Homeಮುಖಪುಟಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ವಿಶ್ವದ ಪ್ರತೀ ರಾಷ್ಟ್ರದಲ್ಲೂ ಹೋರಾಟಗಾರರ ಕೊಲೆ, ಹತ್ಯೆ ನಡೆದಿದೆ. ತಮ್ಮ ಬದುಕನ್ನೇ ನೆಲಕ್ಕಾಗಿ, ನೆಲದ ಜನರಿಗಾಗಿ ಮುಡಿಪಾಗಿಟ್ಟವರನ್ನು ಹತ್ಯೆಗೈಯ್ಯುವ ಸಮಾಜ ಎಷ್ಟೊಂದು ಕ್ರೂರ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

- Advertisement -
- Advertisement -

ತಾನು ಬದುಕುವ ನೆಲದ ವಿಮೋಚನೆಗೆ ದುಡಿದ ಮಂದಿ ಅದೇ ನೆಲದ ದುಷ್ಕರ್ಮಿಗಳಿಂದ ಹತ್ಯೆಯಾಗಿ ಹೋಗುತ್ತಾರಲ್ಲಾ, ಇದು ವಿಪರ್ಯಾಸದ ಜತೆಗೆ ತೀರಾ ವಿಚಿತ್ರವೆನಿಸುತ್ತದೆ. ತೀರ ಮೊನ್ನೆ ಇಥಿಯೋಪಿಯಾದ ಕ್ರಾಂತಿಕಾರಿ ಕವಿ ಹುಕಾಲು ಹಂಡೀಸಾ ಕಿಡಿಗೇಡಿಗಳ ಗುಂಡೇಟಿಗೆ ಬಲಿಯಾಗಿ ಬಿಟ್ಟರು.

ಈಗಷ್ಟೇ ಮೂವೈತ್ತೈದರ‌ ಹರೆಯದ ಹಂಡೀಸಾ ಪ್ರಭುತ್ವದ ವಿರುದ್ದ ಸಿಡಿದೆದ್ದವರು. ನಾಡಿನ ಜನತೆಯಲ್ಲಿ ಕೆಚ್ಚು ಮತ್ತು ಸ್ವಾಭಿಮಾನವನ್ನು ತುಂಬಿದವರು. ಅದಕ್ಕಾಗಿ ಜೈಲುವಾಸ ಅನುಭವಿಸಬೇಕಾಗಿ ಬಂದವರು. ಯಾವ ನೆಲದ ಜನತೆ ಸ್ವಸ್ಥವಾಗಿ ಬದುಕಬೇಕೆಂದು ಕನಸು ಕಂಡರೋ ಅದೇ ನೆಲದಲ್ಲಿ ಹೆಚ್ಚು ಕಾಲ ಅವರಿಗೆ ಬದುಕಲು ಸಾಧ್ಯವಾಗಲಿಲ್ಲ.

ಹುಕಾಲು ಹಂಡೀಸಾ

ಹಕಾಲು ಹಂಡೀಸರ ಬಗ್ಗೆ ಒಂದೆರಡು ಲೇಖನ ಓದಿದ ಮೇಲೆ ಜಗತ್ತಿನ ಇತರ ಕ್ರಾಂತಿಕಾರಿಗಳು ಯಾಕೋ ನನ್ನನ್ನು ಕಾಡತೊಡಗಿದರು. ಹೀಗೆ ಸುಮ್ಮನೆ ಗೂಗಲ್ ಜಾಲಾಡ ತೊಡಗಿದ್ದೆ. ತೀರಾ ಸಂಕಟವೇ ಎದುರಾಯಿತು. ಇಂಥ ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಮಾನವಹಕ್ಕು ಹೋರಾಟಗಾರರು ತಮ್ಮ ಬದುಕನ್ನು ಮುಗಿಸಿ ಕೊಂಡದ್ದು ದುಷ್ಕರ್ಮಿಗಳ ಬಂದೂಕಿನಿಂದಲೇ. ಅಂಥ ಕೆಲವು ಮಹಾನ್ ವ್ಯಕ್ತಿಗಳ ಪರಿಚಯ ಇಲ್ಲಿದೆ.

