Homeಕರೋನಾ ತಲ್ಲಣಕೊರೊನಾ ವಿರುದ್ಧ ಸ್ವೀಡನ್ ಪ್ರಯೋಗ ಭಿನ್ನ: ನಾವು ಲಾಕ್‌ಡೌನ್‌ ಮಾಡಲಿಲ್ಲ, ಏಕೆಂದರೆ...

ಕೊರೊನಾ ವಿರುದ್ಧ ಸ್ವೀಡನ್ ಪ್ರಯೋಗ ಭಿನ್ನ: ನಾವು ಲಾಕ್‌ಡೌನ್‌ ಮಾಡಲಿಲ್ಲ, ಏಕೆಂದರೆ…

ಯಾವುದನ್ನು ಸುಧಾರಿಸಬೇಕೋ ಅದನ್ನು ಸುಧಾರಿಸುತ್ತೇವೆ. ಎಲ್ಲವನ್ನೂ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವ ಅವಶ್ಯಕತೆಯಿಲ್ಲ. ಏಕೆಂದರೆ ಅದರಿಂದ ಅನುಕೂಲಕ್ಕಿಂತ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಸ್ವೀಡನ್ನಿನ ಪಬ್ಲಿಕ್ ಹೆಲ್ತ್ ಏಜನ್ಸಿಯ ಸಾಂಕ್ರಾಮಿಕ ರೋಗ ತಜ್ಞರಾದ ಆಂಡರ್ಸ್ ಟೆಗ್‌ನೆಲ್

- Advertisement -
- Advertisement -

ಕೊರೋನಾ ನಿಯಂತ್ರಿಸುವುದಕ್ಕೆ ಹಲವು ದೇಶಗಳು ಹಲವು ದಾರಿಗಳನ್ನು ಹಿಡಿದಿರುವುದನ್ನು ನೋಡಬಹುದು. ಯಾವುದು ಸರಿಯೋ ಗೊತ್ತಿಲ್ಲ. ವಿಭಿನ್ನ ಹಾದಿಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಸ್ವೀಡನ್ ಹಾದಿಯನ್ನು ಅಲ್ಲಿಯ ಕಾರ್ಯತಂತ್ರದ ಹಿಂದಿರುವ ಸಾಂಕ್ರಮಿಕ ರೋಗತಜ್ಞ ಆಂಡರ್ಸ್ ಟೆಗ್‌ನೆಲ್ ‌ಅವರು ನೇಚರ್ ಪತ್ರಿಕೆಗೆ ನೀಡಿದ ಸಂದರ್ಶನವನ್ನು ಕನ್ನಡದಲ್ಲಿ ನೀಡುತ್ತಿದ್ದೇವೆ.

ಅನುವಾದ: ವೇಣುಗೋಪಾಲ್ ಟಿ.ಎಸ್

ಕಳೆದ ತಿಂಗಳು ಕೊರೋನಾ ಮಹಾಮಾರಿಯ ಓಟವನ್ನು ನಿಯಂತ್ರಿಸಲು ಯುರೋಪಿನ ಹೆಚ್ಚಿನ ದೇಶಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದೇ ಮೊದಲಾದ ಕ್ರಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಜಾರಿಗೆ ತಂದವು. ಆದರೆ ಸ್ವೀಡನ್ ಮಾತ್ರ ಹಾಗೆ ಮಾಡಲಿಲ್ಲ. ಅದು ಲಾಕ್‌ಡೌನ್‌ ಕೂಡ ಮಾಡಲಿಲ್ಲ ಅಥವಾ ಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳುವಂತಹ ಕ್ರಮಗಳನ್ನೂ ಜಾರಿಗೆ ತರಲಿಲ್ಲ. ಬದಲಾಗಿ ಅದು ನಂಬಿಕೆ ಮತ್ತು ವಿಶ್ವಾಸವನ್ನು ಆಧರಿಸಿದ ಹೊಸ ಕ್ರಮವೊಂದನ್ನು ಜಾರಿಗೆ ತಂದಿತು.

