Homeಕರೋನಾ ತಲ್ಲಣಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

- Advertisement -
- Advertisement -

‘ಮೋದಿಯ ನಾಯಕತ್ವ ಮತ್ತು ಆಡಳಿತ ಶೈಲಿಯೇ ಕೋವಿಡ್ ಉಲ್ಬಣಕ್ಕೆ ಕಾರಣ. ಮೋದಿ ಒಬ್ಬ ‘ಮೆಗಾಲೊಮ್ಯಾನಿಯಾಕ್’ (ತಾನೇ ಶಕ್ತಿವಂತ, ತಾನೆ ಬುದ್ಧಿವಂತ ಎಂಬ ಹುಸಿ ಪ್ರತಿಷ್ಠೆಯ ಮನುಷ್ಯ) ಎಂದು ಭಾವಿಸಿದ್ದಾರೆ…….

ಎರಡು ದಿನದ ಹಿಂದೆ, ಕೋವಿಡ್ ಕುರಿತಂತೆ ಎನ್‌ಡಿಟಿವಿ ಮತ್ತು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಇತಿಹಾಸಕಾರ ಮತ್ತು ರಾಜಕೀಯ ಚಿಂತಹ ರಾಮಚಂದ್ರ ಗುಹಾ ಹೀಗೆ ವಿಶ್ಲೇಷಣೆ ಮಾಡಿದ್ದಾರೆ.

ರಾಜಕೀಯ ವಿಶ್ಲೇಷಕ ಝೈನಬ್ ಸಿಕಂದರ್, ಮೊದಲ ಅಲೆ ತಣ್ಣಗಾದ ನಂತರ ಅದು ತಮ್ಮದೇ ಯಶಸ್ಸು ಎಂಬಂತೆ ಬೀಗಿದ ಮೋದಿ ಸರ್ಕಾರ, ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಸಿದರೂ, ಚುನಾವಣೆ ಗೆಲ್ಲುವುದೇ ಮುಖ್ಯ ಎಂಬಂತೆ ಉಡಾಫೆ ಮಾಡಿದ್ದೇ 2ನೆ ಅಲೆ ತೀವ್ರವಾಗಲು ಕಾರಣ ಎಂದು ದಿ ಪ್ರಿಂಟ್‌ನಲ್ಲಿ ಬರೆದಿದ್ದಾರೆ.

ರಾಮಚಂದ್ರ ಗುಹಾ ಪ್ರಕಾರ, ಮೋದಿ ಯಾವ ತಜ್ಞರ ಅಭಿಪ್ರಾಯಕ್ಕೂ ಬೆಲೆ ಕೊಡುವುದಿಲ್ಲ. ಅವರು ನೇಮಿಸಿಕೊಂಡ ತಜ್ಞರಲ್ಲಿ ಬಹುಪಾಲು ಜನ ಮೋದಿಯವರ ಮನದಾಳದ ಇಂಗಿತವನ್ನೇ ಸಲಹೆ ಮಾಡುತ್ತಾರೆ, ಮೋದಿ ಖುಷಿಗೊಳ್ಳುತ್ತಾರೆ. ಹೀಗಾಗಿ ಹೊರಗಿನ ಮತ್ತು ಸ್ವತಂತ್ರ ತಜ್ಞರು ಮುಂದಿನ ಅಪಾಯದ ಬಗ್ಗೆ ನವೆಂಬರ್‌ನಿಂದಲೇ ಎಚ್ಚರಿಕೆ ನೀಡುತ್ತಿದ್ದರೂ ಮೋದಿಯವರು ಅದನ್ನು ಕೇರ್ ಮಾಡಲಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ದೆಹಲಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತೀವ್ರವಾದ ಮೊದಲ ಅಲೆಗೆ ತತ್ತರಿಸಿ, ಎರಡನೇ ಅಲೆ ಪ್ರವೇಶ ಮಾಡುವ ಹೊತ್ತಿಗೆ ಆರ್ಥಿಕವಾಗಿ ಹೈರಾಣಾಗಿದ್ದವು. ಇದ್ದುದರಲ್ಲಿ ಕೇರಳ ಮತ್ತು ನಂತರದಲ್ಲಿ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮ ರಾಜ್ಯಕ್ಕೆ ಕಾಡಿದ್ದ ಮೊದಲ ಅಲೆಯನ್ನು ಒಂದು ಹಂತಕ್ಕೆ ತರುವಲ್ಲಿ ಶ್ರಮ ವಹಿಸಿದ್ದವು.

