Homeಮುಖಪುಟಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

ಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

- Advertisement -
- Advertisement -

ರೈತ ಸಂಘಟನೆಗಳ‌ ಹೊಣೆಯ ಕುರಿತು

ದೆಹಲಿಯ ಅಂಚಿನಲ್ಲಿ ನಡೆಯುತ್ತಿರುವ ಕಿಸಾನ್ ಸತ್ಯಾಗ್ರಹದ ತಾಣದಲ್ಲಿ ದಲಿತ ಸಿಖ್ಖನೊಬ್ಬನನ್ನು ನಿಹಾಂಗ್ ಪಂಥದವರು ಚಿತ್ರಹಿಂಸೆ ಕೊಟ್ಟು ಸಾಯಿಸಿದ ಘಟನೆಯ ನೈತಿಕ ಹೊಣೆಯನ್ನು ಕಿಸಾನ್ ಸಂಯುಕ್ತ ಮೋರ್ಚಾ ಹೊರಬೇಕಿದೆ. ಅದರಲ್ಲೂ ಪಂಜಾಬಿನ ವಿವಿಧ ರೈತ ಸಂಘಟನೆಗಳು ಈ ಬಗ್ಗೆ ತೀವ್ರ ಆತ್ಮಾವಲೋಕನ ಮಾಡಬೇಕಿದೆ.

ನಿಹಾಂಗ್ ಪಂಥದ ವರ್ತನೆ ಹೊಸದೇನಲ್ಲ. ಪರಿಶುದ್ಧತೆಯ ಅಮಲು ನರನಾಡಿಗಳಲ್ಲಿ ತುಂಬಿಕೊಂಡಿರುವ ಈ ಪಂಥ ಒಟ್ಟಾರೆ ಭಾರತದ ಜಾತಿ ವ್ಯಸನದ ಬಹಿರಂಗ ಹುಣ್ಣು. ಆಗಾಗ್ಗೆ, ದೇಶದ ವಿವಿಧೆಡೆ ಇಂಥಾ ಅಸಮಾನತೆಯನ್ನು ಕಾಪಾಡುವ ಕ್ರೌರ್ಯ ನಡೆಯುತ್ತಲೇ ಇದೆ. ಹಿಂದೂ ಧರ್ಮದ ಈ ವೈರಸ್ ವಿರುದ್ಧವೇ ಹುಟ್ಟಿದ ಸಿಖ್ಖ್ ಧರ್ಮವೂ ಇದೇ ರೋಗಕ್ಕೆ ಬಲಿಯಾಗಿರುವುದು ಈ ದೇಶದ ವೈದಿಕ ಶಾಹಿಯ ಶಕ್ತಿಯ ದ್ಯೋತಕ. ನಮ್ಮಲ್ಲಿ ಶರಣ ಚಳವಳಿಯೂ ಈಗ ಇಂಥದೇ ಜಾತಿ ಗುರುತು/ ಹಕ್ಕೊತ್ತಾಯದ ಕೊಳಚೆ ಗುಂಡಿಯಾಗಿದೆ.
ಮೇಲ್ಜಾತಿಯಲ್ಲಿ ಒಂದು ದೊಡ್ಡ ಮಟ್ಟದ ಪಶ್ಚಾತ್ತಾಪವನ್ನು ಸೃಷ್ಟಿಸಿಯೇ ಈ ಹೊಸ ಪಂಥಗಳು ಹುಟ್ಟಿದ್ದು. ಆದರೆ ಕಾಲಾಂತರದಲ್ಲಿ ಹಿಂದೂ ಜಾತಿ ರೋಗಕ್ಕೆ ಇವೂ ತುತ್ತಾಗಿರುವುದು ಹೊಸ ಸಂಶೋಧನೆಯೇನೂ ಅಲ್ಲ.

