Homeಮುಖಪುಟಪ್ರೀತಿಸುವ ಕಲೆ - ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

- Advertisement -
- Advertisement -

ಜಗತ್ತಿನಲ್ಲಿ ಅಗತ್ಯದ ಅಥವಾ ಸಾಂತ್ವನ ನೀಡುವಂತಹ ಅನೇಕ ಪರಿಕಲ್ಪನೆಗಳು ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ದೇವರು, ಧರ್ಮ, ಸಂಬಂಧಗಳ ಮೌಲ್ಯ, ರಾಜಕೀಯ, ಸಂಸ್ಕೃತಿ ಇತ್ಯಾದಿಗಳಂತೆ ಪ್ರೀತಿಯೂ ಕೂಡಾ.

ಮೋಹ, ಕಾಮ, ವ್ಯಾಮೋಹ, ಇಷ್ಟ ಇತ್ಯಾದಿಗಳನ್ನೆಲ್ಲಾ ಪ್ರೀತಿ ಎಂದುಕೊಂಡುಬಿಡುವ ಉದಾಹರಣೆಗಳಿವೆ. ಹಾಗೆಯೇ ಪ್ರೀತಿಯೆಂದುಕೊಂಡು ವ್ಯಕ್ತಿಗೋ, ಸಿದ್ಧಾಂತಕ್ಕೋ ಅಥವಾ ಇನ್ನಾವುದಕ್ಕೋ ಅಂಟಿಕೊಂಡು ಅದು ಗೀಳಾಗಿ ಮನೋರೋಗವಾಗಿವೆ. ನಾನು ಪ್ರೀತಿಸುತ್ತೇನೆ ಎಂದು ವ್ಯಕ್ತಿಯನ್ನು ಬಂಧನದಲ್ಲಿಟ್ಟುಕೊಂಡು ಪೆÇಸೆಸ್ಸಿವ್ ಆಗಿರುವುದನ್ನು ಕಂಡಿದ್ದೇವೆ.

ಹಾಗಾದರೆ ಪ್ರೇಮವೆಂದರೆ ಏನು? ವ್ಯಾಖ್ಯಾನಕ್ಕೆ ಮೀರಿದ್ದು ಅಂತ ಉನ್ನತೀಕರಿಸಿ, ಅರಿಯುವ ಬದಲು ಅಪಾರ್ಥದಲ್ಲೇ ಬೆಚ್ಚಗಿಟ್ಟುಕೊಳ್ಳುವ ಧೋರಣೆಯಿಂದ ಪ್ರೀತಿ ಉನ್ನತ ಕ್ಲೀಷೆಯಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಅಚ್ಚುಕಟ್ಟಾಗಿ ಅರಿವಿನ ಒಳನೋಟವನ್ನು ಕೊಡಲು ತನ್ನ ಆರ್ಟ್ ಆಫ್ ಲವ್ಹಿಂಗ್ (1956) ಪುಸ್ತಕದಲ್ಲಿ ಪ್ರಯತ್ನಿಸಿದ್ದಾರೆ.

