Homeಮುಖಪುಟಪ್ರೀತಿಸುವ ಕಲೆ - ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

- Advertisement -
- Advertisement -

ಜಗತ್ತಿನಲ್ಲಿ ಅಗತ್ಯದ ಅಥವಾ ಸಾಂತ್ವನ ನೀಡುವಂತಹ ಅನೇಕ ಪರಿಕಲ್ಪನೆಗಳು ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ದೇವರು, ಧರ್ಮ, ಸಂಬಂಧಗಳ ಮೌಲ್ಯ, ರಾಜಕೀಯ, ಸಂಸ್ಕೃತಿ ಇತ್ಯಾದಿಗಳಂತೆ ಪ್ರೀತಿಯೂ ಕೂಡಾ.

ಮೋಹ, ಕಾಮ, ವ್ಯಾಮೋಹ, ಇಷ್ಟ ಇತ್ಯಾದಿಗಳನ್ನೆಲ್ಲಾ ಪ್ರೀತಿ ಎಂದುಕೊಂಡುಬಿಡುವ ಉದಾಹರಣೆಗಳಿವೆ. ಹಾಗೆಯೇ ಪ್ರೀತಿಯೆಂದುಕೊಂಡು ವ್ಯಕ್ತಿಗೋ, ಸಿದ್ಧಾಂತಕ್ಕೋ ಅಥವಾ ಇನ್ನಾವುದಕ್ಕೋ ಅಂಟಿಕೊಂಡು ಅದು ಗೀಳಾಗಿ ಮನೋರೋಗವಾಗಿವೆ. ನಾನು ಪ್ರೀತಿಸುತ್ತೇನೆ ಎಂದು ವ್ಯಕ್ತಿಯನ್ನು ಬಂಧನದಲ್ಲಿಟ್ಟುಕೊಂಡು ಪೆÇಸೆಸ್ಸಿವ್ ಆಗಿರುವುದನ್ನು ಕಂಡಿದ್ದೇವೆ.

ಹಾಗಾದರೆ ಪ್ರೇಮವೆಂದರೆ ಏನು? ವ್ಯಾಖ್ಯಾನಕ್ಕೆ ಮೀರಿದ್ದು ಅಂತ ಉನ್ನತೀಕರಿಸಿ, ಅರಿಯುವ ಬದಲು ಅಪಾರ್ಥದಲ್ಲೇ ಬೆಚ್ಚಗಿಟ್ಟುಕೊಳ್ಳುವ ಧೋರಣೆಯಿಂದ ಪ್ರೀತಿ ಉನ್ನತ ಕ್ಲೀಷೆಯಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಅಚ್ಚುಕಟ್ಟಾಗಿ ಅರಿವಿನ ಒಳನೋಟವನ್ನು ಕೊಡಲು ತನ್ನ ಆರ್ಟ್ ಆಫ್ ಲವ್ಹಿಂಗ್ (1956) ಪುಸ್ತಕದಲ್ಲಿ ಪ್ರಯತ್ನಿಸಿದ್ದಾರೆ.

