Homeಕರ್ನಾಟಕಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್‌ಐ ಮುಗಿಸಲು ಬಿಜೆಪಿ ಶತಪ್ರಯತ್ನ

ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್‌ಐ ಮುಗಿಸಲು ಬಿಜೆಪಿ ಶತಪ್ರಯತ್ನ

- Advertisement -
- Advertisement -

ಫರಾನ್ ಖಾನ್ ಎಂಬ 24ರ ಹರೆಯದ ಯುವಕನೋರ್ವ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚಾಕುವಿನಿಂದ ಚುಚ್ಚುವ ಮೂಲಕ ಕೊಲ್ಲುವ ಯತ್ನ ಮಾಡಿದ್ದಾನೆ. ನವೆಂಬರ್ 17ರ ಭಾನುವಾರ ತಡರಾತ್ರಿ ಮೈಸೂರಿನಲ್ಲಿ ಘಟನೆ ನಡೆದಿದ್ದು ಗಂಭೀರ ಗಾಯಗಳಾದ ತನ್ವೀರ್ ಸೇಠ್ ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಘಟನೆ ನಡೆದ ಮಾರನೆಯ ದಿನದಿಂದಲೇ ಎಂದಿನಂತೆ ಆ ಯುವಕ ಕೊಲೆ ಮಾಡಲು ಮುಂದಾಗಿದ್ದು ಏಕೆ ಎನ್ನುವುದರ ಕುರಿತು ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ಕೇಳಿಬರುತ್ತಿವೆ. ಪೊಲೀಸ್ ತನಿಖೆ ನಡೆಯುತ್ತಿದ್ದು ಹತ್ತಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಏನನ್ನೂ ಇನ್ನು ಖಚಿತಪಡಿಸಿಲ್ಲ. ಆದರೆ ರಾಜಕೀಯ ಮುಖಂಡರು ಮಾತ್ರ ತಮ್ಮ ಊಹೆಗಳನ್ನೇ ಸತ್ಯವೆನ್ನುವ ಹಾಗೆ ಹರಿಯಬಿಟ್ಟಿದ್ದಾರೆ.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಲೆಯತ್ನವನ್ನು ಸೀದಾ ಪಿಎಫ್‍ಐ ಸಂಘಟನೆಯ ತಲೆಗೆ ಕಟ್ಟಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‍ಐ ಮೇಲಿದ್ದ ಎಲ್ಲಾ ಕೇಸುಗಳನ್ನು ವಾಪಸ್ ಪಡೆದರು. ಮೈಸೂರು, ಶಿವಮೊಗ್ಗ ಗಲಭೆಯಾಯಿತು. ಒಂದು ಕೊಲೆಯಾಯಿತು. ಈಗ ತನ್ವೀರ್ ಸೇಠ್ ಮಾರಣಾಂತಿಕ ಹಲ್ಲೆಯಾಗಿದೆ. ಕೊಲೆ ಗೂಂಡಾಗಿರಿ ಮಾಡಿದ ಪಿಎಫ್‍ಐಗೆ ರಕ್ಷಣೆ ಕೊಟ್ಟು ಅವರ ಮೇಲಿದ್ದ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುವ ಮೂಲಕ ನೀವು ಅವರಿಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದೀರಿ, ಇದಕ್ಕೆ ಸ್ಪಷ್ಟೀಕರಣ ನೀಡಿ ಎಂದು ಏಕಕಾಲಕ್ಕೆ ಪಿಎಫ್‍ಐ ಅನ್ನು, ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಗುಂಡು ಹೊಡೆದಿದ್ದಾರೆ.

ಅದನ್ನೇ ಕಾದು ಕುಳಿತಿದ್ದ ಟಿವಿವಾಹಿನಿಗಳು ಪಿಎಫ್‍ಐ ಬ್ಯಾನ್ ಮಾಡಬೇಕು ಎಂಬ ಬೊಂಬಡ ಬಜಾಯಿಸಲು ಶುರುಮಾಡಿದ್ದಾರೆ. ಪಿಎಫ್‍ಐ ಮೇಲೆ ಸಾಕಷ್ಟು ದೂರುಗಳಿವೆ, ಚಾರ್ಜ್‍ಶೀಟ್ ಇವೆ ಎಂದೆಲ್ಲಾ ಮಾತಾಡಿ ಅದಕ್ಕೂ ಐಸಿಸ್‍ಗೂ ಲಿಂಕ್ ಮಾಡಲು ಹೊರಟಿದ್ದಾರೆ. ಅಯೋಧ್ಯೆ ತೀರ್ಪನ್ನು ತನ್ವೀರ್ ಸೇಠ್ ಸ್ವಾಗತಿಸಿದ್ದರು. ಅದಕ್ಕಾಗಿ ಪಿಎಫ್‍ಐ ಕಾರ್ಯಕರ್ತ ಅವರ ಮೇಲೆ ಕೊಲೆಯತ್ನ ನಡೆಸಿದ್ದಾನೆ ಎಂದೂ ಹೇಳಿಬಿಟ್ಟರು.

