Homeಮುಖಪುಟಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

- Advertisement -
- Advertisement -

ಕಳೆದ ಕೆಲವು ವಾರಗಳಲ್ಲಿ ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ, ಶ್ರೀರಂಗಪಟ್ಟಣದ ಮಸ್ಜೀದ್-ಈ-ಆಲಾ, ಮಥುರಾದಲ್ಲಿರುವ ಶಾಹೀ ಈದ್ಗಾ ಮಸೀದಿ, ದಿಲ್ಲಿಯ ಕುತುಬ್ ಮಿನಾರ್ – ಇವೆಲ್ಲೆಡೆ ಹಿಂದುತ್ವ ಸಂಘಟನೆಗಳು ಇಲ್ಲದ ವಿವಾದ ಸೃಷ್ಟಿಸಿವೆ. ಈ ಸಂಘಟನೆಗಳ ಮನುವಾದಿ, ಕೋಮುವಾದಿ ನಡೆ ಬಗ್ಗೆ ನಮಗೆಲ್ಲರಿಗೂ
ಗೊತ್ತಿರುವಂಥದ್ದೇ. ಆದರೆ ನಮಗೆ ಆತಂಕವಾಗಿರಬೇಕಾಗಿರುವ ವಿಷಯವೆಂದರೆ ನಮ್ಮ ನ್ಯಾಯಾಲಯಗಳ ಪ್ರತಿಕ್ರಿಯೆ. ಹಿಂದುತ್ವ ಸಂಘಟನೆಗಳು ಮಸೀದಿಗಳ ಮೇಲೆ ನಡೆಸುತ್ತಿರುವ ದಾಳಿಗಳಿಗೆ ನ್ಯಾಯಾಲಯಗಳು ಕೈ ಜೋಡಿಸಿವೆಯೇ ಎಂಬ ಅನುಮಾನ ಮೂಡುತ್ತದೆ. ಈ ಅನುಮಾನವನ್ನು ಈ ಬರೆಹದಲ್ಲಿ ಪರಿಶೀಲಿಸೋಣ. ಮುಖ್ಯವಾಗಿ ಜ್ಞಾನವಾಪಿ ಮಸೀದಿಯ ವಿಷಯದಲ್ಲಿ ನ್ಯಾಯಾಲಯಗಳ ನಡೆಯನ್ನು ಗಮನಿಸೋಣ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಯಿತು ಎಂದು ಹಿಂದೂ ಪರ ಸಂಘಟನೆಗಳು ಹೇಳಿಕೊಂಡ ತಕ್ಷಣ, ವಾರಣಾಸಿಯ ನ್ಯಾಯಾಲಯ, ಅದು ಪತ್ತೆಯಾಗಿದೆ ಎಂದು ಪ್ರತಿಪಾದಿಸಿದ ಜಾಗವನ್ನು ಬಂದ್ ಮಾಡಲು ಅದೇಶಿಸಿತು. ನ್ಯಾಯಾಲಯವೇ ನೇಮಿಸಿದ್ದ ’ಕೋರ್ಟ್ ಕಮಿಷಿನರ್’ ವರದಿ ಸಲ್ಲಿಸುವ ತನಕ ಸಹ ಕಾಯಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಅಸಾದುದ್ದೀನ್ ಒವೈಸಿಯವರು, “ದಿಸ್ ಇಸ್ ಎ ಟೆಕ್ಸ್ಟ್ ಬುಕ್ ರಿಪೀಟ್ ಆಪ್ ಡಿಸೆಂಬರ್ 1949 ಇನ್ ಬಾಬ್ರಿ ಮಸ್ಜಿದ್” ಎಂದರು.

ಬಾಬ್ರಿ ಮಸೀದಿ ಸುತ್ತ ಸೃಷ್ಟಿಸಿದ ವಿವಾದ ಸ್ವತಂತ್ರ ಭಾರತದ ರಾಜಕೀಯ ಹಾಗು ಸಾಮಾಜಿಕ ಇತಿಹಾಸವನ್ನು ಇನ್ನಿಲ್ಲದಂತೆ ಬದಲಿಸಿತು. ಈ ಪ್ರಕರಣದ ಅಂತಿಮ ತೀರ್ಪು ಹಾಗು ಅದರಲ್ಲಿ ಅಡಗಿದ ಅನ್ಯಾಯದ ಬಗ್ಗೆ ಸಾಕಷ್ಟು ಬರೆದಾಗಿದೆ. ಆದರೆ ಈ ಪ್ರಕರಣ ಈ ಮಟ್ಟಕ್ಕೆ ಬೆಳೆದಿದ್ದು ನ್ಯಾಯಾಲಯಗಳು ತಮ್ಮ ಸಂವಿಧಾನಿಕ ಜವಾಬ್ದಾರಿ ಮರೆತು, ಹಿಂದುತ್ವವಾದಿಗಳಿಗೆ ನೀಡಿದ ನೆರವಿನಿಂದಲೇ.

