HomeUncategorizedಮೀಸಲಾತಿಯ ಕುರಿತ ಸುಪ್ರೀಂ ತೀರ್ಪು ಅಪಾಯಕಾರಿಯಾದುದು..

ಮೀಸಲಾತಿಯ ಕುರಿತ ಸುಪ್ರೀಂ ತೀರ್ಪು ಅಪಾಯಕಾರಿಯಾದುದು..

ನಾವು ಖಾಸಗೀಕರಣದ ವಿರುದ್ಧ ಹೋರಾಡುತ್ತಲೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕೇಳುವ ಹೋರಾಟಗಳನ್ನು ಕಟ್ಟಬೇಕಿದೆ. ಜೊತೆ ಜೊತೆಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಕೇಳಬೇಕಾಗುತ್ತದೆ.

- Advertisement -
- Advertisement -

ಮುಖೇಶ್ ಕುಮಾರ್ ವರ್ಸಸ್‌ ಉತ್ತರಖಂಡ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿಯು ಮೂಲಭೂತ ‌ಹಕ್ಕಲ್ಲ ಎಂದು ತೀರ್ಪು ನೀಡಿದೆ. ಮುಖೇಶ್ ಕುಮಾರ್ ಎನ್ನುವವರು ಉತ್ತರ ಖಂಡ ರಾಜ್ಯ ಸರ್ಕಾರ ಭಡ್ತಿ ಮೀಸಲಾತಿಯನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂ ಮೆಟ್ಟಿಲೇರಿದ್ದರು. ಆಗ ಮೀಸಲಾತಿ ಮೂಲಭೂತ ಹಕ್ಕಲ್ಲ ಮತ್ತು ಮೀಸಲಾತಿ ನೀಡಿ ಎಂದು ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವಂತಿಲ್ಲ ಎಂದಿದೆ. ಆದರೆ ಸರ್ಕಾರ ಮೀಸಲಾತಿಯನ್ನು ಕೊಡಲು ಹೊರಟರೆ ಅದನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬಹುದು ಎಂದು ಹೇಳಿದೆ.

ಮೀಸಲಾತಿ ಎಂಬ ಶಬ್ದ ಕೇಳಿದ ಕೂಡಲೆ ಎಲ್ಲರ ಕಣ್ಣುಗಳು ಎಸ್ಸಿ ಎಸ್ಟಿ ಸಮುದಾಯದ ಕಡೆಗೆ ಹೋಗುತ್ತದೆ. ಮೀಸಲಾತಿ ಎಂದರೆ ದಲಿತರನ್ನು, ಹಿಂದುಳಿದವರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಒಂದು ದಾರಿ ಎಂದು ಹೆಚ್ಚಿನ ಜನರ ಅಭಿಪ್ರಾಯ. ಇಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾಗಿರುವುದೇನೆಂದರೆ ತಲತಲಾಂತರದಿಂದ ನೂರು ಶೇಕಡ ಮೀಸಲಾತಿ ಪಡೆಯುವ ಕೆಲವೇ ಕೆಲವು ಸಮುದಾಯಗಳ ಬದಲಿಗೆ ಎಲ್ಲರಿಗೂ ಸಮಾನವಾಗಿ ಹಂಚುವ ಒಂದು ವ್ಯವಸ್ಥೆಯಾಗಿ ಮೀಸಲಾತಿ ಜಾರಿಯಲ್ಲಿದೆ.

ಮೀಸಲಾತಿ ಕೇವಲ ಎಸ್ಸಿ, ಎಸ್ಟಿಗಳು ಮಾತ್ರ ಪಡೆಯುತ್ತಿಲ್ಲ. ಶೇ. 23 ಇತರ ಹಿಂದುಳಿದ ಸಮುದಾಯ ಕೂಡಾ ಪಡೆಯುತ್ತಿದೆ. ಅಸಮಾನತೆಯಿಂದ ಕೂಡಿದ, ತಲೆತಲಾಂತರದಿಂದ ಜಾತಿಯ ಕಾರಣಕ್ಕಾಗಿ ಅನುಮಾನಿಸಲ್ಪಟ್ಟ, ಅವಮಾನಿಸಲ್ಪಟ್ಟ ಸಮಾಜದ ಎಲ್ಲರಿಗೂ ಸಮವಾಗಿ ಮೀಸಲಾತಿ ಸಿಗಬೇಕು ಎಂದು ಬಯಸಬೇಕೆ ಹೊರತು ಮೀಸಲಾತಿ ಬೇಡ ಎನ್ನುವುದು ಅಮಾನವೀಯತೆಯೆ ಆಗಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಅಸಮಾನ ಸಮಾಜವನ್ನು ಸಮಸಮಾಜವನ್ನಾಗಿ ಕಟ್ಟಲು ಬೇಕಾಗಿ ಈ ಮೀಸಲಾತಿ ಇದೆ‌ಯೇ ಹೊರತು ಬಡತನ ಹೋಗಲಾಡಿಸಲು ಅಲ್ಲ. ಬಡತನ ನಿರ್ಮೂಲನೆಗೋಸ್ಕರ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಅದು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುತ್ತದೆ ಎಂದು ನಂಬಿದ್ದೇವೆ. ಆದರೆ ಮೀಸಲಾತಿ ಎನ್ನುವುದು ಸಾಮಾಜಿಕ ಸಮಾನತೆಗಾಗಿ.

