Homeಸಾಹಿತ್ಯ-ಸಂಸ್ಕೃತಿಕಥೆ'ತನುಬಿಂದಿಗೆ' ನಾಗರಾಜ ಕೋರಿಯವರ ಕತೆ

‘ತನುಬಿಂದಿಗೆ’ ನಾಗರಾಜ ಕೋರಿಯವರ ಕತೆ

- Advertisement -
- Advertisement -

ಅದು ಇಳಿಸಂಜೆ. ಊರಿಗೆ ಮಳೆ ಬಾರದಕ್ಕಾಗಿ ಊರು ದೇವಿಗೆ ತನುಬಿಂದಿಗೆ ಇಡಲು ಜನ ಮಾತಾಡಿಕೊಳ್ಳಲು ಜಮೆಯಾಗಿತ್ತು. ಊರಲ್ಲಿನ ಒಂದು ಉಪ್ಪರಿಗೆ ಮೇಲೆ ನಿಂತು, ಪಶ್ಚಿಮ ದಿಕ್ಕಿನ ಕಡೆ ನೋಡಿದರೆ ಅಡವಿಯೆಂಬೋ ಅಡವಿ ಒಣಒಣ ಕಾಣತೊಡಗಿತ್ತು. ಮತ್ತಷ್ಟು ಕಣ್ಣಗಲಿಸಿ ಊರ ದಿಕ್ಕಿಗೆ ನೋಡಿದರೆ ಮುನಿಯಪ್ಪನ ಹೊಲವೆಲ್ಲಾ ಕೆರೆ ನೀರಿನಿಂದ ಹಸಿರಾಗಿತ್ತು. ಮುನಿಯಪ್ಪ ಊರಿಗೆ ಹಸಿರು ಶೆಲ್ಲೆಯ ದೊಡ್ಡ ಸಾಹುಕಾರ. ಸಾಕಷ್ಟು ಪಿತ್ರಾರ್ಜಿತ ಆಸ್ತಿ ಇತ್ತು.

ಈ ಊರಿಗೆ ಹತ್ತನ್ನೆರಡು ಸಲ ಬರಗಾಲ ಬಂದರೂ ಊರಿಗೆ ಅನ್ನ, ನೀರು, ಬಟ್ಟೆ ಕೊಟ್ಟು ಹಸಿವು ನೀಗಿಸುವ ಶಕ್ತಿ ಈತನಿಗಿತ್ತು. ಆದರೆ ಅಂತಹ ಔದಾರ್ಯದ ಗುಣ ಎಳ್ಳಷ್ಟೂ ಇರಲಿಲ್ಲ. ತಾನು ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾಗುವ ಉಪಾಯ ಹೂಡಿ ತಮ್ಮ ಹೊಲದಲ್ಲೇ ಊರು ಮಂದಿ ನೀರು ಕುಡಿಯಲೆಂದು ಕೆರೆ ಕಟ್ಟಿಸಿದ. ಆಗಿನಿಂದ ಆ ಕೆರೆ ಸಮತಟ್ಟಾಗಿ ತುಂಬಿ ತುಳುಕಿ ಆಣೆಕಟ್ಟಿನಂತೆ ವಿಶಾಲವಾಗಿ ಕಾಣುತಿತ್ತು. ಆಗಾಗ ಸರ್ಕಾರದವರು ಜನರು ನೀರು ಕುಡಿದಾದರೂ ಬದುಕಲೆಂದು ತುಂಗಭದ್ರಾ ಆಣೆಕಟ್ಟಿನಿಂದ ನೀರು ಬಿಡುತಿದ್ದರು.