1949ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದೇನು ಹಾಗು ಅದಕ್ಕೆ ನ್ಯಾಯಾಲಯಗಳು ಹೇಗೆ ಸ್ಪಂದಿಸಿದವು ಎಂಬುದನ್ನು ವಕೀಲರಾದ ಮೊಹಮ್ಮದ್ ಅಫೀಫ್ ಅವರು ವಿವರಿಸಿದ್ದಾರೆ. ಮೊದಲನೆಯದಾಗಿ ಡಿಸೆಂಬರ್ 23, 1949ರ ರಾತ್ರಿ, ಮಸೀದಿಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ, ಕೆಲವರು ಮಸೀದಿಯೊಳಗೆ ನುಗ್ಗಿ ಅಲ್ಲಿ ಕಳ್ಳತನದಿಂದ ಹಿಂದೂ ದೇವರ ವಿಗ್ರಹ ಇಟ್ಟರು. ಅಲ್ಲಿಗೆ ನಂತರ ಹೋದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಮಸೀದಿಗೆ ಬೀಗ ಹಾಕಿ, ಆ ಸ್ಥಳವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮಾಡಿದರು. ಆದರೆ, ಕಾನೂನುಬಾಹಿರವಾಗಿ ಅಲ್ಲಿಟ್ಟ ವಿಗ್ರಹಗಳನ್ನು ಮಾತ್ರ ತೆಗೆಸುವುದಿಲ್ಲ. ನಂತರ 1950ರಲ್ಲಿ ಇಬ್ಬರು ಹಿಂದೂ ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮೊರೆಹೋಗಿ, ಮಸೀದಿ ಇರುವ ಸ್ಥಳ ಅವರದ್ದು ಎಂದು ಅರ್ಜಿ ಹಾಕುತ್ತಾರೆ. ಆ ಪ್ರಕರಣದಲ್ಲಿ ನ್ಯಾಯಾಲಯವು, ಮಧ್ಯಂತರ ಆದೇಶ ನೀಡಿ, ಮಸೀದಿಯಲ್ಲಿಟ್ಟ ವಿಗ್ರಹಗಳನ್ನು ಯಾರೂ ಜರಿಗಿಸಬಾರದೆಂದು ತೀರ್ಪು ನೀಡುತ್ತದೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ನಿಲುವು, ಆ ಸ್ಥಳವನ್ನು 1949ರಲ್ಲಿ ಮಸೀದಿಯಾಗಿ ಉಪಯೋಗಿಸಲಾಗುತ್ತಿತ್ತು ಎಂಬುದು. ಹಾಗಿದ್ದರೂ ಸಹ ನ್ಯಾಯಾಲಯವು ಮಸೀದಿಯನ್ನು ಬಂದ್ ಮಾಡಿ, ಯಾರಿಗೂ ಪ್ರವೇಶ ನೀಡದಂತೆ ಆದೇಶಿಸುತ್ತದೆ. ನಂತರ ಉತ್ತರ ಪ್ರದೇಶ ಉಚ್ಚ ನ್ಯಾಯಾಲಯವು ಸಿವಿಲ್ ಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯುತ್ತದೆ. ಹಾಗಾಗಿ, 1949ರಲ್ಲಿ ಮಸೀದಿಗೆ ನುಗ್ಗಿ ಅಲ್ಲಿ ವಿಗ್ರಹಗಳನ್ನು ಇಟ್ಟ ಕಾನೂನುಬಾಹಿರ ಕಾರ್ಯವನ್ನು ನ್ಯಾಯಾಲಯವೆ ನ್ಯಾಯಸಮ್ಮತಗೊಳಿಸುತ್ತದೆ. ಅದು ಅಲ್ಲಿಗೆ ನಿಲ್ಲುವುದಿಲ್ಲ. ಈ ಸಿವಿಲ್ ಪ್ರಕರಣಗಳು ದಶಕಗಳ ಕಾಲ ನಡೆಯುತಿದ್ದವು. 1989ರಲ್ಲಿ ದಿಢೀರ್ ಎಂದು ಒಂದು ದಿನ, ಈ ಪ್ರಕರಣದ ಭಾಗವೇ ಅಲ್ಲದ ಹಿಂದೂ ವ್ಯಕ್ತಿಯೊಬ್ಬರು, ಸಿವಿಲ್ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸುತ್ತಾರೆ. ಪ್ರಕರಣದಲ್ಲಿ ಪಾರ್ಟಿಯಾಗಿರುವ ಮುಸ್ಲಿಂ ಅರ್ಜಿದಾರರಿಗೆ ತಿಳಿಸದೆ, ಅದರ ಬಗ್ಗೆ ಹಿಯರಿಂಗ್ ಮಾಡಿ, ಮಸೀದಿಯ ಬಾಗಿಲುಗಳನ್ನು ತೆಗೆದು ಅಲ್ಲಿ ಹಿಂದೂಗಳಿಗೆ 1949ರಲ್ಲಿ ಇಟ್ಟ ವಿಗ್ರಹಗಳಿಗೆ ಪೂಜೆ ಮಾಡಲು ಅವಕಾಶ ನೀಡಲಾಗುತ್ತದೆ. ದಿಢೀರೆಂದು ನೂರಾರು ವರ್ಷಗಳಿಂದ ನಡೆದುಕೊಂಡಂತ ಮಸೀದಿ, ನ್ಯಾಯಾಲಯದ ಈ ತೀರ್ಪಿನಿಂದ ದೇವಾಲಯವಾಗಿ ಪರಿವರ್ತನೆಯಾಯಿತು. ಪ್ರಕರಣದ ಭಾಗವೇ ಆಗದಿದ್ದವರಿಗೆ ಪ್ರಕರಣದಲ್ಲಿ ಅರ್ಜಿ ಹಾಕಲು ’ಲೋಕಸ್ ಸ್ಟಾಂಡಿ’ ಇಲ್ಲ (ಎಂದರೆ ಅಧಿಕಾರ ಇಲ್ಲ). ಇಂತಹ ವ್ಯಕ್ತಿಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು, ಪ್ರಕರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಂಘಟನೆಗಳ ವಾದವನ್ನೂ ಕೇಳಿಸಿಕೊಳ್ಳದೆ ನೀಡಿದ ತೀರ್ಪು, ’ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಜಸ್ಟಿಸ್’ಗೆ ವಿರುದ್ಧವಾಗಿದೆ.

