Homeಸಾಹಿತ್ಯ-ಸಂಸ್ಕೃತಿಕಥೆ'ತನುಬಿಂದಿಗೆ' ನಾಗರಾಜ ಕೋರಿಯವರ ಕತೆ

‘ತನುಬಿಂದಿಗೆ’ ನಾಗರಾಜ ಕೋರಿಯವರ ಕತೆ

- Advertisement -
- Advertisement -

ಅದು ಇಳಿಸಂಜೆ. ಊರಿಗೆ ಮಳೆ ಬಾರದಕ್ಕಾಗಿ ಊರು ದೇವಿಗೆ ತನುಬಿಂದಿಗೆ ಇಡಲು ಜನ ಮಾತಾಡಿಕೊಳ್ಳಲು ಜಮೆಯಾಗಿತ್ತು. ಊರಲ್ಲಿನ ಒಂದು ಉಪ್ಪರಿಗೆ ಮೇಲೆ ನಿಂತು, ಪಶ್ಚಿಮ ದಿಕ್ಕಿನ ಕಡೆ ನೋಡಿದರೆ ಅಡವಿಯೆಂಬೋ ಅಡವಿ ಒಣಒಣ ಕಾಣತೊಡಗಿತ್ತು. ಮತ್ತಷ್ಟು ಕಣ್ಣಗಲಿಸಿ ಊರ ದಿಕ್ಕಿಗೆ ನೋಡಿದರೆ ಮುನಿಯಪ್ಪನ ಹೊಲವೆಲ್ಲಾ ಕೆರೆ ನೀರಿನಿಂದ ಹಸಿರಾಗಿತ್ತು. ಮುನಿಯಪ್ಪ ಊರಿಗೆ ಹಸಿರು ಶೆಲ್ಲೆಯ ದೊಡ್ಡ ಸಾಹುಕಾರ. ಸಾಕಷ್ಟು ಪಿತ್ರಾರ್ಜಿತ ಆಸ್ತಿ ಇತ್ತು.

ಈ ಊರಿಗೆ ಹತ್ತನ್ನೆರಡು ಸಲ ಬರಗಾಲ ಬಂದರೂ ಊರಿಗೆ ಅನ್ನ, ನೀರು, ಬಟ್ಟೆ ಕೊಟ್ಟು ಹಸಿವು ನೀಗಿಸುವ ಶಕ್ತಿ ಈತನಿಗಿತ್ತು. ಆದರೆ ಅಂತಹ ಔದಾರ್ಯದ ಗುಣ ಎಳ್ಳಷ್ಟೂ ಇರಲಿಲ್ಲ. ತಾನು ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾಗುವ ಉಪಾಯ ಹೂಡಿ ತಮ್ಮ ಹೊಲದಲ್ಲೇ ಊರು ಮಂದಿ ನೀರು ಕುಡಿಯಲೆಂದು ಕೆರೆ ಕಟ್ಟಿಸಿದ. ಆಗಿನಿಂದ ಆ ಕೆರೆ ಸಮತಟ್ಟಾಗಿ ತುಂಬಿ ತುಳುಕಿ ಆಣೆಕಟ್ಟಿನಂತೆ ವಿಶಾಲವಾಗಿ ಕಾಣುತಿತ್ತು. ಆಗಾಗ ಸರ್ಕಾರದವರು ಜನರು ನೀರು ಕುಡಿದಾದರೂ ಬದುಕಲೆಂದು ತುಂಗಭದ್ರಾ ಆಣೆಕಟ್ಟಿನಿಂದ ನೀರು ಬಿಡುತಿದ್ದರು.