ಆಂಡರ್ಸ್ ಟೆಗ್‌ನೆಲ್

ತನ್ನ ಪ್ರಜೆಗಳಲ್ಲಿ ನಂಬಿಯಿಟ್ಟು, ಸ್ವಂತ ಇಚ್ಛೆಯಿಂದ ಕೆಲವು ಕ್ರಮಗಳನ್ನು ಅನುಸರಿಸಿ ಎಂದು ಅವರಿಗೆ ಹೇಳಿತು. ಅವರಿಗೆ ಕೆಲವು ಸಲಹೆಗಳನ್ನು ನೀಡಿತು. ಮುಖ್ಯವಾಗಿ ವೃದ್ಧರಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಮನೆಯಲ್ಲೇ ಇರಿ ಎಂದು ಹೇಳಿತು. ಉಳಿದವರಿಗೆ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಿ, ನಿಯಮಿತವಾಗಿ ಕೈ ತೊಳೆದುಕೊಳ್ಳಿ ಮತ್ತು ಅನಾವಶ್ಯಕವಾಗಿ ಪ್ರಯಾಣ ಮಾಡಬೇಡಿ ಎಂದು ಹೇಳಿತು. ದೇಶದ ಗಡಿಗಳನ್ನು ತೆರೆದೇ ಇಟ್ಟಿತ್ತು. 16 ವರ್ಷದ ಒಳಗಿನವರಿಗೆ ಶಾಲೆಗಳನ್ನು ನಡೆಸುತ್ತಿತ್ತು. ಬಾರ್, ಹೋಟೆಲ್ಲುಗಳೂ ಸೇರಿದಂತೆ ಹಲವು ವಾಣಿಜ್ಯ ವಹಿವಾಟುಗಳನ್ನು ತೆರೆದೇ ಇಟ್ಟಿತ್ತು.


ಓದಿ: ಕೊರೊನಾ ಬಿಕ್ಕಟ್ಟು: ವಿರೋಧ ಪಕ್ಷವೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿತು?


ಈ ಕಾರ್ಯತಂತ್ರವನ್ನು ಹಲವರು ತುಂಬಾ ಕಟುವಾಗಿ ಟೀಕಿಸಿದರು. ಪ್ರಖ್ಯಾತ 22 ಜನ ವಿಜ್ಞಾನಿಗಳೂ ಸ್ವೀಡನ್ ನ DagensNyheter ಎಂಬ ಪತ್ರಿಕೆಯಲ್ಲಿ ಇದನ್ನು ಟೀಕಿಸಿ ಒಂದು ಲೇಖನವನ್ನು ಬರೆದರು. ವೃದ್ಧಾಶ್ರಮಗಳಲ್ಲಿ ಕೊರೋನಾ ಮಹಾಮಾರಿಯಿಂದ ತುಂಬಾ ಮಂದಿ ತೀರಿಹೋಗಿದ್ದಾರೆ. ಸ್ವೀಡನ್ನಿನಲ್ಲಿ ಒಟ್ಟಾರೆ ಸಾವಿನ ಪ್ರಮಾಣ ಅದರ ನೆರೆಹೊರೆಯ ನಾರ್ಡಿಕ್ ದೇಶಗಳಿಗಿಂತ ಜಾಸ್ತಿ ಇದೆ. ಲಾಕ್‌ಡೌನ್ ಜಾರಿಗೊಳಿಸಿದ್ದ ಡೆನ್ಮಾರ್ಕಿನಲ್ಲಿ ಪ್ರತಿ ಮಿಲಿಯನ್ನಿಗೆ 55 ಮಂದಿ ಮತ್ತು ಫಿನ್‌ಲ್ಯಾಂಡಿನಲ್ಲಿ ಪ್ರತಿ ಮಿಲಿಯನ್ನಿಗೆ 14 ಮಂದಿ ಸತ್ತಿದ್ದರೆ, ಸ್ವೀಡನ್ನಿನಲ್ಲಿ ಪ್ರತಿ ಮಿಲಿಯನ್ನಿಗೆ 131ಮಂದಿ ಮರಣ ಹೊಂದಿದ್ದಾರೆ. ಸ್ವೀಡನ್ನಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬರೆದರು. ಅಷ್ಟೇ ಅಲ್ಲ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸುವಂತೆ ರಾಜಕಾರಣಿಗಳನ್ನು ಒತ್ತಾಯಿಸಿದರು.

