Homeಮುಖಪುಟಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

ಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

- Advertisement -
- Advertisement -

ರೈತ ಸಂಘಟನೆಗಳ‌ ಹೊಣೆಯ ಕುರಿತು

ದೆಹಲಿಯ ಅಂಚಿನಲ್ಲಿ ನಡೆಯುತ್ತಿರುವ ಕಿಸಾನ್ ಸತ್ಯಾಗ್ರಹದ ತಾಣದಲ್ಲಿ ದಲಿತ ಸಿಖ್ಖನೊಬ್ಬನನ್ನು ನಿಹಾಂಗ್ ಪಂಥದವರು ಚಿತ್ರಹಿಂಸೆ ಕೊಟ್ಟು ಸಾಯಿಸಿದ ಘಟನೆಯ ನೈತಿಕ ಹೊಣೆಯನ್ನು ಕಿಸಾನ್ ಸಂಯುಕ್ತ ಮೋರ್ಚಾ ಹೊರಬೇಕಿದೆ. ಅದರಲ್ಲೂ ಪಂಜಾಬಿನ ವಿವಿಧ ರೈತ ಸಂಘಟನೆಗಳು ಈ ಬಗ್ಗೆ ತೀವ್ರ ಆತ್ಮಾವಲೋಕನ ಮಾಡಬೇಕಿದೆ.

ನಿಹಾಂಗ್ ಪಂಥದ ವರ್ತನೆ ಹೊಸದೇನಲ್ಲ. ಪರಿಶುದ್ಧತೆಯ ಅಮಲು ನರನಾಡಿಗಳಲ್ಲಿ ತುಂಬಿಕೊಂಡಿರುವ ಈ ಪಂಥ ಒಟ್ಟಾರೆ ಭಾರತದ ಜಾತಿ ವ್ಯಸನದ ಬಹಿರಂಗ ಹುಣ್ಣು. ಆಗಾಗ್ಗೆ, ದೇಶದ ವಿವಿಧೆಡೆ ಇಂಥಾ ಅಸಮಾನತೆಯನ್ನು ಕಾಪಾಡುವ ಕ್ರೌರ್ಯ ನಡೆಯುತ್ತಲೇ ಇದೆ. ಹಿಂದೂ ಧರ್ಮದ ಈ ವೈರಸ್ ವಿರುದ್ಧವೇ ಹುಟ್ಟಿದ ಸಿಖ್ಖ್ ಧರ್ಮವೂ ಇದೇ ರೋಗಕ್ಕೆ ಬಲಿಯಾಗಿರುವುದು ಈ ದೇಶದ ವೈದಿಕ ಶಾಹಿಯ ಶಕ್ತಿಯ ದ್ಯೋತಕ. ನಮ್ಮಲ್ಲಿ ಶರಣ ಚಳವಳಿಯೂ ಈಗ ಇಂಥದೇ ಜಾತಿ ಗುರುತು/ ಹಕ್ಕೊತ್ತಾಯದ ಕೊಳಚೆ ಗುಂಡಿಯಾಗಿದೆ.
ಮೇಲ್ಜಾತಿಯಲ್ಲಿ ಒಂದು ದೊಡ್ಡ ಮಟ್ಟದ ಪಶ್ಚಾತ್ತಾಪವನ್ನು ಸೃಷ್ಟಿಸಿಯೇ ಈ ಹೊಸ ಪಂಥಗಳು ಹುಟ್ಟಿದ್ದು. ಆದರೆ ಕಾಲಾಂತರದಲ್ಲಿ ಹಿಂದೂ ಜಾತಿ ರೋಗಕ್ಕೆ ಇವೂ ತುತ್ತಾಗಿರುವುದು ಹೊಸ ಸಂಶೋಧನೆಯೇನೂ ಅಲ್ಲ.

