Homeಅಂಕಣಗಳುಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ

ಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ

- Advertisement -
- Advertisement -

ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಗಂಡಾಳಿಕೆಯ ಧೋರಣೆಗಳಿಂದ ನ್ಯಾಯಾಲಯಗಳೂ ಮುಕ್ತವಲ್ಲ.

ನ್ಯಾಯಾಧೀಶರ ಪೂರ್ವಗ್ರಹವನ್ನು ಬಿಂಬಿಸುವ ಇಲ್ಲವೇ ಹೆಣ್ಣುಮಕ್ಕಳ ಘನತೆಯನ್ನು ಕುಂದಿಸುವ ಅಥವಾ ನ್ಯಾಯಯುತ ವಿಚಾರಣೆಯ ಮೇಲೆ ಅಡ್ಡ ಪರಿಣಾಮ ಬೀರುವ ಟೀಕೆ ಟಿಪ್ಪಣಿಗಳು ಸರ್ವೇಸಾಮಾನ್ಯ ಆಗಿ ಹೋಗಿವೆ. ಅತ್ಯಾಚಾರಕ್ಕೆ ಈಡಾದ ಹೆಣ್ಣುಮಗಳು ’ಸಡಿಲ ನಡತೆಯವಳು’ ಅಥವಾ ’ಲೈಂಗಿಕ ಕ್ರಿಯೆಗಳ ಅಭ್ಯಾಸವಿರುವವಳು’ ಎಂಬ ವಾದವನ್ನು ಪುರಸ್ಕರಿಸಿ ಆರೋಪಿ ಗಂಡಸಿಗೆ ಜಾಮೀನು ನೀಡಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಆರೋಪಿ ಮತ್ತು ಹಲ್ಲೆಗೀಡಾದ ಹೆಣ್ಣುಮಗಳ ನಡುವೆ ಮಧ್ಯಸ್ಥಿಕೆ, ಒಡಂಬಡಿಕೆ- ವಿವಾಹ ಏರ್ಪಡಿಸಿ ಅತ್ಯಾಚಾರದಂತಹ ಹೀನ ಅಪರಾಧದ ತೀವ್ರತೆಯನ್ನು ತಗ್ಗಿಸಿ ಕ್ಷುಲ್ಲಕಗೊಳಿಸಲಾಗುತ್ತಿದೆ.

ತನ್ನ ಇಚ್ಛೆಗೆ ವಿರುದ್ಧವಾಗಿ ಮೇಲೆರಗಿ ಉಲ್ಲಂಘಿಸಿದವನನ್ನೇ ಗಂಡನನ್ನಾಗಿ ಕಟ್ಟಿಕೊಳ್ಳುವ ಮತ್ತೊಂದು ಬಲಾತ್ಕಾರವನ್ನು ವ್ಯವಸ್ಥೆಯು ಹೆಣ್ಣಿನ ಮೇಲೆ ಎಸಗತೊಡಗಿದೆ.

ಮನುಧರ್ಮಶಾಸ್ತ್ರವು ನರನಾಡಿಗಳಲ್ಲಿ ನೆಲೆಗೊಂಡಿರುವ ಭಾರತ ಭೂಮಿಯಲ್ಲಿ ಗಂಡಾಳಿಕೆಯ ವಿಕೃತಿಗಳು ಹೆಣ್ಣು ಮೈ-ಮನಗಳನ್ನು ಬಗೆಬಗೆಯ ಕ್ರೌರ್ಯಗಳಿಗೆ ಗುರಿ ಮಾಡಿವೆ. ಹಲ್ಲೆಗೆ ಅನ್ಯಾಯಕ್ಕೆ ಬಲಿಯಾದ ಆಕೆಯನ್ನೇ ಆರೋಪಿಯಂತೆ ಕಾಣಲಾಗುತ್ತಿದೆ. ನ್ಯಾಯ ಪಡೆಯುವ ಪ್ರಕ್ರಿಯೆಯೇ ಆಕೆಯ ಪಾಲಿಗೆ ಚಿತ್ರಹಿಂಸೆಯಾಗಿ ಪರಿಣಮಿಸಿದೆ.

