Homeಮುಖಪುಟಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ!

- Advertisement -
- Advertisement -

ಗಣರಾಜ್ಯ ಭಾರತ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಕಾಯ್ದೆ, ಕಾನೂನುಗಳನ್ನು ಕಂಡಿದೆ. ದೇಶವನ್ನು ಆಳಿದ ಹಲವಾರು ಸರ್ಕಾರಗಳು ಆಡಳಿತವನ್ನು ಸುಗಮಗೊಳಿಸುವ ಹಾಗೂ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹತ್ತಾರು ನೂತನ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಹಳೆಯ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನೂ ತರಲಾಗಿದೆ. ಆದರೆ, ಈವರೆಗೆ ಕೇಂದ್ರ ಸರ್ಕಾರದ ಕಾನೂನೊಂದಕ್ಕೆ ಈ ಪರಿ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿರುವುದು ಬಹುತೇಕ ಇದೇ ಮೊದಲು.

ಅವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪೌರತ್ವ ನೋಂದಣಿ ಕಾಯ್ದೆಗಳ(ಎನ್ಆರ್‌ಸಿ) ಯಾಗಿದ್ದು ಇವುಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಚಳುವಳಿ, ಹೋರಾಟ ಹಾಗೂ ಮುಷ್ಕರಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಆದರೆ, ಈ ಎರಡನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಇದು ದೇಶದ ನಾಗರೀಕರ ಪೌರತ್ವವನ್ನು ಧೃಡಪಡಿಸುವ ಕಾಯ್ದೆಯೇ ಹೊರತು ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಅಲ್ಲ ಎಂದು ಬೊಬ್ಬೆ ಹೊಡೆಯುತ್ತಲೇ ಇವೆ.

ಈ ನಡುವೆ ಬೆಂಗಳೂರಿನಂತಹ ನಗರದಲ್ಲೇ ಪೌರತ್ವದ ಕುರಿತ ಸೂಕ್ತ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಬಾಂಗ್ಲಾ ನುಸುಳುಕೋರರು ಎಂಬ ಗುಮಾನಿಯಿಂದ ಉತ್ತರ ಕರ್ನಾಟಕದ ನೂರಾರು ಬಡ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ಕಿತ್ತು ಹಾಕಲಾಗಿದೆ. ಈಗಾಗಲೇ ಸರಿಯಾದ ಮಳೆ-ಬೆಳೆ ಇಲ್ಲದೆ ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬಂದು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿರುವ ರೈತರ ಬದುಕನ್ನೂ ಈ ಸರ್ಕಾರ ಕೇವಲ ಒಂದೇ ಕಾಯ್ದೆಯ ಮೂಲಕ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ.

ಅಸಲಿಗೆ ಬುಡಕಟ್ಟು ಸಮಾಜ ಭಾರತದ ಮೂಲ ನಿವಾಸಿಗಳು. ಅಸ್ಸಾಂನಿಂದ ಮೇಘಾಲಯ, ಜಾರ್ಖಂಡ್‌ವರೆಗೆ ಲಡಾಖ್‌ ಕಣಿವೆಗಳಿಂದ ದಕ್ಷಿಣ ಭಾರತದ ನೀಲಗಿರಿ ಬೆಟ್ಟದ ಸಾಲಿನವರೆಗೆ ಭಾರತದಲ್ಲಿ ಸರಿಸುಮಾರು ನೂರಾರು ಬುಡಕಟ್ಟು ಪಂಗಡಗಳಿವೆ. ಇವರು ಶತಮಾನಗಳಿಂದ ಇಲ್ಲೇ ಹುಟ್ಟಿ ಬೆಳೆದವರು.  ಆದರೆ, ಮೂಲತಃ ಅವಿದ್ಯಾವಂತರಾಗಿರುವ ಇವರ ಬಳಿ ಪೌರತ್ವದ ಕುರಿತ ಯಾವುದೇ ದಾಖಲೆಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಹಾಗಾದರೆ ದಾಖಲೆಗಳಿಲ್ಲದ ಇವರ ಪಾಡೇನು? ಎಂಬ ಕುರಿತೂ ಸಹ ಸರ್ಕಾರ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬುಡಕಟ್ಟು ಸಮಾಜದ ಪಾಲಿಗೆ ಮರಣಶಾಸನವೇ ಆಗಿರುವ ಎನ್ಆರ್‌ಸಿ ಎರಡು ವರ್ಷಗಳ ಹಿಂದೆಯೇ ಅಸ್ಸಾಂನಲ್ಲಿ ಚಾಲ್ತಿಯಲ್ಲಿದೆ. ಈ ಕಾಯ್ದೆಯಿಂದ ಹಲವು ಬುಡಕಟ್ಟು ಜನ ಪೌರತ್ವ ಕಳೆದುಕೊಂಡು ಪಶುಗಳಂತೆ ಡಿಟೆನ್ಷನ್ ಸೆಂಟರ್‌ಗಳಲ್ಲಿ ಪ್ರಾಣ ಬಿಟ್ಟಿದ್ದಾರೆ/ ಬಿಡುತ್ತಿದ್ದಾರೆ. ಅಂತ ಒಂದು ಬುಡಕಟ್ಟು ಮಹಿಳೆಯ ಕಥೆ ಇಲ್ಲಿದೆ.