ಎಲ್ಲೆಡೆ ಭೂಮಿ ಹೊಂದಿರುವ ಮೇಲ್ಜಾತಿ / ಮಧ್ಯಮ ಜಾತಿಗಳ ರೈತರೇ ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಚಾರಿತ್ರಿಕವಾಗಿ ಇದು ಸಹಜ. ಈ ಜಾತಿಗಳೇ ಬಹುತೇಕ ಗ್ರಾಮಭಾರತದಲ್ಲಿ ದಲಿತರ / ಭೂರಹಿತ ಕಾರ್ಮಿಕರ ದಮನ, ಶೋಷಣೆಯ ವಾರಸುದಾರರು. ಪುರೋಹಿತಶಾಹಿ ಇದಕ್ಕೆ ಪಾರಂಪರಿಕ ಕಂದಾಚಾರದ ಒಪ್ಪಿಗೆಯ ಅಧಿಕೃತತೆಯ ಮುದ್ರೆ ಒತ್ತುತ್ತಿರುತ್ತದೆ. ಇದೂ ಗೊತ್ತಿರುವ ಸಂಗತಿಯೇ.

ಲಾಡು ಮುಟ್ಟಿದ್ದಕ್ಕೆ, ಮಗು ಅಚಾನಕವಾಗಿ ದೇಗುಲ ಪ್ರವೇಶಿಸಿದ್ದಕ್ಕೇ ಕ್ರೌರ್ಯ ತೋರಿಸುವ ಮೇಲ್ಜಾತಿಗಳ ವರ್ತನೆ ಅವುಗಳೇ ಪ್ರಧಾನ ಪಾತ್ರ ವಹಿಸಿರುವ ರೈತ ಸಂಘಗಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಹಾಗಿರುವಾಗ ಈ ವರ್ತನೆ ಸ್ಫೋಟವಾಗುವವರೆಗೂ ಏನೂ ಘಟಿಸುವುದಿಲ್ಲ ಎಂಬಂತೆ ಇದ್ದು, ಇಂಥಾ ಕ್ರೌರ್ಯ ಘಟಿಸಿದಾಗ, ಅಯ್ಯೋ, ಇವರು ನಮ್ಮವರಲ್ಲ ಎಂದು ಹೇಳುವುದು ಜಾಣತನವಾಗುತ್ತದೆ.

ಅಪರೂಪದ ವೈರಸ್ ಒಂದು ಸೂರತ್ತಿನಲ್ಲೋ ಕೇರಳದಲ್ಲೋ ಕಾಣಿಸಿಕೊಂಡಾಗ ಎಲ್ಲಾ ರಾಜ್ಯಗಳಲ್ಲೂ ಅದನ್ನು ತಡೆಯುವ ಸಮರೋಪಾದಿ ಉಪಕ್ರಮಗಳನ್ನು ಕೈಗೊಳ್ಳುವುದು ನಾವು ಕಂಡಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಇದು ಸಾಧ್ಯ ಎಂದಾದರೆ ಸಾಮಾಜಿಕ ಸಂಬಂಧಗಳಲ್ಲಿ ಇಂಥಾ ಪ್ರೋಆಕ್ಟಿವ್ ಕ್ರಮಗಳಿಗೆ ಉದಾಸೀನ ಯಾಕೆ?

ಪಂಜಾಬಿನ ಸಿಖ್ ಪಂಥದ ಅತಿರೇಕಿಗಳ ಕ್ರೌರ್ಯ ಇಂದು ಕಾಣಿಸಿದರೆ, ಉತ್ತರಪ್ರದೇಶದ ಖಾಪ್ ಪಂಚಾಯತುಗಳ ಕ್ರೌರ್ಯ ಘಟಿಸಲು ಹೆಚ್ಚು ಸಮಯ ಬೇಕಿಲ್ಲ.
ಕರ್ನಾಟಕದಲ್ಲಿ ಮಹಾ ಸೆಕ್ಯುಲರ್ ಮತ್ತು ಪ್ರಗತಿಪರರಾಗಿದ್ದ ಪ್ರೊಫೆಸರ್ ನಾಯಕತ್ವದ ರೈತ ಸಂಘಕ್ಕೂ ದಲಿತ/ ಕೂಲಿಕಾರರನ್ನು ಒಳಗೊಳ್ಳುವ ಕೆಲಸ ಸಾಧ್ಯವಾಗಲಿಲ್ಲ. ತನ್ನ ಹಿತಾಸಕ್ತಿಯ ಸಮುದಾಯಗಳಲ್ಲಿ ಒಂದು ಸಾಮಾಜಿಕ ಸಂಬಂಧದ ಮಾನಸಿಕ ಬದಲಾವಣೆಯನ್ನು ಪ್ರೇರೇಪಿಸದಿದ್ದರೆ ಈ ಚಳವಳಿಯೂ ಅರ್ಥಹೀನವಾಗುತ್ತದೆ.