ಆದರೆ ಎರಡನೆ ಅಲೆ ಜೋರಾದಾಗ ಅವು ಸಹಾಯಕ್ಕೆ ಮನವಿ ಮಾಡುತ್ತಿದ್ದರೆ, ಮೋದಿಯವರು ಬಂಗಾಳ ಮತ್ತು ಇತರ ಚುನಾವಣೆಗಳಲ್ಲಿ ನಿರತರಾಗಿದ್ದರು. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಎಂಬ ಕ್ಷುಲ್ಲಕ ರಾಜಕೀಯ ಅಂಶ ಅವರ ತಲೆಯಲ್ಲಿ ಇದ್ದೇ ಇದೆ. ಅದಿರಲಿ, ಅವರ ಗುಜರಾತ್ ಮತ್ತು ಉತ್ತರಪ್ರದೇಶ ಸರ್ಕಾರಗಳು ತೀವ್ರ ಕೋವಿಡ್ ಹಾನಿ ಅನುಭವಿಸಿಯೂ ಅಂಕಿಅಂಶ ಮುಚ್ಚಿಡುತ್ತ 2ನೆ ಅಲೆ ತೀವ್ರಗೊಳ್ಳಲು ಕಾರಣವಾದ ಮೇಲೂ ಆ ರಾಜ್ಯಗಳಿಗೆ ಕೇಂದ್ರ ಯಾವ ಸಂದೇಶ ಅಥವಾ ಎಚ್ಚರಿಕೆಯನ್ನು ನೀಡಲಿಲ್ಲ.

ಕರ್ನಾಟಕದ ಸರ್ಕಾರದ್ದು ಇನ್ನೊಂದು ಸಮಸ್ಯೆ. ಇದು ಉತ್ತರಪ್ರದೇಶ ಅಥವಾ ಗುಜರಾತಿನಂತೆ ಕೋವಿಡ್ ಸಾವಿನ, ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಿಲ್ಲ. ಆದರೆ ಮೋದಿಯವರಂತೆಯೇ ಈ ಸರ್ಕಾರ ಕೂಡ ತಜ್ಞರ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆರೋಗ್ಯ ಸಚಿವ ಡಾ. ಸುಧಾಕರ್ ಮೀಡಿಯಾ ಮುಂದೆ ಹೇಳುವ ಯೋಜನೆಗಳು ರಚನಾತ್ಮಕ ಎನಿಸುತ್ತವೆ, ಆದರೆ ಅವೆಂದೂ ಜಾರಿಗೆ ಬರಲಿಲ್ಲ. ಇಲ್ಲೂ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಡುತ್ತ ಬಂದಿದೆ.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಲಸಿಕೆ ಕೊರತೆ, ರೆಮ್‌ಡಿಸಿವಿಯರ್ ಕೊರತೆ ಬಗ್ಗೆ ರಾಜ್ಯದ ಪ್ರತಿನಿಧಿ ತಿಳಿಸಿದರು. ಆದರೆ ಈ ಸರ್ಕಾರದ ಸಚಿವರ‍್ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಹಾಗೆಯೇ ನಮ್ಮ ಸಂಸದರ‍್ಯಾರೂ ಕೂಡ ರಾಜ್ಯಕ್ಕೆ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿ ಎಂಬ ಒಂದೇ ಒಂದು ಬೇಡಿಕೆಯನ್ನೂ ಇವತ್ತಿಗೂ ಇಟ್ಟಿಲ್ಲ!