ತುಂಬಾ ದೂರ ಬೇಡ. ನಮ್ಮ ದೇಶದ ರಾಷ್ಟ್ರಪಿತರನ್ನೇ ತೆಗೆದುಕೊಳ್ಳೋಣ. ಇಡೀ ಬದುಕನ್ನೇ ದೇಶದ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟವರು ಗಾಂಧೀಜಿ. ತಾನು ಗಳಿಸಿ ಕೊಟ್ಟ ಸ್ವಾತಂತ್ರ್ಯವನ್ನು ಹೆಚ್ಚು ಕಾಲ ಅನುಭವಿಸುವ ಅವಕಾಶ ಗಾಂಧೀಜಿಗಿರಲಿಲ್ಲ. ಬ್ರಿಟಿಷ್ ವಿರುದ್ದ ಚಳುವಳಿ ಹಿಂಸಾತ್ಮಕ ವಾಗುವುದನ್ನು ಗಾಂಧೀಜಿ ವಿರೋಧಿಸಿದ್ದರು. ಅಹಿಂಸೆಯನ್ನೇ ಹೋರಾಟದ ಅಸ್ತ್ರವಾಗಿಸಿ ಕೊಂಡರು. ಯಾವ ನೆಲ ಸ್ವತಂತ್ರಗೊಳ್ಳಲು ಗಾಂಧೀಜಿ ಅಹಿಂಸೆ ಪ್ರತಿಪಾದಿಸಿದರೋ ಅದೇ ನೆಲದಲ್ಲಿ ಹುಟ್ಟಿದ ಗೋಡ್ಸೆ ಗಾಂಧೀಜಿಯನ್ನು ಕೊಂದು ಬಿಟ್ಟ. ಅದೂ ಹಿಂಸಾತ್ಮಕವಾಗಿಯೇ.

ಮಹಾತ್ಮ ಗಾಂಧಿ

ಅಬ್ರಹಾಂ ಲಿಂಕನ್ ಅಮೇರಿಕಾದ ಮೊದಲ ಅಧ್ಯಕ್ಷ. ಇತಿಹಾಸದಲ್ಲಿ ಖಾಯಂ ಸ್ಥಾನ ಪಡೆದ ಲಿಂಕನ್‌ನ ಖ್ಯಾತಿ ಅಳತೆಗೂ ಮೀರಿದ್ದು. ಪ್ರಜಾಪ್ರಭುತ್ವ, ಸಮಾನಹಕ್ಕು, ಮುಕ್ತ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಲಿಂಕನ್ ಗುಲಾಮಗಿರಿಯ ನಿರ್ಮೂಲನೆಗೆ ನಾಂದಿ ಹಾಡಿದವರು. ವರ್ಣ ತಾರತಮ್ಯದ ವಿರುದ್ದ ಸಿಡಿದೆದ್ದ ಮೊದಲ ಅಧ್ಯಕ್ಷನೆಂಬ ಖ್ಯಾತಿಯೂ ಲಿಂಕನ್‌ಗಿದೆ. 1865 ಏಪ್ರಿಲ್ 14 ರ ಆ ಸಂಜೆ ಲಿಂಕನ್ ಪಾಲಿಗೆ ಯಾವ ನಮೂನೆಯ ಶಕುನವಾಗಿ ಕಾಡಿತ್ತೋ ಏನೋ. ಎಂದಿನಂತೆ ಅಂದು ಕೂಡಾ ನಿರಾಳವಾಗಿ ನಾಟಕ ನೋಡಲು ತೆರಳಿದ್ದರು ಲಿಂಕನ್. ಆ ಸಮಯಕ್ಕೆ ಜಾನ್ ವಿಲ್ಕೆಸ್ ಎಂಬ ಕಿಡಿಗೇಡಿಯೊಬ್ಬ ಹಿಂಬದಿಯಿಂದ ಹಾರಿಸಿದ್ದ ಗುಂಡು ಲಿಂಕನ್ ತಲೆಯನ್ನು ಬೇಧಿಸಿ ಒಳಹೊಕ್ಕವು. ಅಲ್ಲೇ ಅವರು ಅಂತ್ಯ ಕಂಡರು.

