Homeಅಂಕಣಗಳುಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ

ಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ

- Advertisement -
- Advertisement -

ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಗಂಡಾಳಿಕೆಯ ಧೋರಣೆಗಳಿಂದ ನ್ಯಾಯಾಲಯಗಳೂ ಮುಕ್ತವಲ್ಲ.

ನ್ಯಾಯಾಧೀಶರ ಪೂರ್ವಗ್ರಹವನ್ನು ಬಿಂಬಿಸುವ ಇಲ್ಲವೇ ಹೆಣ್ಣುಮಕ್ಕಳ ಘನತೆಯನ್ನು ಕುಂದಿಸುವ ಅಥವಾ ನ್ಯಾಯಯುತ ವಿಚಾರಣೆಯ ಮೇಲೆ ಅಡ್ಡ ಪರಿಣಾಮ ಬೀರುವ ಟೀಕೆ ಟಿಪ್ಪಣಿಗಳು ಸರ್ವೇಸಾಮಾನ್ಯ ಆಗಿ ಹೋಗಿವೆ. ಅತ್ಯಾಚಾರಕ್ಕೆ ಈಡಾದ ಹೆಣ್ಣುಮಗಳು ’ಸಡಿಲ ನಡತೆಯವಳು’ ಅಥವಾ ’ಲೈಂಗಿಕ ಕ್ರಿಯೆಗಳ ಅಭ್ಯಾಸವಿರುವವಳು’ ಎಂಬ ವಾದವನ್ನು ಪುರಸ್ಕರಿಸಿ ಆರೋಪಿ ಗಂಡಸಿಗೆ ಜಾಮೀನು ನೀಡಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಆರೋಪಿ ಮತ್ತು ಹಲ್ಲೆಗೀಡಾದ ಹೆಣ್ಣುಮಗಳ ನಡುವೆ ಮಧ್ಯಸ್ಥಿಕೆ, ಒಡಂಬಡಿಕೆ- ವಿವಾಹ ಏರ್ಪಡಿಸಿ ಅತ್ಯಾಚಾರದಂತಹ ಹೀನ ಅಪರಾಧದ ತೀವ್ರತೆಯನ್ನು ತಗ್ಗಿಸಿ ಕ್ಷುಲ್ಲಕಗೊಳಿಸಲಾಗುತ್ತಿದೆ.

ತನ್ನ ಇಚ್ಛೆಗೆ ವಿರುದ್ಧವಾಗಿ ಮೇಲೆರಗಿ ಉಲ್ಲಂಘಿಸಿದವನನ್ನೇ ಗಂಡನನ್ನಾಗಿ ಕಟ್ಟಿಕೊಳ್ಳುವ ಮತ್ತೊಂದು ಬಲಾತ್ಕಾರವನ್ನು ವ್ಯವಸ್ಥೆಯು ಹೆಣ್ಣಿನ ಮೇಲೆ ಎಸಗತೊಡಗಿದೆ.

ಮನುಧರ್ಮಶಾಸ್ತ್ರವು ನರನಾಡಿಗಳಲ್ಲಿ ನೆಲೆಗೊಂಡಿರುವ ಭಾರತ ಭೂಮಿಯಲ್ಲಿ ಗಂಡಾಳಿಕೆಯ ವಿಕೃತಿಗಳು ಹೆಣ್ಣು ಮೈ-ಮನಗಳನ್ನು ಬಗೆಬಗೆಯ ಕ್ರೌರ್ಯಗಳಿಗೆ ಗುರಿ ಮಾಡಿವೆ. ಹಲ್ಲೆಗೆ ಅನ್ಯಾಯಕ್ಕೆ ಬಲಿಯಾದ ಆಕೆಯನ್ನೇ ಆರೋಪಿಯಂತೆ ಕಾಣಲಾಗುತ್ತಿದೆ. ನ್ಯಾಯ ಪಡೆಯುವ ಪ್ರಕ್ರಿಯೆಯೇ ಆಕೆಯ ಪಾಲಿಗೆ ಚಿತ್ರಹಿಂಸೆಯಾಗಿ ಪರಿಣಮಿಸಿದೆ.

ಅಪರ್ಣಾ ಭಟ್ ಮತ್ತಿತರರು ಈ ಪ್ರವೃತ್ತಿಯನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟು ಇತ್ತೀಚೆಗೆ ನೀಡಿರುವ ತೀರ್ಪು ಕಣ್ಣು ತೆರೆಸುವಂತಹುದು.

