Homeಮುಖಪುಟಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ..

- Advertisement -
- Advertisement -

ಪಿ. ಸಾಯಿನಾಥ್

ಅನುವಾದ: ನಿಖಿಲ್ ಕೋಲ್ಪೆ


“ಕೊರೋನಾ ಸಂಬಂಧಿ ಸಮಸ್ಯೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನಾ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು.” ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಜಗತ್ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಮನೋಜ್ಞ ಲೇಖನದ ಎರಡನೆಯ ಭಾಗ ಇಲ್ಲಿದೆ.


ಕೊರೋನಾ ಬಿಕ್ಕಟ್ಟಿನಿಂದ ಉಲ್ಭಣಿಸುತ್ತಿರುವ ಆರ್ಥಿಕ ಸಂಕಷ್ಟವು ಕೆಲಸ ಮಾಡುವ ಮತ್ತು ಯುವ ಸಮುದಾಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗಲಿದೆ. ಪೀಪಲ್ಸ್ ಹೆಲ್ತ್ ಮೂವ್‌ಮೆಂಟ್ ಸಂಘಟನೆಯ ಜಾಗತಿಕ ನಿರ್ದೇಶಕರಾದ ಪ್ರೊಫೆಸರ್ ಡಾ. ಟಿ. ಸುಂದರರಾಮನ್ ಅವರು “ಪರಿ” (PARI)ಗೆ ತಿಳಿಸಿದಂತೆ, ನಮ್ಮ ಆರೋಗ್ಯ ಸೇವೆಗಳು ಮತ್ತು ಆರ್ಥಿಕ ಬಿಕ್ಕಟ್ಟು ಜೊತೆಸೇರಿ (ನಾವು ತಪ್ಪಿಸಬಹುದಾದ) ಕೊರೋನ ವೈರಸ್ ಸಾವುಗಳಿಗೆ ಬದಲಾಗಿ ಅವುಗಳ ಜಾಗದಲ್ಲಿ ಬೇರೆ ರೋಗಗಳಿಂದ ಸಂಭವಿಸುವ ಸಾವುಗಳಿಗೆ ಕಾರಣವಾಗಬಹುದು.

ತಮ್ಮ 60 ಅಥವಾ ಅದಕ್ಕಿಂತ ಹೆಚ್ಚಿನ ವಯೋವರ್ಗದಲ್ಲಿರುವ ಎಂಟು ಶೇಕಡಾ ಜನಸಂಖ್ಯೆ ಕೊರೋನಾ ವೈರಸ್‌ನಿಂದ ಅತ್ಯಂತ ಹೆಚ್ಚು ಅಪಾಯ ಎದುರಿಸುತ್ತಿದೆ. ಆರೋಗ್ಯ ಸೇವೆಗಳು ಕೈಗೆಟಕದಿರುವುದು ಮತ್ತು ಇತರ ಆರೋಗ್ಯ ಸೇವೆಗಳ ಕಡಿತದ ಜೊತೆಗೆ ಇತರ ರೋಗಗಳು ತಲೆಎತ್ತಿದಲ್ಲಿ ಕೆಲಸ ಮಾಡುವ ಮತ್ತು ಯುವ ಜನಸಮುದಾಯವು ಭಾರೀ ಹೊಡೆತ ಅನುಭವಿಸಬೇಕಾಗಿಬರಬಹುದು.


ಇದನ್ನೂ ಓದಿ: ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್ 


ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಎಸ್‌ಆರ್‌ಸಿ)ದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಸುಂದರರಾಮನ್, “ಹಿಮ್ಮುಖ ವಲಸೆ ಮತ್ತು ಜೀವನೋಪಾಯಗಳ ನಷ್ಟವನ್ನು ಗುರುತಿಸಿ, ಕಾರ್ಯಾಚರಿಸಬೇಕಾದ ಅತ್ಯಂತ ತುರ್ತು ಅಗತ್ಯವಿದೆ” ಎಂದು ಒತ್ತಿ ಹೇಳುತ್ತಾರೆ.

“ಇಲ್ಲದೇಹೋದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು” ಎಂದೂ ಅವರು ಹೇಳುತ್ತಾರೆ. ನಿರ್ದಿಷ್ಟವಾಗಿ, ಹಿಮ್ಮುಖ ವಲಸೆ ಹೆಚ್ಚಾಗಿ, ನಗರಗಳಲ್ಲಿರುವ ವಲಸೆ ಕಾರ್ಮಿಕರಿಗೆ ಅವರು ಪಡೆಯುತ್ತಿರುವ ಜುಜುಬಿ ಸಂಬಳವೂ ಸಿಗದೇ ಹೋದಲ್ಲಿ ಇದು ಸಂಭವಿಸಬಹುದು.

