Homeಅಂಕಣಗಳುಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಸಾಮಾಜಿಕ ಕಳಕಳಿಯ ಹೆಣ್ಣುಮಕ್ಕಳ ಗುಂಪೊಂದು ಇಂತಹ ಬುಂದೇಲಖಂಡದಲ್ಲಿ ಭಿನ್ನ ಬಗೆಯ ಗ್ರಾಮೀಣ ಪತ್ರಿಕೋದ್ಯಮವನ್ನು ನೆಲೆ ನಿಲ್ಲಿಸಿದೆ. ಎಂಟು ಪುಟಗಳ ಈ ವಾರಪತ್ರಿಕೆ ಹೆಸರು "ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಿದು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು. ವಿದ್ಯಮಾನಗಳನ್ನು ಹೆಣ್ಣುನೋಟದಿಂದ ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಈ ಪತ್ರಿಕೆಯ ವಿಶೇಷ.

- Advertisement -
- Advertisement -

ಮಧ್ಯಪ್ರದೇಶದಲ್ಲಿ ಹುಟ್ಟಿ ರಾಜಸ್ತಾನವನ್ನು ಹಾದು ಉತ್ತರಪ್ರದೇಶದಲ್ಲಿ ಯಮುನೆಯನ್ನು ಸೇರುವ ಚಂಬಲ್ ನದಿಯ ಪ್ರಾಚೀನ ಹೆಸರು ಚರ್ಮಾನ್ವತಿ. ಅರ್ಥಾತ್ ದಂಡೆಗಳ ಮೇಲೆ ಚರ್ಮವನ್ನು ಒಣಗಿಸಲಾಗುತ್ತಿದ್ದ ನದಿ. ಮಹಾಭಾರತದಲ್ಲಿ ಈ ನದಿಯ ಹೆಸರು ಚರ್ಮಾನ್ಯವತಿ. ಆರ್ಯ ಅರಸು ರಂತಿದೇವನು ಅಗ್ನಿಹೋತ್ರದಲ್ಲಿ ಬಲಿ ನೀಡಿದ ಸಹಸ್ರಾರು ಪ್ರಾಣಿಗಳ ರಕ್ತ ಮತ್ತು ರಾಶಿ ಹಾಕಲಾಗಿದ್ದ ಚರ್ಮಗಳಿಂದ ಹರಿದ ದ್ರವಧಾರೆಯಿಂದ ಹುಟ್ಟಿದ ನದಿ. ಪಾಂಚಾಲ ರಾಜ್ಯದ ದಕ್ಷಿಣ ಸರಹದ್ದಾಗಿತ್ತು. ಶಕುನಿಯ ರಾಜ್ಯವಾಗಿದ್ದ ಸೀಮೆ. ಪಗಡೆಯಾಟ- ವಸ್ತ್ರಾಪಹರಣದ ನಂತರ ಕ್ರುದ್ಧ ದ್ರೌಪದಿ ಚರ್ಮಾನ್ವತಿಯನ್ನೂ ಅದರ ನೀರು ಕುಡಿದವರನ್ನೂ ಶಪಿಸುತ್ತಾಳೆ.

ಶಪಿತ ನದಿಯ ನೀರನ್ನು ಯಾರೂ ಮುಟ್ಟುವುದಿಲ್ಲ. ಹೀಗಾಗಿ ಈ ನದಿ ಮಲಿನವಾಗಲಿಲ್ಲ ಎಂಬ ಪ್ರತೀತಿಯಿದೆ. ಚಂಬಲ್ ಇಂದಿಗೂ ದೇಶದ ಅತ್ಯಂತ ಪರಿಶುದ್ಧ ನದಿಗಳಲ್ಲೊಂದು. ಚಂಬಲ್ ನೂರಾರು ವರ್ಷಗಳ ಕಾಲ ಕೊರೆದು ರಚಿಸಿರುವ ದುರ್ಗಮ ಕಣಿವೆಗಳು ಖ್ಯಾತ-ಕುಖ್ಯಾತ. ತಮ್ಮನ್ನು ಬಂಡಾಯಗಾರರು ಎಂದು ಕರೆದುಕೊಂಡ ಡಕಾಯಿತರು 20ನೆಯ ಶತಮಾನದಲ್ಲಿ ಈ ಕಣಿವೆಗಳಿಗೆ ಭೀತಿ- ನಿಗೂಢತೆಯನ್ನು ಲೇಪಿಸಿದರು. ಡಕಾಯಿತರ ಕುರಿತು ತಯಾರಿಸಿದ ಚಲನಚಿತ್ರಗಳು ಚಂಬಲ್ ಕಣಿವೆಯ ದಂತಕತೆಯನ್ನು ದೇಶದ ಮನೆಮನೆಗೆ ಮುಟ್ಟಿಸಿದವು. ಭೂಲಕ್ಷಣಗಳು ಮತ್ತು ಹಿಂಸೆಯ ಕುಖ್ಯಾತಿಯ ಕಾರಣ ಈ ಸೀಮೆಗೆ ಕೈಗಾರಿಕೆಗಳು ಕಾಲಿಡಲಿಲ್ಲ. ಚಂಬಲ್ ನದಿಯ ನೀರು ಇಂದಿಗೂ ಸ್ಫಟಿಕ ಶುದ್ಧವಾಗಿಯೇ ಉಳಿದಿದೆ.

