Homeಮುಖಪುಟತೇಜ್ ಬಹದೂರ್ ಯಾದವ್ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದರು ಗೊತ್ತೇ?

ತೇಜ್ ಬಹದೂರ್ ಯಾದವ್ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದರು ಗೊತ್ತೇ?

- Advertisement -
- Advertisement -

ನಾನುಗೌರಿ ಡೆಸ್ಕ್

ವಿಶಿಷ್ಟವಾದ ಸ್ವತಂತ್ರ ಮಾಧ್ಯಮ ಸಂಸ್ಥೆಯನ್ನು ಕಟ್ಟಲು ಶ್ರಮಿಸುತ್ತಿರುವ ಹಿರಿಯ ಪತ್ರಕರ್ತ ವಿನೋದ್ ಚಂದ್ ಅವರು ಸ್ವಲ್ಪ ‘ತನಿಖೆ’ ನಡೆಸಿ ತೇಜ್ ಬಹಾದೂರ್ ಯಾದವ್‍ರ ಹಿನ್ನೆಲೆಯನ್ನು ಪತ್ತೆ ಹಚ್ಚಿದ್ದಾರೆ. ಅವರು ಫೇಸ್‍ಬುಕ್‍ನಲ್ಲಿ ಹಾಕಿರುವ ಪೋಸ್ಟ್‍ನ ಸಾರಾಂಶ ಕೆಳಗಿದೆ. ಎಲ್ಲರೂ ಅಚ್ಚರಿ ಪಡುವಂತಹ ಹಲವು ಸಂಗತಿಗಳು ಇದರಲ್ಲಿವೆ.

ವಿನೋದ್ ಚಂದ್

‘ತೇಜ್ ಬಹಾದೂರ್ ಯಾದವ್ ಮೋದಿಯವರ ತೀವ್ರ ಬೆಂಬಲಿಗನಾಗಿದ್ದರು. ಅವರ ಫೇಸ್‍ಬುಕ್ ಟೈಂಲೈನ್‍ನಲ್ಲಿ ಮೋದಿಯವರಿಗೆ ಬಹಿರಂಗ ಬೆಂಬಲ ಸೂಚಿಸುವ ಮತ್ತು ದ್ವೇಷಪೂರಿತ ಪೋಸ್ಟ್‍ಗಳು ತುಂಬಿ ಹೋಗಿವೆ. ಬೇರಾವುದೇ ಮೋದಿ ಬೆಂಬಲಿಗನಂತೆ ಈತನೂ, ಮೋದಿ ದೊಡ್ಡ ಬದಲಾವಣೆ ತರುತ್ತಾರೆಂದು ಬಲವಾಗಿ ನಂಬಿದ್ದರು.

ಇದೇ ಭರವಸೆಯೊಂದಿಗೇನೇ, ತನಗೂ ಸಮಸ್ಯೆಯಾಗಿದ್ದ, ತನ್ನ ಸೈನಿಕ ಪಡೆಯಲ್ಲಿದ್ದ ಭ್ರಷ್ಟಾಚಾರವನ್ನು ಹೊರಗೆಳೆಯಲು ನಿರ್ಧರಿಸಿದ್ದರು. ಅದರ ಭಾಗವಾಗಿಯೇ ಈಗ ಪ್ರಸಿದ್ಧವಾಗಿರುವ ವಿಡಿಯೋವನ್ನು ಶೂಟ್ ಮಾಡಿದ್ದರು. ಅದರಲ್ಲಿ ಆತನಂತೆಯೇ ಕೊರೆಯುವ ಛಳಿಯಲ್ಲಿ ಗಡಿ ಕಾಯುತ್ತಿದ್ದ ಸೈನಿಕರಿಗೆ ಕೊಳೆತ ಆಹಾರವನ್ನು ನೀಡುವುದರ ಬಗ್ಗೆ ಯಾದವ್ ಮಾತಾಡಿದ್ದರು.

