Homeಮುಖಪುಟತೇಜ್ ಬಹದೂರ್ ಯಾದವ್ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದರು ಗೊತ್ತೇ?

ತೇಜ್ ಬಹದೂರ್ ಯಾದವ್ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದರು ಗೊತ್ತೇ?

- Advertisement -
- Advertisement -

ನಾನುಗೌರಿ ಡೆಸ್ಕ್

ವಿಶಿಷ್ಟವಾದ ಸ್ವತಂತ್ರ ಮಾಧ್ಯಮ ಸಂಸ್ಥೆಯನ್ನು ಕಟ್ಟಲು ಶ್ರಮಿಸುತ್ತಿರುವ ಹಿರಿಯ ಪತ್ರಕರ್ತ ವಿನೋದ್ ಚಂದ್ ಅವರು ಸ್ವಲ್ಪ ‘ತನಿಖೆ’ ನಡೆಸಿ ತೇಜ್ ಬಹಾದೂರ್ ಯಾದವ್‍ರ ಹಿನ್ನೆಲೆಯನ್ನು ಪತ್ತೆ ಹಚ್ಚಿದ್ದಾರೆ. ಅವರು ಫೇಸ್‍ಬುಕ್‍ನಲ್ಲಿ ಹಾಕಿರುವ ಪೋಸ್ಟ್‍ನ ಸಾರಾಂಶ ಕೆಳಗಿದೆ. ಎಲ್ಲರೂ ಅಚ್ಚರಿ ಪಡುವಂತಹ ಹಲವು ಸಂಗತಿಗಳು ಇದರಲ್ಲಿವೆ.

ವಿನೋದ್ ಚಂದ್

‘ತೇಜ್ ಬಹಾದೂರ್ ಯಾದವ್ ಮೋದಿಯವರ ತೀವ್ರ ಬೆಂಬಲಿಗನಾಗಿದ್ದರು. ಅವರ ಫೇಸ್‍ಬುಕ್ ಟೈಂಲೈನ್‍ನಲ್ಲಿ ಮೋದಿಯವರಿಗೆ ಬಹಿರಂಗ ಬೆಂಬಲ ಸೂಚಿಸುವ ಮತ್ತು ದ್ವೇಷಪೂರಿತ ಪೋಸ್ಟ್‍ಗಳು ತುಂಬಿ ಹೋಗಿವೆ. ಬೇರಾವುದೇ ಮೋದಿ ಬೆಂಬಲಿಗನಂತೆ ಈತನೂ, ಮೋದಿ ದೊಡ್ಡ ಬದಲಾವಣೆ ತರುತ್ತಾರೆಂದು ಬಲವಾಗಿ ನಂಬಿದ್ದರು.

ಇದೇ ಭರವಸೆಯೊಂದಿಗೇನೇ, ತನಗೂ ಸಮಸ್ಯೆಯಾಗಿದ್ದ, ತನ್ನ ಸೈನಿಕ ಪಡೆಯಲ್ಲಿದ್ದ ಭ್ರಷ್ಟಾಚಾರವನ್ನು ಹೊರಗೆಳೆಯಲು ನಿರ್ಧರಿಸಿದ್ದರು. ಅದರ ಭಾಗವಾಗಿಯೇ ಈಗ ಪ್ರಸಿದ್ಧವಾಗಿರುವ ವಿಡಿಯೋವನ್ನು ಶೂಟ್ ಮಾಡಿದ್ದರು. ಅದರಲ್ಲಿ ಆತನಂತೆಯೇ ಕೊರೆಯುವ ಛಳಿಯಲ್ಲಿ ಗಡಿ ಕಾಯುತ್ತಿದ್ದ ಸೈನಿಕರಿಗೆ ಕೊಳೆತ ಆಹಾರವನ್ನು ನೀಡುವುದರ ಬಗ್ಗೆ ಯಾದವ್ ಮಾತಾಡಿದ್ದರು.

