Homeಕರ್ನಾಟಕಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ

ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ

- Advertisement -
- Advertisement -

ನಯೋಮಿ ಕ್ಲೈನ್ ಎಂಬ ಅಮೇರಿಕನ್ ಸಾಮಾಜಿಕ ಹೋರಾಟಗಾರ್ತಿ ತಮ್ಮ ‘ದ ಶಾಕ್ ಡಾಕ್ಟ್ರೈನ್’ ಎಂಬ ಪುಸ್ತಕದಲ್ಲಿ ರಾಷ್ಟ್ರೀಯ ವಿಪತ್ತುಗಳನ್ನು ಅಧಿಕಾರ ಕೇಂದ್ರಗಳು ಮತ್ತು ಸರ್ಕಾರಗಳು ಹೇಗೆ ದುರುಪಯೋಗಪಡಿಸಿಕೊಳ್ಳುತ್ತವೆ ಎಂಬುದನ್ನು ವಿವರವಾಗಿ ಚರ್ಚಿಸಿದ್ದಾರೆ. ಇಡೀ ದೇಶ ಯಾವುದಾದರೂ ವಿಪತ್ತನ್ನು ಎದುರಿಸುತ್ತಿರುವಾಗ, ಸರ್ಕಾರಗಳು ಅಂತಹ ದುಃಸ್ಥಿತಿಯನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಂಡು ಪರಿಚಯಿಸುವ ವಿವಾದಾತ್ಮಕ ಅಥವ ಪ್ರಶ್ನಾರ್ಹ ನೀತಿಗಳು ಆಗಲೇ ಆಘಾತದಲ್ಲಿ ಇರುವ ಜನರಿಂದ ಯಾವುದೇ ವಿರೋಧ ಇಲ್ಲದೆ ಜಾರಿಯಾಗಿ ಹೋಗುತ್ತವೆ. ನೈಸರ್ಗಿಕ ವಿಪತ್ತುಗಳು ಅಥವಾ ಸಾಂಕ್ರಾಮಿಕಗಳಿಂದ ಮೊದಲೇ ಭಯಭೀತರಾಗಿರುವ ಜನ ಇಂತಹ ನೀತಿಗಳನ್ನು ವಿರೋಧಿಸಲು ಚಿಂತೆ ಮಾಡುವಷ್ಟು ಅಥವಾ ಒಗ್ಗೂಡುವಷ್ಟು ಶಕ್ತರಾಗಿರುವುದಿಲ್ಲ. ತುರ್ತು ಸಮಯದ ಕಾಯ್ದೆಗಳು ಕೂಡ ಅಂತಹುದನ್ನು ತಡೆಯುತ್ತಿರುತ್ತವೆ. ಇಂತಹ ಸಮಯವನ್ನು ದುರುಪಯೋಗಪಡಿಸಿಕೊಳ್ಳುವ ಸರ್ಕಾರಗಳು ತಾವು ಜಾರಿ ಮಾಡುವ ಕಾನೂನು-ನೀತಿ-ನಿಯಮಗಳಿಗೆ ಒಪ್ಪಿಗೆಯನ್ನು ಕೂಡ ಉತ್ಪಾದಿಸಿ ಪಡೆದುಬಿಡುತ್ತವೆ.