ಅಂದರೆ ಇಲ್ಲಿ ಮೋದಿ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು, ಕಳೆದ 4 ತಿಂಗಳಿಂದ ‘ಎಲ್ಲವೂ ಸರಿಯಾಗಿದೆ’ ಎಂಬ ಹುಸಿ ಸಂತೃಪ್ತಿಕರ ಭಾವವನ್ನು ವ್ಯಕ್ತಪಡಿಸುತ್ತ ಜನರನ್ನೂ ದಾರಿ ತಪ್ಪಿಸುತ್ತ ಬಂದವು. ತೊಂದರೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳ ಬೇಡಿಕೆಗಳನ್ನು ಕೇಂದ್ರ ನಿರ್ಲಕ್ಷಿಸುತ್ತ ಬಂದಿತು. ಈಗಲೂ ಅದಕ್ಕೆ ಬಂಗಾಳ ಚುನಾವಣೆಯೇ ಮುಖ್ಯವಾಗಿದೆ. ದೆಹಲಿ ಹೈಕೋರ್ಟ್ ಸತತ ಎರಡು ದಿನಗಳ ಕಾಲ ತರಾಟೆಗೆ ತೆಗೆದುಕೊಂಡ ನಂತರವೂ ಕೇಂದ್ರ ಸರ್ಕಾರಕ್ಕೆ ಅದು ಅವಮಾನ ಅನಿಸಿಯೇ ಇಲ್ಲ ಎಂಬಂತೆ ಕಾಣುತ್ತಿದೆ.

ಝೂನಬ್ ಸಿಕಂದರ್ ಬರೆಯುತ್ತಾರೆ, ‘ಚಪ್ಪಾಳೆಯಿಂದ ಮೋದಿ ಕುರುಡರಾದರು. ಅವರದೇ ಅಭಿಮಾನಿಗಳ ಪ್ರಶಂಸೆಗಳಿಂದ ಉಬ್ಬಿ ಹೋದರು. ಜಾಗತಿಕ ಪ್ರಶಂಸೆಯನ್ನು ಮೋದಿ ಎಷ್ಟು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಎಲ್ಲಿಗೆ ಹೋದರೂ ಅದನ್ನು ಪ್ರಭಾವಲಯದಂತೆ ಧರಿಸುತ್ತಾರೆ, ಅವರು ಭಾರತವಲ್ಲ, ನಿಜವಾದ ವಿಶ್ವ ಗುರು ಎಂದು ಮತದಾರರಿಗೆ ಮನವರಿಕೆ ಮಾಡಲು ಬಯಸುತ್ತಾರೆ. ಸಮುಂದರ್ ಪೆ ಚರ್ಚಾ ಫೋಟೋ-ಶೂಟ್‌ಗಾಗಿ ವಿಶ್ವ ನಾಯಕರನ್ನು ತಬ್ಬಿಕೊಂಡು ಅವರೊಂದಿಗೆ ಬೀಚ್‌ನಲ್ಲಿ ನಡೆಯುವಾಗ ಇಂತಹ ವಿಶ್ವಗುರು ಭ್ರಮೆಯಲ್ಲಿ ಅವರು ಇರುತ್ತಾರೆ. ಅವರ ಈ ನಡವಳಿಕೆಯೇ ಇವತ್ತಿನ ಈ ಬಿಕ್ಕಟ್ಟಿನ ಮೂಲವಾಗಿದೆ…..

ಆದ್ದರಿಂದ, ಹೊಸ ರೂಪಾಂತರವು ಭಾರತಕ್ಕೆ ಬಂದಿದೆ ಮತ್ತು ‘ಇಂಡಿಯನ್’ ರೂಪಾಂತರದ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದ್ದರ ಪರಿಣಾಮವೇ ಇವತ್ತಿನ ದುರಂತಕ್ಕೆ ಕಾರಣ….’