ಎಲ್ಲೆಡೆ ಭೂಮಿ ಹೊಂದಿರುವ ಮೇಲ್ಜಾತಿ / ಮಧ್ಯಮ ಜಾತಿಗಳ ರೈತರೇ ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಚಾರಿತ್ರಿಕವಾಗಿ ಇದು ಸಹಜ. ಈ ಜಾತಿಗಳೇ ಬಹುತೇಕ ಗ್ರಾಮಭಾರತದಲ್ಲಿ ದಲಿತರ / ಭೂರಹಿತ ಕಾರ್ಮಿಕರ ದಮನ, ಶೋಷಣೆಯ ವಾರಸುದಾರರು. ಪುರೋಹಿತಶಾಹಿ ಇದಕ್ಕೆ ಪಾರಂಪರಿಕ ಕಂದಾಚಾರದ ಒಪ್ಪಿಗೆಯ ಅಧಿಕೃತತೆಯ ಮುದ್ರೆ ಒತ್ತುತ್ತಿರುತ್ತದೆ. ಇದೂ ಗೊತ್ತಿರುವ ಸಂಗತಿಯೇ.

ಲಾಡು ಮುಟ್ಟಿದ್ದಕ್ಕೆ, ಮಗು ಅಚಾನಕವಾಗಿ ದೇಗುಲ ಪ್ರವೇಶಿಸಿದ್ದಕ್ಕೇ ಕ್ರೌರ್ಯ ತೋರಿಸುವ ಮೇಲ್ಜಾತಿಗಳ ವರ್ತನೆ ಅವುಗಳೇ ಪ್ರಧಾನ ಪಾತ್ರ ವಹಿಸಿರುವ ರೈತ ಸಂಘಗಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಹಾಗಿರುವಾಗ ಈ ವರ್ತನೆ ಸ್ಫೋಟವಾಗುವವರೆಗೂ ಏನೂ ಘಟಿಸುವುದಿಲ್ಲ ಎಂಬಂತೆ ಇದ್ದು, ಇಂಥಾ ಕ್ರೌರ್ಯ ಘಟಿಸಿದಾಗ, ಅಯ್ಯೋ, ಇವರು ನಮ್ಮವರಲ್ಲ ಎಂದು ಹೇಳುವುದು ಜಾಣತನವಾಗುತ್ತದೆ.

ಅಪರೂಪದ ವೈರಸ್ ಒಂದು ಸೂರತ್ತಿನಲ್ಲೋ ಕೇರಳದಲ್ಲೋ ಕಾಣಿಸಿಕೊಂಡಾಗ ಎಲ್ಲಾ ರಾಜ್ಯಗಳಲ್ಲೂ ಅದನ್ನು ತಡೆಯುವ ಸಮರೋಪಾದಿ ಉಪಕ್ರಮಗಳನ್ನು ಕೈಗೊಳ್ಳುವುದು ನಾವು ಕಂಡಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಇದು ಸಾಧ್ಯ ಎಂದಾದರೆ ಸಾಮಾಜಿಕ ಸಂಬಂಧಗಳಲ್ಲಿ ಇಂಥಾ ಪ್ರೋಆಕ್ಟಿವ್ ಕ್ರಮಗಳಿಗೆ ಉದಾಸೀನ ಯಾಕೆ?

ಪಂಜಾಬಿನ ಸಿಖ್ ಪಂಥದ ಅತಿರೇಕಿಗಳ ಕ್ರೌರ್ಯ ಇಂದು ಕಾಣಿಸಿದರೆ, ಉತ್ತರಪ್ರದೇಶದ ಖಾಪ್ ಪಂಚಾಯತುಗಳ ಕ್ರೌರ್ಯ ಘಟಿಸಲು ಹೆಚ್ಚು ಸಮಯ ಬೇಕಿಲ್ಲ.
ಕರ್ನಾಟಕದಲ್ಲಿ ಮಹಾ ಸೆಕ್ಯುಲರ್ ಮತ್ತು ಪ್ರಗತಿಪರರಾಗಿದ್ದ ಪ್ರೊಫೆಸರ್ ನಾಯಕತ್ವದ ರೈತ ಸಂಘಕ್ಕೂ ದಲಿತ/ ಕೂಲಿಕಾರರನ್ನು ಒಳಗೊಳ್ಳುವ ಕೆಲಸ ಸಾಧ್ಯವಾಗಲಿಲ್ಲ. ತನ್ನ ಹಿತಾಸಕ್ತಿಯ ಸಮುದಾಯಗಳಲ್ಲಿ ಒಂದು ಸಾಮಾಜಿಕ ಸಂಬಂಧದ ಮಾನಸಿಕ ಬದಲಾವಣೆಯನ್ನು ಪ್ರೇರೇಪಿಸದಿದ್ದರೆ ಈ ಚಳವಳಿಯೂ ಅರ್ಥಹೀನವಾಗುತ್ತದೆ.

