Homeಕರೋನಾ ತಲ್ಲಣಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

- Advertisement -
- Advertisement -

‘ಮೋದಿಯ ನಾಯಕತ್ವ ಮತ್ತು ಆಡಳಿತ ಶೈಲಿಯೇ ಕೋವಿಡ್ ಉಲ್ಬಣಕ್ಕೆ ಕಾರಣ. ಮೋದಿ ಒಬ್ಬ ‘ಮೆಗಾಲೊಮ್ಯಾನಿಯಾಕ್’ (ತಾನೇ ಶಕ್ತಿವಂತ, ತಾನೆ ಬುದ್ಧಿವಂತ ಎಂಬ ಹುಸಿ ಪ್ರತಿಷ್ಠೆಯ ಮನುಷ್ಯ) ಎಂದು ಭಾವಿಸಿದ್ದಾರೆ…….

ಎರಡು ದಿನದ ಹಿಂದೆ, ಕೋವಿಡ್ ಕುರಿತಂತೆ ಎನ್‌ಡಿಟಿವಿ ಮತ್ತು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಇತಿಹಾಸಕಾರ ಮತ್ತು ರಾಜಕೀಯ ಚಿಂತಹ ರಾಮಚಂದ್ರ ಗುಹಾ ಹೀಗೆ ವಿಶ್ಲೇಷಣೆ ಮಾಡಿದ್ದಾರೆ.

ರಾಜಕೀಯ ವಿಶ್ಲೇಷಕ ಝೈನಬ್ ಸಿಕಂದರ್, ಮೊದಲ ಅಲೆ ತಣ್ಣಗಾದ ನಂತರ ಅದು ತಮ್ಮದೇ ಯಶಸ್ಸು ಎಂಬಂತೆ ಬೀಗಿದ ಮೋದಿ ಸರ್ಕಾರ, ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಸಿದರೂ, ಚುನಾವಣೆ ಗೆಲ್ಲುವುದೇ ಮುಖ್ಯ ಎಂಬಂತೆ ಉಡಾಫೆ ಮಾಡಿದ್ದೇ 2ನೆ ಅಲೆ ತೀವ್ರವಾಗಲು ಕಾರಣ ಎಂದು ದಿ ಪ್ರಿಂಟ್‌ನಲ್ಲಿ ಬರೆದಿದ್ದಾರೆ.

ರಾಮಚಂದ್ರ ಗುಹಾ ಪ್ರಕಾರ, ಮೋದಿ ಯಾವ ತಜ್ಞರ ಅಭಿಪ್ರಾಯಕ್ಕೂ ಬೆಲೆ ಕೊಡುವುದಿಲ್ಲ. ಅವರು ನೇಮಿಸಿಕೊಂಡ ತಜ್ಞರಲ್ಲಿ ಬಹುಪಾಲು ಜನ ಮೋದಿಯವರ ಮನದಾಳದ ಇಂಗಿತವನ್ನೇ ಸಲಹೆ ಮಾಡುತ್ತಾರೆ, ಮೋದಿ ಖುಷಿಗೊಳ್ಳುತ್ತಾರೆ. ಹೀಗಾಗಿ ಹೊರಗಿನ ಮತ್ತು ಸ್ವತಂತ್ರ ತಜ್ಞರು ಮುಂದಿನ ಅಪಾಯದ ಬಗ್ಗೆ ನವೆಂಬರ್‌ನಿಂದಲೇ ಎಚ್ಚರಿಕೆ ನೀಡುತ್ತಿದ್ದರೂ ಮೋದಿಯವರು ಅದನ್ನು ಕೇರ್ ಮಾಡಲಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ದೆಹಲಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತೀವ್ರವಾದ ಮೊದಲ ಅಲೆಗೆ ತತ್ತರಿಸಿ, ಎರಡನೇ ಅಲೆ ಪ್ರವೇಶ ಮಾಡುವ ಹೊತ್ತಿಗೆ ಆರ್ಥಿಕವಾಗಿ ಹೈರಾಣಾಗಿದ್ದವು. ಇದ್ದುದರಲ್ಲಿ ಕೇರಳ ಮತ್ತು ನಂತರದಲ್ಲಿ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮ ರಾಜ್ಯಕ್ಕೆ ಕಾಡಿದ್ದ ಮೊದಲ ಅಲೆಯನ್ನು ಒಂದು ಹಂತಕ್ಕೆ ತರುವಲ್ಲಿ ಶ್ರಮ ವಹಿಸಿದ್ದವು.