ವಾಸ್ತವ ಸಂಗತಿಗಳನ್ನು ಅವಲೋಕಿಸಿದರೆ ಈ ಕೊಲೆಗೆ ಪಿಎಫ್‍ಐ ಕಾರಣವಿದ್ದಂತೆ ಕಾಣುತ್ತಿಲ್ಲ. ಏಕೆಂದರೆ ಯಾವುದೇ ಕೊಲೆ ಮಾಡಬೇಕಾದರೆ ಅದರಿಂದ ಅವರಿಗೆ ಲಾಭವಾಗಬೇಕು. ಹಾಗಾದಾಗ ಅಂತಹ ಯತ್ನ ಮಾಡುತ್ತಾರೆ ಎನ್ನಬಹುದು. ಸದ್ಯ ತನ್ವೀರ್ ಸೇಠ್‍ರವರನ್ನು ಪಿಎಫ್‍ಐನ ಚುನಾವಣಾ ವೇದಿಕೆಯಾದ ಎಸ್‍ಡಿಪಿಐ ರಾಜಕೀಯವಾಗಿ ಎದುರಿಸಲು ಹೊರಟಿದೆ. ಇಂತಹ ಸಂದರ್ಭದಲ್ಲಿ ಅವರ ಕೊಲೆ ಅಥವಾ ಅವರ ಮೇಲಿನ ಹಲ್ಲೆಯಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಿರುವಾಗ ಅವರೇಕೆ ಕೊಲ್ಲಲು ಹೋಗುತ್ತಾರೆ ಎಂಬುದು ನರಸಿಂಹರಾಜ ಕ್ಷೇತ್ರದ ಜನರ ಮಾತು.

ಇನ್ನು ಕೊಲೆಯತ್ನದ ಆರೋಪಿ ಫರಾನ್ ಖಾನ್ ತನ್ವೀರ್ ಸೇಠ್‍ಗೂ ಆಪ್ತ, ಎಸ್‍ಡಿಪಿಐಗೂ ಆಪ್ತ. ಜೊತೆಗೆ ಜೆಡಿಎಸ್‍ಗೂ ಆಪ್ತನೆಂದರೆ ಇವರಲ್ಲಿ ಯಾರು ಕಾಸು ಕೊಟ್ಟರೂ ಸಹ ಅವರ ಕಾರ್ಯಕ್ರಮಗಳಿಗೆ ಜನ ಕರೆದುಕೊಂಡು ಹೋಗುವುದು ಅವನ ಕಾಯಕ. ಆತ ಪಿಎಫ್‍ಐ ಕಾರ್ಯಕ್ರಮ ದಲ್ಲಿದ್ದ ಫೋಟೋಗಳು ಹೊರ ಬೀಳುತ್ತಿದ್ದಂತೆ, ಪಿಎಫ್‍ಐ ಸ್ವತಃ ತನ್ವೀರ್ ಸೇಠ್‍ರೊಂದಿಗೇ ಆತನಿರುವ ಫೋಟೋಗಳನ್ನು ಹೊರಬಿಟ್ಟಿತು. ಹೀಗಿರುವಾಗ ತನಗೊಂದು ಉದ್ಯೋಗ ಕೊಡಿ ಎಂದು ಪದೇ ಪದೇ ಗೆದ್ದ ತನ್ವೀರ್ ಸೇಠ್ ಬಳಿ ದುಂಬಾಲು ಬಿದ್ದಿದ್ದ ಎನ್ನಲಾಗುತ್ತಿದೆ. ಅವರು ಸೂಕ್ತ ಉದ್ಯೋಗ ಕೊಡಿಸಿಲ್ಲ. ಅದೇ ಸಮಯಕ್ಕೆ ತಾನು ಸೆಲೆಬ್ರಿಟಿಗಳನ್ನು ಕೊಲ್ಲುವ ಮೂಲಕ ಫೇಮಸ್ ಆಗಬೇಕು ಎಂದು ತನ್ನ ಗೆಳೆಯರೊಂದಿಗೆ ಆಗಾಗ ಹೇಳಿಕೊಳ್ಳುತ್ತಿದ್ದ ಎಂದೂ ವರದಿಗಳು ಬಂದಿವೆ. ಹಾಗೆ ನೋಡಿದರೆ ಈತ ಹತಾಶ ವ್ಯಕ್ತಿಯಂತೆ ಕಂಡುಬರುತ್ತಾನೆ. ಇಂತಹ ಸ್ಥಿಮಿತತೆ ಇಲ್ಲದವ ಮಾಡಿದ ಆ ಒಂದು ಯತ್ನ ಈಗ ನೂರಾರು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಸ್ವತಃ ಆತನು ಭಾವಿಸಿರಲಿಲ್ಲವೇನೋ?