ಮುನಿಯಪ್ಪ ತನ್ನ ನಾಲ್ಕೈದು ಚೇಲಾಗಳನ್ನು ಕಾವಲು ಬಿಟ್ಟು ಕೆರೆ ತುಂಬಿಸಿಕೊಳ್ಳುತಿದ್ದ. ಇದರಿಂದ ಉಳಿದವರ ಕೆರೆಕಟ್ಟೆಗಳು ನೀರಿಲ್ಲದೆ ಬಿಕೋ ಎನ್ನುತಿದ್ದವು. ಮುನಿಯಪ್ಪ ಊರಿಗೆ ಉದಾರವಾಗಿ ಕಾಣಲು, ಕೆರಿಗೆ ತಂತಿಬೇಲಿ ಹಾಕಿಸದೆ ಜನರಿಗೆ ಸರಾಗವಾಗಿ ನೀರು ಕುಡಿಯಲು ಹಾಗೆ ಬಿಟ್ಟಿದ್ದ. ತಾನು ಆ ಕೆರೆ ನೀರಿನಿಂದ ಕೊಬ್ಬು, ಶೇಂಗಾ, ಹತ್ತಿ ಸಮೃದ್ಧವಾಗಿ ಬೆಳೆಯುತಿದ್ದ. ತನ್ನ ಕೆರೆಯಲ್ಲಿ ಹೊಲೆಯರೂ ನೀರು ತುಂಬುತ್ತಿರುವುದು ಮುನಿಯಪ್ಪನಿಗೆ ಸಿಟ್ಟು ತರಿಸಿತ್ತು. ಅವರಿಗೆ ನೀರು ತುಂಬುವುದನ್ನು ನಿಷೇಧಿಸಿದ. ಅಕಸ್ಮಾತ್ತಾಗಿ ಕಣ್ಣು ತಪ್ಪಿಸಿ ನೀರು ತರಲು ಹೋದರೆ ಆಳುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕಳಿಸುತ್ತಿದ್ದ. ಹೊಲೆಯರು ಮುನಿಯಪ್ಪನಿಗೆ ಶಾಪ ಹಾಕಿ ಮಣ್ಣು ತೂರಿ ದೂರ ಸರಿದರು. ಆದರೆ ಕೂಲಿಗೆಂದು ಅವನ ಹೊಲಕ್ಕೆ ಹೋಗುವುದು ಅನಿವಾರ್ಯವಾಗಿತ್ತು.

ಇದನ್ನು ಓದಿ: ನೀರು (ಪುಟ್ಕತೆ)

ಮುನಿಯಪ್ಪನ ಹೊಲಕ್ಕೆ ಕೂಲಿ ಬರುತಿದ್ದ ಹೊಲೆಯರ ಸುಂಕವ್ವ ಕುರಿ ಮರಿಯನ್ನು ಜೊತೆಗೆ ಹೊಡೆದು ತರುತ್ತಿದ್ದಳು. ಒಂದಿನ ತುಂಬಿನಿಂತ ಹಚ್ಚನ ಜ್ವಾಳದ ಸಸಿಯನ್ನು ಕುರಿಮರಿ ಕಡಿದಿತ್ತು. ಮುನಿಯಪ್ಪ ಸಿಟ್ಟಿಗೇರಿ ‘ಏ..ನಿಮ್ಮೌನ್ ತುಡುಗು ರಂಡೆ ಕುರಿಮರಿ ಸರಿಗಿ ಕಟ್ಟಾಕರ ಬರಲ್ಲೇನು..’ ಎಂದು ಅಷ್ಟು ಮಂದ್ಯಾಗ ಬೈದಿದ್ದ. ಸುಂಕವ್ವ ಅವಮಾನಿತಳಾಗಿ ‘ಯಣ್ಣಾ ಬಾಯಿ ಬಿಗಿದಿಡಿದು ಮಾತಾಡು. ಹೆಣ್ಮಕ್ಕಳಂದ್ರೆ ಸೋವಿ ಸಿಕ್ಕಾರೇನು’ ಎಂದು ಒದರಾಡಿ ಕೂಲಿ ಕೆಲಸ ಅರ್ಧಕ್ಕೆ ನಿಲ್ಲಿಸಿ ಮನೆಗೆ ಬಂದಿದ್ದಳು. ಮಣ್ಣು ತಿಂದರೂ ಪರವಾಗಿಲ್ಲ, ಮುನಿಯಪ್ಪನ ಹೊಲಕ್ಕೆ ಹೋಗಬಾರದೆಂದು ನಿಶ್ಚಯಿಸಿದಳು.