ಅಬ್ರಹಂ ಲಿಂಕನ್

ಏಪ್ರಿಲ್ 21 ಕ್ಕೆ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ರೈಲೊಂದು ವಾಷಿಂಗ್ಟನ್‌‌ನಿಂದ ‘ಇಲ್ಲಿನಾಯ್ಗೆ’ ಹೊರಟಿತು. ನಾಲ್ಕು ವರ್ಷಗಳ ಮುಂಚೆ ಲಿಂಕನ್ ಇದೇ ದಾರಿಯಾಗಿ ಬೃಹತ್ ಆಂದೋಲನಾ ರ‌್ಯಾಲಿಯನ್ನು ಸಂಘಟಿಸಿದ್ದರು. ಜನರ ಹಕ್ಕಿಗಾಗಿ, ಸಮಾನತೆಗಾಗಿ, ದೌರ್ಜನ್ಯದ ವಿರುದ್ದ ಆ ರ‌್ಯಾಲಿಯುದ್ದಕ್ಕೂ ಲಿಂಕನ್ ಭಾಷಣ ಮಾಡಿದ್ದರು. ಯಾವ ನೆಲದ ಜನರಿಗಾಗಿ ಲಿಂಕನ್ ಧ್ವನಿಯೆತ್ತಿದ್ದರೋ ಅದೇ ನೆಲದಲ್ಲಿ, ಅದೇ ಜನರ ನಡುವೆ ಅವರ ಶವವನ್ನು ಹೊತ್ತ ರೈಲು ಶೋಕ ಸಂಚಾರ ನಡೆಸುತ್ತಿತ್ತು.

ಮಾರ್ಟಿನ್ ಲೂಥರ್ ಕಿಂಗ್ ಅಮೇರಿಕಾದ ಗಾಂಧಿಯೆಂದೇ ಪ್ರಚಲಿತರು. ಹೋರಾಟದಲ್ಲಿ ಗಾಂಧಿ ಹಾದಿಯನ್ನೇ ತುಳಿದವರು. ಕಪ್ಪು ಜನರ ಮೇಲಿನ ದೌರ್ಜನ್ಯದ ವಿರುದ್ದ ಅಹಿಂಸೆಯ ಚಳುವಳಿಯನ್ನು ಆರಂಭಿಸಿದವರು. ಸರ್ವರ ಸಹಭಾಗಿತ್ವದಲ್ಲಿ ಸಮಾನ ಸಮಾಜ ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದವರು. ನ್ಯಾಯದ ಪ್ರಖರ ಸೂರ್ಯ ಉದಿಸುವವರೆಗೆ, ಅನ್ಯಾಯ ಅಸ್ತಂಗಗೊಳ್ಳುವವರೆಗೆ ಬಂಡಾಯದ ಸುಂಟರಗಾಳಿ ದೇಶದ ಅಡಿಪಾಯವನ್ನು ಅಲ್ಲಾಡಿಸುತ್ತಲೇ ಇರುತ್ತದೆಯೆಂದು ಸಾರಿದವರು. ಜನಾಂಗೀಯ ಸಂಘರ್ಷದ ನೆಲದಲ್ಲಿ ಭಾತೃತ್ವದ ಒರತೆ ಪುಟಿಯಬೇಕೆಂದು ಬಯಸಿದವರು. ಅದಕ್ಕೆಂದೇ ದುಡಿದರು. ಜನರನ್ನು ಸಂಘಟಿಸಿದರು. ದುರ್ಬಲರ, ದಮನಿತರ, ದಬ್ಬಾಳಿಕೆಗೆ ಒಳಗಾದವರ ದನಿಯಾದರು. ದನಿಯಾಗಲು ಉತ್ತೇಜಿಸಿದರು. ವರ್ಣ ತಾರತಮ್ಯ ಪರಾಕಾಷ್ಟೆಗೆ ತಲುಪಿದ್ದ ಸಮಯಕ್ಕೆ ಕಪ್ಪು ಜನಾಂಗದಲ್ಲಿ ಭರವಸೆಯನ್ನು, ಆಶಾಭಾವನೆಯನ್ನೂ ಮೂಡಿಸಿದರೇ ಈ ಲೂಥರ್ ಕಿಂಗ್.

