Homeಕರ್ನಾಟಕಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

ಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

- Advertisement -
- Advertisement -

ಪಠ್ಯ ಪರಿಶೀಲನಾ ಸಮಿತಿ ಮಾಡಿರುವ ಕೇಸರೀಕರಣ ಹಾಗೂ ಹಲವು ಎಡವಟ್ಟುಗಳ ಕುರಿತು ಭಾರೀ ಆಕ್ರೋಶ ಭುಗಿಲೆದ್ದ ಬಳಿಕ ಸರ್ಕಾರ ಸಮರ್ಥನೆಗಿಳಿದಿದ್ದು ತಿಳಿದೇ ಇದೆ. ಜನರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದಿದ್ದರೂ ತಾನು ಮಾಡಿರುವ ತಪ್ಪುಗಳನ್ನು ಪರಾಮರ್ಶಿಸಿಕೊಂಡಿರುವುದು ಮೇಲುನೋಟಕ್ಕೆ ಕಾಣುತ್ತಿದೆ.

10ನೇ ತರಗತಿಯ ಕನ್ನಡ (ಪ್ರಥಮ) ಭಾಷಾ ಪಠ್ಯದಲ್ಲಿ ಅಳವಡಿಸಲಾಗಿರುವ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’ದ ಪಾಠದಲ್ಲಿ ಕೆಲವು ಬದಲಾವಣೆಗಳನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ತಂದಿದೆ. ಪರಿಷ್ಕೃತ ಪಠ್ಯದ ಪಿಡಿಎಫ್ ಸೋರಿಕೆಯಾದಾಗ ಆ ಪಾಠದಲ್ಲಿನ ಹಲವು ತಪ್ಪುಗಳನ್ನು ಜನರು ಗುರುತಿಸಿದ್ದರು. ಬನ್ನಂಜೆಯವರ ಪಾಠದ ಕುರಿತು ‘ನಾನುಗೌರಿ.ಕಾಂ’ನಲ್ಲಿ ವಿಸ್ತೃತವಾಗಿ ವರದಿಯಾಗಿತ್ತು. ಹಣವನ್ನು ಹೆಣ್ಣಿಗೆ ಹೋಲಿಸಿ ಅತ್ಯಂತ ಕೀಳು ಅಭಿರುಚಿ ಬರುವಂತೆ ಪಾಠವನ್ನು ರೂಪಿಸಲಾಗಿತ್ತು. “ಬನ್ನಂಜೆಯ ಪಾಠದಲ್ಲಿ ಹೆಣ್ಣಿನ ಅಪಮೌಲ್ಯೀಕರಣ” ಮಾಡಲಾಗಿದೆ ಎಂಬುದು ಅರಿವಾದ ಬಳಿಕ ಮರು ರೂಪಿಸಲಾದ ಪಠ್ಯದಲ್ಲಿ ತಿದ್ದುಪಡಿ ತರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಮೊದಲೇನಿತ್ತು?

“ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು.”

ಮುಂದುವರಿದು, “ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕಥೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ..”

ಸೋರಿಕೆಯಾದ ಪಿಡಿಎಫ್‌ ಪ್ರತಿಯಲ್ಲಿದ್ದ ಸಾಲುಗಳು

ಈ  ಮೇಲಿನ ಸಾಲುಗಳಿಗೆ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿರಿ: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಜನರು ಎತ್ತಿದ ಆಕ್ಷೇಪಗಳೇನು?