ಅಪರ್ಣಾ ಭಟ್ ಮತ್ತಿತರರು ಈ ಪ್ರವೃತ್ತಿಯನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟು ಇತ್ತೀಚೆಗೆ ನೀಡಿರುವ ತೀರ್ಪು ಕಣ್ಣು ತೆರೆಸುವಂತಹುದು.

ಲೈಂಗಿಕ ಅಪರಾಧಗಳ ವಿಚಾರಣೆಯಲ್ಲಿ ಕೋರ್ಟುಗಳು ಸೂಕ್ಷ್ಮ ಸಂವೇದನಾಶೀಲತೆಯನ್ನು ತೋರುವಂತೆ ತಾಕೀತು ಮಾಡಿದೆ. ಜಾಮೀನು ನೀಡುವಾಗ ಪಾಲಿಸಲೇಬೇಕಾದ ಏಳು ಪ್ರಮುಖ ನಿರ್ದೇಶನಗಳನ್ನು ದೇಶದ ಎಲ್ಲ ಹೈಕೋರ್ಟುಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ವಿಧಿಸಿದೆ.

1. ಆರೋಪಿಗೆ ಜಾಮೀನು ನೀಡುವಾಗ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಏರ್ಪಡುವಂತಹ ಯಾವ ಷರತ್ತನ್ನೂ ಹಾಕಬಾರದು. ಬದಲಾಗಿ ನ್ಯಾಯಾಲಯ ವಿಧಿಸುವ ಷರತ್ತುಗಳು ಆರೋಪಿಯಿಂದ ಫಿರ್ಯಾದುದಾರಳನ್ನು ಮತ್ತಷ್ಟು ಕಿರುಕುಳದಿಂದ ರಕ್ಷಿಸುವಂತಿರಬೇಕು.

2. ಸಂತ್ರಸ್ತೆಗೆ ಆರೋಪಿಯಿಂದ ಕಿರುಕುಳದ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ಅನಿಸಿದರೆ ಅಥವಾ ಅಂತಹ ಸಂದೇಹ ವ್ಯಕ್ತವಾದರೆ ಆಕೆಯ ರಕ್ಷಣೆಗೆ ಸೂಕ್ತ ಆದೇಶ ನೀಡಬೇಕು. ಆಕೆಯ ಸಂಪರ್ಕ ಬೆಳೆಸದಂತೆ ಆರೋಪಿಗೆ ನಿರ್ದೇಶನ ನೀಡಬೇಕು.

3. ಆರೋಪಿಗೆ ಜಾಮೀನು ಮಂಜೂರಾದಲ್ಲಿ, ತಕ್ಷಣವೇ ಆ ಕುರಿತು ಸಂತ್ರಸ್ತೆಗೆ ತಿಳಿಯಪಡಿಸಬೇಕು.

4. ಜಾಮೀನಿನ ಷರತ್ತುಗಳು ಮತ್ತು ಆದೇಶಗಳು ಮಹಿಳೆಯರ ಕುರಿತು ಸಮಾಜದಲ್ಲಿ ನೆಲೆಸಿರುವ ರೂಢಿಗತ ಮತ್ತು ಗಂಡಾಳಿಕೆಯ ಧೋರಣೆಗಳನ್ನು ಬಿಂಬಿಸಕೂಡದು. ಈ ಷರತ್ತು-ಆದೇಶಗಳು ಭಾರತೀಯ ಅಪರಾಧ ಸಂಹಿತೆಗೆ ಅನುಗುಣವಾಗಿರತಕ್ಕದ್ದು. ಸಂತ್ರಸ್ತೆಯ ಉಡುಗೆ ತೊಡುಗೆ, ವರ್ತನೆ, ಹಳೆಯ ನಡತೆ ಅಥವಾ ಆಕೆಯ ನೈತಿಕ ಮೌಲ್ಯಗಳ ಕುರಿತ ಯಾವುದೇ ಮಾತುಗಳಿಗೆ ಆದೇಶಗಳಲ್ಲಾಗಲಿ, ಷರತ್ತುಗಳಲ್ಲಾಗಲಿ ಅವಕಾಶ ಇಲ್ಲ.