1963 ರಲ್ಲಿ ಲೂಥರ್ ವಾಷಿಂಗ್ಟನ್‌ನಲ್ಲಿ I have a dream ಎಂಬ ಹೆಸರಿನಲ್ಲಿ ನಡೆಸಿದ ಆಂದೋಲನ ಅಮೇರಿಕನ್ ಶ್ವೇತ ವರ್ಣೀಯರ ಗುಂಡಿಗೆ ನಡುಗಿಸಿತ್ತು. ಅಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣದಲ್ಲಿ ಮೇಲಿನ ಈ ಎಲ್ಲಾ ವಿಷಯಗಳೂ ಅಡಕವಾಗಿತ್ತು. ಅವರ ಪ್ರಖರ ಮಾತುಗಳು ಹೋರಾಟದ ತೀವ್ರತೆಯನ್ನು ಹೆಚ್ಚಿಸಿದವು. ಪ್ರಭುತ್ವದ ನೀತಿಯನ್ನು, ವರ್ಣ ತಾರತಮ್ಯವನ್ನು ಬೆಂಬಲಿಸುತ್ತಿದ್ದ ಮಾಧ್ಯಮಗಳು ತಮ್ಮ ನಿಲುವನ್ನು ಬದಲಾಯಿಸಿದವು. ಈ ಭಾಷಣದ ಮಾರನೆ ದಿನ ನ್ಯೂಯಾರ್ಕ್ ಟೈಮ್ಸ್ ವರದಿ ಹೀಗಿತ್ತು; “ಎಲ್ಲರಿಗಿಂತಲೂ ಉತ್ಕೃಷ್ಟವಾಗಿ ಮಾತನಾಡಿದ ಕಿಂಗ್, ಲಿಂಕನ್ ಹಾಗೂ ಗಾಂಧಿಯ ಸಂಕೇತದಂತೆ ತೋರುತ್ತಿದ್ದರು. ಪ್ರತಿಭಟನಾ ಕಾರರು ತಮ್ಮ ದೂರದ ನಡಿಗೆ ಸಾರ್ಥಕವಾಯಿತೆಂಬ ಭಾವದಲ್ಲಿ ತಮ್ಮೂರಿನತ್ತ ಹೆಜ್ಜೆ ಹಾಕುತ್ತಿದ್ದರು.”

ಮಾರ್ಟಿನ್ ಲೂಥರ್ ಕಿಂಗ್

ಅವರು ಎಷ್ಟೇ ಪ್ರಬಲ ಹೋರಾಟವನ್ನು ಸಂಘಟಿಸಿದ್ದರೂ ಅದರ ಪ್ರಾಯೋಗೀಕ ಹಂತ ಅಹಿಂಸೆಯೇ ಆಗಿತ್ತು. ಹಿಂಸೆಯನ್ನು ಸದಾ ವಿರೋಧಿಸಿದರು. ಕ್ರಿಯಾತ್ಮಕ ಅಹಿಂಸಾ ಚಳುವಳಿಗಳ ಮೂಲಕ ನಾಗರಿಕ ಹಕ್ಕುಗಳಿಗೆ ದನಿಯೆತ್ತಿದರು. ಅಂಥ ಅಹಿಂಸಾವಾದಿ ಕೊನೆ ಕ್ಷಣದಲ್ಲಿ ಪ್ರಾಣ ಕಳೆದು ಕೊಂಡದ್ದು ದುಷ್ಕರ್ಮಿಯ ಕೈಯಿಂದಲೇ. 1968 ರ ಏಪ್ರಿಲ್ ನಾಲ್ಕರ ಆ ಕೆಟ್ಟ ಘಳಿಗೆಯಲ್ಲಿ ಜೇಮ್ಸ್ ಆರ್ಲ್ ರಾಯ್ ಎಂಬಾತ ಸಿಡಿಸಿದ ಗುಂಡು ಲೂಥರ್‌ರನ್ನು ಮಕಾಡೆ ಮಲಗಿಸಿ ಬಿಟ್ಟಿತ್ತು.