ಬಡತನ ಹೋದರೆ ಸಾಮಾಜಿಕ ಅಸಮಾನತೆಯ ಹೋಗುತ್ತದೆ ಎಂಬ ವಾದವಿದೆ ಆದರೆ ಇದು ಅರ್ಧ ಸತ್ಯ ಮಾತ್ರವೇ ಆಗಿದೆ.‌ ಉದಾಹರಣೆಗೆ ನಮ್ಮ ದೇಶದ ಪ್ರಥಮ‌ ಪ್ರಜೆ ಎಂದು ಕರೆಯಲ್ಪಡುವ ರಾಷ್ಟ್ರಪತಿಯನ್ನು ದಲಿತ ಎಂಬ ಕಾರಣಕ್ಕೆ ಧಾರ್ಮಿಕ ಕ್ಷೇತ್ರವೊಂದರಿಂದ ಹೊರಗಿಟ್ಟ ಪ್ರಕರಣ ನೀವು ಓದಿರಬಹುದು. ಅಲ್ಲಿಗೆ ಭಾರತದ ಸಾಮಾಜಿಕ ಸ್ಥಿತಿಯ ಬಗ್ಗೆ ನಿಮಗರಿವಾಗಬಹುದು.

ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರೀಕರಿಗೆ ಸಮಾನತೆಯ ಭರವಸೆ ನೀಡುತ್ತದೆ. ಭಾರತದ ಎಲ್ಲಾ ಜನರಿಗೆ ಸಮಾನ ಅವಕಾಶ, ಪ್ರಾತಿನಿಧಿತ್ವವನ್ನು ನೀಡುವುದಾಗಿ ಭಾರತದ ಸಂವಿಧಾನ ಹೇಳುತ್ತದೆ. ಸಂವಿಧಾನದ 14,15,16 ನೇ ವಿಧಿಗಳು ಸಮಾನತೆಯನ್ನೆ ಹೇಳುತ್ತವೆ. ಆದರೆ ಭಾರತದ ಸಾಮಾಜಿಕ ಸ್ಥಿತಿ ಸಾವಿರಾರು ವರ್ಷಗಳಿಂದ ಒಂದು ಪಿರಮಿಡ್ಡಿನ ರೂಪದಲ್ಲಿ ಇರುವುದರಿಂದ ಸರ್ವ ಭಾರತೀಯರಿಗೆ ಸಮಾನ ಅವಕಾಶಗಳು ಸಿಗಬೇಕೆಂದು ಮೀಸಲಾತಿಯನ್ನು ಪರಿಚಯಿಸಿದೆ. ಪ್ರಸ್ತುತ ಭಾರತದ ಸಾಮಾಜಿಕ ಸ್ಥಿತಿ ಈಗಲೂ ಹಾಗೆಯೇ ಇದೆ, ನೆನಪಿಡಿ ‌ಸ್ವಾತಂತ್ರ್ಯ ಬಂದು ಎಪ್ಪತ್ತೆರಡು ವರ್ಷಗಳಾಗಿವೆ.

ಸಧ್ಯಕ್ಕೆ ನಮ್ಮನ್ನು ಆಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಮಾತೃ ಸಂಘಟನೆಯಾದ ಆರೆಸ್ಸೆಸ್‌ಗೆ ಮೀಸಲಾತಿ ಬಗ್ಗೆ ತೀವ್ರವಾದ ಅಸಮಾಧಾನ ಇರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದು ಮೀಸಲಾತಿ ಬಗ್ಗೆ ಅವಾಗವಾಗ ತಕರಾರನ್ನೂ ತೆಗೆದು ಈ ಚರ್ಚೆಯನ್ನು ಜೀವಂತವಾಗಿಡುತ್ತಿದೆ. ಇವರ ವಾದದ ಪ್ರಕಾರ ಮೀಸಲಾತಿ ಕೊಟ್ಟರೆ ಗುಣಮಟ್ಟದ ಕೊರತೆ ಉಂಟಾಗುತ್ತದೆ ಎನ್ನುವುದಾಗಿದೆ. ಆದರೆ ಆ ಗುಣಮಟ್ಟದ ಕೊರತೆಗೆ ಕಾರಣ ಏನು‌, ಯಾಕೆ ಭಾರತದ ಸಾಮಾಜಿಕ ಸ್ಥಿತಿ ಹೀಗಾಗಿದೆ ಎಂಬುದರ ಬಗ್ಗೆ ಇವರು ಮಾತೆ‌ ಎತ್ತುವುದಿಲ್ಲ, ಆದರೆ ನಿಜ ಸ್ಥಿತಿ ಇವರಿಗೂ ಗೊತ್ತಿದೆ.