ರಾಮಚಂದ್ರ ಗುಹಾ ಪ್ರಕಾರ, ಹಿಂದೆಲ್ಲ ಸರ್ಕಾರಗಳು ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಪ್ರಮುಖ ಸ್ಥಾನಕ್ಕೆ ನೇಮಿಸುತ್ತಿದ್ದವು. ಅಲ್ಲಿ ಪಕ್ಷನಿಷ್ಠೆ ಅಥವಾ ವ್ಯಕ್ತಿನಿಷ್ಠೆ ನೋಡುತ್ತಿರಲಿಲ್ಲ. ಆದರೆ 2014ರ ನಂತರ ಮೋದಿಯವರು ಗುಜರಾತಿ ಅಧಿಕಾರಿಗಳನ್ನು ದೆಹಲಿಗೆ ಕರೆ ತಂದರು. ಇವರೆಲ್ಲ ವ್ಯಕ್ತಿಪೂಜೆಯ ಆರಾಧಕರು, ಪಿಎಂಒ ಕೂಡ ಅಂತಹವರಿಂದಲೇ ತುಂಬಿತು… ಹೀಗಾಗಿ ಅಲ್ಲಿ ತಜ್ಞತೆಗೆ, ಆಡಳಿತ ದಕ್ಷತೆಗೆ ಅವಕಾಶವೇ ಇಲ್ಲವಾಯಿತು’ ಎನ್ನುತ್ತಾರೆ.

ವಾಷಿಂಗ್ಟನನ್ ಪೋಸ್ಟ್ ಮತ್ತು ದಿ ಗಾರ್ಡಿಯನ್ ಈ ಎರಡು ದಿನಗಳಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ಭಾರತದಲ್ಲಿನ 2ನೆ ಉಲ್ಬಣಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಟೈಟಲ್ಲಿನಲ್ಲಿಯೇ ಸಾರಿವೆ.

ಇವತ್ತು ಬಂಗಾಳದಲ್ಲಿ 6ನೆ ಹಂತದ ಮತದಾನ ಆರಂಭವಾದ ಕೂಡಲೇ ಮೊದಿ ಟ್ವೀಟ್ ಮಾಡಿ, ಎಲ್ಲರೂ ಮತ ಚಲಾಯಿಸಿ ಎನ್ನುತ್ತ ತಮ್ಮ ಸಣ್ಣ ಬುದ್ಧಿ ಪ್ರದರ್ಶಿಸಿದ್ದಾರೆ. ಅವರ ಮೂಗಿನಡಿಯೇ ಜನ ಆಮ್ಲಜನಕ ಅಂದರೆ O2 ಕೊರತೆಯಿಂದ ಸಾಯುವಾಗ ಅವರು ಟ್ವೀಟಿನಲ್ಲಿ ಓಟಿನ ಬೇಟೆಯಾಡುತ್ತಿದ್ದರು. ಈ ಒಂದು ಅಂಶವೇ ಸಾಕು ಅವರ ಹುಚ್ಚು ಶೈಲಿಯ, ಒಣ ಧಿಮಾಕಿನ ಆಡಳಿತ ಶೈಲಿಗೆ ಅಲ್ಲವೇ?

ಒಂದೆಡೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವಾಗ ಬಂಗಾಳದ ಅಸ್ಸನೋಲ್‌ನಲ್ಲಿ ಮೋದಿ ಬೃಹತ್ ರ್ಯಾಲಿ ನಡೆಸುತ್ತಾರೆ. ಇಷ್ಟೊಂದು ಜನಸಂದಣಿ ನಾನು ನೋಡಿಯೇ ಇಲ್ಲ ಎಂದು ಉದ್ಘರಿಸುತ್ತಾರೆ. ಅಲ್ಲದೇ ನಾಳೆ ಬಂಗಾಳದಲ್ಲಿ ಮತ್ತೆ ಮೋದಿಯವರ ರ‍್ಯಾಲಿಗಳಿವೆ. ಅಲ್ಲಿ ಅಪಾರ ಜನಸಂದಣಿ ಸೇರುತ್ತದೆ ಅಥವಾ ಸೇರಿಸುತ್ತಾರೆ. ಹಾಗಾದರೆ ಮೊನ್ನೆ ಮಂಗಳವಾರ 8.45ಕ್ಕೆ ಅವರು ಹೇಳಿದ್ದೇನು? ಈ ಆಷಾಢಭೂತಿತನವೇ ಇವತ್ತಿನ ಕೋವಿಡ್ ದುರಂತದ ಮೂಲ ಅಲ್ಲವೇ?

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...