ಮುನಿಯಪ್ಪ ತನ್ನ ನಾಲ್ಕೈದು ಚೇಲಾಗಳನ್ನು ಕಾವಲು ಬಿಟ್ಟು ಕೆರೆ ತುಂಬಿಸಿಕೊಳ್ಳುತಿದ್ದ. ಇದರಿಂದ ಉಳಿದವರ ಕೆರೆಕಟ್ಟೆಗಳು ನೀರಿಲ್ಲದೆ ಬಿಕೋ ಎನ್ನುತಿದ್ದವು. ಮುನಿಯಪ್ಪ ಊರಿಗೆ ಉದಾರವಾಗಿ ಕಾಣಲು, ಕೆರಿಗೆ ತಂತಿಬೇಲಿ ಹಾಕಿಸದೆ ಜನರಿಗೆ ಸರಾಗವಾಗಿ ನೀರು ಕುಡಿಯಲು ಹಾಗೆ ಬಿಟ್ಟಿದ್ದ. ತಾನು ಆ ಕೆರೆ ನೀರಿನಿಂದ ಕೊಬ್ಬು, ಶೇಂಗಾ, ಹತ್ತಿ ಸಮೃದ್ಧವಾಗಿ ಬೆಳೆಯುತಿದ್ದ. ತನ್ನ ಕೆರೆಯಲ್ಲಿ ಹೊಲೆಯರೂ ನೀರು ತುಂಬುತ್ತಿರುವುದು ಮುನಿಯಪ್ಪನಿಗೆ ಸಿಟ್ಟು ತರಿಸಿತ್ತು. ಅವರಿಗೆ ನೀರು ತುಂಬುವುದನ್ನು ನಿಷೇಧಿಸಿದ. ಅಕಸ್ಮಾತ್ತಾಗಿ ಕಣ್ಣು ತಪ್ಪಿಸಿ ನೀರು ತರಲು ಹೋದರೆ ಆಳುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕಳಿಸುತ್ತಿದ್ದ. ಹೊಲೆಯರು ಮುನಿಯಪ್ಪನಿಗೆ ಶಾಪ ಹಾಕಿ ಮಣ್ಣು ತೂರಿ ದೂರ ಸರಿದರು. ಆದರೆ ಕೂಲಿಗೆಂದು ಅವನ ಹೊಲಕ್ಕೆ ಹೋಗುವುದು ಅನಿವಾರ್ಯವಾಗಿತ್ತು.

ಇದನ್ನು ಓದಿ: ನೀರು (ಪುಟ್ಕತೆ)

ಮುನಿಯಪ್ಪನ ಹೊಲಕ್ಕೆ ಕೂಲಿ ಬರುತಿದ್ದ ಹೊಲೆಯರ ಸುಂಕವ್ವ ಕುರಿ ಮರಿಯನ್ನು ಜೊತೆಗೆ ಹೊಡೆದು ತರುತ್ತಿದ್ದಳು. ಒಂದಿನ ತುಂಬಿನಿಂತ ಹಚ್ಚನ ಜ್ವಾಳದ ಸಸಿಯನ್ನು ಕುರಿಮರಿ ಕಡಿದಿತ್ತು. ಮುನಿಯಪ್ಪ ಸಿಟ್ಟಿಗೇರಿ ‘ಏ..ನಿಮ್ಮೌನ್ ತುಡುಗು ರಂಡೆ ಕುರಿಮರಿ ಸರಿಗಿ ಕಟ್ಟಾಕರ ಬರಲ್ಲೇನು..’ ಎಂದು ಅಷ್ಟು ಮಂದ್ಯಾಗ ಬೈದಿದ್ದ. ಸುಂಕವ್ವ ಅವಮಾನಿತಳಾಗಿ ‘ಯಣ್ಣಾ ಬಾಯಿ ಬಿಗಿದಿಡಿದು ಮಾತಾಡು. ಹೆಣ್ಮಕ್ಕಳಂದ್ರೆ ಸೋವಿ ಸಿಕ್ಕಾರೇನು’ ಎಂದು ಒದರಾಡಿ ಕೂಲಿ ಕೆಲಸ ಅರ್ಧಕ್ಕೆ ನಿಲ್ಲಿಸಿ ಮನೆಗೆ ಬಂದಿದ್ದಳು. ಮಣ್ಣು ತಿಂದರೂ ಪರವಾಗಿಲ್ಲ, ಮುನಿಯಪ್ಪನ ಹೊಲಕ್ಕೆ ಹೋಗಬಾರದೆಂದು ನಿಶ್ಚಯಿಸಿದಳು.

