Homeಮುಖಪುಟಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ..

- Advertisement -
- Advertisement -

ಪಿ. ಸಾಯಿನಾಥ್

ಅನುವಾದ: ನಿಖಿಲ್ ಕೋಲ್ಪೆ


“ಕೊರೋನಾ ಸಂಬಂಧಿ ಸಮಸ್ಯೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನಾ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು.” ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಜಗತ್ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಮನೋಜ್ಞ ಲೇಖನದ ಎರಡನೆಯ ಭಾಗ ಇಲ್ಲಿದೆ.


ಕೊರೋನಾ ಬಿಕ್ಕಟ್ಟಿನಿಂದ ಉಲ್ಭಣಿಸುತ್ತಿರುವ ಆರ್ಥಿಕ ಸಂಕಷ್ಟವು ಕೆಲಸ ಮಾಡುವ ಮತ್ತು ಯುವ ಸಮುದಾಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗಲಿದೆ. ಪೀಪಲ್ಸ್ ಹೆಲ್ತ್ ಮೂವ್‌ಮೆಂಟ್ ಸಂಘಟನೆಯ ಜಾಗತಿಕ ನಿರ್ದೇಶಕರಾದ ಪ್ರೊಫೆಸರ್ ಡಾ. ಟಿ. ಸುಂದರರಾಮನ್ ಅವರು “ಪರಿ” (PARI)ಗೆ ತಿಳಿಸಿದಂತೆ, ನಮ್ಮ ಆರೋಗ್ಯ ಸೇವೆಗಳು ಮತ್ತು ಆರ್ಥಿಕ ಬಿಕ್ಕಟ್ಟು ಜೊತೆಸೇರಿ (ನಾವು ತಪ್ಪಿಸಬಹುದಾದ) ಕೊರೋನ ವೈರಸ್ ಸಾವುಗಳಿಗೆ ಬದಲಾಗಿ ಅವುಗಳ ಜಾಗದಲ್ಲಿ ಬೇರೆ ರೋಗಗಳಿಂದ ಸಂಭವಿಸುವ ಸಾವುಗಳಿಗೆ ಕಾರಣವಾಗಬಹುದು.

ತಮ್ಮ 60 ಅಥವಾ ಅದಕ್ಕಿಂತ ಹೆಚ್ಚಿನ ವಯೋವರ್ಗದಲ್ಲಿರುವ ಎಂಟು ಶೇಕಡಾ ಜನಸಂಖ್ಯೆ ಕೊರೋನಾ ವೈರಸ್‌ನಿಂದ ಅತ್ಯಂತ ಹೆಚ್ಚು ಅಪಾಯ ಎದುರಿಸುತ್ತಿದೆ. ಆರೋಗ್ಯ ಸೇವೆಗಳು ಕೈಗೆಟಕದಿರುವುದು ಮತ್ತು ಇತರ ಆರೋಗ್ಯ ಸೇವೆಗಳ ಕಡಿತದ ಜೊತೆಗೆ ಇತರ ರೋಗಗಳು ತಲೆಎತ್ತಿದಲ್ಲಿ ಕೆಲಸ ಮಾಡುವ ಮತ್ತು ಯುವ ಜನಸಮುದಾಯವು ಭಾರೀ ಹೊಡೆತ ಅನುಭವಿಸಬೇಕಾಗಿಬರಬಹುದು.


ಇದನ್ನೂ ಓದಿ: ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್ 


ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಎಸ್‌ಆರ್‌ಸಿ)ದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಸುಂದರರಾಮನ್, “ಹಿಮ್ಮುಖ ವಲಸೆ ಮತ್ತು ಜೀವನೋಪಾಯಗಳ ನಷ್ಟವನ್ನು ಗುರುತಿಸಿ, ಕಾರ್ಯಾಚರಿಸಬೇಕಾದ ಅತ್ಯಂತ ತುರ್ತು ಅಗತ್ಯವಿದೆ” ಎಂದು ಒತ್ತಿ ಹೇಳುತ್ತಾರೆ.

“ಇಲ್ಲದೇಹೋದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು” ಎಂದೂ ಅವರು ಹೇಳುತ್ತಾರೆ. ನಿರ್ದಿಷ್ಟವಾಗಿ, ಹಿಮ್ಮುಖ ವಲಸೆ ಹೆಚ್ಚಾಗಿ, ನಗರಗಳಲ್ಲಿರುವ ವಲಸೆ ಕಾರ್ಮಿಕರಿಗೆ ಅವರು ಪಡೆಯುತ್ತಿರುವ ಜುಜುಬಿ ಸಂಬಳವೂ ಸಿಗದೇ ಹೋದಲ್ಲಿ ಇದು ಸಂಭವಿಸಬಹುದು.