ಸ್ವೀಡನ್ ನ ಕಾರ್ಯಸೂಚಿಯನ್ನು ರೂಪಿಸಿದ್ದು ಆಂಡರ್ಸ್ ಟೆಗ್‌ನೆಲ್. ಅವರು ಸ್ವೀಡನ್ನಿನ ಪಬ್ಲಿಕ್ ಹೆಲ್ತ್ ಏಜನ್ಸಿಯಲ್ಲಿ ಸಾಂಕ್ರಾಮಿಕ ರೋಗ ತಜ್ಞರು. ಅದೊಂದು ಸ್ವತಂತ್ರವಾದ ಸಂಸ್ಥೆ. ಅದು ನೀಡುವ ತಜ್ಞ ಸಲಹೆಗಳನ್ನು ಸರ್ಕಾರ ಪಾಲಿಸುತ್ತದೆ. ಈ ಕಾರ್ಯಸೂಚಿಯ ಕುರಿತು ಆಂಡರ್ಸ್ ಟೆಗ್‌ನೆಲ್ ‌ನೇಚರ್ ಪತ್ರಿಕೆಯೊಂದಿಗೆ ಮಾತನಾಡಿದರು.

ಕೊರೋನಾ ವೈರಸ್ ನಿಯಂತ್ರಿಸಲು ಸ್ವೀಡನ್ ಕೈಗೊಂಡಿರುವ ಕ್ರಮವನ್ನು ಕುರಿತು ವಿವರಿಸುವಿರಾ?

ಈ ಕಾರ್ಯ ಸೂಚಿಯ ವಿಶಿಷ್ಟತೆಯ ಬಗ್ಗೆ ಬೇಕಾದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಹೇಳಲಾಗಿದೆ. ಉಳಿದೆಲ್ಲಾ ದೇಶಗಳಂತೆ ನಮ್ಮಗುರಿಯೂ ಕೊರೋನಾ ಹರಡುವುದನ್ನು ಎಷ್ಟು ಸಾಧ್ಯವೋ ಅಷ್ಟು ಮಂದಗೊಳಿಸಿ, ಕೊರೋನಾ ರೇಖೆಯನ್ನು ಸಪಾಟುಗೊಳಿಸುವುದೇ ಆಗಿದೆ. ಹಾಗೆ ಮಾಡದಿದ್ದಲ್ಲಿ ಸಮಾಜ ಮತ್ತು ಆರೋಗ್ಯ ವ್ಯವಸ್ಥೆ ಎರಡೂ ನೆಲಕಚ್ಚಿಬಿಡುತ್ತದೆ.

ಒಂದು ಸೂಕ್ತವಾದ ಲಸಿಕೆಯನ್ನು ಕಂಡುಹಿಡಿಯುವ ತನಕ ಈ ಖಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದಕ್ಕೆ ಅಥವಾ ಸ್ಥಗಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಸೋಂಕಿನ ಹರಡುವಿಕೆಯನ್ನು ಒಂದು ಸುಮಾರಾದ ಮಟ್ಟದಲ್ಲಿ ಇಟ್ಟುಕೊಳ್ಳಲು ನಾವು ದೀರ್ಘಕಾಲೀನವಾದ ಪರಿಹಾರಗಳನ್ನು ಹುಡುಕಿಕೊಳ್ಳಬೇಕು. ಪ್ರತಿಯೊಂದು ದೇಶವೂ ಜನರನ್ನು ಪ್ರತ್ಯೇಕವಾಗಿ ಇರಿಸುವುದಕ್ಕೆ ಪ್ರಯತ್ನಿಸುತ್ತಿದೆ. ನಾವು ಇದನ್ನು ನಮ್ಮಲ್ಲಿ ಇರುವ ಕ್ರಮಗಳನ್ನು, ನಮ್ಮ ಸಂಪ್ರದಾಯಗಳನ್ನು ಬಳಸಿಕೊಂಡು ಸಾಧಿಸಬೇಕು. ಹಾಗಾಗಿಯೇ ನಾವು ಸ್ವಲ್ಪ ಭಿನ್ನವಾದ ಕ್ರಮಗಳನ್ನು ಅನುಸರಿಸಬೇಕಾಯಿತು.