ಸಿರಿಯಾದ ರಾಷ್ಟ್ರೀಯವಾದಿಯಾಗಿದ್ದವರು ಅಬ್ದುಲ್ ರಹ್‌ಮಾನ್ ಶಾಹ್‌ಬಂದರ್. ಅದು ಮೊದಲ ಮಾಹಾ ಯುದ್ಧದ ಸಮಯವಾಗಿತ್ತು. 1920 ರ ಜುಲೈಯಲ್ಲಿ ಫ್ರಾನ್ಸ್ ಸಿರಿಯಾವನ್ನು ಆಕ್ರಮಿಸಿಕೊಂಡಿತು. ತನ್ನ ಜನ್ಮ ನಾಡಿನ ಮೇಲೆ ಪರಕೀಯ ಶಕ್ತಿಗಳು ನಡೆಸಿದ ಈ ಆಕ್ರಮಣವನ್ನು ಶಾಹ್‌ಬಂದರ್ ವಿರೋಧಿಸಿದರು. ಪ್ರಾದೇಶಿಕ ಸರಕಾರದ ದೌರ್ಬಲ್ಯವನ್ನೂ, ಫ್ರಾನ್ಸ್ ವಿಧೇಯತ್ವ ನೀತಿಯನ್ನೂ ಕಟುಭಾಷೆಯಲ್ಲಿ ಟೀಕಿಸಿದರು. ಈ ಕಾರಣಕ್ಕಾಗಿ ಅವರು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದರು. ಆದ್ದರಿಂದ ದೇಶ ಬಿಟ್ಟು ಪಲಾಯಣ ಮಾಡಬೇಕಾಯಿತು. 1921 ರಲ್ಲಿ ತಾಯ್ನಾಡಿಗೆ ಮರಳಿ ಫ್ರೆಂಚ್ ಆಡಳಿತದ ವಿರುದ್ದ ಆಂದೋಲನ ನಡೆಸಲು ಐರನ್ ಹ್ಯಾಂಡ್ ಎಂಬ ಸಂಘಟನೆ ರಚಿಸಿದರು. ಯುವ ಜನತೆಯನ್ನು ಒಗ್ಗೂಡಿಸಿದರು. ರಾಷ್ಟ್ರೀಯವಾದದ ಜಾಗೃತಿ ಮೂಡಿಸಿದರು.

1922ರಲ್ಲಿ ಶಾಹ್‌ಬಂದರ್ ಬಂಧನಕ್ಕೊಳಗಾದರು. ಜತೆಗೆ ಸಂಘಟನೆ ಇತರ ನಾಯಕರೂ ಅವರ ಜತೆಗೆ ಜೈಲು ಸೇರಿದರು. ಈ ಬಂಧನವು ಡಮಸ್ಕಸ್‌ನಲ್ಲಿ ಸಂಘರ್ಷದ ವಾತಾವಾರಣವನ್ನೇ ಸೃಷ್ಟಿಸಿದವು. ಹಲವರು ಜೀವ ಕಳೆದುಕೊಂಡರು. ಕನಿಷ್ಠ ಸಮಯದಲ್ಲೇ‌ ಶಾಹ್‌‌ಬಂದರ್ ದೇಶದಲ್ಲೆಡೆ ಜನಪ್ರಿಯರಾಗಿದ್ದರು. ಇಪ್ಪತ್ತು ವರ್ಷಗಳ ಜೈಲು ಶಿಕ್ಷೆಯನ್ನು ಫ್ರೆಂಚ್ ನ್ಯಾಯಾಲಯ ವಿಧಿಸಿದ್ದರೂ ಸಿರಿಯಾದಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಫಲವಾಗಿ ಮುಂದಿನ ಒಂದುವರೆ ವರ್ಷದಲ್ಲೇ ಶಾಹ್‌ಬಂದರ್ ಬಿಡುಗಡೆಯಾದರು. ಆ ಬಳಿಕ ಹಲವು ರಾಷ್ಟ್ರೀಯ ಸಂಘಟನೆಗಳಲ್ಲಿ ಕಾರ್ಯಾಚರಿಸಿದರು. ಪೀಪಲ್ಸ್ ಎಂಬ ರಾಷ್ಟ್ರೀಯವಾದಿ ಸಂಘಟನೆ ಕಟ್ಟಿದರು. ಸಿರಿಯಾದ ಮೂಲೆಮೂಲೆಗಳಲ್ಲೂ ಹೋರಾಟದ, ಆಂದೋಲನದ ಕಿಡಿ ಹಚ್ಚಿದರು. ಸಿರಿಯಾದಲ್ಲಿ ಸಾರ್ವಭೌಮತ್ವ ಮೆರೆಯುವ ಇರಾದೆಯಿಂದ ಫ್ರಾನ್ಸ್ ನಡೆಸಿದ ಫ್ರಾಂಕೋ-ಸಿರಿಯನ್ ಒಪ್ಪಂದವನ್ನು ಬಹಿಷ್ಕರಿಸಲು ನಾಡಿನಾದ್ಯಂತ ಕರೆ ನೀಡಿದರು. ಮುನೀರ್ ಅಲ್ ಅಜ್ಲಾನಿಯಂಥ ಘಟಾನುಘಟಿ ರಾಜಕಾರಣಿಗಳೇ ಶಾಹ್‌ಬಂದರ್‌ರ‌ ಬೆನ್ನಿಗೆ ನಿಂತರು. ಶಾಹ್‌ಬಂದರ್ ಸಿರಿಯಾದ ಜನಪ್ರಿಯ ನಾಯಕರಲ್ಲೊಬ್ಬರಾಗಿದ್ದರೂ ತನ್ನ ರಾಜಕೀಯ ಪರಂಪರೆಯನ್ನು ಶಾಶ್ವತಗೊಳಿಸುವ ಪಕ್ಷವನ್ನು ಕಟ್ಟದೆ ಜನಪರ ಹೋರಾಟದಲ್ಲೇ ಮಗ್ನರಾದರು.