ಪೊತನಾಳ ಸಂತಿಗೆ ಹೋಗಿದ್ದ ಗಂಡ ರಂಗಪ್ಪ ಬಂದ. ಸುಂಕವ್ವಳನ್ನು ನೋಡಿ ‘ಯಾಕ ಏನಾಯಿತು. ಕೂಲಿ ಕೆಲ್ಸಕ ಹೋಗಿದ್ದಲಾ…’ ಅಂತ ಗಾಬರಿಗೊಂಡು ಕೇಳಿದ. ಸುಂಕವ್ವ ನಡೆದ ಹಕೀಕತ್ತು ಹೇಳಿದಳು. ರಂಗಪ್ಪನಿಗೂ ಬೇಜಾರಾಯಿತು. ದಿಕ್ಕು ತೋಚದೆ ಚಿಂತಿಸಿದರು. ರಂಗಪ್ಪ ‘ಈ ಬರ ಶನಿವಾರ ಬೆಂಗಳೂರಿಗೆ ದುಡ್ಯಾಕ ಹೋಗಮು.. ಮಂದೆಲ್ಲಾ ನಾಳೆ ಬರೊ ಶನಿವಾರನ ಎಲ್ಲಾರು ತಯಾರಾಗ್ಯಾರ.. ಈ ಗೋಳಾರ ತಪ್‍ತೈತಿ..’ ಎಂದು ಹೇಳಿದ.

ಬೆಂಗಳೂರಿಗೆ ದುಡಿಯಾಕ ಹೋಗುವುದನ್ನು ನೆನಪಿಸಿಕೊಂಡು ಸುಂಕವ್ವಳಿಗೆ ದುಃಖ ಉಮ್ಮಳಿಸಿ ಬಂತು. ದುಡ್ಡಿದಿದ್ದರಲ್ಲೇ ಅಷ್ಟಿಷ್ಟು ದುಡ್ಡು ಉಳಿಸಿ ಚಿನ್ನೂರು ಸಂತ್ಯಾಗ ಕುರಿಮರಿ ತಂದು, ಎಂಬತ್ತು ಕೋಳಿನೂ ಬಿಟ್ಟು ಬೆಂಗಳೂರಿಗೆ ಹೇಗೆ ಹೋಗುವುದೆಂದು ಸುಂಕವ್ವ ಚಿಂತಿತಳಾದಳು. ದುಡಿಮೆ ಅನಿವಾರ್ಯವಾಗಿತ್ತು. ಮಲ್ಲ ಬೇರೆ ಸಣ್ಣವ. ಶಿವಜ್ಜಿ ಹತ್ತಿರ ಬಿಟ್ಟು ಹೋಗಲು ಮನಸ್ಸು ಕಸಿವಿಸಿಯಾಗುತ್ತಿತ್ತು. ಶಿವಜ್ಜಿ ಆಗಾಗ ಕದ್ದುಮುಚ್ಚಿ ಸೆರೆ ಕುಡಿಯುತ್ತಿರುವುದೂ ಈ ಕಸಿವಿಸಿಗೆ ಕಾರಣವಾಗಿತ್ತು.

