Homeಮುಖಪುಟತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್

ತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್

ಈ ವಿಚಾರದಲ್ಲಿ ಇನ್ನೂ ಹೆಚ್ಚು ಬೇಜವಾಬ್ದಾರಿತನ ಮತ್ತು ದುರುದ್ದೇಶದಿಂದ ನಡೆದುಕೊಂಡಿದ್ದು ಮಾಧ್ಯಮಗಳು. ಕಮ್ಯುನಲ್ ಅಲ್ಲ ಎಂದು ಬಗೆಯಲಾಗಿರುವ ಮಾಧ್ಯಮಗಳೂ ಕೆಟ್ಟದಾಗಿ ನಡೆದುಕೊಂಡವು.

- Advertisement -
- Advertisement -

ಬಹುಶಃ ಉಚ್ಚೆಯಲ್ಲಿ ಮೀನು ಹಿಡಿಯುವುದು ಎಂದರೆ ಇದೇ ಇರಬಹುದು. ಪ್ರಪಂಚವೇ ಒಂದು ಮಾನವೀಯ ಬಿಕ್ಕಟ್ಟಿನಲ್ಲಿ ತಲ್ಲಣಗೊಂಡಿರುವಾಗಲೂ ತಮಗೆ ಹಿಡಿದಿರುವ ಕೋಮುವೈರಸ್‌ನಿಂದ ಕೆಲವರು ಹೊರಬರಲಾಗಲಿಲ್ಲ. ಇದು ಕೇವಲ ವೈರಸ್ಸಾ ಅಥವಾ ಶಸ್ತ್ರಚಿಕಿತ್ಸೆಯನ್ನೇ ಬೇಡುವ ಕ್ಯಾನ್ಸರ್‍ರಾ ಹೇಳಲಾಗದು.

ನಿನ್ನೆ ಕ್ಯಾನ್ಸರ್ ತಜ್ಞರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಚೀನಾದ ಅಧ್ಯಕ್ಷರ ಫೋಟೋ ಹಾಕಿ ‘ಸೃಷ್ಟಿಕರ್ತ’ನೆಂದೂ, ಮುಸ್ಲಿಂ ಗುಂಪೊಂದರ ಫೋಟೋ ಹಾಕಿ ‘ಹಂಚಿಕೆದಾರರು’ ಎಂದೂ ಬರೆದಿದ್ದ ಚಿತ್ರ ಅದು. ಅದನ್ನು ನೋಡಿದ ಕನಿಷ್ಠ ನೂರು ಜನ ವೈದ್ಯರಿಗೂ ಅದು ತಪ್ಪೆಂದು ಅನಿಸಲಿಲ್ಲ. ಇದು ಈ ದೇಶಕ್ಕೆ ಹತ್ತಿದ ವೈರಸ್‌ಗಳಲ್ಲಿ ಕೊರೊನಾಗಿಂತ ಅಪಾಯಕಾರಿಯಾದವು ಬಹಳಷ್ಟಿವೆ ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ನಿಜಾಮುದ್ದೀನ್ ಪ್ರಕರಣವು ಅದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಝ್ ಮಸೀದಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದ್ದ ತಬ್ಲಿಘಿ ಜಮಾತ್‌ನದ್ದು ಖಂಡಿತವಾಗಿ ಬೇಜವಾಬ್ದಾರಿ ವರ್ತನೆ. ಏಕೆಂದರೆ ಆ ಹೊತ್ತಿಗಾಗಲೇ ಹಲವು ದೇಶಗಳಲ್ಲಿ ಕೊರೊನಾದ ಸೋಂಕು ವ್ಯಾಪಿಸಿತ್ತು ಮತ್ತು ಈ ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಆಹ್ವಾನಿತರಾಗಿದ್ದರು. ಅಲ್ಲಿಂದಾಚೆಗೂ ಅವರು ತೆಗೆದುಕೊಂಡಿದ್ದೇವೆಂದು ಹೇಳುತ್ತಿರುವ ಕ್ರಮಗಳೂ ಸಹಾ ಅವರು ಸಂಪೂರ್ಣ ಹೊಣೆಗಾರಿಕೆಯಿಂದ ವರ್ತಿಸಿದ್ದಾರೆಂದು ಸಾಬೀತು ಮಾಡುವುದಿಲ್ಲ. ಆದರೆ, ನಿಸ್ಸಂದೇಹವಾಗಿ ಹೇಳಬಹುದಾದ ಸಂಗತಿಯೆಂದರೆ ಸರ್ಕಾರವೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿದೆ.