ಸಾಮಾಜಿಕ ಜಾಲತಾಣಗಳನ್ನು ಗಮನಿಸುವ ಮತ್ತು ಭ್ರಷ್ಟಾಚಾರ ವಿರೋಧಿ ನಾಯಕ, ದೇವದೂತ ಮೋದಿಯವರು ತನ್ನ ವಿಡಿಯೋವನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ವ್ಯವಸ್ಥೆಯನ್ನು ಬದಲಿಸುತ್ತಾರೆಂದು ಆತನಿಗೆ ಅಪಾರವಾದ ವಿಶ್ವಾಸವಿತ್ತು.
ಆದರೆ, ಅಂಥದ್ದೇನೂ ಆಗಲಿಲ್ಲ. ಅದೇ ವ್ಯವಸ್ಥೆಯೇ ಆತನ ಮೇಲೆ ದಾಳಿ ಮಾಡಿತು, ತೇಜ್ ಬಹಾದೂರ್‍ರನ್ನು ಹುಚ್ಚನೆಂದು ಕರೆದು, ಕೆಲಸದಿಂದ ಹೊರದಬ್ಬಿತು. ಸೈನಿಕರಿಗಾಗಿ ಕಣ್ಣೀರು ಸುರಿಸುವ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ನಿರ್ಮೂಲನೆ ಮಾಡಲು ಬಯಸುವ ದೇವದೂತ ಮೋದಿಯವರು ಆತನ ಸಹಾಯಕ್ಕೆ ಬರಲಿಲ್ಲ.

ಅದೇ ಸಂದರ್ಭದಲ್ಲಿ ತೇಜ್ ಬಹಾದೂರ್ ಯಾದವ್‍ರು ಮಾಡಿದ್ದನ್ನು ಸೈನ್ಯದಲ್ಲಿ ಸಹಿಸುವುದು ಸಾಧ್ಯವೇ ಇರಲಿಲ್ಲ. ಸೈನಿಕ ಸೈನಿಕನಾಗಿರಬೇಕಷ್ಟೇ, ಬರುವ ತೊಂದರೆ ಅನುಭವಿಸಬೇಕು, ಇಲ್ಲವೇ ಹೊರನಡೆಯಬೇಕು. ಆತ ಹೊರಜಗತ್ತಿಗೆ ದೂರುವಂತಿಲ್ಲ. ಅಲ್ಲಿನ ನಿಯಮಗಳು ಏನು ಹೇಳುತ್ತವೋ ಅದಕ್ಕೆ ಬದ್ಧನಾಗಿರಬೇಕು.

ಆದರೆ, ತೇಜ್ ಬಹಾದೂರ್‍ರ ಭಿನ್ನಮತದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಆತನಿಗೆ, ಬಹುಶಃ, ಯಾವ ನಿವೃತ್ತಿಯ ಸೌಲಭ್ಯಗಳನ್ನೂ ನೀಡದೇ ಮನೆಗೆ ಕಳಿಸಲಾಯಿತು. ಈಗ ಆತ ಸಾಮಾನ್ಯ ನಾಗರಿಕ. ಯಾವುದನ್ನು ಸೈನಿಕನಾಗಿ ಮಾಡಲಾಗಲಿಲ್ಲವೋ, ಅದನ್ನೀಗ ಮಾಡುವುದು ಸುಲಭವಾಗಿದೆ. ತಾನು ಯಾರ ಮೇಲೆ ಭರವಸೆಯಿಟ್ಟಿದ್ದರೋ, ಆ ವ್ಯಕ್ತಿಯೆದುರಿಗೇ ಸೆಣಿಸಿ ಕೊಡಬೇಕಾದ ಸಂದೇಶವನ್ನು ಕೊಡಲು ಹೊರಟಿದ್ದಾರೆ.