5. ಲಿಂಗ ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ನ್ಯಾಯ ನೀಡುವಾಗ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಸಂಧಾನ ಅಥವಾ ಲಗ್ನವಾಗುವಂತೆ ಮನವೊಲಿಸುವ ಸಲಹೆ ಸೂಚನೆಗಳನ್ನು ನೀಡಕೂಡದು. ಇಂತಹ ನಡೆಗಳು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದಂತಹವು.

6. ವಿಚಾರಣೆ ಮತ್ತು ವಾದಮಂಡನೆಯ ಕಲಾಪಗಳಲ್ಲಿ ಸಂತ್ರಸ್ತೆಗೆ ಮನೋಯಾತನೆ ಉಂಟು ಮಾಡುವಂತಹ ಯಾವುದೇ ಮಾತುಗಳಿಗೆ ಅವಕಾಶ ನೀಡಕೂಡದು. ಅಂತಹ ಸೂಕ್ಷ್ಮ ಸಂವೇದನೆಯನ್ನು ನ್ಯಾಯಾಧೀಶರು ಸದಾ ಹೊಂದಿರತಕ್ಕದ್ದು.

7. ವಿಶೇಷವಾಗಿ ಸಂತ್ರಸ್ತೆಯ ಆತ್ಮವಿಶ್ವಾಸವನ್ನು ಕುಂದಿಸುವ ಇಲ್ಲವೇ ಕದಲಿಸುವಂತಹ ಯಾವುದೇ ಪದಗಳನ್ನು ಮಾತಿನಲ್ಲಾಗಲಿ, ಬರೆಹದಲ್ಲಾಗಲಿ ನ್ಯಾಯಾಧೀಶರು ಬಳಸತಕ್ಕದ್ದಲ್ಲ.

PC : DNA India

ನ್ಯಾಯನಿರ್ಣಯ ಮಾಡುವಾಗ ನ್ಯಾಯಾಲಯಗಳು ಈ ಕೆಳಕಂಡ ರೂಢಿಗತ ಧೋರಣೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ದೂರವಿಡುವಂತೆಯೂ ಸುಪ್ರೀಮ್ ಕೋರ್ಟು ನಿರ್ದೇಶನ ನೀಡಿದೆ:

1. ಮಹಿಳೆ ದೈಹಿಕವಾಗಿ ದುರ್ಬಲಳು.

2. ಹೆಣ್ಣುಮಕ್ಕಳು ಸ್ವಂತ ನಿರ್ಧಾರ ಮಾಡಲಾರರು.

3. ಪುರುಷರೇ ಮನೆಯ ಮುಖ್ಯಸ್ಥರು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳಬೇಕು.

4. ಮಹಿಳೆಯರು ವಿಧೇಯರಾಗಿಯೂ ಅಡಿಯಾಳಾಗಿಯೂ ಇರತಕ್ಕದ್ದು.

5. ಲೈಂಗಿಕ ಪರಿಶುದ್ಧಿಯನ್ನು ಹೊಂದಿದವರೇ ಒಳ್ಳೆಯ ಹೆಣ್ಣುಮಕ್ಕಳು.

6. ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕರ್ತವ್ಯ ಮತ್ತು ಪಾತ್ರ. ಪ್ರತಿಯೊಬ್ಬ ಹೆಣ್ಣೂ ತಾಯಿ ಆಗಬಯಸುವಳು.

7. ಮಕ್ಕಳ ಪಾಲನೆ ಪೋಷಣೆಗೆ ಮಹಿಳೆಯೇ ಬಾಧ್ಯಸ್ಥಳು.

