Homeಪ್ರಪಂಚಮತ್ತಷ್ಟು ಜೈವಿಕ ಸಂಗತಿಗಳು

ಮತ್ತಷ್ಟು ಜೈವಿಕ ಸಂಗತಿಗಳು

- Advertisement -
- Advertisement -

ಎಕ್ಸ್-ವಾಯ್ ಮಕ್ಕಳು ಟೆಸ್ಟೊಸ್ಟೆರಾನ್ ಉತ್ಪತ್ತಿ ಮಾಡಿದರೂ ಟೆಸ್ಟೊಸ್ಟೆರಾನ್‌ಗೆ ಸ್ಪಂದಿಸುವ ಅಣುಗಳನ್ನು ಸಂಪೂರ್ಣವಾಗಿ  ಅಥವಾ ಭಾಗಶಃವಾಗಿ  ಹೊಂದದೇ ಇರಬಹುದು. ಇದರಿಂದ ಗಂಡಿನ ಲಕ್ಷಣಗಳ ಬೆಳವಣಿಗೆಯಲ್ಲಿ ಅನೇಕ ವಿಧದ ಬದಲಾವಣೆಗಳಾಗಬಹುದು. ಕೆಲವರು ಗರ್ಭಾಶಯದಲ್ಲಿದ್ದಾಗ ಟೆಸ್ಟೊಸ್ಟೆರಾನ್ ಹಾರ್ಮೋನಿಗೆ ಒಂದು ತರಹ ಪ್ರತಿಕ್ರಿಯಿಸಿ, ಹದಿವಯಸ್ಸಿನಲ್ಲಿ ಇನ್ನೊಂದು ತರಹ ಪ್ರತಿಕ್ರಿಯಿಸಬಹುದು. ಜನ್ಮದ ಸಮಯದಲ್ಲಿ ಅವರ ದೇಹ ವೈದ್ಯರಿಗೆ ಹೆಣ್ಣಾಗಿ ಕಂಡರೂ ಪ್ರೌಢಾವಸ್ಥೆಯ ನಂತರ ‘ಗಂಡಿನಂತೆ’ ಬದಲಾವಣೆಯಾಗಬಹುದು. ಅದರಂತೆಯೇ ಎಕ್ಸ್ಎಕ್ಸ್ ಮಕ್ಕಳು ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟೊÃಸ್ಟೆರಾನ್ (ಪ್ರೊಜೆಸ್ಟೆರಾನ್ ಎನ್ನುವ ಸ್ತಿçà ಹಾರ್ಮೋನಿಂದ ಉತ್ಪತ್ತಿಯಾದ) ಉತ್ಪತ್ತಿ ಮಾಡಿದಲ್ಲಿ ಜನನಾಂಗಗಳು ವಿವಿಧ ಸ್ತರಗಳಲ್ಲಿ ಗಂಡಿನಂತೆ ಅಭಿವೃದ್ಧಿ ಹೊಂದಬಹುದು ಹಾಗೂ ಶಿಶ್ನದಂತೆ ಕಾಣುವ ಅಂಗದೊಂದಿಗೆ ಹುಟ್ಟಬಹುದು. ಹಾಗಾಗಿ, ಗಂಡು ಮತ್ತು ಹೆಣ್ಣು ಎನ್ನುವ ಸರಳ ವರ್ಗೀಕರಣದಿಂದ ಅನೇಕ ವಿಧಗಳಲ್ಲಿ ಇಂಟರ್‌ಸೆಕ್ಸ್ ಮಕ್ಕಳು ಬೇರೆಯಾಗಿರಬಹುದಾಗಿದೆ. ಜನಿಸಿದ 2000 ಮಕ್ಕಳಲ್ಲಿ 1 ಮಗುವಿನ ದೇಹದಲ್ಲಿ ಅಸ್ಪಷ್ಟವಾದ ಜನನಾಂಗಗಳು ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಅವರನ್ನು ಇಂಟರ್‌ಸೆಕ್ಸ್ ಎಂದು ವರ್ಗೀಕರಿಸಲಾಗುತ್ತದೆ. ಆದರೆ ನಾವು ನೋಡಿದಂತೆ, ಹಲವಾರು ಇಂಟರ್‌ಸೆಕ್ಸ್ ವಿಧಗಳಲ್ಲಿ ಜನನಾಂಗಗಳು ಸ್ಪಷ್ಟವಾಗಿ ಗಂಡು ಅಥವಾ ಹೆಣ್ಣಿನಂತೆ ತೋರಬಹುದು, ಆದರೆ ಇದು ಅವರ ಅನುವಂಶಿಕ ರಚನೆಯಿಂದ ಬೇರೆಯಾಗಿರಬಹದು. ಆನ್ ಫಾಸ್ಟೊà ಸ್ಟರ್ಲಿಂಗ್‌ನಂತಹ ವಿಜ್ಞಾನಿಗಳು ಸೂಚಿಸುವುದೇನೆಂದರೆ, ಒಟ್ಟಾರೆ ಜನಸಂಖ್ಯೆಯ ಶೇಕಡಾ ಎರಡರಷ್ಟು ಜನರು ಎದ್ದುಕಾಣದ, ಗೌಣವಾಗಿರುವ ಇಂಟರ್‌ಸೆಕ್ಸ್ ವಿಧಗಳನ್ನು ಹೊಂದಿರಬಹುದು.
ಇವೆಲ್ಲದಕ್ಕೂ ಮತ್ತು ಟ್ರಾನ್ಸ್ಜೆಂಡರ್ (ಅಂತರಲಿಂಗಿ) ಆಗಿರುವುದಕ್ಕೂ ಸಂಬಂಧವೇನು? ಮೆದುಳು. ಗಂಡು ಹಾರ್ಮೋನ್ ಆದ ಟೆಸ್ಟೊÃಸ್ಟೆರಾನ್ ಮತ್ತು ಹೆಣ್ಣು ಹಾರ್ಮೋನ್ ಈಸ್ಟೊçÃಜೆನ್‌ಗಳಿಗೆ ಸ್ಪಂದಿಸುವುದಕ್ಕಾಗಿ ಮೆದುಳಿನಲ್ಲಿ ಕೆಲವು ಕ್ಷೆÃತ್ರಗಳಿವೆ ಹಾಗೂ ಈ ಹಾರ್ಮೋನುಗಳು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಕೆಲವು ವಂಶವಾಹಿ (ಜೀನ್)ಗಳ ಮೇಲೆ ಅವಲಂಬಿಸಿರುತ್ತೆ. ಆದುದರಿಂದ ಟ್ರಾನ್ಸ್ಜೆಂಡರ್ ಗುರುತು ಇದಕ್ಕೆ ಸಂಬಂಧಿಸಿರುತ್ತೆ. ಹಾಗಾಗಿ, ಹುಟ್ಟಿನ ಸಮಯದಲ್ಲಿ ವೈದ್ಯರು ಗಂಡು ಅಥವಾ ಹೆಣ್ಣು ಎಂದು ವರ್ಗೀಕರಿಸಿದರೂ, ಅವರು ಬೆಳೆಯುತ್ತ ಹೋದಂತೆ ಅವರ ಮಿದುಳಿನ ಮೇಲೆ ಅವರ ಜೈವಿಕ ಲಿಂಗಕ್ಕೆ ವಿರುದ್ಧವಾದ ಹಾರ್ಮೋನ್ ಪ್ರಭಾವ ಬೀರಬಹದು. ಎಕ್ಸ್ ಎಕ್ಸ್ ಮಕ್ಕಳಲ್ಲಿ ಅವರ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಗಂಡಿನ ಹಾರ್ಮೋನುಗಳು ಪ್ರಭಾವ ಬೀರಿದಾಗ (ತಾಯಿಯ ಗರ್ಭದಿಂದ ಅಥವಾ ಮಗುವಿನ ತನ್ನದೇ ಕೋಶಗಳಿಂದ) ಎಕ್ಸ್ವೈ ಮಕ್ಕಳಿಗೆ ಹೋಲುವ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಅದರಂತೆ, ಎಕ್ಸ್ವೈ ಮಕ್ಕಳಲ್ಲಿ ಹೆಣ್ಣಿನ ಹಾರ್ಮೋನುಗಳು