ಗಾಂಧೀಜಿಯವರ ಬಗ್ಗೆ ಎಷ್ಟೇ ತಕರಾರುಗಳಿದ್ದರೂ ಅವರು ಆ ಕಾಲದಲ್ಲಿ ತಾನು ಆರಂಭಿಸಿದ ಚಳವಳಿ ಮೂಲ ಶಿಸ್ತಿನಿಂದ ದೂರ ಸರಿದ ಒಂದೇ ಘಟನೆಯ ಕಾರಣಕ್ಕೆ ಸಮುದಾಯಗಳು ಸಜ್ಜಾಗಿಲ್ಲ ಎಂದು ನಿರ್ಧರಿಸಿ ಚಳವಳಿಯನ್ನು ಬರಕಾಸ್ತುಗೊಳಿಸಿದ್ದರು. ಅಷ್ಟೇ ಅಲ್ಲ, ಪ್ರಭುತ್ವದ ಜೊತೆ ಹೋರಾಟ ನಡೆಸುತ್ತಿದ್ದಾಗ ಆಂತರಿಕವಾಗಿ ಸಾಮಾಜಿಕ ಸಂಬಂಧಗಳ ಸುಧಾರಣೆಯ ಬಗ್ಗೆ ಅರಿವು ಮೂಡಿಸಿದರು. ಈ ಕಾರಣಕ್ಕೇ ಮೇಲ್ಜಾತಿಗಳ ಮುಕುಟ ಮಣಿಯಂತಿದ್ದ ಆ ಕಾಲದ ಓದಿದ ಧೀಮಂತರು, ತಮ್ಮ ತಮ್ಮ ಜಾತಿಗಳಿಗೆ ಮುಜುಗುರ ಉಂಟು ಮಾಡುವಷ್ಟುಸುಧಾರಣಾವಾದೀ ಮಾತುಗಳನ್ನಾಡಿದರು.

ಈಗ ನಮ್ಮ ರೈತ ಸಂಘಗಳು ದೆಹಲಿಯ ಈ ಕ್ರೌರ್ಯದ ಘಟನೆಯನ್ನು ಅಗುಳು ನೋಡಿ ಅನ್ನ ಬೆಂದಿತೇ ಎಂಬ ಸಾಮಿತಿಯಂತೆ ಇದೊಂದು ಭೀಕರ ದಲಿತ ದಮನದ ರೋಗ ಲಕ್ಷಣ ಎಂದು ಬಗೆದು ತಮ್ಮ ತಮ್ಮ ಊರುಗಳಲ್ಲಿ ದಲಿತರನ್ನು ಒಳಗೊಳ್ಳುವ ಕ್ರಮಗಳನ್ನು ಚಳವಳಿಯೋಪಾದಿಯಲ್ಲಿ ಕೈಗೊಳ್ಳಬೇಕು. ಕೇವಲ ಖಂಡನಾ ಹೇಳಿಕೆಗಳಿಂದ ದಲಿತರನೋವು, ಆತಂಕಗಳನ್ನು ದೂರ ಮಾಡುವುದು ಸಾಧ್ಯವಿಲ್ಲ.

