Homeಮುಖಪುಟಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ!

- Advertisement -
- Advertisement -

ಗಣರಾಜ್ಯ ಭಾರತ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಕಾಯ್ದೆ, ಕಾನೂನುಗಳನ್ನು ಕಂಡಿದೆ. ದೇಶವನ್ನು ಆಳಿದ ಹಲವಾರು ಸರ್ಕಾರಗಳು ಆಡಳಿತವನ್ನು ಸುಗಮಗೊಳಿಸುವ ಹಾಗೂ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹತ್ತಾರು ನೂತನ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಹಳೆಯ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನೂ ತರಲಾಗಿದೆ. ಆದರೆ, ಈವರೆಗೆ ಕೇಂದ್ರ ಸರ್ಕಾರದ ಕಾನೂನೊಂದಕ್ಕೆ ಈ ಪರಿ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿರುವುದು ಬಹುತೇಕ ಇದೇ ಮೊದಲು.

ಅವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪೌರತ್ವ ನೋಂದಣಿ ಕಾಯ್ದೆಗಳ(ಎನ್ಆರ್‌ಸಿ) ಯಾಗಿದ್ದು ಇವುಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಚಳುವಳಿ, ಹೋರಾಟ ಹಾಗೂ ಮುಷ್ಕರಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಆದರೆ, ಈ ಎರಡನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಇದು ದೇಶದ ನಾಗರೀಕರ ಪೌರತ್ವವನ್ನು ಧೃಡಪಡಿಸುವ ಕಾಯ್ದೆಯೇ ಹೊರತು ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಅಲ್ಲ ಎಂದು ಬೊಬ್ಬೆ ಹೊಡೆಯುತ್ತಲೇ ಇವೆ.

ಈ ನಡುವೆ ಬೆಂಗಳೂರಿನಂತಹ ನಗರದಲ್ಲೇ ಪೌರತ್ವದ ಕುರಿತ ಸೂಕ್ತ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಬಾಂಗ್ಲಾ ನುಸುಳುಕೋರರು ಎಂಬ ಗುಮಾನಿಯಿಂದ ಉತ್ತರ ಕರ್ನಾಟಕದ ನೂರಾರು ಬಡ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ಕಿತ್ತು ಹಾಕಲಾಗಿದೆ. ಈಗಾಗಲೇ ಸರಿಯಾದ ಮಳೆ-ಬೆಳೆ ಇಲ್ಲದೆ ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬಂದು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿರುವ ರೈತರ ಬದುಕನ್ನೂ ಈ ಸರ್ಕಾರ ಕೇವಲ ಒಂದೇ ಕಾಯ್ದೆಯ ಮೂಲಕ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ.

ಅಸಲಿಗೆ ಬುಡಕಟ್ಟು ಸಮಾಜ ಭಾರತದ ಮೂಲ ನಿವಾಸಿಗಳು. ಅಸ್ಸಾಂನಿಂದ ಮೇಘಾಲಯ, ಜಾರ್ಖಂಡ್‌ವರೆಗೆ ಲಡಾಖ್‌ ಕಣಿವೆಗಳಿಂದ ದಕ್ಷಿಣ ಭಾರತದ ನೀಲಗಿರಿ ಬೆಟ್ಟದ ಸಾಲಿನವರೆಗೆ ಭಾರತದಲ್ಲಿ ಸರಿಸುಮಾರು ನೂರಾರು ಬುಡಕಟ್ಟು ಪಂಗಡಗಳಿವೆ. ಇವರು ಶತಮಾನಗಳಿಂದ ಇಲ್ಲೇ ಹುಟ್ಟಿ ಬೆಳೆದವರು.  ಆದರೆ, ಮೂಲತಃ ಅವಿದ್ಯಾವಂತರಾಗಿರುವ ಇವರ ಬಳಿ ಪೌರತ್ವದ ಕುರಿತ ಯಾವುದೇ ದಾಖಲೆಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಹಾಗಾದರೆ ದಾಖಲೆಗಳಿಲ್ಲದ ಇವರ ಪಾಡೇನು? ಎಂಬ ಕುರಿತೂ ಸಹ ಸರ್ಕಾರ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬುಡಕಟ್ಟು ಸಮಾಜದ ಪಾಲಿಗೆ ಮರಣಶಾಸನವೇ ಆಗಿರುವ ಎನ್ಆರ್‌ಸಿ ಎರಡು ವರ್ಷಗಳ ಹಿಂದೆಯೇ ಅಸ್ಸಾಂನಲ್ಲಿ ಚಾಲ್ತಿಯಲ್ಲಿದೆ. ಈ ಕಾಯ್ದೆಯಿಂದ ಹಲವು ಬುಡಕಟ್ಟು ಜನ ಪೌರತ್ವ ಕಳೆದುಕೊಂಡು ಪಶುಗಳಂತೆ ಡಿಟೆನ್ಷನ್ ಸೆಂಟರ್‌ಗಳಲ್ಲಿ ಪ್ರಾಣ ಬಿಟ್ಟಿದ್ದಾರೆ/ ಬಿಡುತ್ತಿದ್ದಾರೆ. ಅಂತ ಒಂದು ಬುಡಕಟ್ಟು ಮಹಿಳೆಯ ಕಥೆ ಇಲ್ಲಿದೆ.