ಕೊರೊನ ವೈರಾಣು ಪರೋಕ್ಷವಾಗಿಯಾದರೂ ಬಹುತೇಕ ಎಲ್ಲರನ್ನೂ ಒಂದಲ್ಲಾ ಒಂದು ರೀತಿ ಕಾಡಿದೆ. ಕೆಲವರಿಗೆ ನೇರವಾಗಿ ದಾಳಿ ಮಾಡಿದ್ದರೆ ಮತ್ತೆ ಹಲವರ ಅನ್ನ ನೀರು ಕಸಿದಿದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಡು ಬಡ ಮತ್ತು ಬಡ ಮಧ್ಯಮ ವರ್ಗದ ಜನತೆಯನ್ನು ಆತಂಕಕ್ಕೆ ಎಡೆ ಮಾಡಿದೆ. ಇಂತಹ ಸಮಯದಲ್ಲಿ ಸರಕಾರಗಳು ಎಚ್ಚರಿಕೆಯಿಂದ ನಡೆದುಕೊಂಡು, ಜನರಿಗೆ ಭರವಸೆ ಮೂಡಿಸುವ, ಅವರ ಸ್ಥಿತಿಯನ್ನು ಉತ್ತಮಗೊಳಿಸುವ ನೀತಿಗಳನ್ನು ಆರ್ಥಿಕ ಸುಧಾರಣೆಗಳನ್ನು ಮುಂದುಮಾಡಬೇಕು. ಆದರೆ ಅದಕ್ಕೆ ತದ್ವಿರುದ್ಧವಾಗಿ ಜನರನ್ನು ಇನ್ನೂ ಚಿಂತೆಗೀಡುಮಾಡುವ, ಆರ್ಥಿಕ ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸುವ ಡ್ರಕೋನಿಯನ್ ಕ್ರಮಗಳು ಮತ್ತು ಬದಲಾವಣೆಗಳಿಗೆ ನಿಂತಿರುವುದು ಶೋಚನೀಯ ಸಂಗತಿ.

ಕಾರ್ಮಿಕ ಇಲಾಖೆಯ ನಿರ್ದೇಶಕರಾಗಿದ್ದ ಮಣಿವಣ್ಣನ್ ಅವರ ವರ್ಗಾವಣೆಯನ್ನು ನಾವು ಇದೇ ದೃಷ್ಟಿಯಿಂದ ನೋಡಬೇಕಾಗಿದೆ. ಕೆಲವೇ ಕೆಲವು ದಿನಗಳ ಹಿಂದಕ್ಕೆ ರಿವೈಂಡ್ ಮಾಡಿ ನೋಡೋಣ. ಸುಮಾರು ಎರಡು ತಿಂಗಳ ಲಾಕ್‍ಡೌನ್‍ನಿಂದ ಎಲ್ಲ ವಲಯದ ಜನ, ಉದ್ದಿಮೆಗಳು, ಉದ್ಯಮಿಗಳು, ನೌಕರರು ಚಿಂತೆಗೀಡಾಗಿದ್ದರು. ಇಂತಹ ಸಮಯದಲ್ಲೂ ಯಾವುದೇ ಖಾಸಗಿ ಸಂಸ್ಥೆಯಾಗಲೀ, ಸಾರ್ವಜನಿಕ ಸಂಸ್ಥೆಯಾಗಲೀ ಎಲ್ಲ ನೌಕರರಿಗೂ ವೇತನ ನೀಡಬೇಕು ಮತ್ತು ಯಾರನ್ನೂ ಕೆಲಸದಿಂದ ವಜಾಗೊಳಿಸಬಾರದು ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲಯ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರ ಕೂಡ ಇದನ್ನು ಅನುಸರಿಸಿತ್ತು. ಇದು ಕೇವಲ ಮಾತಿನ ಶೂರತ್ವ ಆಗಬಾರದಿತ್ತು.

ಇದರಿಂದ ಉತ್ತೇಜನಗೊಂಡಿದ್ದ ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ನಿರ್ದೇಶಕ ಮಣಿವಣ್ಣನ್ ಅವರು ಕಾರ್ಮಿಕ ವರ್ಗದ ದೂರು ಪಡೆಯಲು ವೆಬ್ ಪೋರ್ಟಲ್ ಮತ್ತು ಸಹಾಯವಾಣಿಯನ್ನು ಮೇ ಮೊದಲ ವಾರದಲ್ಲಿ ಪ್ರಾರಂಭಿಸಿದ್ದರು. ಒಂದೇ ದಿನಕ್ಕೆ ಕೆಲಸದಿಂದ ವಜಾ ಆದ, ವೇತನ ಸಿಕ್ಕದ, ವೇತನದಲ್ಲಿ ಕಡಿತವಾಗಿದ್ದ ಸುಮಾರು 700 ದೂರುಗಳು ದಾಖಲಾದ ಬೆನ್ನಲ್ಲೇ ರಣಹದ್ದುಗಳು ಎಚ್ಚರಗೊಂಡವು. ಈ ದೂರುಗಳ ಹಿನ್ನಲೆಯಲ್ಲಿ ನೋಟಿಸ್ ಕೊಡುವುದಕ್ಕೆ ತಯಾರಿ ನಡೆಸುವ ಮೊದಲೇ ಸಹಾಯವಾಣಿ ಮತ್ತು ವೆಬ್ ಪೋರ್ಟಲ್‍ಗಳು ಸ್ಥಗಿತಗೊಂಡಿತ್ತು.