ಪೊತನಾಳ ಸಂತಿಗೆ ಹೋಗಿದ್ದ ಗಂಡ ರಂಗಪ್ಪ ಬಂದ. ಸುಂಕವ್ವಳನ್ನು ನೋಡಿ ‘ಯಾಕ ಏನಾಯಿತು. ಕೂಲಿ ಕೆಲ್ಸಕ ಹೋಗಿದ್ದಲಾ…’ ಅಂತ ಗಾಬರಿಗೊಂಡು ಕೇಳಿದ. ಸುಂಕವ್ವ ನಡೆದ ಹಕೀಕತ್ತು ಹೇಳಿದಳು. ರಂಗಪ್ಪನಿಗೂ ಬೇಜಾರಾಯಿತು. ದಿಕ್ಕು ತೋಚದೆ ಚಿಂತಿಸಿದರು. ರಂಗಪ್ಪ ‘ಈ ಬರ ಶನಿವಾರ ಬೆಂಗಳೂರಿಗೆ ದುಡ್ಯಾಕ ಹೋಗಮು.. ಮಂದೆಲ್ಲಾ ನಾಳೆ ಬರೊ ಶನಿವಾರನ ಎಲ್ಲಾರು ತಯಾರಾಗ್ಯಾರ.. ಈ ಗೋಳಾರ ತಪ್‍ತೈತಿ..’ ಎಂದು ಹೇಳಿದ.

ಬೆಂಗಳೂರಿಗೆ ದುಡಿಯಾಕ ಹೋಗುವುದನ್ನು ನೆನಪಿಸಿಕೊಂಡು ಸುಂಕವ್ವಳಿಗೆ ದುಃಖ ಉಮ್ಮಳಿಸಿ ಬಂತು. ದುಡ್ಡಿದಿದ್ದರಲ್ಲೇ ಅಷ್ಟಿಷ್ಟು ದುಡ್ಡು ಉಳಿಸಿ ಚಿನ್ನೂರು ಸಂತ್ಯಾಗ ಕುರಿಮರಿ ತಂದು, ಎಂಬತ್ತು ಕೋಳಿನೂ ಬಿಟ್ಟು ಬೆಂಗಳೂರಿಗೆ ಹೇಗೆ ಹೋಗುವುದೆಂದು ಸುಂಕವ್ವ ಚಿಂತಿತಳಾದಳು. ದುಡಿಮೆ ಅನಿವಾರ್ಯವಾಗಿತ್ತು. ಮಲ್ಲ ಬೇರೆ ಸಣ್ಣವ. ಶಿವಜ್ಜಿ ಹತ್ತಿರ ಬಿಟ್ಟು ಹೋಗಲು ಮನಸ್ಸು ಕಸಿವಿಸಿಯಾಗುತ್ತಿತ್ತು. ಶಿವಜ್ಜಿ ಆಗಾಗ ಕದ್ದುಮುಚ್ಚಿ ಸೆರೆ ಕುಡಿಯುತ್ತಿರುವುದೂ ಈ ಕಸಿವಿಸಿಗೆ ಕಾರಣವಾಗಿತ್ತು.