ಹಾಗೆ ನೋಡಿದರೆ, ಮೋದಿಯವರಿಗೆ ತೇಜ್ ಬಹಾದೂರ್ ಅವರು ಮಾಡಿದ ವಿಡಿಯೋ ಒಂದು ಸುವರ್ಣ ಅವಕಾಶವಾಗಿತ್ತು. ಅದರ ಮೂಲಕ ಬಿಎಸ್‍ಎಫ್‍ನಲ್ಲಿನ ಭ್ರಷ್ಟಾಚಾರ ಹಾಗೂ ಸೈನಿಕರ ದುಸ್ಥಿತಿಯನ್ನು ಸರಿಪಡಿಸಬಹುದಿತ್ತು. ಸೈನ್ಯ ಮತ್ತು ಅರೆಸೇನಾಪಡೆಗಳಲ್ಲಿನ ಎಲ್ಲರಿಗೂ ಕಠಿಣ ಸಂದೇಶ ರವಾನಿಸುವ ಸಾಧ್ಯತೆಯಿತ್ತು. ನನಗೆ ಕೆಲವೊಮ್ಮೆ ಆಶ್ಚರ್ಯವಾಗುವುದೆಂದರೆ, ತೇಜ್ ಬಹಾದೂರ್‍ರ ಪರ ನಿಲ್ಲದಿರಲು ಮೋದಿಯವರಿಗೆ ಸಲಹೆ ನೀಡಿದವರು ಯಾರು ಎಂದು. ಏಕೆಂದರೆ, ಆ ಸೈನಿಕನ ದೂರನ್ನು ಆಲಿಸಿ ಕ್ರಮಗಳನ್ನು ತೆಗೆದುಕೊಂಡು ತಪ್ಪಿತಸ್ಥರನ್ನು ಶಿಕ್ಷಿಸಿದ್ದರೆ ಮೋದಿಯವರ ಕೀರ್ತಿಪತಾಕೆ ಹಾರುತ್ತಿತ್ತು.

ಹಾಗಾಗಿಯೇ ತೇಜ್ ಬಹಾದೂರ್ ಯಾದವ್, ಸೈನ್ಯದಲ್ಲಿನ ಭ್ರಷ್ಟಾಚಾರವನ್ನು ಸರಿಪಡಿಸುವಲ್ಲಿ ಮತ್ತು ಬದುಕಿನ ಎಲ್ಲಾ ಆಯಾಮಗಳಲ್ಲೂ ಮೋದಿಯವರ ವೈಫಲ್ಯದ ಪ್ರತೀಕವಾಗಿದ್ದಾರೆ. ಮೋದಿಯವರ ವ್ಯಕ್ತಿತ್ವದಲ್ಲಿನ ದ್ವಂದ್ವವನ್ನು ಬಯಲುಗೊಳಿಸಲು ಬಯಸುವ ಎಲ್ಲರೂ ತೇಜ್ ಯಾದವ್‍ರನ್ನು ಬೆಂಬಲಿಸಬೇಕು’ ಎಂದು ಹೇಳುವ ವಿನೋದ್ ಚಂದ್, ಅವರ ಪ್ರಚಾರಕ್ಕಾಗಿ ಮೇ 10ರಿಂದ 17ರವರೆಗೆ ವಾರಣಾಸಿಗೆ ಹೋಗುತ್ತಿದ್ದಾರೆ. ತೇಜ್ ಬಹಾದೂರ್‍ರ ಸಿದ್ಧಾಂತವನ್ನಾಗಲೀ, ಆತನ ವಿಧಾನವನ್ನಾಗಲೀ ತಾನು ಒಪ್ಪುವುದಿಲ್ಲವಾದರೂ ದೇಶದ ಬಹುದೊಡ್ಡ ಸಮಸ್ಯೆಯನ್ನು ಎದುರಿಸುವುದು ಬಹಳ ಮುಖ್ಯ ಎನ್ನುತ್ತಾರೆ. ಜೊತೆಗೆ ಇದನ್ನು ಒಬ್ಬ ಅಸಲೀ ಸೈನಿಕ ಮತ್ತು ನಕಲಿ ರಾಷ್ಟ್ರವಾದಿಯ ನಡುವಿನ ನೇರ ಸಮರವನ್ನಾಗಿಸಲು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಬೇಕೆಂದೂ ಅವರ ಆಗ್ರಹಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...