ಲೈಂಗಿಕ ಅಪರಾಧಗಳ ವಿಚಾರಣೆಯಲ್ಲಿ ಕೋರ್ಟುಗಳು ಸೂಕ್ಷ್ಮ ಸಂವೇದನಾಶೀಲತೆಯನ್ನು ತೋರುವಂತೆ ತಾಕೀತು ಮಾಡಿದೆ. ಜಾಮೀನು ನೀಡುವಾಗ ಪಾಲಿಸಲೇಬೇಕಾದ ಏಳು ಪ್ರಮುಖ ನಿರ್ದೇಶನಗಳನ್ನು ದೇಶದ ಎಲ್ಲ ಹೈಕೋರ್ಟುಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ವಿಧಿಸಿದೆ.

1. ಆರೋಪಿಗೆ ಜಾಮೀನು ನೀಡುವಾಗ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಏರ್ಪಡುವಂತಹ ಯಾವ ಷರತ್ತನ್ನೂ ಹಾಕಬಾರದು. ಬದಲಾಗಿ ನ್ಯಾಯಾಲಯ ವಿಧಿಸುವ ಷರತ್ತುಗಳು ಆರೋಪಿಯಿಂದ ಫಿರ್ಯಾದುದಾರಳನ್ನು ಮತ್ತಷ್ಟು ಕಿರುಕುಳದಿಂದ ರಕ್ಷಿಸುವಂತಿರಬೇಕು.

2. ಸಂತ್ರಸ್ತೆಗೆ ಆರೋಪಿಯಿಂದ ಕಿರುಕುಳದ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ಅನಿಸಿದರೆ ಅಥವಾ ಅಂತಹ ಸಂದೇಹ ವ್ಯಕ್ತವಾದರೆ ಆಕೆಯ ರಕ್ಷಣೆಗೆ ಸೂಕ್ತ ಆದೇಶ ನೀಡಬೇಕು. ಆಕೆಯ ಸಂಪರ್ಕ ಬೆಳೆಸದಂತೆ ಆರೋಪಿಗೆ ನಿರ್ದೇಶನ ನೀಡಬೇಕು.

3. ಆರೋಪಿಗೆ ಜಾಮೀನು ಮಂಜೂರಾದಲ್ಲಿ, ತಕ್ಷಣವೇ ಆ ಕುರಿತು ಸಂತ್ರಸ್ತೆಗೆ ತಿಳಿಯಪಡಿಸಬೇಕು.

4. ಜಾಮೀನಿನ ಷರತ್ತುಗಳು ಮತ್ತು ಆದೇಶಗಳು ಮಹಿಳೆಯರ ಕುರಿತು ಸಮಾಜದಲ್ಲಿ ನೆಲೆಸಿರುವ ರೂಢಿಗತ ಮತ್ತು ಗಂಡಾಳಿಕೆಯ ಧೋರಣೆಗಳನ್ನು ಬಿಂಬಿಸಕೂಡದು. ಈ ಷರತ್ತು-ಆದೇಶಗಳು ಭಾರತೀಯ ಅಪರಾಧ ಸಂಹಿತೆಗೆ ಅನುಗುಣವಾಗಿರತಕ್ಕದ್ದು. ಸಂತ್ರಸ್ತೆಯ ಉಡುಗೆ ತೊಡುಗೆ, ವರ್ತನೆ, ಹಳೆಯ ನಡತೆ ಅಥವಾ ಆಕೆಯ ನೈತಿಕ ಮೌಲ್ಯಗಳ ಕುರಿತ ಯಾವುದೇ ಮಾತುಗಳಿಗೆ ಆದೇಶಗಳಲ್ಲಾಗಲಿ, ಷರತ್ತುಗಳಲ್ಲಾಗಲಿ ಅವಕಾಶ ಇಲ್ಲ.

5. ಲಿಂಗ ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ನ್ಯಾಯ ನೀಡುವಾಗ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಸಂಧಾನ ಅಥವಾ ಲಗ್ನವಾಗುವಂತೆ ಮನವೊಲಿಸುವ ಸಲಹೆ ಸೂಚನೆಗಳನ್ನು ನೀಡಕೂಡದು. ಇಂತಹ ನಡೆಗಳು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದಂತಹವು.

6. ವಿಚಾರಣೆ ಮತ್ತು ವಾದಮಂಡನೆಯ ಕಲಾಪಗಳಲ್ಲಿ ಸಂತ್ರಸ್ತೆಗೆ ಮನೋಯಾತನೆ ಉಂಟು ಮಾಡುವಂತಹ ಯಾವುದೇ ಮಾತುಗಳಿಗೆ ಅವಕಾಶ ನೀಡಕೂಡದು. ಅಂತಹ ಸೂಕ್ಷ್ಮ ಸಂವೇದನೆಯನ್ನು ನ್ಯಾಯಾಧೀಶರು ಸದಾ ಹೊಂದಿರತಕ್ಕದ್ದು.