ನೋಟಿಸ್ ಪಡೆದಾಕ್ಷಣವೇ ಯಾವ ಉದ್ದಿಮೆಗೂ ಯಾವ ಉದ್ದಿಮೆದಾರನಿಗೂ ಶಿಕ್ಷೆಯಾಗುವುದಿಲ್ಲ. ಉತ್ತರಿಸಲು ಸಮಯ ಇರುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಉದ್ದಿಮೆಗಳಿಗೆ ಆಗಿರುವ ನಷ್ಟವನ್ನು ಸರ್ಕಾರಕ್ಕೆ ತಿಳಿಸಿ ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಬಹುದಿತ್ತು. ಸರ್ಕಾರದಿಂದ ಉತ್ತೇಜನದ ಮತ್ತು ಪರಿಹಾರದ ಭರವಸೆ ಪಡೆದು ಕಾರ್ಮಿಕರಿಗೆ ಆಗಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸಕ್ಕೆ ಪರಸ್ಪರ ಕೈಜೋಡಿಸುವ ಅವಕಾಶ ಇತ್ತು. ಆದರೆ ಏಕಾಏಕಿ ದೂರುಗಳನ್ನು ತೆಗೆದುಕೊಂಡ ಅಧಿಕಾರಿಯ ಮೇಲೆ ಏರಿ ಬಿದ್ದ ಈ ಕರ್ನಾಟಕ ಉದ್ದಿಮೆದಾರರ ಸಂಘ ಮತ್ತು ಸಮಾನಮನಸ್ಕರ ರಾಜಕಾರಣಿಗಳು, ಸಮಸ್ಯೆ ಬಗೆಹರಿಸಿಕೊಳ್ಳಲು ಇದ್ದ ಸಣ್ಣ ಕಿಂಡಿಯನ್ನು ಮುಚ್ಚಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್ ಅವರನ್ನು ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿಸಲು ಕಾರಣಕರ್ತರಾಗಿದ್ದಾರೆ. ಕೈಗಾರಿಕೆ ಮತ್ತು ಉದ್ದಿಮೆಗಳ ಹಿತ ಕಾಯಲು ಇರುವ ಇಲಾಖೆಯ ಅಧಿಕಾರಿಗೆ ಕಾರ್ಮಿಕರ ಹಿತ ಕಾಯುವ ಕೆಲಸವನ್ನು ನೀಡಿರುವ ವಿಪರ್ಯಾಸ ಕುರಿಗಳನ್ನು ಕಾಯುವುದಕ್ಕೆ ತೋಳವನ್ನು ಕೇಳಿಕೊಂಡಂತೆ ಆಗುವುದಿಲ್ಲವೇ?