ಇದನ್ನು ಓದಿ: ಎಮ್ಮೆ ಕಳ್ಳರು : ಪುಟ್ಕತೆ

ಸುಂಕವ್ವನ ಮನಸ್ಥಿತಿ ಅರಿತವಳಂತೆ ಶಿವಜ್ಜಿ ‘ಇವತ್ತಿನಿಂದ ನಾನು ಕುಡಿಯಲ್ಲ. ನನ್ನ ಮೊಮ್ಮಗನ ನಾನು ನೋಡಿಕಂತಿನಿ. ನೀವು ಗಂಡ ಹೆಣ್ತಿ ಆರಾಮಾಗಿ ದುಡುಕಂಡು ಬರ್ರಿ..’ ಎಂದು ಪ್ರಮಾಣ ಮಾಡಿದಳು. ಸುಂಕವ್ವ ಅತ್ತೆ ಮಾತು ನಂಬಿ ಬರೋ ಶನಿವಾರ ಬೆಂಗಳೂರಿಗೆ ಹೋಗಲು ನಿರ್ಧರಿಸಿದಳು. ಊರಲ್ಲಿ ತನುಬಿಂದಿಗೆ ಉತ್ಸವ ಇನ್ನೂ ನಾಲ್ಕೇ ದಿನ ಉಳಿದಿತ್ತು. ಮುನಿಯಪ್ಪ ತನ್ನ ಚೇಲಾಗಳೊಂದಿಗೆ ಮಂಗಳವಾರ ನಡೆಯುವ ತನುಬಿಂದಿಗೆ ಉತ್ಸವಕ್ಕೆ ರೊಕ್ಕದ ಪಟ್ಟಿ ಮಾಡಲು ಹೇಳಿದ್ದ. ಆಗ ಎಲ್ಲರ ಮನೆಯಂತೆ ರೊಕ್ಕದ ಪಟ್ಟಿಗೆ ಸುಂಕವ್ವನ ಮನೆಗೆ ಬಂದಿದ್ದರು. ಮನೆಯಲ್ಲಿ ನೋಡಿದರೆ ಐಪೈಸೆ ಇಲ್ಲದ ಸ್ಥಿತಿ.

‘ದೈವದಂತೆ ನಾವು..’ ಎಂದು ತವರು ಮನೆಯವರು ಮಗನಿಗೆಂದು ಮಾಡಿಸಿದ್ದ ‘ಕಿವಿ ಮುರುವು’ ಒತ್ತೆ ಇಟ್ಟು ನೂರಾ ಒಂದು ರೂಪಾಯಿ ಪಟ್ಟಿ ಬರಿಸಿದಳು. ಇನ್ನುಳಿದ ದುಡ್ಡಿನಿಂದ ಬೆಂಗಳೂರಿಗೆ ಹೋಗಲು ಅಕ್ಕಿ, ಜ್ವಾಳದ ಹಿಟ್ಟು, ಹುಂಚೆಕಾರ ಮುಂತಾದವುಗಳನ್ನು ಸಿದ್ಧತೆ ಮಾಡಿಕೊಂಡಳು. ಕೆಲವರು ‘ತನುಬಿಂದಿಗೆ ಉತ್ಸವ ಮುಗಿಸಿಕೊಂಡು ಹೋಗ್ರಿ’ ಅಂತ ಸೂಕ್ಷ್ಮಿಲೆ ಒತ್ತಿ ಹೇಳಿದರು. ಆದರೆ ಸುಂಕವ್ವನ ಮನಸ್ಸು ತನುಬಿಂದಿಗೆ ಉತ್ಸವಕ್ಕಿಂತ ಹೊಟ್ಟೆ, ಬಟ್ಟೆಗಾಗಿ ದುಡಿದು, ಮಗನನ್ನು ಓದಿಸಬೇಕೆಂಬ ಛಲ ಹೂಡಿದಂತಿತ್ತು. ಮಗ ಮಲ್ಲ ಸುಂಕವ್ವನ ಸೆರಗು ಹಿಡಿದು ತಾನೂ ಬರುತ್ತೇನೆಂದು ಅಳತೊಡಗಿದ. ಶಿವಜ್ಜಿ ತಮಣಿ ಮಾಡಿ ಹತ್ತು ರೂಪಾಯಿ ಕೈಲಿಟ್ಟಾಗ ರಂಪಾಟ ಕಡಿಮೆಯಾಗಿತ್ತು. ಮಗನನ್ನು ರಮಿಸಿ ಸುಂಕವ್ವ ರಂಗಪ್ಪ ಗಂಟು ಕಟ್ಟಿದ ಚೀಲಗಳನ್ನೆಲ್ಲಾ ಹೊತ್ತುಕೊಂಡು ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದ. ಗಾಡಿ ಕಡೆ ಹೆಜ್ಜೆ ಬೆಳೆಸಿದರು.

