Homeಕರ್ನಾಟಕಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

ಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

- Advertisement -
- Advertisement -

ಪಠ್ಯ ಪರಿಶೀಲನಾ ಸಮಿತಿ ಮಾಡಿರುವ ಕೇಸರೀಕರಣ ಹಾಗೂ ಹಲವು ಎಡವಟ್ಟುಗಳ ಕುರಿತು ಭಾರೀ ಆಕ್ರೋಶ ಭುಗಿಲೆದ್ದ ಬಳಿಕ ಸರ್ಕಾರ ಸಮರ್ಥನೆಗಿಳಿದಿದ್ದು ತಿಳಿದೇ ಇದೆ. ಜನರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದಿದ್ದರೂ ತಾನು ಮಾಡಿರುವ ತಪ್ಪುಗಳನ್ನು ಪರಾಮರ್ಶಿಸಿಕೊಂಡಿರುವುದು ಮೇಲುನೋಟಕ್ಕೆ ಕಾಣುತ್ತಿದೆ.

10ನೇ ತರಗತಿಯ ಕನ್ನಡ (ಪ್ರಥಮ) ಭಾಷಾ ಪಠ್ಯದಲ್ಲಿ ಅಳವಡಿಸಲಾಗಿರುವ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’ದ ಪಾಠದಲ್ಲಿ ಕೆಲವು ಬದಲಾವಣೆಗಳನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ತಂದಿದೆ. ಪರಿಷ್ಕೃತ ಪಠ್ಯದ ಪಿಡಿಎಫ್ ಸೋರಿಕೆಯಾದಾಗ ಆ ಪಾಠದಲ್ಲಿನ ಹಲವು ತಪ್ಪುಗಳನ್ನು ಜನರು ಗುರುತಿಸಿದ್ದರು. ಬನ್ನಂಜೆಯವರ ಪಾಠದ ಕುರಿತು ‘ನಾನುಗೌರಿ.ಕಾಂ’ನಲ್ಲಿ ವಿಸ್ತೃತವಾಗಿ ವರದಿಯಾಗಿತ್ತು. ಹಣವನ್ನು ಹೆಣ್ಣಿಗೆ ಹೋಲಿಸಿ ಅತ್ಯಂತ ಕೀಳು ಅಭಿರುಚಿ ಬರುವಂತೆ ಪಾಠವನ್ನು ರೂಪಿಸಲಾಗಿತ್ತು. “ಬನ್ನಂಜೆಯ ಪಾಠದಲ್ಲಿ ಹೆಣ್ಣಿನ ಅಪಮೌಲ್ಯೀಕರಣ” ಮಾಡಲಾಗಿದೆ ಎಂಬುದು ಅರಿವಾದ ಬಳಿಕ ಮರು ರೂಪಿಸಲಾದ ಪಠ್ಯದಲ್ಲಿ ತಿದ್ದುಪಡಿ ತರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಮೊದಲೇನಿತ್ತು?

“ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು.”

ಮುಂದುವರಿದು, “ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕಥೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ..”

ಸೋರಿಕೆಯಾದ ಪಿಡಿಎಫ್‌ ಪ್ರತಿಯಲ್ಲಿದ್ದ ಸಾಲುಗಳು

ಈ  ಮೇಲಿನ ಸಾಲುಗಳಿಗೆ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿರಿ: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಜನರು ಎತ್ತಿದ ಆಕ್ಷೇಪಗಳೇನು?

