Homeಕರೋನಾ ತಲ್ಲಣಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

- Advertisement -
- Advertisement -

‘ಮೋದಿಯ ನಾಯಕತ್ವ ಮತ್ತು ಆಡಳಿತ ಶೈಲಿಯೇ ಕೋವಿಡ್ ಉಲ್ಬಣಕ್ಕೆ ಕಾರಣ. ಮೋದಿ ಒಬ್ಬ ‘ಮೆಗಾಲೊಮ್ಯಾನಿಯಾಕ್’ (ತಾನೇ ಶಕ್ತಿವಂತ, ತಾನೆ ಬುದ್ಧಿವಂತ ಎಂಬ ಹುಸಿ ಪ್ರತಿಷ್ಠೆಯ ಮನುಷ್ಯ) ಎಂದು ಭಾವಿಸಿದ್ದಾರೆ…….

ಎರಡು ದಿನದ ಹಿಂದೆ, ಕೋವಿಡ್ ಕುರಿತಂತೆ ಎನ್‌ಡಿಟಿವಿ ಮತ್ತು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಇತಿಹಾಸಕಾರ ಮತ್ತು ರಾಜಕೀಯ ಚಿಂತಹ ರಾಮಚಂದ್ರ ಗುಹಾ ಹೀಗೆ ವಿಶ್ಲೇಷಣೆ ಮಾಡಿದ್ದಾರೆ.

ರಾಜಕೀಯ ವಿಶ್ಲೇಷಕ ಝೈನಬ್ ಸಿಕಂದರ್, ಮೊದಲ ಅಲೆ ತಣ್ಣಗಾದ ನಂತರ ಅದು ತಮ್ಮದೇ ಯಶಸ್ಸು ಎಂಬಂತೆ ಬೀಗಿದ ಮೋದಿ ಸರ್ಕಾರ, ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಸಿದರೂ, ಚುನಾವಣೆ ಗೆಲ್ಲುವುದೇ ಮುಖ್ಯ ಎಂಬಂತೆ ಉಡಾಫೆ ಮಾಡಿದ್ದೇ 2ನೆ ಅಲೆ ತೀವ್ರವಾಗಲು ಕಾರಣ ಎಂದು ದಿ ಪ್ರಿಂಟ್‌ನಲ್ಲಿ ಬರೆದಿದ್ದಾರೆ.

ರಾಮಚಂದ್ರ ಗುಹಾ ಪ್ರಕಾರ, ಮೋದಿ ಯಾವ ತಜ್ಞರ ಅಭಿಪ್ರಾಯಕ್ಕೂ ಬೆಲೆ ಕೊಡುವುದಿಲ್ಲ. ಅವರು ನೇಮಿಸಿಕೊಂಡ ತಜ್ಞರಲ್ಲಿ ಬಹುಪಾಲು ಜನ ಮೋದಿಯವರ ಮನದಾಳದ ಇಂಗಿತವನ್ನೇ ಸಲಹೆ ಮಾಡುತ್ತಾರೆ, ಮೋದಿ ಖುಷಿಗೊಳ್ಳುತ್ತಾರೆ. ಹೀಗಾಗಿ ಹೊರಗಿನ ಮತ್ತು ಸ್ವತಂತ್ರ ತಜ್ಞರು ಮುಂದಿನ ಅಪಾಯದ ಬಗ್ಗೆ ನವೆಂಬರ್‌ನಿಂದಲೇ ಎಚ್ಚರಿಕೆ ನೀಡುತ್ತಿದ್ದರೂ ಮೋದಿಯವರು ಅದನ್ನು ಕೇರ್ ಮಾಡಲಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ದೆಹಲಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತೀವ್ರವಾದ ಮೊದಲ ಅಲೆಗೆ ತತ್ತರಿಸಿ, ಎರಡನೇ ಅಲೆ ಪ್ರವೇಶ ಮಾಡುವ ಹೊತ್ತಿಗೆ ಆರ್ಥಿಕವಾಗಿ ಹೈರಾಣಾಗಿದ್ದವು. ಇದ್ದುದರಲ್ಲಿ ಕೇರಳ ಮತ್ತು ನಂತರದಲ್ಲಿ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮ ರಾಜ್ಯಕ್ಕೆ ಕಾಡಿದ್ದ ಮೊದಲ ಅಲೆಯನ್ನು ಒಂದು ಹಂತಕ್ಕೆ ತರುವಲ್ಲಿ ಶ್ರಮ ವಹಿಸಿದ್ದವು.