ಸಾಮಾಜಿಕ ಜಾಲತಾಣಗಳನ್ನು ಗಮನಿಸುವ ಮತ್ತು ಭ್ರಷ್ಟಾಚಾರ ವಿರೋಧಿ ನಾಯಕ, ದೇವದೂತ ಮೋದಿಯವರು ತನ್ನ ವಿಡಿಯೋವನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ವ್ಯವಸ್ಥೆಯನ್ನು ಬದಲಿಸುತ್ತಾರೆಂದು ಆತನಿಗೆ ಅಪಾರವಾದ ವಿಶ್ವಾಸವಿತ್ತು.
ಆದರೆ, ಅಂಥದ್ದೇನೂ ಆಗಲಿಲ್ಲ. ಅದೇ ವ್ಯವಸ್ಥೆಯೇ ಆತನ ಮೇಲೆ ದಾಳಿ ಮಾಡಿತು, ತೇಜ್ ಬಹಾದೂರ್‍ರನ್ನು ಹುಚ್ಚನೆಂದು ಕರೆದು, ಕೆಲಸದಿಂದ ಹೊರದಬ್ಬಿತು. ಸೈನಿಕರಿಗಾಗಿ ಕಣ್ಣೀರು ಸುರಿಸುವ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ನಿರ್ಮೂಲನೆ ಮಾಡಲು ಬಯಸುವ ದೇವದೂತ ಮೋದಿಯವರು ಆತನ ಸಹಾಯಕ್ಕೆ ಬರಲಿಲ್ಲ.

ಅದೇ ಸಂದರ್ಭದಲ್ಲಿ ತೇಜ್ ಬಹಾದೂರ್ ಯಾದವ್‍ರು ಮಾಡಿದ್ದನ್ನು ಸೈನ್ಯದಲ್ಲಿ ಸಹಿಸುವುದು ಸಾಧ್ಯವೇ ಇರಲಿಲ್ಲ. ಸೈನಿಕ ಸೈನಿಕನಾಗಿರಬೇಕಷ್ಟೇ, ಬರುವ ತೊಂದರೆ ಅನುಭವಿಸಬೇಕು, ಇಲ್ಲವೇ ಹೊರನಡೆಯಬೇಕು. ಆತ ಹೊರಜಗತ್ತಿಗೆ ದೂರುವಂತಿಲ್ಲ. ಅಲ್ಲಿನ ನಿಯಮಗಳು ಏನು ಹೇಳುತ್ತವೋ ಅದಕ್ಕೆ ಬದ್ಧನಾಗಿರಬೇಕು.

ಆದರೆ, ತೇಜ್ ಬಹಾದೂರ್‍ರ ಭಿನ್ನಮತದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಆತನಿಗೆ, ಬಹುಶಃ, ಯಾವ ನಿವೃತ್ತಿಯ ಸೌಲಭ್ಯಗಳನ್ನೂ ನೀಡದೇ ಮನೆಗೆ ಕಳಿಸಲಾಯಿತು. ಈಗ ಆತ ಸಾಮಾನ್ಯ ನಾಗರಿಕ. ಯಾವುದನ್ನು ಸೈನಿಕನಾಗಿ ಮಾಡಲಾಗಲಿಲ್ಲವೋ, ಅದನ್ನೀಗ ಮಾಡುವುದು ಸುಲಭವಾಗಿದೆ. ತಾನು ಯಾರ ಮೇಲೆ ಭರವಸೆಯಿಟ್ಟಿದ್ದರೋ, ಆ ವ್ಯಕ್ತಿಯೆದುರಿಗೇ ಸೆಣಿಸಿ ಕೊಡಬೇಕಾದ ಸಂದೇಶವನ್ನು ಕೊಡಲು ಹೊರಟಿದ್ದಾರೆ.

