ ಹೊಂದಿರತಕ್ಕದ್ದು.

7. ವಿಶೇಷವಾಗಿ ಸಂತ್ರಸ್ತೆಯ ಆತ್ಮವಿಶ್ವಾಸವನ್ನು ಕುಂದಿಸುವ ಇಲ್ಲವೇ ಕದಲಿಸುವಂತಹ ಯಾವುದೇ ಪದಗಳನ್ನು ಮಾತಿನಲ್ಲಾಗಲಿ, ಬರೆಹದಲ್ಲಾಗಲಿ ನ್ಯಾಯಾಧೀಶರು ಬಳಸತಕ್ಕದ್ದಲ್ಲ.

PC : DNA India

ನ್ಯಾಯನಿರ್ಣಯ ಮಾಡುವಾಗ ನ್ಯಾಯಾಲಯಗಳು ಈ ಕೆಳಕಂಡ ರೂಢಿಗತ ಧೋರಣೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ದೂರವಿಡುವಂತೆಯೂ ಸುಪ್ರೀಮ್ ಕೋರ್ಟು ನಿರ್ದೇಶನ ನೀಡಿದೆ:

1. ಮಹಿಳೆ ದೈಹಿಕವಾಗಿ ದುರ್ಬಲಳು.

2. ಹೆಣ್ಣುಮಕ್ಕಳು ಸ್ವಂತ ನಿರ್ಧಾರ ಮಾಡಲಾರರು.

3. ಪುರುಷರೇ ಮನೆಯ ಮುಖ್ಯಸ್ಥರು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳಬೇಕು.

4. ಮಹಿಳೆಯರು ವಿಧೇಯರಾಗಿಯೂ ಅಡಿಯಾಳಾಗಿಯೂ ಇರತಕ್ಕದ್ದು.

5. ಲೈಂಗಿಕ ಪರಿಶುದ್ಧಿಯನ್ನು ಹೊಂದಿದವರೇ ಒಳ್ಳೆಯ ಹೆಣ್ಣುಮಕ್ಕಳು.

6. ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕರ್ತವ್ಯ ಮತ್ತು ಪಾತ್ರ. ಪ್ರತಿಯೊಬ್ಬ ಹೆಣ್ಣೂ ತಾಯಿ ಆಗಬಯಸುವಳು.

7. ಮಕ್ಕಳ ಪಾಲನೆ ಪೋಷಣೆಗೆ ಮಹಿಳೆಯೇ ಬಾಧ್ಯಸ್ಥಳು.

8. ರಾತ್ರಿ ವೇಳೆ ಒಬ್ಬಳೇ ಇರುವ ಅಥವಾ ನಿರ್ದಿಷ್ಟ ಉಡುಪುಗಳನ್ನು ತೊಡುವುದು ಮಹಿಳೆಯ ಮೇಲಿನ ಹಲ್ಲೆಗಳಿಗೆ ಕಾರಣ.

9. ಮದ್ಯಪಾನ ಮತ್ತು ಧೂಮಪಾನ ಮಾಡುವ ಹೆಣ್ಣುಮಗಳು ತನ್ನ ಮೇಲೆ ಪುರುಷರು ನಡೆಸುವ ಹಲ್ಲೆಗಳಿಗೆ ಖುದ್ದು ಬಾಧ್ಯಸ್ಥಳು. ಇಂತಹ ಹಲ್ಲೆಗಳನ್ನು ಆಕೆ ತಾನಾಗಿ ಆಹ್ವಾನಿಸುತ್ತಾಳೆ.

10. ಮಹಿಳೆಯರು ಭಾವುಕರು. ಬಹುತೇಕ ಅತಿಯಾಗಿ ಪ್ರತಿಕ್ರಿಯಿಸುವರು ಹೀಗಾಗಿ ಅವರ ಹೇಳಿಕೆಗಳಿಗೆ ಪುಷ್ಟೀಕರಣ ಬೇಕು.

11. ಲೈಂಗಿಕವಾಗಿ ಸಕ್ರಿಯರಾಗಿರುವ ಮಹಿಳೆಯರು ಲೈಂಗಿಕ ಹಲ್ಲೆಯ ಪ್ರಕರಣಗಳಲ್ಲಿ ತಾವು ಒಪ್ಪಿಗೆ ಕೊಟ್ಟಿರಲಿಲ್ಲ ಎಂಬುದಾಗಿ ನೀಡುವ ಸಾಕ್ಷ್ಯವನ್ನು ಅನುಮಾನದಿಂದ ನೋಡಬೇಕು.

