Homeಅಂತರಾಷ್ಟ್ರೀಯಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಕೈದಿಗಳು ಪೋಲಿಸ್ ಆತಿಥ್ಯದಲ್ಲಿ ತಾವು ಮಾಡದೇ ಇದ್ದ ತಪ್ಪನ್ನೂ ಸಹ ತಮ್ಮದೇ ಎಂದು ಕೆಲವೊಮ್ಮೆ ಒಪ್ಪಿಕೊಳ್ಳುವುದು ಏಕೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ಒಂದು ವೈಜ್ಞಾನಿಕ ಉತ್ತರ, ನಾನು ಹೇಳುತ್ತಿರುವುದು ಓರ್ವ ವಿಕಸಿತ ದೇಶದ ಪೋಲಿಸ್ ಕಾರ್ಯ ವೈಖರಿಯನ್ನು ಆಧರಿಸಿದ ವಿಚಾರವಾದ. (ಡಿಸ್ಕ್ಲೇಮರ್: ಇದು ನಮ್ಮ ದೇಶದ ಪೋಲಿಸ್ ಬಗ್ಗೆ ಅಲ್ಲ, ಏಕೆಂದರೆ ಅವರ ತನಿಖಾ/ವಿಚಾರಣಾ ವೈಖರಿಯ ಬಗ್ಗೆ ನನಗೆ ಯಾವ ವೈಯುಕ್ತಿಕ ಅನುಭವವೂ ಇಲ್ಲ). ಇದು ಒಂದು ಆಟದ ರೀತಿಯಲ್ಲಿರುವ ತತ್ವವಾದ. ಇದನ್ನು “ದಿ ಪ್ರಿಸನರ್ಸ್ ಡೈಲೆಮ್ಮಾ” (ಕೈದಿಗಳ ಉಭಯ ಸಂಕಟ) ಎನ್ನುತ್ತಾರೆ.

ಒಂದು ದಿನ, ಏಕ ಕಾಲಕ್ಕೆ, ನಗರದ ಪೋಲಿಸರು ಇಬ್ಬರು ಅಪರಾಧಿಗಳನ್ನು, ಒಂದೇ ರೀತಿಯ ಅಪರಾಧಕ್ಕೆ ಬಂಧಿಸಿ, ಒಂದೇ ಲಾಕಪ್ಪಿನ ಬೇರೆ ಬೇರೆ ಕೋಣೆಯಲ್ಲಿ ಹಾಕುತ್ತಾರೆ. ಒಬ್ಬನ ಹೆಸರು “ಎ”, ಇನ್ನೊಬ್ಬನ ಹೆಸರು “ಬಿ” ಎಂದು ಇಟ್ಟುಕೊಳ್ಳೋಣ. ಇಬ್ಬರಿಗೂ ಪರಸ್ಪರ ಯಾವ ರೀತಿಯ ಪರಿಚಯವೂ ಇಲ್ಲ, ಹೆಸರಾಗಲೀ ಗೊತ್ತಿಲ್ಲ, ಕೇಳಿಲ್ಲ, ಸಂಬಂಧವಾಗಲೀ, ಸಂಪರ್ಕವಾಗಲೀ, ಅನುಕಂಪವಾಗಲೀ ಇಲ್ಲ. ಇಬ್ಬರಿಗೂ ಅವರು ಮಾಡಿ ಸಿಕ್ಕಿಬಿದ್ದ ಅಪರಾಧಕ್ಕೆ ಸಿಗಬಹುದಾದ ಶಿಕ್ಷೆಯೂ ಒಂದೇ ಪ್ರಮಾಣದ್ದಾಗಿರುತ್ತದೆ. ವಿಚಾರಣಗೆ ಬಂದ ತನಿಖಾಧಿಕಾರಿ ಇಬ್ಬರ ದಾಖಲೆಯನ್ನು ನೋಡಿ ಇಬ್ಬರಿಗೂ ಒಂದು ವರ್ಷ ಕಾರಾಗೃಹವಾಸ ಖಚಿತ ಎಂದುಕೊಳ್ಳುತ್ತಾನೆ. ಆದರೆ ಏನೋ ಅನುಮಾನ ಬಂದು, ಇವರಿಬ್ಬರೂ ಸೇರಿ ಇನ್ಯಾವುದೋ ದೊಡ್ಡ ಅಪರಾಧ ಏಕೆ ಎಸಗಿರಬಾರದು ಎಂದು ಯೋಚಿಸುತ್ತಾನೆ.

