Homeಮುಖಪುಟಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ..

- Advertisement -
- Advertisement -

ಪಿ. ಸಾಯಿನಾಥ್

ಅನುವಾದ: ನಿಖಿಲ್ ಕೋಲ್ಪೆ


“ಕೊರೋನಾ ಸಂಬಂಧಿ ಸಮಸ್ಯೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನಾ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು.” ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಜಗತ್ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಮನೋಜ್ಞ ಲೇಖನದ ಎರಡನೆಯ ಭಾಗ ಇಲ್ಲಿದೆ.


ಕೊರೋನಾ ಬಿಕ್ಕಟ್ಟಿನಿಂದ ಉಲ್ಭಣಿಸುತ್ತಿರುವ ಆರ್ಥಿಕ ಸಂಕಷ್ಟವು ಕೆಲಸ ಮಾಡುವ ಮತ್ತು ಯುವ ಸಮುದಾಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗಲಿದೆ. ಪೀಪಲ್ಸ್ ಹೆಲ್ತ್ ಮೂವ್‌ಮೆಂಟ್ ಸಂಘಟನೆಯ ಜಾಗತಿಕ ನಿರ್ದೇಶಕರಾದ ಪ್ರೊಫೆಸರ್ ಡಾ. ಟಿ. ಸುಂದರರಾಮನ್ ಅವರು “ಪರಿ” (PARI)ಗೆ ತಿಳಿಸಿದಂತೆ, ನಮ್ಮ ಆರೋಗ್ಯ ಸೇವೆಗಳು ಮತ್ತು ಆರ್ಥಿಕ ಬಿಕ್ಕಟ್ಟು ಜೊತೆಸೇರಿ (ನಾವು ತಪ್ಪಿಸಬಹುದಾದ) ಕೊರೋನ ವೈರಸ್ ಸಾವುಗಳಿಗೆ ಬದಲಾಗಿ ಅವುಗಳ ಜಾಗದಲ್ಲಿ ಬೇರೆ ರೋಗಗಳಿಂದ ಸಂಭವಿಸುವ ಸಾವುಗಳಿಗೆ ಕಾರಣವಾಗಬಹುದು.

ತಮ್ಮ 60 ಅಥವಾ ಅದಕ್ಕಿಂತ ಹೆಚ್ಚಿನ ವಯೋವರ್ಗದಲ್ಲಿರುವ ಎಂಟು ಶೇಕಡಾ ಜನಸಂಖ್ಯೆ ಕೊರೋನಾ ವೈರಸ್‌ನಿಂದ ಅತ್ಯಂತ ಹೆಚ್ಚು ಅಪಾಯ ಎದುರಿಸುತ್ತಿದೆ. ಆರೋಗ್ಯ ಸೇವೆಗಳು ಕೈಗೆಟಕದಿರುವುದು ಮತ್ತು ಇತರ ಆರೋಗ್ಯ ಸೇವೆಗಳ ಕಡಿತದ ಜೊತೆಗೆ ಇತರ ರೋಗಗಳು ತಲೆಎತ್ತಿದಲ್ಲಿ ಕೆಲಸ ಮಾಡುವ ಮತ್ತು ಯುವ ಜನಸಮುದಾಯವು ಭಾರೀ ಹೊಡೆತ ಅನುಭವಿಸಬೇಕಾಗಿಬರಬಹುದು.


ಇದನ್ನೂ ಓದಿ: ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್ 


ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಎಸ್‌ಆರ್‌ಸಿ)ದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಸುಂದರರಾಮನ್, “ಹಿಮ್ಮುಖ ವಲಸೆ ಮತ್ತು ಜೀವನೋಪಾಯಗಳ ನಷ್ಟವನ್ನು ಗುರುತಿಸಿ, ಕಾರ್ಯಾಚರಿಸಬೇಕಾದ ಅತ್ಯಂತ ತುರ್ತು ಅಗತ್ಯವಿದೆ” ಎಂದು ಒತ್ತಿ ಹೇಳುತ್ತಾರೆ.

“ಇಲ್ಲದೇಹೋದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು” ಎಂದೂ ಅವರು ಹೇಳುತ್ತಾರೆ. ನಿರ್ದಿಷ್ಟವಾಗಿ, ಹಿಮ್ಮುಖ ವಲಸೆ ಹೆಚ್ಚಾಗಿ, ನಗರಗಳಲ್ಲಿರುವ ವಲಸೆ ಕಾರ್ಮಿಕರಿಗೆ ಅವರು ಪಡೆಯುತ್ತಿರುವ ಜುಜುಬಿ ಸಂಬಳವೂ ಸಿಗದೇ ಹೋದಲ್ಲಿ ಇದು ಸಂಭವಿಸಬಹುದು.

