Homeಮುಖಪುಟಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ...

ಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ ಕೊರತೆ

- Advertisement -
- Advertisement -

ದೇಶದ 9 ಕಾರ್ಪೋರೇಟ್‍ ಅಂದರೆ ಬೃಹತ್‍ ಆಸ್ಪತ್ರೆ ಸಮೂಹಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು ಲಸಿಕೆಗಳಲ್ಲಿ ಅರ್ಧದಷ್ಟನ್ನು ಖರೀದಿಸಿ ಸ್ಟಾಕ್ ಮಾಡಿಕೊಂಡಿವೆ ಎಂದು ಇಂಡಿಯನ್‍ ಎಕ್ಸ್‌ಪ್ರೆಸ್‍ ವರದಿ ಮಾಡಿದೆ.

ಕೇಂದ್ರ ಸರ್ಕಾರವು ತನ್ನ ಲಸಿಕಾ ನೀತಿಯನ್ನು ಪರಿಷ್ಕರಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರ ಪರಿಣಾಮ ಇದಾಗಿದೆ. ಮೊದಲ ತಿಂಗಳೊಂದರಲ್ಲೇ ಖಾಸಗಿ ಆಸ್ಪತ್ರೆಗಳು ಖರೀದಿಸಿದ 1.20 ಕೋಟಿ ಡೋಸ್‍ ಲಸಿಕೆಗಳಲ್ಲಿ 9 ಕಾರ್ಪೋರೇಟ್‍ ಆಸ್ಪತ್ರೆಗಳು 60.57 ಲಕ್ಷ ಡೋಸ್‍ಗಳನ್ನು ಖರೀದಿಸಿವೆ. ಈ ಪಂಚತಾರಾ ಆಸ್ಪತ್ರೆಗಳು ಹೆಚ್ಚಾಗಿ ಮಹಾನಗರಗಳಲ್ಲೇ ಇದ್ದು, ದೇಶದ ಎರಡನೇ ಹಂತದ ನಗರ-ಪಟ್ಟಣಗಳ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಕೊರತೆಯಾಗಿದೆ. ಬೆಂಗಳೂರಿನ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲೂ ಲಸಿಕೆ ಪ್ರಮಾಣ ಕಡಿಮೆಯಿದೆ.

ಇದು ಲಸಿಕಾ ನೀತಿ ಸೃಷ್ಟಿಸಿರುವ ಅಸಮಾನ ಹಂಚಿಕೆ ಮತ್ತು ಅಸಮಾನ ಲಭ್ಯತೆಗೆ ದಾರಿ ಮಾಡಿಕೊಟ್ಟಿದೆ. ಮೇ ತಿಂಗಳಲ್ಲಿ ಖಾಸಗಿ ವಲಯಕ್ಕೆ ಮೀಸಲಾದ ಕೋವಿಡ್‍ ಲಸಿಕೆಗಳಲ್ಲಿ ಶೇ, 50ರಷ್ಟು ಈ 9 ಕಾರ್ಪೋರೇಟ್‍ ಆಸ್ಪತ್ರೆ ಸಮೂಹಗಳ ಕೈಸೇರಿದೆ.

ಉಳಿದ ಶೇ.50ರಷ್ಟು ಲಸಿಕೆಗಳು ಸುಮಾರು 300 ಆಸ್ಪತ್ರೆಗಳಿಗೆ ವಿತರಣೆಯಾಗಿದೆ. ಈ ಯಾವ ಆಸ್ಪತ್ರೆಗಳೂ  ಎರಡನೇ ಶ್ರೇಣಿಯ ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿಲ್ಲ.