ಮರುದಿನ ತನುಬಿಂದಿಗೆಯ ಉತ್ಸವಕ್ಕೆ ಮಂದಿ ಮನಿಗೆ ಸುಣ್ಣಬಣ್ಣ ಬಳಿದು ಅಲಂಕೃತಗೊಳಿಸಿದ್ದರು. ದೇವಿಗುಡಿ ಹೊಸ ಕಮಾನಿನೊಂದಿಗೆ ಎದ್ದು ಕಂಡಿತು. ಶಿವಜ್ಜಿಯು ಮಂದಿಯಂತೆ ಮನೆ ಸಾರಿಸಿ, ಮನೆ ಜಗಲಿಗೆ ಸುಣ್ಣ, ಸುರುಮ, ಬಳಿದು ಸೊಸೆ ಕೊಟ್ಟು ಹೋಗಿದ್ದ ಐನೂರು ರೂಪಾಯಿಯಲ್ಲಿಯೇ ಹೋಳಿಗೆ ನೈವೇದ್ಯಕ್ಕೆ ಬೇಕಾದ ಪರಿಕರಗಳನ್ನು ಮಲ್ಲನ ಕೂಡ ತರಿಸಿ ಹಬ್ಬ ಮಾಡಲು ಶುರುಮಾಡಿತ್ತು. ಮಲ್ಲ ಹಳೆ ಪೆಟಾರಿಯಲ್ಲಿ ಮುಡುಪಾಗಿದ್ದ ಅಂಗಿ ತೊಟ್ಟುಕೊಂಡು, ಶಿವಜ್ಜಿಯು ಹೋಳಿಗೆ ಮಾಡಲಿಟ್ಟಿದ್ದ ಹೂರಣ ತಿಂದು, ದೋಸ್ತರೊಂದಿಗೆ ಉತ್ಸವದ ಕಡೆ ಹೊರಟ.

ಊರು ಮಂದಿ ಸಕಲ ವಾದ್ಯಗಳ ಸಮೇತ, ಕುಂಬಾರ ಮನಿಂದ ಮಣ್ಣಿನ ಮಡಿಕೆ, ಹೂಗಾರ ಮನಿಂದ ಸೂಸಗ, ಬಾರಕೇರಿ ಮನಿಂದ ಕಬ್ಬು, ಬಳಿಗಾರ ಮನಿಂದ ಹಸಿರು ಬಳೆ ತಂದು ಮೆರವಣಿಗೆ ಮೂಲಕ ಗಂಗಿಪೂಜೆಗೆಂದು ಬತ್ತಿ ಹೋದ ನದಿಕಡೆಗೆ ಸಾಗಿತ್ತು. ಒಂದಿಷ್ಟು ತೇವ ಇದ್ದ ಜಾಗದಲ್ಲಿ ಒರತಿ ತೋಡಿ ಗಂಗಿಪೂಜೆ ಮಾಡಿ ಪೂಜಾರಿಯಿಂದ ತನುಬಿಂದಿಗೆ ಹೊತ್ತುಕೊಂಡು ಮತ್ತೆ ಊರಕಡೆ ವಾಪಸ್ಸಾದರು. ತನುಬಿಂದಿಗೆಯ ಉತ್ಸವದಲ್ಲಿ ಯುವಕರ ಪಡೆ ಗಂಡುಗೊಡ್ಲಿ, ಆಯುಧ ಹಿಡಿದುಕೊಂಡು ಕೇಕೆ ಹೊಡಿಯುತ್ತ, ಕುಣಿಯುತ್ತ ದೇವಿಗುಡಿ ಕಡೆ ಹೆಜ್ಜೆ ಬೆಳಿಸಿದ್ದರು.