ಪ್ರೀತಿ ಎಂಬ ಪರಿಕಲ್ಪನೆಯನ್ನು ಬರೀ ಗಂಡುಹೆಣ್ಣುಗಳ ನಡುವಿನ ಆಕರ್ಷಣೆಯಿಂದ ಬಿಡುಗಡೆಗೊಳಿಸಿ ಉದಾತ್ತಗೊಳಿಸಿದ ಕೀರ್ತಿ ಯೇಸುಕ್ರಿಸ್ತನಿಗೇ ಸಲ್ಲುತ್ತದೆ. ಅವನಿಗೂ ಮುನ್ನ ಭಾರತೀಯ ಮತ್ತು ಇತರ ತತ್ವಶಾಸ್ತ್ರ ಮತ್ತು ಪುರಾಣಗಳಲ್ಲಿ ಕಾಮ ಮತ್ತು ನಿಷ್ಕಾಮವನ್ನು, ಪ್ರೇಮಿಗಳ ಪ್ರೇಮ, ಇತರ ಸಂಬಂಧಗಳೊಡನೆ ವಾತ್ಸಲ್ಯ ಅಥವಾ ವ್ಯಾಮೋಹ ನೋಡಬಹುದಿತ್ತು. ವಾತ್ಸಾಯನನ ಕಾಮಶಾಸ್ತ್ರದಲ್ಲಿ ಕಾಮದಾನಂದ ಪಡೆಯಬೇಕಾದರೆ ಸಂಗಾತಿಗಳು ಪರಸ್ಪರ ಇರಬೇಕಾಗಿರುವ ಧೋರಣೆಯನ್ನು ವಿವರಿಸುತ್ತಾನೆ. ಆದರೆ ಅನಿರ್ಬಂಧಿತ ಅಥವಾ ಕಟ್ಟಳೆಗಳಿಲ್ಲದ ಪ್ರೇಮದ ಪಾಠ ಆಗಿದ್ದು ಕ್ರಿಸ್ತನಿಂದ. ಅದನ್ನೇ ಮುಂದುವರಿಸಿ ಮನಶಾಸ್ತ್ರಜ್ಞನೂ ಮತ್ತು ಸಮಾಜ ತತ್ವಜ್ಞಾನಿಯೂ ಆದ ಎರಿಕ್ ಫ್ರಾಂ ಮನೋವೈಜ್ಞಾನಿಕವಾಗಿ ಸಾಮಾಜಿಕ ವರ್ತನಾ ಶಾಸ್ತ್ರದಲ್ಲಿ ಹೇಳುತ್ತಾರೆ.

ಎರಿಕ್ ಪ್ರೀತಿಸುವ ಕಲೆಯನ್ನು ಹೇಳಿಕೊಡುವ ಮುನ್ನ ಪ್ರೀತಿಸುವುದರಲ್ಲಿರುವ ಸಮಸ್ಯೆಗಳನ್ನು ಮೊದಲು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಹೌದು, ಪ್ರೀತಿಸಲ್ಪಡುವ ಆನಂದಕ್ಕೆ ಆಸೆಪಟ್ಟು ಪ್ರೀತಿಸುವ ಕಲೆಯನ್ನು ಉಪೇಕ್ಷಿಸಿಬಿಡುತ್ತಾರೆ. ಬೇರೆ ಜೀವನಕ್ಕೆ ಅಗತ್ಯವಿರುವ ಎಷ್ಟೋ ವಿದ್ಯೆಗಳನ್ನು ಕಲಿಯುತ್ತಾ ಪ್ರೀತಿಸುವ ಕಲೆಯನ್ನು ಕಲಿಯಲು ಸಮಯ ಕೊಡುವುದಿಲ್ಲ. ಪ್ರೀತಿಸುವುದು (ಸಿನಿಮಾಗಳಲ್ಲಿ ತೋರಿಸುವಂತೆ) ಬಹಳ ಕಷ್ಟ, ತುಂಬಾ ಒದ್ದಾಡಿ ಹೋರಾಡಿದ ಮೇಲೆ ಕೊನೆಗೆ ಪ್ರೇಮಿಗಳು ಒಂದಾಗುತ್ತಾರೆ ಎಂಬ ಮನಸ್ಥಿತಿ.

ನಿಜವಾದ ಪ್ರೇಮದಲ್ಲಿ ಬೀಳುವುದಲ್ಲ, (ಫಾಲಿಂಗ್ ಇನ್ ಲವ್ಹ್) ಬದಲಾಗಿ ಹೇಗೆ ಪ್ರೇಮದಲ್ಲಿ ತೊಡಗಿಸಿಕೊಳ್ಳುವುದು ಎಂಬುದನ್ನು ನೋಡಬೇಕೆನ್ನುತ್ತಾರೆ. ಇದು ಸುಲಭವಲ್ಲ ನಿಜ. ಆದರೆ, ಇದು ಅಸ್ತಿತ್ವದ ಅರ್ಥವನ್ನು ಅನಾವರಣ ಮಾಡುತ್ತಾ ಮಾನವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುತ್ತಾ ತೃಪ್ತ ಮತ್ತು ಸ್ವಾಸ್ಥ ಮನಸ್ಸನ್ನು ದೃಢಗೊಳಿಸುತ್ತದೆ. ಇನ್ನೇನು ಬೇಕು?