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿಯೇ ವಾಸಿಸುತ್ತಾರೆ. ಕೆಲಸದ ಸ್ಥಳವನ್ನು ಮುಚ್ಚಿ, ಹೊರಗೆ ಹೋಗಿ ಎಂದರೆ- ಅವರು ಹೋಗುವುದಾದರೂ ಎಲ್ಲಿಗೆ? ಅವರಲ್ಲಿ ಎಲ್ಲರೂ ಉಹಿಸಲಾಗದಷ್ಟು ಭಾರೀ ದೂರದ ಊರುಗಳಿಗೆ ನಡೆಯಲು ಶಕ್ತರಲ್ಲ. ಅವರಿಗೆ ಪಡಿತರ ಚೀಟಿಗಳೂ ಇಲ್ಲ. ಹೀಗಿರುವಾಗ, ನೀವು ಅವರಿಗೆ ಹೇಗೆ ಆಹಾರ ತಲುಪಿಸುತ್ತೀರಿ?

ಆಂಧ್ರಪ್ರದೇಶದ ಅನಂತಪುರದಿಂದ ಕೇರಳದ ಕೊಚ್ಚಿ ನಡುವೆ ವಾರಕ್ಕೊಮ್ಮೆ ಓಡಾಡುತ್ತಿದ್ದ ವಲಸೆ ಕಾರ್ಮಿಕರು.

ಆರ್ಥಿಕ ಸಂಕಷ್ಟವು ಈಗಾಗಲೇ ವೇಗ ಪಡೆದುಕೊಳ್ಳುತ್ತಿದೆ. ವಸತಿ ಸಂಕೀರ್ಣಗಳು ಈ ಸಮಸ್ಯೆಗೆ “ಅವರೇ” ಕಾರಣವೆಂದು ನಂಬಿರುವುದರಿಂದ, ವಲಸೆ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಮನೆಗೆಲಸದವರು ಮತ್ತು ಇತರ ಬಡವರನ್ನು ದೆವ್ವ ಅಥವಾ ರಾಕ್ಷಸರಂತೆ ಕಾಣುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಸತ್ಯ ಏನೆಂದರೆ, ಕೋವಿಡ್-19 ವೈರಸ್ ಮತ್ತು ಅದಕ್ಕಿಂತ ಮೊದಲು ಸಾರ್ಸ್ ವೈರಸನ್ನು ಹರಡಿದವರು ಬಡವರಲ್ಲ; ವಿಮಾನಗಳಲ್ಲಿ ಓಡಾಡುವ ಶ್ರೀಮಂತರು. ಇದನ್ನು ಗುರುತಿಸಿ ಒಪ್ಪಿಕೊಳ್ಳುವ ಬದಲು ನಾವು ಈ “ಅನಪೇಕ್ಷಣೀಯ” ಜನರನ್ನು ಹೊರದಬ್ಬಿ, ನಗರಗಳನ್ನು ಸ್ವಚ್ಛಗೊಳಿಸಲು ಯತ್ನಿಸುತ್ತಿದ್ದೇವೆ. ಇದನ್ನು ಪರಿಗಣಿಸಿ: ಒಂದುವೇಳೆ ವಿಮಾನದಲ್ಲಿ ಹಾರಾಡುವ ಈ ಶ್ರೀಮಂತರು ಊರಿಗೆ ಮರಳುವ ಈ ವಲಸೆ ಕಾರ್ಮಿಕರಿಗೆ ವೈರಸನ್ನು ಹರಡಿದ್ದರೆ, ಅವರು ತಮ್ಮ ಹಳ್ಳಿ ತಲುಪಿದಾಗ ಪರಿಣಾಮ ಏನಾಗಬಹುದು?

ದಿಲ್ಲಿ ಮತ್ತು ನೊಯಿಡಾದಿಂ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ಕುರಿತು ಕಲಾವಿದೆ ಲಬಾನಿ ಜಾಂಗಿ ಅವರ ವರ್ಣಚಿತ್ರ

ಕೆಲವರು ತಮ್ಮ ಊರಿಗೆ- ಅದು ತಮ್ಮದೇ ರಾಜ್ಯದಲ್ಲಿರಲಿ, ನೆರೆಯ ಅಥವಾ ಬೇರೆ ರಾಜ್ಯದಲ್ಲೇ ಇರಲಿ- ನಡೆದುಕೊಂಡೇ ಮನೆಗೆ ಮರಳುವುದು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಈ ಸಾಂಪ್ರದಾಯಿಕ ವಿಧಾನವೆಂದರೆ ದಾರಿಯಲ್ಲಿ ಸಿಗುವ ಚಹಾದಂಗಡಿಗಳು, ದಾಬಾಗಳು ಮುಂತಾದ ಕಡೆ ಅದೂಇದೂ ಕೆಲಸ ಮಾಡಿ, ದಿನದ ಊಟ ಗಳಿಸಿ, ರಾತ್ರಿ ಮಲಗಲು ಅಲ್ಲಿಯೇ ನೆಲೆಕಂಡುಕೊಂಡು ಮುಂದುವರಿಯುವುದು. ಈಗ ಇವುಗಳಲ್ಲಿ ಹೆಚ್ಚಿನವು ಮುಚ್ಚಿರುವುದರಿಂದ ಏನಾಗಲಿದೆ?