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿಯೇ ವಾಸಿಸುತ್ತಾರೆ. ಕೆಲಸದ ಸ್ಥಳವನ್ನು ಮುಚ್ಚಿ, ಹೊರಗೆ ಹೋಗಿ ಎಂದರೆ- ಅವರು ಹೋಗುವುದಾದರೂ ಎಲ್ಲಿಗೆ? ಅವರಲ್ಲಿ ಎಲ್ಲರೂ ಉಹಿಸಲಾಗದಷ್ಟು ಭಾರೀ ದೂರದ ಊರುಗಳಿಗೆ ನಡೆಯಲು ಶಕ್ತರಲ್ಲ. ಅವರಿಗೆ ಪಡಿತರ ಚೀಟಿಗಳೂ ಇಲ್ಲ. ಹೀಗಿರುವಾಗ, ನೀವು ಅವರಿಗೆ ಹೇಗೆ ಆಹಾರ ತಲುಪಿಸುತ್ತೀರಿ?

ಆಂಧ್ರಪ್ರದೇಶದ ಅನಂತಪುರದಿಂದ ಕೇರಳದ ಕೊಚ್ಚಿ ನಡುವೆ ವಾರಕ್ಕೊಮ್ಮೆ ಓಡಾಡುತ್ತಿದ್ದ ವಲಸೆ ಕಾರ್ಮಿಕರು.

ಆರ್ಥಿಕ ಸಂಕಷ್ಟವು ಈಗಾಗಲೇ ವೇಗ ಪಡೆದುಕೊಳ್ಳುತ್ತಿದೆ. ವಸತಿ ಸಂಕೀರ್ಣಗಳು ಈ ಸಮಸ್ಯೆಗೆ “ಅವರೇ” ಕಾರಣವೆಂದು ನಂಬಿರುವುದರಿಂದ, ವಲಸೆ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಮನೆಗೆಲಸದವರು ಮತ್ತು ಇತರ ಬಡವರನ್ನು ದೆವ್ವ ಅಥವಾ ರಾಕ್ಷಸರಂತೆ ಕಾಣುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಸತ್ಯ ಏನೆಂದರೆ, ಕೋವಿಡ್-19 ವೈರಸ್ ಮತ್ತು ಅದಕ್ಕಿಂತ ಮೊದಲು ಸಾರ್ಸ್ ವೈರಸನ್ನು ಹರಡಿದವರು ಬಡವರಲ್ಲ; ವಿಮಾನಗಳಲ್ಲಿ ಓಡಾಡುವ ಶ್ರೀಮಂತರು. ಇದನ್ನು ಗುರುತಿಸಿ ಒಪ್ಪಿಕೊಳ್ಳುವ ಬದಲು ನಾವು ಈ “ಅನಪೇಕ್ಷಣೀಯ” ಜನರನ್ನು ಹೊರದಬ್ಬಿ, ನಗರಗಳನ್ನು ಸ್ವಚ್ಛಗೊಳಿಸಲು ಯತ್ನಿಸುತ್ತಿದ್ದೇವೆ. ಇದನ್ನು ಪರಿಗಣಿಸಿ: ಒಂದುವೇಳೆ ವಿಮಾನದಲ್ಲಿ ಹಾರಾಡುವ ಈ ಶ್ರೀಮಂತರು ಊರಿಗೆ ಮರಳುವ ಈ ವಲಸೆ ಕಾರ್ಮಿಕರಿಗೆ ವೈರಸನ್ನು ಹರಡಿದ್ದರೆ, ಅವರು ತಮ್ಮ ಹಳ್ಳಿ ತಲುಪಿದಾಗ ಪರಿಣಾಮ ಏನಾಗಬಹುದು?

ದಿಲ್ಲಿ ಮತ್ತು ನೊಯಿಡಾದಿಂ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ಕುರಿತು ಕಲಾವಿದೆ ಲಬಾನಿ ಜಾಂಗಿ ಅವರ ವರ್ಣಚಿತ್ರ

ಕೆಲವರು ತಮ್ಮ ಊರಿಗೆ- ಅದು ತಮ್ಮದೇ ರಾಜ್ಯದಲ್ಲಿರಲಿ, ನೆರೆಯ ಅಥವಾ ಬೇರೆ ರಾಜ್ಯದಲ್ಲೇ ಇರಲಿ- ನಡೆದುಕೊಂಡೇ ಮನೆಗೆ ಮರಳುವುದು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಈ ಸಾಂಪ್ರದಾಯಿಕ ವಿಧಾನವೆಂದರೆ ದಾರಿಯಲ್ಲಿ ಸಿಗುವ ಚಹಾದಂಗಡಿಗಳು, ದಾಬಾಗಳು ಮುಂತಾದ ಕಡೆ ಅದೂಇದೂ ಕೆಲಸ ಮಾಡಿ, ದಿನದ ಊಟ ಗಳಿಸಿ, ರಾತ್ರಿ ಮಲಗಲು ಅಲ್ಲಿಯೇ ನೆಲೆಕಂಡುಕೊಂಡು ಮುಂದುವರಿಯುವುದು. ಈಗ ಇವುಗಳಲ್ಲಿ ಹೆಚ್ಚಿನವು ಮುಚ್ಚಿರುವುದರಿಂದ ಏನಾಗಲಿದೆ?