ಮುಖ್ಯವಾಗಿ ಮಾರ್ಚ್ 13-14ರಂದು ನಡೆದ ಅಂರ‍್ರಾಷ್ಟ್ರೀಯ ಸಮ್ಮೇಳನದ ನಂತರವೂ ಮರ್ಕಝ್‌ನಲ್ಲಿ ಜನರು ಉಳಿದುಕೊಂಡಿದ್ದಾರೆ. ಇಡೀ ಪ್ರಕರಣದ ವಿವರಗಳು ಯಾವುದೇ ಪಕ್ಷಪಾತವಿಲ್ಲದೇ ಹೊರಬೀಳಬೇಕು. ಆಗ ಉಳಿದ ವಿವರಗಳು ಗೊತ್ತಾಗಲು ಸಾಧ್ಯ. ಅದರಲ್ಲೂ ನಿರ್ದಿಷ್ಟವಾಗಿ 22, 23 ಮತ್ತು 24ರ ಘಟನಾವಳಿಗಳ ವಿವರಗಳು ಹೊರಬರಬೇಕು. ತಬ್ಲಿಘಿ ಹೇಳಿರುವಂತೆ ‘ಇಲ್ಲೇ ಉಳಿದುಕೊಂಡಿರುವ ಇತರರನ್ನು ಕಳಿಸಲು ವಾಹನ ಪಾಸ್ ಕೊಡಿ ಎಂದು ಎಷ್ಟು ಕೇಳಿದರೂ ಸರ್ಕಾರೀ ಅಧಿಕಾರಿಗಳು ಸ್ಪಂದಿಸಲಿಲ್ಲ’ ಎನ್ನುವುದೇ ನಿಜವಾದರೆ ಸಂಬಂಧಪಟ್ಟ ಅಧಿಕಾರಿಗಳ ನಿಜವಾದ ಉದ್ದೇಶದ ಬಗ್ಗೆಯೇ ಶಂಕೆ ಏಳುತ್ತದೆ. ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ತಬ್ಲಿಘಿನ ಈ ಹೇಳಿಕೆಯನ್ನು ಅಲ್ಲಗಳೆದಿಲ್ಲ ಎಂಬುದನ್ನು ಗಮನಿಸಬೇಕು.

ದೆಹಲಿಯ ನಿಜಾಮುದ್ದಿನ್ ಮರ್ಕಝ್ ನಲ್ಲಿ ನಡೆದುದ್ದೇನು? ನಡೆಯದೇ ಇದ್ದುದ್ದೇನು? ಇಲ್ಲಿ ಕೇಳಿ….

Posted by Naanu Gauri on Tuesday, March 31, 2020

ಮಾರ್ಚ್ 23ರಂದು ಎಚ್ಚರಿಕೆ ನೀಡಲಾಗಿತ್ತು ಎಂಬ ಪೊಲೀಸರ ಹೇಳಿಕೆಯನ್ನು ತಬ್ಲಿಘಿ ಸಹಾ ಅಲ್ಲಗಳೆದಿಲ್ಲ; ಅದಕ್ಕೆ ಉತ್ತರವಾಗಿ ಮಾರ್ಚ್ 24ರಂದು ತಾವು ಬರೆದ ಪತ್ರ ಮತ್ತು ಪತ್ರದಲ್ಲೂ, ಪೊಲೀಸರ ವಿಡಿಯೋದಲ್ಲೂ ಅವರು ಹೇಳಿರುವಂತೆ ಲಾಕ್‌ಡೌನ್ ಸಂದರ್ಭದಲ್ಲಿ ಹೊರಕಳಿಸುವುದು ಹೇಗೆ ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡುವುದೂ ಕಷ್ಟ. ಹಿಂದೂಸ್ತಾನ್ ಟೈಮ್ಸ್‌ನಲ್ಲಿ ವರದಿಯಾಗಿರುವ ಹಾಗೆ ‘ಅದಿನ್ನೂ ಲಾಕ್‌ಡೌನ್ ಹೊಸದಾಗಿ ಘೋಷಣೆಯಾಗಿತ್ತು. ಅತ್ಯಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ನಾವು ಪಾಸ್ ನೀಡಬಹುದಾಗಿತ್ತು ಮತ್ತು ಇವರನ್ನು ಸಾಗಿಸುವುದು ಅತ್ಯಗತ್ಯವೆಂದು ಹೇಗೆ ಹೇಳುವುದು? ಹಾಗಾಗಿಯೇ ಪಾಸ್ ನೀಡಲಿಲ್ಲ’. ಅಂದರೆ, ಇಂತಹ ಲಾಕ್‌ಡೌನ್ ಅನುಭವವಿಲ್ಲದ ಜನರು ಮಾಡುವ ತಪ್ಪುಗಳು ಎರಡೂ ಕಡೆಯಿಂದ ಆಗಿವೆ. ‘ಜನರ ಸಾಗಾಣಿಕೆ’ಯೂ ಅತ್ಯಗತ್ಯ ಎಂಬುದು ಈ ಪ್ರಕರಣದಲ್ಲೂ ಮತ್ತೆ ಸಾಬೀತಾಗಿದೆ.

