Homeಬಹುಜನ ಭಾರತಸುಪ್ರೀಮ್ ತೀರ್ಪು- ಮೀಸಲಾತಿಗೆ ಮತ್ತೆ ಒದಗಿದ ಕುತ್ತು

ಸುಪ್ರೀಮ್ ತೀರ್ಪು- ಮೀಸಲಾತಿಗೆ ಮತ್ತೆ ಒದಗಿದ ಕುತ್ತು

ಕಠೋರ ವಾಸ್ತವದ ನಡುವೆಯೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗ ಆಗುತ್ತಿದೆ ಎಂಬುದಾಗಿ 2018ರಲ್ಲಿ ಸುಪ್ರೀಮ್ ಕೋರ್ಟ್ ಹೇಳಿದ್ದು ಗಾಯದ ಮೇಲೆ ಬರೆ ಎಳೆದದ್ದಕ್ಕಿಂತಲೂ ಕಡಿಮೆಯೇನೂ ಅಲ್ಲ.

- Advertisement -
- Advertisement -

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಬಡ್ತಿಯಲ್ಲಿ ಮೀಸಲಾತಿ ಕಡ್ಡಾಯ ಅಲ್ಲ ಎಂದು ಉತ್ತರಾಖಂಡದ ಪ್ರಕರಣವೊಂದರಲ್ಲಿ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಕಳವಳಕಾರಿ. ನೂರಾರು ವರ್ಷಗಳ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನವೊಂದಕ್ಕೆ ಆಗಿರುವ ಹಿನ್ನಡೆ. ಸಾಮಾಜಿಕ ನ್ಯಾಯ ನೀಡಿಕೆಯ ಪರಿಕಲ್ಪನೆಯ ಬೇರಿಗೆ ಬೀಸಿದ ಕೊಡಲಿಯೇಟು.

ಒಂದು ಅರ್ಥದಲ್ಲಿ ಮೀಸಲಾತಿ ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ ಎಂದುಬಿಟ್ಟಿದೆ. ಮೀಸಲಾತಿಯನ್ನು ನೀಡಬಯಸುವ ರಾಜ್ಯವು ಮೊದಲು ಆಯಾ ಜಾತಿಗಳು ಪಂಗಡಗಳು ಸರ್ಕಾರಿ ಸೇವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾತಿನಿಧ್ಯ ಪಡೆದಿಲ್ಲ ಎಂಬ ಅಂಕಿಅಂಶಗಳನ್ನು ಕಲೆಹಾಕಬೇಕು ಎಂದು ವಿಧಿಸಿದೆ.

ಮೀಸಲಾತಿ ಮೂಲಭೂತ ಹಕ್ಕು ಅಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೀಸಲಾತಿಯನ್ನು ನೀಡಬೇಕೆಂಬುದು ಕಡ್ಡಾಯವೇನೂ ಅಲ್ಲ ಎಂದೂ ನ್ಯಾಯಾಲಯ ಸಾರಿ ಹೇಳಿದೆ. ಆದರೆ ಸಂವಿಧಾನದ 16ನೆಯ ಅನುಚ್ಛೇದವು ಸಮಾನತೆಯ ಹಕ್ಕನ್ನೂ ನೀಡುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ದೊರೆಯದ ಗುಂಪುಗಳ ರಕ್ಷಣೆಗೆ ಧಾವಿಸುವುದು ಸರ್ಕಾರದ ಆದ್ಯ ಕರ್ತವ್ಯ ಎನ್ನುತ್ತಾರೆ ಸಂವಿಧಾನ ತಜ್ಞರು.