ಹಾಗೆ ನೋಡಿದರೆ, ಮೋದಿಯವರಿಗೆ ತೇಜ್ ಬಹಾದೂರ್ ಅವರು ಮಾಡಿದ ವಿಡಿಯೋ ಒಂದು ಸುವರ್ಣ ಅವಕಾಶವಾಗಿತ್ತು. ಅದರ ಮೂಲಕ ಬಿಎಸ್‍ಎಫ್‍ನಲ್ಲಿನ ಭ್ರಷ್ಟಾಚಾರ ಹಾಗೂ ಸೈನಿಕರ ದುಸ್ಥಿತಿಯನ್ನು ಸರಿಪಡಿಸಬಹುದಿತ್ತು. ಸೈನ್ಯ ಮತ್ತು ಅರೆಸೇನಾಪಡೆಗಳಲ್ಲಿನ ಎಲ್ಲರಿಗೂ ಕಠಿಣ ಸಂದೇಶ ರವಾನಿಸುವ ಸಾಧ್ಯತೆಯಿತ್ತು. ನನಗೆ ಕೆಲವೊಮ್ಮೆ ಆಶ್ಚರ್ಯವಾಗುವುದೆಂದರೆ, ತೇಜ್ ಬಹಾದೂರ್‍ರ ಪರ ನಿಲ್ಲದಿರಲು ಮೋದಿಯವರಿಗೆ ಸಲಹೆ ನೀಡಿದವರು ಯಾರು ಎಂದು. ಏಕೆಂದರೆ, ಆ ಸೈನಿಕನ ದೂರನ್ನು ಆಲಿಸಿ ಕ್ರಮಗಳನ್ನು ತೆಗೆದುಕೊಂಡು ತಪ್ಪಿತಸ್ಥರನ್ನು ಶಿಕ್ಷಿಸಿದ್ದರೆ ಮೋದಿಯವರ ಕೀರ್ತಿಪತಾಕೆ ಹಾರುತ್ತಿತ್ತು.

ಹಾಗಾಗಿಯೇ ತೇಜ್ ಬಹಾದೂರ್ ಯಾದವ್, ಸೈನ್ಯದಲ್ಲಿನ ಭ್ರಷ್ಟಾಚಾರವನ್ನು ಸರಿಪಡಿಸುವಲ್ಲಿ ಮತ್ತು ಬದುಕಿನ ಎಲ್ಲಾ ಆಯಾಮಗಳಲ್ಲೂ ಮೋದಿಯವರ ವೈಫಲ್ಯದ ಪ್ರತೀಕವಾಗಿದ್ದಾರೆ. ಮೋದಿಯವರ ವ್ಯಕ್ತಿತ್ವದಲ್ಲಿನ ದ್ವಂದ್ವವನ್ನು ಬಯಲುಗೊಳಿಸಲು ಬಯಸುವ ಎಲ್ಲರೂ ತೇಜ್ ಯಾದವ್‍ರನ್ನು ಬೆಂಬಲಿಸಬೇಕು’ ಎಂದು ಹೇಳುವ ವಿನೋದ್ ಚಂದ್, ಅವರ ಪ್ರಚಾರಕ್ಕಾಗಿ ಮೇ 10ರಿಂದ 17ರವರೆಗೆ ವಾರಣಾಸಿಗೆ ಹೋಗುತ್ತಿದ್ದಾರೆ. ತೇಜ್ ಬಹಾದೂರ್‍ರ ಸಿದ್ಧಾಂತವನ್ನಾಗಲೀ, ಆತನ ವಿಧಾನವನ್ನಾಗಲೀ ತಾನು ಒಪ್ಪುವುದಿಲ್ಲವಾದರೂ ದೇಶದ ಬಹುದೊಡ್ಡ ಸಮಸ್ಯೆಯನ್ನು ಎದುರಿಸುವುದು ಬಹಳ ಮುಖ್ಯ ಎನ್ನುತ್ತಾರೆ. ಜೊತೆಗೆ ಇದನ್ನು ಒಬ್ಬ ಅಸಲೀ ಸೈನಿಕ ಮತ್ತು ನಕಲಿ ರಾಷ್ಟ್ರವಾದಿಯ ನಡುವಿನ ನೇರ ಸಮರವನ್ನಾಗಿಸಲು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಬೇಕೆಂದೂ ಅವರ ಆಗ್ರಹಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...