ಮೇಘಾಲಯದ ಗಾರೋ ಬುಡಕಟ್ಟಿನ ಹೆಣ್ಣು ಮಗಳ ಕತೆ

ಈಕೆಯ ಹೆಸರು ಜಿನು. ಮೇಘಾಲಯದ ಗಾರೋ ಎಂಬ ಬುಡಕಟ್ಟು ಹೆಣ್ಣುಮಗಳು. ಜನವರಿ 5ರಂದು ಗೋಲ್ ಪಾರ ಡಿಟೆನ್ಷನ್ ಕೇಂದ್ರದಲ್ಲಿ ಬಂಧಿಯಾಗಿ ಮೃತಪಟ್ಟ ನರೇಶ್ ಕೋಚ್ ಎಂಬಾತನ ಪತ್ನಿ.
ಮೃತ ನರೇಶ್ ನನ್ನು NRC ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಡಿಟೆನ್ಷನ್ ಸೆಂಟರ್‌ನಲ್ಲಿ ಕೂಡಿಹಾಕಲಾಗಿತ್ತು. ನರೇಶ್ ಬಂಗಾಲಿಯಲ್ಲ, ಮುಸ್ಲಿಮನೂ ಅಲ್ಲ, ಮುಸ್ಲಿಂ ಬಂಗಾಲಿಯೂ ಅಲ್ಲ. ಅಥವಾ ಬಾಂಗ್ಲಾದೇಶದಿಂದ ಬಂದಿರಬಹುದಾದ ಯಾವುದೇ ಬುಡಕಟ್ಟು ಸಮುದಾಯಕ್ಕೂ ಸೇರಿದವನಲ್ಲ. ಬದಲಾಗಿ ಅಸ್ಸಾಂನ ಮೂಲನಿವಾಸಿ ಕೋಚ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು.

ಕಳೆದ ವರ್ಷ ಬಿಡುಗಡೆಯಾದ NRC ಪಟ್ಟಿಯಲ್ಲಿ ಈತನ ಪುತ್ರ ಮತ್ತು ಸಹೋದರ ಸೇರಿದ್ದರು. ಆದರೆ ನರೇಶ್ ಹೊರಗೆ ಉಳಿದುಕೊಂಡುಬಿಟ್ಟ!. ಕೇಂದ್ರದ ಕಾನೂನನ್ನು ಕಾಪಾಡಲೇಬೇಕು ಎಂಬ ಉದ್ದೇಶದಿಂದ ಭಾರತದ ಬುಡಕಟ್ಟು ಸಮಾಜದವನೇ ಆದರೂ ಕೂಡ ಆತನನ್ನು ಒತ್ತಾಯಪೂರ್ವಕವಾಗಿ ಡಿಟೆನ್ಷನ್ ಸೆಂಟರ್‌ಗೆ ತಳಲ್ಪಟ್ಟಿದ್ದ.

ನರೇಶ್‌ ಕೋಚ್

ಕಳೆದ ಎರಡು ವರ್ಷದಿಂದ ನರೇಶ್‌ಗೆ ಬಿಪಿ ಇತ್ತು. ಕೊನೆಗೆ ಈತ ಡಿಟೆನ್ಷನ್ ಸೆಂಟರ್ನಲ್ಲಿ ಸ್ಟ್ರೋಕ್ ಆಗಿ ಸತ್ತೇ ಹೋದ. ಆ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟ 29ನೇ ವ್ಯಕ್ತಿ ಈತನಾಗಿದ್ದು, ಈತನ ಪತ್ನಿ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ! ಮೀನು ಸಾಕಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಿನುಗೆ ಏಳು ನೂರು ರುಪಾಯಿ ಹಣವನ್ನು ಹೊಂದಿಸುವುದು ದೊಡ್ಡ ಹೊರೆ.

ಎಂಥಾ ವಿಪರ್ಯಾಸ ನೋಡಿ ಕೇಂದ್ರದ ನೂತನ ಕಾನೂನಿನಿಂದ ಇವಳ ಗಂಡ ಭಾರತೀಯನಾಗಿ ಹುಟ್ಟಿದ ಆದರೆ, ದಾಖಲೆಯಿಲ್ಲದ ಕಾರಣಕ್ಕಾಗಿ ವಿದೇಶೀಯನಾಗಿ ಸತ್ತ. (ಸತ್ತ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟ ಎಂಬುದು ಸೂಕ್ತ) ನರೇಶ್ ಸತ್ತಾಗ ಅವನದು ಯಾವ ದೇಶ? ಯಾರು ಉತ್ತರ ಕೊಡುತ್ತಾರೆ? ಇನ್ನೂ ಹೆಣ ಸುಟ್ಟ ಬಾಬ್ತು ಏಳು ನೂರು ರುಪಾಯಿ ತಾನೇ ಎನ್ನಬೇಡಿ, ಅಸ್ಸಾಮಿನಲ್ಲಿ ಸುಡಲು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಇನ್ನೂ ಹತ್ತೊಂಭತ್ತು ಲಕ್ಷ ಚಿಲ್ಲರೆ ಬುಡಕಟ್ಟು ಜನರ ಹೆಣಗಳು ಸರದಿಯಲ್ಲಿ ನಿಲ್ಲಲಿವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರಿಗೂ ಸಹ ನರೇಶ್ ಕೋಚನ ಪರಿಸ್ಥಿತಿ ಬರುವುದು ಬೇಡ. ಅದಕ್ಕಾಗಿ ನಾವೆಲ್ಲರೂ ಸಿಎಎ, ಎನ್. ಆರ್.ಸಿ. ಮತ್ತು ಎನ್.ಪಿ.ಅರ್.ಗಳನ್ನು ವಿರೋಧಿಸೋಣ.

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...