ಆದರೆ, ತಾವು ಮನೆಯಲ್ಲಿ ಉಳಿದರೆ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಬಂದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಾಕಷ್ಟು ಸ್ಥಿತಿವಂತರು, ಮತ್ತು ಮಧ್ಯಮ ವರ್ಗದವರು ನಂಬಿದಂತಿದೆ. ಹೌದು; ಅದು ಕನಿಷ್ಟ ಪಕ್ಷ ನಮ್ಮನ್ನು ಸುರಕ್ಷಿತವಾಗಿ ಇಡುತ್ತದೆ. ಆದರೆ, ಆರ್ಥಿಕ ಸಂಕಷ್ಟವು ತಮ್ಮನ್ನು ಹೇಗೆ ಬಾಧಿಸಲಿದೆ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಕೆಲವರಿಗೆ ಈ “ಸಾಮಾಜಿಕ ಅಂತರ”ವು ಬೇರೆಯೇ ಅರ್ಥ ಕೊಡುತ್ತದೆ. ನಾವು ಎರಡು ಸಹಸ್ರಮಾನಗಳಿಂದಲೂ ಅತ್ಯಂತ ಪ್ರಬಲವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ. ಅದೆಂದರೆ- ಜಾತಿ. ಜಾತಿ ಮತ್ತು ವರ್ಗ ಸಂಬಂಧಿ ಅಂಶಗಳು ನಮ್ಮ ಇಂದಿನ ಲಾಕ್‌ಡೌನ್ ಪ್ರಕ್ರಿಯೆಯಲ್ಲಿಯೂ ಅಡಕವಾಗಿವೆ.

ಅಕ್ರಮ ವಲಸಿಗರಲ್ಲ ಇವರು! ಊರಿಗೆ ಮರಳಲು ಹಂಬಲಿಸುತ್ತಿರುವ ವಲಸೆ ಕಾರ್ಮಿಕರು.

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ. ಅಥವಾ ವಾರ್ಷಿಕವಾಗಿ ಅತಿಸಾರ (Diahorea) ಒಂದು ಲಕ್ಷದಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿದೆ ಎಂಬುದೂ ನಮ್ಮನ್ನು ಕಾಡುವುದಿಲ್ಲ. ಅವರು ನಾವಲ್ಲ!

ಸುಂದರ ಜನರಿಗೆ- ಕೆಲವು ಮಾರಕ ರೋಗಗಳನ್ನು ಎದುರಿಸುವ ಶಕ್ತಿ ತಮಗಿಲ್ಲ ಎಂದು ತಿಳಿದಾಗ- ತೀರಾ ಭಯ ಹುಟ್ಟುತ್ತದೆ. ಸಾರ್ಸ್ ವೇಳೆ ಆದುದು ಹಾಗೆಯೇ. 1994ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡಾಗಲೂ ಹಾಗೆಯೇ ಆಗಿತ್ತು. ಎರಡೂ ಭಯಾನಕ ರೋಗಗಳು. ಆದರೆ, ಅವು ಭಾರತದಲ್ಲಿ ಕೊಲ್ಲಲು ಸಾಧ್ಯವಿರುವುದಕ್ಕಿಂತ ಕಡಿಮೆ ಜನರನ್ನು ಕೊಂದವು. ಆದರೆ, ಅವು ಬಹಳಷ್ಟು ಗಮನವನ್ನು ಸೆಳೆದವು. ಸೂರತ್ ಕುರಿತು ನಾನು ಆಗ ಹೀಗೆ ಬರೆದಿದ್ದೆ: “ಪ್ಲೇಗಿನ ಕೀಟಾಣುಗಳು ವರ್ಗಬೇಧವನ್ನು ಅನುಸರಿಸದೇ ಇರುವುದಕ್ಕಾಗಿ ಕುಖ್ಯಾತವಾಗಿವೆ… ಇದಕ್ಕಿಂತಲೂ ಕೆಟ್ಟ ವಿಷಯ ಎಂದರೆ…ಅವು ವಿಮಾನ ಹತ್ತಿ ಕ್ಲಬ್‌ ಕ್ಲಾಸ್‌ನಲ್ಲಿ ಹಾರಿ ನ್ಯೂಯಾರ್ಕ್ ತಲಪಬಲ್ಲವು.”

ಕೃಪೆ: “ಪರಿ”

ಇದನ್ನೂ ಓದಿ: ಚಿಪ್ಪುಹಂದಿಗಳಿಂದ ಕೊರೊನಾ ವೈರಸ್ ಹರಡಿರಬಹುದು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...