ಮೇಘಾಲಯದ ಗಾರೋ ಬುಡಕಟ್ಟಿನ ಹೆಣ್ಣು ಮಗಳ ಕತೆ

ಈಕೆಯ ಹೆಸರು ಜಿನು. ಮೇಘಾಲಯದ ಗಾರೋ ಎಂಬ ಬುಡಕಟ್ಟು ಹೆಣ್ಣುಮಗಳು. ಜನವರಿ 5ರಂದು ಗೋಲ್ ಪಾರ ಡಿಟೆನ್ಷನ್ ಕೇಂದ್ರದಲ್ಲಿ ಬಂಧಿಯಾಗಿ ಮೃತಪಟ್ಟ ನರೇಶ್ ಕೋಚ್ ಎಂಬಾತನ ಪತ್ನಿ.
ಮೃತ ನರೇಶ್ ನನ್ನು NRC ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಡಿಟೆನ್ಷನ್ ಸೆಂಟರ್‌ನಲ್ಲಿ ಕೂಡಿಹಾಕಲಾಗಿತ್ತು. ನರೇಶ್ ಬಂಗಾಲಿಯಲ್ಲ, ಮುಸ್ಲಿಮನೂ ಅಲ್ಲ, ಮುಸ್ಲಿಂ ಬಂಗಾಲಿಯೂ ಅಲ್ಲ. ಅಥವಾ ಬಾಂಗ್ಲಾದೇಶದಿಂದ ಬಂದಿರಬಹುದಾದ ಯಾವುದೇ ಬುಡಕಟ್ಟು ಸಮುದಾಯಕ್ಕೂ ಸೇರಿದವನಲ್ಲ. ಬದಲಾಗಿ ಅಸ್ಸಾಂನ ಮೂಲನಿವಾಸಿ ಕೋಚ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು.

ಕಳೆದ ವರ್ಷ ಬಿಡುಗಡೆಯಾದ NRC ಪಟ್ಟಿಯಲ್ಲಿ ಈತನ ಪುತ್ರ ಮತ್ತು ಸಹೋದರ ಸೇರಿದ್ದರು. ಆದರೆ ನರೇಶ್ ಹೊರಗೆ ಉಳಿದುಕೊಂಡುಬಿಟ್ಟ!. ಕೇಂದ್ರದ ಕಾನೂನನ್ನು ಕಾಪಾಡಲೇಬೇಕು ಎಂಬ ಉದ್ದೇಶದಿಂದ ಭಾರತದ ಬುಡಕಟ್ಟು ಸಮಾಜದವನೇ ಆದರೂ ಕೂಡ ಆತನನ್ನು ಒತ್ತಾಯಪೂರ್ವಕವಾಗಿ ಡಿಟೆನ್ಷನ್ ಸೆಂಟರ್‌ಗೆ ತಳಲ್ಪಟ್ಟಿದ್ದ.

ನರೇಶ್‌ ಕೋಚ್

ಕಳೆದ ಎರಡು ವರ್ಷದಿಂದ ನರೇಶ್‌ಗೆ ಬಿಪಿ ಇತ್ತು. ಕೊನೆಗೆ ಈತ ಡಿಟೆನ್ಷನ್ ಸೆಂಟರ್ನಲ್ಲಿ ಸ್ಟ್ರೋಕ್ ಆಗಿ ಸತ್ತೇ ಹೋದ. ಆ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟ 29ನೇ ವ್ಯಕ್ತಿ ಈತನಾಗಿದ್ದು, ಈತನ ಪತ್ನಿ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ! ಮೀನು ಸಾಕಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಿನುಗೆ ಏಳು ನೂರು ರುಪಾಯಿ ಹಣವನ್ನು ಹೊಂದಿಸುವುದು ದೊಡ್ಡ ಹೊರೆ.

ಎಂಥಾ ವಿಪರ್ಯಾಸ ನೋಡಿ ಕೇಂದ್ರದ ನೂತನ ಕಾನೂನಿನಿಂದ ಇವಳ ಗಂಡ ಭಾರತೀಯನಾಗಿ ಹುಟ್ಟಿದ ಆದರೆ, ದಾಖಲೆಯಿಲ್ಲದ ಕಾರಣಕ್ಕಾಗಿ ವಿದೇಶೀಯನಾಗಿ ಸತ್ತ. (ಸತ್ತ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟ ಎಂಬುದು ಸೂಕ್ತ) ನರೇಶ್ ಸತ್ತಾಗ ಅವನದು ಯಾವ ದೇಶ? ಯಾರು ಉತ್ತರ ಕೊಡುತ್ತಾರೆ? ಇನ್ನೂ ಹೆಣ ಸುಟ್ಟ ಬಾಬ್ತು ಏಳು ನೂರು ರುಪಾಯಿ ತಾನೇ ಎನ್ನಬೇಡಿ, ಅಸ್ಸಾಮಿನಲ್ಲಿ ಸುಡಲು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಇನ್ನೂ ಹತ್ತೊಂಭತ್ತು ಲಕ್ಷ ಚಿಲ್ಲರೆ ಬುಡಕಟ್ಟು ಜನರ ಹೆಣಗಳು ಸರದಿಯಲ್ಲಿ ನಿಲ್ಲಲಿವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರಿಗೂ ಸಹ ನರೇಶ್ ಕೋಚನ ಪರಿಸ್ಥಿತಿ ಬರುವುದು ಬೇಡ. ಅದಕ್ಕಾಗಿ ನಾವೆಲ್ಲರೂ ಸಿಎಎ, ಎನ್. ಆರ್.ಸಿ. ಮತ್ತು ಎನ್.ಪಿ.ಅರ್.ಗಳನ್ನು ವಿರೋಧಿಸೋಣ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...