ಆದರೆ ಎರಡನೆ ಅಲೆ ಜೋರಾದಾಗ ಅವು ಸಹಾಯಕ್ಕೆ ಮನವಿ ಮಾಡುತ್ತಿದ್ದರೆ, ಮೋದಿಯವರು ಬಂಗಾಳ ಮತ್ತು ಇತರ ಚುನಾವಣೆಗಳಲ್ಲಿ ನಿರತರಾಗಿದ್ದರು. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಎಂಬ ಕ್ಷುಲ್ಲಕ ರಾಜಕೀಯ ಅಂಶ ಅವರ ತಲೆಯಲ್ಲಿ ಇದ್ದೇ ಇದೆ. ಅದಿರಲಿ, ಅವರ ಗುಜರಾತ್ ಮತ್ತು ಉತ್ತರಪ್ರದೇಶ ಸರ್ಕಾರಗಳು ತೀವ್ರ ಕೋವಿಡ್ ಹಾನಿ ಅನುಭವಿಸಿಯೂ ಅಂಕಿಅಂಶ ಮುಚ್ಚಿಡುತ್ತ 2ನೆ ಅಲೆ ತೀವ್ರಗೊಳ್ಳಲು ಕಾರಣವಾದ ಮೇಲೂ ಆ ರಾಜ್ಯಗಳಿಗೆ ಕೇಂದ್ರ ಯಾವ ಸಂದೇಶ ಅಥವಾ ಎಚ್ಚರಿಕೆಯನ್ನು ನೀಡಲಿಲ್ಲ.

ಕರ್ನಾಟಕದ ಸರ್ಕಾರದ್ದು ಇನ್ನೊಂದು ಸಮಸ್ಯೆ. ಇದು ಉತ್ತರಪ್ರದೇಶ ಅಥವಾ ಗುಜರಾತಿನಂತೆ ಕೋವಿಡ್ ಸಾವಿನ, ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಿಲ್ಲ. ಆದರೆ ಮೋದಿಯವರಂತೆಯೇ ಈ ಸರ್ಕಾರ ಕೂಡ ತಜ್ಞರ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆರೋಗ್ಯ ಸಚಿವ ಡಾ. ಸುಧಾಕರ್ ಮೀಡಿಯಾ ಮುಂದೆ ಹೇಳುವ ಯೋಜನೆಗಳು ರಚನಾತ್ಮಕ ಎನಿಸುತ್ತವೆ, ಆದರೆ ಅವೆಂದೂ ಜಾರಿಗೆ ಬರಲಿಲ್ಲ. ಇಲ್ಲೂ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಡುತ್ತ ಬಂದಿದೆ.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಲಸಿಕೆ ಕೊರತೆ, ರೆಮ್‌ಡಿಸಿವಿಯರ್ ಕೊರತೆ ಬಗ್ಗೆ ರಾಜ್ಯದ ಪ್ರತಿನಿಧಿ ತಿಳಿಸಿದರು. ಆದರೆ ಈ ಸರ್ಕಾರದ ಸಚಿವರ‍್ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಹಾಗೆಯೇ ನಮ್ಮ ಸಂಸದರ‍್ಯಾರೂ ಕೂಡ ರಾಜ್ಯಕ್ಕೆ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿ ಎಂಬ ಒಂದೇ ಒಂದು ಬೇಡಿಕೆಯನ್ನೂ ಇವತ್ತಿಗೂ ಇಟ್ಟಿಲ್ಲ!

