Homeಕರೋನಾ ತಲ್ಲಣಲಸಿಕೆ ಕುರಿತು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳು: ಕಟಕಟೆಯಲ್ಲಿ ಮೋದಿ ಸರ್ಕಾರ!

ಲಸಿಕೆ ಕುರಿತು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳು: ಕಟಕಟೆಯಲ್ಲಿ ಮೋದಿ ಸರ್ಕಾರ!

- Advertisement -
- Advertisement -

ಕೃಪೆ: ದಿ ವೈರ್ – ಎಂ.ಕೆ. ವೇಣು

18-44 ವಯಸ್ಸಿನವರಿಗೆ ಒಕ್ಕೂಟ ಸರ್ಕಾರ ರೂಪಿಸಿರುವ ಲಸಿಕಾ ನೀತಿಯ ಬಗ್ಗೆ  ಸುಪ್ರೀಂ ಕೋರ್ಟ್ ಕಠಿಣ ಪ್ರಶ್ನೆಗಳನ್ನು ಶುಕ್ರವಾರ ಕೇಳಿದೆ. ನಾಗರಿಕರು ತಿಂಗಳುಗಳಿಂದ ಕೇಳುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಒಕ್ಕೂಟ ಸರ್ಕಾರ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಇಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ನ್ಯಾಯಮೂರ್ತಿ ಚಂದ್ರಚೂಡ್‍ ಕೇಳಿದ್ದಾರೆ. ಈ ಹಿಂದೆ ನಡೆದ ಎಲ್ಲಾ ಲಸಿಕೆ ಖರೀದಿ ಮಾತುಕತೆಗಳ ಎಲ್ಲ ವಿವರಗಳನ್ನು ಕೋರ್ಟ್ ಮುಂದೆ ಇಡುವಂತೆ ಚಂದ್ರಚೂಡ್ ಕೇಂದ್ರಕ್ಕೆ ನಿರ್ದೇಶನ ನೀಡಿದ್ದಾರೆ. ಜುಲೈ 2020 ರಿಂದ ಅಮೆರಿಕದ ಔಷಧಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿಕೊಂಡಿದೆ. ಹಾಗಿದ್ದಲ್ಲಿ, ಒಂಬತ್ತು ತಿಂಗಳಲ್ಲಿ ಯಾವ ಪ್ರಗತಿಯನ್ನು ಸಾಧಿಸಲಾಗಿದೆ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ.

ಆಮದಿಗಿಂತ ಹೆಚ್ಚು ನಿರ್ಣಾಯಕವಾದುದು, 2020 ರ ನವೆಂಬರ್‌ನಿಂದ ಪ್ರಧಾನ ಮಂತ್ರಿ ದೇಶೀಯ ಉತ್ಪಾದಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಜೊತೆ ನಡೆಸಿದ ಮಾತುಕತೆಗಳ ವಿವರಗಳು ಬಹಿರಂಗ ಆಗಬೇಕಿದೆ. ಕಳೆದ ವರುಷದಿಂದ ಇದು ನಡೆದೇ ಇದೆ. ದೇಶೀಯ ಉತ್ಪಾದಕರಿಂದ ಯಾವುದೇ ಪೂರ್ವ-ಆದೇಶವಿಲ್ಲದೆ ಪೂರೈಕೆಯ ಸ್ಪಷ್ಟ ಭರವಸೆ ಇಲ್ಲದೇ ಅಥವಾ ವಿಸ್ತರಣೆಗೆ ಅವರಿಗೆ ಬಂಡವಾಳದ ಬೆಂಬಲವಿಲ್ಲದೆ ಐದು ತಿಂಗಳುಗಳು  ನವೆಂಬರ್‌ನಿಂದ ಮಾರ್ಚಿವರೆಗೆ ಹೇಗೆ ಕಳೆದುಹೋಗಿವೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ ವಿವರವಾದ ವಿಚಾರಣೆ ನಡೆಸಬೇಕು. ವಾಸ್ತವವಾಗಿ, ಸುಪ್ರೀಂಕೋರ್ಟ್ ಈ ಲೆಕ್ಕ ಪಡೆಯಲು ಎಸ್‍ಐಐ ಮತ್ತು ಭಾರತ್ ಬಯೋಟೆಕ್‌ನಿಂದ ನಿರ್ದಿಷ್ಟ ವಿವರಗಳನ್ನು ಪಡೆಯಬೇಕು, ಕಳೆದ ಡಿಸೆಂಬರ್‌ನಿಂದ ಅವುಗಳ ಮತ್ತು ಪಿಎಂಒ ನಡುವೆ ನಡೆದ ಸಂವಹನಗಳ ಎಲ್ಲ ವಿವರವನ್ನೂ ಪಡೆಯಬೇಕು.