ಪ್ರೀತಿ ಎಂಬ ಪರಿಕಲ್ಪನೆಯನ್ನು ಬರೀ ಗಂಡುಹೆಣ್ಣುಗಳ ನಡುವಿನ ಆಕರ್ಷಣೆಯಿಂದ ಬಿಡುಗಡೆಗೊಳಿಸಿ ಉದಾತ್ತಗೊಳಿಸಿದ ಕೀರ್ತಿ ಯೇಸುಕ್ರಿಸ್ತನಿಗೇ ಸಲ್ಲುತ್ತದೆ. ಅವನಿಗೂ ಮುನ್ನ ಭಾರತೀಯ ಮತ್ತು ಇತರ ತತ್ವಶಾಸ್ತ್ರ ಮತ್ತು ಪುರಾಣಗಳಲ್ಲಿ ಕಾಮ ಮತ್ತು ನಿಷ್ಕಾಮವನ್ನು, ಪ್ರೇಮಿಗಳ ಪ್ರೇಮ, ಇತರ ಸಂಬಂಧಗಳೊಡನೆ ವಾತ್ಸಲ್ಯ ಅಥವಾ ವ್ಯಾಮೋಹ ನೋಡಬಹುದಿತ್ತು. ವಾತ್ಸಾಯನನ ಕಾಮಶಾಸ್ತ್ರದಲ್ಲಿ ಕಾಮದಾನಂದ ಪಡೆಯಬೇಕಾದರೆ ಸಂಗಾತಿಗಳು ಪರಸ್ಪರ ಇರಬೇಕಾಗಿರುವ ಧೋರಣೆಯನ್ನು ವಿವರಿಸುತ್ತಾನೆ. ಆದರೆ ಅನಿರ್ಬಂಧಿತ ಅಥವಾ ಕಟ್ಟಳೆಗಳಿಲ್ಲದ ಪ್ರೇಮದ ಪಾಠ ಆಗಿದ್ದು ಕ್ರಿಸ್ತನಿಂದ. ಅದನ್ನೇ ಮುಂದುವರಿಸಿ ಮನಶಾಸ್ತ್ರಜ್ಞನೂ ಮತ್ತು ಸಮಾಜ ತತ್ವಜ್ಞಾನಿಯೂ ಆದ ಎರಿಕ್ ಫ್ರಾಂ ಮನೋವೈಜ್ಞಾನಿಕವಾಗಿ ಸಾಮಾಜಿಕ ವರ್ತನಾ ಶಾಸ್ತ್ರದಲ್ಲಿ ಹೇಳುತ್ತಾರೆ.

ಎರಿಕ್ ಪ್ರೀತಿಸುವ ಕಲೆಯನ್ನು ಹೇಳಿಕೊಡುವ ಮುನ್ನ ಪ್ರೀತಿಸುವುದರಲ್ಲಿರುವ ಸಮಸ್ಯೆಗಳನ್ನು ಮೊದಲು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಹೌದು, ಪ್ರೀತಿಸಲ್ಪಡುವ ಆನಂದಕ್ಕೆ ಆಸೆಪಟ್ಟು ಪ್ರೀತಿಸುವ ಕಲೆಯನ್ನು ಉಪೇಕ್ಷಿಸಿಬಿಡುತ್ತಾರೆ. ಬೇರೆ ಜೀವನಕ್ಕೆ ಅಗತ್ಯವಿರುವ ಎಷ್ಟೋ ವಿದ್ಯೆಗಳನ್ನು ಕಲಿಯುತ್ತಾ ಪ್ರೀತಿಸುವ ಕಲೆಯನ್ನು ಕಲಿಯಲು ಸಮಯ ಕೊಡುವುದಿಲ್ಲ. ಪ್ರೀತಿಸುವುದು (ಸಿನಿಮಾಗಳಲ್ಲಿ ತೋರಿಸುವಂತೆ) ಬಹಳ ಕಷ್ಟ, ತುಂಬಾ ಒದ್ದಾಡಿ ಹೋರಾಡಿದ ಮೇಲೆ ಕೊನೆಗೆ ಪ್ರೇಮಿಗಳು ಒಂದಾಗುತ್ತಾರೆ ಎಂಬ ಮನಸ್ಥಿತಿ.

ನಿಜವಾದ ಪ್ರೇಮದಲ್ಲಿ ಬೀಳುವುದಲ್ಲ, (ಫಾಲಿಂಗ್ ಇನ್ ಲವ್ಹ್) ಬದಲಾಗಿ ಹೇಗೆ ಪ್ರೇಮದಲ್ಲಿ ತೊಡಗಿಸಿಕೊಳ್ಳುವುದು ಎಂಬುದನ್ನು ನೋಡಬೇಕೆನ್ನುತ್ತಾರೆ. ಇದು ಸುಲಭವಲ್ಲ ನಿಜ. ಆದರೆ, ಇದು ಅಸ್ತಿತ್ವದ ಅರ್ಥವನ್ನು ಅನಾವರಣ ಮಾಡುತ್ತಾ ಮಾನವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುತ್ತಾ ತೃಪ್ತ ಮತ್ತು ಸ್ವಾಸ್ಥ ಮನಸ್ಸನ್ನು ದೃಢಗೊಳಿಸುತ್ತದೆ. ಇನ್ನೇನು ಬೇಕು?