ಈ ವಿಚಾರದಲ್ಲಿ ಇನ್ನೂ ಹೆಚ್ಚು ಬೇಜವಾಬ್ದಾರಿತನ ಮತ್ತು ದುರುದ್ದೇಶದಿಂದ ನಡೆದುಕೊಂಡಿದ್ದು ಮಾಧ್ಯಮಗಳು. ಕಮ್ಯುನಲ್ ಅಲ್ಲ ಎಂದು ಬಗೆಯಲಾಗಿರುವ ಮಾಧ್ಯಮಗಳೂ ಕೆಟ್ಟದಾಗಿ ನಡೆದುಕೊಂಡವು. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಮತ್ತು ದಿ ಪ್ರಿಂಟ್‌ನ ಸಂಪಾದಕ ಶೇಖರ್ ಗುಪ್ತಾ ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ.

‘ತಬ್ಲಿಘಿ ಜಮಾತ್ – ಮರ್ಕಾಜ್‌ನವರು ಮಾರ್ಚ್ ಎರಡನೇ ವಾರದಲ್ಲಿ ಒಂದು ದೊಡ್ಡ ಸಮಾವೇಶ ಅಯೋಜಿಸಿದ್ದು ಒಂದು ದುಡುಕಿನ, ದುಸ್ಸಾಹಸದ ಕೆಲಸವೇ ಆಗಿತ್ತು. ವಿಶೇಷವಾಗಿ ಕೋವಿಡ್-19 ಪೀಡಿತ ದೇಶಗಳ ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ನೀಡಿದ್ದು ಬೇಜವಾಬ್ದಾರಿತನದ ಕೆಲಸ; ಇದು ಸರಳ ತರ್ಕವನ್ನು ಉಲ್ಲಂಘಿಸಿದಂತೆ. ಫೆಬ್ರುವರಿ ತಿಂಗಳ ಮಧ್ಯದಲ್ಲಿ ಮಲೇಷಿಯದಲ್ಲಿ 16 ಸಾವಿರ ಜನರು ತಬ್ಲಿಘಿಯ ಒಂದು ಸಮಾವೇಶದಲ್ಲಿ ಭಾಗವಹಿಸಿದ್ದರು. ಆರು ದೇಶಗಳಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳು ಈ ಸಮಾವೇಶದಿಂದಾಗಿರುವುದು ಎಂದು ಹೇಳಲಾಗಿತ್ತು. ದೆಹಲಿಯ ಮರ್ಕಾಜ್ ಸಭೆಗೆ ಮಲೇಷಿಯದಲ್ಲಿ ಆದ ಸಮಾವೇಶದಲ್ಲಿ ಭಾಗವಹಿಸಿದ ಧರ್ಮಗುರುಗಳೂ ಹಾಜರಾಗಿದ್ದರು. ಇದು ಬೇಜವಾಬ್ದಾರಿಯ ಕೆಲಸ.

ಮಾರ್ಚ್ 11ರಂದೇ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು ಒಂದು ಪ್ಯಾಂಡೆಮಿಕ್ (ಸಾಂಕ್ರಾಮಿಕ) ರೋಗ ಎಂದು ಘೋಷಿಸಿದಾಗಲೇ ದೆಹಲಿಯ ಸಮಾವೇಶವನ್ನು ನಿಲ್ಲಿಸಬೇಕಾಗಿತ್ತು, ದೆಹಲಿ ಸರಕಾರದ ಹಾಗೂ ಕೇಂದ್ರ ಸರಕಾರದ ಲಾಕ್‌ಡೌನ್‌ಗಾಗಿ ಕಾಯಬೇಕಾಗಿರಲಿಲ್ಲ.