ಖಾಸಗಿ ಆಸ್ಪತ್ರೆಗಳು ಮೇ ತಿಂಗಳಿನಲ್ಲಿ 1.20 ಕೋಟಿ ಡೋಸ್‍ ಖರೀದಿಸಿದ್ದು, ಈ ತಿಂಗಳಲ್ಲಿ ಖರೀದಿಯಾದ ಲಸಿಕೆಗಳ ಶೇ.15.6ರಷ್ಟಾಗಿದೆ. ರಾಜ್ಯ ಸರ್ಕಾರಗಳು ಶೇ 33.5 (2.66 ಕೋಟಿ ಡೋಸ್‍) ಮತ್ತು ಕೇಂದ್ರ ಸರ್ಕಾರವು ಶೇ. 50.9 (4.03 ಕೋಟಿ ಡೋಸ್‍) ಲಸಿಕೆ ದಾಸ್ತಾನು ಮಾಡಿವೆ.

ಅಪೊಲೋ ಆಸ್ಪತ್ರೆ ಸಮೂಹದ 9 ಆಸ್ಪತ್ರೆಗಳು 16.1 ಲಕ್ಷ ಡೋಸ್‍, ಮ್ಯಾಕ್ಸ್‌ ಕೇರ್‌ನ 6 ಆಸ್ಪತ್ರೆಗಳು 12.97 ಲಕ್ಷ ಡೋಸ್‍, ರಿಲಾಯನ್ಸ್‌ ಫೌಂಡೇಶನ್‍ ನಡೆಸುವ ಎಚ್‍ಎನ್‍ ಟ್ರಸ್ಟ್ ಸಮೂಹ 9.89 ಲಕ್ಷ ಡೋಸ್‍, ಮೆಡಿಕಾ ಸಮೂಹವು 6.26 ಲಕ್ಷ ಡೋಸ್‍, ಪೋರ್ಟಿಸ್‍ ಹೆಲ್ತ್‍ಕೇರ್‌ನ ಎಂಟು ಆಸ್ಪತ್ರೆಗಳು 4.48 ಲಕ್ಷ ಡೋಸ್‍, ಗೋದ್ರೇಜ್‍ ಸಮೂಹ ಆಸ್ಪತ್ರೆಗಳು 3.35 ಲಕ್ಷ, ಮಣಿಪಾಲ್‍ ಹೆಲ್ತ್ ಕೇರ್ ಸಮೂಹ 3.24 ಲಕ್ಷ ಡೋಸ್‍, ನಾರಾಯಣ ಹೃದಯಾಲಯ 2.02 ಲಕ್ಷ ಡೋಸ್‍ ಮತ್ತು ಟೆಕ್ನೋ ಇಂಡಿಯಾ ಸಮೂಹ 2 ಲಕ್ಷ ಡೋಸ್‍ ಖರೀದಿ ಮಾಡಿವೆ.

ಈ ಆಸ್ಪತ್ರೆಗಳು ಮೆಟ್ರೋ, ರಾಜ್ಯ ರಾಜಧಾನಿ ಮತ್ತು ಒಂದನೇ ಶ್ರೇಣಿಯ ನಗರಗಳಲ್ಲಿ ತಮ್ಮ ಘಟಕಗಳನ್ನು ಹೊಂದಿವೆ. ಸೀರಂ ಕಂಪನಿಯ ಕೋವಿಶೀಲ್ಡ್ ಅನ್ನು 600 ರೂ.ಗಳಿಗೆ ಮತ್ತು ಭಾರತ್‍ ಬಯೋಟೆಕ್‍ನ ಕೊವ್ಯಾಕ್ಸಿನ್‍ ಅನ್ನು 1,200 ರೂ,ಗಳಿಗೆ ಈ ಆಸ್ಪತ್ರೆಗಳು ಖರೀದಿಸಿವೆ.