ಇದ್ದರೆ ಅಥವಾ ಗಂಡಿನ ಹಾರ್ಮೋನುಗಳಿಗೆ ಮೆದುಳು ಸ್ಪಂದಿಸದೇ ಇದ್ದರೆ ಆ ಎಕ್ಸ್ವೈ ಮಕ್ಕಳು ಹೆಣ್ಣಿನ ಸ್ವರೂಪವನ್ನು ಬೆಳೆಸಿಕೊಳ್ಳಬಹುದು. ಇವರುಗಳ ಮೆದುಳು ಎಕ್ಸ್ಎಕ್ಸ್ ಹೆಣ್ಣುಗಳ ಮೆದುಳಿನÀ ಹಾಗೆಯೇ ಬದಲಾವಣೆ ಹೊಂದಬಹುದು. ಮೆದುಳಿನ ಈ ಕ್ಷೆÃತ್ರಗಳ ಬಗ್ಗೆ ಹಾಗು ಟ್ರಾನ್ಸ್ಜೆಂಡರ್ ಮಕ್ಕಳು ಮತ್ತು ವಯಸ್ಕರು ತಮ್ಮ ದೇಹದ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೇಗೆ ಹೊಂದಿರುತ್ತಾರೆ ಎನ್ನುವುದರ ಬಗ್ಗೆ ನಂತರ ವಿವರಿಸುವೆ. ಆದರೆ, ಸದ್ಯಕ್ಕೆ ಒಂದೇ ಒಂದು ಜೈವಿಕ ಲಿಂಗವನ್ನು ಹೊಂದದೇ ಇರುವುದಕ್ಕೆ ಅನೇಕ ಕಾರಣಗಳು ಮತ್ತು ಸಾಧ್ಯತೆಗಳಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೊÃಣ.
ನಮ್ಮ ಕ್ರೊÃಮೊಸೋಮ್‌ಗಳು, ವೃಷಣ/ಅಂಡಾಶಯಗಳ ರಚನೆ, ಜನ್ಮದ ಸಮಯದಲ್ಲಿ ಹಾರ್ಮೋನುಗಳು, ಜನನಾಂಗಗಳು ಮತ್ತು ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳು, ಇವೆಲ್ಲವುಗಳೂ ನಮ್ಮ ದೇಹ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ಪರಿಣಾಮ ಬೀರುತ್ತವೆ. ಒಂದು ವೇಳೆ ಇವುಗಳು ಅಸ್ಪಷ್ಟ ಜನನಾಂಗಗಳನ್ನು ಅಥವಾ ಅಸ್ಪಷ್ಟ ಲೈಂಗಿಕ ಲಕ್ಷಣಗಳನ್ನು ಸೃಷ್ಟಿಸಲು ಕಾರಣವಾದರೆ ಹಾಗೂ ಇವಗಳನ್ನು ವೈದ್ಯರು ಗುರುತಿಸಿದರೆ ಆ ಮಕ್ಕಳನ್ನು ಇಂಟರ್‌ಸೆಕ್ಸ್ ಎಂದು ಕರೆಯಲಾಗುತ್ತದೆ; ಆದರೆ, ನಮ್ಮಲ್ಲಿ ಅನೇಕರು ವೈದ್ಯಕೀಯವಾಗಿ ಇಂಟರ್‌ಸೆಕ್ಸ್ ಆಗಿದ್ದರೂ ಆ ವಾಸ್ತವದ ಅರಿವು ಇಲ್ಲದೇ ಇರಬಹುದು.

– ಕಾರ್ತಿಕ್ ಬಿಟ್ಟು
ಅನುವಾದ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....