Homeಮುಖಪುಟಈ ರೈತ ಹೋರಾಟಕ್ಕೆ ಗೆಲುವು ನಿಶ್ಚಿತ: ಇದು ಇತರ ಹೋರಾಟಗಳಿಗೆ ನಾಂದಿಯಾಗಲಿ

ಈ ರೈತ ಹೋರಾಟಕ್ಕೆ ಗೆಲುವು ನಿಶ್ಚಿತ: ಇದು ಇತರ ಹೋರಾಟಗಳಿಗೆ ನಾಂದಿಯಾಗಲಿ

ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.

- Advertisement -
- Advertisement -

ಈ ರೈತ ಚಳವಳಿ ಮೂರು ಕೃಷಿ ಕಾಯಿದೆಗಳ ರದ್ಧತಿಗಷ್ಟೇ ಸೀಮಿತವಲ್ಲ. ಇದು ಸಂಸದೀಯ, ಪ್ರಜಾಸತ್ತಾತ್ಮಕ ಸಂವಾದವನ್ನು ಪುನರ್‌ ಸ್ಥಾಪಿಸುವ ಚಳವಳಿಯಾಗುತ್ತಿದೆ.

ಗಣ ರಾಜ್ಯ ಸ್ಥಾಪನೆಯಾದಾಗ ರಾಜಶಾಹಿ, ಪಾಳೆಗಾರಿ ಆಳುವಿಕೆಯಿಂದ ಮುಕ್ತವಾಗಿ ನಮ್ಮನ್ನು ಆಳುವವರನ್ನು ನಾವೇ ಆರಿಸುವ ಬಡವ- ಬಲ್ಲಿದ; ದಲಿತ, ಆದಿವಾಸಿ, ಮಹಿಳೆ; ಭೂಮಿ ಹೊಂದಿದವನು- ಭೂರಹಿತ ; ಹೀಗೆ ಎಲ್ಲರೂ ಈ ಆಯ್ಕೆಯ ಯಜ್ಞದಲ್ಲಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಲುದಾರರಾದರು. ಈ ರೋಮಾಂಚನವೇ ಭಾರತದ ಪ್ರಜಾಸತ್ತೆಯನ್ನು ಇಂದೂ ಉಳಿಸಿದೆ.

ಆದರೆ ಕಳೆದ 70 ವರ್ಷಗಳಲ್ಲಿ ಜನತೆಗೆ ಅನುಭವಕ್ಕೆ ಬಂದ ಸಂಗತಿ ಎಂದರೆ ಆಳುವವರನ್ನೇನೋ ಬದಲಾಯಿಸಬಹುದು. ಆದರೆ ಆಡಳಿತವನ್ನು ನಿರ್ದೇಶಿಸುವುದು ಹೇಗೆ? ಆಳುವವರನ್ನು ನಿಜಾರ್ಥದ ಜನಸೇವಕರನ್ನಾಗಿ ಮಾಡುವುದು ಹೇಗೆ?
ಆಡಳಿತದ ಪ್ರಕ್ರಿಯೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದು ಹೇಗೆ? ಸರಕಾರವೊಂದು ಜನರ ಸಾಂವಿಧಾನಿಕ ಹಕ್ಕೊತ್ತಾಯಗಳನ್ನು ಈಡೇರಿಸುವ ಯಂತ್ರವಾಗುವುದು ಹೇಗೆ?

ಈ ವೈಫಲ್ಯವೇ ತೀವ್ರ ಹತಾಶೆ ಮತ್ತು ಸಿನಿಕತನವನ್ನು ಹುಟ್ಟು ಹಾಕಿದೆ. “ಜಾತಿ, ಹಣ, ಹೆಂಡ, ಧರ್ಮ ರಾಜಕಾರಣದ ಪ್ರಭಾವಕ್ಕೆ ಒಳಗಾಗಿ ಮತ ಹಾಕುತ್ತಾರೆ. ಗೆದ್ದ ಮೇಲೆ ಈ ಜನ ಪ್ರತಿನಿಧಿಗಳನ್ನು ಹಿಡಿಯಲೂ ಸಾಧ್ಯವಾಗುವುದಿಲ್ಲ; ಕಡಿವಾಣ ಹಾಕಲೂ ಸಾಧ್ಯವಾಗುತ್ತಿಲ್ಲ. ಏನಿದ್ದರೂ ಮುಂದಿನ ಚುನಾವಣೆಗೆ ಕಾಯಬೇಕು. ಆಗಲೂ ಅಷ್ಟೇ. ಇವನ ಬದಲು ಇವನ ತದ್ರೂಪಿ ಅದೇ ಸ್ಥಾನವನ್ನು ಆಕ್ರಮಿಸುತ್ತಾನೆ.”
ಈ ಗೋಳು ತೀವ್ರವಾಗಿದೆ.

ಚುನಾವಣಾ ನಂತರದ ಆಡಳಿತ ಪ್ರಕ್ರಿಯೆಯಲ್ಲಿ – ಅಂದರೆ, ಸರಕಾರದ ಪ್ರತೀ ಹೆಜ್ಜೆ ಗತಿ, ನಿರ್ಧಾರಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿನಿಂದ ನಾವು ಪ್ರತಿಕ್ರಿಯಿಸುತ್ತಲೇ ಇಲ್ಲ.