ಗಾಂಧೀಜಿಯವರ ಬಗ್ಗೆ ಎಷ್ಟೇ ತಕರಾರುಗಳಿದ್ದರೂ ಅವರು ಆ ಕಾಲದಲ್ಲಿ ತಾನು ಆರಂಭಿಸಿದ ಚಳವಳಿ ಮೂಲ ಶಿಸ್ತಿನಿಂದ ದೂರ ಸರಿದ ಒಂದೇ ಘಟನೆಯ ಕಾರಣಕ್ಕೆ ಸಮುದಾಯಗಳು ಸಜ್ಜಾಗಿಲ್ಲ ಎಂದು ನಿರ್ಧರಿಸಿ ಚಳವಳಿಯನ್ನು ಬರಕಾಸ್ತುಗೊಳಿಸಿದ್ದರು. ಅಷ್ಟೇ ಅಲ್ಲ, ಪ್ರಭುತ್ವದ ಜೊತೆ ಹೋರಾಟ ನಡೆಸುತ್ತಿದ್ದಾಗ ಆಂತರಿಕವಾಗಿ ಸಾಮಾಜಿಕ ಸಂಬಂಧಗಳ ಸುಧಾರಣೆಯ ಬಗ್ಗೆ ಅರಿವು ಮೂಡಿಸಿದರು. ಈ ಕಾರಣಕ್ಕೇ ಮೇಲ್ಜಾತಿಗಳ ಮುಕುಟ ಮಣಿಯಂತಿದ್ದ ಆ ಕಾಲದ ಓದಿದ ಧೀಮಂತರು, ತಮ್ಮ ತಮ್ಮ ಜಾತಿಗಳಿಗೆ ಮುಜುಗುರ ಉಂಟು ಮಾಡುವಷ್ಟುಸುಧಾರಣಾವಾದೀ ಮಾತುಗಳನ್ನಾಡಿದರು.

ಈಗ ನಮ್ಮ ರೈತ ಸಂಘಗಳು ದೆಹಲಿಯ ಈ ಕ್ರೌರ್ಯದ ಘಟನೆಯನ್ನು ಅಗುಳು ನೋಡಿ ಅನ್ನ ಬೆಂದಿತೇ ಎಂಬ ಸಾಮಿತಿಯಂತೆ ಇದೊಂದು ಭೀಕರ ದಲಿತ ದಮನದ ರೋಗ ಲಕ್ಷಣ ಎಂದು ಬಗೆದು ತಮ್ಮ ತಮ್ಮ ಊರುಗಳಲ್ಲಿ ದಲಿತರನ್ನು ಒಳಗೊಳ್ಳುವ ಕ್ರಮಗಳನ್ನು ಚಳವಳಿಯೋಪಾದಿಯಲ್ಲಿ ಕೈಗೊಳ್ಳಬೇಕು. ಕೇವಲ ಖಂಡನಾ ಹೇಳಿಕೆಗಳಿಂದ ದಲಿತರನೋವು, ಆತಂಕಗಳನ್ನು ದೂರ ಮಾಡುವುದು ಸಾಧ್ಯವಿಲ್ಲ.