ಪಿಎಫ್‍ಐ ಬ್ಯಾನ್ ಸಾಧ್ಯವೇ?

ಪಿಎಫ್‍ಐ, ಎಸ್‍ಡಿಪಿಐ ಮೇಲೆ ಕೇಸುಗಳಿಲ್ಲವೇನೆಂದಲ್ಲ. ಅವರು ಹಿಂಸೆಗಿಳಿದಿದ್ದಾರೆ ಎಂದು ಮಂಗಳೂರು, ಕೇರಳದಲ್ಲಿ ಪದೇ ಪದೇ ಆರೋಪಗಳು ಬರುವುದು ನಿಜ. ಹಾಗೆಂದ ಮಾತ್ರಕ್ಕೆ ಸಂಘಟನೆಯೊಂದನ್ನು ಬ್ಯಾನ್ ಮಾಡಲು ಸಾಧ್ಯವೇ? ಸಹಜವಾಗಿ ಚರ್ಚೆ ಆರೆಸ್ಸೆಸ್‍ನತ್ತ ಹೊರಳುತ್ತದೆ. ಆರ್‍ಎಸ್‍ಎಸ್ ಮೇಲೆ ಎಷ್ಟು ಕೇಸುಗಳಿಲ್ಲ? ಅದು ಕೂಡ ಮೂರು ಬಾರಿ ಬ್ಯಾನ್ ಆಗಿದೆ ಮತ್ತು ಕಡೆಯ ಬಾರಿ ಕೋರ್ಟ್‍ನಲ್ಲಿ ಅದನ್ನು ಹಿಂಪಡೆಯಲಾಯಿತು. ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ ಅದು ಇನ್ನೊಂದು ಹೆಸರಿನಲ್ಲಿ ತಲೆಎತ್ತುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು?

ಮೊನ್ನೆ ನಡೆದ ಮಂಗಳೂರು ಸ್ಥಳೀಯ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿದ್ದಲ್ಲದೇ ಹಲವೆಡೆ ಪೈಪೋಟಿ ನೀಡಿದೆ. ತನ್ವೀರ್ ಸೇಠ್‍ರವರು ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರದಲ್ಲಿಯೂ ಸಹ ಅದು ಕೆಲವೊಮ್ಮೆ ಎರಡನೇ ಸ್ಥಾನಕ್ಕೆ ಬಂದು ನಿಂತಿದ್ದಿದೆ. ಇನ್ನು ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆಯೂ ಮುಸ್ಲಿಂ ಮತಗಳ ವಿಚಾರದಲ್ಲಿ ಪೈಪೋಟಿ ಇದೆ. ಕಾಂಗ್ರೆಸ್ ಪಾಲಿಗಿದ್ದ ಮುಸ್ಲಿಂ ಮತಗಳಲ್ಲಿ ಒಂದಷ್ಟು ಪಾಲನ್ನು ಎಸ್‍ಡಿಪಿಐ ಪಡೆದುಕೊಳ್ಳುವ ಮೂಲಕ ಬಿಜೆಪಿ ಗೆಲುವಿಗೆ ಎಸ್‍ಡಿಪಿಐ ಕಾರಣವಾಗಿವೆ ಎಂದು ಕಾಂಗ್ರೆಸ್ ಆರೋಪಿಸಿದ್ದಿದೆ. ಸಿಪಿಎಂ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಎಸ್‍ಡಿಪಿಐ ಅನ್ನು ವಿರೋಧಿಸುತ್ತವೆ.

ಅವೆಲ್ಲಾ ಚರ್ಚೆಗಳು ಈ ಸಂದರ್ಭದಲ್ಲಿ ಮತ್ತೊಮ್ಮೆ ಮೇಲೆದ್ದಿವೆಯಾದರೂ, ಕೊಲೆಗೆ ಪಿಎಫ್‍ಐ ಕಾರಣವಿರಬಹುದೆಂಬ ತರ್ಕವನ್ನು ಬಹುತೇಕರು ಒಪ್ಪುತ್ತಿಲ್ಲ. ನಿಷ್ಪಕ್ಷಪಾತ ತನಿಖೆಯಷ್ಟೇ ಸತ್ಯವನ್ನು ಹೊರತರಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....