ಮೀಸಲಾತಿ ನೀಡಬೇಕಿದ್ದರೆ ಆಯಾ ಜಾತಿ ಪಂಗಡಗಳ ಹಿಂದುಳಿದಿರುವಿಕೆಯನ್ನು ಸಾಬೀತುಪಡಿಸಬೇಕು ಎಂಬುದು ಸುಪ್ರೀಮ್ ಕೋರ್ಟ್ ಈ ಹಿಂದೆ ನಾಗರಾಜ್ ತೀರ್ಪಿನಲ್ಲಿ ವಿಧಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆಯು ಅವುಗಳನ್ನು ಸಂಸತ್ತು ಅಧ್ಯಕ್ಷೀಯ ಪಟ್ಟಿಗೆ ಸೇರಿಸಿದ ಕ್ಷಣವೇ ಸ್ಥಾಪಿತವಾಗಿರುತ್ತದೆ. ಜಾತಿ ಪಂಗಡಗಳು ಹಿಂದುಳಿದಿವೆ ಎಂಬುದನ್ನು ಒಮ್ಮೆ ಸಾರಿದ ನಂತರವೂ ಸರ್ಕಾರಗಳು ಅವುಗಳಿಗೆ ನೆರವು ನೀಡಕೂಡದು ಎಂದು ಹೇಳುವುದು ಅಸಂಬದ್ಧ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವುಗಳು ಎಂಬ ವರ್ಗೀಕರಣಕ್ಕೆ ಅರ್ಥವೇ ಇಲ್ಲವಾಗುತ್ತದೆ.

ಮೀಸಲಾತಿಯನ್ನು ನೀಡುವುದಿಲ್ಲವೆಂಬ ಉತ್ತರಾಖಂಡ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿಯುವ ಸುಪ್ರೀಮ್ ಕೋರ್ಟು, ಮೀಸಲಾತಿ ನಿರಾಕರಿಸುವ ರಾಜ್ಯ ಸರ್ಕಾರದ ವಿವೇಚನೆಯನ್ನು ಮಾನ್ಯ ಮಾಡುತ್ತದೆ. ಆದರೆ ಮೀಸಲಾತಿಯನ್ನು ನೀಡಲು ಮುಂದಾಗುವ ರಾಜ್ಯ ಸರ್ಕಾರವನ್ನು ಸಮಾನತೆಯ ಕಾರಣ ಮುಂದೆ ಮಾಡಿ ನಿರ್ಬಂಧಿಸುತ್ತದೆ. ರಾಜ್ಯ ಸರ್ಕಾರಗಳ ವಿವೇಚನಾ ಅಧಿಕಾರವನ್ನು ಮಾನ್ಯ ಮಾಡುವುದಿಲ್ಲ. ಈ ಮಾತಿಗೆ ಹಲವು ನಿದರ್ಶನಗಳಿವೆ.

ಜಾತಿವ್ಯವಸ್ಥೆಯ ಒಳಿತನ್ನು ಎತ್ತಿ ಹೇಳುವ ಮತ್ತು ಮೀಸಲಾತಿಯನ್ನು ಅಂತ್ಯಗೊಳಿಸುವ ಹಾಗೂ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಂದ್ರ ಸರ್ಕಾರದ ಒಳಗಿನಿಂದ ಮತ್ತು ಹೊರಗಿನಿಂದ ಕಾಲಕಾಲಕ್ಕೆ ಕೇಳಿಬರುತ್ತಿವೆ. ಭಯ ಮತ್ತು ಅಪಮಾನದ ಲಜ್ಜೆಯನ್ನು ಬದಿಗೊತ್ತಿರುವ ದಲಿತರು ಪ್ರತಿರೋಧದ ಮತ್ತು ತಿಳಿವಳಿಕೆಯ ಹಾದಿ ಹಿಡಿದಿರುವುದು ಮೇಲ್ಜಾತಿಗಳನ್ನು ಇನ್ನಷ್ಟು ಕೆರಳಿಸಿ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಅಧ್ಯಯನಗಳು ಸಾರಿವೆ. ಇಂತಹ ಕಠೋರ ವಾಸ್ತವದ ನಡುವೆಯೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗ ಆಗುತ್ತಿದೆ ಎಂಬುದಾಗಿ 2018ರಲ್ಲಿ ಸುಪ್ರೀಮ್ ಕೋರ್ಟ್ ಹೇಳಿದ್ದು ಗಾಯದ ಮೇಲೆ ಬರೆ ಎಳೆದದ್ದಕ್ಕಿಂತಲೂ ಕಡಿಮೆಯೇನೂ ಅಲ್ಲ.

ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 2007-17ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ.66ರಷ್ಟು ಹೆಚ್ಚಿದೆ. ದೇಶದಲ್ಲಿ ನಿತ್ಯ ಸರಾಸರಿ ಆರು ಮಂದಿ ದಲಿತ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತಿದೆ. ಈ ಹತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಇಮ್ಮಡಿಯಾಗಿವೆ. ವಿಚಾರಣೆಗೆ ಕಾದಿರುವ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಾಕಿಯ ಬೆಟ್ಟ ಬೆಳೆಯುತ್ತಿದೆ. ಸಜೆಯಲ್ಲಿ ಕೊನೆಯಾಗುವ ಪ್ರಕರಣಗಳ ಪ್ರಮಾಣ ಶೇ.28ಕ್ಕೆ ಕುಸಿದಿದೆ

2015ರಲ್ಲಿ ಸರಸಂಘ ಚಾಲಕ ಮೋಹನ್ ರಾವ್ ಭಾಗವತ್ ಜಾತಿ ಆಧಾರಿತ ಮೀಸಲಾತಿಯ ಅಗತ್ಯದ ಕುರಿತು ಸಂದೇಹ ಪ್ರಕಟಿಸಿದ್ದರು. ಪ್ರತಿಪಕ್ಷಗಳು ಹುಯಿಲೆಬ್ಬಿಸಿದ್ದವು. ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲು ಉಂಡಿತು. ನಿತೀಶ್ ಅವರ ಸಂಯುಕ್ತ ಜನತಾದಳ ಮತ್ತು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಒಟ್ಟುಗೂಡಿ ಅಧಿಕಾರ ಸೂತ್ರ ಹಿಡಿದವು. ಜಾತಿ ಆಧಾರಿತ ಮೀಸಲಾತಿ ಕುರಿತು ಸಾಮರಸ್ಯದ ವಾತಾವರಣದಲ್ಲಿ ಚರ್ಚೆ ನಡೆಯಬೇಕೆಂದು ಇತ್ತೀಚೆಗೆ ಮತ್ತೆ ಹೇಳಿದ್ದರು ಸರಸಂಘಚಾಲಕರು.

ಮೀಸಲಾತಿ ಎಂಬುದು ಅಭಿವೃದ್ಧಿಗೆ ಅಡ್ಡಿ ಎಂಬ ನಿರಂತರ ಪ್ರಚಾರವನ್ನು ಜಾರಿಯಲ್ಲಿ ಇಡಲಾಗಿದೆ. ನೂರಕ್ಕೆ ನೂರು ಮೀಸಲಾತಿ ಪಡೆಯುತ್ತ ಬಂದಿರುವ ಒಂದು ಸಂಘಟನೆಯ ಜನ ತಳವರ್ಗಗಳ ಮೀಸಲಾತಿಯನ್ನು ವಿರೋಧಿಸುತ್ತ ಬಂದಿದ್ದಾರೆ. ಅಂಬೇಡ್ಕರ್ ವಿಚಾರಗಳನ್ನು ಆಚರಣೆಯಲ್ಲಿ ಕೊಂದಿರುವವರು, ಬಾಯಿಮಾತಿನಲ್ಲಿ ಅವರನ್ನು ಕೊಂಡಾಡತೊಡಗಿದ್ದಾರೆ. ಅವರ ಹೆಸರಿನಲ್ಲಿ ಸ್ಥಾವರಗಳನ್ನು ಎಬ್ಬಿಸಿ ನಿಲ್ಲಿಸತೊಡಗಿದ್ದಾರೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಕೇಂದ್ರ ಮಂತ್ರಿಗಳೇ ಆಡತೊಡಗಿದ್ದಾರೆ. ಮೂಲ ಸಂವಿಧಾನದಲ್ಲಿ ಇರಲಿಲ್ಲವೆಂದು ಹೇಳಿ ಸೆಕ್ಯೂಲರ್ ಪದವನ್ನೇ ಸಂವಿಧಾನದ ಮುನ್ನುಡಿಯಿಂದ ಕೈ ಬಿಡುವ ಹುನ್ನಾರವೂ ಜರುಗಿತು. ಹಿಂದೂ ಬಹುಸಂಖ್ಯಾತ ರಾಷ್ಟ್ರವಾದ ವಿಜೃಂಭಿಸತೊಡಗಿದೆ. ಅಲ್ಪಸಂಖ್ಯಾತರು ದಲಿತರು ಆದಿವಾಸಿಗಳ ಬದುಕುಗಳು ದುರ್ಭರವಾಗಿವೆ. ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ತ್ರಿವಳಿ ತಲಾಖ್ ರದ್ದು ಮಾಡಿದ ಮಸೂದೆಗೆ ಅಂಗೀಕಾರ ದಕ್ಕಿಸಿಕೊಳ್ಳಲಾಯಿತು. ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಅಲ್ಲಿನ ಜನಪ್ರತಿಧಿನಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ರದ್ದು ಮಾಡಿ ಜೀರ್ಣಿಸಿಕೊಳ್ಳಲಾಗುತ್ತಿದೆ. ಮೀಸಲಾತಿಯ ಕಡುಬೆಂಬಲಿಗ ಶಕ್ತಿಗಳ ದನಿ ಕ್ಷೀಣವಾಗಿದೆ. ಕಬ್ಬಿಣ ಇಷ್ಟು ಬಿಸಿಯಾಗಿರುವ ಸನ್ನಿವೇಶವಿದು. ಇಂತಹ ಸನ್ನಿವೇಶದಲ್ಲಿ ಮೀಸಲಾತಿ ಕುರಿತು ಚರ್ಚೆ ಮಾಡಬೇಕೆಂದು ಸರಸಂಘಚಾಲಕರು ಕರೆ ನೀಡಿದ್ದು ಆಕಸ್ಮಿಕ ಆಗಿರಲಿಲ್ಲ.