  • “ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಕಾಣ- ಗುಹೇಶ್ವರ” ಎಂಬ ವಚನ ಪರಂಪರೆಯ ಈ ನಾಡಿನಲ್ಲಿ ಹೆಣ್ಣಿನ ಕುರಿತು ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲಾಗುತ್ತಿದೆಯೇ?
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿವರ್ತನೆಯ ಕಡೆಗೆ ಹೋಗುತ್ತಿರುವಾಗ ಹೆಣ್ಣಿನ ಕುರಿತ ಈ ಸಂಚುಚಿತ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವುದು ಅಪಾಯಕಾರಿ. ಹೆಣ್ಣು ಮಕ್ಕಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದಾರೆ. ಸಂಪತ್ತಿನೊಂದಿಗೆ ಹೆಣ್ಣನ್ನು ಹೋಲಿಸಿ, ಆಕೆ ಚಂಚಲೆ ಎಂದು ಬಿಂಬಿಸುವುದು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ.
  • ಹೆಣ್ಣು ಕೇವಲವಷ್ಟೇ ಎಂಬ ಭಾವನೆ ಈ ರೀತಿಯ ಸಾಲುಗಳಿಂದ ಎಳೆಯ ಮನಸ್ಸುಗಳಲ್ಲಿ ಹುಟ್ಟುತ್ತದೆ. ಎಸ್‌ಎಸ್‌ಎಲ್‌ಸಿ ಮಕ್ಕಳ ವಯಸ್ಸನ್ನು ಗಮನಿಸಬೇಕು. ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವ ವಯಸ್ಸದು. ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಹೆಣ್ಣು ಒಬ್ಬರ ಹತ್ತಿರ ಶಾಶ್ವತವಾಗಿ ನಿಲ್ಲುವುದಿಲ್ಲ, ಆಕೆ ಚಂಚಲೆ ಎಂದು ಈ ವಯಸ್ಸಿನ ಮಕ್ಕಳ ಮುಂದೆ ಬೋಧಿಸಿದರೆ ತನ್ನ ಸಹಪಾಠಿಯನ್ನು ಒಬ್ಬ ಹುಡುಗ ಹೇಗೆ ನೋಡಬಹುದು? ಹಸಿ ಮಣ್ಣಿನಂತಹ ಅವರ ಮನಸ್ಸಿನಲ್ಲಿ ಯಾವ ವಿಗ್ರಹ ರೂಪ ತಾಳಬಹುದು?
  • ಈ ಪಠ್ಯದಲ್ಲಿ ಯಾವ ಸಂದೇಶ ಇದೆ? ಹಣ ಒಂದು ಸಾಧನವಷ್ಟೇ. ಅದು ಗಂಡಿಗೂ ಬೇಕು, ಹೆಣ್ಣಿಗೂ ಬೇಕು. ಹೀಗಿರುವಾಗ ಪುರುಷಪ್ರಧಾನ ವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಹಣವನ್ನು ವಿಶ್ಲೇಷಿಸಿರುವುದೇ ತಪ್ಪು. ಇಂತಹ ಪಾಠಗಳನ್ನು ಶಿಕ್ಷಕಿಯರು ತಮ್ಮ ಮಕ್ಕಳಿಗೆ ಬೋಧಿಸುವುದಾದರೂ ಹೇಗೆ?

ಈಗ ಆಗಿರುವ ಬದಲಾವಣೆ ಏನು?

“ಈ ಸಿರಿಯನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಸಿರಿಗೆ ಆಕರ್ಷಿತರಾದವರೆ. ಎಲ್ಲರೂ ಸಿರಿಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಸಿರಿಯ ಜಾಯಮಾನಕ್ಕೆ ಸಲ್ಲದು.”

ಕೆಟ್ಟ ನಡತೆಯ ಇಂಥ ಸಿರಿಯು ಹೇಗೋ ದೇವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತದೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ.

– ಹೀಗೆ ಪಠ್ಯವನ್ನು ತಿದ್ದಲಾಗಿದೆ. ಬನ್ನಂಜೆಯವರ ಲಿಂಗಾಧಾರಿತ ದೃಷ್ಟಿಕೋನವನ್ನು ಪಠ್ಯ ಪರಿಶೀಲನಾ ಸಮಿತಿ ಮಾರ್ಪಾಡು ಮಾಡಿರುವುದು ಸ್ಪಷ್ಟವಾಗುತ್ತದೆ.

ಪರಿಷ್ಕೃತ ಪಠ್ಯದಲ್ಲಿ ಬದಲಾದ ಸಾಲುಗಳು

ಇದನ್ನೂ ಓದಿರಿ: ರೋಹಿತ್‌ ಚಕ್ರತೀರ್ಥ ಆಯ್ಕೆಯ ಮಾನದಂಡಗಳೇನು?: ಬಹಿರಂಗ ಪತ್ರ ಬರೆದ ಶಿಕ್ಷಣ ತಜ್ಞರು

ಲೇಖಕರ ಮೂಲ ಪಠ್ಯ ಬದಲಿಸಬಹುದೇ?

“ಇದು ಎಲ್ಲದಕ್ಕಿಂತ ಅನಾಹುತಕಾರಿ ಹೆಜ್ಜೆ. ಲೇಖಕರು ಇರುವಾಗಲಾದರೂ ಅಡ್ಡಿ ಇಲ್ಲ ಎನ್ನಬಹುದೇನೋ? ಆದರೆ ಲೇಖಕರು ಗತಿಸಿದ ನಂತರ ಅವರು ಬರೆದ ಅವರು ಬರೆದ ಒಂದಕ್ಷರವನ್ನು ತಿದ್ದಬಾರದು. ಇಂದು ಗೋವಿಂದಾಚಾರ್ಯರನ್ನು ತಿದ್ದಲು ಹೊರಟ ಮಂದಿಯೇ ತಮಗೆ ಬೇಕಾದ ಹಾಗೆ ನಾಳೆ ಅಂಬೇಡ್ಕರ್, ಕುವೆಂಪು, ಲಂಕೇಶ್, ತಿರುಮಲಾಂಬ ಎಲ್ಲರನ್ನು ತಿದ್ದಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ.