ಅದೇ ಲಹರಿಯಲ್ಲಿ ತನ್ನ ತನಿಖೆ ಮುಂದುವರೆಸುತ್ತಾ, ಮೊದಲು “ಎ” ಜೊತೆ ಮಾತನಾಡುತ್ತಾ “ನೋಡು, ಇಂದು ನೀನು ಸಿಕ್ಕಿಬಿದ್ದ ಅಪರಾಧಕ್ಕೆ ನಿನಗೆ ಒಂದು ವರ್ಷ ಜೈಲು ಶಿಕ್ಷೆ ಖಚಿತ ಆದರೆ ಹೋದ ವಾರ ನೀನು ಮತ್ತು ನಿನ್ನ ಸಂಗಡಿಗ ಮಾಡಿದ ಜಂಟಿ ಅಪರಾಧಕ್ಕೂ ಸೇರಿ, ಒಟ್ಟು ಮೂರು ವರ್ಷ ಜೈಲಾಗುತ್ತದೆ. ನಿನ್ನ ಸ್ನೇಹಿತನೂ ನಮ್ಮ ಕೈಗೆ ಸಿಕ್ಕಿದ್ದಾನೆ. ನೀವಿಬ್ಬರೂ ಅಪರಾಧ ಒಪ್ಪಿಕೊಂಡಲ್ಲಿ ಇಬ್ಬರಿಗೂ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗದಂತೆ ನಾನು ಭರವಸೆ ಕೊಡುತ್ತೇನೆ. ಒಂದು ಪಕ್ಷ ನೀವಿಬ್ಬರೂ ನಿರಾಕರಿಸಿದರೆ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಆಗುತ್ತದೆ, ಆದರೆ ನೀನು ನಮ್ಮೊಂದಿಗೆ ಸಹಕರಿಸಿ, ಅಪರಾಧ ಒಪ್ಪಿಕೊಂಡು, ನಿನ್ನ ಸಂಗಡಿಗ ಒಪ್ಪಿಕೊಳ್ಳದಿದ್ದರೆ ನಿನಗೆ ಕೇವಲ ಒಂದು ವರ್ಷ ಜೈಲು ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಆದರೆ ಅಂತಹ ಪರಿಸ್ಥಿತಿಯಲ್ಲಿ ನಿನ್ನ ಸಂಗಡಿಗನಿಗೆ ಹತ್ತು ವರ್ಷ ಜೈಲು ಗ್ಯಾರಂಟಿ. ಅದೇ ರೀತಿ ನಿನ್ನ ಸಂಗಡಿಗ ನಮ್ಮೊಂದಿಗೆ ಸಹಕರಿಸಿ, ತಪ್ಪೊಪ್ಪಿಕೊಂಡು, ನೀನು ನಿರಾಕರಿಸಿದಲ್ಲಿ, ನಿನಗೆ ಹತ್ತು ವರ್ಷ, ನಿನ್ನ ಸಂಗಡಿಗ ಒಂದು ವರ್ಷದಲ್ಲಿ ಜೈಲಿನಿಂದ ಹೊರಹೋಗುತ್ತಾನೆ, ಸರಿಯಾಗಿ ಯೋಚಿಸಿ ನೋಡು” ಎಂದು ಹೇಳಿ ಹೊರ ಹೋಗುತ್ತಾನೆ.