ಈ ಬೆಳವಣಿಗೆ ಕುರಿತು ಸತೀಶ್ ಆಚಾರ್ಯ ಅವರು ಬರೆದ ವ್ಯಂಗ್ಯಚಿತ್ರ

ಈ ವಿದ್ಯಮಾನಕ್ಕೂ ಕೆಲವೇ ದಿನಗಳ ಹಿಂದೆ ಕೈಗಾರಿಕೆ ಇಲಾಖೆ, ಕಾರ್ಮಿಕ ಕಾನೂನುಗಳನ್ನು ಬದಲಾಯಿಸಲು ಮತ್ತು ಸಡಿಲಗೊಳಿಸಲು ಒತ್ತಡ ಹಾಕಿತ್ತು. ಇದನ್ನು ಕಾರ್ಮಿಕ ಇಲಾಖೆ ವಿರೋಧಿಸಿದ್ದು ಕೂಡ ವರದಿಯಾಗಿತ್ತು. ಗುಜರಾತಿನಲ್ಲಿ ಆಗಲೇ ನಿರ್ಣಯ ತೆಗೆದುಕೊಂಡಿರುವಂತೆ ಕಾರ್ಮಿಕರ ಕೆಲಸದ ಅವಧಿಯನ್ನು 8 ಘಂಟೆಗಳಿಂದ 12 ಘಂಟೆಗಳವರೆಗೆ ಹೆಚ್ಚಿಸುವುದಕ್ಕೆ ಮಹೇಶ್ವರ್‍ರಾವ್ ಅವರು ಸಲಹೆ ನೀಡಿದ್ದರು. ಎಪ್ರಿಲ್ 2020ಕ್ಕೆ ಜಾರಿಯಾಗಬೇಕಿದ್ದ ಪರಿಷ್ಕøತ ಕೂಲಿಯ ನಿರ್ದೇಶನವನ್ನು ಒಂದು ವರ್ಷದವರೆಗೆ ಮುಂದೂಡುವಂತೆ, ವೇತನದ ಭಾಗವಾದ ಡಿಎ ರದ್ದು ಮಾಡುವಂತೆ, ಹಾಗೆಯೇ ಪಿಎಫ್ ಮತ್ತು ಇಎಸ್‍ಐ ಕೊಡುಗೆಯನ್ನು ಕೈಬಿಡುವ ಸಲಹೆ ನೀಡಿದ್ದರು. ಇವೆಲ್ಲವೂ ಕಾರ್ಮಿಕ ವಿರೋಧಿ ನಡೆಗಳಾಗಿದ್ದು ಹಲವು ಕಾರ್ಮಿಕ ಸಂಘಟನೆಗಳು ಮೊದಲಿಂದಲೂ ವಿರೋಧಿಸುತ್ತಲೇ ಇವೆ. ಇಂತದ್ದಕ್ಕೆ ಸೊಪ್ಪು ಹಾಕದ ಮಣಿವಣ್ಣನ್ ಅವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈಗ ಮಹೇಶ್ವರ್‍ರಾವ್ ಅವರು ಕಾರ್ಮಿಕ ಇಲಾಖೆಗೆ ನೀಡಿದ್ದ ಸಲಹೆಗಳನ್ನು ತಾವೇ ಅನುಮೋದಿಸಲು ಬಂದಿದ್ದಾರೆ. ಅದಕ್ಕಿಂತಲೂ ಭೀಕರ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಯೋಗಿಯವರ ಉತ್ತರಪ್ರದೇಶದಲ್ಲಿ ಕಾರ್ಮಿಕ ಕಾನೂನುಗಳನ್ನು ಮೂರು ವರ್ಷ ಗಾಳಿಗೆ ತೂರುವಂತೆ ಆಗಲೇ ಆದೇಶವಾಗಿದೆ. ಉತ್ತರ ಪ್ರದೇಶ ಮಾದರಿಯನ್ನು ಕೂಡ ಕರ್ನಾಟಕ ಅಧ್ಯಯನ ಮಾಡುತ್ತಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಆಡಳಿತದ ರಾಜಸ್ಥಾನ ರಾಜ್ಯ ಕೂಡ ಇದಕ್ಕೆ ಹಿಂದೆ ಬಿದ್ದಿಲ್ಲ. ರಣ ಹದ್ದುಗಳ ಕೇಕೆಗೆ ಕಾರ್ಮಿಕ ಕಾನೂನುಗಳ ದುರುಪಯೋಗ ಆಗದಂತೆ ಇನ್ನು ಕರ್ನಾಟಕದಲ್ಲಿ ಎಚ್ಚರಿಕೆ ವಹಿಸುವವರು ಯಾರು?

ಇದು ಆರ್ಥಿಕ ಸುಧಾರಣೆಗೆ ಮಾರಕ!