“ಈಗಾಗಲೇ ಕುವೆಂಪು ವಿಷಯದಲ್ಲಿ ಅವರು ಏನು ಪ್ರತಿಪಾದಿಸಿದ್ದರೋ ಅದಕ್ಕೆ ವಿರುದ್ದವಾಗಿ ಹಲವು ಅಪದ್ದಗಳನ್ನು ಸೃಷ್ಟಿಸುವ ಪ್ರಯತ್ನಗಳು ಸದಾ ಇಲ್ಲಿ ಚಾಲ್ತಿಯಲ್ಲಿವೆ. ಆದರೆ ಅದಕ್ಕೆ ಅವಕಾಶವೇ ನೀಡದಂತೆ ಅವರ ಬರಹಗಳ ಒಂದೊಂದು ವಾಕ್ಯವು ಇಲ್ಲಿಯ ಜಾತೀಯತೆ, ವರ್ಗ ಸಂಘರ್ಷ, ಮೇಲ್ಜಾತಿಯವರ ಮೇಲರಿಮೆ, ತಳ ಸಮುದಾಯದ ಮೇಲೆ ನಡೆಯುವ ಹಲ್ಲೆ, ಶೋಷಣೆ ,ಎಲ್ಲವನ್ನು ತೆರೆದಿಡುತ್ತವೆ. ನಿಧಾನಕ್ಕೆ ಅದನ್ನೇ ಬದಲಾಯಿಸಿಬಿಟ್ಟರೆ, ಇಲ್ಲಿ ಎಲ್ಲವೂ ಚೆನ್ನಾಗಿತ್ತು, ಚೆನ್ನಾಗಿದೆ ಎಂಬುದನ್ನು ಸಾಬೀತು ಮಾಡಿದಂತಾಗಿಬಿಡುತ್ತದೆ. ಇದಕ್ಕೆ ಅವಕಾಶ ಕೊಡಬಾರದು” ಎಂದು ತಿಳಿಸಿದ್ದಾರೆ.

“ಹೆಡಗೇವಾರ್‌ ಭಗವಾಧ್ವಜ ಎಂದು ಬರೆದಿದ್ದರೆ ಅದನ್ನು ರಾಷ್ಟ್ರಧ್ವಜ ಎಂದು ತಿದ್ದಿ ನಮ್ಮ ಮಕ್ಕಳಿಗೆ ಪಠ್ಯವಾಗಿಸಬೇಕಾಗಿಲ್ಲ. ಬನ್ನಂಜೆಯವರ ಪಠ್ಯದಲ್ಲೂ ಮಹಿಳೆಯರ ಬಗೆಗೆ ಇರುವ ಆಕ್ಷೇಪಾರ್ಯ ವಾಕ್ಯಗಳಿದ್ದರೆ ಅದನ್ನು ತಿದ್ದಿ ಅವರೇ ನಿಜವಾದ ಸ್ತ್ರೀ ಉದ್ದಾರಕರು ಎಂಬಂತೆ ಬಿಂಬಿಸಬೇಕಿಲ್ಲ. ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ, ನಮ್ಮ ರಾಷ್ಟ್ರಕ್ಕಾಗಿ ಅಲ್ಲಿನ ಜನರ ಏಳಿಗೆಗಾಗಿ ಜೀವವನ್ನೇ ತೇಯ್ದ ಸಾವಿರಾರು ಜನರ ಚರಿತ್ರೆ ದಾಖಲಾಗಿದೆ. ಅದನ್ನು ಮಕ್ಕಳು ಓದುವಂತಾಗಲಿ. ತಿದ್ದಲ್ಪಟ್ಟ ಬರೆಹಗಳನ್ನು ಪಠ್ಯವಾಗಿಸಿ ಓದಿಸಬೇಕಿಲ್ಲ. ಸಮೃದ್ದವಾದ ನಿಜ ಕಾಳಜಿಯ ಬರೆಹಗಳು, ಬರೆಹಗಾರರು, ವ್ಯಕ್ತಿತ್ವಗಳು ಆಗಿಹೋಗಿರುವ/ಇರುವ ನಾಡಿನಲ್ಲಿ ಸಾವಿರಾರು ಪಠ್ಯಗಳನ್ನು ಮಾಡಬಹುದು. ಅದಕ್ಕಾಗಿ ಸೂಕ್ತವಾದ ಶಿಕ್ಷಣ ತಜ್ಞರಿಗೂ ಇಲ್ಲಿ ಖಂಡಿತಾ ಕೊರತೆಯಿಲ್ಲ” ಎಂದು ಹೇಳಿದ್ದಾರೆ.

