Homeಕರ್ನಾಟಕರಾಯಚೂರಿನಲ್ಲಿ ಅನಾವರಣಗೊಂಡ ಅಲೆಮಾರಿಗಳ ಸಾಂಸ್ಕೃತಿಕ ಕಲೆ

ರಾಯಚೂರಿನಲ್ಲಿ ಅನಾವರಣಗೊಂಡ ಅಲೆಮಾರಿಗಳ ಸಾಂಸ್ಕೃತಿಕ ಕಲೆ

- Advertisement -
- Advertisement -

ಅವರು ಅಲೆಮಾರಿಗಳು, ಒಂದು ಕಡೆ ನಿಂತವರಲ್ಲ, ನಿಲ್ಲುವವರೂ ಅಲ್ಲ, ನೆಲೆ ನಿಂತರೂ ಒಂದು ಹಗಲು ಒಂದು ರಾತ್ರಿ ಮಾತ್ರ. ಮತ್ತೆ ಮನಸ್ಸು ಹರಿದತ್ತ ಹೆಜ್ಜೆ ಹಾಕುತ್ತಲೇ ಬದುಕು ಕಟ್ಟಿಕೊಂಡವರು. ಆಧುನಿಕತೆ ವ್ಯಾಪಿಸಿದಂತೆ ಈ ಅಲೆಮಾರಿ ಕುಟುಂಬಗಳು ನೆಲೆ ಕಂಡುಕೊಂಡು ಅವರ ಮಕ್ಕಳು ಶಾಲೆಯ ಮುಖವನ್ನು ಕಾಣುವಂತೆ ಆಗಿದೆ. ಇಂತಹ ಅಲೆಮಾರಿ ಸಮುದಾಯ ತಮ್ಮ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಡುವ, ಸಾಂಸ್ಕೃತಿಕ ಕಲೆಗಳನ್ನು ನಗರೀಕರಣದ ಮುಂದೆ ಅನಾವರಣಗೊಳಿಸುವ ಕೆಲಸ ರಾಯಚೂರಿನಲ್ಲಿ ನಡೆಯಿತು. ನೆಲಮೂಲ ಸಂಸ್ಕೃತಿಯ ಒಂದೊಂದು ಕಲೆಯೂ ನಗರೀಕರಣಕ್ಕೆ ಸವಾಲೊಡ್ಡುವ ರೀತಿಯಲ್ಲಿ ವ್ಯಕ್ತವಾಯಿತು.

ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವ ಬಗೆಬಗೆಯ ಬುಡಕಟ್ಟುಗಳು ಮತ್ತು ಅಲೆಮಾರಿ ಸಮುದಾಯ ತಮ್ಮಲ್ಲಿನ ಸಾಂಸ್ಕೃತಿಕ ಸಂಪತ್ತನ್ನು ಪ್ರದರ್ಶನಗೊಳಿಸುವುದಕ್ಕೆ ವೇದಿಕೆ ಒದಗಿಸಲಾಗಿತ್ತು. ಸ್ಲಂ ಜನಾಂದೋಲನ – ಕರ್ನಾಟಕ ನೇತೃತ್ವದಲ್ಲಿ ನಮ್ ಹಾಡು, ನಮ್ ಕುಣಿತ, ನಮ್ ಖುಷಿ ಶೀರ್ಷಿಕೆಯಡಿ ಸಾಂಸ್ಕೃತಿಕ ಕಲೆಗಳ ಸ್ಲಂಹಬ್ಬ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಅಳಿವಿನಂಚಿನಲ್ಲಿರುವ ಹಕ್ಕಿಪಿಕ್ಕಿಯವರ ಕಾಡಿನ ಹಾಡುಗಳು, ಪೋತರಾಜರ ನೃತ್ಯ, ಅಸ್ಪೃಶ್ಯಯ ಸಮುದಾಯಕ್ಕೆ ಸೇರಿದ ದರವೇಸಿಗಳ ಜನಸಮೂಹದ ಕಷ್ಟಕೋಟಲೆಗಳನ್ನು ಒಳಗೊಂಡ ಕವಾಲಿಗಳು, ಸುಡುಗಾಡು ಸಿದ್ದರ ಮಾಯಾಜಾಲ ಅಥವಾ ಕಣ್ಕಟ್ಟು, ಶಿಳ್ಳೇಕ್ಯಾತರ ಆಟಗಳು, ದುರ್ಗಿಮುರ್ಗಿಯ ಕುಣಿತ, ಲಂಬಾಣಿ ಜನರ ಕೋಲಾಟ, ಮಂಗಳಮುಖಿಯರ ಕಲೆಗಳು ವೇದಿಕೆಯಲ್ಲಿ ಅನಾವರಣಗೊಂಡು ಪ್ರೇಕ್ಷಕರ ಗಮನ ಸೆಳೆದವು.

