ಉತ್ತರ ಪ್ರದೇಶ ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಡಿಯೊ ಚಿತ್ರೀಕರಣ ಸಮಯದಲ್ಲಿ ವುಝೂ ಖಾನಾದಲ್ಲಿ ಕಂಡು ಬಂದ ‘ಕಾರಂಜಿ’ಯನ್ನು ಬಲಪಂಥೀಯ ವಕೀಲರು ‘ಶಿವಲಿಂಗ’ ಎಂದು ಪ್ರತಿಪಾದಿಸಿದ್ದರು. ಈ ಹಿನ್ನಲೆಯಲ್ಲಿ ನಗರದ ನ್ಯಾಯಾಲಯವು ವುಝೂ ಖಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿತ್ತು. ಇದೀಗ ಸುಪ್ರೀಂಕೋರ್ಟ್, “ಶಿವಲಿಂಗ ನಿಖರವಾಗಿ ಎಲ್ಲಿ ಕಂಡುಬಂದಿದೆ” ಎಂದು ವಾರಣಾಸಿ ಆಡಳಿತವನ್ನು ಕೇಳಿದೆ.
ಮಸೀದಿ ಸಂಕೀರ್ಣದ ಚಿತ್ರೀಕರಣವನ್ನು ನಿಲ್ಲಿಸುವಂತೆ ವಾರಣಾಸಿಯ ಅಧಿಕಾರಿಗಳಿಗೆ ನಿರ್ದೇಶನವನ್ನು ಕೋರಿ ಮಸೀದಿ ಸಮಿತಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭ ಸುಪ್ರೀಂಕೋರ್ಟ್ ಆಡಳಿತಕ್ಕೆ ಶಿವಲಿಂಗದ ಬಗ್ಗೆ ಪ್ರಶ್ನಿಸಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು “ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ?” ಕೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದಕ್ಕೆ ಉತ್ತರಿಸಿದ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, “ನಾವು ವರದಿಯನ್ನು ನೋಡಿಲ್ಲ” ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಾಳೆಯವರೆಗೆ ಸಮಯ ಕೋರಿದ್ದಾರೆ.
ಇದನ್ನೂ ಓದಿ: ಮೈಸೂರಿನ ‘ಹದಿನಾರು’ ಗ್ರಾಮದಲ್ಲಿ ವೈಷ್ಣವ ದೇವಾಲಯದ ಗೋಡೆ ಕೆಡವಿದಾಗ ಸಿಕ್ಕಿತ್ತು ಜೈನ ವಿಗ್ರಹ!
‘ಶಿವಲಿಂಗ’ ಪತ್ತೆಯಾಗಿದೆ ಎನ್ನಲಾಗಿರುವ ಸ್ಥಳವನ್ನು ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ಸೀಲ್ ಮಾಡಲಾಗಿದೆ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.
ದೇವಸ್ಥಾನದ ಪರ ದೂರುದಾರರು ಮಸೀದಿ ಚಿತ್ರೀಕರಣದ ವೇಳೆ ಮಸೀದಿಯ ಕೊಳದಲ್ಲಿ “ಶಿವಲಿಂಗ” ಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಕೊಳವನ್ನು ನಮಾಜ್ ಮಾಡುವುದಕ್ಕಿಂತ ಮೊದಲು ಕೈಕಾಲು ಶುದ್ದೀಕರಣಕ್ಕೆ ಬಳಸಲಾಗುತ್ತದೆ. ಇದಕ್ಕೆ ವುಝೂ ಖಾನ ಎಂದು ಕರೆಯಲಾಗುತ್ತದೆ.
ಕೊಳದಲ್ಲಿ ‘ಶಿವಲಿಂಗ’ ಕಂಡುಬಂದರೆ, ಆ ಪ್ರದೇಶವನ್ನು ರಕ್ಷಿಸಬೇಕು, ಆದರೆ ಮುಸ್ಲಿಮರು ನಮಾಜ್ಗೆ ಮಸೀದಿಗೆ ಬರಲು ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಆದೇಶ ನೀಡಿದೆ.
Full video. Mahant of Kashi Vishwanath Temple, Rajendra Tiwari says, the original shivling is still in the Kashi Vishwanath Temple. He claims, this cannot be that shivling. pic.twitter.com/5gQ7IwtTA7
— Mohammed Zubair (@zoo_bear) May 16, 2022
ಈ ಮಧ್ಯೆ, ಸಮೀಕ್ಷೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಕ್ಕಾಗಿ ಸ್ಥಳೀಯ ವಾರಣಾಸಿ ನ್ಯಾಯಾಲಯವು ವಕೀಲ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಿದೆ.