ಸ್ವೀಡನ್ ನಲ್ಲಿ ಸಾಂಕ್ರಮಿಕ ರೋಗಗಳಿಗೆ ಸಂಬಂಧಿಸಿದ ಕಾನೂನುಗಳು ಹೆಚ್ಚಾಗಿ ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸುತ್ತವೆ. ಇಲ್ಲಿ ಅದು ಜನರ ವೈಯಕ್ತಿಕ ಹೊಣೆಗಾರಿಕೆ ಆಗಿರುತ್ತದೆ. ಖಾಯಿಲೆಯನ್ನು ಹರಡದಂತೆ ನೋಡಿಕೊಳ್ಳುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ನಮಗೆ ಅದೇ ಆಧಾರ. ಇಡೀ ಸ್ವೀಡನನ್ನು ಬಂದ್‌ ಮಾಡುವುದಕ್ಕೆ ಈಗಿರುವ ಸ್ವೀಡನ್ನಿನ ಕಾನೂನುನಿನಲ್ಲಿ ಹೆಚ್ಚಿನ ಅವಕಾಶವಿಲ್ಲ. ಕೆಲವು ಜನರನ್ನು ಅಥವಾ ಕೆಲವು ಸಣ್ಣ ಪ್ರದೇಶಗಳನ್ನು ಮಾತ್ರ ಪ್ರತ್ಯೇಕಿಸಬಹುದು. ಉದಾಹರಣೆಗೆ ಬೇಕಾದರೆ ಒಂದು ಸ್ಕೂಲನ್ನೋ ಅಥವಾ ಒಂದು ಹೋಟೆಲ್ಲನ್ನೋ ನೀವು ಬಂದ್ ಮಾಡಬಹುದು. ಆದರೆ ಒಂದು ಇಡೀ ಭೌಗೋಳಿಕ ಪ್ರದೇಶವನ್ನೇ ಲಾಕ್‌ಡೌನ್ ಮಾಡುವುದಕ್ಕೆ ಅದರಲ್ಲಿ ಅವಕಾಶವಿಲ್ಲ.

ನೀವು ಅನುಸರಿಸುತ್ತಿರುವ ಕ್ರಮಕ್ಕೆ ಯಾವ ಪುರಾವೆ ಇದೆ?

ಇಂತಹ ಖಾಯಿಲೆಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಆಧಾರದ ಕುರಿತು ಮಾತನಾಡುವುದು ಕಷ್ಟ. ಏಕೆಂದರೆ ನಮಗೆ ಈ ವೈರಾಣುವಿನ ಬಗ್ಗೆ ಹೆಚ್ಚಿಗೆ ಏನೂ ತಿಳಿದಿಲ್ಲ. ದಿನ ಕಳೆದಂತೆ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತಿದೆ. ನನ್ನ ದೃಷ್ಟಿಯಲ್ಲಿ ಸಂಪೂರ್ಣ ಬಂದ್ ಮಾಡುವುದು, ಲಾಕ್‌ಡೌನ್ ಮಾಡುವುದು, ಗಡಿಗಳನ್ನು ಮುಚ್ಚುವುದು ಈ ಕ್ರಮಗಳಿಗೆ ಯಾವುದೇ ಚಾರಿತ್ರಿಕ ವೈಜ್ಞಾನಿಕ ತಳಹದಿ ಇಲ್ಲ. ಐರೋಪ್ಯ ಒಕ್ಕೂಟದ ದೇಶಗಳು ಈ ಕ್ರಮಗಳನ್ನು ಜಾರಿಗೊಳಿಸುವ ಮೊದಲು ಅವುಗಳ ಪರಿಣಾಮದ ಕುರಿತಂತೆ ಏನಾದರೂ ವಿಶ್ಲೇಷಣೆಗಳನ್ನು ನಡೆಸಿವೆಯಾ ಎಂದು ಹುಡುಕಿದೆವು. ಅಂತಹ ಯಾವ ಅಧ್ಯಯನವೂ ನಮಗೆ ಸಿಗಲಿಲ್ಲ. ಗಡಿಗಳನ್ನು ಮುಚ್ಚುವುದು ನನ್ನ ದೃಷ್ಟಿಯಲ್ಲಿ ಹಾಸ್ಯಾಸ್ಪದ. ಏಕೆಂದರೆ ಈಗ ಕೋವಿಡ್-19 ಯುರೋಪಿನ ಎಲ್ಲಾ ದೇಶದಲ್ಲಿಯೂ ಇದೆ. ಈಗ ನಮ್ಮ ಕಾಳಜಿಯೆಲ್ಲಾ ಸ್ವೀಡನ್ ನ ಒಳಗಿನ ಪರಿಸ್ಥಿತಿಯನ್ನು ಕುರಿತಂತೆ ಮಾತ್ರ.