ಆದರೆ ಎರಡನೆ ಅಲೆ ಜೋರಾದಾಗ ಅವು ಸಹಾಯಕ್ಕೆ ಮನವಿ ಮಾಡುತ್ತಿದ್ದರೆ, ಮೋದಿಯವರು ಬಂಗಾಳ ಮತ್ತು ಇತರ ಚುನಾವಣೆಗಳಲ್ಲಿ ನಿರತರಾಗಿದ್ದರು. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಎಂಬ ಕ್ಷುಲ್ಲಕ ರಾಜಕೀಯ ಅಂಶ ಅವರ ತಲೆಯಲ್ಲಿ ಇದ್ದೇ ಇದೆ. ಅದಿರಲಿ, ಅವರ ಗುಜರಾತ್ ಮತ್ತು ಉತ್ತರಪ್ರದೇಶ ಸರ್ಕಾರಗಳು ತೀವ್ರ ಕೋವಿಡ್ ಹಾನಿ ಅನುಭವಿಸಿಯೂ ಅಂಕಿಅಂಶ ಮುಚ್ಚಿಡುತ್ತ 2ನೆ ಅಲೆ ತೀವ್ರಗೊಳ್ಳಲು ಕಾರಣವಾದ ಮೇಲೂ ಆ ರಾಜ್ಯಗಳಿಗೆ ಕೇಂದ್ರ ಯಾವ ಸಂದೇಶ ಅಥವಾ ಎಚ್ಚರಿಕೆಯನ್ನು ನೀಡಲಿಲ್ಲ.

ಕರ್ನಾಟಕದ ಸರ್ಕಾರದ್ದು ಇನ್ನೊಂದು ಸಮಸ್ಯೆ. ಇದು ಉತ್ತರಪ್ರದೇಶ ಅಥವಾ ಗುಜರಾತಿನಂತೆ ಕೋವಿಡ್ ಸಾವಿನ, ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಿಲ್ಲ. ಆದರೆ ಮೋದಿಯವರಂತೆಯೇ ಈ ಸರ್ಕಾರ ಕೂಡ ತಜ್ಞರ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆರೋಗ್ಯ ಸಚಿವ ಡಾ. ಸುಧಾಕರ್ ಮೀಡಿಯಾ ಮುಂದೆ ಹೇಳುವ ಯೋಜನೆಗಳು ರಚನಾತ್ಮಕ ಎನಿಸುತ್ತವೆ, ಆದರೆ ಅವೆಂದೂ ಜಾರಿಗೆ ಬರಲಿಲ್ಲ. ಇಲ್ಲೂ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಡುತ್ತ ಬಂದಿದೆ.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಲಸಿಕೆ ಕೊರತೆ, ರೆಮ್‌ಡಿಸಿವಿಯರ್ ಕೊರತೆ ಬಗ್ಗೆ ರಾಜ್ಯದ ಪ್ರತಿನಿಧಿ ತಿಳಿಸಿದರು. ಆದರೆ ಈ ಸರ್ಕಾರದ ಸಚಿವರ‍್ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಹಾಗೆಯೇ ನಮ್ಮ ಸಂಸದರ‍್ಯಾರೂ ಕೂಡ ರಾಜ್ಯಕ್ಕೆ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿ ಎಂಬ ಒಂದೇ ಒಂದು ಬೇಡಿಕೆಯನ್ನೂ ಇವತ್ತಿಗೂ ಇಟ್ಟಿಲ್ಲ!