ಇದನ್ನು ಓದಿ: ಎಮ್ಮೆ ಕಳ್ಳರು : ಪುಟ್ಕತೆ

ಸುಂಕವ್ವನ ಮನಸ್ಥಿತಿ ಅರಿತವಳಂತೆ ಶಿವಜ್ಜಿ ‘ಇವತ್ತಿನಿಂದ ನಾನು ಕುಡಿಯಲ್ಲ. ನನ್ನ ಮೊಮ್ಮಗನ ನಾನು ನೋಡಿಕಂತಿನಿ. ನೀವು ಗಂಡ ಹೆಣ್ತಿ ಆರಾಮಾಗಿ ದುಡುಕಂಡು ಬರ್ರಿ..’ ಎಂದು ಪ್ರಮಾಣ ಮಾಡಿದಳು. ಸುಂಕವ್ವ ಅತ್ತೆ ಮಾತು ನಂಬಿ ಬರೋ ಶನಿವಾರ ಬೆಂಗಳೂರಿಗೆ ಹೋಗಲು ನಿರ್ಧರಿಸಿದಳು. ಊರಲ್ಲಿ ತನುಬಿಂದಿಗೆ ಉತ್ಸವ ಇನ್ನೂ ನಾಲ್ಕೇ ದಿನ ಉಳಿದಿತ್ತು. ಮುನಿಯಪ್ಪ ತನ್ನ ಚೇಲಾಗಳೊಂದಿಗೆ ಮಂಗಳವಾರ ನಡೆಯುವ ತನುಬಿಂದಿಗೆ ಉತ್ಸವಕ್ಕೆ ರೊಕ್ಕದ ಪಟ್ಟಿ ಮಾಡಲು ಹೇಳಿದ್ದ. ಆಗ ಎಲ್ಲರ ಮನೆಯಂತೆ ರೊಕ್ಕದ ಪಟ್ಟಿಗೆ ಸುಂಕವ್ವನ ಮನೆಗೆ ಬಂದಿದ್ದರು. ಮನೆಯಲ್ಲಿ ನೋಡಿದರೆ ಐಪೈಸೆ ಇಲ್ಲದ ಸ್ಥಿತಿ.

‘ದೈವದಂತೆ ನಾವು..’ ಎಂದು ತವರು ಮನೆಯವರು ಮಗನಿಗೆಂದು ಮಾಡಿಸಿದ್ದ ‘ಕಿವಿ ಮುರುವು’ ಒತ್ತೆ ಇಟ್ಟು ನೂರಾ ಒಂದು ರೂಪಾಯಿ ಪಟ್ಟಿ ಬರಿಸಿದಳು. ಇನ್ನುಳಿದ ದುಡ್ಡಿನಿಂದ ಬೆಂಗಳೂರಿಗೆ ಹೋಗಲು ಅಕ್ಕಿ, ಜ್ವಾಳದ ಹಿಟ್ಟು, ಹುಂಚೆಕಾರ ಮುಂತಾದವುಗಳನ್ನು ಸಿದ್ಧತೆ ಮಾಡಿಕೊಂಡಳು. ಕೆಲವರು ‘ತನುಬಿಂದಿಗೆ ಉತ್ಸವ ಮುಗಿಸಿಕೊಂಡು ಹೋಗ್ರಿ’ ಅಂತ ಸೂಕ್ಷ್ಮಿಲೆ ಒತ್ತಿ ಹೇಳಿದರು. ಆದರೆ ಸುಂಕವ್ವನ ಮನಸ್ಸು ತನುಬಿಂದಿಗೆ ಉತ್ಸವಕ್ಕಿಂತ ಹೊಟ್ಟೆ, ಬಟ್ಟೆಗಾಗಿ ದುಡಿದು, ಮಗನನ್ನು ಓದಿಸಬೇಕೆಂಬ ಛಲ ಹೂಡಿದಂತಿತ್ತು. ಮಗ ಮಲ್ಲ ಸುಂಕವ್ವನ ಸೆರಗು ಹಿಡಿದು ತಾನೂ ಬರುತ್ತೇನೆಂದು ಅಳತೊಡಗಿದ. ಶಿವಜ್ಜಿ ತಮಣಿ ಮಾಡಿ ಹತ್ತು ರೂಪಾಯಿ ಕೈಲಿಟ್ಟಾಗ ರಂಪಾಟ ಕಡಿಮೆಯಾಗಿತ್ತು. ಮಗನನ್ನು ರಮಿಸಿ ಸುಂಕವ್ವ ರಂಗಪ್ಪ ಗಂಟು ಕಟ್ಟಿದ ಚೀಲಗಳನ್ನೆಲ್ಲಾ ಹೊತ್ತುಕೊಂಡು ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದ. ಗಾಡಿ ಕಡೆ ಹೆಜ್ಜೆ ಬೆಳೆಸಿದರು.