ಇದೇ ವರಸೆಯನ್ನು ಆತ “ಬಿ” ಕೈದಿಗೂ ವಿವರಿಸುತ್ತಾನೆ. ಇಬ್ಬರೂ ಮಾಡಿರುವುದು ಕೇವಲ ಒಂದು ವರ್ಷ ಶಿಕ್ಷೆ ಆಗಬಹುದಾದ ಅಪರಾಧ. ಇಬ್ಬರೂ ಸೇರಿ ಯಾವ ಜಂಟೀ ಅಪರಾಧವನ್ನು ಮಾಡಿರುವುದಿಲ್ಲ. ಒಬ್ಬನಿಗೆ ಇನ್ನೋರ್ವ ಹೇಗೆ ಪ್ರತಿಕ್ರಿಯೆ ನೀಡುತ್ತಾನೆಂಬುದು ತಿಳಿದಿಲ್ಲ. ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಅವರ ತಪ್ಪಿಗೆ ಆಗಬೇಕಾದ ಶಿಕ್ಷೆ ಒಂದು ವರ್ಷ. ಈಗ ನೀವೇ ಹೇಳಿ ಅವರಿಗೆ ಅವರ ತಪ್ಪೊಪ್ಪಿಗೆ/ನಿರಾಕರಣೆಯ ಆಧಾರದ ಮೇಲೆ ಎಷ್ಟು ಶಿಕ್ಷೆ ಆಗುತ್ತದೆ? ಇಬ್ಬರೂ ಕೈದಿಗಳು ತಾವು ಮಾಡದೇ ಇದ್ದ ತಪ್ಪು ಒಪ್ಪಿಕೊಳ್ಳಬೇಕೋ ಬೇಡವೋ? ಇದೇ “ಪ್ರಿಸನರ್ಸ್ ಡೈಲೆಮ್ಮಾ” – ಕೈದಿಗಳ ಉಭಯ ಸಂಕಟ.

ಈ ಆಟವನ್ನು “ದಿ ಗೇಮ್ ಥಿಯರಿ” ಎಂದೂ ಕರೆಯುತ್ತಾರೆ. ಇದನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ಕಂಪನಿಯ ರಣನೀತಿ ತಂಡದವರು (Strategy Team) ನಿಯಮಿತವಾಗಿ ಉಪಯೋಗಿಸುತ್ತಾರೆ. ಇದು ಮನಶಾಸ್ತ್ರ, ಮಾನವ ನಡತೆ ಆಧರಿಸಿದ ಅರ್ಥಶಾಸ್ತ್ರ (ಬೆಹೇವಿಯರಲ್ ಎಕನಾಮಿಕ್ಸ್) ಮತ್ತು ಗಣಿತಶಾಸ್ತ್ರವನ್ನು ಆಧರಿಸಿರುತ್ತದೆ. ಇದನ್ನು 1950ರಲ್ಲಿ ಮೂಲರೂಪದಲ್ಲಿ ಸೃಷ್ಟಿಸಿದವರು ಅಮೇರಿಕದ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಸಂಸ್ಥೆಯ ಮೆರ್ರಿಲ್ ಫ್ಲಡ್ ಮತ್ತು ಮೆಲ್ವಿನ್ ಡ್ರೆಶರ್. ನಂತರ ಇದನ್ನು ಜೈಲು ಶಿಕ್ಷೆಯ ಆಟದ ಸ್ವರೂಪದಲ್ಲಿ ನಿರ್ಮಿಸಿದವರು ಆಲ್ಬರ್ಟ್ ಟಕರ್ ಎಂಬುವಾತ. ಇದರ ಉದ್ದೇಶ ಸಂಪೂರ್ಣ ಬುದ್ಧಿ ಸ್ಥಿಮಿತವುಳ್ಳ, ತಮ್ಮ ಸ್ವಹಿತವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ಇಬ್ಬರು ವ್ಯಕ್ತಿಗಳು ಏಕೆ ಸರಿಯಾದ ನಿರ್ಣಯಕ್ಕೆ ಬರಲಾಗುವುದಿಲ್ಲ ಎಂಬುದನ್ನು ಸಿದ್ಧಗೊಳಿಸುತ್ತದೆ.

ಎ ಮತ್ತು ಬಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿರುವ ಗಣಿತಶಾಸ್ತ್ರ ಆಧಾರದ ಲಾಭ-ನಷ್ಟದ ಕೋಷ್ಟಕ ನೋಡೋಣ. ಇದನ್ನು payoff matrix ಎಂದು ಕರೆಯುತ್ತಾರೆ.