2007 ರಿಂದ ಆರಂಭವಾಗಿರುವ ಸ್ಲಂಹಬ್ಬ ಇದುವರೆಗೆ ಮೂರು ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಸ್ಲಂಹಬ್ಬ ಗಳನ್ನು ಆಯೋಜಿಸಿ ರಾಜ್ಯದ ಗಮನ ಸೆಳೆಯಲಾಗಿದೆ. ಈ ಮೂಲಕ ಅಲೆಮಾರಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ನಗರದ ಜಂಝಡದ ಗದ್ದಲದ ನಡುವೆ ಶ್ರಮದಾನದಿಂದಲೇ ನಲುಗಿ ಹೋಗುತ್ತಿರುವ ಈ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಮುಖ್ಯವಾಹಿನಿಗೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ಸ್ಲಂಹಬ್ಬಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಡೊಮಿನಿಕ್, “ಅಸ್ಪೃಶ್ಯರು ಮತ್ತು ಅಲೆಮಾರಿ ಸಮುದಾಯಗಳ ಕಲಾ ಪ್ರಕಾರಗಳು ಸ್ಥಾಪಿತ ಪರಂಪರೆ, ಅಮಾನವೀಯ ಸಾಂಸ್ಕೃತಿಕ ಪರಿಸರವನ್ನು ಬದಿಗೆ ಸರಿಸಿ, ಕೇವಲ ಮನೋರಂಜನೆಗಾಗಿ ಪ್ರದರ್ಶನಗೊಳ್ಳುವ ಕಲೆಗಳೆಂದು ಭಾವಿಸಲಾಗಿದ್ದ ಆಚರಣೆಗಳನ್ನು ಇಂದು ಸ್ಲಂ-ನಿವಾಸಿಗಳು ತಮ್ಮ ದುಡಿಮೆ ಸಾಂಸ್ಕೃತಿಕ ಗುರುತುಗಳನ್ನಾಗಿ ನೆಲೆಗೊಳಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ, ಆ ಕಲೆಗಳ ಹಿಂದಿರುವ ಶ್ರೀಮಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಮತ್ತೆ ಹೊಸ ಸಮಾಜ ನಿರ್ಮಾಣಕ್ಕೆ ಕೊಳಗೇರಿ ಸಮುದಾಯಗಳು ತೊಡಗಿರುವುದನ್ನು ನಾವು ನೋಡಬಹುದು” ಎಂದು ಹೇಳಿದ್ದಾರೆ.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ನಾನುಗೌರಿ.ಕಾಂ ಜೊತೆ ಮಾತನಾಡಿ ನಗರದಲ್ಲಿ ಅಲೆಮಾರಿ ಸಂಸ್ಕೃತಿಗಳ ಮೇಲೆ ದಾಳಿ, ದೌರ್ಜನ್ಯ ದಬ್ಬಾಳಿಕೆ ನಡೆದರೂ ಅದರ ವಿರುದ್ಧವೇ ತಿರುಗಿಬಿದ್ದಿರುವ ನೆಲಮೂಲ ಸಂಸ್ಕೃತಿಯ ಕಲೆಯ ಅನಾವರಣದ ಮೂಲಕ ಈ ಸಮುದಾಯದ ಜನರಿಗೆ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಆಧುನಿಕತೆಯ ಪರಿಣಾಮ ಅಲೆಮಾರಿಗಳು ಇಂದು ನೆಲೆ ನಿಲ್ಲುವಂತಹ ಸ್ಥಿಗೆ ಬರುವಂತೆ ಆಗಿದೆ. ಇದರಿಂದ ಆಧಾರ್, ರೇಷನ್ ಕಾರ್ಡುಗಳು ದೊರೆತಿವೆ. ಕೆಲ ಸಮುದಾಯಗಳಿಗೆ ಈ ಸೌಲಭ್ಯಗಳು ದೊರೆತಿಲ್ಲ. ಅಲೆಮಾರಿ ಕುಟುಂಬಗಳ ಮಕ್ಕಳು ಶಾಲೆಯ ಮುಖ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಪ್ರತಿವರ್ಷ ಸರ್ಕಾರಗಳು ಕೊಳೆಗೇರಿಗಳಲ್ಲಿ ವಾಸಿಸುವ ಅಲೆಮಾರಿಗಳ ಶೈಕ್ಷಣಿಕ ಮೊದಲಾದ ಅಭಿವೃದ್ಧಿ ಕೆಲಸಗಳಿಗೆ 50-70 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಈ ಹಣದಲ್ಲಿ ಕೇವಲ ಪ್ರತಿಶತ 20ರಷ್ಟು ಹಣ ಮಾತ್ರ ವೆಚ್ಚವಾಗುತ್ತಿದೆ. ಉಳಿದ ಹಣ ಸರ್ಕಾರಕ್ಕೆ ವಾಪಸ್ಸಾಗುತ್ತಿದೆ. ಕಾರಣ ಅಲೆಮಾರಿ ಸಮುದಾಯ ಶಿಕ್ಷಣ ಪಡೆದಿಲ್ಲ. ಹಾಗಾಗಿ ಸರ್ಕಾರ ಕೇಳುವ ದಾಖಲೆಗಳು ಅವರ ಬಳಿ ಸಿಗುತ್ತಿಲ್ಲ. ಇದು ಕೂಡ ಅಲೆಮಾರಿ ಗಳಿಗೆ ಮೀಸಲಿಟ್ಟ ಹಣ ಹಾಗೇ ಉಳಿಯಲು ಕಾರಣ’ ಎಂದು ತಿಳಿಸಿದರು.