8. ರಾತ್ರಿ ವೇಳೆ ಒಬ್ಬಳೇ ಇರುವ ಅಥವಾ ನಿರ್ದಿಷ್ಟ ಉಡುಪುಗಳನ್ನು ತೊಡುವುದು ಮಹಿಳೆಯ ಮೇಲಿನ ಹಲ್ಲೆಗಳಿಗೆ ಕಾರಣ.

9. ಮದ್ಯಪಾನ ಮತ್ತು ಧೂಮಪಾನ ಮಾಡುವ ಹೆಣ್ಣುಮಗಳು ತನ್ನ ಮೇಲೆ ಪುರುಷರು ನಡೆಸುವ ಹಲ್ಲೆಗಳಿಗೆ ಖುದ್ದು ಬಾಧ್ಯಸ್ಥಳು. ಇಂತಹ ಹಲ್ಲೆಗಳನ್ನು ಆಕೆ ತಾನಾಗಿ ಆಹ್ವಾನಿಸುತ್ತಾಳೆ.

10. ಮಹಿಳೆಯರು ಭಾವುಕರು. ಬಹುತೇಕ ಅತಿಯಾಗಿ ಪ್ರತಿಕ್ರಿಯಿಸುವರು ಹೀಗಾಗಿ ಅವರ ಹೇಳಿಕೆಗಳಿಗೆ ಪುಷ್ಟೀಕರಣ ಬೇಕು.

11. ಲೈಂಗಿಕವಾಗಿ ಸಕ್ರಿಯರಾಗಿರುವ ಮಹಿಳೆಯರು ಲೈಂಗಿಕ ಹಲ್ಲೆಯ ಪ್ರಕರಣಗಳಲ್ಲಿ ತಾವು ಒಪ್ಪಿಗೆ ಕೊಟ್ಟಿರಲಿಲ್ಲ ಎಂಬುದಾಗಿ ನೀಡುವ ಸಾಕ್ಷ್ಯವನ್ನು ಅನುಮಾನದಿಂದ ನೋಡಬೇಕು.

12. ಲೈಂಗಿಕ ಅಪರಾಧದ ಪ್ರಕರಣಗಳಲ್ಲಿ ದೈಹಿಕ ದಾಳಿಯ ಸಾಕ್ಷ್ಯಗಳು ಇಲ್ಲದೆ ಹೋದಲ್ಲಿ ಶಾರೀರಿಕ ಸಂಬಂಧಕ್ಕೆ ಆಕೆ ಒಪ್ಪಿಗೆ ನೀಡಿದ್ದಳು ಎಂದೇ ಅರ್ಥ.

ಈ ಮೇಲಿನ ಧೋರಣೆಗಳನ್ನು ದೂರವಿಟ್ಟು ಎಲ್ಲ ನಿರ್ದೇಶನಗಳನ್ನು ಅಳವಡಿಸಿದ ಲಿಂಗಸೂಕ್ಷ್ಮತೆಯ ಮಾದರಿಯನ್ನು ತಯಾರಿಸಬೇಕು. ಅದನ್ನು ನ್ಯಾಯಾಧೀಶರಿಗೆ ನೀಡುವ ಮೂಲತರಬೇತಿಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಮೂರು ತಿಂಗಳ ಒಳಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯು ತ್ವರಿತವಾಗಿ ಈ ತರಬೇತಿ ಪಠ್ಯವನ್ನು ಸಮಾಜಶಾಸ್ತ್ರಜ್ಞರು, ಮನಶ್ಯಾಸ್ತ್ರಜ್ಞರು ಹಾಗೂ ಲಿಂಗ ಅಧ್ಯಯನ ತಜ್ಞರ ಜೊತೆ ಸಮಾಲೋಚಿಸಿ ರೂಪಿಸಬೇಕು ಎಂದು ಸುಪ್ರೀಮ್ ಕೋರ್ಟ್ ವಿಧಿಸಿದೆ.