ಮೊದಲೇ ತಿಳಿಸಿದಂತೆ ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಕೈದಿಗಳ ತಪ್ಪಿಗೆ ಆಗಬೇಕಾಗಿರುವ ಶಿಕ್ಷೆ ಕೇವಲ ಒಂದು ವರ್ಷ (ಆಯ್ಕೆ-4). ಕೈದಿಗಳು ಪರಸ್ಪರ ಮಾತನಾಡಿಕೊಳ್ಳಲು ಸಾಧ್ಯವಾಗಿದ್ದಲ್ಲಿ ಇಬ್ಬರೂ ತಾವು ಇನ್ಯಾವ ಅಪರಾಧವನ್ನೂ ಮಾಡಿಲ್ಲ ಎಂದು ಆಪಾದನೆಯನ್ನು ನಿರಾಕರಿಸಿ ತಮ್ಮ ಆಯ್ಕೆ-4 ಎನ್ನುತ್ತಿದ್ದರು. ಆದರೆ ಪರಸ್ಪರ ಸಂಪರ್ಕವಿಲ್ಲದೆ ಇರುವುದರಿಂದ, ಇನ್ನೊಬ್ಬ ಯಾವ ರೀತಿ ಹೇಳಿಕೆ ನೀಡುತ್ತಾನೆಂದು ತಿಳಿಯದೆ, ಕೇವಲ ತನ್ನ ಹಿತ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಬ್ಬರೂ ಸಹಕರಿಸುತ್ತಾರೆ (ಆಯ್ಕೆ-1) ಅಂದರೆ ಇಬ್ಬರಿಗೂ 3 ವರ್ಷ ಶಿಕ್ಷೆಯಾಗುತ್ತದೆ, ಆಶ್ಚರ್ಯವಲ್ಲವೇ?

ಹೇಗೆಂದು ನೋಡೋಣ: ಇಬ್ಬರಿಗೂ ಇರುವ ಆಯ್ಕೆಗಳು ಎರಡು – ಸಹಕರಿಸುವುದು ಅಥವಾ ನಿರಾಕರಿಸುವುದು. ಎ ವತಿಯಿಂದ ಯೋಚಿಸುವುದಾದರೆ – ಆತ ಸಹಕರಿಸಲು ನಿರ್ಧರಿಸಿದಲ್ಲಿ ಬಿ ಸಹಕರಿಸಬಹುದು ಅಥವಾ ನಿರಾಕರಿಸಬಹುದು. ಅಕಸ್ಮಾತ್ ಬಿ ಸಹಕರಿಸಿದ್ದೇ ಆದಲ್ಲಿ ಇಬ್ಬರ ಆಯ್ಕೆಯೂ 1 ಆಗುತ್ತದೆ. ಬಿ ನಿರಾಕರಿಸಿದಲ್ಲಿ ಎ ಆಯ್ಕೆ-2 ಆಗುತ್ತದೆ ಮತ್ತು ಇದರಿಂದ ಎ ಗೆ ಹೆಚ್ಚಿನ ಲಾಭ,ಕೇವಲ 1 ವರ್ಷ ಶಿಕ್ಷೆ ಇದ್ದು, ಬಿ ಗೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಎ ನಿರಾಕರಿಸಲು ನಿರ್ಧರಿಸಿದಲ್ಲಿ, ಬಿ ಏನಾದರೂ ಸಹಕರಿಸಲು ಮುಂದಾದರೆ ಎ ಗೆ ಹೆಚ್ಚಿನ ನಷ್ಟ (10 ವರ್ಷ) ಮತ್ತು ಬಿ ಒಂದು ವರ್ಷದಲ್ಲಿ ಮುಕ್ತನಾಗುವ ಸಾಧ್ಯತೆ ಇದೆ (ಆಯ್ಕೆ 3). ಬಿ ಕೂಡ ನಿರಾಕರಿಸಬಹುದು, ಆಗ ಇಬ್ಬರಿಗೂ (ಆಯ್ಕೆ 4) ಒಂದು ವರ್ಷದ ಶಿಕ್ಷೆಯೇನೋ ಸಿಗುತ್ತದೆ ಆದರೆ ಬಿ ಖಂಡಿತ ಹಾಗೆಯೇ ಮಾಡುತ್ತಾನೆಂಬ ಖಾತ್ರಿ ಇಲ್ಲವಾಗಿ, ಎಲ್ಲಿ ಆಯ್ಕೆ-2ರಿಂದ ಆಯ್ಕೆ-3ಕ್ಕೆ ತಿರುಗಬಹುದೋ ಎಂಬ ಆತಂಕದಿಂದ ಆತ ಆಯ್ಕೆ-1ಕ್ಕೆ ಮನಸ್ಸು ಮಾಡುತ್ತಾನೆ. ಅದೇ ರೀತಿ ಬಿ ವತಿಯಿಂದ ಯೋಚಿಸಿದಾಗಲೂ ತಾನು ನಿರಾಕರಿಸುವುದರಿಂದ ಎಲ್ಲಿ ಆಯ್ಕೆ-4 ರ ಬದಲಾಗಿ ತನ್ನ ಆಯ್ಕೆ-2ಕ್ಕೆ ತಿರುಗುತ್ತದೋ ಎಂಬ ಹೆದರಿಕೆಯಿಂದ  ಆತನೂ ಆಯ್ಕೆ-1ಕ್ಕೆ ಮುಂದಾಗುತ್ತಾನೆ.

