Homeಕರ್ನಾಟಕಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್‌ಐ ಮುಗಿಸಲು ಬಿಜೆಪಿ ಶತಪ್ರಯತ್ನ

ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್‌ಐ ಮುಗಿಸಲು ಬಿಜೆಪಿ ಶತಪ್ರಯತ್ನ

- Advertisement -
- Advertisement -

ಫರಾನ್ ಖಾನ್ ಎಂಬ 24ರ ಹರೆಯದ ಯುವಕನೋರ್ವ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚಾಕುವಿನಿಂದ ಚುಚ್ಚುವ ಮೂಲಕ ಕೊಲ್ಲುವ ಯತ್ನ ಮಾಡಿದ್ದಾನೆ. ನವೆಂಬರ್ 17ರ ಭಾನುವಾರ ತಡರಾತ್ರಿ ಮೈಸೂರಿನಲ್ಲಿ ಘಟನೆ ನಡೆದಿದ್ದು ಗಂಭೀರ ಗಾಯಗಳಾದ ತನ್ವೀರ್ ಸೇಠ್ ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಘಟನೆ ನಡೆದ ಮಾರನೆಯ ದಿನದಿಂದಲೇ ಎಂದಿನಂತೆ ಆ ಯುವಕ ಕೊಲೆ ಮಾಡಲು ಮುಂದಾಗಿದ್ದು ಏಕೆ ಎನ್ನುವುದರ ಕುರಿತು ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ಕೇಳಿಬರುತ್ತಿವೆ. ಪೊಲೀಸ್ ತನಿಖೆ ನಡೆಯುತ್ತಿದ್ದು ಹತ್ತಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಏನನ್ನೂ ಇನ್ನು ಖಚಿತಪಡಿಸಿಲ್ಲ. ಆದರೆ ರಾಜಕೀಯ ಮುಖಂಡರು ಮಾತ್ರ ತಮ್ಮ ಊಹೆಗಳನ್ನೇ ಸತ್ಯವೆನ್ನುವ ಹಾಗೆ ಹರಿಯಬಿಟ್ಟಿದ್ದಾರೆ.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಲೆಯತ್ನವನ್ನು ಸೀದಾ ಪಿಎಫ್‍ಐ ಸಂಘಟನೆಯ ತಲೆಗೆ ಕಟ್ಟಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‍ಐ ಮೇಲಿದ್ದ ಎಲ್ಲಾ ಕೇಸುಗಳನ್ನು ವಾಪಸ್ ಪಡೆದರು. ಮೈಸೂರು, ಶಿವಮೊಗ್ಗ ಗಲಭೆಯಾಯಿತು. ಒಂದು ಕೊಲೆಯಾಯಿತು. ಈಗ ತನ್ವೀರ್ ಸೇಠ್ ಮಾರಣಾಂತಿಕ ಹಲ್ಲೆಯಾಗಿದೆ. ಕೊಲೆ ಗೂಂಡಾಗಿರಿ ಮಾಡಿದ ಪಿಎಫ್‍ಐಗೆ ರಕ್ಷಣೆ ಕೊಟ್ಟು ಅವರ ಮೇಲಿದ್ದ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುವ ಮೂಲಕ ನೀವು ಅವರಿಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದೀರಿ, ಇದಕ್ಕೆ ಸ್ಪಷ್ಟೀಕರಣ ನೀಡಿ ಎಂದು ಏಕಕಾಲಕ್ಕೆ ಪಿಎಫ್‍ಐ ಅನ್ನು, ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಗುಂಡು ಹೊಡೆದಿದ್ದಾರೆ.

ಅದನ್ನೇ ಕಾದು ಕುಳಿತಿದ್ದ ಟಿವಿವಾಹಿನಿಗಳು ಪಿಎಫ್‍ಐ ಬ್ಯಾನ್ ಮಾಡಬೇಕು ಎಂಬ ಬೊಂಬಡ ಬಜಾಯಿಸಲು ಶುರುಮಾಡಿದ್ದಾರೆ. ಪಿಎಫ್‍ಐ ಮೇಲೆ ಸಾಕಷ್ಟು ದೂರುಗಳಿವೆ, ಚಾರ್ಜ್‍ಶೀಟ್ ಇವೆ ಎಂದೆಲ್ಲಾ ಮಾತಾಡಿ ಅದಕ್ಕೂ ಐಸಿಸ್‍ಗೂ ಲಿಂಕ್ ಮಾಡಲು ಹೊರಟಿದ್ದಾರೆ. ಅಯೋಧ್ಯೆ ತೀರ್ಪನ್ನು ತನ್ವೀರ್ ಸೇಠ್ ಸ್ವಾಗತಿಸಿದ್ದರು. ಅದಕ್ಕಾಗಿ ಪಿಎಫ್‍ಐ ಕಾರ್ಯಕರ್ತ ಅವರ ಮೇಲೆ ಕೊಲೆಯತ್ನ ನಡೆಸಿದ್ದಾನೆ ಎಂದೂ ಹೇಳಿಬಿಟ್ಟರು.