ಆದರೆ, ತಾವು ಮನೆಯಲ್ಲಿ ಉಳಿದರೆ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಬಂದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಾಕಷ್ಟು ಸ್ಥಿತಿವಂತರು, ಮತ್ತು ಮಧ್ಯಮ ವರ್ಗದವರು ನಂಬಿದಂತಿದೆ. ಹೌದು; ಅದು ಕನಿಷ್ಟ ಪಕ್ಷ ನಮ್ಮನ್ನು ಸುರಕ್ಷಿತವಾಗಿ ಇಡುತ್ತದೆ. ಆದರೆ, ಆರ್ಥಿಕ ಸಂಕಷ್ಟವು ತಮ್ಮನ್ನು ಹೇಗೆ ಬಾಧಿಸಲಿದೆ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಕೆಲವರಿಗೆ ಈ “ಸಾಮಾಜಿಕ ಅಂತರ”ವು ಬೇರೆಯೇ ಅರ್ಥ ಕೊಡುತ್ತದೆ. ನಾವು ಎರಡು ಸಹಸ್ರಮಾನಗಳಿಂದಲೂ ಅತ್ಯಂತ ಪ್ರಬಲವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ. ಅದೆಂದರೆ- ಜಾತಿ. ಜಾತಿ ಮತ್ತು ವರ್ಗ ಸಂಬಂಧಿ ಅಂಶಗಳು ನಮ್ಮ ಇಂದಿನ ಲಾಕ್‌ಡೌನ್ ಪ್ರಕ್ರಿಯೆಯಲ್ಲಿಯೂ ಅಡಕವಾಗಿವೆ.

ಅಕ್ರಮ ವಲಸಿಗರಲ್ಲ ಇವರು! ಊರಿಗೆ ಮರಳಲು ಹಂಬಲಿಸುತ್ತಿರುವ ವಲಸೆ ಕಾರ್ಮಿಕರು.

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ. ಅಥವಾ ವಾರ್ಷಿಕವಾಗಿ ಅತಿಸಾರ (Diahorea) ಒಂದು ಲಕ್ಷದಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿದೆ ಎಂಬುದೂ ನಮ್ಮನ್ನು ಕಾಡುವುದಿಲ್ಲ. ಅವರು ನಾವಲ್ಲ!

ಸುಂದರ ಜನರಿಗೆ- ಕೆಲವು ಮಾರಕ ರೋಗಗಳನ್ನು ಎದುರಿಸುವ ಶಕ್ತಿ ತಮಗಿಲ್ಲ ಎಂದು ತಿಳಿದಾಗ- ತೀರಾ ಭಯ ಹುಟ್ಟುತ್ತದೆ. ಸಾರ್ಸ್ ವೇಳೆ ಆದುದು ಹಾಗೆಯೇ. 1994ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡಾಗಲೂ ಹಾಗೆಯೇ ಆಗಿತ್ತು. ಎರಡೂ ಭಯಾನಕ ರೋಗಗಳು. ಆದರೆ, ಅವು ಭಾರತದಲ್ಲಿ ಕೊಲ್ಲಲು ಸಾಧ್ಯವಿರುವುದಕ್ಕಿಂತ ಕಡಿಮೆ ಜನರನ್ನು ಕೊಂದವು. ಆದರೆ, ಅವು ಬಹಳಷ್ಟು ಗಮನವನ್ನು ಸೆಳೆದವು. ಸೂರತ್ ಕುರಿತು ನಾನು ಆಗ ಹೀಗೆ ಬರೆದಿದ್ದೆ: “ಪ್ಲೇಗಿನ ಕೀಟಾಣುಗಳು ವರ್ಗಬೇಧವನ್ನು ಅನುಸರಿಸದೇ ಇರುವುದಕ್ಕಾಗಿ ಕುಖ್ಯಾತವಾಗಿವೆ… ಇದಕ್ಕಿಂತಲೂ ಕೆಟ್ಟ ವಿಷಯ ಎಂದರೆ…ಅವು ವಿಮಾನ ಹತ್ತಿ ಕ್ಲಬ್‌ ಕ್ಲಾಸ್‌ನಲ್ಲಿ ಹಾರಿ ನ್ಯೂಯಾರ್ಕ್ ತಲಪಬಲ್ಲವು.”

ಕೃಪೆ: “ಪರಿ”

ಇದನ್ನೂ ಓದಿ: ಚಿಪ್ಪುಹಂದಿಗಳಿಂದ ಕೊರೊನಾ ವೈರಸ್ ಹರಡಿರಬಹುದು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...