ಭಾರತದಂತಹ ಜಾತಿ ಪೀಡಿತ ದೇಶದಲ್ಲಿ ಎಲ್ಲಿಯವರೆಗೂ ಸಾಮಾಜಿಕ ಅಸಮಾನತೆ ಇರುತ್ತದೆಯೊ ಅಲ್ಲಿವರೆಗೂ ಮೀಸಲಾತಿ ಇರಲೇಬೇಕಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೆರಡು ವರ್ಷಗಳಾದರೂ, ಸಂವಿಧಾನ ರಚಿಸಿ ಅರವತ್ತೊಂಬತ್ತು ವರ್ಷಗಳಾದರೂ ಇನ್ನೂ ಅಸಮಾನತೆ ಇದೆಯೆಂದರೆ ಮೀಸಲಾತಿಯು ಎಲ್ಲಾ ಸಮುದಾಯಗಳಿಗೂ ಸಿಕ್ಕಿದೆಯೇ ಎಂಬುವುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಮೀಸಲಾತಿಯ ಹಿಂತೆಗೆತಕ್ಕಿಂತ ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಅನಿವಾರ್ಯತೆಯಿದೆ.

ಮೀಸಲಾತಿ ಇದ್ದರೂ ಸಮಾನ ಅವಕಾಶಗಳು ಸಿಗದ ಎಷ್ಟೋ ಸಮುದಾಯಗಳು ನಮ್ಮ ಮುಂದೆ ಇದೆ. ಇದರಲ್ಲಿ ಇನ್ನೂ ತಮ್ಮ ಜಾತಿಗಳು ಯಾವುದು ಎಂಬುದೇ ತಿಳಿಯದ ಜನಸಮುದಾಯಗಳಿವೆ. ಸರ್ಕಾರಗಳು ಕೂಡ ಅವರನ್ನು ಗುರುತಿಸಲು ಪರದಾಡಿದಂತೆ ಮಾಡುತ್ತಿದ್ದರೂ ಇಚ್ಛಾಶಕ್ತಿ ಇಲ್ಲದಿರುವುದು‌ ನೈಜ ಕಾರಣವಾಗಿದೆ. ಒಂದು ಕಡೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ತಯಾರಿಸಿ ಉಳ್ಳವರೆ ಪಡೆಯುತ್ತಿದ್ದರೆ, ಇನ್ನೊಂದು ಕಡೆ ಮೀಸಲಾತಿಯ‌ ಕಾನೂನುಗಳು ಇದ್ದರೂ ಅದನ್ನು ಜಾರಿಗೊಳಿಸುವಂತಹ ಜಾಗದಲ್ಲಿ ಭಾರತೀಯ ಜಾತಿ ಮನಸ್ಥಿತಿಯ ಜನರೆ ಕುಳಿತಿದ್ದಾರೆ. ಇಲ್ಲಿ ನಮಗೆ ಮೀಸಲಾತಿ ಇನ್ನೂ ಯಾಕೆ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬುವುದರ ಹೊಳಹು ಸಿಗುತ್ತದೆ. ಹೆಚ್ಚಿನ ಎಲ್ಲರೂ ತಮ್ಮ ಜಾತಿಯಾಧಾರಿತ ಮನಸ್ಥಿತಿಯನ್ನು ಬಿಟ್ಟು ಹೊರಬರಲಾರದೆ ಸ್ವಜನ ಪಕ್ಷಪಾತಿಯರೆ ಆಗಿದ್ದಾರೆ. ಅದರಲ್ಲೂ ಅಧಿಕಾರಿ ವರ್ಗದಲ್ಲಿ ಅದು ಇನ್ನೂ ಜಾಸ್ತಿಯೆ ಇದೆ.