ಮರುದಿನ ತನುಬಿಂದಿಗೆಯ ಉತ್ಸವಕ್ಕೆ ಮಂದಿ ಮನಿಗೆ ಸುಣ್ಣಬಣ್ಣ ಬಳಿದು ಅಲಂಕೃತಗೊಳಿಸಿದ್ದರು. ದೇವಿಗುಡಿ ಹೊಸ ಕಮಾನಿನೊಂದಿಗೆ ಎದ್ದು ಕಂಡಿತು. ಶಿವಜ್ಜಿಯು ಮಂದಿಯಂತೆ ಮನೆ ಸಾರಿಸಿ, ಮನೆ ಜಗಲಿಗೆ ಸುಣ್ಣ, ಸುರುಮ, ಬಳಿದು ಸೊಸೆ ಕೊಟ್ಟು ಹೋಗಿದ್ದ ಐನೂರು ರೂಪಾಯಿಯಲ್ಲಿಯೇ ಹೋಳಿಗೆ ನೈವೇದ್ಯಕ್ಕೆ ಬೇಕಾದ ಪರಿಕರಗಳನ್ನು ಮಲ್ಲನ ಕೂಡ ತರಿಸಿ ಹಬ್ಬ ಮಾಡಲು ಶುರುಮಾಡಿತ್ತು. ಮಲ್ಲ ಹಳೆ ಪೆಟಾರಿಯಲ್ಲಿ ಮುಡುಪಾಗಿದ್ದ ಅಂಗಿ ತೊಟ್ಟುಕೊಂಡು, ಶಿವಜ್ಜಿಯು ಹೋಳಿಗೆ ಮಾಡಲಿಟ್ಟಿದ್ದ ಹೂರಣ ತಿಂದು, ದೋಸ್ತರೊಂದಿಗೆ ಉತ್ಸವದ ಕಡೆ ಹೊರಟ.

ಊರು ಮಂದಿ ಸಕಲ ವಾದ್ಯಗಳ ಸಮೇತ, ಕುಂಬಾರ ಮನಿಂದ ಮಣ್ಣಿನ ಮಡಿಕೆ, ಹೂಗಾರ ಮನಿಂದ ಸೂಸಗ, ಬಾರಕೇರಿ ಮನಿಂದ ಕಬ್ಬು, ಬಳಿಗಾರ ಮನಿಂದ ಹಸಿರು ಬಳೆ ತಂದು ಮೆರವಣಿಗೆ ಮೂಲಕ ಗಂಗಿಪೂಜೆಗೆಂದು ಬತ್ತಿ ಹೋದ ನದಿಕಡೆಗೆ ಸಾಗಿತ್ತು. ಒಂದಿಷ್ಟು ತೇವ ಇದ್ದ ಜಾಗದಲ್ಲಿ ಒರತಿ ತೋಡಿ ಗಂಗಿಪೂಜೆ ಮಾಡಿ ಪೂಜಾರಿಯಿಂದ ತನುಬಿಂದಿಗೆ ಹೊತ್ತುಕೊಂಡು ಮತ್ತೆ ಊರಕಡೆ ವಾಪಸ್ಸಾದರು. ತನುಬಿಂದಿಗೆಯ ಉತ್ಸವದಲ್ಲಿ ಯುವಕರ ಪಡೆ ಗಂಡುಗೊಡ್ಲಿ, ಆಯುಧ ಹಿಡಿದುಕೊಂಡು ಕೇಕೆ ಹೊಡಿಯುತ್ತ, ಕುಣಿಯುತ್ತ ದೇವಿಗುಡಿ ಕಡೆ ಹೆಜ್ಜೆ ಬೆಳಿಸಿದ್ದರು.