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿಯೇ ವಾಸಿಸುತ್ತಾರೆ. ಕೆಲಸದ ಸ್ಥಳವನ್ನು ಮುಚ್ಚಿ, ಹೊರಗೆ ಹೋಗಿ ಎಂದರೆ- ಅವರು ಹೋಗುವುದಾದರೂ ಎಲ್ಲಿಗೆ? ಅವರಲ್ಲಿ ಎಲ್ಲರೂ ಉಹಿಸಲಾಗದಷ್ಟು ಭಾರೀ ದೂರದ ಊರುಗಳಿಗೆ ನಡೆಯಲು ಶಕ್ತರಲ್ಲ. ಅವರಿಗೆ ಪಡಿತರ ಚೀಟಿಗಳೂ ಇಲ್ಲ. ಹೀಗಿರುವಾಗ, ನೀವು ಅವರಿಗೆ ಹೇಗೆ ಆಹಾರ ತಲುಪಿಸುತ್ತೀರಿ?

ಆಂಧ್ರಪ್ರದೇಶದ ಅನಂತಪುರದಿಂದ ಕೇರಳದ ಕೊಚ್ಚಿ ನಡುವೆ ವಾರಕ್ಕೊಮ್ಮೆ ಓಡಾಡುತ್ತಿದ್ದ ವಲಸೆ ಕಾರ್ಮಿಕರು.

ಆರ್ಥಿಕ ಸಂಕಷ್ಟವು ಈಗಾಗಲೇ ವೇಗ ಪಡೆದುಕೊಳ್ಳುತ್ತಿದೆ. ವಸತಿ ಸಂಕೀರ್ಣಗಳು ಈ ಸಮಸ್ಯೆಗೆ “ಅವರೇ” ಕಾರಣವೆಂದು ನಂಬಿರುವುದರಿಂದ, ವಲಸೆ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಮನೆಗೆಲಸದವರು ಮತ್ತು ಇತರ ಬಡವರನ್ನು ದೆವ್ವ ಅಥವಾ ರಾಕ್ಷಸರಂತೆ ಕಾಣುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಸತ್ಯ ಏನೆಂದರೆ, ಕೋವಿಡ್-19 ವೈರಸ್ ಮತ್ತು ಅದಕ್ಕಿಂತ ಮೊದಲು ಸಾರ್ಸ್ ವೈರಸನ್ನು ಹರಡಿದವರು ಬಡವರಲ್ಲ; ವಿಮಾನಗಳಲ್ಲಿ ಓಡಾಡುವ ಶ್ರೀಮಂತರು. ಇದನ್ನು ಗುರುತಿಸಿ ಒಪ್ಪಿಕೊಳ್ಳುವ ಬದಲು ನಾವು ಈ “ಅನಪೇಕ್ಷಣೀಯ” ಜನರನ್ನು ಹೊರದಬ್ಬಿ, ನಗರಗಳನ್ನು ಸ್ವಚ್ಛಗೊಳಿಸಲು ಯತ್ನಿಸುತ್ತಿದ್ದೇವೆ. ಇದನ್ನು ಪರಿಗಣಿಸಿ: ಒಂದುವೇಳೆ ವಿಮಾನದಲ್ಲಿ ಹಾರಾಡುವ ಈ ಶ್ರೀಮಂತರು ಊರಿಗೆ ಮರಳುವ ಈ ವಲಸೆ ಕಾರ್ಮಿಕರಿಗೆ ವೈರಸನ್ನು ಹರಡಿದ್ದರೆ, ಅವರು ತಮ್ಮ ಹಳ್ಳಿ ತಲುಪಿದಾಗ ಪರಿಣಾಮ ಏನಾಗಬಹುದು?

ದಿಲ್ಲಿ ಮತ್ತು ನೊಯಿಡಾದಿಂ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ಕುರಿತು ಕಲಾವಿದೆ ಲಬಾನಿ ಜಾಂಗಿ ಅವರ ವರ್ಣಚಿತ್ರ

ಕೆಲವರು ತಮ್ಮ ಊರಿಗೆ- ಅದು ತಮ್ಮದೇ ರಾಜ್ಯದಲ್ಲಿರಲಿ, ನೆರೆಯ ಅಥವಾ ಬೇರೆ ರಾಜ್ಯದಲ್ಲೇ ಇರಲಿ- ನಡೆದುಕೊಂಡೇ ಮನೆಗೆ ಮರಳುವುದು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಈ ಸಾಂಪ್ರದಾಯಿಕ ವಿಧಾನವೆಂದರೆ ದಾರಿಯಲ್ಲಿ ಸಿಗುವ ಚಹಾದಂಗಡಿಗಳು, ದಾಬಾಗಳು ಮುಂತಾದ ಕಡೆ ಅದೂಇದೂ ಕೆಲಸ ಮಾಡಿ, ದಿನದ ಊಟ ಗಳಿಸಿ, ರಾತ್ರಿ ಮಲಗಲು ಅಲ್ಲಿಯೇ ನೆಲೆಕಂಡುಕೊಂಡು ಮುಂದುವರಿಯುವುದು. ಈಗ ಇವುಗಳಲ್ಲಿ ಹೆಚ್ಚಿನವು ಮುಚ್ಚಿರುವುದರಿಂದ ಏನಾಗಲಿದೆ?