ವಾಸ್ತವ ಸಂಗತಿಗಳನ್ನು ಅವಲೋಕಿಸಿದರೆ ಈ ಕೊಲೆಗೆ ಪಿಎಫ್‍ಐ ಕಾರಣವಿದ್ದಂತೆ ಕಾಣುತ್ತಿಲ್ಲ. ಏಕೆಂದರೆ ಯಾವುದೇ ಕೊಲೆ ಮಾಡಬೇಕಾದರೆ ಅದರಿಂದ ಅವರಿಗೆ ಲಾಭವಾಗಬೇಕು. ಹಾಗಾದಾಗ ಅಂತಹ ಯತ್ನ ಮಾಡುತ್ತಾರೆ ಎನ್ನಬಹುದು. ಸದ್ಯ ತನ್ವೀರ್ ಸೇಠ್‍ರವರನ್ನು ಪಿಎಫ್‍ಐನ ಚುನಾವಣಾ ವೇದಿಕೆಯಾದ ಎಸ್‍ಡಿಪಿಐ ರಾಜಕೀಯವಾಗಿ ಎದುರಿಸಲು ಹೊರಟಿದೆ. ಇಂತಹ ಸಂದರ್ಭದಲ್ಲಿ ಅವರ ಕೊಲೆ ಅಥವಾ ಅವರ ಮೇಲಿನ ಹಲ್ಲೆಯಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಿರುವಾಗ ಅವರೇಕೆ ಕೊಲ್ಲಲು ಹೋಗುತ್ತಾರೆ ಎಂಬುದು ನರಸಿಂಹರಾಜ ಕ್ಷೇತ್ರದ ಜನರ ಮಾತು.

ಇನ್ನು ಕೊಲೆಯತ್ನದ ಆರೋಪಿ ಫರಾನ್ ಖಾನ್ ತನ್ವೀರ್ ಸೇಠ್‍ಗೂ ಆಪ್ತ, ಎಸ್‍ಡಿಪಿಐಗೂ ಆಪ್ತ. ಜೊತೆಗೆ ಜೆಡಿಎಸ್‍ಗೂ ಆಪ್ತನೆಂದರೆ ಇವರಲ್ಲಿ ಯಾರು ಕಾಸು ಕೊಟ್ಟರೂ ಸಹ ಅವರ ಕಾರ್ಯಕ್ರಮಗಳಿಗೆ ಜನ ಕರೆದುಕೊಂಡು ಹೋಗುವುದು ಅವನ ಕಾಯಕ. ಆತ ಪಿಎಫ್‍ಐ ಕಾರ್ಯಕ್ರಮ ದಲ್ಲಿದ್ದ ಫೋಟೋಗಳು ಹೊರ ಬೀಳುತ್ತಿದ್ದಂತೆ, ಪಿಎಫ್‍ಐ ಸ್ವತಃ ತನ್ವೀರ್ ಸೇಠ್‍ರೊಂದಿಗೇ ಆತನಿರುವ ಫೋಟೋಗಳನ್ನು ಹೊರಬಿಟ್ಟಿತು. ಹೀಗಿರುವಾಗ ತನಗೊಂದು ಉದ್ಯೋಗ ಕೊಡಿ ಎಂದು ಪದೇ ಪದೇ ಗೆದ್ದ ತನ್ವೀರ್ ಸೇಠ್ ಬಳಿ ದುಂಬಾಲು ಬಿದ್ದಿದ್ದ ಎನ್ನಲಾಗುತ್ತಿದೆ. ಅವರು ಸೂಕ್ತ ಉದ್ಯೋಗ ಕೊಡಿಸಿಲ್ಲ. ಅದೇ ಸಮಯಕ್ಕೆ ತಾನು ಸೆಲೆಬ್ರಿಟಿಗಳನ್ನು ಕೊಲ್ಲುವ ಮೂಲಕ ಫೇಮಸ್ ಆಗಬೇಕು ಎಂದು ತನ್ನ ಗೆಳೆಯರೊಂದಿಗೆ ಆಗಾಗ ಹೇಳಿಕೊಳ್ಳುತ್ತಿದ್ದ ಎಂದೂ ವರದಿಗಳು ಬಂದಿವೆ. ಹಾಗೆ ನೋಡಿದರೆ ಈತ ಹತಾಶ ವ್ಯಕ್ತಿಯಂತೆ ಕಂಡುಬರುತ್ತಾನೆ. ಇಂತಹ ಸ್ಥಿಮಿತತೆ ಇಲ್ಲದವ ಮಾಡಿದ ಆ ಒಂದು ಯತ್ನ ಈಗ ನೂರಾರು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಸ್ವತಃ ಆತನು ಭಾವಿಸಿರಲಿಲ್ಲವೇನೋ?