ಅಸಾದುದ್ದೀನ್ ಒವೈಸಿ

ಈ ಸಮಯದಲ್ಲಿ ಇದನ್ನು ಏಕೆ ನೆನೆಯಬೇಕೆಂದರೆ ಜ್ಞಾನವಾಪಿ ಮಸೀದಿಯಲ್ಲಿ ಸಹ ಇದೇ ನಡೆಯುತ್ತಿದೆ. ಜ್ಞಾನವಾಪಿ ಮಸೀದಿಯ ಸುತ್ತ ಸೃಷ್ಟಿಸಿರುವ ವಿವಾದದ ಲೀಗಲ್ ಕಾಲಾನುಕ್ರಮ-ಇತಿಹಾಸ ಹೀಗಿದೆ:


ಎಲ್ಲದಕ್ಕಿಂತ ಆತಂಕಕಾರಿ ವಿಷಯವೆಂದರೆ, ಸುಪ್ರೀಂ ಕೋರ್ಟ್‌ನ ಸದರಿ ಪ್ರಕರಣವನ್ನು ಆಲಿಸುತ್ತಿರುವ ಬೆಂಚ್‌ನಲ್ಲಿ ಇರುವ ಜಸ್ಟಿಸ್ ಚಂದ್ರಚೂಡ್ ಬಾಬ್ರಿ ತೀರ್ಪಿನಲ್ಲಿ ಪ್ಲೇಸಸ್ ಆಫ್ ವರ್ಷಿಪ್ ಕಾಯ್ದೆ ಬಹು ಮುಖ್ಯ, ಅದನ್ನು ಉಲ್ಲಂಘಿಸಬಾರದೆಂದು ಹೇಳಿದ್ದರು; ಆದರೆ ಈ ಪ್ರಕರಣದಲ್ಲಿ ಅದರ ಉಲ್ಲಂಘನೆಯಾಗಿರುವುದನ್ನು ಗಣನೆಗೇ ತೆಗೆದುಕೊಳ್ಳದಿರುವುದು ಮತ್ತು ಆ ಉಲ್ಲಂಘನೆಯನ್ನು ಸಮರ್ಥಿಸುವಂತೆ ಮಾತನಾಡಿರುವುದು.