ಅಂದರೆ ಇಲ್ಲಿ ಮೋದಿ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು, ಕಳೆದ 4 ತಿಂಗಳಿಂದ ‘ಎಲ್ಲವೂ ಸರಿಯಾಗಿದೆ’ ಎಂಬ ಹುಸಿ ಸಂತೃಪ್ತಿಕರ ಭಾವವನ್ನು ವ್ಯಕ್ತಪಡಿಸುತ್ತ ಜನರನ್ನೂ ದಾರಿ ತಪ್ಪಿಸುತ್ತ ಬಂದವು. ತೊಂದರೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳ ಬೇಡಿಕೆಗಳನ್ನು ಕೇಂದ್ರ ನಿರ್ಲಕ್ಷಿಸುತ್ತ ಬಂದಿತು. ಈಗಲೂ ಅದಕ್ಕೆ ಬಂಗಾಳ ಚುನಾವಣೆಯೇ ಮುಖ್ಯವಾಗಿದೆ. ದೆಹಲಿ ಹೈಕೋರ್ಟ್ ಸತತ ಎರಡು ದಿನಗಳ ಕಾಲ ತರಾಟೆಗೆ ತೆಗೆದುಕೊಂಡ ನಂತರವೂ ಕೇಂದ್ರ ಸರ್ಕಾರಕ್ಕೆ ಅದು ಅವಮಾನ ಅನಿಸಿಯೇ ಇಲ್ಲ ಎಂಬಂತೆ ಕಾಣುತ್ತಿದೆ.

ಝೂನಬ್ ಸಿಕಂದರ್ ಬರೆಯುತ್ತಾರೆ, ‘ಚಪ್ಪಾಳೆಯಿಂದ ಮೋದಿ ಕುರುಡರಾದರು. ಅವರದೇ ಅಭಿಮಾನಿಗಳ ಪ್ರಶಂಸೆಗಳಿಂದ ಉಬ್ಬಿ ಹೋದರು. ಜಾಗತಿಕ ಪ್ರಶಂಸೆಯನ್ನು ಮೋದಿ ಎಷ್ಟು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಎಲ್ಲಿಗೆ ಹೋದರೂ ಅದನ್ನು ಪ್ರಭಾವಲಯದಂತೆ ಧರಿಸುತ್ತಾರೆ, ಅವರು ಭಾರತವಲ್ಲ, ನಿಜವಾದ ವಿಶ್ವ ಗುರು ಎಂದು ಮತದಾರರಿಗೆ ಮನವರಿಕೆ ಮಾಡಲು ಬಯಸುತ್ತಾರೆ. ಸಮುಂದರ್ ಪೆ ಚರ್ಚಾ ಫೋಟೋ-ಶೂಟ್‌ಗಾಗಿ ವಿಶ್ವ ನಾಯಕರನ್ನು ತಬ್ಬಿಕೊಂಡು ಅವರೊಂದಿಗೆ ಬೀಚ್‌ನಲ್ಲಿ ನಡೆಯುವಾಗ ಇಂತಹ ವಿಶ್ವಗುರು ಭ್ರಮೆಯಲ್ಲಿ ಅವರು ಇರುತ್ತಾರೆ. ಅವರ ಈ ನಡವಳಿಕೆಯೇ ಇವತ್ತಿನ ಈ ಬಿಕ್ಕಟ್ಟಿನ ಮೂಲವಾಗಿದೆ…..

ಆದ್ದರಿಂದ, ಹೊಸ ರೂಪಾಂತರವು ಭಾರತಕ್ಕೆ ಬಂದಿದೆ ಮತ್ತು ‘ಇಂಡಿಯನ್’ ರೂಪಾಂತರದ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದ್ದರ ಪರಿಣಾಮವೇ ಇವತ್ತಿನ ದುರಂತಕ್ಕೆ ಕಾರಣ….’