ಅಂದರೆ ಇಲ್ಲಿ ಮೋದಿ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು, ಕಳೆದ 4 ತಿಂಗಳಿಂದ ‘ಎಲ್ಲವೂ ಸರಿಯಾಗಿದೆ’ ಎಂಬ ಹುಸಿ ಸಂತೃಪ್ತಿಕರ ಭಾವವನ್ನು ವ್ಯಕ್ತಪಡಿಸುತ್ತ ಜನರನ್ನೂ ದಾರಿ ತಪ್ಪಿಸುತ್ತ ಬಂದವು. ತೊಂದರೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳ ಬೇಡಿಕೆಗಳನ್ನು ಕೇಂದ್ರ ನಿರ್ಲಕ್ಷಿಸುತ್ತ ಬಂದಿತು. ಈಗಲೂ ಅದಕ್ಕೆ ಬಂಗಾಳ ಚುನಾವಣೆಯೇ ಮುಖ್ಯವಾಗಿದೆ. ದೆಹಲಿ ಹೈಕೋರ್ಟ್ ಸತತ ಎರಡು ದಿನಗಳ ಕಾಲ ತರಾಟೆಗೆ ತೆಗೆದುಕೊಂಡ ನಂತರವೂ ಕೇಂದ್ರ ಸರ್ಕಾರಕ್ಕೆ ಅದು ಅವಮಾನ ಅನಿಸಿಯೇ ಇಲ್ಲ ಎಂಬಂತೆ ಕಾಣುತ್ತಿದೆ.

ಝೂನಬ್ ಸಿಕಂದರ್ ಬರೆಯುತ್ತಾರೆ, ‘ಚಪ್ಪಾಳೆಯಿಂದ ಮೋದಿ ಕುರುಡರಾದರು. ಅವರದೇ ಅಭಿಮಾನಿಗಳ ಪ್ರಶಂಸೆಗಳಿಂದ ಉಬ್ಬಿ ಹೋದರು. ಜಾಗತಿಕ ಪ್ರಶಂಸೆಯನ್ನು ಮೋದಿ ಎಷ್ಟು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಎಲ್ಲಿಗೆ ಹೋದರೂ ಅದನ್ನು ಪ್ರಭಾವಲಯದಂತೆ ಧರಿಸುತ್ತಾರೆ, ಅವರು ಭಾರತವಲ್ಲ, ನಿಜವಾದ ವಿಶ್ವ ಗುರು ಎಂದು ಮತದಾರರಿಗೆ ಮನವರಿಕೆ ಮಾಡಲು ಬಯಸುತ್ತಾರೆ. ಸಮುಂದರ್ ಪೆ ಚರ್ಚಾ ಫೋಟೋ-ಶೂಟ್‌ಗಾಗಿ ವಿಶ್ವ ನಾಯಕರನ್ನು ತಬ್ಬಿಕೊಂಡು ಅವರೊಂದಿಗೆ ಬೀಚ್‌ನಲ್ಲಿ ನಡೆಯುವಾಗ ಇಂತಹ ವಿಶ್ವಗುರು ಭ್ರಮೆಯಲ್ಲಿ ಅವರು ಇರುತ್ತಾರೆ. ಅವರ ಈ ನಡವಳಿಕೆಯೇ ಇವತ್ತಿನ ಈ ಬಿಕ್ಕಟ್ಟಿನ ಮೂಲವಾಗಿದೆ…..

ಆದ್ದರಿಂದ, ಹೊಸ ರೂಪಾಂತರವು ಭಾರತಕ್ಕೆ ಬಂದಿದೆ ಮತ್ತು ‘ಇಂಡಿಯನ್’ ರೂಪಾಂತರದ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದ್ದರ ಪರಿಣಾಮವೇ ಇವತ್ತಿನ ದುರಂತಕ್ಕೆ ಕಾರಣ….’