“ಲೇಖಕರ ಮೂಲ ಬರಹಕ್ಕೆ ಧಕ್ಕೆಯಾಗದಂತೆ ಸಂಕ್ಷಿಪ್ತಗೊಳಿಸಿ, ಪಠ್ಯವಾಗಿ ರೂಪಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಆದರೆ, ಇಲ್ಲಿ ಮೂಲ ಲೇಖಕರ ವಿಚಾರಗಳನ್ನೇ ಬದಲಿಸಲು ಹೊರಟಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬನ್ನಂಜೆ ಪಾಠದ ಸಾರಾಂಶ ಪ್ರಸ್ತುತವೇ?

ಬನ್ನಂಜೆಯವರ ಪಾಠದಲ್ಲಿನ ಲಿಂಗಾಧಾರಿತ ದೃಷ್ಟಿಕೋನವನ್ನು ತಿದ್ದಿದ್ದರೂ ‘ಶುಕನಾಸನ ಉಪದೇಶ’ ಪಾಠದ ಪ್ರಸ್ತುತತೆಯ ಪ್ರಶ್ನೆ ಬದಿಗೆ ಸರಿಯುವುದಿಲ್ಲ. ಹಣದ ಕುರಿತು ನಕಾರಾತ್ಮಕವಾಗಿ ಮಾತನಾಡುವ ಈ ಪಾಠವು ಮಕ್ಕಳಿಗೆ ಕಲಿಸುವುದೇನು ಎಂಬುದೂ ಚರ್ಚೆಯಾಗಬೇಕಿದೆ.

ವಿವಾದ ಉಂಟಾದ ಸಂದರ್ಭದಲ್ಲಿ ಆಧ್ಮಾತ್ಮಿಕ ವಿಚಾರಗಳ ಬರಹಗಾರರು ಹಾಗೂ ಪ್ರಾಧ್ಯಾಪಕರೂ ಆದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಣದ ಕುರಿತ ಬನ್ನಂಜೆಯವರ ಬೋಧಪ್ರದ (didactic) ಲೇಖನ ಹೊಸದಾಗಿ ಸೇರ್ಪಡೆಯಾಗಿದೆ. ಆ ಲೇಖನದಲ್ಲಿ ಬನ್ನಂಜೆಯವರು ಹಣ ಕೆಟ್ಟದ್ದು, ವರ್ಜ್ಯ ಎಂದು ಉಪದೇಶಿಸುತ್ತಾರೆ. ತನ್ನ ತಾಯಿ-ತಂದೆಯರನ್ನು ಒಳಗೊಂಡಂತೆ ಲೋಕದಲ್ಲಿ ಪ್ರತಿಯೊಬ್ಬರು ಹಣ ಸಂಪಾದನೆಗಾಗಿ ಶ್ರಮಿಸುತ್ತಿರುವ ವಾಸ್ತವದ ಮಧ್ಯೆ ಬದುಕುತ್ತಿರುವ ಮಗುವನ್ನು ಇಂತಹ ವಾಸ್ತವ ದೂರವಾದ ಲೇಖನಗಳು ಸಂಶಯಾತ್ಮನನ್ನಾಗಿಸುತ್ತವೆ, ಗೊಂದಲಕ್ಕೀಡು ಮಾಡುತ್ತವೆ. ಪಠ್ಯವೆನಿಸಿಕೊಳ್ಳುವ ಒಂದು ‘ಪಠ್ಯ’ವು ವಿದ್ಯಾರ್ಥಿಗೆ ಒಂದು ವಸ್ತು ವಿಷಯವನ್ನು ಅದರ ಸಮಗ್ರ ಸ್ವರೂಪದಲ್ಲಿ ಪರಿಚಯಿಸಿಕೊಡಬೇಕಲ್ಲದೆ ಅದು ಏಕಮುಖಿಯಾದ, ಉಪದೇಶಾತ್ಮಕವಾದ ಪಠ್ಯ ಆಗಬಾರದು. ಬನ್ನಂಜೆ ಉಪದೇಶದಂತೆ ಹಣ ನಿಜಕ್ಕೂ ಕೇಡಿನ ಮೂಲವೇ ಆಗಿದ್ದಲ್ಲಿ ಪುರಂದರದಾಸರು ಲಕ್ಷ್ಮಿಯನ್ನು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂದು ಕರೆಯುತ್ತಿರಲಿಲ್ಲ” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲಜ್ಜೆಗೆಟ್ಟ ಸರ್ಕಾರ, ಪರಿಷ್ಕರಣೆಕಗೊಂಡ ಪುಸ್ತಕವನ್ನೇ ಮುದ್ರಿಸಿ ವಿತರಿಸಲು ಮೇ 27 ರಂದು ಸುತ್ತೋಲೆ ಗಳಿಸಿದೆ!

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...