  • “ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಕಾಣ- ಗುಹೇಶ್ವರ” ಎಂಬ ವಚನ ಪರಂಪರೆಯ ಈ ನಾಡಿನಲ್ಲಿ ಹೆಣ್ಣಿನ ಕುರಿತು ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲಾಗುತ್ತಿದೆಯೇ?
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿವರ್ತನೆಯ ಕಡೆಗೆ ಹೋಗುತ್ತಿರುವಾಗ ಹೆಣ್ಣಿನ ಕುರಿತ ಈ ಸಂಚುಚಿತ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವುದು ಅಪಾಯಕಾರಿ. ಹೆಣ್ಣು ಮಕ್ಕಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದಾರೆ. ಸಂಪತ್ತಿನೊಂದಿಗೆ ಹೆಣ್ಣನ್ನು ಹೋಲಿಸಿ, ಆಕೆ ಚಂಚಲೆ ಎಂದು ಬಿಂಬಿಸುವುದು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ.
  • ಹೆಣ್ಣು ಕೇವಲವಷ್ಟೇ ಎಂಬ ಭಾವನೆ ಈ ರೀತಿಯ ಸಾಲುಗಳಿಂದ ಎಳೆಯ ಮನಸ್ಸುಗಳಲ್ಲಿ ಹುಟ್ಟುತ್ತದೆ. ಎಸ್‌ಎಸ್‌ಎಲ್‌ಸಿ ಮಕ್ಕಳ ವಯಸ್ಸನ್ನು ಗಮನಿಸಬೇಕು. ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವ ವಯಸ್ಸದು. ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಹೆಣ್ಣು ಒಬ್ಬರ ಹತ್ತಿರ ಶಾಶ್ವತವಾಗಿ ನಿಲ್ಲುವುದಿಲ್ಲ, ಆಕೆ ಚಂಚಲೆ ಎಂದು ಈ ವಯಸ್ಸಿನ ಮಕ್ಕಳ ಮುಂದೆ ಬೋಧಿಸಿದರೆ ತನ್ನ ಸಹಪಾಠಿಯನ್ನು ಒಬ್ಬ ಹುಡುಗ ಹೇಗೆ ನೋಡಬಹುದು? ಹಸಿ ಮಣ್ಣಿನಂತಹ ಅವರ ಮನಸ್ಸಿನಲ್ಲಿ ಯಾವ ವಿಗ್ರಹ ರೂಪ ತಾಳಬಹುದು?
  • ಈ ಪಠ್ಯದಲ್ಲಿ ಯಾವ ಸಂದೇಶ ಇದೆ? ಹಣ ಒಂದು ಸಾಧನವಷ್ಟೇ. ಅದು ಗಂಡಿಗೂ ಬೇಕು, ಹೆಣ್ಣಿಗೂ ಬೇಕು. ಹೀಗಿರುವಾಗ ಪುರುಷಪ್ರಧಾನ ವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಹಣವನ್ನು ವಿಶ್ಲೇಷಿಸಿರುವುದೇ ತಪ್ಪು. ಇಂತಹ ಪಾಠಗಳನ್ನು ಶಿಕ್ಷಕಿಯರು ತಮ್ಮ ಮಕ್ಕಳಿಗೆ ಬೋಧಿಸುವುದಾದರೂ ಹೇಗೆ?

ಈಗ ಆಗಿರುವ ಬದಲಾವಣೆ ಏನು?

“ಈ ಸಿರಿಯನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಸಿರಿಗೆ ಆಕರ್ಷಿತರಾದವರೆ. ಎಲ್ಲರೂ ಸಿರಿಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಸಿರಿಯ ಜಾಯಮಾನಕ್ಕೆ ಸಲ್ಲದು.”

ಕೆಟ್ಟ ನಡತೆಯ ಇಂಥ ಸಿರಿಯು ಹೇಗೋ ದೇವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತದೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ.

– ಹೀಗೆ ಪಠ್ಯವನ್ನು ತಿದ್ದಲಾಗಿದೆ. ಬನ್ನಂಜೆಯವರ ಲಿಂಗಾಧಾರಿತ ದೃಷ್ಟಿಕೋನವನ್ನು ಪಠ್ಯ ಪರಿಶೀಲನಾ ಸಮಿತಿ ಮಾರ್ಪಾಡು ಮಾಡಿರುವುದು ಸ್ಪಷ್ಟವಾಗುತ್ತದೆ.

ಪರಿಷ್ಕೃತ ಪಠ್ಯದಲ್ಲಿ ಬದಲಾದ ಸಾಲುಗಳು

ಇದನ್ನೂ ಓದಿರಿ: ರೋಹಿತ್‌ ಚಕ್ರತೀರ್ಥ ಆಯ್ಕೆಯ ಮಾನದಂಡಗಳೇನು?: ಬಹಿರಂಗ ಪತ್ರ ಬರೆದ ಶಿಕ್ಷಣ ತಜ್ಞರು

ಲೇಖಕರ ಮೂಲ ಪಠ್ಯ ಬದಲಿಸಬಹುದೇ?

“ಇದು ಎಲ್ಲದಕ್ಕಿಂತ ಅನಾಹುತಕಾರಿ ಹೆಜ್ಜೆ. ಲೇಖಕರು ಇರುವಾಗಲಾದರೂ ಅಡ್ಡಿ ಇಲ್ಲ ಎನ್ನಬಹುದೇನೋ? ಆದರೆ ಲೇಖಕರು ಗತಿಸಿದ ನಂತರ ಅವರು ಬರೆದ ಅವರು ಬರೆದ ಒಂದಕ್ಷರವನ್ನು ತಿದ್ದಬಾರದು. ಇಂದು ಗೋವಿಂದಾಚಾರ್ಯರನ್ನು ತಿದ್ದಲು ಹೊರಟ ಮಂದಿಯೇ ತಮಗೆ ಬೇಕಾದ ಹಾಗೆ ನಾಳೆ ಅಂಬೇಡ್ಕರ್, ಕುವೆಂಪು, ಲಂಕೇಶ್, ತಿರುಮಲಾಂಬ ಎಲ್ಲರನ್ನು ತಿದ್ದಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ.