ಸಧ್ಯಕ್ಕೆ ಸುಪ್ರೀಂ ಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದಿದೆ. ಇದು ಎಷ್ಟರ ಮಟ್ಟಿಗೆ ದ್ವಂದ್ವ ಸೃಷ್ಟಿಸುತ್ತದೆ ಎಂದರೆ ಸಂವಿಧಾನ ಸಮಾನತೆಯ ಹಕ್ಕು ನೀಡುವ 14, 15, 16 ವಿಧಿಗಳಿಗೆ ಸವಾಲನ್ನೇ ಹಾಕುತ್ತದೆ ಎಂದೆನಿಸುತ್ತದೆ. ಅಲ್ಲದೆ ಈ ಬಗ್ಗೆ ಕಾನೂನು ರೂಪಿಸಲು ಕೋರ್ಟ್ ರಾಜ್ಯಗಳಿಗೆ ನಿರ್ದೇಶನವನ್ನು ನೀಡುವಂತಿಲ್ಲ ಎಂದಿದೆ. ಅಲ್ಲಿಗೆ ಅದು ರಾಜ್ಯಗಳ ವಿವೇಚನೆಗೆ ‌ಬಿಟ್ಟ ವಿಚಾರ ಎಂಬಂತಾಗಿದೆ. ಭಾರತದಲ್ಲಿ ಮೀಸಲಾತಿ ಬಂದು ಇಷ್ಟು ವರ್ಷಗಳಾಗಿಯು ಸಾಮಾಜಿಕ ಅಸಮಾನತೆ ಇನ್ನೂ ಕಣ್ಣಿಗೆ ರಾಚುವಷ್ಟು ಇರುವುದು ನೋಡಿದರೆ ಮಿಸಲಾತಿಯು ತನ್ನ ಅನುಷ್ಠಾನದಲ್ಲಿ ವಿಫಲಗೊಂಡಿದೆ ಎಂಬುವುದು ಎದ್ದು ಕಾಣುತ್ತದೆ. ಆದರೆ ಯಾಕೆ ಅನುಷ್ಠಾನಗೊಂಡಿಲ್ಲ ಎಂಬುವುದನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಮತ್ತೇ ಅದೆ “ಜಾತಿ ವ್ಯವಸ್ಥೆ” ಅಷ್ಟೆ.

ಅದರಾಚೆಗೂ ಮೀಸಲಾತಿ ಕೊಡುವ ಉದ್ಯೋಗಗಳು ನಮ್ಮ ಆರ್ಥಿಕ ವ್ಯವಸ್ಥೆಯ ಕೇವಲ ಎರಡರಷ್ಟು ಮಾತ್ರ ಎಂದು ಅಂಕಿ ಅಂಶಗಳು ಹೇಳುತ್ತವೆ. ಅಲ್ಲದೆ ಈಗಿನ ಸರ್ಕಾರ ತನ್ನ ಎಲ್ಲಾ ಸಂಸ್ಥೆಗಳನ್ನು ಖಾಸಗಿಕರಣ ಮಾಡಲು ಹೊರಟಿದೆ. ಅಲ್ಲಿಗೆ ಮೀಸಲಾತಿ ಇದ್ದರೂ ಯಾರಿಗೆ ಎಷ್ಟು ಅವಕಾಶಗಳು ಸಿಗುತ್ತವೆ ಹೇಳಿ? ಸರ್ಕಾರಗಳು ಯಾವುದೆ ಹೊಸ ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟುತ್ತಿಲ್ಲ. ಇವತ್ತಿಗೆ ನಾವು ಖಾಸಗೀಕರಣದ ವಿರುದ್ಧ ಹೋರಾಡುತ್ತಲೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕೇಳುವ ಹೋರಾಟಗಳನ್ನು ಕಟ್ಟಬೇಕಿದೆ. ಜೊತೆ ಜೊತೆಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಕೇಳಬೇಕಾಗುತ್ತದೆ.

ಉತ್ತರ ಖಂಡ ಸುಪ್ರೀಂ ಕೋರ್ಟ್‌ಗೆ ಹೋಗಿರುವುದು ಭಡ್ತಿ ಮೀಸಲಾತಿಯನ್ನು ವಿರುದ್ಧ. ಆದರೆ ಸುಪ್ರೀಂ ತನ್ನ ತೀರ್ಪಿನಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ತಿಳಿಸಿರುವುದು ಅಪಾಯಕಾರಿ ನಡೆಯೇ ಆಗಿದೆ. ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾದ ಸಮಾನತೆಯ ಹಕ್ಕಿಗೆ ಸವಾಲೆಸೆಯುವಂತಹದ್ದು. ಈ ಬಗ್ಗೆ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾ಼ದ್ ಮೇಲ್ಮನವಿಯನ್ನು ಹಾಕಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...