ದಟ್ಟದಾರಿದ್ರ್ಯ, ಹೆಪ್ಪುಗಟ್ಟಿರುವ ಜಾತಿಪದ್ಧತಿಯ ಕ್ರೌರ್ಯ ಉತ್ತರಪ್ರದೇಶ-ಮಧ್ಯಪ್ರದೇಶ-ರಾಜಸ್ತಾನದ ಈ ಸಂಗಮ ಸೀಮೆಯ ಬಹುಜನರಾದ ದಲಿತರು ಹಿಂದುಳಿದವರು ಹಾಗೂ ಬುಡಕಟ್ಟು ಜನರನ್ನು ಇಂದಿಗೂ ತುಳಿದಿಟ್ಟಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಸೀಮೆಗಳು ಸೇರಿ ಬುಂದೇಲಖಂಡ ಎಂದು ಎರಡು ರಾಜ್ಯಗಳ ಈ ಪ್ರದೇಶವನ್ನು ಕತ್ತಲ ಖಂಡ ಎನ್ನುವುದುಂಟು. ಅನಕ್ಷರತೆ, ಬಂಜರು, ಬಡತನ, ಬರಗಾಲ, ಬವಣೆಗಳೇ ಹಿಂಡಿರುವ ಖಂಡವಿದು. ಉಪ್ಪು-ರೊಟ್ಟಿ, ಹುಲ್ಲುಬೀಜಗಳನ್ನು ಬೀಸಿದ ಹಿಟ್ಟಿನ ರೊಟ್ಟಿಯನ್ನು ತಿಂದು ಜೀವ ಹಿಡಿದು ಸುದ್ದಿಯಾದವರು ಇಲ್ಲಿನ ಜನ. ಬೆಂಬಿಡದ ಬರಗಾಲ ಸಾವಿರಾರು ಸಣ್ಣ ಹಿಡುವಳಿದಾರರ ಪ್ರಾಣಬಲಿ ಪಡೆದ ಪ್ರದೇಶ. ಹಸಿದ ಮಕ್ಕಳ ಸಂಕಟ ನೋಡಲಾಗದೆ ರಕ್ತ ಮಾರಿ ಹೊಟ್ಟೆ ಹೊರೆದ ಪ್ರಕರಣಗಳು ಇಲ್ಲಿಂದ ವರದಿಯಾಗಿರುವುದು ಉಂಟು.

ಸಾಮಾಜಿಕ ಕಳಕಳಿಯ ಹೆಣ್ಣುಮಕ್ಕಳ ಗುಂಪೊಂದು ಇಂತಹ ಬುಂದೇಲಖಂಡದಲ್ಲಿ ಭಿನ್ನ ಬಗೆಯ ಗ್ರಾಮೀಣ ಪತ್ರಿಕೋದ್ಯಮವನ್ನು ನೆಲೆ ನಿಲ್ಲಿಸಿದೆ. ಎಂಟು ಪುಟಗಳ ಈ ವಾರಪತ್ರಿಕೆ ಹೆಸರು “ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಿದು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು. ವಿದ್ಯಮಾನಗಳನ್ನು ಹೆಣ್ಣುನೋಟದಿಂದ ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಈ ಪತ್ರಿಕೆಯ ವಿಶೇಷ.