ಪ್ರೇಮ ಜೀವನಪೂರ್ತಿ ತೊಡಗಿಸಿಕೊಳ್ಳಬೇಕಾಗಿರುವ ಸೃಜನಶೀಲ ಯೋಜನೆ ಎನ್ನುವ ಎರಿಕ್ ಫ್ರಾಂ ‘ಪ್ರೀತಿಸುವುದ ತಿಳಿಯದೇ ಪ್ರೀತಿಗೊಳಗಾಗುವ ಆತುರ ನಮ್ಮ ಪ್ರೀತಿಪಾತ್ರರನ್ನು ಹೇಗೆ ನೋಯಿಸುತ್ತದೆ’ ಎಂದು ವಿವರಿಸುತ್ತಾರೆ. ಸೋದರ ಪ್ರೇಮ, ಕುಟುಂಬ ಪ್ರೇಮ, ಸತಿ ಪತಿ ಪ್ರೇಮ ಇತ್ಯಾದಿಗಳೆಲ್ಲವೂ ಒಂದೇ ಪ್ರೇಮದ ಒಂದೇ ಮೂಲವನ್ನು ಹೊಂದಿದ್ದು ವಿವಿಧ ಹೊಣೆಗಾರಿಕೆ ಮತ್ತು ಅಭಿವ್ಯಕ್ತತೆಗಳಿಂದ ಬೇರೆಯಾಗಿ ತೋರುತ್ತದೆ ಎಂದು ವಿವರಿಸುತ್ತಾರೆ.

ಅಪ್ರಬುದ್ಧ ಪ್ರೇಮ ಹೇಳುವುದೇನೆಂದರೆ, ಗಿವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್ ತರ, ನನ್ನ ಪ್ರೀತಿಸಿದರೆ ನಾನು ಪ್ರೀತಿಸುತ್ತೇನೆ ಎಂದು. ಆದರೆ ಪಕ್ವವಾದ ಪ್ರೇಮವು ತನಗೆ ಪ್ರೀತಿಸಲು ಸಾಧ್ಯ, ಪ್ರೀತಿಸುತ್ತೇನೆ’ ಎಂಬುದು.

ಪ್ರೇಮವೆಂಬುದು ಇದ್ದಕ್ಕಿದ್ದಂತೆ ಆಗಿಬಿಡುವುದಲ್ಲ. ಅದೊಂದು ಗ್ರಹಿಕೆ, ತಿಳಿವಳಿಕೆ ಮತ್ತು ತರಬೇತಿಗಳ ಪ್ರಕ್ರಿಯೆಯ ಮನೋಭಾವದ ರೂಪ. ಆದ್ದರಿಂದಲೇ ಸಂಗೀತ, ನೃತ್ಯ, ವಿಜ್ಞಾನಗಳನ್ನೆಲ್ಲಾ ಕಲಿಯುವಂತೆ ಪ್ರೀತಿಸುವುದನ್ನೂ ಪ್ರಜ್ಞಾಪೂರ್ವಕವಾಗಿ ಕಲಿಯಬೇಕು ಎನ್ನುತ್ತಾರೆ.

ಪ್ರೇಮವೆಂಬುದು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಾವು ಹೊಂದುವ ಸಂಬಂಧದ ತೀವ್ರ ಪ್ರಭಾವವೋ, ಭಾವ ತೀವ್ರತೆಯೋ ಖಂಡಿತ ಅಲ್ಲ. ಬದಲಾಗಿ ಅದೊಂದು ಧೋರಣೆ ಅಥವಾ ದೃಷ್ಟಿ.

ಒಟ್ಟಾರೆ ಪ್ರೀತಿಯೆಂಬುದು ವ್ಯವಹಾರವಲ್ಲ, ವ್ಯಸನವಲ್ಲ. ಜೀವನಶಕ್ತಿ.
ಒಟ್ಟಾರೆ ಒಲವೇಜೀವನ ಸಾಕ್ಷಾತ್ಕಾರ. ಹೇಗೆ? ಓದಿ, ಪ್ರೀತಿಸುವ ಕಲೆ. ಕನ್ನಡದಲ್ಲಿಯೂ ಅನುವಾದವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...