ಇದೇ ರೀತಿ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ (ಎಲ್‌ಎಲ್‌ಬಿ) ವ್ಯಾಸಂಗದ ಭಾಗವಾಗಿ ಈ ಸಂಗತಿಗಳನ್ನು ಕಲಿಸತಕ್ಕದ್ದು. ಅಖಿಲ ಭಾರತ ವಕೀಲ ಪರೀಕ್ಷೆಯ ಪಠ್ಯದಲ್ಲಿ ಲೈಂಗಿಕ ಅಪರಾಧಗಳು ಮತ್ತು ಲಿಂಗಸೂಕ್ಷ್ಮತೆ ಕುರಿತ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು ಎಂದು ಬಾರ್ ಕೌನ್ಸಿಲ್ ಅಫ್ ಇಂಡಿಯಾಗೆ ಸೂಚಿಸಲಾಗಿದೆ.

ಲೈಂಗಿಕ ಅಪರಾಧಗಳ ಕುರಿತು ನ್ಯಾಯಾಧೀಶರು ಹೊಂದಬೇಕಿರುವ ಸೂಕ್ಷ್ಮ ಸಂವೇದನೆಯ ಬಗೆಗೆ ತಜ್ಞರೊಂದಿಗೆ ಎಲ್ಲ ಹೈಕೋರ್ಟುಗಳು ಸಮಾಲೋಚಿಸಿ ನ್ಯಾಯಾಂಗ ಸೇವೆಗಳ ಪರೀಕ್ಷೆಗಳಿಗೆ ಓದಿಕೊಳ್ಳಬೇಕಿರುವ ಪಠ್ಯದಲ್ಲಿ ಅಳವಡಿಸಬೇಕು ಎಂದೂ ಸುಪ್ರೀಮ್ ಕೋರ್ಟು ತಾಕೀತು ಮಾಡಿದೆ.

ಮಾನವೀಯವೂ ಪ್ರಗತಿಪರವೂ ಆಗಿರುವ ಅನೇಕ ತೀರ್ಪುಗಳನ್ನು ವ್ಯವಸ್ಥೆಯು ನುಂಗಿ ಹಾಕಿರುವುದುಂಟು. ಹಾಲಿ ತೀರ್ಪಿಗೆ ಅಂತಹ ದುರ್ಗತಿ ಒದಗದಿರಲಿ.


ಇದನ್ನೂ ಓದಿ: ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...

ಉತ್ತರಾಖಂಡ: ಮೇಲ್ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ 18 ವರ್ಷದ ದಲಿತ ಯುವಕನ ಹತ್ಯೆ, ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ 

ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ...

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ...

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....

ವೈಜಾಗ್ ಸ್ಟೀಲ್ ಅಪಘಾತಕ್ಕೆ 8 ಮಂದಿ ಬಲಿ: ಸಿಬ್ಬಂದಿ ಕೊರತೆಯ ಬಗ್ಗೆ ಕಾರ್ಮಿಕ ಸಂಘಗಳ ಆರೋಪ: ಸಾವಿನ ಅಂಚಿನಲ್ಲೂ ಕುಟುಂಬಕ್ಕಾಗಿ ಮಿಡಿದ ಕಾರ್ಮಿಕ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸೋಮವಾರ (ಜೂನ್ 8, 2026) ಸಂಜೆ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ಸ್ಥಾವರದ ಸ್ಟೀಲ್ ಮೆಲ್ಟ್ ಶಾಪ್-1 (SMS-1)...

ಅಂದು ಪಿಣರಾಯಿ ಮನೆ ಮೇಲೆ ದಾಳಿ; ಈಗ ವೀಣಾ ವಿಜಯನ್‌ಗೆ ಸಮನ್ಸ್‌: ಹಿರಿಯ ಕಮ್ಯುನಿಸ್ಟ್‌ ನಾಯಕನ ಕುಟುಂಬದ ಮೇಲೆ ಇಡಿ ಕಣ್ಣು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಕೊನೆಗೆ ಅಲ್ಲಿ ಏನೂ ಸಿಗದೆ ಬರಿಗೈನಲ್ಲಿ ಅಧಿಕಾರಿಗಳು...