“ಈಗಾಗಲೇ ಕುವೆಂಪು ವಿಷಯದಲ್ಲಿ ಅವರು ಏನು ಪ್ರತಿಪಾದಿಸಿದ್ದರೋ ಅದಕ್ಕೆ ವಿರುದ್ದವಾಗಿ ಹಲವು ಅಪದ್ದಗಳನ್ನು ಸೃಷ್ಟಿಸುವ ಪ್ರಯತ್ನಗಳು ಸದಾ ಇಲ್ಲಿ ಚಾಲ್ತಿಯಲ್ಲಿವೆ. ಆದರೆ ಅದಕ್ಕೆ ಅವಕಾಶವೇ ನೀಡದಂತೆ ಅವರ ಬರಹಗಳ ಒಂದೊಂದು ವಾಕ್ಯವು ಇಲ್ಲಿಯ ಜಾತೀಯತೆ, ವರ್ಗ ಸಂಘರ್ಷ, ಮೇಲ್ಜಾತಿಯವರ ಮೇಲರಿಮೆ, ತಳ ಸಮುದಾಯದ ಮೇಲೆ ನಡೆಯುವ ಹಲ್ಲೆ, ಶೋಷಣೆ ,ಎಲ್ಲವನ್ನು ತೆರೆದಿಡುತ್ತವೆ. ನಿಧಾನಕ್ಕೆ ಅದನ್ನೇ ಬದಲಾಯಿಸಿಬಿಟ್ಟರೆ, ಇಲ್ಲಿ ಎಲ್ಲವೂ ಚೆನ್ನಾಗಿತ್ತು, ಚೆನ್ನಾಗಿದೆ ಎಂಬುದನ್ನು ಸಾಬೀತು ಮಾಡಿದಂತಾಗಿಬಿಡುತ್ತದೆ. ಇದಕ್ಕೆ ಅವಕಾಶ ಕೊಡಬಾರದು” ಎಂದು ತಿಳಿಸಿದ್ದಾರೆ.

“ಹೆಡಗೇವಾರ್‌ ಭಗವಾಧ್ವಜ ಎಂದು ಬರೆದಿದ್ದರೆ ಅದನ್ನು ರಾಷ್ಟ್ರಧ್ವಜ ಎಂದು ತಿದ್ದಿ ನಮ್ಮ ಮಕ್ಕಳಿಗೆ ಪಠ್ಯವಾಗಿಸಬೇಕಾಗಿಲ್ಲ. ಬನ್ನಂಜೆಯವರ ಪಠ್ಯದಲ್ಲೂ ಮಹಿಳೆಯರ ಬಗೆಗೆ ಇರುವ ಆಕ್ಷೇಪಾರ್ಯ ವಾಕ್ಯಗಳಿದ್ದರೆ ಅದನ್ನು ತಿದ್ದಿ ಅವರೇ ನಿಜವಾದ ಸ್ತ್ರೀ ಉದ್ದಾರಕರು ಎಂಬಂತೆ ಬಿಂಬಿಸಬೇಕಿಲ್ಲ. ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ, ನಮ್ಮ ರಾಷ್ಟ್ರಕ್ಕಾಗಿ ಅಲ್ಲಿನ ಜನರ ಏಳಿಗೆಗಾಗಿ ಜೀವವನ್ನೇ ತೇಯ್ದ ಸಾವಿರಾರು ಜನರ ಚರಿತ್ರೆ ದಾಖಲಾಗಿದೆ. ಅದನ್ನು ಮಕ್ಕಳು ಓದುವಂತಾಗಲಿ. ತಿದ್ದಲ್ಪಟ್ಟ ಬರೆಹಗಳನ್ನು ಪಠ್ಯವಾಗಿಸಿ ಓದಿಸಬೇಕಿಲ್ಲ. ಸಮೃದ್ದವಾದ ನಿಜ ಕಾಳಜಿಯ ಬರೆಹಗಳು, ಬರೆಹಗಾರರು, ವ್ಯಕ್ತಿತ್ವಗಳು ಆಗಿಹೋಗಿರುವ/ಇರುವ ನಾಡಿನಲ್ಲಿ ಸಾವಿರಾರು ಪಠ್ಯಗಳನ್ನು ಮಾಡಬಹುದು. ಅದಕ್ಕಾಗಿ ಸೂಕ್ತವಾದ ಶಿಕ್ಷಣ ತಜ್ಞರಿಗೂ ಇಲ್ಲಿ ಖಂಡಿತಾ ಕೊರತೆಯಿಲ್ಲ” ಎಂದು ಹೇಳಿದ್ದಾರೆ.