ಆದರೆ, ಅದರೊಂದಿಗೆ ನಮ್ಮ ಸರಕಾರಗಳೂ ಕೋವಿಡ್-19 ಭೀತಿಗೆ ಎಚ್ಚೆತ್ತುಕೊಂಡಿದ್ದು ತುಂಬಾ ತಡವಾಗಿ ಎನ್ನುವುದೂ ಅಷ್ಟೇ ಸತ್ಯ. ಆ ಸಮಾವೇಶಕ್ಕೆ ಪೊಲೀಸರ ಅನುಮತಿ ಇಲ್ಲದಿದ್ದರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ; ನಿಝಾಮುದ್ದೀನ್ ಪೊಲೀಸ್ ಸ್ಟೇಷನ್‌ಗೆ ಮರ್ಕಝ್ ಕೇವಲ 100 ಮೀಟರ್ ದೂರದಲ್ಲಿದೆ. ಆ ಸ್ಥಳದಲ್ಲಿ ಆಗ ಗೂಢಚರ್ಯೆ ಇಲಾಖೆಯ ಅಧಿಕಾರಿಗಳು ಇದ್ದರು ಎನ್ನುವುದೂ ಸತ್ಯ. (ಆ ಅಧಿಕಾರಿಗಳ ಆರೋಗ್ಯದ ಪರೀಕ್ಷೆ ಮೊದಲು ಮಾಡಿಸಿ) ಈ ಸಭೆಯ ಬಗ್ಗೆ ದೆಹಲಿ ಸರಕಾರಕ್ಕೆ ಮಾಹಿತಿ ಇರದೇ ಇರುವುದಕ್ಕೆ ಛಾನ್ಸೇ ಇಲ್ಲ.

ನಾವೆಲ್ಲರೂ ಮೊದಲ ಹಂತಗಳಲ್ಲಿ ತಪ್ಪು ಮಾಡಿದ್ದೀವಿ ಎನ್ನುವುದು ಒಪ್ಪಿಕೊಳ್ಳುವ. ಆದರೆ ದೆಹಲಿ ಸರಕಾರದಿಂದಲೇ ಮಾರ್ಚ್ 13ರಂದು ಆದೇಶ ಜಾರಿಗೊಳಿಸಿದ ನಂತರ ದೆಹಲಿ ಸರಕಾರ ಮತ್ತು ದೆಹಲಿ ಪೊಲೀಸ್ ಏನು ಮಾಡುತ್ತಿದ್ದವು? ಆ ಸಭೆಯನ್ನು ಆಡಳಿತವು ಅಲ್ಲಿಗೇ ಏಕೆ ನಿಲ್ಲಿಸಲಿಲ್ಲ? ಅದರ ನಂತರವೂ ಸಭೆಯನ್ನು ಮರ್ಕಾಜ್ ಮುಂದುವರೆಸಿದ್ದು ಅಕ್ಷಮ್ಯ. But there is no way it went under the radar. ಅದಕ್ಕಿಂತ ಮುಖ್ಯವಾಗಿ, ಕೋವಿಡ್-19 ಪ್ರಬಾಧಿತ ದೇಶಗಳಿಂದ ಜನರು ಏರ್‌ಪೋರ್ಟ್‌ಗಳಲ್ಲಿ ಪರೀಕ್ಷೆಗೆ ಒಳಗಾಗದೇ ಹೇಗೆ ಬಂದರು?

ಆದರೆ ಇದನ್ನು ಕೊರೊನಾ ಜಿಹಾದ್ ಎಂದು ಕರೆದು, ಕೋವಿಡ್-19 ಹರಡುವುದಕ್ಕೆ ಮುಸ್ಲಿಮ್ ಸಮುದಾಯವನ್ನು ದೂಷಿಸುವ ಕಥನವನ್ನು ಕಟ್ಟುತ್ತಿರುವುದು ನಿಜಕ್ಕೂ ಮಾನಸಿಕ ಅಸ್ವಸ್ಥತೆ. ಇದನ್ನು ಕೆಲವು ಬಲಪಂಥೀಯ ಮುಖ್ಯವಾಹಿನಿಯ ಮಾಧ್ಯಮಗಳು ಮಾಡುತ್ತಲೇ ಇವೆ. ಮುಸ್ಲಿಮರೇನೋ ಮೆಕ್ಕಾ ಮತ್ತು ಗಲ್ಫ್‌ನಿಂದ ಕೋವಿಡ್-19 ಅನ್ನು ಭಾರತಕ್ಕೆ ತಂದಿದ್ದಾರೆ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕುಟುಂಬದ ಮಧ್ಯಮ ವರ್ಗದ, ಮೇಲ್ಜಾತಿಗಳ ಸಾಫ್ಟ್ವೇರ್ ಇಂಜಿನಿಯರ್‌ಗಳು ಪಾಶ್ಚಾತ್ಯ ದೇಶಗಳಿಂದ ಬರುವಾಗ ಕೋವಿಡ್-19ನ್ನು ತಮ್ಮೊಂದಿಗೆ ತರಲಿಲ್ಲವೇ? ಈ ಹಿಪಾಕ್ರಸಿಗೆ ಕೊನೆಯೇ ಕಾಣುತ್ತಿಲ್ಲ.