ರಾಮಚಂದ್ರ ಗುಹಾ ಪ್ರಕಾರ, ಹಿಂದೆಲ್ಲ ಸರ್ಕಾರಗಳು ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಪ್ರಮುಖ ಸ್ಥಾನಕ್ಕೆ ನೇಮಿಸುತ್ತಿದ್ದವು. ಅಲ್ಲಿ ಪಕ್ಷನಿಷ್ಠೆ ಅಥವಾ ವ್ಯಕ್ತಿನಿಷ್ಠೆ ನೋಡುತ್ತಿರಲಿಲ್ಲ. ಆದರೆ 2014ರ ನಂತರ ಮೋದಿಯವರು ಗುಜರಾತಿ ಅಧಿಕಾರಿಗಳನ್ನು ದೆಹಲಿಗೆ ಕರೆ ತಂದರು. ಇವರೆಲ್ಲ ವ್ಯಕ್ತಿಪೂಜೆಯ ಆರಾಧಕರು, ಪಿಎಂಒ ಕೂಡ ಅಂತಹವರಿಂದಲೇ ತುಂಬಿತು… ಹೀಗಾಗಿ ಅಲ್ಲಿ ತಜ್ಞತೆಗೆ, ಆಡಳಿತ ದಕ್ಷತೆಗೆ ಅವಕಾಶವೇ ಇಲ್ಲವಾಯಿತು’ ಎನ್ನುತ್ತಾರೆ.

ವಾಷಿಂಗ್ಟನನ್ ಪೋಸ್ಟ್ ಮತ್ತು ದಿ ಗಾರ್ಡಿಯನ್ ಈ ಎರಡು ದಿನಗಳಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ಭಾರತದಲ್ಲಿನ 2ನೆ ಉಲ್ಬಣಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಟೈಟಲ್ಲಿನಲ್ಲಿಯೇ ಸಾರಿವೆ.

ಇವತ್ತು ಬಂಗಾಳದಲ್ಲಿ 6ನೆ ಹಂತದ ಮತದಾನ ಆರಂಭವಾದ ಕೂಡಲೇ ಮೊದಿ ಟ್ವೀಟ್ ಮಾಡಿ, ಎಲ್ಲರೂ ಮತ ಚಲಾಯಿಸಿ ಎನ್ನುತ್ತ ತಮ್ಮ ಸಣ್ಣ ಬುದ್ಧಿ ಪ್ರದರ್ಶಿಸಿದ್ದಾರೆ. ಅವರ ಮೂಗಿನಡಿಯೇ ಜನ ಆಮ್ಲಜನಕ ಅಂದರೆ O2 ಕೊರತೆಯಿಂದ ಸಾಯುವಾಗ ಅವರು ಟ್ವೀಟಿನಲ್ಲಿ ಓಟಿನ ಬೇಟೆಯಾಡುತ್ತಿದ್ದರು. ಈ ಒಂದು ಅಂಶವೇ ಸಾಕು ಅವರ ಹುಚ್ಚು ಶೈಲಿಯ, ಒಣ ಧಿಮಾಕಿನ ಆಡಳಿತ ಶೈಲಿಗೆ ಅಲ್ಲವೇ?

ಒಂದೆಡೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವಾಗ ಬಂಗಾಳದ ಅಸ್ಸನೋಲ್‌ನಲ್ಲಿ ಮೋದಿ ಬೃಹತ್ ರ್ಯಾಲಿ ನಡೆಸುತ್ತಾರೆ. ಇಷ್ಟೊಂದು ಜನಸಂದಣಿ ನಾನು ನೋಡಿಯೇ ಇಲ್ಲ ಎಂದು ಉದ್ಘರಿಸುತ್ತಾರೆ. ಅಲ್ಲದೇ ನಾಳೆ ಬಂಗಾಳದಲ್ಲಿ ಮತ್ತೆ ಮೋದಿಯವರ ರ‍್ಯಾಲಿಗಳಿವೆ. ಅಲ್ಲಿ ಅಪಾರ ಜನಸಂದಣಿ ಸೇರುತ್ತದೆ ಅಥವಾ ಸೇರಿಸುತ್ತಾರೆ. ಹಾಗಾದರೆ ಮೊನ್ನೆ ಮಂಗಳವಾರ 8.45ಕ್ಕೆ ಅವರು ಹೇಳಿದ್ದೇನು? ಈ ಆಷಾಢಭೂತಿತನವೇ ಇವತ್ತಿನ ಕೋವಿಡ್ ದುರಂತದ ಮೂಲ ಅಲ್ಲವೇ?

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...