ಕೊರೊನ ಸಾಂಕ್ರಾಮಿಕ ಪಿಡುಗು ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತವನ್ನು ಜಾಗತಿಕವಾಗಿ ತಂದೊಡ್ಡಿದೆ. ಉತ್ಪಾದನೆ ಸ್ಥಗಿತ ಮತ್ತು ಕೊಳ್ಳುವ ಸಾಮಥ್ರ್ಯ ಏಕಕಾಲಕ್ಕೆ ಕುಸಿದಿರುವುದರಿಂದ ಉಂಟಾಗಿರುವ ಈ ಆರ್ಥಿಕ ಹಿಂಜರಿತವನ್ನು ಜಾಗರೂಕತೆಯಿಂದ ನಿಭಾಯಿಸಬೇಕಿದೆ. ಒಂದು ಕಡೆ ಉತ್ಪಾದನೆಗೆ ಇಂಬು ನೀಡುತ್ತಲೇ, ಜನರ ಉದ್ಯೋಗ ಕಡಿತವಾಗದಂತೆ, ನಿರುದ್ಯೋಗ ಹೆಚ್ಚಾಗದಂತೆ, ಜನರ ಕೊಳ್ಳುವ ಸಾಮಥ್ರ್ಯ ಮರುಕಳಿಸುವಂತಹ ಕ್ರಮಗಳಿಗೆ ಸರ್ಕಾರಗಳು ಮುಂದಾಗಬೇಕು.

ಈಗ ಕಾರ್ಮಿಕರ ಕೆಲಸದ ಅವಧಿಯನ್ನು 8 ಘಂಟೆಗಳಿಂದ 12 ಘಂಟೆಗಳಿಗೆ ಹೆಚ್ಚಿಸುವ ಬೇಡಿಕೆಯನ್ನೇ ನೋಡೋಣ. ಈಗಾಗಲೇ ಉತ್ಪಾದನೆಯ ಬೇಡಿಕೆ ಕುಸಿದಿದೆ. ಈ ಸಮಯದಲ್ಲಿ ಮೂರು ಜನ ಮಾಡುತ್ತಿದ್ದ 24 ಘಂಟೆಗಳ ಕೆಲಸವನ್ನು ಇಬ್ಬರು ಮಾಡಬೇಕು ಎನ್ನುವ ತಿದ್ದುಪಡಿ ತಂದರೆ, ಒಬ್ಬರ ಕೆಲಸಕ್ಕೆ ಕುತ್ತು ಬಂತು. ನಿರುದ್ಯೋಗಕ್ಕೆ ಇದು ನೇರ ಕಾರಣವಾಗಲಿದೆ. ಅಥವಾ ಉಳಿದ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವುದರಿಂದ ಒಂದು ಪಕ್ಷ ಉದ್ಯೋಗಗಳನ್ನು ಕಡಿತಗೊಳಿಸದೆ ಹೋದರೂ ಈಗ 8 ಘಂಟೆಯ ಅವಧಿಯ ದುಡಿಮೆಯ ಆದಾಯವನ್ನು 12 ಘಂಟೆಯು ಕೆಲಸಕ್ಕೆ ನೀಡುವಂತೆ ಆದರೆ, ಅದರ ಪರಿಣಾಮವಾಗಿ ಒಂದು ಘಂಟೆಯ ಆದಾಯ ಸುಮಾರು 30% ಕಡಿಮೆಯಾದಂತೆ. ಇದು ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತದೆ. ಇದು ಕುಸಿಯುತ್ತಿರುವ ಆರ್ಥಿಕತೆಗೆ ಇನ್ನಷ್ಟು ಪುಷ್ಟಿ ನೀಡುತ್ತದೆ.