ದಕ್ಷಿಣ ಕೊರಿಯಾದ ಒಂದು ಕ್ರಿಶ್ಚಿಯನ್ ಗುಂಪನ್ನು ಸುಪರ್-ಸ್ಪ್ರೆಡರ್ ಎಂದು ನಾಮಕರಣ ಮಾಡಲಾಗಿತ್ತು, ಈಗ ಮರ್ಕಾಜ್‌ಅನ್ನೂ ಅದೇ ಹೆಸರಿನಿಂದ ಕರೆಯಲಾಗುತ್ತಿದೆ. ಇರಾನ್‌ನಲ್ಲಿ ಈ ರೋಗ ವ್ಯಾಪಕವಾಗಿ ಹರಡಿದ್ದಕ್ಕೆ ಅಲ್ಲಿ ಆಯೋಜಿಸಲಾಗಿದ್ದ ಹಬ್ಬಗಳು ಕಾರಣ ಎನ್ನಲಾಗುತ್ತಿದೆ. ಅಲ್ಲಿಯ ಪ್ರಾರ್ಥನಾಸ್ಥಳಗಳನ್ನು ಮುಚ್ಚಿದಾಗ, ಅಲ್ಲಿಯ ಸಾಂಪ್ರದಾಯಿಕ ಜನರು ಕಷ್ಟದ ಸಮಯದಲ್ಲಿ ದೇವರೇ ಕಾಪಾಡಬಲ್ಲ ಎನ್ನುತ್ತ ಪ್ರಾರ್ಥನಾಸ್ಥಳಗಳಿಗೆ ಮುಗಿಬಿದ್ದರು.

ಭಾರತದ ಸ್ಥಿತಿಯೂ ಭಿನ್ನವಿಲ್ಲ. ಇಟಲಿ ಮತ್ತು ಜರ್ಮನಿಗೆ ಪ್ರವಾಸ ಮಾಡಿದ್ದ ಒಬ್ಬ ಸಿಖ್ ಬೋಧಕ ಸಂತ ಬಲದೇವ್‌ಸಿಂಗ್ ತನಗೆ ಕೋವಿಡ್-19 ಸೋಂಕಿನ ಲಕ್ಷಣಗಳಿದ್ದರೂ ಮನೆಯಲ್ಲಿ ಇರುವುದನ್ನು ಬಿಟ್ಟು ಸತ್ಸಂಗಗಳನ್ನು ಅಯೋಜಿಸಿ, ಆನಂದಪುರ ಸಾಹಿಬ್‌ನಲ್ಲಿ ನಡೆಯುವ ಹೋಲಾ ಮೊಹಲ್ಲಾ ಎನ್ನುವ ದೊಡ್ಡ ಹಬ್ಬದಲ್ಲಿ ಬಾಗವಹಿಸಿದ್ದರು. ಅವರನ್ನೂ ಸೂಪರ್-ಸ್ಪ್ರೆಡರ್ ಎಂದು ಕರೆಯಲಾಗಿತ್ತು. ಅವರನ್ನು ಮತ್ತೇ ಹೋಮ್ ಕ್ವಾರಂಟೀನ್‌ನಲ್ಲಿ ಇಟ್ಟ ನಂತರ, ಅವರ ಸುತ್ತ ಕೋವಿಡ್-19 ನ 33 ಪ್ರಕರಣಗಳು ಪತ್ತೆಯಾದವು.