ದೆಹಲಿಯ ಅಪರಾಧದ ದುಷ್ಕರ್ಮಿಗಳ ಬಂಧನವಾಗಿದೆ. ಆದರೆ ಈ ಪಂಥದವರಿಗೆ ಈ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ. ಇದೇ ವರ್ತನೆಯನ್ನು ಹಿಂದುತ್ವದ ಅತಿರೇಕಿಗಳಲ್ಲೂ ನಾವು ಕಂಡಿದ್ದೇವೆ. ಈ ಸಂವಿಧಾನ ವಿರೋಧಿ ಮಾನವತಾ ವಿರೋಧಿ ಶಕ್ತಿಗಳನ್ನು ಎದುರಿಸುವ ಹೆಜ್ಜೆಗಳು ತಳಮಟ್ಟದಿಂದ ಆರಂಭವಾಗಬೇಕು; ಈ ಶಕ್ತಿಗಳಿಗೆ ಸಂವಿಧಾನದ ಪಾಠ ಹೇಳಬೇಕು. ಈ ಹೊಣೆ ಮೇಲ್ಜಾತಿಗಳಿಗಿದೆ. ಅವುಗಳೇ ಹೆಚ್ಚಾಗಿರುವ ಸಂಘಟನೆಗಳಿಗಿದೆ.

– ಕೆ.ಪಿ.ಸುರೇಶ
ರಂಗನಾಥ ಕಂಟನಕುಂಟೆ
ಹುಲಿಕುಂಟೆ ಮೂರ್ತಿ
ನರಸಿಂಹ ಮೂರ್ತಿ. ವಿ.ಎಲ್


ನಿಹಾಂಗ್ ಸಿಂಗ್ ಪಂಥದ ಮತಾಂಧರು ದಲಿತ ಸಮುದಾಯದ ಲಕ್ಬೀರ್ ಸಿಂಗ್ ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕ್ರೌರ್ಯಕ್ಕೆ ಈ ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹ ಹೊಣೆಗಾರರು. ಸಾರ್ತೆ ‘ಎಶ್ಟು ಜನರನ್ನು ಸಾಯಿಸಲಾಗಿದೆ ಎಂಬುದು ಫ್ಯಾಸಿಸಂ ಅಲ್ಲ, ಅವರನ್ನು ಯಾವ ರೀತಿ ಕೊಲೆ ಮಾಡಲಾಗಿದೆ ಎಂಬುದು ಫ್ಯಾಸಿಸಂ’ ಎನ್ನುತ್ತಾನೆ. ದಲಿತ ಎನ್ನುವ ಕಾರಣಕ್ಕೆ ನಡೆದ ಲಕ್ಬೀರ್ ಸಿಂಗ್ ರ ಕೊಲೆಯ ಆ ಭೀಕರತೆಯೂ ಸಹ ಫ್ಯಾಸಿಸಂ ರೀತಿ. ಇದನ್ನು ನಮಗೆ ಸಂಬಂದವಿಲ್ಲ ಎಂದು ನಿರ್ಲಕ್ಷಿಸುವುದು ಸಹ ಭೀಕರತೆಯ ಪಾಲುದಾರಿಕೆಯಾಗುತ್ತದೆ.