ವಿಚಾರಣೆ ನಡೆಯಬೇಕಾದರೆ, ಮಸೀದಿ ಸಮಿತಿ ಪರ ವಕೀಲರು, ಸಮೀಕ್ಷೆಗೆ ಆದೇಶಿಸಿದ್ದು ಕಾಯ್ದೆಯ ಕಲಂ 3ರ ಉಲ್ಲಂಘನೆ ಎಂದಾಗ, “ದೇಶದಲ್ಲಿ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಎರಡು ಧರ್ಮಗಳು ಗುರುತು ಇರುತ್ತವೆ, ಹಾಗಾಗಿ ಅದು ಯಾವ ಧರ್ಮಕ್ಕೆ ಸೇರಿದೆ ಎಂದು ಪರಿಶೀಲಿಸುವುದು ಕಾಯ್ದೆಯ ಉಲ್ಲಂಘನೆಯಲ್ಲ” ಎಂದು ಸಮರ್ಥಿಸಿಕೊಳ್ಳುತ್ತಾರೆ!

ಇದು ಅಪಾಯಕಾರಿ ಸಂಗತಿ. ಏಕೆಂದರೆ ಈಗ ಯಾವುದೋ ಒಂದು ಮಸೀದಿಯಲ್ಲಿ ಹಿಂದೂ ವಿಗ್ರಹಗಳು ಇವೆಯೆಂದು ಅನೇಕ ಜನ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಹಾಗಾಗಿ, 1947ರ ಸಮಯದಲ್ಲಿ ಯಾವುದಾದರು ಸ್ಥಳಗಳು ಮಸೀದಿಯಾಗಿದ್ದರೆ ಅದು ಮಸೀದಿಯಾಗಿ ಉಳಿಯಬೇಕು, ದೇವಾಲಯವಾಗಿದ್ದುದು ದೇವಾಲಯವಾಗಿ ಉಳಿಯಬೇಕು, ಆಗಲೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಹಾಗು ಸಮಾಜ ಒಗ್ಗಟ್ಟಾಗಿರುತ್ತದೆ ಎಂಬ ಉದ್ದೇಶವನ್ನು ಎತ್ತಿಹಿಡಿಯುವ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ಅಪಾಯದಲ್ಲಿದೆ.

ಹೀಗೆ ನ್ಯಾಯಾಲಯಗಳೇ ಹಿಂದುತ್ವವಾದಿ ಸಂಘಟನೆಗಳ ಕೋಮುವಾದಿ ದಾಳಿಗಳಿಗೆ ನೆರವಾಗಿ ನಿಂತಿವೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಅದು ದೇವಾಲಯವಾಗಿತ್ತೇ ಎಂಬ ವಿಚಾರಣೆಗಿಂತಲೂ, ಇಲ್ಲಿ ನ್ಯಾಯಾಲಯಗಳು ಸಂವಿಧಾನ ಬದ್ಧವಾಗಿವೆಯೇ ಎಂಬ ವಿಚಾರಣೆ ನಡೆಯುತ್ತಿದೆ.

ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others



ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ಶಿವಲಿಂಗ ಎಲ್ಲಿ ಕಂಡು ಬಂದಿದೆ ಎಂಬ ಸುಪ್ರೀಂ ಪ್ರಶ್ನೆಗೆ, ವರದಿ ನೋಡಿಲ್ಲ ಎಂದ ಯುಪಿ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಕ್ರಮ ಮಸೀದಿಗಳ ಬಿಟ್ಟು ಎಲ್ಲಾ ನಗರ ನಕ್ಸಲ್ ಕಮ್ಯೂನಿಸ್ಟ್ ರ ಮನೆಗಳನ್ನು ಕೋರ್ಟ್ ಮುಟ್ಟುಗೋಲು ಹಾಕಿದರೆ ನ್ಯಾಯ ಸಮ್ಮತ ಆಗಬಹುದು ಅನಿಸುತ್ತೆ ಸಮಾಜದಲ್ಲಿ ಏಕೆಂದರೆ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಇವರಿಂದಲೇ ನಡಿತಿರುವ ಕಾರಣ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...