ಭಾರತದ ಅತ್ಯಂತ ದೊಡ್ಡ ದೇವಾಲಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದ್ದೂ ತಬ್ಲಿಘಿ ಜಮಾತ್ ಮರ್ಕಾಜ್ ತನ್ನ ಸಭೆಯನ್ನು ನಿಲ್ಲಿಸಿದ ನಂತರವೇ. ಉತ್ತರ ಪ್ರದೇಶದ ಸನ್ಯಾಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ಒಂದು ವಾರಕಾಲ ರಾಮನವಮಿ ಸಂಭ್ರಮಾಚರಣೆಯನ್ನು ಆಯೋಜಿಸುವುದಾಗಿ ಪಟ್ಟುಹಿಡಿದಿದ್ದರು; ಅಲ್ಲಿ ಲಕ್ಷಾಂತರ ಜನ ಸೇರುವವರಿದ್ದರು. ಆ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹಲವು ಮನವಿಗಳ ನಂತರವೂ ಅದನ್ನು ರದ್ದುಗೊಳಿಸಲು ನಿರಾಕರಿಸಿದರು. ಈ ಬಿಕ್ಕಟ್ಟಿಗೆ ಅವರು ನೀಡಿದ ಉತ್ತರದ ಸಾರಾಂಶ ಇಷ್ಟು “ರಾಮ ನಮ್ಮನ್ನು ನೋಡಿಕೊಳ್ಳುತ್ತಾನೆ”. ಅದೃಷ್ಟವಶಾತ್ ಮೋದಿ ಹೇರಿದ ಲಾಕ್‌ಡೌನ್‌ನಿಂದ ಸಂಭ್ರಮಾಚರಣೆ ಆಗಲಿಲ್ಲ. ಆದರೆ, ಯೋಗಿ ಆದಿತ್ಯನಾಥ ಅವರು ರಾಮಲಲ್ಲಾ ಜೊತೆಗೆ ಅಯೋಧ್ಯೆಗೆ ಭೇಟಿ ನೀಡದೇ ಬಿಡಲಿಲ್ಲ; ಸಾಮಾಜಿಕ ಅಂತರದ ಎಲ್ಲಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ.

ಎಲ್ಲಾ ಧರ್ಮಗಳ ಅಂಧ ನಂಬಿಕೆ – ಎಲ್ಲಾ ಧರ್ಮಗಳು, ಇದಕ್ಕೆ ಯಾವುದೇ ಅಪವಾದವಿಲ್ಲ – ದೇವರು ನಮ್ಮನ್ನು ನೋಡಿಕೊಳ್ಳುತ್ತಾನೆ ಎನ್ನುವುದು ಸರಳ ಮೂರ್ಖತನ. ಹಿಂದಿನ ಶತಮಾನಗಳಲ್ಲಿ, ಯಾವುದೇ ಸಾಂಕ್ರಾಮಿಕ ರೋಗ ಹರಡಿದಾಗ, ಆಗಿನ ಸರಕಾರಗಳು ಏನು ಮಾಡಬೇಕು ಎಂಬುದು ತೋಚದೇ, ತಮ್ಮನ್ನು ಕಾಪಾಡಲು ದೇವರಲ್ಲಿ ಮೊರೆಯಿಡುತ್ತ ಸಾಮೂಹಿಕ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದವು. ಇಂತಹ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಸಾಂಕ್ರಾಮಿಕ ಹರಡಲು ಜನರು ದಾರಿ ಮಾಡಿಕೊಡುತ್ತಿದ್ದರು. ಯಾರು ತಮ್ಮನ್ನು ತಾವು ಕಾಪಾಡಿಕೊಳ್ಳುವುದಿಲ್ಲವೋ ಅವರಿಗೆ ದೇವರೂ ಸಹಾಯ ಮಾಡುವುದಿಲ್ಲ.

ಆದರೆ ಕೆಲವು ವಿವೇಕವುಳ್ಳ ಜನರೂ ಇದ್ದಾರೆ. ವ್ಯಾಟಿಕನ್‌ನ ಕ್ಯಾಥಲಿಕ್ ಚರ್ಚ್ ಹಾಗೂ ಸೌದಿ ಅರೇಬಿಯಾದ ಕಾಬಾ ಬಾಗಿಲು ಹಾಕಿದ್ದಾರೆ. ಭಾರತದಲ್ಲಿ ಎಲ್ಲಾ ದೊಡ್ಡ ದೇವಸ್ಥಾನಗಳ ಬಾಗಿಲು ಮುಚ್ಚಿದ್ದಾರೆ. ವಿಶ್ವಾದ್ಯಂತ ಬೌದ್ಧರು ತಮ್ಮ ಹೊಸ ವರ್ಷದ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದ್ದಾರೆ. ಬಹುಶಃ ಇತಿಹಾಸದಲ್ಲಿ ಮೊದಲ ಬಾರಿ ಕರಗವನ್ನೂ ರದ್ದುಗೊಳಿಸಲಾಗಿದೆ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...