ಓದಿ: ಕೊರೊನಾ ವೈರಸ್ ಅಮೆರಿಕಾದ ಮಿಲಿಟರಿ ಲ್ಯಾಬ್‌ನಲ್ಲಿ ಹುಟ್ಟಿದೆ: ಆರೋಪ


ಜನಗಳ ಮನವೊಲಿಸುವ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ. ಕ್ರಮಗಳನ್ನು ಅನುಸರಿಸುವಂತೆ ಅವರನ್ನು ನಿರಂತರವಾಗಿ ಕೇಳಿಕೊಳ್ಳುತ್ತಿದ್ದೇವೆ. ಜಾರಿಯಲ್ಲಿರುವ ಕ್ರಮಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ದಿನಾ ಗಮನಿಸುತ್ತಿದ್ದೇವೆ. ಯಾವುದನ್ನು ಸುಧಾರಿಸಬೇಕೋ ಅದನ್ನು ಸುಧಾರಿಸುತ್ತೇವೆ. ಎಲ್ಲವನ್ನೂ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವ ಅವಶ್ಯಕತೆಯಿಲ್ಲ. ಏಕೆಂದರೆ ಅದರಿಂದ ಅನುಕೂಲಕ್ಕಿಂತ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು.

ಸ್ವೀಡನ್ನಿನ ಪಬ್ಲಿಕ್ ಹೆಲ್ತ್ ಏಜನ್ಸಿ ತೀರ್ಮಾನಗಳನ್ನು ಹೇಗೆ ತೆಗೆದುಕೊಳ್ಳುತ್ತದೆ?

ಪ್ರತಿದಿನ ಬೆಳಗ್ಗೆ ಏಜನ್ಸಿಯ 15 ಮಂದಿ ಒಟ್ಟಿಗೆ ಸೇರುತ್ತೇವೆ. ಈಗಾಗಲೇ ಸಂಗ್ರಹಿಸಿರುವ ದತ್ತಾಂಶಗಳು ಮತ್ತು ವಿಶ್ಲೇಷಣೆಗಳನ್ನು ಆಧರಿಸಿ ನಮ್ಮ ತೀರ್ಮಾನಗಳನ್ನು ಪರಿಷ್ಕರಿಸುತ್ತೇವೆ. ವಾರಕ್ಕೆ ಎರಡು ಬಾರಿ ಪ್ರಾಂತೀಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ.

ಈಗ ಸದ್ಯಕ್ಕೆ ನಮ್ಮ ಮುಂದಿರುವ ಅತ್ಯಂತ ದೊಡ್ಡ ಸಮಸ್ಯೆ ವೃದ್ಧಾಶ್ರಮಗಳದ್ದು. ಅಲ್ಲಿ ಕೊರೋನಾ ಹರಡಿದ್ದು ತೀರಾ ದುರದೃಷ್ಟಕರ. ಅಕ್ಕಪಕ್ಕದ ಇತರ ದೇಶಗಳಿಗಿಂತ ಸ್ವೀಡನ್ನಿನ ಮರಣದರ ಹೆಚ್ಚಿರುವುದಕ್ಕೆ ಇದು ಕಾರಣ. ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾಕೆಂದರೆ ಇಲ್ಲಿ ಯಾವ ಕ್ರಮಗಳನ್ನುಅನುಸರಿಸಿಲ್ಲ, ಮತ್ತು ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕು.

ಎಲ್ಲವನ್ನೂ ತುಂಬಾ ಸಲೀಸಾಗಿ ತೆಗೆದುಕೊಳ್ಳಲಾಗಿದೆ ಅಂತ ಈ ಕ್ರಮವನ್ನು ತುಂಬಾ ಟೀಕಿಸಲಾಗುತ್ತದೆ. ಈ ಟೀಕೆಗೆ ನಿಮ್ಮ ಪ್ರತಿಕ್ರಿಯೆ ಏನು? ಈ ಕ್ರಮದಿಂದ ಅವಶ್ಯಕತೆಗಿಂತ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುವ ಅಪಾಯ ಇದೆಯಾ?