ಗಂಡುಜೋಗಮ್ಮರು ಹಡ್ಲಿಗೆ ಹಿಡಿದುಕೊಂಡು ಉಧೋ.. ಉಧೋ.. ಅನ್ನುತ್ತಾ, ಭಂಡಾರ ಉಗ್ಗುತ್ತ ಸಾಗಿದ್ದರು. ಇವರೆಲ್ಲರ ನಡುವೆ ಮುನಿಯಪ್ಪ ಬೆಳ್ಳಗೆ ಹೊಳೆಯುತ್ತ, ಜನರನ್ನು ಹೋಳುಮಾಡಿ ತನುಬಿಂದಿಗೆಯ ಉತ್ಸವವನ್ನು ಕಡಿಕಿಲೆ ಸಾಗಿಸುತಿದ್ದ. ಮಲ್ಲ ಅಷ್ಟು ಮಂದ್ಯಾಗ ತೂರಿ ತನುಬಿಂದಿಗೆ ಹೊತ್ತ ಪೂಜಾರಿಯನ್ನು ಕುತೂಹಲದಿಂದ ನೋಡಿದ. ಅಲ್ಲೇ ಮುನಿಯಪ್ಪ ಕಾಣಿಸಿದ. ತನ್ನವ್ವನಿಗೆ ಮುನಿಯಪ್ಪ ಬೈದದ್ದು, ಇವನಿಂದಾಗಿಯೇ ಊರಿನಲ್ಲಿ ಕೆಲಸವಿಲ್ಲದೇ ತಂದೆ-ತಾಯಿ ದುಡಿಯಲು ಬೆಂಗಳೂರಿಗೆ ಹೋಗುವಂತಾಗಿದ್ದು ನೆನಪಾಗಿ ಅವನೊಳಗೆ ಸಿಟ್ಟು ಉಕ್ಕಿ ಬಂತು.

ಮುನಿಯಪ್ಪನ ಹೊಲದಲ್ಲಿನ ಜ್ವಾಳವನ್ನು ಕುರಿಮರಿಗೆ ಮೇಯಿಸಲು ಇದೆ ಸರಿಯಾದ ಸಮಯವೆಂದು ಭಾವಿಸಿದ. ಆಗಲೇ ಇಳಿಸಂಜೆ. ಜೋಳದ ಹೊಲದಲ್ಲಿ ಕುರಿಮರಿ ಬಿಟ್ಟ. ಕುರಿಮರಿಗೆ ನಿಜಕ್ಕೂ ಹಬ್ಬವೆನಿಸಿತು. ತಾಸೊತ್ತಿನಲ್ಲೆ ಹೊಟ್ಟೆ ಬಿರಿಯುವಂತೆ ಮೇಯಿತು. ಮಲ್ಲ ಕುರಿಮರಿಗೆ ನೀರು ಕುಡಿಸಲು ಕೆರೆಗೆ ಬಿಟ್ಟ. ಅದು ನೀರು ಕುಡಿದನಂತರ ಹೊರ ಬಾರದೆ ಕಾಲು ಕೆಸರಲ್ಲಿ ಸಿಕ್ಕಿಕೊಂಡು ಬ್ಯಾ..ಬ್ಯಾ.. ಎಂದು ಒದರತೊಡಗಿತು. ಮಲ್ಲ ಕೆಸರಿನಿಂದ ಕುರಿಮರಿ ಹೊರ ತರಲು ನೆಗೆದ. ನೆಗೆದಿದ್ದರಿಂದಲೋ ಏನೋ.. ಹಾಕು ಮಣ್ಣಿನ ಹೊಂಡವಾದ ಕಾರಣ ಅವನ ಕಾಲು ಕೆಸರಲ್ಲಿ ಸಿಕ್ಕಿಕೊಂಡವು. ಕೂಗಿದರೂ ಯಾರೂ ಕೆರೆಯತ್ತ ಸುಳಿಯಲಿಲ್ಲ. ಆಗಲೇ ರಾತ್ರಿಯಾಗತೊಡಗಿತ್ತು. ಜನ ಉತ್ಸವದ ಅಮಲಿನಲ್ಲಿದ್ದರು. ಮಲ್ಲ ಕೊಸರಾಡಿ ಕೊಸರಾಡಿದಂತೆಲ್ಲಾ ಮತ್ತಷ್ಟು ಒಳ ಇಳಿಯತೊಡಗಿದ. ಮೇಲೇಳಲಾರದೆ ಒಳಗಿದ ಬಾಯಿಗೆ ನೀರೂ ಸಿಗದೆ..ರಾತ್ರಿ ದಟ್ಟವಾಗುತ್ತಿದ್ದಂತೆ ಮಲ್ಲನ ಉಸಿರಾಟವೂ ನಿಧಾನವಾಯಿತು. ಕೆಸರಲ್ಲಿ ಒಂದಾದ.