12. ಲೈಂಗಿಕ ಅಪರಾಧದ ಪ್ರಕರಣಗಳಲ್ಲಿ ದೈಹಿಕ ದಾಳಿಯ ಸಾಕ್ಷ್ಯಗಳು ಇಲ್ಲದೆ ಹೋದಲ್ಲಿ ಶಾರೀರಿಕ ಸಂಬಂಧಕ್ಕೆ ಆಕೆ ಒಪ್ಪಿಗೆ ನೀಡಿದ್ದಳು ಎಂದೇ ಅರ್ಥ.

ಈ ಮೇಲಿನ ಧೋರಣೆಗಳನ್ನು ದೂರವಿಟ್ಟು ಎಲ್ಲ ನಿರ್ದೇಶನಗಳನ್ನು ಅಳವಡಿಸಿದ ಲಿಂಗಸೂಕ್ಷ್ಮತೆಯ ಮಾದರಿಯನ್ನು ತಯಾರಿಸಬೇಕು. ಅದನ್ನು ನ್ಯಾಯಾಧೀಶರಿಗೆ ನೀಡುವ ಮೂಲತರಬೇತಿಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಮೂರು ತಿಂಗಳ ಒಳಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯು ತ್ವರಿತವಾಗಿ ಈ ತರಬೇತಿ ಪಠ್ಯವನ್ನು ಸಮಾಜಶಾಸ್ತ್ರಜ್ಞರು, ಮನಶ್ಯಾಸ್ತ್ರಜ್ಞರು ಹಾಗೂ ಲಿಂಗ ಅಧ್ಯಯನ ತಜ್ಞರ ಜೊತೆ ಸಮಾಲೋಚಿಸಿ ರೂಪಿಸಬೇಕು ಎಂದು ಸುಪ್ರೀಮ್ ಕೋರ್ಟ್ ವಿಧಿಸಿದೆ.

ಇದೇ ರೀತಿ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ (ಎಲ್‌ಎಲ್‌ಬಿ) ವ್ಯಾಸಂಗದ ಭಾಗವಾಗಿ ಈ ಸಂಗತಿಗಳನ್ನು ಕಲಿಸತಕ್ಕದ್ದು. ಅಖಿಲ ಭಾರತ ವಕೀಲ ಪರೀಕ್ಷೆಯ ಪಠ್ಯದಲ್ಲಿ ಲೈಂಗಿಕ ಅಪರಾಧಗಳು ಮತ್ತು ಲಿಂಗಸೂಕ್ಷ್ಮತೆ ಕುರಿತ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು ಎಂದು ಬಾರ್ ಕೌನ್ಸಿಲ್ ಅಫ್ ಇಂಡಿಯಾಗೆ ಸೂಚಿಸಲಾಗಿದೆ.

ಲೈಂಗಿಕ ಅಪರಾಧಗಳ ಕುರಿತು ನ್ಯಾಯಾಧೀಶರು ಹೊಂದಬೇಕಿರುವ ಸೂಕ್ಷ್ಮ ಸಂವೇದನೆಯ ಬಗೆಗೆ ತಜ್ಞರೊಂದಿಗೆ ಎಲ್ಲ ಹೈಕೋರ್ಟುಗಳು ಸಮಾಲೋಚಿಸಿ ನ್ಯಾಯಾಂಗ ಸೇವೆಗಳ ಪರೀಕ್ಷೆಗಳಿಗೆ ಓದಿಕೊಳ್ಳಬೇಕಿರುವ ಪಠ್ಯದಲ್ಲಿ ಅಳವಡಿಸಬೇಕು ಎಂದೂ ಸುಪ್ರೀಮ್ ಕೋರ್ಟು ತಾಕೀತು ಮಾಡಿದೆ.

ಮಾನವೀಯವೂ ಪ್ರಗತಿಪರವೂ ಆಗಿರುವ ಅನೇಕ ತೀರ್ಪುಗಳನ್ನು ವ್ಯವಸ್ಥೆಯು ನುಂಗಿ ಹಾಕಿರುವುದುಂಟು. ಹಾಲಿ ತೀರ್ಪಿಗೆ ಅಂತಹ ದುರ್ಗತಿ ಒದಗದಿರಲಿ.


ಇದನ್ನೂ ಓದಿ: ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...