ದೆಹಲಿಯ ಅಪರಾಧದ ದುಷ್ಕರ್ಮಿಗಳ ಬಂಧನವಾಗಿದೆ. ಆದರೆ ಈ ಪಂಥದವರಿಗೆ ಈ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ. ಇದೇ ವರ್ತನೆಯನ್ನು ಹಿಂದುತ್ವದ ಅತಿರೇಕಿಗಳಲ್ಲೂ ನಾವು ಕಂಡಿದ್ದೇವೆ. ಈ ಸಂವಿಧಾನ ವಿರೋಧಿ ಮಾನವತಾ ವಿರೋಧಿ ಶಕ್ತಿಗಳನ್ನು ಎದುರಿಸುವ ಹೆಜ್ಜೆಗಳು ತಳಮಟ್ಟದಿಂದ ಆರಂಭವಾಗಬೇಕು; ಈ ಶಕ್ತಿಗಳಿಗೆ ಸಂವಿಧಾನದ ಪಾಠ ಹೇಳಬೇಕು. ಈ ಹೊಣೆ ಮೇಲ್ಜಾತಿಗಳಿಗಿದೆ. ಅವುಗಳೇ ಹೆಚ್ಚಾಗಿರುವ ಸಂಘಟನೆಗಳಿಗಿದೆ.

– ಕೆ.ಪಿ.ಸುರೇಶ
ರಂಗನಾಥ ಕಂಟನಕುಂಟೆ
ಹುಲಿಕುಂಟೆ ಮೂರ್ತಿ
ನರಸಿಂಹ ಮೂರ್ತಿ. ವಿ.ಎಲ್


ನಿಹಾಂಗ್ ಸಿಂಗ್ ಪಂಥದ ಮತಾಂಧರು ದಲಿತ ಸಮುದಾಯದ ಲಕ್ಬೀರ್ ಸಿಂಗ್ ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕ್ರೌರ್ಯಕ್ಕೆ ಈ ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹ ಹೊಣೆಗಾರರು. ಸಾರ್ತೆ ‘ಎಶ್ಟು ಜನರನ್ನು ಸಾಯಿಸಲಾಗಿದೆ ಎಂಬುದು ಫ್ಯಾಸಿಸಂ ಅಲ್ಲ, ಅವರನ್ನು ಯಾವ ರೀತಿ ಕೊಲೆ ಮಾಡಲಾಗಿದೆ ಎಂಬುದು ಫ್ಯಾಸಿಸಂ’ ಎನ್ನುತ್ತಾನೆ. ದಲಿತ ಎನ್ನುವ ಕಾರಣಕ್ಕೆ ನಡೆದ ಲಕ್ಬೀರ್ ಸಿಂಗ್ ರ ಕೊಲೆಯ ಆ ಭೀಕರತೆಯೂ ಸಹ ಫ್ಯಾಸಿಸಂ ರೀತಿ. ಇದನ್ನು ನಮಗೆ ಸಂಬಂದವಿಲ್ಲ ಎಂದು ನಿರ್ಲಕ್ಷಿಸುವುದು ಸಹ ಭೀಕರತೆಯ ಪಾಲುದಾರಿಕೆಯಾಗುತ್ತದೆ.