ಆದರೆ, ತಾವು ಮನೆಯಲ್ಲಿ ಉಳಿದರೆ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಬಂದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಾಕಷ್ಟು ಸ್ಥಿತಿವಂತರು, ಮತ್ತು ಮಧ್ಯಮ ವರ್ಗದವರು ನಂಬಿದಂತಿದೆ. ಹೌದು; ಅದು ಕನಿಷ್ಟ ಪಕ್ಷ ನಮ್ಮನ್ನು ಸುರಕ್ಷಿತವಾಗಿ ಇಡುತ್ತದೆ. ಆದರೆ, ಆರ್ಥಿಕ ಸಂಕಷ್ಟವು ತಮ್ಮನ್ನು ಹೇಗೆ ಬಾಧಿಸಲಿದೆ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಕೆಲವರಿಗೆ ಈ “ಸಾಮಾಜಿಕ ಅಂತರ”ವು ಬೇರೆಯೇ ಅರ್ಥ ಕೊಡುತ್ತದೆ. ನಾವು ಎರಡು ಸಹಸ್ರಮಾನಗಳಿಂದಲೂ ಅತ್ಯಂತ ಪ್ರಬಲವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ. ಅದೆಂದರೆ- ಜಾತಿ. ಜಾತಿ ಮತ್ತು ವರ್ಗ ಸಂಬಂಧಿ ಅಂಶಗಳು ನಮ್ಮ ಇಂದಿನ ಲಾಕ್‌ಡೌನ್ ಪ್ರಕ್ರಿಯೆಯಲ್ಲಿಯೂ ಅಡಕವಾಗಿವೆ.

ಅಕ್ರಮ ವಲಸಿಗರಲ್ಲ ಇವರು! ಊರಿಗೆ ಮರಳಲು ಹಂಬಲಿಸುತ್ತಿರುವ ವಲಸೆ ಕಾರ್ಮಿಕರು.

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ. ಅಥವಾ ವಾರ್ಷಿಕವಾಗಿ ಅತಿಸಾರ (Diahorea) ಒಂದು ಲಕ್ಷದಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿದೆ ಎಂಬುದೂ ನಮ್ಮನ್ನು ಕಾಡುವುದಿಲ್ಲ. ಅವರು ನಾವಲ್ಲ!

ಸುಂದರ ಜನರಿಗೆ- ಕೆಲವು ಮಾರಕ ರೋಗಗಳನ್ನು ಎದುರಿಸುವ ಶಕ್ತಿ ತಮಗಿಲ್ಲ ಎಂದು ತಿಳಿದಾಗ- ತೀರಾ ಭಯ ಹುಟ್ಟುತ್ತದೆ. ಸಾರ್ಸ್ ವೇಳೆ ಆದುದು ಹಾಗೆಯೇ. 1994ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡಾಗಲೂ ಹಾಗೆಯೇ ಆಗಿತ್ತು. ಎರಡೂ ಭಯಾನಕ ರೋಗಗಳು. ಆದರೆ, ಅವು ಭಾರತದಲ್ಲಿ ಕೊಲ್ಲಲು ಸಾಧ್ಯವಿರುವುದಕ್ಕಿಂತ ಕಡಿಮೆ ಜನರನ್ನು ಕೊಂದವು. ಆದರೆ, ಅವು ಬಹಳಷ್ಟು ಗಮನವನ್ನು ಸೆಳೆದವು. ಸೂರತ್ ಕುರಿತು ನಾನು ಆಗ ಹೀಗೆ ಬರೆದಿದ್ದೆ: “ಪ್ಲೇಗಿನ ಕೀಟಾಣುಗಳು ವರ್ಗಬೇಧವನ್ನು ಅನುಸರಿಸದೇ ಇರುವುದಕ್ಕಾಗಿ ಕುಖ್ಯಾತವಾಗಿವೆ… ಇದಕ್ಕಿಂತಲೂ ಕೆಟ್ಟ ವಿಷಯ ಎಂದರೆ…ಅವು ವಿಮಾನ ಹತ್ತಿ ಕ್ಲಬ್‌ ಕ್ಲಾಸ್‌ನಲ್ಲಿ ಹಾರಿ ನ್ಯೂಯಾರ್ಕ್ ತಲಪಬಲ್ಲವು.”

ಕೃಪೆ: “ಪರಿ”

ಇದನ್ನೂ ಓದಿ: ಚಿಪ್ಪುಹಂದಿಗಳಿಂದ ಕೊರೊನಾ ವೈರಸ್ ಹರಡಿರಬಹುದು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...