ಬೆಂಗಳೂರಿನ ನ್ಯಾಷನಲ್‍ ಇನ್ಸಿಟ್ಯೂಟ್‍ ಆಫ್‍ ಅಡ್ವಾನ್ಸ್ ಸ್ಟಡೀಸ್‍ನ  ಪ್ರಾಧ್ಯಾಪಕ ತೇಜಲ್‍ ಕಾಂಟಿಕರ್, “ಲಸಿಕಾ ತಯಾರಕ ಕಂಪನಿಗಳು ಹೆಚ್ಚಿನ ದರ ಸಿಗುವ ಕಾರ್ಪೋರೇಟ್‍ ಆಸ್ಪತ್ರೆಗಳಿಗೆ ಲಸಿಕೆ ಮಾರಲು ಆಸಕ್ತಿ ತೋರಿವೆ’’ ಎನ್ನುತ್ತಾರೆ. ಅಂದರೆ ನಿಗದಿತ ದರಕ್ಕಿಂತಲೂ ಹೆಚ್ಚಿನ ದರಕ್ಕೂ ಲಸಿಕೆ ಖರೀದಿಸಿರಬಹುದು ಮತ್ತು ಶ್ರೀಮಂತರಿಗೆ ಅವನ್ನು ಇನ್ನೂ ಹೆಚ್ಚಿನ ದರದಲ್ಲಿ ನೀಡಿರಬಹುದು.

ಈ ಆಸ್ಪತ್ರೆಗಳು ಗ್ರಾಹಕರಿಗೆ ಕೋವಿಶೀಲ್ಡ್ ಅನ್ನು 850-1000 ರೂಗೆ ಮತ್ತು ಕೋವ್ಯಾಕ್ಸಿನ್‍ ಅನ್ನು 1,250 ರೂಗೆ ಒದಗಿಸುತ್ತಿವೆ. ಇದು ನಗರ ನಿವಾಸಿಗಳ ಒಂದು ವರ್ಗಕ್ಕೆ ಮಾತ್ರ ಅನುಕೂಲಕರವಾಗಿದ್ದು, ಕೆಳ ಮಧ್ಯಮ ವರ್ಗದವರ ಕೈಗೆ ಎಟುಕದ ದರವಾಗಿದೆ.

ನಿಮ್ಮಲ್ಲಿರುವ ಲಸಿಕೆಗಳನ್ನು ಸಣ್ಣ ನಗರಗಳಿಗೆ ವಿತರಿಸುತ್ತೀದ್ದೀರಾ ಎಂದು ಇಂಡಿಯನ್  ಎಕ್ಸ್ ಪ್ರೆಸ್‍ ಕೇಳಿದ ಪ್ರಶ್ನೆಗಳಿಗೆ ಈ ಆಸ್ಪತ್ರೆಗಳು ಇನ್ನೂ ಉತ್ತರಿಸಿಲ್ಲ.

ಕೇಂದ್ರದ ಲಸಿಕಾ ನೀತಿಯನ್ನು ಈಗಾಗಲೇ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ರಾಜ್ಯ ಸರ್ಕಾರಗಳು ಲಸಿಕೆಯ ಅಸಮಾನ ಹಂಚಿಕೆಯ ಬಗ್ಗೆ ದೂರುತ್ತಿವೆ. ಇದೇ ಹೊತ್ತಲ್ಲಿ ಖಾಸಗಿ ವಲಯಕ್ಕೆ ನಿಗದಿಯಾದ ಲಸಿಕೆಗಳಲ್ಲಿ ಶೇ. 50 ರಷ್ಟು ಕೇವಲ 9 ಸಮೂಹ ಆಸ್ಪತ್ರೆಗಳ ಪಾಲಾಗಿವೆ.

ಉಚಿತ ಲಸಿಕೆ ನೀಡಬೇಕಾದ ಹೊಣೆಯಿಂದ ತಪ್ಪಿಸಿಕೊಂಡ ಕೇಂದ್ರ ಸರ್ಕಾರ ತಯಾರಕ ಕಂಪನಿಗಳು, ದೊಡ್ಡ ಆಸ್ಪತ್ರೆ ಸಮೂಹಗಳ ಪರ ನಿಂತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.


ಇದನ್ನೂ ಓದಿ: ಕೋವಿಡ್-19; ಆದ ಎಡವಟ್ಟುಗಳು ಮತ್ತು ಬೇಕಿರುವ ಎಚ್ಚರ: ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...