ಅಷ್ಟೆಲ್ಲಾ ಅಪಾಯವಿದೆ ಎಂದು ನನಗನ್ನಿಸುತ್ತಿಲ್ಲ. ಪಬ್ಲಿಕ್ ಹೆಲ್ತ್ ಏಜನ್ಸಿಯು ಪ್ರತಿಯೊಂದು ಪ್ರಾಂತ್ಯದಲ್ಲಿ ಆಸ್ಪತ್ರೆಗೆ ಸೇರುವವರು ಹಾಗೂ ಮರಣ ದರದ ಕುರಿತಂತೆ ತುಂಬಾ ವಿವರವಾದ ಮಾದರಿಯನ್ನು ಬಿಡುಗಡೆ ಮಾಡಿದೆ. ನಿಜ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ಅದು ಅಷ್ಟೊಂದು ಆಘಾತಕಾರಿಯಾಗಿಲ್ಲ. ನಾವು ಪಿಡುಗಿನ ಮುಂದಿನ ಹಂತಕ್ಕೆ ಹೋಗುತ್ತಿದ್ದೇವೆ. ಮುಂದಿನ ಕೆಲವು ವಾರಗಳು ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಹೆಚ್ಚಿನ ಜನ ತೀವ್ರ ನಿಗಾ ಘಟಕ ಸೇರಬಹುದು. ಎಲ್ಲಾ ದೇಶಗಳಲ್ಲೂ ಹೀಗೆ ಆಗುತ್ತಿದೆ. ನಮ್ಮದೇನೂ ಭಿನ್ನವಲ್ಲ. ಯುರೋಪಿನಲ್ಲಿ ಯಾವ ದೇಶದಲ್ಲೂ ಸೋಂಕು ಹರಡುವುದರಲ್ಲಿ ಕಡಿಮೆಯಾಗಿಲ್ಲ.

ಕೊರೊನಾ ಕಾಲದಲ್ಲೂ ಸ್ವಿಡನ್

ಇನ್ನು ಶಾಲೆಗಳನ್ನು ಕುರಿತು ಹೇಳುವುದಾದರೆ, ರಾಷ್ಟ್ರದಾದ್ಯಂತ ಇನ್ನು ಮುಂದೆಯೂ ತೆರೆದೇ ಇರುತ್ತದೆ. ನಾವೀಗ ಈ ಸಾಂಕ್ರಾಮಿಕ ಪಿಡುಗಿನ ನಡುವಿನಲ್ಲಿದ್ದೇವೆ. ನನ್ನ ಪ್ರಕಾರ ಈ ಹಂತದಲ್ಲಿ ಶಾಲೆಗಳನ್ನು ಮುಚ್ಚುವುದರಲ್ಲಿ ಅರ್ಥವೇ ಇಲ್ಲ. ಇದು ವೈಜ್ಞಾನಿಕವಾಗಿಯೂ ಸರಿ. ಸಾಂಕ್ರಾಮಿಕ ಪಿಡುಗು ಪ್ರಾರಂಭವಾದಾಗ ಶಾಲೆಗಳನ್ನು ಮುಚ್ಚಬೇಕು. ಆಗಷ್ಟೇ ಅದು ಪರಿಣಾಮಕಾರಿಯಾಗುತ್ತದೆ. ಆದರೆ ಸ್ಟಾಕ್ ಹೋಮಿನಲ್ಲಿ ಇಂದು ಸ್ವೀಡನ್ನಿನಲ್ಲೇ ಅತಿ ಹೆಚ್ಚು ಸೋಂಕಿತರಿದ್ದಾರೆ. ಸೋಂಕಿನ ನಕ್ಷೆ ತುತ್ತುತುದಿಯಲ್ಲಿದೆ. ಈಗ ಶಾಲೆಗಳನ್ನು ಮುಚ್ಚುವುದರಲ್ಲಿ ಯಾವ ಅರ್ಥವೂ ಇಲ್ಲ. ಯುವಕರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ರಕ್ಷಿಸುವುದಕ್ಕೆ ಮತ್ತು ಅವರನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದಕ್ಕೆ ಶಾಲೆಗಳು ಮುಖ್ಯವಾಗಿ ಬೇಕು.

ಸೋಂಕಿನ ಯಾವ ಲಕ್ಷಣಗಳೂ ಇಲ್ಲದ, ಆದರೆ ಸೋಂಕಿನ ವಾಹಕರಾಗಿರುವವರ ಪಾತ್ರವನ್ನು ಏಜನ್ಸಿಯು ಸಂಪೂರ್ಣವಾಗಿ ಗುರುತಿಸಿಲ್ಲ ಎಂದು ಸಂಶೋಧಕರು ಟೀಕಿಸಿದ್ದಾರೆ. ಸೋಂಕಿನ ಲಕ್ಷಣಗಳಿಲ್ಲದ ವಾಹಕರು ಸಮಸ್ಯೆಯಾಗಬಹುದು ಎಂದು ನೀವು ಭಾವಿಸುತ್ತೀರಾ?