ಗಂಡುಜೋಗಮ್ಮರು ಹಡ್ಲಿಗೆ ಹಿಡಿದುಕೊಂಡು ಉಧೋ.. ಉಧೋ.. ಅನ್ನುತ್ತಾ, ಭಂಡಾರ ಉಗ್ಗುತ್ತ ಸಾಗಿದ್ದರು. ಇವರೆಲ್ಲರ ನಡುವೆ ಮುನಿಯಪ್ಪ ಬೆಳ್ಳಗೆ ಹೊಳೆಯುತ್ತ, ಜನರನ್ನು ಹೋಳುಮಾಡಿ ತನುಬಿಂದಿಗೆಯ ಉತ್ಸವವನ್ನು ಕಡಿಕಿಲೆ ಸಾಗಿಸುತಿದ್ದ. ಮಲ್ಲ ಅಷ್ಟು ಮಂದ್ಯಾಗ ತೂರಿ ತನುಬಿಂದಿಗೆ ಹೊತ್ತ ಪೂಜಾರಿಯನ್ನು ಕುತೂಹಲದಿಂದ ನೋಡಿದ. ಅಲ್ಲೇ ಮುನಿಯಪ್ಪ ಕಾಣಿಸಿದ. ತನ್ನವ್ವನಿಗೆ ಮುನಿಯಪ್ಪ ಬೈದದ್ದು, ಇವನಿಂದಾಗಿಯೇ ಊರಿನಲ್ಲಿ ಕೆಲಸವಿಲ್ಲದೇ ತಂದೆ-ತಾಯಿ ದುಡಿಯಲು ಬೆಂಗಳೂರಿಗೆ ಹೋಗುವಂತಾಗಿದ್ದು ನೆನಪಾಗಿ ಅವನೊಳಗೆ ಸಿಟ್ಟು ಉಕ್ಕಿ ಬಂತು.

ಮುನಿಯಪ್ಪನ ಹೊಲದಲ್ಲಿನ ಜ್ವಾಳವನ್ನು ಕುರಿಮರಿಗೆ ಮೇಯಿಸಲು ಇದೆ ಸರಿಯಾದ ಸಮಯವೆಂದು ಭಾವಿಸಿದ. ಆಗಲೇ ಇಳಿಸಂಜೆ. ಜೋಳದ ಹೊಲದಲ್ಲಿ ಕುರಿಮರಿ ಬಿಟ್ಟ. ಕುರಿಮರಿಗೆ ನಿಜಕ್ಕೂ ಹಬ್ಬವೆನಿಸಿತು. ತಾಸೊತ್ತಿನಲ್ಲೆ ಹೊಟ್ಟೆ ಬಿರಿಯುವಂತೆ ಮೇಯಿತು. ಮಲ್ಲ ಕುರಿಮರಿಗೆ ನೀರು ಕುಡಿಸಲು ಕೆರೆಗೆ ಬಿಟ್ಟ. ಅದು ನೀರು ಕುಡಿದನಂತರ ಹೊರ ಬಾರದೆ ಕಾಲು ಕೆಸರಲ್ಲಿ ಸಿಕ್ಕಿಕೊಂಡು ಬ್ಯಾ..ಬ್ಯಾ.. ಎಂದು ಒದರತೊಡಗಿತು. ಮಲ್ಲ ಕೆಸರಿನಿಂದ ಕುರಿಮರಿ ಹೊರ ತರಲು ನೆಗೆದ. ನೆಗೆದಿದ್ದರಿಂದಲೋ ಏನೋ.. ಹಾಕು ಮಣ್ಣಿನ ಹೊಂಡವಾದ ಕಾರಣ ಅವನ ಕಾಲು ಕೆಸರಲ್ಲಿ ಸಿಕ್ಕಿಕೊಂಡವು. ಕೂಗಿದರೂ ಯಾರೂ ಕೆರೆಯತ್ತ ಸುಳಿಯಲಿಲ್ಲ. ಆಗಲೇ ರಾತ್ರಿಯಾಗತೊಡಗಿತ್ತು. ಜನ ಉತ್ಸವದ ಅಮಲಿನಲ್ಲಿದ್ದರು. ಮಲ್ಲ ಕೊಸರಾಡಿ ಕೊಸರಾಡಿದಂತೆಲ್ಲಾ ಮತ್ತಷ್ಟು ಒಳ ಇಳಿಯತೊಡಗಿದ. ಮೇಲೇಳಲಾರದೆ ಒಳಗಿದ ಬಾಯಿಗೆ ನೀರೂ ಸಿಗದೆ..ರಾತ್ರಿ ದಟ್ಟವಾಗುತ್ತಿದ್ದಂತೆ ಮಲ್ಲನ ಉಸಿರಾಟವೂ ನಿಧಾನವಾಯಿತು. ಕೆಸರಲ್ಲಿ ಒಂದಾದ.