ಆದುದರಿಂದ ಉದ್ದಿಮೆಗಳಿಗೆ ಮತ್ತು ಉದ್ಯಮಿಗಳಿಗೆ ತಮ್ಮ ಲಾಭವನ್ನಷ್ಟೇ ಲೆಕ್ಕಾಚಾರ ಮಾಡುವ ಸಮಯ ಇದಲ್ಲ. ಇದು ಇಡೀ ದೇಶದ ಆರ್ಥಿಕತೆಯ ಪ್ರಶ್ನೆಯಾಗಿದೆ. ಉದ್ದಿಮೆಗಳನ್ನು ನಡೆಸಲು ಇರುವ ಸಮಸ್ಯೆಗಳನ್ನು ಸರ್ಕಾರದ ಜೊತೆಗೆ ನೇರವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಕಾರ್ಮಿಕರ ಹಕ್ಕುಗಳನ್ನು ಅವರ ದುಡಿಮೆಯನ್ನು ಕಿತ್ತುತಿನ್ನುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಅಂತಹ ಕ್ರಮಕ್ಕೆ ಯಾವ ಸಮಯದಲ್ಲಿಯೂ ಮುಂದಾಗಬಾರದು. ಇದನ್ನು ಬರೆಯುವ ಹೊತ್ತಿಗೆ ಸುಮಾರು 20 ಲಕ್ಷ ಕೋಟಿ ರೂ ಪರಿಹಾರ ಪ್ಯಾಕೇಜ್‍ಅನ್ನು ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ. ವಿವರಗಳು ಲಭ್ಯವಾಗಬೇಕಿವೆ. ಉದ್ದಿಮೆಗಳಿಗೆ ತೆರಿಗೆ ವಿನಾಯಿತಿ ರೂಪದಲ್ಲಿಯೋ, ಸಾಲಗಳ ಮರುಪಾತಿಯಲ್ಲಿ ಬಡ್ಡಿ ವಿನಾಯಿತಿಯ ದೃಷ್ಟಿಯಿಂದಲೋ ಹಲವು ಪರಿಹಾರಗಳು ದೊರಕಬಲ್ಲವು. ಇಂತಹುವುಗಳನ್ನು ಆರ್ಥಿಕ ಚೇತರಿಕೆಗೆ ಬಳಸಿಕೊಂಡು ಅಗತ್ಯ ಬಿದ್ದರೆ ಸರ್ಕಾರಗಳಿಗೆ ಇನ್ನಷ್ಟು ಬೇಡಿಕೆಯನ್ನು ಇಟ್ಟು, ಕಾರ್ಮಿಕರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಉದ್ದಿಮೆಗಳು ಮುಂದುವರೆಯಬೇಕು.

ಕರ್ನಾಟಕ ಉದ್ದಿಮೆದಾರರ ಸಂಘದ ಅಧ್ಯಕ್ಷ ಬಿ.ಸಿ.ಪ್ರಭಾಕರ್ ಅವರ “ಧರ್ಮ ಯುದ್ಧ”!