ಲಕ್ಷಣ ರಹಿತತೆಯೂ ಸಾಂಕ್ರಾಮಿಕ ಆಗಬಹುದಾದ ಸಾಧ್ಯತೆಗಳಿವೆ. ಇತ್ತೀಚಿನ ಕೆಲವು ಅಧ್ಯಯನಗಳು ಅದನ್ನು ಸೂಚಿಸಿವೆ. ಆದರೆ ಸೋಂಕಿನ ಲಕ್ಷಣಗಳು ಇರುವವರಿಗೆ ಹೋಲಿಸಿದರೆ ಇಲ್ಲದವರಿಂದ ಹರಡುವಿಕೆಯ ಪ್ರಮಾಣ ಸಾಕಷ್ಟು ಕಡಿಮೆ ಇರುತ್ತದೆ. ನಾರ್ಮಲ್‌ ರೇಖೆಯಲ್ಲಿ ಅಂತಹವರು ಅಂಚಿನಲ್ಲಿದ್ದಾರೆ. ನಕ್ಷೆಯ ಬಹುಭಾಗವನ್ನು ಸೋಂಕಿನ ಲಕ್ಷಣ ಇರುವವರೇ ಆಕ್ರಮಿಸಿಕೊಂಡಿದ್ದಾರೆ. ನಾವು ನಿಜವಾಗಿಯೂ ನಿಯಂತ್ರಿಸಬೇಕಾದದ್ದು ಇದನ್ನು.

ನೀವು ಅಳವಡಿಸಿಕೊಂಡಿರುವ ಕಾರ್ಯಸೂಚಿ ಯಶಸ್ವಿಯಾಗಿದೆ ಎಂದು ಭಾವಿಸುತ್ತೀರಾ?

ಅದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಜೊತೆಗೆ ಇಷ್ಟು ಬೇಗ ಏನೂ ತಿಳಿಯುವುದಿಲ್ಲ. ಪ್ರತಿಯೊಂದು ದೇಶವೂ “ಗುಂಪು ನಿರೋಧಕ ಶಕ್ತಿ”(ಹರ್ಡ್ಇಮ್ಯುನಿಟಿ ಅಂದರೆ ಜನಸಂಖ್ಯೆಯ ಬಹುಭಾಗ ಒಂದು ಸೋಂಕಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರಬೇಕು. ಆಗ ಸೋಂಕು ಹರಡುವುದು ಹೆಚ್ಚು ಕಮ್ಮಿ ನಿಲ್ಲುತ್ತದೆ.)ಯ ಸ್ಥಿತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪಬೇಕು. ನಾವಿದನ್ನು ಸಾಧಿಸಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ.


ಓದಿ: ಕೊರೊನಾ ಮತ್ತು ಲಾಕ್‌ಡೌನ್‌ಅನ್ನು ಅರ್ಥ ಮಾಡಿಕೊಂಡು ಸರಿಯಾದ ಯೋಜನೆಗಾಗಿ ಆಗ್ರಹಿಸುವ ಈ ಅಧ್ಯಯನದಲ್ಲಿ ನೀವೂ ಭಾಗಿಯಾಗಿ


ಗುಂಪು ನಿರೋಧಕ ಶಕ್ತಿಯ ಕುರಿತಂತೆ, ಸೋಂಕಿನ ಮರುಕಳಿಸುವಿಕೆಯ ಬಗ್ಗೆ ಯೋಚಿಸುವುದಕ್ಕೆ ಸಾಧ್ಯ ಅನ್ನುವುದಕ್ಕೆ ಹಲವು ಸೂಚನೆಗಳು ಕಾಣಿಸುತ್ತಿವೆ. ಜಗತ್ತಿನಲ್ಲಿ ಎಲ್ಲೂ ಮರು ಸೋಂಕು ಆದ ವರದಿಯಿಲ್ಲ. ಈ ಗುಂಪು ರೋಗ ನಿರೋಧಕ ಶಕ್ತಿ ಎಷ್ಟು ಕಾಲ ಉಳಿಯುತ್ತದೆ? ಗೊತ್ತಿಲ್ಲ. ಆದರೆ ರೋಗ ನಿರೋಧಕ ಪ್ರತಿಕ್ರಿಯೆ ಇರುವುದಂತು ಸತ್ಯ.

ಇದಕ್ಕಿಂತ ಭಿನ್ನವಾಗಿ ಏನಾದರೂ ಮಾಡಬಹುದಿತ್ತೆ?