ಸರ್ಕಾರ ಭೂ ಮಂಜೂರಾತಿ ಕೊಡುತ್ತಿದೆ. ಅಲೆಮಾರಿ ಸಮುದಾಯಗಳಿಗೂ ಭೂಮಿ ಕೊಡಬೇಕು. ಘನತೆ ಗೌರವದಿಂದ ಬದುಕಲು ವಸತಿ ವ್ಯವಸ್ಥೆ ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಿದರೆ ಈ ಸಮುದಾಯಗಳ ಅಭಿವೃದ್ಧಿ ಸಾಧ್ಯ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಅಲೆಮಾರಿಗಳಲ್ಲಿ ಕೆಲ ಸಮುದಾಯಗಳು ಹಿಂದುಳಿದ ವರ್ಗಕ್ಕೆ ಬರುತ್ತವೆಯೇ? ಪರಿಶಿಷ್ಟ ಸಮುದಾಯಕ್ಕೆ ಸೇರುತ್ತವೆಯೇ ಎಂಬುದೇ ಗೊತ್ತಿಲ್ಲ. ಇದು ಕೂಡ ಈ ಅಲೆಮಾರಿಗಳು ಹಿಂದುಳಿಯಲು ಕಾರಣವಾಗಿದೆ. ಸರ್ಕಾರ ಈಗಲಾದರೂ ಅಲೆಮಾರಿಗಳ ಜನಗಣತಿ ಮಾಡಿ ಅವರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕಾಗಿದೆ.


ಇದನ್ನೂ ಓದಿ; ತುಮಕೂರಿನಲ್ಲಿ ‘ಕೆ.ಬಿ. ಕಾವ್ಯ: ಕಣ್ಣು ಧರಿಸಿ ಕಾಣಿರೋ’ ಕೃತಿ ಬಿಡುಗಡೆಗೊಳಿಸಿದ ನಟರಾಜ್ ಬೂದಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...