ಊರ ಜನ ‘ಸುಂಕವ್ವ ತನುಬಿಂದಿಗೆ ಉತ್ಸವ ಬಿಟ್ಟು ಬೆಂಗಳೂರಿಗೆ ಹೋದ್ಲು. ಅದಕ್ಕ ದ್ಯಾಮವ್ವ ಮಗನ್ನ ಬಲಿ ತಗೊಂಡು ಏನಂತ ತೋರಿಸಿದ್ಲು ನೋಡು..’ ಎಂದು ಗುಸುಗುಸು ಮಾತಾಡಿಕೊಂಡರು.

* * * *

ಸಮಾನಾಸಕ್ತ ಸಂಗಾತಿಗಳು ಪ್ರತಿ ವರ್ಷ ಆಯಾ ಕಾಲದ ಬಿಕ್ಕಟ್ಟಿನ ಸಂಗತಿಯನ್ನು ಎದುರುಗೊಳ್ಳುವ `ನಾವುನಮ್ಮಲ್ಲಿ’ ಬಳಗ ಆಗಸ್ಟ್ 17, 18 ರಂದು ಗಂಗಾವತಿಯಲ್ಲಿ `ದೇಶಭಕ್ತಿಯ ಆಯಾಮಗಳು’ ಎನ್ನುವ ಚರ್ಚೆ ಸಂವಾದವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷ ಹೊಸ ತಲೆಮಾರಿನ ಒಬ್ಬರ ಒಂದು ಕೃತಿಯನ್ನು ಆಯ್ಕೆ ಮಾಡಿ ಪ್ರಕಟಿಸುತ್ತಾರೆ. ಈ ವರ್ಷ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದ ನಾಗರಾಜ ಕೋರಿ ಅವರ `ತನುಬಿಂದಿಗೆ’ ಕಥಾಸಂಕಲನವನ್ನು ಆಯ್ಕೆ ಮಾಡಿ ಪ್ರಕಟಿಸುತ್ತಿದ್ದಾರೆ. ಕತೆಗಾರ ಅಮರೇಶ ನುಗಡೋಣಿ ನಾಗರಾಜ ಕೋರಿ ಕತೆಗಳ ಕುರಿತಂತೆ, `ಕಂಡ ಬದುಕನ್ನು ಅದರ ಒಡಲಿಗತ್ತಿದ ನುಡಿಯಿಂದಲೇ ಕತೆ ಮಾಡಿ ಹೇಳಿದ್ದಾನೆ. ಹೀಗಾಗಿ ಮುಗ್ದತೆ ಕಾಣುತ್ತದೆ, ಅದರಿಂದಾಗಿ ಮಳೆಬಿದ್ದ ತಿಂಗಳಲ್ಲಿ ಅಲ್ಲಲ್ಲಿ ನೆಲದ ಮೇಲೆ ಚಿಗುರುವ ಗಿಡ. ಬಳ್ಳಿಗಳಿಗೆ ಹೂ ಮೂಡುತ್ತವೆ. ಅವು ಭೂಮಿಗಿಂತ ಚೆಂದ. ಗಮನಿಸಿದರೆ, ಅವುಗಳಿಗೆ ಗೊತ್ತಾದರೆ ಮುದ ನೀಡುವಷ್ಟು ಸುಂದರವಾಗಿ ಮುಖ ತೋರಿಸುತ್ತವೆ, ಹೀಗಿವೆ ನಾಗರಾಜ ಕೋರಿಯ ಕತೆಗಳು’ ಎನ್ನುತ್ತಾರೆ. ಪತ್ರಿಕೆಯ ಓದುಗರಿಗಾಗಿ ಈ ಸಂಕಲನದ ಹೆಸರಿನ `ತನುಬಿಂದಿಗೆ’ ಕತೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...