ವೃದ್ಧಾಶ್ರಮಗಳ ವಿಷಯದಲ್ಲಿ ನಾವು ಸರಿಯಾಗಿ ಅಂದಾಜು ಮಾಡಲಿಲ್ಲ. ಅಲ್ಲಿ ಅಳವಡಿಸಬೇಕಾಗಿದ್ದ ಸುರಕ್ಷಾ ಕ್ರಮಗಳು ಇನ್ನೂ ಪರಿಣಾಮಕಾರಿಯಾಗಿರಬೇಕಿತ್ತು. ಅದನ್ನು ಇನ್ನೂ ಹೆಚ್ಚು ಪರಿಪೂರ್ಣವಾಗಿ ನಿಯಂತ್ರಿಸಬೇಕಿತ್ತು. ಆರೋಗ್ಯ ವ್ಯವಸ್ಥೆ ನಿರಂತರವಾಗಿ ಒತ್ತಡದಲ್ಲಿದೆ. ಆದರೆ ಅದು ಸಾಕಷ್ಟು ಮುಂದಿದೆ.

ನಿಮ್ಮಕಾರ್ಯಸೂಚಿಯ ಬಗ್ಗೆ ನಿಮಗೆ ತೃಪ್ತಿಯಿದೆಯೇ?

ಖಂಡಿತಾ ಇದೆ! ಕೋವಿಡ್-19 ವೃದ್ಧರಿಗೆ ತುಂಬಾ ಅಪಾಯಕಾರಿ ಎನ್ನುವುದು ನಮಗೀಗ ಸ್ಪಷ್ಟವಾಗಿದೆ. ಅದು ತುಂಬಾ ವಿಷಾದಕರ. ಮಹಾಮಾರಿಗಳ ಇತಿಹಾಸವನ್ನು ನೋಡಿದರೆ ಇದಕ್ಕಿಂತ ಹೆಚ್ಚು ಭಯಂಕರವಾದ ಘಟನೆಗಳು ನಡೆದಿವೆ ಅನ್ನುವುದು ಅರಿವಾಗುತ್ತದೆ. ಈಗ ನಾವು ಗಮನಿಸುತ್ತಿರುವ ಹೆಚ್ಚಿನ ಸಮಸ್ಯೆಗಳು ಕೆಲವು ಸಂದರ್ಭಗಳಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಸೋತಿರುವುದರಿಂದ ಆಗಿರುವ ಸಮಸ್ಯೆಗಳೇ ಹೊರತು ಈ ಪಿಡುಗಿನಿಂದ ಆದ ಸಮಸ್ಯೆಗಳಲ್ಲ. ವೃದ್ಧರು ಸಾಯುತ್ತಿರುವುದು ನಮ್ಮ ಮುಂದಿರುವ ಅತಿದೊಡ್ಡ ಸಮಸ್ಯೆ. ನಾವು ಅದರ ವಿರುದ್ಧ ಗಂಭೀರವಾಗಿ ಹೋರಾಡುತ್ತಿದ್ದೇವೆ.

ದತ್ತಾಂಶಗಳ ಪ್ರಕಾರ ಈ ವರ್ಷ ಫ್ಲೂ ಸಾಂಕ್ರಾಮಿಕ ಮತ್ತು ಚಳಿಗಾಲದ ನೋರೋ ವೈರಸ್‌ ಕಡಿಮೆಯಾಗುತ್ತಲೇ ಇದೆ. ಅಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪದೇ ಪದೇ ಕೈತೊಳೆಯುವ ಕ್ರಮಗಳು ಫಲ ನೀಡಿವೆ. ಸ್ವೀಡನ್ನಿನ ನಾಗರಿಕರು ಓಡಾಡುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ. ಇದನ್ನು ನಾವು ಗೂಗಲ್ಲಿನಲ್ಲಿ ಗಮನಿಸಿದ್ದೇವೆ. ನಮ್ಮ ಸ್ವಯಂ ನಿಯಂತ್ರಣದ ವಿಧಾನದಿಂದ ಖಂಡಿತಾ ಪರಿಣಾಮ ಅಗಿದೆ.


ಓದಿ: ಕೊರೊನಾ ಕಾಲದ ಪ್ರಶ್ನೆಗಳಿಗೆ ಕೊರೊನಾ ಕಾಲದ ವಿಜ್ಞಾನ ಕೊಟ್ಟಿರುವ ಉತ್ತರಗಳಿವು


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...