ಮೀಸಲಾತಿಯನ್ನು ನಿಷ್ಪಕ್ಷಪಾತ ಜನರ ಸಮಿತಿಯೊಂದು ಮರುವಿಮರ್ಶೆಗೆ ಒಳಪಡಿಸಬೇಕು ಎಂಬ ಗೊತ್ತುವಳಿಯನ್ನು ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ 1981ರಲ್ಲೇ ಅಂಗೀಕರಿಸಿತ್ತು. 1985ರಲ್ಲಿ ಇದೇ ಗೊತ್ತುವಳಿಯನ್ನು ಆರೆಸ್ಸೆಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ಅಂಗೀಕರಿಸಲಾಗಿತ್ತು.

ಈ ಸಮಾಜದಲ್ಲಿ ಅಸಮಾನತೆ ಇರುವತನಕ ನಾವು ಮೀಸಲಾತಿಯನ್ನು ಬೆಂಬಲಿಸುತ್ತೇವೆ ಎಂಬ ಮಾತನ್ನು ಆಡುತ್ತಲೇ ಮರುವಿಮರ್ಶೆಯ ಕಿಡಿಯನ್ನೂ ಆರದಂತೆ ಕಾಪಾಡಿಕೊಂಡು ಬಂದಿದ್ದಾರೆ ಮೋಹನ್ ಭಾಗವತ್.

ಮೋದಿ-ಶಾ ಜೋಡಿಗೆ ಮೀಸಲಾತಿ ಕುರಿತು ಯಾವ ಸಹಾನುಭೂತಿಯೂ ಇಲ್ಲ. ಸಹಾನುಭೂತಿಯ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರೂ ಅಲ್ಲ. ಮೀಸಲಾತಿಗೆ ಮಂಗಳ ಹಾಡುವ ಕಾರ್ಯಸೂಚಿಯ ಹಿನ್ನೆಲೆ ಅವರದು. ಆದರೆ ಚುನಾವಣಾ ರಾಜಕಾರಣ ಅವರ ಕೈಗಳನ್ನು ಈಗಲೂ ಕಟ್ಟಿ ಹಾಕಿದೆ. ಹೀಗಾಗಿ ತಳವರ್ಗಗಳ ಮೀಸಲಾತಿಯನ್ನು ತರಾತುರಿಯಲ್ಲಿ ಕಿತ್ತು ಹಾಕಲು ಅವರು ಕೈಹಾಕುತ್ತಿಲ್ಲ. ಅನುಕೂಲಕರ ಸಮಯದ ನಿರೀಕ್ಷೆಯಲ್ಲಿದ್ದಾರೆ ಅವರು.

ಇಂತಹ ಸನ್ನಿವೇಶದಲ್ಲಿ ಹೊರಬಿದ್ದಿರುವ ಸುಪ್ರೀಮ್ ಕೋರ್ಟ್ ತೀರ್ಪಿನ ಬಳಕೆ-ದುರ್ಬಳಕೆ ಹೇಗೆಲ್ಲ ಆಗಲಿದೆ ಎಂಬುದು ಆತಂಕದಿಂದ ಕಾದು ನೋಡಬೇಕಿರುವ ಮತ್ತು ಹೋರಾಟಕ್ಕೆ ಸಜ್ಜಾಗಬೇಕಿರುವ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...