ಪ್ರೇಮ ಜೀವನಪೂರ್ತಿ ತೊಡಗಿಸಿಕೊಳ್ಳಬೇಕಾಗಿರುವ ಸೃಜನಶೀಲ ಯೋಜನೆ ಎನ್ನುವ ಎರಿಕ್ ಫ್ರಾಂ ‘ಪ್ರೀತಿಸುವುದ ತಿಳಿಯದೇ ಪ್ರೀತಿಗೊಳಗಾಗುವ ಆತುರ ನಮ್ಮ ಪ್ರೀತಿಪಾತ್ರರನ್ನು ಹೇಗೆ ನೋಯಿಸುತ್ತದೆ’ ಎಂದು ವಿವರಿಸುತ್ತಾರೆ. ಸೋದರ ಪ್ರೇಮ, ಕುಟುಂಬ ಪ್ರೇಮ, ಸತಿ ಪತಿ ಪ್ರೇಮ ಇತ್ಯಾದಿಗಳೆಲ್ಲವೂ ಒಂದೇ ಪ್ರೇಮದ ಒಂದೇ ಮೂಲವನ್ನು ಹೊಂದಿದ್ದು ವಿವಿಧ ಹೊಣೆಗಾರಿಕೆ ಮತ್ತು ಅಭಿವ್ಯಕ್ತತೆಗಳಿಂದ ಬೇರೆಯಾಗಿ ತೋರುತ್ತದೆ ಎಂದು ವಿವರಿಸುತ್ತಾರೆ.

ಅಪ್ರಬುದ್ಧ ಪ್ರೇಮ ಹೇಳುವುದೇನೆಂದರೆ, ಗಿವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್ ತರ, ನನ್ನ ಪ್ರೀತಿಸಿದರೆ ನಾನು ಪ್ರೀತಿಸುತ್ತೇನೆ ಎಂದು. ಆದರೆ ಪಕ್ವವಾದ ಪ್ರೇಮವು ತನಗೆ ಪ್ರೀತಿಸಲು ಸಾಧ್ಯ, ಪ್ರೀತಿಸುತ್ತೇನೆ’ ಎಂಬುದು.

ಪ್ರೇಮವೆಂಬುದು ಇದ್ದಕ್ಕಿದ್ದಂತೆ ಆಗಿಬಿಡುವುದಲ್ಲ. ಅದೊಂದು ಗ್ರಹಿಕೆ, ತಿಳಿವಳಿಕೆ ಮತ್ತು ತರಬೇತಿಗಳ ಪ್ರಕ್ರಿಯೆಯ ಮನೋಭಾವದ ರೂಪ. ಆದ್ದರಿಂದಲೇ ಸಂಗೀತ, ನೃತ್ಯ, ವಿಜ್ಞಾನಗಳನ್ನೆಲ್ಲಾ ಕಲಿಯುವಂತೆ ಪ್ರೀತಿಸುವುದನ್ನೂ ಪ್ರಜ್ಞಾಪೂರ್ವಕವಾಗಿ ಕಲಿಯಬೇಕು ಎನ್ನುತ್ತಾರೆ.

ಪ್ರೇಮವೆಂಬುದು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಾವು ಹೊಂದುವ ಸಂಬಂಧದ ತೀವ್ರ ಪ್ರಭಾವವೋ, ಭಾವ ತೀವ್ರತೆಯೋ ಖಂಡಿತ ಅಲ್ಲ. ಬದಲಾಗಿ ಅದೊಂದು ಧೋರಣೆ ಅಥವಾ ದೃಷ್ಟಿ.

ಒಟ್ಟಾರೆ ಪ್ರೀತಿಯೆಂಬುದು ವ್ಯವಹಾರವಲ್ಲ, ವ್ಯಸನವಲ್ಲ. ಜೀವನಶಕ್ತಿ.
ಒಟ್ಟಾರೆ ಒಲವೇಜೀವನ ಸಾಕ್ಷಾತ್ಕಾರ. ಹೇಗೆ? ಓದಿ, ಪ್ರೀತಿಸುವ ಕಲೆ. ಕನ್ನಡದಲ್ಲಿಯೂ ಅನುವಾದವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...