ಅಬ್ದುಲ್ ರಹ್‌ಮಾನ್ ಶಾಹ್‌ಬಂದರ್

1940ರ ಒಂದು ದಿನ ಶಾಹ್‌ಬಂದರ್ ಹತ್ಯೆಯಾದರು. ಹತ್ಯೆಯ ಹಿಂದೆ ನ್ಯಾಶನಲ್ ಬ್ಲಾಕ್ ಎಂಬ ಸಿರಿಯನ್ ರಾಜಕೀಯ ಪಕ್ಷದ ಕೈವಾಡವಿದೆಯೆಂದು ಖುದ್ದು ಫ್ರೆಂಚ್ ಸರಕಾರವೇ ಆರೋಪಿಸಿತು. ಹತ್ಯೆಗೆ ಸಂಚು ಹೂಡಿದ್ದ ಸಾದಲ್ಲಾ ಅಲ್ ಜಾಬಿರಿ ಮತ್ತು ಜಾಮಿಲ್ ಮರ್ದಾಂ ಎಂಬ ನ್ಯಾಶನಲ್ ಬ್ಲಾಕ್ ಕಾರ್ಯಕರ್ತರಿಬ್ಬರು ಇರಾಕ್‌ನಲ್ಲಿ ತಲೆಮರೆಸಿಕೊಂಡರು. ಇದರೊಂದಿಗೆ ನ್ಯಾಶನಲ್ ಬ್ಲಾಕ್ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿತು.

ಮಾಲ್ಕಂ ಎಕ್ಸ್ ಎಂದರೆ ರೋಮಾಂಚನಗೊಳ್ಳದ ಕರಿಯರಿಲ್ಲ. ಪ್ರತಿಯೊಬ್ಬ ಕರಿಯನ ಸ್ವಾಭಿಮಾನವನ್ನು ಬಡಿದೆಬ್ಬಿಸಿದವರು ಮಾಲ್ಕಂ ಎಕ್ಸ್. ವರ್ಣಬೇಧ, ಮತ್ತು ಪ್ರತ್ಯೇಕತಾವಾದದ ವಿರುದ್ದ ಸಿಡಿದೆದ್ದ ಮಾಲ್ಕಂ ತುಳಿತಕ್ಕೊಳಗಾದ ಕರಿಯರ ಪರ ದನಿಯೆತ್ತಿದವರು. ಅವಜ್ಞೆಗೊಳಗಾದ ದಮನಿತ ವಿಭಾಗವನ್ನು ಮುಖ್ಯ ವಾಹಿನಿಗೆ ತರಲು ಅವಿರತ ಶ್ರಮ ಪಟ್ಟವರು. ಮಾಲ್ಕಂರ ಹೋರಾಟದ ಹಾದಿ ಕ್ರಾಂತಿಯಾಗಿತ್ತು. ಅವರ ಚಳುವಳಿಯಲ್ಲಿ ತೀವ್ರತೆಯಿತ್ತು. ಮಾತಿನಲ್ಲಿ ತೀಕ್ಷ್ಣತೆಯಿತ್ತು. ಒಟ್ಟಾರೆ ಅವರ ಹೋರಾಟಕ್ಕೆ ಬಂಡಾಯದ ಆಯಾಮವಿತ್ತು. ಅದೇ ಸಮಯದಲ್ಲಿ ಅಹಿಂಸೆಯ ಹಾದಿ ತುಳಿದಿದ್ದ ಲೂಥರ್ ಕಿಂಗ್‌ರಿಗೂ ಮಾಲ್ಕಂರಿಗೂ ಮುಸುಕಿನ ಗುದ್ದಾಟವೇ ನಡೆಯುತ್ತಿದ್ದವು. ಲೂಥರ್ ನಿಲುವನ್ನು ಮಾಲ್ಕಂ ಟೀಕಿಸುತ್ತಿದ್ದರು. ಅಹಿಂಸೆಯೆಂಬುದು ಮೂರ್ಖರ ಸಿದ್ದಾಂತವೆಂದು ಜರಿದಿದ್ದರು.