7. ವಿಶೇಷವಾಗಿ ಸಂತ್ರಸ್ತೆಯ ಆತ್ಮವಿಶ್ವಾಸವನ್ನು ಕುಂದಿಸುವ ಇಲ್ಲವೇ ಕದಲಿಸುವಂತಹ ಯಾವುದೇ ಪದಗಳನ್ನು ಮಾತಿನಲ್ಲಾಗಲಿ, ಬರೆಹದಲ್ಲಾಗಲಿ ನ್ಯಾಯಾಧೀಶರು ಬಳಸತಕ್ಕದ್ದಲ್ಲ.

PC : DNA India

ನ್ಯಾಯನಿರ್ಣಯ ಮಾಡುವಾಗ ನ್ಯಾಯಾಲಯಗಳು ಈ ಕೆಳಕಂಡ ರೂಢಿಗತ ಧೋರಣೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ದೂರವಿಡುವಂತೆಯೂ ಸುಪ್ರೀಮ್ ಕೋರ್ಟು ನಿರ್ದೇಶನ ನೀಡಿದೆ:

1. ಮಹಿಳೆ ದೈಹಿಕವಾಗಿ ದುರ್ಬಲಳು.

2. ಹೆಣ್ಣುಮಕ್ಕಳು ಸ್ವಂತ ನಿರ್ಧಾರ ಮಾಡಲಾರರು.

3. ಪುರುಷರೇ ಮನೆಯ ಮುಖ್ಯಸ್ಥರು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳಬೇಕು.

4. ಮಹಿಳೆಯರು ವಿಧೇಯರಾಗಿಯೂ ಅಡಿಯಾಳಾಗಿಯೂ ಇರತಕ್ಕದ್ದು.

5. ಲೈಂಗಿಕ ಪರಿಶುದ್ಧಿಯನ್ನು ಹೊಂದಿದವರೇ ಒಳ್ಳೆಯ ಹೆಣ್ಣುಮಕ್ಕಳು.

6. ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕರ್ತವ್ಯ ಮತ್ತು ಪಾತ್ರ. ಪ್ರತಿಯೊಬ್ಬ ಹೆಣ್ಣೂ ತಾಯಿ ಆಗಬಯಸುವಳು.

7. ಮಕ್ಕಳ ಪಾಲನೆ ಪೋಷಣೆಗೆ ಮಹಿಳೆಯೇ ಬಾಧ್ಯಸ್ಥಳು.

8. ರಾತ್ರಿ ವೇಳೆ ಒಬ್ಬಳೇ ಇರುವ ಅಥವಾ ನಿರ್ದಿಷ್ಟ ಉಡುಪುಗಳನ್ನು ತೊಡುವುದು ಮಹಿಳೆಯ ಮೇಲಿನ ಹಲ್ಲೆಗಳಿಗೆ ಕಾರಣ.

9. ಮದ್ಯಪಾನ ಮತ್ತು ಧೂಮಪಾನ ಮಾಡುವ ಹೆಣ್ಣುಮಗಳು ತನ್ನ ಮೇಲೆ ಪುರುಷರು ನಡೆಸುವ ಹಲ್ಲೆಗಳಿಗೆ ಖುದ್ದು ಬಾಧ್ಯಸ್ಥಳು. ಇಂತಹ ಹಲ್ಲೆಗಳನ್ನು ಆಕೆ ತಾನಾಗಿ ಆಹ್ವಾನಿಸುತ್ತಾಳೆ.

10. ಮಹಿಳೆಯರು ಭಾವುಕರು. ಬಹುತೇಕ ಅತಿಯಾಗಿ ಪ್ರತಿಕ್ರಿಯಿಸುವರು ಹೀಗಾಗಿ ಅವರ ಹೇಳಿಕೆಗಳಿಗೆ ಪುಷ್ಟೀಕರಣ ಬೇಕು.

11. ಲೈಂಗಿಕವಾಗಿ ಸಕ್ರಿಯರಾಗಿರುವ ಮಹಿಳೆಯರು ಲೈಂಗಿಕ ಹಲ್ಲೆಯ ಪ್ರಕರಣಗಳಲ್ಲಿ ತಾವು ಒಪ್ಪಿಗೆ ಕೊಟ್ಟಿರಲಿಲ್ಲ ಎಂಬುದಾಗಿ ನೀಡುವ ಸಾಕ್ಷ್ಯವನ್ನು ಅನುಮಾನದಿಂದ ನೋಡಬೇಕು.