ಅವಧಿ, ಬುಂದೇಲಿ, ಭೋಜ್ಪುರಿ ಹಾಗೂ ಬಜ್ಜಿಕಾ ಎಂಬ ನಾಲ್ಕು ಪ್ರಾದೇಶಿಕ ನುಡಿಗಟ್ಟುಗಳಲ್ಲಿ ಹೊರಬರುವ ಈ ವಾರಪತ್ರಿಕೆಯು ದೇಶವಿದೇಶಗಳ ಮಾಧ್ಯಮಗಳ ಗಮನ ಸೆಳೆದಿದೆ. ಪತ್ರಕರ್ತೆಯರಿಗೆಂದು ಮೀಸಲಾದ ಪ್ರತಿಷ್ಠಿತ ಚಮೇಲಿ ದೇವಿ ಜೈನ್ ಪ್ರಶಸ್ತಿ, ಯುನೆಸ್ಕೋದ ಕಿಂಗ್ ಸೆಜೋಂಗ್ ಸಾಕ್ಷರತೆ ಬಹುಮಾನ, ಲಾಡ್ಲಿ ಮೀಡಿಯಾ ಪ್ರಶಸ್ತಿ, ಟೈಮ್ಸ್ ನೌ ಸುದ್ದಿವಾಹಿನಿಯ ಅಮೇಝಿಂಗ್ ಇಂಡಿಯನ್ ಪ್ರಶಸ್ತಿ, ಕೈಫಿ ಅಜ್ಮಿ ಪ್ರಶಸ್ತಿ, ಬೆಂಗಳೂರಿನ ಸ್ಫೂರ್ತಿಧಾಮ ಟ್ರಸ್ಟ್‌ನ ಬೋಧಿವೃಕ್ಷ ಪ್ರಶಸ್ತಿಗಳು ಈ ಸಾಹಸಕ್ಕೆ ಸಂದಿವೆ.

ಒಂದು ಕಾಲಕ್ಕೆ ಕಂಪ್ಯೂಟರನ್ನು ಮುಟ್ಟುವುದಿರಲಿ, ನೋಡುವುದೂ ದುಸ್ಸಾಧ್ಯವಿದ್ದ ಹಿನ್ನೆಲೆಯಿಂದ ಬಂದ ಬಡ ಯುವತಿಯರ ಆತ್ಮವಿಶ್ವಾಸ ಕುದುರಿದೆ. ಸಮಾಜ, ಸರ್ಕಾರ, ಸರೀಕ ಪತ್ರಕರ್ತರು ಗುರುತಿಸಿ ನಡೆಸಿಕೊಳ್ಳುವ ಪರಿ ಹೊಸ ಹುಮ್ಮಸ್ಸು ನೀಡಿದೆ. ಹೆಸರಿಗಂಟಿಕೊಂಡು ಬಂದ ತಳಸಮುದಾಯದ ಅಡ್ಡಹೆಸರುಗಳನ್ನು ಈ ಯುವತಿಯರು ಕಿತ್ತೆಸೆದಿದ್ದಾರೆ.

ದೊಡ್ಡ ಪತ್ರಿಕೆಗಳು ದೊಡ್ಡ ಪೇಟೆ ಪಟ್ಟಣಗಳ ಸುದ್ದಿ ಪ್ರಕಟಿಸುತ್ತವೆ. ಅವುಗಳ ಸಂಪಾದಕೀಯ ಸಿಬ್ಬಂದಿ ವಿಶ್ವವಿದ್ಯಾಲಯ ಶಿಕ್ಷಣ ಉಳ್ಳವರು, ಇಂಗ್ಲಿಷ್ ಬಲ್ಲವರು. ಬುಂದೇಲಖಂಡದ ಈ ಹಳ್ಳಿಗಾಡಿನ ಜನರ ಪಾಲಿಗೆ ಇಂಗ್ಲಿಷ್ ಮಾತ್ರವಲ್ಲ, ಹಿಂದಿ ಕೂಡ ಕುಲೀನ ಭಾಷೆ. ದಲಿತ ಮಹಿಳೆಯರು ದುಪ್ಪಟ್ಟು ಶೋಷಣೆ ಎದುರಿಸಿದವರು. ಬೇರುಮಟ್ಟದ ಸ್ಥಳೀಯ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲವರು ಎಂಬುದು ’ಲೆಹರಿಯಾ’ ಹಿಂದಿನ ಆಲೋಚನೆ.