ಈ ಜಡತ್ವವೇ ಸರಕಾರಗಳು ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಕಾರಣವಾಗಿದೆ. ಬಹುತೇಕ ಎಲ್ಲಾ ಪಕ್ಷಗಳೂ ಒಂದೇ ಮೂಸೆಯಲ್ಲಿ ತಯಾರಾದ ವಿವಿಧ ಬಣ್ಣಗಳ ರಾಕ್ಷಸ ಗೊಂಬೆಗಳಂತಿವೆ.

ಭಾಜಪ ಕಾರ್ಪೋರೇಟ್‌ ಮತ್ತು ಕೋಮು ರಾಜಕಾರಣದ ಪ್ರಳಯಾಂತಕ ಮಿಶ್ರಣದ ಮೂಲಕ ಸಂವಿಧಾನ ಮತ್ತು ಅದರ ಆಶಯಗಳನ್ನು ನಿರ್ಲಜ್ಜ, ನಿರ್ಲಕ್ಷ್ಯದ ಮೂಲಕ ಹೊಸಕಿ ಹಾಕುತ್ತಿದ್ದರೆ, ಪ್ರಾದೇಶಿಕ ಪಕ್ಷಗಳು ಪಾಳೇಗಾರಿಕೆ ಗುಣ ಮತ್ತು ಜಾಗತೀಕರಣದ ಆರ್ಥಿಕತೆಯ ದಳ್ಳಾಳಿ ವರ್ತನೆಯನ್ನು ಕಣಕಣದಲ್ಲಿ ತುಂಬಿಕೊಂಡಿವೆ.

ಇಂಥಾ ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.

ಟ್ರಾಕ್ಟರ್‌ ದೊಡ್ಡ ರೈತರ ಸಂಕೇತವಾಗಿತ್ತು; ನಿಜ. ಆದರೆ ಇಂದು ಅದು ಹೋರಾಟದ ಮುಂಚೂಣಿಯಲ್ಲಿರುವ ರೈತರ ಸಂಕೇತವಾಗಿದೆ.

ಈ ಹಿಂದೆ ಕೋಟೆಯ ದಿಡ್ಡಿ ಬಾಗಿಲು ಮುರಿಯಲು ಆನೆಗಳನ್ನು ಬಳಸುವುದಿತ್ತು. ಆದಾದ ಮೇಲೆ ಕಾಲಾಳುಗಳು ಯುದ್ಧ ಮಾಡುತ್ತಿದ್ದರು.

ಈ ಬಗ್ಗೆ ಬರುವ ಟೀಕೆ , ಗಾಸಿಪ್ಪುಗಳು ಆಳುವವರು ಎದೆಗುಂದಿರುವುದರ ಸಂಕೇತ. ಈ ಹೋರಾಟದಲ್ಲಿ ಗೆಲುವು ನಿಶ್ಚಿತ. ಯಾಕೆಂದರೆ ಮೂಲತಃ ಸರಕಾರ ಆಳದಲ್ಲಿ ಜನಸಾಮಾನ್ಯರ, ರೈತರ ಬಾಳುವೆಯನ್ನು ಛಿದ್ರಗೊಳಿಸಿ ತನ್ನ ಕಾರ್ಪೋರೇಟ್‌ ಗೆಣೆಕಾರರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿರುವುದು ಪ್ರತೀ ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಾಣುತ್ತಿದೆ.

ಈ ಹೋರಾಟದ ಗೆಲುವು ಇಷ್ಟು ಬಲವಿಲ್ಲದ ಸಮುದಾಯಗಳ ಹೋರಾಟಗಳಿಗೆ ನಾಂದಿಯಾಗಲಿ
ಸಂವಿಧಾನದ ಪೀಠಿಕೆಯನ್ನು ಮತ್ತು ನಿರ್ದೇಶಕ ತತ್ವಗಳನ್ನು ಮೋದಿ ಸರಕಾರದ ಎದುರು ಇಟ್ಟರೆ ಒಂದೊಂದು ಹೆಜ್ಜೆಯಲ್ಲೂ ಈ ಸರಕಾರದ ಸಂವಿಧಾನ ವಿರೋಧಿ ನಡೆ ನಿಚ್ಚಳವಾಗಿ ತೋರುತ್ತದೆ. ಸಂವಿಧಾನ ವಿರೋಧೀ ಆಂದರೆ ಜನರ ಆಶೋತ್ತರಗಳ ವಿರೋಧಿ. ಅಂದರೆ ಜನ ವಿರೋಧಿ.

ಆದ್ದರಿಂದಲೇ ಈ ರೈತ ಹೋರಾಟ ನಮ್ಮ ನೆಲಮೂಲದ ಎಲ್ಲರ ಆಶೋತ್ತರಗಳ ಪ್ರತಿರೋಧದ ಪ್ರತಿರೂಪ. ಸಂವಿಧಾನವೇ ಇಲ್ಲಿ ಜಂಗಮ ರೂಪ ತಾಳಿದೆ.

  • ಕೆ.ಪಿ ಸುರೇಶ್, ಚಿಂತಕರು, ಬರಹಗಾರರು.

ಇದನ್ನೂ ಓದಿ: ಬಜೆಟ್ ದಿನ ರೈತರಿಂದ ಪಾರ್ಲಿಮೆಂಟ್ ಚಲೋ : ಸಂಸತ್ತಿಗೆ ಪಾದಯಾತ್ರೆ ನಡೆಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...