12. ಲೈಂಗಿಕ ಅಪರಾಧದ ಪ್ರಕರಣಗಳಲ್ಲಿ ದೈಹಿಕ ದಾಳಿಯ ಸಾಕ್ಷ್ಯಗಳು ಇಲ್ಲದೆ ಹೋದಲ್ಲಿ ಶಾರೀರಿಕ ಸಂಬಂಧಕ್ಕೆ ಆಕೆ ಒಪ್ಪಿಗೆ ನೀಡಿದ್ದಳು ಎಂದೇ ಅರ್ಥ.

ಈ ಮೇಲಿನ ಧೋರಣೆಗಳನ್ನು ದೂರವಿಟ್ಟು ಎಲ್ಲ ನಿರ್ದೇಶನಗಳನ್ನು ಅಳವಡಿಸಿದ ಲಿಂಗಸೂಕ್ಷ್ಮತೆಯ ಮಾದರಿಯನ್ನು ತಯಾರಿಸಬೇಕು. ಅದನ್ನು ನ್ಯಾಯಾಧೀಶರಿಗೆ ನೀಡುವ ಮೂಲತರಬೇತಿಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಮೂರು ತಿಂಗಳ ಒಳಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯು ತ್ವರಿತವಾಗಿ ಈ ತರಬೇತಿ ಪಠ್ಯವನ್ನು ಸಮಾಜಶಾಸ್ತ್ರಜ್ಞರು, ಮನಶ್ಯಾಸ್ತ್ರಜ್ಞರು ಹಾಗೂ ಲಿಂಗ ಅಧ್ಯಯನ ತಜ್ಞರ ಜೊತೆ ಸಮಾಲೋಚಿಸಿ ರೂಪಿಸಬೇಕು ಎಂದು ಸುಪ್ರೀಮ್ ಕೋರ್ಟ್ ವಿಧಿಸಿದೆ.

ಇದೇ ರೀತಿ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ (ಎಲ್‌ಎಲ್‌ಬಿ) ವ್ಯಾಸಂಗದ ಭಾಗವಾಗಿ ಈ ಸಂಗತಿಗಳನ್ನು ಕಲಿಸತಕ್ಕದ್ದು. ಅಖಿಲ ಭಾರತ ವಕೀಲ ಪರೀಕ್ಷೆಯ ಪಠ್ಯದಲ್ಲಿ ಲೈಂಗಿಕ ಅಪರಾಧಗಳು ಮತ್ತು ಲಿಂಗಸೂಕ್ಷ್ಮತೆ ಕುರಿತ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು ಎಂದು ಬಾರ್ ಕೌನ್ಸಿಲ್ ಅಫ್ ಇಂಡಿಯಾಗೆ ಸೂಚಿಸಲಾಗಿದೆ.

ಲೈಂಗಿಕ ಅಪರಾಧಗಳ ಕುರಿತು ನ್ಯಾಯಾಧೀಶರು ಹೊಂದಬೇಕಿರುವ ಸೂಕ್ಷ್ಮ ಸಂವೇದನೆಯ ಬಗೆಗೆ ತಜ್ಞರೊಂದಿಗೆ ಎಲ್ಲ ಹೈಕೋರ್ಟುಗಳು ಸಮಾಲೋಚಿಸಿ ನ್ಯಾಯಾಂಗ ಸೇವೆಗಳ ಪರೀಕ್ಷೆಗಳಿಗೆ ಓದಿಕೊಳ್ಳಬೇಕಿರುವ ಪಠ್ಯದಲ್ಲಿ ಅಳವಡಿಸಬೇಕು ಎಂದೂ ಸುಪ್ರೀಮ್ ಕೋರ್ಟು ತಾಕೀತು ಮಾಡಿದೆ.

ಮಾನವೀಯವೂ ಪ್ರಗತಿಪರವೂ ಆಗಿರುವ ಅನೇಕ ತೀರ್ಪುಗಳನ್ನು ವ್ಯವಸ್ಥೆಯು ನುಂಗಿ ಹಾಕಿರುವುದುಂಟು. ಹಾಲಿ ತೀರ್ಪಿಗೆ ಅಂತಹ ದುರ್ಗತಿ ಒದಗದಿರಲಿ.


ಇದನ್ನೂ ಓದಿ: ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...