ಲಸಿಕೆಯ ತೀವ್ರ ಕೊರತೆ ಸದ್ಯದಲ್ಲಿಯೇ ಎದುರಾಗುವ ಸಾಧ್ಯತೆ ಇರುವುದರಿಂದ ಸುಪ್ರೀಂಕೋರ್ಟ್ ಅಂತಹ ವಿವರಗಳನ್ನು ಕೇಳುವುದು ಉತ್ತಮವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಬಲರಾಮ್‍ ಭಾರ್ಗವ ಅವರು ಅಧಿಕೃತವಾಗಿ, ದಿನಕ್ಕೆ 10 ಮಿಲಿಯನ್ ಡೋಸ್‍ಗಳ ಪೂರೈಕೆ ಜುಲೈ ಅಂತ್ಯದ ವೇಳೆಗೆ ಅಥವಾ ಆಗಸ್ಟ್ ಆರಂಭದಲ್ಲಿ ಮಾತ್ರ ಕಾರ್ಯಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಈ ಗುರಿಯನ್ನು ಸಹ ತಲುಪಬಹುದೇ ಎಂದು ಅನೇಕ ತಜ್ಞರು ಪ್ರಶ್ನಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಎಸ್‌ಐಐ ಮತ್ತು ಭಾರತ್ ಬಯೋಟೆಕ್ ಒಟ್ಟಾಗಿ 300 ಮಿಲಿಯನ್ ಲಸಿಕೆಗಳಿಗೆ  ಅಡ್ವಾನ್ಸ್ ಆರ್ಡರ್‌ಗೆ ಒಪ್ಪಿಕೊಂಡಿದ್ದು, ಅದರಂತೆ ಉತ್ಪಾದನೆ ಮಾಡಿದ್ದರೆ, ಆಗಸ್ಟ್ ವೇಳೆಗೆ ಭಾರತವು ಸಂಪೂರ್ಣ ಲಸಿಕೆ ಹಾಕಬಹುದಿತ್ತು. ಆದರೆ ಈಗಿನ ಪರಿಸ್ಥಿತಿ ನಿರಾಶಾದಾಯಕವಾಗಿದೆ.

ಇದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ವೈಫಲ್ಯ. ನವೆಂಬರ್‌ನಿಂದ ಮಾರ್ಚಿವರೆಗೆ ಕೇಂದ್ರ ಮತ್ತು ದೇಶೀಯ ಲಸಿಕೆ ಕಂಪನಿಗಳ ನಡುವೆ ರಾಜ್ಯಗಳಿಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ನೀತಿ ಅಳವಡಿಸಲಾಗಿತ್ತು. 18-44 ವಯಸ್ಸಿನವರಿಗೆ ಲಸಿಕೆ ಒದಗಿಸಲು ಕೇಂದ್ರವು ಒಪ್ಪಿದ ನಂತರವಷ್ಟೇ ಮೇ 1 ರಂದು ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ಹಾಕಿ ಕೇಂದ್ರ ನುಣುಚಿಕೊಳ್ಳುವ ಯತ್ನ ಮಾಡುತ್ತಿದೆ.

ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಇತರ ದುರ್ಬಲ ಗುಂಪುಗಳು ಸೇರಿದಂತೆ 45ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಸರ್ಕಾರವು ಉಚಿತ ಲಸಿಕೆಗಳನ್ನು ನೀಡಲು ಸಾಧ್ಯವಾದರೆ, ಅದೇ ನಿಯಮಗಳನ್ನು 18-44 ವಯಸ್ಸಿನವರಿಗೆ ಏಕೆ ವಿಸ್ತರಿಸಲಾಗಿಲ್ಲ? ಎಂದು ಸುಪ್ರೀಂಕೋರ್ಟ್ ಸರಿಯಾಗಿ ಮತ್ತು ಕಠಿಣವಾಗಿ ಪ್ರಶ್ನಿಸಿದೆ.