“ಲೇಖಕರ ಮೂಲ ಬರಹಕ್ಕೆ ಧಕ್ಕೆಯಾಗದಂತೆ ಸಂಕ್ಷಿಪ್ತಗೊಳಿಸಿ, ಪಠ್ಯವಾಗಿ ರೂಪಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಆದರೆ, ಇಲ್ಲಿ ಮೂಲ ಲೇಖಕರ ವಿಚಾರಗಳನ್ನೇ ಬದಲಿಸಲು ಹೊರಟಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬನ್ನಂಜೆ ಪಾಠದ ಸಾರಾಂಶ ಪ್ರಸ್ತುತವೇ?

ಬನ್ನಂಜೆಯವರ ಪಾಠದಲ್ಲಿನ ಲಿಂಗಾಧಾರಿತ ದೃಷ್ಟಿಕೋನವನ್ನು ತಿದ್ದಿದ್ದರೂ ‘ಶುಕನಾಸನ ಉಪದೇಶ’ ಪಾಠದ ಪ್ರಸ್ತುತತೆಯ ಪ್ರಶ್ನೆ ಬದಿಗೆ ಸರಿಯುವುದಿಲ್ಲ. ಹಣದ ಕುರಿತು ನಕಾರಾತ್ಮಕವಾಗಿ ಮಾತನಾಡುವ ಈ ಪಾಠವು ಮಕ್ಕಳಿಗೆ ಕಲಿಸುವುದೇನು ಎಂಬುದೂ ಚರ್ಚೆಯಾಗಬೇಕಿದೆ.

ವಿವಾದ ಉಂಟಾದ ಸಂದರ್ಭದಲ್ಲಿ ಆಧ್ಮಾತ್ಮಿಕ ವಿಚಾರಗಳ ಬರಹಗಾರರು ಹಾಗೂ ಪ್ರಾಧ್ಯಾಪಕರೂ ಆದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಣದ ಕುರಿತ ಬನ್ನಂಜೆಯವರ ಬೋಧಪ್ರದ (didactic) ಲೇಖನ ಹೊಸದಾಗಿ ಸೇರ್ಪಡೆಯಾಗಿದೆ. ಆ ಲೇಖನದಲ್ಲಿ ಬನ್ನಂಜೆಯವರು ಹಣ ಕೆಟ್ಟದ್ದು, ವರ್ಜ್ಯ ಎಂದು ಉಪದೇಶಿಸುತ್ತಾರೆ. ತನ್ನ ತಾಯಿ-ತಂದೆಯರನ್ನು ಒಳಗೊಂಡಂತೆ ಲೋಕದಲ್ಲಿ ಪ್ರತಿಯೊಬ್ಬರು ಹಣ ಸಂಪಾದನೆಗಾಗಿ ಶ್ರಮಿಸುತ್ತಿರುವ ವಾಸ್ತವದ ಮಧ್ಯೆ ಬದುಕುತ್ತಿರುವ ಮಗುವನ್ನು ಇಂತಹ ವಾಸ್ತವ ದೂರವಾದ ಲೇಖನಗಳು ಸಂಶಯಾತ್ಮನನ್ನಾಗಿಸುತ್ತವೆ, ಗೊಂದಲಕ್ಕೀಡು ಮಾಡುತ್ತವೆ. ಪಠ್ಯವೆನಿಸಿಕೊಳ್ಳುವ ಒಂದು ‘ಪಠ್ಯ’ವು ವಿದ್ಯಾರ್ಥಿಗೆ ಒಂದು ವಸ್ತು ವಿಷಯವನ್ನು ಅದರ ಸಮಗ್ರ ಸ್ವರೂಪದಲ್ಲಿ ಪರಿಚಯಿಸಿಕೊಡಬೇಕಲ್ಲದೆ ಅದು ಏಕಮುಖಿಯಾದ, ಉಪದೇಶಾತ್ಮಕವಾದ ಪಠ್ಯ ಆಗಬಾರದು. ಬನ್ನಂಜೆ ಉಪದೇಶದಂತೆ ಹಣ ನಿಜಕ್ಕೂ ಕೇಡಿನ ಮೂಲವೇ ಆಗಿದ್ದಲ್ಲಿ ಪುರಂದರದಾಸರು ಲಕ್ಷ್ಮಿಯನ್ನು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂದು ಕರೆಯುತ್ತಿರಲಿಲ್ಲ” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲಜ್ಜೆಗೆಟ್ಟ ಸರ್ಕಾರ, ಪರಿಷ್ಕರಣೆಕಗೊಂಡ ಪುಸ್ತಕವನ್ನೇ ಮುದ್ರಿಸಿ ವಿತರಿಸಲು ಮೇ 27 ರಂದು ಸುತ್ತೋಲೆ ಗಳಿಸಿದೆ!

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...