ರಾಮಚಂದ್ರ ಗುಹಾ ಪ್ರಕಾರ, ಹಿಂದೆಲ್ಲ ಸರ್ಕಾರಗಳು ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಪ್ರಮುಖ ಸ್ಥಾನಕ್ಕೆ ನೇಮಿಸುತ್ತಿದ್ದವು. ಅಲ್ಲಿ ಪಕ್ಷನಿಷ್ಠೆ ಅಥವಾ ವ್ಯಕ್ತಿನಿಷ್ಠೆ ನೋಡುತ್ತಿರಲಿಲ್ಲ. ಆದರೆ 2014ರ ನಂತರ ಮೋದಿಯವರು ಗುಜರಾತಿ ಅಧಿಕಾರಿಗಳನ್ನು ದೆಹಲಿಗೆ ಕರೆ ತಂದರು. ಇವರೆಲ್ಲ ವ್ಯಕ್ತಿಪೂಜೆಯ ಆರಾಧಕರು, ಪಿಎಂಒ ಕೂಡ ಅಂತಹವರಿಂದಲೇ ತುಂಬಿತು… ಹೀಗಾಗಿ ಅಲ್ಲಿ ತಜ್ಞತೆಗೆ, ಆಡಳಿತ ದಕ್ಷತೆಗೆ ಅವಕಾಶವೇ ಇಲ್ಲವಾಯಿತು’ ಎನ್ನುತ್ತಾರೆ.

ವಾಷಿಂಗ್ಟನನ್ ಪೋಸ್ಟ್ ಮತ್ತು ದಿ ಗಾರ್ಡಿಯನ್ ಈ ಎರಡು ದಿನಗಳಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ಭಾರತದಲ್ಲಿನ 2ನೆ ಉಲ್ಬಣಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಟೈಟಲ್ಲಿನಲ್ಲಿಯೇ ಸಾರಿವೆ.

ಇವತ್ತು ಬಂಗಾಳದಲ್ಲಿ 6ನೆ ಹಂತದ ಮತದಾನ ಆರಂಭವಾದ ಕೂಡಲೇ ಮೊದಿ ಟ್ವೀಟ್ ಮಾಡಿ, ಎಲ್ಲರೂ ಮತ ಚಲಾಯಿಸಿ ಎನ್ನುತ್ತ ತಮ್ಮ ಸಣ್ಣ ಬುದ್ಧಿ ಪ್ರದರ್ಶಿಸಿದ್ದಾರೆ. ಅವರ ಮೂಗಿನಡಿಯೇ ಜನ ಆಮ್ಲಜನಕ ಅಂದರೆ O2 ಕೊರತೆಯಿಂದ ಸಾಯುವಾಗ ಅವರು ಟ್ವೀಟಿನಲ್ಲಿ ಓಟಿನ ಬೇಟೆಯಾಡುತ್ತಿದ್ದರು. ಈ ಒಂದು ಅಂಶವೇ ಸಾಕು ಅವರ ಹುಚ್ಚು ಶೈಲಿಯ, ಒಣ ಧಿಮಾಕಿನ ಆಡಳಿತ ಶೈಲಿಗೆ ಅಲ್ಲವೇ?

ಒಂದೆಡೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವಾಗ ಬಂಗಾಳದ ಅಸ್ಸನೋಲ್‌ನಲ್ಲಿ ಮೋದಿ ಬೃಹತ್ ರ್ಯಾಲಿ ನಡೆಸುತ್ತಾರೆ. ಇಷ್ಟೊಂದು ಜನಸಂದಣಿ ನಾನು ನೋಡಿಯೇ ಇಲ್ಲ ಎಂದು ಉದ್ಘರಿಸುತ್ತಾರೆ. ಅಲ್ಲದೇ ನಾಳೆ ಬಂಗಾಳದಲ್ಲಿ ಮತ್ತೆ ಮೋದಿಯವರ ರ‍್ಯಾಲಿಗಳಿವೆ. ಅಲ್ಲಿ ಅಪಾರ ಜನಸಂದಣಿ ಸೇರುತ್ತದೆ ಅಥವಾ ಸೇರಿಸುತ್ತಾರೆ. ಹಾಗಾದರೆ ಮೊನ್ನೆ ಮಂಗಳವಾರ 8.45ಕ್ಕೆ ಅವರು ಹೇಳಿದ್ದೇನು? ಈ ಆಷಾಢಭೂತಿತನವೇ ಇವತ್ತಿನ ಕೋವಿಡ್ ದುರಂತದ ಮೂಲ ಅಲ್ಲವೇ?

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...