ಕ್ಷೇತ್ರಕ್ಕೆ ತೆರಳಿ ಸುದ್ದಿ ಸಂಗ್ರಹಿಸುವವರು, ಬರೆಯುವವರು, ಪರಿಷ್ಕರಿಸಿ ತಲೆಬರೆಹ ನೀಡುವವರು, ಪತ್ರಿಕೆಯ ವಿನ್ಯಾಸ ಮಾಡುವವರು, ಮುದ್ರಣ ಮಾಡಿಸಿ ತರುವವರು, ಹಳ್ಳಿಗಳಿಗೆ ಹಂಚುವವರು ಎಲ್ಲರೂ ಹೆಣ್ಣುಮಕ್ಕಳೇ. ಒಂಟಿಯಾಗಿ ಹಳ್ಳಿ ಹಳ್ಳಿ ಸುತ್ತಿ ಸುದ್ದಿ ಹೆಕ್ಕುತ್ತಾರೆ. ನಕಾಶೆಯಲ್ಲೇ ಇಲ್ಲದ, ನೀರು ದೀಪಗಳಿರದ, ಅಂಚೆಯೂ ತಲುಪದ ಕೊಂಪೆಗಳನ್ನೂ ಬಿಟ್ಟಿಲ್ಲ ಇವರು. ದೊಡ್ಡ ಪತ್ರಿಕೆಗಳ ವರದಿಗಾರರು ಅನುಭವಿಸುವ ಸೌಲಭ್ಯಗಳು ಇವರಿಗಿಲ್ಲ. ಹಸಿವಾದರೆ ಮನೆಯಿಂದ ಒಯ್ದ ಬುತ್ತಿಯೇ ಗತಿ. ಬಸ್ಸು, ಸೈಕಲ್ಲು, ಕಿಲೋಮೀಟರುಗಟ್ಟಲೆ ಕಾಲ್ನಡಿಗೆ ಮಾಮೂಲು. ಪುಂಡು ಪೋಕರಿಗಳನ್ನೂ ಪುರುಷಪ್ರಾಧಾನ್ಯ ವ್ಯವಸ್ಥೆಯ ಕಿರುಕುಳಗಳನ್ನೂ ನಿತ್ಯ ನುಂಗಿ ನಡೆಯುತ್ತಾರೆ.

ಬುಂದೇಲ್ ಖಂಡದ ಚಿತ್ರಕೂಟ, ಫೈಝಾಬಾದ್, ಝಾನ್ಸಿ, ಲಲಿತಪುರ್, ಅಂಬೇಡ್ಕರ್ ನಗರ್, ಬಾಂದಾ ಜಿಲ್ಲೆಗಳಲ್ಲಿ ಲೆಹರಿಯಾ ಹೆಜ್ಜೆ ಗುರುತುಗಳು ಪಡಿಮೂಡಿವೆ. ಆರುನೂರು ಕುಗ್ರಾಮಗಳ ಬದುಕಿನ ಹಾಸು ಹೊಕ್ಕಾಗಿದೆ ಖಬರ್ ಲೆಹರಿಯಾ. ಈ ಪೈಕಿ ಬಹುತೇಕ ಹಳ್ಳಿಗಳು ಮುಖ್ಯವಾಹಿನಿಯ ಸುದ್ದಿಪತ್ರಿಕೆಗಳನ್ನು ಕಂಡಿಲ್ಲ. ಹಳ್ಳಿ ಹಳ್ಳಿಗಳ ಕುಡಿವ ನೀರು, ರಸ್ತೆ, ಶಾಲೆ, ಆಸ್ಪತ್ರೆ, ಮನರೇಗ ಯೋಜನೆಯಲ್ಲಿ ಕೂಲಿ ನಿರಾಕರಿಸಿ ಬಡಪಾಯಿಗಳ ವಂಚಿಸುವ ಪಂಚಾಯತಿ ಪ್ರಧಾನ, ರೇಷನ್ ಕಾರ್ಡ್ ಸಮಸ್ಯೆ, ಕಳವು, ಕೊಲೆ, ದಬ್ಬಾಳಿಕೆ, ಅಧಿಕಾರಿಗಳ ನಿರ್ಲಕ್ಷ್ಯದ ವ್ಯಥೆಯ ಕತೆಗಳ ಕುರಿತು ದೊಡ್ಡ ಪತ್ರಿಕೆಗಳಿಗೆ ರುಚಿಯಿಲ್ಲ.