ಇದರಲ್ಲಿ ಆಯ್ಕೆ-4 ಎಲ್ಲರ ಹಿತದೃಷ್ಟಿಯಿಂದಲೂ ಸಮಂಜಸವಾಗಿದ್ದರೂ ಸಹ ಅದು ಕ್ಷಣಿಕ ಮತ್ತು ಅಸ್ಥಾಯಿ, ಏಕೆಂದರೆ ಇನ್ನೊಬ್ಬ ತನ್ನ ನಿರ್ಧಾರ ಬದಲಾಯಿಸಿದಲ್ಲಿ ಮೊದಲನೆಯವನಿಗೆ ಆಗಬಹುದಾದ ಲಾಭಕ್ಕಿಂತ ಹೆಚ್ಚು ನಷ್ಟವಾಗುವ ಸಾಧ್ಯತೆಯೇ ಇದೆ. ಆದ್ದರಿಂದ ಆಯ್ಕೆ-1 ಮಾತ್ರ ಸ್ಥಾಯೀ ಆಗುತ್ತದೆ. ಈ ಆಯ್ಕೆಯನ್ನು “ನ್ಯಾಷ್ ಇಕ್ವಿಲಿಬ್ರಿಯಂ” ಎನ್ನುತ್ತಾರೆ. ಇದನ್ನು ಗಣಿತಶಾಸ್ತ್ರದಂತೆ ಸಿದ್ಧಪಡಿಸಿದ ಖ್ಯಾತಿ ನೋಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಷ್ ಅವರಿಗೆ ಸಲ್ಲುತ್ತದೆ. ಇವರ ತರ್ಕದ ಪ್ರಕಾರ ಇಬ್ಬರು ಅಥವಾ ಹೆಚ್ಚಿನ ಆಟಗಾರರಿರುವಂತಹ ಆಟದಲ್ಲಿ, ಮಿಕ್ಕವರು ತಮ್ಮ ಆಯ್ಕೆ ಬದಲಾಯಿಸದೇ ಇದ್ದಲ್ಲಿ, ಯಾವ ಆಟಗಾರನೂ ತನ್ನ ಸ್ವಂತ ಆಯ್ಕೆಯ ಬದಲಾವಣೆಯಿಂದ ಲಾಭ ಪಡೆದುಕೊಳ್ಳಲಾಗದು. ಈ ತರ್ಕ ಕೇವಲ ಕ್ರೀಡಾ ಜಗತ್ತಿನಲ್ಲಷ್ಟೇ ಅಲ್ಲ, ವ್ಯಾಪಾರ-ವಾಣಿಜ್ಯ-ಯುದ್ಧ ಕ್ಷೇತ್ರದಲ್ಲೂ ರಣನೀತಿಯಾಗಿ (ಸ್ಟ್ರ್ಯಾಟೆಜಿ) ಬಳಕೆಯಾಗುವುದನ್ನು ಕಾಣಬಹುದು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...