ದೇಶೀಯ ಲಸಿಕೆಗಳನ್ನು ಖರೀದಿಸಲು ರಾಜ್ಯಗಳೇಕೆ ಹೆಚ್ಚಿನ ದರ  ಪಾವತಿಸಬೇಕು? ಎಂದು ನ್ಯಾಯಾಲಯವು ಕೇಳಿದೆ. ಆದರೆ ಮೊದಲ ಸುತ್ತಿನಲ್ಲಿ ಅದೇ ಲಸಿಕೆಗಳನ್ನು ಹೆಚ್ಚು ಅಗ್ಗವಾಗಿ ಕೇಂದ್ರ ಖರೀದಿಸಿದೆ. ಇದು ಸರಿ. ಆದರೆ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೋಟಾಗಳನ್ನು ಹಂಚುವ ಆಧಾರವೇನು? ಬೆಲೆಯಲ್ಲಿ ತಾರತಮ್ಯವೇಕೆ ಈ ಎಲ್ಲ ಪ್ರಶ್ನೆಗಳಿಗೂ  ನ್ಯಾಯಾಲಯ ಕೇಂದ್ರದಿಂದ ವಿವರ ಕೇಳಿದೆ.  ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಲಸಿಕಾ ಅಭಿಯಾನದ ನಿಖರವಾದ ಚಿತ್ರಣವನ್ನು ಪ್ರಸ್ತುತಪಡಿಸಲು ನ್ಯಾಯಾಲಯ ಕೇಂದ್ರವನ್ನು ಕೇಳಿದೆ ಮತ್ತು ಈ ಉದ್ದೇಶಕ್ಕಾಗಿ 35,000 ಕೋಟಿ ರೂ.ಗಳನ್ನು ಹೇಗೆ ವ್ಯಯ ಮಾಡಿದೆ ಮತ್ತು ಮಾಡಲಿದೆ ಎಂದು ಪ್ರಶ್ನೆ ಮಾಡಿರುವ ನ್ಯಾಯಾಲಯ ಈ ಪ್ರಕ್ರಿಯೆಯಲ್ಲಿ  ಯಾವುದೇ ಪಾರದರ್ಶಕತೆ ಇಲ್ಲ ಎಂಬುದನ್ನು ಗಮನಿಸಿದೆ.

ಸಂಕ್ಷಿಪ್ತವಾಗಿ, ಆತಂಕಕ್ಕೊಳಗಾದ ನಾಗರಿಕರು ಕೇಳುತ್ತಿರುವ ಎಲ್ಲಾ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ನೀತಿ ನಿರೂಪಣೆಯನ್ನು ಸರಕಾರ ಮತ್ತು ಕಾರ್ಯಾಂಗಕ್ಕೆ  ಬಿಡಬೇಕೆಂದು ಕೇಂದ್ರದ ಕಾನೂನು ಅಧಿಕಾರಿ ನ್ಯಾಯಾಲಯಕ್ಕೆ ಸೂಚಿಸಿದಾಗ, “ನೀತಿ ನಿರೂಪಣೆಯು ಕಾರ್ಯನಿರ್ವಾಹಕನ ಏಕೈಕ ಡೊಮೇನ್ ಆಗಿ ಮುಂದುವರಿಯುತ್ತದೆ. ಆ ಪಾತ್ರವನ್ನು ವಹಿಸಿಕೊಳ್ಳುವ ಅಧಿಕಾರವನ್ನು ನ್ಯಾಯಾಂಗವು ಹೊಂದಿಲ್ಲ… ಈ ಅಧಿಕಾರಗಳ ವಿಭಜನೆಯು ಈ ನೀತಿಗಳ ನ್ಯಾಯಾಂಗ ವಿಮರ್ಶೆ ನಡೆಸಲು ನ್ಯಾಯಾಲಯಕ್ಕೆ ಅಡ್ಡಿ ಮಾಡಲಾರದು…..’ ಎಂದು ಸುಪ್ರೀಂಕೋರ್ಟ್ ದೃಢವಾಗಿ ಹೇಳಿದೆ.

ಇದರೊಂದಿಗೆ, ಭಾರತದ ಹಿಂದಿನ ಸಾರ್ವತ್ರಿಕ ಲಸಿಕಾ ಅಭಿಯಾನಗಳ ಹಿನ್ನೆಲೆಯಲ್ಲಿ ಲಸಿಕೆ ನೀತಿಯನ್ನು ಪರೀಕ್ಷಿಸುವುದನ್ನು ಮುಂದುವರಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.  ಜೀವಿಸುವ ಹಕ್ಕನ್ನು ರಕ್ಷಿಸುವ ಸಾಂವಿಧಾನಿಕ ಬಾಧ್ಯತೆಯನ್ನು ಕೇಂದ್ರವು ಪೂರೈಸುವ ಅಗತ್ಯವಿದೆ.


ಇದನ್ನೂ ಓದಿ: ಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ ಕೊರತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...