ಇದನ್ನೂ ಓದಿ: ಕೋಮು ಕುದುರೆಯೇರಿ ಚುನಾವಣೆ ಗೆಲ್ಲುವ ಬಿಜೆಪಿ ತಂತ್ರ: ಚುನಾವಣೆ ಇರುವ ರಾಜ್ಯಗಳೆ ಟಾರ್ಗೆಟ್
ನಿನ್ನೆ, ಜ್ಞಾನವಾಪಿ ಮಸೀದಿ ಸಂಕೀರ್ಣದ ಕೊಳದಲ್ಲಿ “ಶಿವಲಿಂಗ” ಕಂಡುಬಂದಿದೆ ಎಂದು ಬಲಪಂಥೀಯ ಅರ್ಜಿದಾರರ ಹೇಳಿಕೆ ನೀಡಿದ ನಂತರ, ಸ್ಥಳೀಯ ನ್ಯಾಯಾಲಯವು ಅದನ್ನು ಸೀಲ್ ಮಾಡಲು ಆದೇಶಿಸಿತ್ತು. ಮಸೀದಿ ಸಮಿತಿ ಇದನ್ನು ತಿರಸ್ಕರಿಸಿದ್ದು, ಅದು “ಕಾರಂಜಿ”ಯಾಗಿದ್ದು ಶಿವಲಿಂಗವಲ್ಲ ಎಂದು ಪ್ರತಿಪಾದಿಸಿದೆ.
“ಮಸೀದಿಯ ವಿಡಿಯೊ ಸಮೀಕ್ಷೆಯ ವರದಿ ಇನ್ನೂ ಸಲ್ಲಿಸದಿರುವಾಗ ಸಿಟಿ ಕೋರ್ಟ್ ಸ್ಥಳವನ್ನು ಸೀಲ್ ಮಾಡಲು ಆದೇಶ ನೀಡಲು ಹೇಗೆ ಸಾಧ್ಯ?” ಎಂದು ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ವೇಳೆ ಪ್ರಶ್ನಿಸಿದೆ.
“ಇತರರ ಅರ್ಜಿಯನ್ನು ಆಧರಿಸಿ ನ್ಯಾಯಾಲಯವು ಹೇಗೆ ಮುಂದುವರೆಯಿತು? ಸ್ಥಳವನ್ನು ಸೀಲ್ ಮಾಡಲು ಹೇಗೆ ಸಾಧ್ಯ? ಈ ಆದೇಶಗಳು ಹೇಗೆ ಜಾರಿಯಾಗುತ್ತವೆ ಎಂಬುದನ್ನು ನೋಡಿ” ಎಂದು ಮಸೀದಿ ಸಮಿತಿ ಸುಪ್ರೀಂ ಕೋರ್ಟ್ಗೆ ಕೇಳಿದೆ.
ಇದನ್ನೂ ಓದಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಜ್ಞಾನವಾಪಿ ಮಸೀದಿ ಇದೆ. ಐವರು ಮಹಿಳಾ ಅರ್ಜಿದಾರರು ಮಸೀದಿ ಹೊರ ಗೋಡೆಗಳ ಮೇಲಿನ ವಿಗ್ರಹಗಳ ಮುಂದೆ ಮತ್ತು ಇತರ ‘ಹಳೆಯ ದೇವಾಲಯದ ಸಂಕೀರ್ಣದೊಳಗೆ ಗೋಚರಿಸುವ ಮತ್ತು ಅಗೋಚರ ದೇವತೆಗಳ’ ದೈನಂದಿನ ಪ್ರಾರ್ಥನೆಗೆ ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಪ್ರದೇಶವನ್ನು ಪ್ರಸ್ತುತವಾಗಿ ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆಯಲಾಗುತ್ತದೆ.
ವಾರಣಾಸಿ ಸಿವಿಲ್ ನ್ಯಾಯಾಲಯವು ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು ಮತ್ತು ಕೊಳ ಸೇರಿದಂತೆ ಮಸೀದಿ ಸಂಕೀರ್ಣದ ವೀಡಿಯೊ ಮೌಲ್ಯಮಾಪನಕ್ಕೆ ಆದೇಶಿಸಿತು. ಅದಕ್ಕಾಗಿ ನ್ಯಾಯಾಲಯದ ಆಯುಕ್ತರನ್ನು ನೇಮಿಸಿತ್ತು.