ಡಿಜಿಟಲ್ ದಾರಿ ಹಿಡಿದ ನಂತರ ಪತ್ರಿಕೆಯನ್ನು ಓದುವ ಹೆಣ್ಣುಮಕ್ಕಳ ಪ್ರಮಾಣ ಭಾರೀ ಜಿಗಿತ ಕಂಡಿದೆ. ಸ್ಮಾರ್ಟ್ ಫೋನ್ ಮತ್ತು ಸೆಲ್ಫಿ ಸ್ಟಿಕ್ ಬಳಸಿ ಫೋಟೋ-ವಿಡಿಯೋ ತೆಗೆದು ವರದಿ ಸಂದರ್ಶನಗಳನ್ನು ವಾಟ್ಸಾಪ್‌ನಲ್ಲಿ ಕಚೇರಿಗೆ ರವಾನಿಸುತ್ತಿದ್ದಾರೆ ವರದಿಗಾರ್ತಿಯರು. ಪತ್ರಿಕೆಯಲ್ಲಿ ಅಚ್ಚಾಗುವ ವರದಿಗಳು ದೃಶ್ಯರೂಪದಲ್ಲಿ ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ಲಕ್ಷಾಂತರ ಮಂದಿಯನ್ನು ತಲುಪುತ್ತಿವೆ.

ಪತ್ರಿಕೆಯ ಡಿಜಿಟಲ್ ವ್ಯವಹಾರಗಳನ್ನು ಮುದ್ರಣದಿಂದ ಪ್ರತ್ಯೇಕಿಸಿ ಚಂಬಲ್ ಮೀಡಿಯಾ ಎಂಬ ಹೊಸ ಕಂಪನಿಯ ಕೈಗೆ ಒಪ್ಪಿಸಲಾಗಿದೆ. ಗ್ರಾಮೀಣ ಡಿಜಿಟಲ್ ಮಾಧ್ಯಮದ ಹೂರಣವನ್ನು ರೂಪಿಸಿ ಪ್ರಸ್ತುತಪಡಿಸುವುದು ಈ ಕಂಪನಿಯ ಕಾರ್ಯಸೂಚಿ. ಗ್ರಾಮೀಣ ಪ್ರದೇಶಗಳಲ್ಲೂ ಈಗ ಅಂತರ್ಜಾಲ ಸೌಲಭ್ಯ ಧಾರಾಳ. ಆದರೆ ಆ ಜನರಿಗೆ ಗುಣಮಟ್ಟದ ಸ್ವತಂತ್ರ ಪ್ರಗತಿಪರ ಡಿಜಿಟಲ್ ಮೀಡಿಯಾ ಲಭ್ಯವಿಲ್ಲ. ಅವರ ಸುದ್ದಿಯನ್ನು ಅವರದೇ ಭಾಷೆಯಲ್ಲಿ ಹೇಳುವ ಮತ್ತೊಂದು ಪ್ರಯತ್ನ ಈವರೆಗೆ ಆಗಿಲ್ಲ, ಸನಿಹ ಭವಿಷ್ಯದಲ್ಲಿ ನಡೆಯುವುದೂ ಇಲ್ಲ. ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಹೆಣ್ಣುಮಕ್ಕಳೇ ಚಂಬಲ್ ಮೀಡಿಯಾದಲ್ಲೂ ಸಕ್ರಿಯರಾಗಿರುತ್ತಾರೆ. ಮುಂಬರುವ ಮೂರು ವರ್ಷಗಳಲ್ಲಿ ಹಿಂದೀ ರಾಜ್ಯಗಳ ಎಂಬತ್ತು ಜಿಲ್ಲೆಗಳಲ್ಲಿ ನೆಲೆಯೂರುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.

ಚಂಬಲ್ ಹೆಣ್ಣುಮಕ್ಕಳ ಈ ವಿರಳ ಪ್ರಯೋಗ ದೇಶದ ಇತರೆ ಸೀಮೆಗಳಲ್ಲೂ ಕುಡಿಯೊಡೆದು ಹಬ್ಬಬೇಕಿದೆ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...