Homeಮುಖಪುಟಈ ರೈತ ಹೋರಾಟಕ್ಕೆ ಗೆಲುವು ನಿಶ್ಚಿತ: ಇದು ಇತರ ಹೋರಾಟಗಳಿಗೆ ನಾಂದಿಯಾಗಲಿ

ಈ ರೈತ ಹೋರಾಟಕ್ಕೆ ಗೆಲುವು ನಿಶ್ಚಿತ: ಇದು ಇತರ ಹೋರಾಟಗಳಿಗೆ ನಾಂದಿಯಾಗಲಿ

ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.

- Advertisement -
- Advertisement -

ಈ ರೈತ ಚಳವಳಿ ಮೂರು ಕೃಷಿ ಕಾಯಿದೆಗಳ ರದ್ಧತಿಗಷ್ಟೇ ಸೀಮಿತವಲ್ಲ. ಇದು ಸಂಸದೀಯ, ಪ್ರಜಾಸತ್ತಾತ್ಮಕ ಸಂವಾದವನ್ನು ಪುನರ್‌ ಸ್ಥಾಪಿಸುವ ಚಳವಳಿಯಾಗುತ್ತಿದೆ.

ಗಣ ರಾಜ್ಯ ಸ್ಥಾಪನೆಯಾದಾಗ ರಾಜಶಾಹಿ, ಪಾಳೆಗಾರಿ ಆಳುವಿಕೆಯಿಂದ ಮುಕ್ತವಾಗಿ ನಮ್ಮನ್ನು ಆಳುವವರನ್ನು ನಾವೇ ಆರಿಸುವ ಬಡವ- ಬಲ್ಲಿದ; ದಲಿತ, ಆದಿವಾಸಿ, ಮಹಿಳೆ; ಭೂಮಿ ಹೊಂದಿದವನು- ಭೂರಹಿತ ; ಹೀಗೆ ಎಲ್ಲರೂ ಈ ಆಯ್ಕೆಯ ಯಜ್ಞದಲ್ಲಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಲುದಾರರಾದರು. ಈ ರೋಮಾಂಚನವೇ ಭಾರತದ ಪ್ರಜಾಸತ್ತೆಯನ್ನು ಇಂದೂ ಉಳಿಸಿದೆ.

ಆದರೆ ಕಳೆದ 70 ವರ್ಷಗಳಲ್ಲಿ ಜನತೆಗೆ ಅನುಭವಕ್ಕೆ ಬಂದ ಸಂಗತಿ ಎಂದರೆ ಆಳುವವರನ್ನೇನೋ ಬದಲಾಯಿಸಬಹುದು. ಆದರೆ ಆಡಳಿತವನ್ನು ನಿರ್ದೇಶಿಸುವುದು ಹೇಗೆ? ಆಳುವವರನ್ನು ನಿಜಾರ್ಥದ ಜನಸೇವಕರನ್ನಾಗಿ ಮಾಡುವುದು ಹೇಗೆ?
ಆಡಳಿತದ ಪ್ರಕ್ರಿಯೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದು ಹೇಗೆ? ಸರಕಾರವೊಂದು ಜನರ ಸಾಂವಿಧಾನಿಕ ಹಕ್ಕೊತ್ತಾಯಗಳನ್ನು ಈಡೇರಿಸುವ ಯಂತ್ರವಾಗುವುದು ಹೇಗೆ?

ಈ ವೈಫಲ್ಯವೇ ತೀವ್ರ ಹತಾಶೆ ಮತ್ತು ಸಿನಿಕತನವನ್ನು ಹುಟ್ಟು ಹಾಕಿದೆ. “ಜಾತಿ, ಹಣ, ಹೆಂಡ, ಧರ್ಮ ರಾಜಕಾರಣದ ಪ್ರಭಾವಕ್ಕೆ ಒಳಗಾಗಿ ಮತ ಹಾಕುತ್ತಾರೆ. ಗೆದ್ದ ಮೇಲೆ ಈ ಜನ ಪ್ರತಿನಿಧಿಗಳನ್ನು ಹಿಡಿಯಲೂ ಸಾಧ್ಯವಾಗುವುದಿಲ್ಲ; ಕಡಿವಾಣ ಹಾಕಲೂ ಸಾಧ್ಯವಾಗುತ್ತಿಲ್ಲ. ಏನಿದ್ದರೂ ಮುಂದಿನ ಚುನಾವಣೆಗೆ ಕಾಯಬೇಕು. ಆಗಲೂ ಅಷ್ಟೇ. ಇವನ ಬದಲು ಇವನ ತದ್ರೂಪಿ ಅದೇ ಸ್ಥಾನವನ್ನು ಆಕ್ರಮಿಸುತ್ತಾನೆ.”
ಈ ಗೋಳು ತೀವ್ರವಾಗಿದೆ.

ಚುನಾವಣಾ ನಂತರದ ಆಡಳಿತ ಪ್ರಕ್ರಿಯೆಯಲ್ಲಿ – ಅಂದರೆ, ಸರಕಾರದ ಪ್ರತೀ ಹೆಜ್ಜೆ ಗತಿ, ನಿರ್ಧಾರಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿನಿಂದ ನಾವು ಪ್ರತಿಕ್ರಿಯಿಸುತ್ತಲೇ ಇಲ್ಲ.