ಕಳೆದ ಒಂದು ವರ್ಶದಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಮೂರು ಕರಾಳ ಕಾಯಿದೆಗಳು ಎಲ್ಲಾ ಜಾತಿ, ವರ್ಗದವರಿಗೂ ಮಾರಕ ಎಂದು ಮನಗಂಡು ಅನುಕೂಲಸ್ಥ ರೈತರಿಂದ ಮೊದಲುಗೊಂಡು, ದೊಡ್ಡ ಹಿಡುವಳಿದಾರರಾದ ಜಾಟ್ ರೈತರು, ಸಣ್ಣ, ಅತಿ ಸಣ್ಣ ರೈತರು, ಭೂ ರಹಿತ ದಲಿತರು, ಕೂಲಿ ಕಾರ್ಮಿಕರು ಸಹ ಸಕ್ರಿಯವಾಗಿ ಬಾಗವಹಿಸಿದ್ದಾರೆ. ಜಾತಿ ಹತ್ಯೆಯನ್ನು ಪೋಶಿಸುವ ಖಾಪ್ ಪಂಚಾಯಿತಿಯನ್ನು ಅದು ಈ ಮೂರು ಕರಾಳ ಕಾಯಿದೆ ವಿರುದ್ಧವಿದೆ ಎನ್ನುವ ಒಂದೇ ಕಾರಣಕ್ಕೆ ಬಿನ್ನಾಬಿಪ್ರಾಯ ಬದಿಗಿಟ್ಟು ಬೆಂಬಲಿಸಿದ್ದಾರೆ.

ಬಕಾಸುರ ಬಂಡವಾಳಶಾಹಿ – ಫ್ಯಾಸಿಸ್ಟ್ ಪ್ರಭುತ್ವದ ಮೈತ್ರಿಯ ದಬ್ಬಾಳಿಕೆ ವಿರುದ್ಧ ಒಂದು ದಿಟ್ಟ ಪ್ರತಿರೋಧ ವ್ಯಕ್ತವಾಗಿರುವುದು ಮತ್ತು ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಒಂದು ವರ್ಶದ ಕಾಲ ನಿರಂತರವಾಗಿ ಅದರ ಪ್ರಸ್ತುತತೆ ಉಳಿಸಿಕೊಂಡಿರುವುದು ಈ ಕಾಲಘಟ್ಟದ ಅಪರೂಪದ ವಿದ್ಯಾಮಾನ. ಇಂತಹ ಐಕ್ಯ ಹೋರಾಟವನ್ನು ಪ್ರಭುತ್ವ ಬಗ್ಗು ಬಡಿಯಲು ಕಾಯುತ್ತಿರುತ್ತದೆ ಎಂಬುದೂ ಸತ್ಯ. ಜನವರಿ 26, 2020ರ ಕೆಂಪುಕೋಟೆಯ ಘಟನೆ, ಲಕೀಂಪುರ ಕೊಲೆ ಮತ್ತು ಇದರ ಮುಂದುವರಿದ ಭಾಗವಾಗಿ ಲಕ್ಬೀರ್ ಸಿಂಗ್ ಹತ್ಯೆ.

ಅಥವಾ ಅದು ನಿಹಾಂಗ್ ಸಿಂಗ್ ಪಂಥೀಯರ ನಡುವಿನ ಜಗಳದ ಪರಿಣಾಮ ಎನ್ನುವ ವಾದಗಳು ಕೇಳಿ ಬರುತ್ತಿವೆ. ಇರಬಹುದು.

ಆದರೆ ಹೋರಾಟದ ಸ್ಥಳದಲ್ಲಿ ದಲಿತನ ಬರ್ಬರ ಹತ್ಯೆಯಾದಾಗ ಮೈ ಕೊಡುವಿಕೊಳ್ಳುವುದು ಅಮಾನವೀಯತೆ. ರೈತ ಹೋರಾಟದ ಇಂತಹ ವರ್ತನೆ ಅನೈತಿಕತೆಯಾಗುತ್ತದೆ. ಮುಖ್ಯವಾಗಿ ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಎಚ್ಚರ ವಹಿಸುವುದು ಸಹ ಅವರ ಹೊಣೆಗಾರಿಕೆಯಾಗುತ್ತದೆ.

ಮಾನವೀಯತೆ ಕಳೆದುಕೊಂಡ ಯಾವುದೇ ಹೋರಾಟ ಅಪ್ರಸ್ತುತವಾಗುತ್ತದೆ

  • ಬಿ.ಶ್ರೀಪಾದ್ ಭಟ್

ಇದನ್ನೂ ಓದಿ: ಸಿಂಘು ಗಡಿಯಲ್ಲಿ ದಲಿತನ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...