ಕಳೆದ ಒಂದು ವರ್ಶದಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಮೂರು ಕರಾಳ ಕಾಯಿದೆಗಳು ಎಲ್ಲಾ ಜಾತಿ, ವರ್ಗದವರಿಗೂ ಮಾರಕ ಎಂದು ಮನಗಂಡು ಅನುಕೂಲಸ್ಥ ರೈತರಿಂದ ಮೊದಲುಗೊಂಡು, ದೊಡ್ಡ ಹಿಡುವಳಿದಾರರಾದ ಜಾಟ್ ರೈತರು, ಸಣ್ಣ, ಅತಿ ಸಣ್ಣ ರೈತರು, ಭೂ ರಹಿತ ದಲಿತರು, ಕೂಲಿ ಕಾರ್ಮಿಕರು ಸಹ ಸಕ್ರಿಯವಾಗಿ ಬಾಗವಹಿಸಿದ್ದಾರೆ. ಜಾತಿ ಹತ್ಯೆಯನ್ನು ಪೋಶಿಸುವ ಖಾಪ್ ಪಂಚಾಯಿತಿಯನ್ನು ಅದು ಈ ಮೂರು ಕರಾಳ ಕಾಯಿದೆ ವಿರುದ್ಧವಿದೆ ಎನ್ನುವ ಒಂದೇ ಕಾರಣಕ್ಕೆ ಬಿನ್ನಾಬಿಪ್ರಾಯ ಬದಿಗಿಟ್ಟು ಬೆಂಬಲಿಸಿದ್ದಾರೆ.

ಬಕಾಸುರ ಬಂಡವಾಳಶಾಹಿ – ಫ್ಯಾಸಿಸ್ಟ್ ಪ್ರಭುತ್ವದ ಮೈತ್ರಿಯ ದಬ್ಬಾಳಿಕೆ ವಿರುದ್ಧ ಒಂದು ದಿಟ್ಟ ಪ್ರತಿರೋಧ ವ್ಯಕ್ತವಾಗಿರುವುದು ಮತ್ತು ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಒಂದು ವರ್ಶದ ಕಾಲ ನಿರಂತರವಾಗಿ ಅದರ ಪ್ರಸ್ತುತತೆ ಉಳಿಸಿಕೊಂಡಿರುವುದು ಈ ಕಾಲಘಟ್ಟದ ಅಪರೂಪದ ವಿದ್ಯಾಮಾನ. ಇಂತಹ ಐಕ್ಯ ಹೋರಾಟವನ್ನು ಪ್ರಭುತ್ವ ಬಗ್ಗು ಬಡಿಯಲು ಕಾಯುತ್ತಿರುತ್ತದೆ ಎಂಬುದೂ ಸತ್ಯ. ಜನವರಿ 26, 2020ರ ಕೆಂಪುಕೋಟೆಯ ಘಟನೆ, ಲಕೀಂಪುರ ಕೊಲೆ ಮತ್ತು ಇದರ ಮುಂದುವರಿದ ಭಾಗವಾಗಿ ಲಕ್ಬೀರ್ ಸಿಂಗ್ ಹತ್ಯೆ.

ಅಥವಾ ಅದು ನಿಹಾಂಗ್ ಸಿಂಗ್ ಪಂಥೀಯರ ನಡುವಿನ ಜಗಳದ ಪರಿಣಾಮ ಎನ್ನುವ ವಾದಗಳು ಕೇಳಿ ಬರುತ್ತಿವೆ. ಇರಬಹುದು.

ಆದರೆ ಹೋರಾಟದ ಸ್ಥಳದಲ್ಲಿ ದಲಿತನ ಬರ್ಬರ ಹತ್ಯೆಯಾದಾಗ ಮೈ ಕೊಡುವಿಕೊಳ್ಳುವುದು ಅಮಾನವೀಯತೆ. ರೈತ ಹೋರಾಟದ ಇಂತಹ ವರ್ತನೆ ಅನೈತಿಕತೆಯಾಗುತ್ತದೆ. ಮುಖ್ಯವಾಗಿ ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಎಚ್ಚರ ವಹಿಸುವುದು ಸಹ ಅವರ ಹೊಣೆಗಾರಿಕೆಯಾಗುತ್ತದೆ.

ಮಾನವೀಯತೆ ಕಳೆದುಕೊಂಡ ಯಾವುದೇ ಹೋರಾಟ ಅಪ್ರಸ್ತುತವಾಗುತ್ತದೆ

  • ಬಿ.ಶ್ರೀಪಾದ್ ಭಟ್

ಇದನ್ನೂ ಓದಿ: ಸಿಂಘು ಗಡಿಯಲ್ಲಿ ದಲಿತನ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...