ಪಿಎಫ್‍ಐ ಬ್ಯಾನ್ ಸಾಧ್ಯವೇ?

ಪಿಎಫ್‍ಐ, ಎಸ್‍ಡಿಪಿಐ ಮೇಲೆ ಕೇಸುಗಳಿಲ್ಲವೇನೆಂದಲ್ಲ. ಅವರು ಹಿಂಸೆಗಿಳಿದಿದ್ದಾರೆ ಎಂದು ಮಂಗಳೂರು, ಕೇರಳದಲ್ಲಿ ಪದೇ ಪದೇ ಆರೋಪಗಳು ಬರುವುದು ನಿಜ. ಹಾಗೆಂದ ಮಾತ್ರಕ್ಕೆ ಸಂಘಟನೆಯೊಂದನ್ನು ಬ್ಯಾನ್ ಮಾಡಲು ಸಾಧ್ಯವೇ? ಸಹಜವಾಗಿ ಚರ್ಚೆ ಆರೆಸ್ಸೆಸ್‍ನತ್ತ ಹೊರಳುತ್ತದೆ. ಆರ್‍ಎಸ್‍ಎಸ್ ಮೇಲೆ ಎಷ್ಟು ಕೇಸುಗಳಿಲ್ಲ? ಅದು ಕೂಡ ಮೂರು ಬಾರಿ ಬ್ಯಾನ್ ಆಗಿದೆ ಮತ್ತು ಕಡೆಯ ಬಾರಿ ಕೋರ್ಟ್‍ನಲ್ಲಿ ಅದನ್ನು ಹಿಂಪಡೆಯಲಾಯಿತು. ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ ಅದು ಇನ್ನೊಂದು ಹೆಸರಿನಲ್ಲಿ ತಲೆಎತ್ತುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು?

ಮೊನ್ನೆ ನಡೆದ ಮಂಗಳೂರು ಸ್ಥಳೀಯ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿದ್ದಲ್ಲದೇ ಹಲವೆಡೆ ಪೈಪೋಟಿ ನೀಡಿದೆ. ತನ್ವೀರ್ ಸೇಠ್‍ರವರು ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರದಲ್ಲಿಯೂ ಸಹ ಅದು ಕೆಲವೊಮ್ಮೆ ಎರಡನೇ ಸ್ಥಾನಕ್ಕೆ ಬಂದು ನಿಂತಿದ್ದಿದೆ. ಇನ್ನು ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆಯೂ ಮುಸ್ಲಿಂ ಮತಗಳ ವಿಚಾರದಲ್ಲಿ ಪೈಪೋಟಿ ಇದೆ. ಕಾಂಗ್ರೆಸ್ ಪಾಲಿಗಿದ್ದ ಮುಸ್ಲಿಂ ಮತಗಳಲ್ಲಿ ಒಂದಷ್ಟು ಪಾಲನ್ನು ಎಸ್‍ಡಿಪಿಐ ಪಡೆದುಕೊಳ್ಳುವ ಮೂಲಕ ಬಿಜೆಪಿ ಗೆಲುವಿಗೆ ಎಸ್‍ಡಿಪಿಐ ಕಾರಣವಾಗಿವೆ ಎಂದು ಕಾಂಗ್ರೆಸ್ ಆರೋಪಿಸಿದ್ದಿದೆ. ಸಿಪಿಎಂ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಎಸ್‍ಡಿಪಿಐ ಅನ್ನು ವಿರೋಧಿಸುತ್ತವೆ.

ಅವೆಲ್ಲಾ ಚರ್ಚೆಗಳು ಈ ಸಂದರ್ಭದಲ್ಲಿ ಮತ್ತೊಮ್ಮೆ ಮೇಲೆದ್ದಿವೆಯಾದರೂ, ಕೊಲೆಗೆ ಪಿಎಫ್‍ಐ ಕಾರಣವಿರಬಹುದೆಂಬ ತರ್ಕವನ್ನು ಬಹುತೇಕರು ಒಪ್ಪುತ್ತಿಲ್ಲ. ನಿಷ್ಪಕ್ಷಪಾತ ತನಿಖೆಯಷ್ಟೇ ಸತ್ಯವನ್ನು ಹೊರತರಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...