ಮಾಲ್ಕಂ ಎಕ್ಸ್

ಅವರು ಇಸ್ಲಾಂ ಸ್ವೀಕರಿಸಿದ ನಂತರ ಅವರ ಹೋರಾಟದಲ್ಲಿ ಬದಲಾವಣೆ ಗೋಚರಿಸತೊಡಗಿದವು. ವಿನಯವೇ ಎದುರಾಳಿಯನ್ನು ಬಗ್ಗು ಬಡಿಯಲಿರುವ ಅಸ್ತ್ರವೆಂದು ಸಾರಿದರು. ಉಗ್ರ ನಿಲುವುಗಳು ಮೃದುಧೋರಣೆಯಾಗಿ ಪರಿವರ್ತನೆಯಾದವು. ಅವರು ಮಕ್ಕಾ ಯಾತ್ರೆಯ ನಂತರ ಕೆಲವೇ ದಿನಗಳ ಅಂತರದಲ್ಲಿ ಆಡಬೋನ್ ಬಾಲ್‌ರೂಂನಲ್ಲಿ ಭಾಷಣ ಮಾಡುತ್ತಿದ್ದಾಗ ಗುಂಡೇಟು ತಗುಲಿ ಇಹಲೋಕ ತ್ಯಜಿಸಿದರು. ನಾಡಿನ ಪರವಾಗಿ, ಜನತೆಯ ಪರವಾಗಿ, ಹೋರಾಡಿದ ಆ ಮಹಾನ್ ಚೇತನ ಅಂತ್ಯ ಕಂಡದ್ದೂ ದುಷ್ಕರ್ಮಿಗಳ ಕೈಯಿಂದಲೇ..!

ಹೀಗೆ ಕಿಡಿಗೇಡಿಗಳ ಕೈಯಿಂದ ಬದುಕು ಮುಗಿಸಿದ್ದ ಅಸಂಖ್ಯ ಕ್ರಾಂತಿಕಾರಿಗಳು, ಹೋರಾಟಗಾರರು, ಮಾನವ ಹಕ್ಕು ಚಳುವಳಿಗಾರರು, ಜನಪರ ಪತ್ರಕರ್ತರಿದ್ದಾರೆ. ವಿಶ್ವದ ಪ್ರತೀ ರಾಷ್ಟ್ರದಲ್ಲೂ ಹೋರಾಟಗಾರರ ಕೊಲೆ, ಹತ್ಯೆ ನಡೆದಿದೆ. ತಮ್ಮ ಬದುಕನ್ನೇ ನೆಲಕ್ಕಾಗಿ, ನೆಲದ ಜನರಿಗಾಗಿ ಮುಡಿಪಾಗಿಟ್ಟವರನ್ನು ಹತ್ಯೆಗೈಯ್ಯುವ ಸಮಾಜ ಎಷ್ಟೊಂದು ಕ್ರೂರ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಮೂಡುತ್ತದೆ.

ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ, ಮೂಲತಃ ದ.ಕ ಜಿಲ್ಲೆಯ ಸುಳ್ಯದ ತಂಬಿನಮಕ್ಕಿಯವರು. ‘ಸಅದಿ’ ಪದವೀಧರರಾದ ಇವರು ಸದ್ಯಕ್ಕೆ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಸ್ಲಾಮೀ ರಾಜಕೀಯ ಮತ್ತು ಇತಿಹಾಸದ ಕುರಿತಾದ ಹಲವು ಲೇಖನಗಳನ್ನು ಈ ತನಕ ಬರೆದಿದ್ದಾರೆ.


ಓದಿ: ಪ್ರಜ್ವಲ ಕ್ರಾಂತಿಕಾರಿ ಚೇ ಗೆವಾರ ಹುತಾತ್ಮನಾಗುವ ಮುನ್ನ ಹೇಳಿದ ಮಾತುಗಳೇನು ಗೊತ್ತೆ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...