ಕೊರೊನ ಬಡಕಾರ್ಮಿಕರಿಗೆ ಸೃಷ್ಟಿ ಮಾಡಿರುವ ಸಮಸ್ಯೆಗೆ ಭಾರತದ ಮಧ್ಯಮ ವರ್ಗ ಮತ್ತು ಸಿರಿವಂತ ವರ್ಗದ ಉಪೇಕ್ಷೆಯ ಧೋರಣೆಗೆ ಕರ್ನಾಟಕ ಉದ್ದಿಮೆದಾರರ ಸಂಘದ ಅಧ್ಯಕ್ಷ ಬಿ.ಸಿ.ಪ್ರಭಾಕರ್ ಅವರು ಮಣಿವಣ್ಣನ್ ಅವರ ಕ್ರಮಗಳನ್ನು ಖಂಡಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರ ಕನ್ನಡಿಯಂತಿದೆ. ಉದ್ದಿಮೆದಾರರನ್ನು “ಉದ್ಯೋಗದಾತ” ಮತ್ತು “ಅನ್ನದಾತ” ಎಂಬ ಹುಸಿ ವಿಶೇಷಣಗಳಿಂದ ಹೊಗಳಿಕೊಂಡಿರುವ ಪತ್ರ, ಲಾಭಕೋರ ನವ ಉದಾರೀಕರಣವನ್ನು “ಧರ್ಮ” ಎಂಬಂತೆ ಬಿಂಬಿಸುತ್ತಾ, ಕಾರ್ಮಿಕರನ್ನು ತಮ್ಮ ಉದ್ದಿಮೆಯ ಪಾಲುದಾರರು ಎಂಬಂತೆ ಕಾಣದೆ ಅಪರಾಧಿಗಳು ಎಂಬ ರೀತಿಯಲ್ಲಿ ವರ್ಣಿಸಿ ಪತ್ರ ಬರೆದಿದ್ದಾರೆ. ತಾವು ಬರೆದಿರುವ ಒಂಭತ್ತನೆಯ ಅಂಶದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕ ಇಲಾಖೆ ಕಾರ್ಮಿಕ ಇಲಾಖೆ “ಅನ್ನದಾತರ” ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ಕಾರ್ಮಿಕರ ಸಮಸ್ಯೆಯನ್ನು ಆಲಿಸುವುದಕ್ಕೆ ವೆಬ್ ಪೋರ್ಟಲ್ ಮತ್ತು ಸಹಾಯವಾಣಿ ಪ್ರಾರಂಭ ಮಾಡಿದ್ದರ ವಿರುದ್ಧ ದೂಷಣೆ ಮಾಡಿರುವುದನ್ನು ರಾಜ್ಯ ಸರ್ಕಾರ ಯಾವ ರೀತಿಯಲ್ಲಿಯೂ ಪುರಸ್ಕರಿಸಬಾರದಿತ್ತು. ಈ ಪತ್ರದಲ್ಲಿ ಬಳಸಿರುವ ಭಾಷೆಯನ್ನೂ ಖಂಡಿಸಿ ಕಾರ್ಮಿಕರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕಿತ್ತು. ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದಲೇ ಉದ್ದಿಮೆದಾರರಿಗೆ ಸಂಪತ್ತು ಸೃಷ್ಟಿಯಾಗುತ್ತಿರುವುದು ಎಂಬ ಮೂಲಭೂತ ತತ್ವವನ್ನು ತಿಳಿಸಿ, ಮನಗಾಣಿಸಿ ಈ ಸಮಯದಲ್ಲಿ ಆಗುತ್ತಿರುವ ತೊಂದರೆಗೆ ಸ್ಪಂದಿಸುವುದಾಗಿ ಸರ್ಕಾರ ಜನಪರವಾದ ಆಶಯ ತಳೆಯಬೇಕಿತ್ತು.

ಇಡೀ ದೇಶ ಸಮಸ್ಯೆಯಲ್ಲಿ ಮುಳುಗಿರುವಾಗ ಯಾವುದೇ ಚರ್ಚೆಯಾಗದೆ ಸರ್ಕಾರ ತಂದಿರುವ ಕರ್ನಾಟಕ ಭೂಸುಧಾರಣೆಗಳ (ತಿದ್ದುಪಡಿ) ವಿಧೇಯಕ, ಎಪಿಎಂಸಿ ಕಾಯ್ದೆಗೆ ತರಬೇಕೆಂದುಕೊಂಡಿರುವ ದಮನಕಾರಿ ತಿದ್ದುಪಡಿ, ಈಗ ಕಾರ್ಮಿಕ ಕಾಯ್ದೆಗೆ ತಿಲಾಂಜಲಿ ಇಡಲು ನಡೆಸಿರುವ ಸಿದ್ಧತೆ ಎಲ್ಲವೂ ಮಾರಕವಾದವೇ. ಬೇರೆ ಸಮಯದಲ್ಲಿಯಾದರೆ ಇಂತಹ ತಿದ್ದುಪಡಿಗಳಿಗೆ ಜನಸಾಮಾನ್ಯರಿಂದ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದವು. ಇಂತಹ ಸಮಯವನ್ನು ಜನಪರವಾದ ಯಾವ ಸರ್ಕಾರವೂ ದುರುಪಯೋಗಪಡಿಸಿಕೊಳ್ಳಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...