ಊರ ಜನ ‘ಸುಂಕವ್ವ ತನುಬಿಂದಿಗೆ ಉತ್ಸವ ಬಿಟ್ಟು ಬೆಂಗಳೂರಿಗೆ ಹೋದ್ಲು. ಅದಕ್ಕ ದ್ಯಾಮವ್ವ ಮಗನ್ನ ಬಲಿ ತಗೊಂಡು ಏನಂತ ತೋರಿಸಿದ್ಲು ನೋಡು..’ ಎಂದು ಗುಸುಗುಸು ಮಾತಾಡಿಕೊಂಡರು.

* * * *

ಸಮಾನಾಸಕ್ತ ಸಂಗಾತಿಗಳು ಪ್ರತಿ ವರ್ಷ ಆಯಾ ಕಾಲದ ಬಿಕ್ಕಟ್ಟಿನ ಸಂಗತಿಯನ್ನು ಎದುರುಗೊಳ್ಳುವ `ನಾವುನಮ್ಮಲ್ಲಿ’ ಬಳಗ ಆಗಸ್ಟ್ 17, 18 ರಂದು ಗಂಗಾವತಿಯಲ್ಲಿ `ದೇಶಭಕ್ತಿಯ ಆಯಾಮಗಳು’ ಎನ್ನುವ ಚರ್ಚೆ ಸಂವಾದವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷ ಹೊಸ ತಲೆಮಾರಿನ ಒಬ್ಬರ ಒಂದು ಕೃತಿಯನ್ನು ಆಯ್ಕೆ ಮಾಡಿ ಪ್ರಕಟಿಸುತ್ತಾರೆ. ಈ ವರ್ಷ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದ ನಾಗರಾಜ ಕೋರಿ ಅವರ `ತನುಬಿಂದಿಗೆ’ ಕಥಾಸಂಕಲನವನ್ನು ಆಯ್ಕೆ ಮಾಡಿ ಪ್ರಕಟಿಸುತ್ತಿದ್ದಾರೆ. ಕತೆಗಾರ ಅಮರೇಶ ನುಗಡೋಣಿ ನಾಗರಾಜ ಕೋರಿ ಕತೆಗಳ ಕುರಿತಂತೆ, `ಕಂಡ ಬದುಕನ್ನು ಅದರ ಒಡಲಿಗತ್ತಿದ ನುಡಿಯಿಂದಲೇ ಕತೆ ಮಾಡಿ ಹೇಳಿದ್ದಾನೆ. ಹೀಗಾಗಿ ಮುಗ್ದತೆ ಕಾಣುತ್ತದೆ, ಅದರಿಂದಾಗಿ ಮಳೆಬಿದ್ದ ತಿಂಗಳಲ್ಲಿ ಅಲ್ಲಲ್ಲಿ ನೆಲದ ಮೇಲೆ ಚಿಗುರುವ ಗಿಡ. ಬಳ್ಳಿಗಳಿಗೆ ಹೂ ಮೂಡುತ್ತವೆ. ಅವು ಭೂಮಿಗಿಂತ ಚೆಂದ. ಗಮನಿಸಿದರೆ, ಅವುಗಳಿಗೆ ಗೊತ್ತಾದರೆ ಮುದ ನೀಡುವಷ್ಟು ಸುಂದರವಾಗಿ ಮುಖ ತೋರಿಸುತ್ತವೆ, ಹೀಗಿವೆ ನಾಗರಾಜ ಕೋರಿಯ ಕತೆಗಳು’ ಎನ್ನುತ್ತಾರೆ. ಪತ್ರಿಕೆಯ ಓದುಗರಿಗಾಗಿ ಈ ಸಂಕಲನದ ಹೆಸರಿನ `ತನುಬಿಂದಿಗೆ’ ಕತೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...