“ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಅವರು ಕಳೆದ ಆರು ತಿಂಗಳಿನಿಂದ ಬಿಜೆಪಿಯೊಂದಿಗೆ ಸಂಚು ಹೂಡಿದ್ದರು” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಚಿನ್ ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ನಾನು ಈ ಪಿತೂರಿಯ ಬಗ್ಗೆ ಮಾತನಾಡುವಾಗ ಯಾರೂ ನನ್ನನ್ನು ನಂಬುತ್ತಿರಲಿಲ್ಲ.. ಅಂತಹ ಮುಗ್ಧ ಮುಖ ಹೊಂದಿರುವ ವ್ಯಕ್ತಿಯು ಇಂತಹ ಕೆಲಸವನ್ನು ಮಾಡುತ್ತಾರೆಂದು ಯಾರಿಗೂ ತಿಳಿದಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಕಳೆದ ವಾರ, “ಸುಂದರವಾಗಿರುವುದು ಮತ್ತು ಉತ್ತಮ ಇಂಗ್ಲಿಷ್ ಮಾತನಾಡುವುದು” ನಿಜವಾದ ನಾಯಕತ್ವದ ಮಾಪನಗಳಲ್ಲ ಎಂದು ಟೀಕಿಸಿದ್ದ ಅವರು ಇಂದು ಆ ಪಟ್ಟಿಗೆ, ಅವರು “ಮಗುವಿನ ಮುಖ” ಮತ್ತು “ನಿಷ್ಪ್ರಯೋಜಕ” ಎಂಬುದನ್ನು ಸಹ ಸೇರಿಸಿದ್ದಾರೆ.
ಕಳೆದ 18 ತಿಂಗಳುಗಳಿಂದ ತನ್ನೊಂದಿಗೆ ಮಾತಾಡುತ್ತಿಲ್ಲ ಎಂಬ ಸಚಿನ್ ಪೈಲಟ್ರವರ ಆರೋಪವನ್ನು ಒಪ್ಪಿಕೊಂಡ ಅವರು ಪೈಲಟ್ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿಯೊಂದಿಗೆ ನಿರಂತರ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
“ಸಚಿನ್ ಪೈಲಟ್ ಕಳೆದ ಆರು ತಿಂಗಳಿನಿಂದ ಬಿಜೆಪಿಯ ಬೆಂಬಲದೊಂದಿಗೆ ಪಿತೂರಿ ನಡೆಸುತ್ತಿದ್ದರು. ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಯುತ್ತಿದೆ ಎಂದು ನಾನು ಹೇಳುವಾಗ ಯಾರೂ ನನ್ನನ್ನು ನಂಬಲಿಲ್ಲ. ಅಂತಹ ಮುಗ್ಧ ಮುಖ ಹೊಂದಿರುವ ವ್ಯಕ್ತಿಯು ಅಂತಹ ಕೆಲಸವನ್ನು ಮಾಡುತ್ತಾನೆ ಎಂದು ಯಾರಿಗೂ ತಿಳಿದಿರಲಿಲ್ಲ. ನಾನು ತರಕಾರಿ ಮಾರಾಟ ಮಾಡಲು ಇಲ್ಲಿಲ್ಲ, ನಾನು ಸಿಎಂ ಆಗಿದ್ದೇನೆ” ಎಂದು ಗೆಹ್ಲೋಟ್ ಕಿಡಿಕಾರಿದ್ದಾರೆ.
ಪೈಲಟ್ ತಮ್ಮೊಂದಿಗಿರುವ ಶಾಸಕರನ್ನು ಬಲವಂತವಾಗಿ ಬಂಧಿಸಿಟ್ಟಿದ್ದಾರೆ. ಅವರ ಮೊಬೈಲ್ಗಳನ್ನು ಕಿತ್ತಿಟ್ಟುಕೊಂಡಿದ್ದಾರೆ. ಅವರಲ್ಲಿ ಕೆಲವರು ನಮಗೆ ಫೋನ್ ಮಾಡಿ ವಾಪಸ್ ಬರಲು ಬಯಸಿದ್ದಾರೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಲು ಸಚಿನ್ ಪೈಲಟ್ರಿಂದ 35 ಕೋಟಿ ರೂ ಆಮಿಷ: ಕಾಂಗ್ರೆಸ್ ಶಾಸಕನ ಆರೋಪ