ಈ ಜಡತ್ವವೇ ಸರಕಾರಗಳು ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಕಾರಣವಾಗಿದೆ. ಬಹುತೇಕ ಎಲ್ಲಾ ಪಕ್ಷಗಳೂ ಒಂದೇ ಮೂಸೆಯಲ್ಲಿ ತಯಾರಾದ ವಿವಿಧ ಬಣ್ಣಗಳ ರಾಕ್ಷಸ ಗೊಂಬೆಗಳಂತಿವೆ.

ಭಾಜಪ ಕಾರ್ಪೋರೇಟ್‌ ಮತ್ತು ಕೋಮು ರಾಜಕಾರಣದ ಪ್ರಳಯಾಂತಕ ಮಿಶ್ರಣದ ಮೂಲಕ ಸಂವಿಧಾನ ಮತ್ತು ಅದರ ಆಶಯಗಳನ್ನು ನಿರ್ಲಜ್ಜ, ನಿರ್ಲಕ್ಷ್ಯದ ಮೂಲಕ ಹೊಸಕಿ ಹಾಕುತ್ತಿದ್ದರೆ, ಪ್ರಾದೇಶಿಕ ಪಕ್ಷಗಳು ಪಾಳೇಗಾರಿಕೆ ಗುಣ ಮತ್ತು ಜಾಗತೀಕರಣದ ಆರ್ಥಿಕತೆಯ ದಳ್ಳಾಳಿ ವರ್ತನೆಯನ್ನು ಕಣಕಣದಲ್ಲಿ ತುಂಬಿಕೊಂಡಿವೆ.

ಇಂಥಾ ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.

ಟ್ರಾಕ್ಟರ್‌ ದೊಡ್ಡ ರೈತರ ಸಂಕೇತವಾಗಿತ್ತು; ನಿಜ. ಆದರೆ ಇಂದು ಅದು ಹೋರಾಟದ ಮುಂಚೂಣಿಯಲ್ಲಿರುವ ರೈತರ ಸಂಕೇತವಾಗಿದೆ.

ಈ ಹಿಂದೆ ಕೋಟೆಯ ದಿಡ್ಡಿ ಬಾಗಿಲು ಮುರಿಯಲು ಆನೆಗಳನ್ನು ಬಳಸುವುದಿತ್ತು. ಆದಾದ ಮೇಲೆ ಕಾಲಾಳುಗಳು ಯುದ್ಧ ಮಾಡುತ್ತಿದ್ದರು.

ಈ ಬಗ್ಗೆ ಬರುವ ಟೀಕೆ , ಗಾಸಿಪ್ಪುಗಳು ಆಳುವವರು ಎದೆಗುಂದಿರುವುದರ ಸಂಕೇತ. ಈ ಹೋರಾಟದಲ್ಲಿ ಗೆಲುವು ನಿಶ್ಚಿತ. ಯಾಕೆಂದರೆ ಮೂಲತಃ ಸರಕಾರ ಆಳದಲ್ಲಿ ಜನಸಾಮಾನ್ಯರ, ರೈತರ ಬಾಳುವೆಯನ್ನು ಛಿದ್ರಗೊಳಿಸಿ ತನ್ನ ಕಾರ್ಪೋರೇಟ್‌ ಗೆಣೆಕಾರರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿರುವುದು ಪ್ರತೀ ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಾಣುತ್ತಿದೆ.

ಈ ಹೋರಾಟದ ಗೆಲುವು ಇಷ್ಟು ಬಲವಿಲ್ಲದ ಸಮುದಾಯಗಳ ಹೋರಾಟಗಳಿಗೆ ನಾಂದಿಯಾಗಲಿ
ಸಂವಿಧಾನದ ಪೀಠಿಕೆಯನ್ನು ಮತ್ತು ನಿರ್ದೇಶಕ ತತ್ವಗಳನ್ನು ಮೋದಿ ಸರಕಾರದ ಎದುರು ಇಟ್ಟರೆ ಒಂದೊಂದು ಹೆಜ್ಜೆಯಲ್ಲೂ ಈ ಸರಕಾರದ ಸಂವಿಧಾನ ವಿರೋಧಿ ನಡೆ ನಿಚ್ಚಳವಾಗಿ ತೋರುತ್ತದೆ. ಸಂವಿಧಾನ ವಿರೋಧೀ ಆಂದರೆ ಜನರ ಆಶೋತ್ತರಗಳ ವಿರೋಧಿ. ಅಂದರೆ ಜನ ವಿರೋಧಿ.

ಆದ್ದರಿಂದಲೇ ಈ ರೈತ ಹೋರಾಟ ನಮ್ಮ ನೆಲಮೂಲದ ಎಲ್ಲರ ಆಶೋತ್ತರಗಳ ಪ್ರತಿರೋಧದ ಪ್ರತಿರೂಪ. ಸಂವಿಧಾನವೇ ಇಲ್ಲಿ ಜಂಗಮ ರೂಪ ತಾಳಿದೆ.

  • ಕೆ.ಪಿ ಸುರೇಶ್, ಚಿಂತಕರು, ಬರಹಗಾರರು.

ಇದನ್ನೂ ಓದಿ: ಬಜೆಟ್ ದಿನ ರೈತರಿಂದ ಪಾರ್ಲಿಮೆಂಟ್ ಚಲೋ : ಸಂಸತ್ತಿಗೆ ಪಾದಯಾತ್ರೆ ನಡೆಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...